Homeಕರ್ನಾಟಕದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ...

ದಸಂಸ ಬಣಗಳು ಈಗಲಾದರೂ ಒಂದಾಗಬೇಕು. ಏಕೆಂದರೆ…

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

- Advertisement -
- Advertisement -

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಒಟ್ಟು ಚಳವಳಿಗಳ ಕುರಿತಾಗಿ ‘ಆಯಾ ಕಾಲದ ಪ್ರತಿರೋಧವನ್ನು ಸಂದರ್ಭವೇ ಸೃಷ್ಟಿಸುತ್ತದೆ. ಹೊಸ ತಲೆಮಾರಿನ ಚಳವಳಿಯ ಸ್ವರೂಪವೇ ಬೇರೆಯಾಗಿರುತ್ತದೆ’ ಎಂಬರ್ಥದಲ್ಲಿ ಹಿಂದೊಮ್ಮೆ ಹೇಳಿದ್ದರು.

ಹಿರಿಯ ಕವಿ ಡಾ.ವಿ.ಮುನಿವೆಂಕಟಪ್ಪ ‘ದಸಂಸದ ಸ್ಥಾಪಕರೆಲ್ಲ ಗತಿಸದೇ ಹೊರತು ಬಣಗಳ ಐಕ್ಯ ಸಾಧ್ಯವಿಲ್ಲ. ವಿಘಟಿತ ಬಣಗಳು ಯಾವ ಉದ್ದೇಶವನ್ನು ಈಡೇರಿಸುವುದಿಲ್ಲ’ ಎಂದಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರಮುಖ ಹೋರಾಟಗಾರರಾದ ಇಬ್ಬರ ಮಾತಿನಲ್ಲಿ ಸಾಮ್ಯತೆ ಇದೆ. ಆದರೆ ಕರ್ನಾಟಕದ ನೋವಿನ ನೆಲಗಳು ದಸಂಸ ಬಣಗಳು ಒಂದಾಗಬೇಕೆಂದು ಬಯಸುತ್ತಿವೆ.

ಎರಡು ದಶಕಗಳಿಂದ ಕೇಳುತ್ತಿರುವ ಒಂದೇ ಮಾತು. ದಸಂಸ ಬಣಗಳು ಒಂದಾಗಬೇಕು. ಯಾವಾಗ? ಹೇಗೆ? ಬಣಗಳ ಒಗ್ಗೂಡಿಸುವವರು ಯಾರು? ಹೀಗೆ ನಾನಾ ಪ್ರಶ್ನೆಗಳು. ಕವಿ ಸಿದ್ದಲಿಂಗಯ್ಯ ಅವರು ‘ನನ್ನ ಅಣ್ಣನಂತಿರುವ ದೇವನೂರ ಮಹಾದೇವ ಅವರು ದಸಂಸ ನೇತೃತ್ವ ವಹಿಸಿದರೆ ಅವರೊಂದಿಗೆ ಮುನ್ನಡೆಯುವುದಾಗಿ’ ಹೇಳಿದ್ದರು. ಅದು ಈಡೇರಲಿಲ್ಲ.

ಕರ್ನಾಟಕದಲ್ಲಿ ನೂರಾರು ಸಂಘಟನೆಗಳಿವೆ. ಒಂದೇ ಉದ್ದೇಶದ ಹತ್ತಾರು ಸಂಘಟನೆಗಳಿವೆ. ಇವುಗಳಲ್ಲಿಯೇ ಬೇಕಾದಷ್ಟು ಬಣಗಳಿವೆ. ಆದರೆ ದಸಂಸದ ನಾಲ್ಕು ಬಣಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತದೆ. ಈ ಬಣಗಳು ಮುಖ್ಯಸ್ಥರು ತಮ್ಮ ಮುನಿಸು ಬದಿಗೆ ಸರಿಸಿ ಒಂದಾಗಬೇಕೆಂದು ನಾಡಿನುದ್ದಗಲಕ್ಕೂ ಬಯಸಿದವರಿದ್ದಾರೆ.

ದಸಂಸ ಸಂಘಟನಾತ್ಮಕ ಗುಂಪು ಮಾತ್ರವಲ್ಲ. ನೊಂದವರ, ಅಮಾಯಕರ, ಬಡವರ, ಶೋಷಿತರ ಕಣ್ಣೀರು ಒರೆಸಿದ ಸಂಘಟನೆ. ಅನ್ಯಾಯದ ವಿರುದ್ಧ ಸಿಡಿದು ಪ್ರಭುತ್ವವನ್ನೇ ನಡುಗಿಸಿ, ಎಲ್ಲ ತರತಮಗಳ ವಿರುದ್ಧ ಬಂಡೆದ್ದ ಸಂಘಟನೆ.

ನೆರೆಯ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಪ್ರಭಾವದಿಂದ ಪ್ರೊ.ಬಿ.ಕೃಷ್ಣಪ್ಪ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಗೆ ಕಾರಣರಾದರು. ಅದು 1975ರ ಸಂದರ್ಭ. ತುರ್ತು ಪರಿಸ್ಥಿತಿ ಎದುರಿಸಿದ ಕರಾಳ ದಿನಗಳು ಹಸಿರಾಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದು 25 ವರ್ಷಗಳಾದರೂ ಸಾಮಾಜಿಕ, ಆರ್ಥಿಕ ತರತಮಗಳು ಬಡ ಜನರನ್ನು ಇನ್ನಿಲ್ಲದಂತೆ ನೋಯಿಸುತ್ತಿದ್ದವು. ಹೋರಾಟಕ್ಕೆ ಜನ ತುಡಿಯುತ್ತಿದ್ದರು. ದಸಂಸ ಅವರಿಗೆ ದಿಕ್ಕಾಯಿತು.

ಪ್ರೊ.ಬಿ.ಕೃಷ್ಣಪ್ಪ

ಶೂದ್ರರಷ್ಟೇ ಅಲ್ಲದೇ ಬಡವರ ಅಭ್ಯುದಯದ ಧ್ಯೇಯದೊಂದಿಗೆ ದಸಂಸ ಪ್ರಭುತ್ವದ ಬಂಡವಾಳಶಾಹಿಗಳ ಜಮೀನುದಾರರ ಪುರೋಹಿತಶಾಹಿ ವಿರುದ್ಧ ಕಹಳೆ ಸಾರಿತು. ಹಳ್ಳಿಯ-ದಿಲ್ಲಿಯ ಅನ್ಯಾಯದ ವಿರುದ್ಧ ಗುಡುಗಿ ದಲಿತರಲ್ಲಿ ನೈತಿಕ ಶಕ್ತಿ ತುಂಬಿತು. ಮಹಾನಾಯಕ ಅಂಬೇಡ್ಕರರು ತೋರಿದ ಬೆಳಕಲ್ಲಿ ನಡೆದ ದಸಂಸ ಚಾರಿತ್ರಿಕ ಬದಲಾವಣೆಗಳಿಗೆ ಕಾರಣವಾಯಿತು.

‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯಕೊಡಿ’ ಎಂದು ಬೀದಿಯಲ್ಲಿ ಹಾಡುತ್ತ ಅಧಿಕಾರದ ಗದ್ದುಗೆ ಕಡೆ ನಡೆಯುವಾಗಲೇ ದಸಂಸ ತನ್ನ ಶಕ್ತಿಯನ್ನು ಕಳೆದುಕೊಂಡಿತು. ಬಣಗಳಾದವು. ಸಂಚಾಲಕರೆಲ್ಲ ರಾಜ್ಯಾಧ್ಯಕ್ಷರಾದರು. ಕೆಲವರು ರಾಜಕಾರಣಿಗಳ ಹಿಂಬಾಲಕರಾದರು. ಬಡವರ ಹಿತಾಶಕ್ತಿ ಬಲಿಕೊಟ್ಟರು.

ಇಷ್ಟಾದರೂ ಇವತ್ತಿನ ತನಕ ಬಣಗಳು ನಿಷ್ಕ್ರೀಯವಾಗದೇ ಚಾಲನೆಯಲ್ಲಿದ್ದವು ಎಂಬುದೇ ಸಮಾಧಾನದ ಸಂಗತಿ. ಒಂದೇ ಸಮಸ್ಯೆ ವಿರುದ್ಧ ಪ್ರತ್ಯೇಕ ಹೋರಾಟಕ್ಕೆ ಕರೆ ಕೊಡುತ್ತಿದ್ದವು. ಜಾಗೃತಿ ಮೂಡಿಸುತ್ತಿದ್ದವು. ನಿರೀಕ್ಷಿತ ಫಲ ಸಿಗದೇ ಹತಾಶೆಗೊಂಡಿದ್ದವು. ಈಗ ಬಣಗಳು ಒಂದುಗೂಡುವುದೊಂದೇ ಅವುಗಳಿಗಿರುವ ದಾರಿ ಎಂಬ ಅರಿವುಂಟಾಗಿದೆ. ಹಲವು ಬಾರಿ ಒಂದಾಗಿವೆ, ಮತ್ತೆ ಬೇರೆಯಾಗಿವೆ.

ಈ ದಿಸೆಯಲ್ಲಿ ಆಶಾವಾದವೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಳಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ ನಾಲ್ಕು ಬಣಗಳ ಮೈಸೂರು ಜಿಲ್ಲಾ ಸಂಚಾಲಕರು ‘ಒಂದೇ ದನಿ, ಒಂದೇ ಗುರಿ, ಒಂದೇ ಹಾದಿ’ ತತ್ವದಡಿ ಒಂದಾಗುವ ಸುದ್ದಿ ನೀಡಿದ್ದಾರೆ. ರಾಜ್ಯ ಸಂಚಾಲಕರು ಇವರ ಹಾದಿ ಹಿಡಿಯಬೇಕು. ಈ ಸಂಕಟದ ವರ್ತಮಾನಕ್ಕೆ ಮುಖಾಮುಖಿಯಾಗಬೇಕು.

ದಸಂಸ ಯಶಸ್ವಿ ಹೋರಾಟ ನೆನೆಯುವ ಸಂದರ್ಭವಿದು. ಅದು ನಾಗಸಂದ್ರದ ಭೂ ಹೋರಾಟ. ಪ್ರಭುತ್ವ ಮತ್ತು ಜಮೀನುದಾರರ ಸೊಕ್ಕಡಗಿಸಿದ ಹೋರಾಟವದು. ‘ಹೆಂಡ ಬೇಡ ಭೂಮಿ ಬೇಕು’ ಘೋಷಣೆಯಡಿ ನಾಗಸಂದ್ರದ 80ಕ್ಕೂ ಹೆಚ್ಚು ದಲಿತ ಕುಟುಂಬಗಳನ್ನು ಜೀತದಿಂದ ವಿಮುಕ್ತರಾಗಿಸಿ ಜಮೀನು ದೊರಕಿಸಿ ಚಾರಿತ್ರಿಕ ಸಾಧನೆ ಮಾಡಿದ ಹೋರಾಟ. ಅಂದದ್ದೇ ಹೋರಾಟ ಕಟ್ಟುವ ಕಾಲವಿದು.

ನಾಗಸಂದ್ರ ಭೂ ಹೋರಾಟದ ಕುರಿತ ಪುಸ್ತಕ

ಹಿಂದಿನ ಸರ್ಕಾರಗಳು ಭೂ ರಹಿತರ ಪರವಾಗಿ ಕಾಯಿದೆ ಜಾರಿಗೆ ತಂದು ಬಡವರನ್ನು ರೈತರನ್ನಾಗಿಸಿತು. ಇಂದಿನ ಸರ್ಕಾರ ರೈತರಿಂದ ಭೂಮಿ ಕಸಿಯುವ ಅಘಾತಕಾರಿ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಭೂ ಕಬಳಿಕರಿಗೆ ಕೆಂಪುಹಾಸು ಹಾಸಿದೆ.

ಕಾಲದ ಒತ್ತಡಗಳೂ ನೂರೆಂಟು. ಈಗ ದಸಂಸದ ಗುರಿ ಒಂದೇ. ಅದು ಕರ್ನಾಟಕದ ರೈತಕುಲವನ್ನು ಉಳಿಸುವುದು. ಭೂಮಿ ಉಳಿಸಲು ಹೋರಾಡುವುದು. ಆ ಮೂಲಕ ತನ್ನ ಹಿಂದಿನ ಘನತೆಯನ್ನು ಎತ್ತಿಹಿಡಿಯುವುದು.

ವಿನೋದ್ ಮಹದೇವಪುರ, ಪತ್ರಕರ್ತರು, ಯುವ ಬರಹಗಾರರು.


ಇದನ್ನೂ ಓದಿ: ಜಾತಿ ವಿರೋಧಿ ಹೋರಾಟಗಾರ ಯು. ಸಾಂಬಶಿವ ರಾವ್‌ (70) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್: ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಬ್ರೇಕ್! ಬಂಗಾಳ ಸಿಎಂ ಗೆ ಪತ್ರ ಬರೆದ ಕೇರಳ ಸಿಎಂ

ಹಿರಿಯ ಪತ್ರಕರ್ತ ಮತ್ತು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದವು ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ...

ರಾಮ ಮಂದಿರ ದೇಣಿಗೆ ಹಗರಣ: ಅರ್ಜಿ ವಿಚಾರಣೆ ಕೆಲ ದಿನ ತಡವಾದರೆ ‘ಆಕಾಶವೇನೂ ಉರುಳಿ ಬೀಳುವುದಿಲ್ಲ’ ಎಂದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರಿಂದ ಬಂದ ದೇಣಿಗೆ ಹಣ ದುರುಪಯೋಗ ಆಗಿರುವ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ಜಂಟಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ...

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...