Homeಕರ್ನಾಟಕದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ...

ದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ…

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

- Advertisement -
- Advertisement -

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಒಟ್ಟು ಚಳವಳಿಗಳ ಕುರಿತಾಗಿ ‘ಆಯಾ ಕಾಲದ ಪ್ರತಿರೋಧವನ್ನು ಸಂದರ್ಭವೇ ಸೃಷ್ಟಿಸುತ್ತದೆ. ಹೊಸ ತಲೆಮಾರಿನ ಚಳವಳಿಯ ಸ್ವರೂಪವೇ ಬೇರೆಯಾಗಿರುತ್ತದೆ’ ಎಂಬರ್ಥದಲ್ಲಿ ಹಿಂದೊಮ್ಮೆ ಹೇಳಿದ್ದರು.

ಹಿರಿಯ ಕವಿ ಡಾ.ವಿ.ಮುನಿವೆಂಕಟಪ್ಪ ‘ದಸಂಸದ ಸ್ಥಾಪಕರೆಲ್ಲ ಗತಿಸದೇ ಹೊರತು ಬಣಗಳ ಐಕ್ಯ ಸಾಧ್ಯವಿಲ್ಲ. ವಿಘಟಿತ ಬಣಗಳು ಯಾವ ಉದ್ದೇಶವನ್ನು ಈಡೇರಿಸುವುದಿಲ್ಲ’ ಎಂದಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರಮುಖ ಹೋರಾಟಗಾರರಾದ ಇಬ್ಬರ ಮಾತಿನಲ್ಲಿ ಸಾಮ್ಯತೆ ಇದೆ. ಆದರೆ ಕರ್ನಾಟಕದ ನೋವಿನ ನೆಲಗಳು ದಸಂಸ ಬಣಗಳು ಒಂದಾಗಬೇಕೆಂದು ಬಯಸುತ್ತಿವೆ.

ಎರಡು ದಶಕಗಳಿಂದ ಕೇಳುತ್ತಿರುವ ಒಂದೇ ಮಾತು. ದಸಂಸ ಬಣಗಳು ಒಂದಾಗಬೇಕು. ಯಾವಾಗ? ಹೇಗೆ? ಬಣಗಳ ಒಗ್ಗೂಡಿಸುವವರು ಯಾರು? ಹೀಗೆ ನಾನಾ ಪ್ರಶ್ನೆಗಳು. ಕವಿ ಸಿದ್ದಲಿಂಗಯ್ಯ ಅವರು ‘ನನ್ನ ಅಣ್ಣನಂತಿರುವ ದೇವನೂರ ಮಹಾದೇವ ಅವರು ದಸಂಸ ನೇತೃತ್ವ ವಹಿಸಿದರೆ ಅವರೊಂದಿಗೆ ಮುನ್ನಡೆಯುವುದಾಗಿ’ ಹೇಳಿದ್ದರು. ಅದು ಈಡೇರಲಿಲ್ಲ.

ಕರ್ನಾಟಕದಲ್ಲಿ ನೂರಾರು ಸಂಘಟನೆಗಳಿವೆ. ಒಂದೇ ಉದ್ದೇಶದ ಹತ್ತಾರು ಸಂಘಟನೆಗಳಿವೆ. ಇವುಗಳಲ್ಲಿಯೇ ಬೇಕಾದಷ್ಟು ಬಣಗಳಿವೆ. ಆದರೆ ದಸಂಸದ ನಾಲ್ಕು ಬಣಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಈ ಬಣಗಳು ಮುಖ್ಯಸ್ಥರು ತಮ್ಮ ಮುನಿಸು ಬದಿಗೆ ಸರಿಸಿ ಒಂದಾಗಬೇಕೆಂದು ನಾಡಿನುದ್ದಗಲಕ್ಕೂ ಬಯಸಿದವರಿದ್ದಾರೆ.

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

ನೆರೆಯ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಪ್ರಭಾವದಿಂದ ಪ್ರೊ.ಬಿ.ಕೃಷ್ಣಪ್ಪ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಗೆ ಕಾರಣರಾದರು. ಅದು 1975ರ ಸಂದರ್ಭ. ತುರ್ತು ಪರಿಸ್ಥಿತಿ ಎದುರಿಸಿದ ಕರಾಳ ದಿನಗಳು ಹಸಿರಾಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳಾದರೂ ಸಾಮಾಜಿಕ, ಆರ್ಥಿಕ ತರತಮಗಳು ಬಡ ಜನರನ್ನು ಇನ್ನಿಲ್ಲದಂತೆ ನೋಯಿಸುತ್ತಿದ್ದವು. ಹೋರಾಟಕ್ಕೆ ಜನ ತುಡಿಯುತ್ತಿದ್ದರು. ದಸಂಸ ಅವರಿಗೆ ದಿಕ್ಕಾಯಿತು.

ಪ್ರೊ.ಬಿ.ಕೃಷ್ಣಪ್ಪ

ಶೂದ್ರರಷ್ಟೇ ಅಲ್ಲದೇ ಬಡವರ ಅಭ್ಯುದಯದ ಧ್ಯೇಯದೊಂದಿಗೆ ದಸಂಸ ಪ್ರಭುತ್ವದ ಬಂಡವಾಳಶಾಹಿಗಳ ಜಮೀನುದಾರರ ಪುರೋಹಿತಶಾಹಿ ವಿರುದ್ಧ ಕಹಳೆ ಸಾರಿತು. ಹಳ್ಳಿಯ-ದಿಲ್ಲಿಯ ಅನ್ಯಾಯದ ವಿರುದ್ಧ ಗುಡುಗಿ ದಲಿತರಲ್ಲಿ ನೈತಿಕ ಶಕ್ತಿ ತುಂಬಿತು. ಮಹಾನಾಯಕ ಅಂಬೇಡ್ಕರರು ತೋರಿದ ಬೆಳಕಲ್ಲಿ ನಡೆದ ದಸಂಸ ಚಾರಿತ್ರಿಕ ಬದಲಾವಣೆಗಳಿಗೆ ಕಾರಣವಾಯಿತು.

‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯಕೊಡಿ’ ಎಂದು ಬೀದಿಯಲ್ಲಿ ಹಾಡುತ್ತ ಅಧಿಕಾರದ ಗದ್ದುಗೆ ಕಡೆ ನಡೆಯುವಾಗಲೇ ದಸಂಸ ತನ್ನ ಶಕ್ತಿಯನ್ನು ಕಳೆದುಕೊಂಡಿತು. ಬಣಗಳಾದವು. ಸಂಚಾಲಕರೆಲ್ಲ ರಾಜ್ಯಾಧ್ಯಕ್ಷರಾದರು. ಕೆಲವರು ರಾಜಕಾರಣಿಗಳ ಹಿಂಬಾಲಕರಾದರು. ಬಡವರ ಹಿತಾಶಕ್ತಿ ಬಲಿಕೊಟ್ಟರು.

ಇಷ್ಟಾದರೂ ಇವತ್ತಿನ ತನಕ ಬಣಗಳು ನಿಷ್ಕ್ರೀಯವಾಗದೇ ಚಾಲನೆಯಲ್ಲಿದ್ದವು ಎಂಬುದೇ ಸಮಾಧಾನದ ಸಂಗತಿ. ಒಂದೇ ಸಮಸ್ಯೆ ವಿರುದ್ಧ ಪ್ರತ್ಯೇಕ ಹೋರಾಟಕ್ಕೆ ಕರೆ ಕೊಡುತ್ತಿದ್ದವು. ಜಾಗೃತಿ ಮೂಡಿಸುತ್ತಿದ್ದವು. ನಿರೀಕ್ಷಿತ ಫಲ ಸಿಗದೇ ಹತಾಶೆಗೊಂಡಿದ್ದವು. ಈಗ ಬಣಗಳು ಒಂದುಗೂಡುವುದೊಂದೇ ಅವುಗಳಿಗಿರುವ ದಾರಿ ಎಂಬ ಅರಿವುಂಟಾಗಿದೆ. ಹಲವು ಬಾರಿ ಒಂದಾಗಿವೆ, ಮತ್ತೆ ಬೇರೆಯಾಗಿವೆ.

ಈ ದಿಸೆಯಲ್ಲಿ ಆಶಾವಾದವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಳಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಲ್ಕು ಬಣಗಳ ಮೈಸೂರು ಜಿಲ್ಲಾ ಸಂಚಾಲಕರು ‘ಒಂದೇ ದನಿ, ಒಂದೇ ಗುರಿ, ಒಂದೇ ಹಾದಿ’ ತತ್ವದಡಿ ಒಂದಾಗುವ ಸುದ್ದಿ ನೀಡಿದ್ದಾರೆ. ರಾಜ್ಯ ಸಂಚಾಲಕರು ಇವರ ಹಾದಿ ಹಿಡಿಯಬೇಕು. ಈ ಸಂಕಟದ ವರ್ತಮಾನಕ್ಕೆ ಮುಖಾಮುಖಿಯಾಗಬೇಕು.

ದಸಂಸ ಯಶಸ್ವಿ ಹೋರಾಟ ನೆನೆಯುವ ಸಂದರ್ಭವಿದು. ಅದು ನಾಗಸಂದ್ರದ ಭೂ ಹೋರಾಟ. ಪ್ರಭುತ್ವ ಮತ್ತು ಜಮೀನುದಾರರ ಸೊಕ್ಕಡಗಿಸಿದ ಹೋರಾಟವದು. ‘ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ. ಅಂದದ್ದೇ ಹೋರಾಟ ಕಟ್ಟುವ ಕಾಲವಿದು.

ನಾಗಸಂದ್ರ ಭೂ ಹೋರಾಟದ ಕುರಿತ ಪುಸ್ತಕ

ಹಿಂದಿನ ಸರ್ಕಾರಗಳು ಭೂ ರಹಿತರ ಪರವಾಗಿ ಕಾಯಿದೆ ಜಾರಿಗೆ ತಂದು ಬಡವರನ್ನು ರೈತರನ್ನಾಗಿಸಿತು. ಇಂದಿನ ಸರ್ಕಾರ ರೈತರಿಂದ ಭೂಮಿ ಕಸಿಯುವ ಅಘಾತಕಾರಿ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಭೂ ಕಬಳಿಕರಿಗೆ ಕೆಂಪುಹಾಸು ಹಾಸಿದೆ.

ಕಾಲದ ಒತ್ತಡಗಳೂ ನೂರೆಂಟು. ಈಗ ದಸಂಸದ ಗುರಿ ಒಂದೇ. ಅದು ಕರ್ನಾಟಕದ ರೈತಕುಲವನ್ನು ಉಳಿಸುವುದು. ಭೂಮಿ ಉಳಿಸಲು ಹೋರಾಡುವುದು. ಆ ಮೂಲಕ ತನ್ನ ಹಿಂದಿನ ಘನತೆಯನ್ನು ಎತ್ತಿಹಿಡಿಯುವುದು.

ವಿನೋದ್ ಮಹದೇವಪುರ, ಪತ್ರಕರ್ತರು, ಯುವ ಬರಹಗಾರರು.


ಇದನ್ನೂ ಓದಿ: ಜಾತಿ ವಿರೋಧಿ ಹೋರಾಟಗಾರ ಯು. ಸಾಂಬಶಿವ ರಾವ್‌ (70) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...