Homeಕರ್ನಾಟಕದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ...

ದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ…

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

- Advertisement -
- Advertisement -

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಒಟ್ಟು ಚಳವಳಿಗಳ ಕುರಿತಾಗಿ ‘ಆಯಾ ಕಾಲದ ಪ್ರತಿರೋಧವನ್ನು ಸಂದರ್ಭವೇ ಸೃಷ್ಟಿಸುತ್ತದೆ. ಹೊಸ ತಲೆಮಾರಿನ ಚಳವಳಿಯ ಸ್ವರೂಪವೇ ಬೇರೆಯಾಗಿರುತ್ತದೆ’ ಎಂಬರ್ಥದಲ್ಲಿ ಹಿಂದೊಮ್ಮೆ ಹೇಳಿದ್ದರು.

ಹಿರಿಯ ಕವಿ ಡಾ.ವಿ.ಮುನಿವೆಂಕಟಪ್ಪ ‘ದಸಂಸದ ಸ್ಥಾಪಕರೆಲ್ಲ ಗತಿಸದೇ ಹೊರತು ಬಣಗಳ ಐಕ್ಯ ಸಾಧ್ಯವಿಲ್ಲ. ವಿಘಟಿತ ಬಣಗಳು ಯಾವ ಉದ್ದೇಶವನ್ನು ಈಡೇರಿಸುವುದಿಲ್ಲ’ ಎಂದಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರಮುಖ ಹೋರಾಟಗಾರರಾದ ಇಬ್ಬರ ಮಾತಿನಲ್ಲಿ ಸಾಮ್ಯತೆ ಇದೆ. ಆದರೆ ಕರ್ನಾಟಕದ ನೋವಿನ ನೆಲಗಳು ದಸಂಸ ಬಣಗಳು ಒಂದಾಗಬೇಕೆಂದು ಬಯಸುತ್ತಿವೆ.

ಎರಡು ದಶಕಗಳಿಂದ ಕೇಳುತ್ತಿರುವ ಒಂದೇ ಮಾತು. ದಸಂಸ ಬಣಗಳು ಒಂದಾಗಬೇಕು. ಯಾವಾಗ? ಹೇಗೆ? ಬಣಗಳ ಒಗ್ಗೂಡಿಸುವವರು ಯಾರು? ಹೀಗೆ ನಾನಾ ಪ್ರಶ್ನೆಗಳು. ಕವಿ ಸಿದ್ದಲಿಂಗಯ್ಯ ಅವರು ‘ನನ್ನ ಅಣ್ಣನಂತಿರುವ ದೇವನೂರ ಮಹಾದೇವ ಅವರು ದಸಂಸ ನೇತೃತ್ವ ವಹಿಸಿದರೆ ಅವರೊಂದಿಗೆ ಮುನ್ನಡೆಯುವುದಾಗಿ’ ಹೇಳಿದ್ದರು. ಅದು ಈಡೇರಲಿಲ್ಲ.

ಕರ್ನಾಟಕದಲ್ಲಿ ನೂರಾರು ಸಂಘಟನೆಗಳಿವೆ. ಒಂದೇ ಉದ್ದೇಶದ ಹತ್ತಾರು ಸಂಘಟನೆಗಳಿವೆ. ಇವುಗಳಲ್ಲಿಯೇ ಬೇಕಾದಷ್ಟು ಬಣಗಳಿವೆ. ಆದರೆ ದಸಂಸದ ನಾಲ್ಕು ಬಣಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಈ ಬಣಗಳು ಮುಖ್ಯಸ್ಥರು ತಮ್ಮ ಮುನಿಸು ಬದಿಗೆ ಸರಿಸಿ ಒಂದಾಗಬೇಕೆಂದು ನಾಡಿನುದ್ದಗಲಕ್ಕೂ ಬಯಸಿದವರಿದ್ದಾರೆ.

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

ನೆರೆಯ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಪ್ರಭಾವದಿಂದ ಪ್ರೊ.ಬಿ.ಕೃಷ್ಣಪ್ಪ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಗೆ ಕಾರಣರಾದರು. ಅದು 1975ರ ಸಂದರ್ಭ. ತುರ್ತು ಪರಿಸ್ಥಿತಿ ಎದುರಿಸಿದ ಕರಾಳ ದಿನಗಳು ಹಸಿರಾಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳಾದರೂ ಸಾಮಾಜಿಕ, ಆರ್ಥಿಕ ತರತಮಗಳು ಬಡ ಜನರನ್ನು ಇನ್ನಿಲ್ಲದಂತೆ ನೋಯಿಸುತ್ತಿದ್ದವು. ಹೋರಾಟಕ್ಕೆ ಜನ ತುಡಿಯುತ್ತಿದ್ದರು. ದಸಂಸ ಅವರಿಗೆ ದಿಕ್ಕಾಯಿತು.

ಪ್ರೊ.ಬಿ.ಕೃಷ್ಣಪ್ಪ

ಶೂದ್ರರಷ್ಟೇ ಅಲ್ಲದೇ ಬಡವರ ಅಭ್ಯುದಯದ ಧ್ಯೇಯದೊಂದಿಗೆ ದಸಂಸ ಪ್ರಭುತ್ವದ ಬಂಡವಾಳಶಾಹಿಗಳ ಜಮೀನುದಾರರ ಪುರೋಹಿತಶಾಹಿ ವಿರುದ್ಧ ಕಹಳೆ ಸಾರಿತು. ಹಳ್ಳಿಯ-ದಿಲ್ಲಿಯ ಅನ್ಯಾಯದ ವಿರುದ್ಧ ಗುಡುಗಿ ದಲಿತರಲ್ಲಿ ನೈತಿಕ ಶಕ್ತಿ ತುಂಬಿತು. ಮಹಾನಾಯಕ ಅಂಬೇಡ್ಕರರು ತೋರಿದ ಬೆಳಕಲ್ಲಿ ನಡೆದ ದಸಂಸ ಚಾರಿತ್ರಿಕ ಬದಲಾವಣೆಗಳಿಗೆ ಕಾರಣವಾಯಿತು.

‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯಕೊಡಿ’ ಎಂದು ಬೀದಿಯಲ್ಲಿ ಹಾಡುತ್ತ ಅಧಿಕಾರದ ಗದ್ದುಗೆ ಕಡೆ ನಡೆಯುವಾಗಲೇ ದಸಂಸ ತನ್ನ ಶಕ್ತಿಯನ್ನು ಕಳೆದುಕೊಂಡಿತು. ಬಣಗಳಾದವು. ಸಂಚಾಲಕರೆಲ್ಲ ರಾಜ್ಯಾಧ್ಯಕ್ಷರಾದರು. ಕೆಲವರು ರಾಜಕಾರಣಿಗಳ ಹಿಂಬಾಲಕರಾದರು. ಬಡವರ ಹಿತಾಶಕ್ತಿ ಬಲಿಕೊಟ್ಟರು.

ಇಷ್ಟಾದರೂ ಇವತ್ತಿನ ತನಕ ಬಣಗಳು ನಿಷ್ಕ್ರೀಯವಾಗದೇ ಚಾಲನೆಯಲ್ಲಿದ್ದವು ಎಂಬುದೇ ಸಮಾಧಾನದ ಸಂಗತಿ. ಒಂದೇ ಸಮಸ್ಯೆ ವಿರುದ್ಧ ಪ್ರತ್ಯೇಕ ಹೋರಾಟಕ್ಕೆ ಕರೆ ಕೊಡುತ್ತಿದ್ದವು. ಜಾಗೃತಿ ಮೂಡಿಸುತ್ತಿದ್ದವು. ನಿರೀಕ್ಷಿತ ಫಲ ಸಿಗದೇ ಹತಾಶೆಗೊಂಡಿದ್ದವು. ಈಗ ಬಣಗಳು ಒಂದುಗೂಡುವುದೊಂದೇ ಅವುಗಳಿಗಿರುವ ದಾರಿ ಎಂಬ ಅರಿವುಂಟಾಗಿದೆ. ಹಲವು ಬಾರಿ ಒಂದಾಗಿವೆ, ಮತ್ತೆ ಬೇರೆಯಾಗಿವೆ.

ಈ ದಿಸೆಯಲ್ಲಿ ಆಶಾವಾದವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಳಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಲ್ಕು ಬಣಗಳ ಮೈಸೂರು ಜಿಲ್ಲಾ ಸಂಚಾಲಕರು ‘ಒಂದೇ ದನಿ, ಒಂದೇ ಗುರಿ, ಒಂದೇ ಹಾದಿ’ ತತ್ವದಡಿ ಒಂದಾಗುವ ಸುದ್ದಿ ನೀಡಿದ್ದಾರೆ. ರಾಜ್ಯ ಸಂಚಾಲಕರು ಇವರ ಹಾದಿ ಹಿಡಿಯಬೇಕು. ಈ ಸಂಕಟದ ವರ್ತಮಾನಕ್ಕೆ ಮುಖಾಮುಖಿಯಾಗಬೇಕು.

ದಸಂಸ ಯಶಸ್ವಿ ಹೋರಾಟ ನೆನೆಯುವ ಸಂದರ್ಭವಿದು. ಅದು ನಾಗಸಂದ್ರದ ಭೂ ಹೋರಾಟ. ಪ್ರಭುತ್ವ ಮತ್ತು ಜಮೀನುದಾರರ ಸೊಕ್ಕಡಗಿಸಿದ ಹೋರಾಟವದು. ‘ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ. ಅಂದದ್ದೇ ಹೋರಾಟ ಕಟ್ಟುವ ಕಾಲವಿದು.

ನಾಗಸಂದ್ರ ಭೂ ಹೋರಾಟದ ಕುರಿತ ಪುಸ್ತಕ

ಹಿಂದಿನ ಸರ್ಕಾರಗಳು ಭೂ ರಹಿತರ ಪರವಾಗಿ ಕಾಯಿದೆ ಜಾರಿಗೆ ತಂದು ಬಡವರನ್ನು ರೈತರನ್ನಾಗಿಸಿತು. ಇಂದಿನ ಸರ್ಕಾರ ರೈತರಿಂದ ಭೂಮಿ ಕಸಿಯುವ ಅಘಾತಕಾರಿ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಭೂ ಕಬಳಿಕರಿಗೆ ಕೆಂಪುಹಾಸು ಹಾಸಿದೆ.

ಕಾಲದ ಒತ್ತಡಗಳೂ ನೂರೆಂಟು. ಈಗ ದಸಂಸದ ಗುರಿ ಒಂದೇ. ಅದು ಕರ್ನಾಟಕದ ರೈತಕುಲವನ್ನು ಉಳಿಸುವುದು. ಭೂಮಿ ಉಳಿಸಲು ಹೋರಾಡುವುದು. ಆ ಮೂಲಕ ತನ್ನ ಹಿಂದಿನ ಘನತೆಯನ್ನು ಎತ್ತಿಹಿಡಿಯುವುದು.

ವಿನೋದ್ ಮಹದೇವಪುರ, ಪತ್ರಕರ್ತರು, ಯುವ ಬರಹಗಾರರು.


ಇದನ್ನೂ ಓದಿ: ಜಾತಿ ವಿರೋಧಿ ಹೋರಾಟಗಾರ ಯು. ಸಾಂಬಶಿವ ರಾವ್‌ (70) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...