ಕಾಂಗ್ರೆಸ್ ವಿರುದ್ದ ಪ್ರತಿಭಟಿಸುವ ಮೂಲಕ ಉತ್ತರ ಪ್ರದೇಶದ ಗಾಲ್ಗೋಟಿಯಾಸ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ನಿನ್ನೆಯಿಂದ (ಮೇ 1) ಭಾರೀ ಸುದ್ದಿಯಲ್ಲಿದ್ದಾರೆ.
ಕಾಂಗ್ರೆಸ್ ವಿರುದ್ದ ಹಲವು ಆರೋಪಗಳನ್ನು ಹೊರಿಸಿ ಗಾಲ್ಗೋಟಿಯಾಸ್ ವಿವಿ ವಿದ್ಯಾರ್ಥಿಗಳು ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪಿತ್ರಾರ್ಜಿತ ಆಸ್ತಿ ತೆರಿಗೆ (Inheritance tax), ನಗರ ನಕ್ಸಲರು (Urban Naxalism) ಇತ್ಯಾದಿ ಭಿತ್ತಿ ಪತ್ರಗಳನ್ನು ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಆಜ್ತಕ್ ಸುದ್ದಿ ವಾಹಿನಿಯ ವರದಿಗಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದಾರೆ.
ವರದಿಗಾರ “ನೀವು ಏಕೆ, ಪ್ರತಿಭಟಿಸುತ್ತಿದ್ದೀರಿ?” ಎಂದು ಕೇಳಿದ್ದಕ್ಕೆ, ಕೆಲ ವಿದ್ಯಾರ್ಥಿಗಳು “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತಿನ ಮರು ಹಂಚಿಕೆ ಮಾಡಲಿದೆ, ಪಿತ್ರಾರ್ಜಿತ ಆಸ್ತಿ ತೆರಿಗೆ ಜಾರಿಗೆ ತರಲಿದೆ” ಎಂದಿದ್ದಾರೆ. “ಪಿತ್ರಾರ್ಜಿತ ಆಸ್ತಿ ತೆರಿಗೆ ಎಂದರೇನು?” ಎಂದು ವರದಿಗಾರ ಕೇಳಿದ್ದಕ್ಕೆ ವಿದ್ಯಾರ್ಥಿಗಳು ಉತ್ತರಿಸಲು ತಡವರಿಸಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ತಾವು ಹಿಡಿದಿದ್ದ ಭಿತ್ತಿ ಪತ್ರವನ್ನು ಸರಿಯಾಗಿ ಓದಲು ವಿಫಲರಾಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ವಿದ್ಯಾರ್ಥಿಗಳಿಗೆ ತಾವು ಏಕೆ ಪ್ರತಿಭಟಿಸುತ್ತೀದ್ದೇವೆ ಎಂದೇ ಗೊತ್ತಿರಲಿಲ್ಲ.
#Congress के खिलाफ वेल्थ डिस्ट्रीब्यूशन-कथित इन्हेरिटेंसी टैक्स के मुद्दे पर छात्रों का प्रदर्शन लेकिन ज्यादातर को न मुद्दे पता थे ना वजह। कुछ बैनर भी ठीक से नहीं पढ़ पाए। देखिए कांग्रेस मुख्यालय की ओर प्रदर्शन करने चले छात्रों के गजब जवाब।#ReporterDiary | (@JournoAshutosh) pic.twitter.com/ystudZDqYm
— AajTak (@aajtak) May 1, 2024
ಆಜ್ತಕ್ ವರದಿ ಪ್ರಸಾರಗೊಂಡ ತಕ್ಷಣ ವಿದ್ಯಾರ್ಥಿಗಳ ಪ್ರತಿಭಟನೆಯ ವಿಡಿಯೋ ಭಾರೀ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರು ಸೇರಿದಂತೆ ಸಾವಿರಾರು ಜನರು ವಿಡಿಯೋ ಹಂಚಿಕೊಂಡು, “ಈ ವಿದ್ಯಾರ್ಥಿಗಳು ಮೋದಿಯ ವಾಟ್ಸಾಪ್ ಯೂನಿವರ್ಸಿಟಿಯವರು” ಎಂದು ಟ್ರೋಲ್ ಮಾಡಿದ್ದಾರೆ. ಎಕ್ಸ್ನಲ್ಲಿ ‘ಗಾಲ್ಗೋಟಿಯಾಸ್ ಯೂನಿವರ್ಸಿಟಿ’ ಟ್ರೆಡಿಂಗ್ ಆಗಿದೆ.
Students of Modi's Whatsapp university 🤣 pic.twitter.com/0VXqh3CTjm
— Srinivas BV (@srinivasiyc) May 1, 2024
ಕ್ಷಮಿಸುವಂತೆ ಮನವಿ ಮಾಡಿದ ವಿದ್ಯಾರ್ಥಿಗಳು :
ತಮ್ಮ ವಿಡಿಯೋ ದೇಶದಾದ್ಯಂತ ವೈರಲ್ ಆಗುತ್ತಿದ್ದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹೊರಗಡೆ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷಮೆ ಕೇಳಿದ್ದು, ಪ್ರತಿಭಟನೆಯ ಹಿಂದಿನ ಸತ್ಯ ಬಿಚ್ಚಿಟ್ಟಿದ್ದಾರೆ.
ಲಕ್ಷೀ ಶರ್ಮಾ ಎಂಬ ವಿದ್ಯಾರ್ಥಿನಿ ಎಕ್ಸ್ ಮೂಲಕ ಪ್ರತಿಕ್ರಿಯಿಸಿ ” ನಮ್ಮ ತಪ್ಪುಗಳು ನಮಗೆ ಅರಿವಾಗಿದೆ. ನಮಗೆ ಅದು ಪ್ರೊಪಗೊಂಡ ಕಾರ್ಯಕ್ರಮ ಎಂದು ಗೊತ್ತಿರಲಿಲ್ಲ. ಕಂಗನಾ ರಣಾವತ್ ಅವರನ್ನು ಭೇಟಿಯಾಗುವ ಅವಕಾಶ ಸಿಗಲಿದೆ ಎಂದು ನಮಗೆ ಹೇಳಲಾಗಿತ್ತು. ವಿದ್ಯಾರ್ಥಿ ಪರಿಷತ್ತಿನ ಪರವಾಗಿ ನಾನು ಎಲ್ಲರಲ್ಲಿ ಕ್ಷಮೆಯಾಚಿಸುತ್ತೇನೆ. ವಿಶ್ವವಿದ್ಯಾನಿಲಯದ ಆಡಳಿತ ಪ್ರತಿಭಟನೆಗೆ ತೆರಳಲು ನಮ್ಮನ್ನು ಒತ್ತಾಯಿಸಿತ್ತು. ಭಿತ್ತಿ ಪತ್ರಗಳನ್ನೂ ಅವರೇ ನೀಡಿದ್ದು” ಎಂದಿದ್ದಾರೆ.
We have realized our mistakes.
Humko nahi pata tha propaganda hai. Humse to bola tha kangana ranaut se milne ka chance milega.
On behalf of the student council, I apologise to everyone. University management forced us to gather & handed us those placards. (1/3)
— Laxmi Sharma (@luxme_sharmaa) May 2, 2024
“ಪ್ರತಿಭಟನೆಯಲ್ಲಿ ಉತ್ತಮ ಮುದ್ರಿತ ಪೋಸ್ಟರ್ ಬಳಸಲು ನಮ್ಮ ಬಳಿ ಹಣ ಇರಲಿಲ್ಲ. ಹಾಗಾಗಿ, ಚಾರ್ಟ್ ಪೇಪರ್ನಲ್ಲಿ ಭಿತ್ತಿ ಪತ್ರಗಳನ್ನು ಕೈಯಿಂದ ಬರೆದಿದ್ದೆವು. ಅವುಗಳ ಎಲ್ಲಾ ವಿಡಿಯೋಗಳನ್ನು ಇನ್ಸ್ಟಾ ಹ್ಯಾಂಡಲ್ನಿಂದ ತೆಗೆಸಲಾಗಿದೆ. ಐಎಎಸ್ ಆಗಬೇಕೆಂಬುದು ನನ್ನ ಕನಸು. ನಾವು ಯಾವುದೇ ರಾಜಕೀಯದಲ್ಲಿ ಇಲ್ಲ. ಆಂತರಿಕ ಪರೀಕ್ಷೆಯಲ್ಲಿ ಅಂಕ ನೀಡುವುದಾಗಿ ವಿವಿ ಆಡಳಿತ ನಮಗೆ ಭರವಸೆ ನೀಡಿತ್ತು” ಎಂದು ವಿದ್ಯಾರ್ಥಿನಿ ಸತ್ಯ ಬಹಿರಂಗಪಡಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಒಂದೆಡೆ ಟ್ರೋಲ್ ಆಗುತ್ತಿದ್ದರೆ, ಮತ್ತೊಂದೆಡೆ ಗಾಲ್ಗೋಟಿಯಾಸ್ ವಿವಿ ಕಾಲೇಜಿನ ಸಿಇಒ ಎನ್ನಲಾದ ಧ್ರುವ್ ಗಾಲ್ಗೋಟಿಯಾ ವಿದ್ಯಾರ್ಥಿಗಳ ಪ್ರತಿಭಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ಗಾಲ್ಗೋಟಿಯಾಸ್ ವಿವಿಯ ವಿದ್ಯಾರ್ಥಿಗಳು ಧೈರ್ಯವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
BIG EXPOSE ⚡
Dhruv Galgotia , CEO of Galgotias college has shared on Instagram about the students protest against Congress Manifesto
They could not even read Hindi and English, but they have written that students are confident about interactions.
This is shameful, they… pic.twitter.com/2BJULqBaJv
— Amockxi FC (@Amockx2022) May 1, 2024
ಧ್ರವ್ ಅವರ ಪೋಸ್ಟನ್ನು ಉಲ್ಲೇಖಿಸಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ರೋಲ್ ಮಾಡಿದ್ದಾರೆ. “ಗಾಲ್ಗೋಟಿಯಾಸ್ ಕಾಲೇಜಿನ ಸಿಇಒ ಧ್ರುವ ಗಾಲ್ಗೋಟಿಯಾ ಅವರು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ (ವಿದ್ಯಾರ್ಥಿಗಳಿಗೆ) ಹಿಂದಿ. ಇಂಗ್ಲಿಷ್ ಕೂಡ ಓದಲು ಬರುವುದಿಲ್ಲ. ಆದರೆ, ವಿದ್ಯಾರ್ಥಿಗಳು ಧೈರ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಸಿಇಒ ಬರೆದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ, ಅವರನ್ನೇ ಹೊಣೆಗಾರರನ್ನಾಗಿಸಬೇಕು ಮತ್ತು ಅವರು ತಮ್ಮ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಏನು ಮಾಡುತ್ತಿದ್ದಾರೆ? ಅವೆಲ್ಲವೂ ವಾಟ್ಸಾಪ್ ಯೂನಿವರ್ಸಿಟಿ ಉತ್ಪನ್ನಗಳಾಗಿವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ‘ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ…..’,: ಮೋದಿಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ವಿವರಿಸಿ ಪತ್ರ ಬರೆದ ಖರ್ಗೆ