Homeಅಂಕಣಗಳುಚಂದ್ರೇಗೌಡರ ಕಟ್ಟೆಪುರಾಣ: ವಾಟಿಸ್ಸೆ ಉವಾಚ - ಎಡೂರಪ್ಪ ರಿಯಲಿ ಗ್ರೇಟು!

ಚಂದ್ರೇಗೌಡರ ಕಟ್ಟೆಪುರಾಣ: ವಾಟಿಸ್ಸೆ ಉವಾಚ – ಎಡೂರಪ್ಪ ರಿಯಲಿ ಗ್ರೇಟು!

- Advertisement -
- Advertisement -

‘ಎಡೂರಪ್ಪನ್ನ ಇಳುಸ್ತರಂತೆ ನಿಜವೇನ್ಲ’ ಎಂದಳು ಜುಮ್ಮಿ.
‘ನಿನಿಗ್ಯಾರಕ್ಕ ಹೇಳಿದೊರು’ ಎಂದ ವಾಟಿಸ್ಸೆ.
‘ಯಲ್ಲ ಅಂಗಂತ ಮಾತಾಡತಿದ್ರು ಕಂಡ್ಳ’.
‘ಈ ಟೈಮಲ್ಲಿ ಎಡೂರಪ್ಪನ್ನ ಮುಟ್ಟಕ್ಕಾದತೆ ಯಾವೊ ಪೋಲಿ ಬಡ್ಡೆತ್ತವು ಅಂಗಂದವೆ’ ಎಂದ ಉಗ್ರಿ.
‘ಪೋಲಿ ಬಡ್ಡೆತ್ತವಲ್ಲ ಕಣೊ, ಎಡೂರಪ್ಪ ಮಂತ್ರಿ ಮಾಡ್ತನೆ ಅಂತ ಕಾಯ್ಕಂಡಿದ್ದವಲ್ಲಾ ಅವ್ಯಲ್ಲ ಸೇರಿ ಹಟ್ಟಿರೊ ಗುಲ್ಲು’.
‘ಈ ಟೈಮಲ್ಲಿ ಮಂತ್ರಿ ಮಾಡಿದ್ರೆ ಏನು ಮಾಡ್ಯವೂ’.
‘ಏನು ಮಾಡ್ತರೆ ಅಂತ ಕೇಳ್ತಿಯಾ, ಈಗಾಗ್ಲೆ ಕರೋನದ ಕತೆ ಮುಗುಸ್ತಿವಿ ಅಂತ ಕಿಟ್ಟಲ್ಲಿ ಮೆಡಿಸನ್ನಲಿ ಮಾಸಕಲ್ಲಿ ಮುಕ್ಕತ ಕುಂತಿದ್ದರಂತೆ ಕಣೊ ಉಗ್ರೀ’.
‘ಕೊರೋನಾದಲ್ಲೂ ದುಡ್ಡು ಹ್ವಡಿತರಾ’.
‘ವಾಜಪೇಯಿ ಪ್ರಧಾನಿಯಾಗಿದ್ದಾಗ, ಶವದ ಪೆಟಿಗಲೇ ಹಣ ವಡದಿದ್ರು, ಇನ್ನ ಇದರಲ್ಲಿ ಬುಡ್ತರೇನಕ್ಕ’.
‘ಓಹೊಹೊ, ಕೊರೋನಾದ್ರಲ್ಲಿ ತಿನ್ನದ ನೋಡಕ್ಕಾಗದೆ, ನಮ್ಮನ್ನ ಮಂತ್ರಿ ಮಾಡಿ ಅಂತ ಕೇಳ್ತಾಯಿದ್ದರೆ’.
‘ಊ ಕಣೊ ಉಗ್ರಿ, ಆ ಯತ್ನಾಳ್ ಕತ್ತಿ ಇಂತ ಘಟಾನು ಘಟಿ ನಾಯಕರು, ನಾವು ಮಂತ್ರಿಯಾಗದೆ ಇದ್ರೆ ಕರ್ನಾಟಕ ಉದ್ದಾರಾಗದಿಲ್ಲ ಅನ್ನಂಗೆ ಮಾತಾಡ್ತ ಅವುರೆ’.
‘ಯತ್ನಾಳ ಕತ್ತಿ ತಿರುಗುಸ್ತಯಿದನೆ’.
‘ಯತ್ನಾಳ ಅಂದ್ರೆ ಬಸವನಗೌಡ ಪಾಟೀಲ ಯತ್ನಾಳ ಅಂತ ಬಿಜಾಪುರದ ನಿಜಾಮಿದ್ದಂಗವುನೆ, ನೋಡಕ್ಕೆ ಸಾಬರಂಗವುನೆ ಆದ್ರೆ ಲಿಂಗಾಯಿತ್ರೊನು. ಅವುನಿಗೆ ಸಾಬರ ಕಂಡ್ರಾಗದಿಲ್ಲ’.
‘ಯಾಕೇ?’.
‘ಬಿಜಾಪುರದಲ್ಲಿ ಇಜಾರದೋರು ಹಜಾರಮಂದಿ ಅಂತ ಸಾಬರ ಜಾಸ್ತಿಯಲವೆ. ಅದಕ್ಕೆ ಅವುರ ಕಂಡ್ರೆ ಕ್ಯಂಡ ಕಾರತನೆ ಕಣಕ್ಕ’.
‘ಅದೆ ಯಾಕೆ ಅಂದೆ’.
‘ಯಾಕೆ ಅಂದ್ರೆ, ಈ ಬಿಜೆಪಿಲಿ ಯಾರು ಜಾಸ್ತಿ ಸಾಬರನ್ನ ಬೈತರೊ ಅವುರು ನಮ್ಮ ಪಾರ್ಟಿಗೆ ಲಗತ್ತಾದ ಲೀಡ್ರು ಅಂತ ತಿಳಕಂಡರಂತೆ, ಅದು ಗೊತ್ತಾಗಿ ಆ ಅನಂತಕುಮಾರ ಹೆಗಡೆ ಅನ್ನೊ ಮೂರ್ಖ, ರೇಣುಕಾಚಾರಿ ಅನ್ನೊ ಕಾಮುಕ, ಈ ಯತ್ನಾಳ್ ಅನ್ನೊ ಯಬಡ ಇವ್ರ್ಯಲ್ಲ ಸಾಬರನ ಬಾಯಿಗೆ ಬಂದಂತೆ ಬೈತರೆ ಕಣಕ್ಕ’.
‘ಅಂಗ್ಯಲ್ಲ ಬೈಬಾರ್ದು ಕಂಡ್ಳ. ಬೋದುದ್ದು ಬರ್ಲಾಯ್ತು. ಬೈಸಿಗಂಡೋನು ಬಸವಣ್ಣಾದ ಅಂತ ಗಾದೆ ಮಾತೆ ಅದೆ’.
‘ಅದಿವುನಿಗೆ ಗೊತ್ತಾಗಬೇಕಲ್ಲ ಹೇಳು. ಆ ಬಿಜಾಪುರದ ಸಾಬರು ಬ್ಯಾರೆ ಕಡೆ ಸಾಬರತರ ಅಲ್ಲ ಬಸವ ಜಯಂತಿ ಮ್ಯರವಣಿಗೆಗೊ ಬಂದರಂತೆ’.
‘ಮತ್ತೆ ಅಂತ ಜಾಗದ ಯಮ್ಮೆಲ್ಲೆ ಆಗಿ ಹಿಂಗೆ ಮಾತಾಡಕ್ಕೆ ನಾಚಗೆ ಆಗಬೇಕು ಕಣೊ ಅವುನಿಗೆ’ ಎಂದ ಉಗ್ರಿ.
‘ನಾಚಿಕೆ ಅನ್ನೊ ಪದ ಬಿಜೆಪಿ ಡಿಕ್ಸ್‍ನರಿಲೆ ಇಲ್ಲ ಕಣೊ ಉಗ್ರಿ. ಆ ಎ.ಕೆ.ಸುಬ್ಬಯ್ಯ, ಶಿವಪ್ಪ ಅವುರ್ಯಲ್ಲ ಅಧ್ಯಕ್ಷರಾಗಿದ್ದಾಗ ನಾಚಿಕೆ ಒಂದಿಷ್ಟು ಆ ಪಾರ್ಟಿಲಿತ್ತು. ಅಮ್ಯಾಲೆ ಇದ್ಯಾಕೊ ಸರಿಯಾಗದಿಲ್ಲ ಅಂತ ಅದ ಬುಟ್ರು. ಹಿಂಗಾದ್ರು’.
‘ಯತ್ನಾಳ ಮದ್ಲಂಗಿರಲಿಲ್ಲ ಅಲವೆ’ ಎಂದ ಉಗ್ರಿ.
‘ಇರಲಿಲ್ಲ ಎತ್ತರಕ್ಕೆ ಹ್ಯಾಂಡಸಮ್ಮಾಗಿದ್ದ. ಅದ ನೋಡಿ ವಾಜಪೇಯಿ ವಳ್ಳೆ ಮನ್ಸ ಅಂತ ತಿಳಕಂಡು ಮಂತ್ರಿನೂ ಮಾಡಿದ್ರು. ಆದ್ರಿವತ್ತು ಇವುನ್ಯಂಥಾ ಮಂತ್ರಿಯಾಗಿದ್ದ ಅಂತ ಅವುನೇ ಹೇಳಿ ಕಂಡು ತಿರುಗಂಗಾಗ್ಯದೆ’.
‘ಎಡೂರಪ್ಪ ಇವುನ್ನ ಮಂತ್ರಿ ಮಾಡ್ಯನೆ’.
‘ಡವುಟು ಕಣೊ ಉಗ್ರಿ. ಯಾಕಂದ್ರೆ ಈ ಯತ್ನಾಳ ಮದ್ಲಿಂದ ಎಡೂರಪ್ಪನ್ನ ವಿರೋದಿಸಿಕೊಂಡು ಬಂದೊನು. ಮದ್ಲು ಎಡೂರಪ್ಪ ಮುಖ್ಯಮಂತ್ರಿಯಾದಾಗ, ಇದೇ ಯತ್ನಾಳ ಶೋಭ ಕರಂದ್ಲಾಜೆಯಿಂದ ಎಡೂರಪ್ಪ ಹಾಳಾಯ್ತ ಅವುರೆ, ಮೊದ್ಲು ಅವುಳ ಸವಾಸ ಬುಡಬೇಕು ಅಂದಿದ್ದ’.
‘ನಿಜವೇನ್ಲ ನೀನೇಳದು’ ಎಂದಳು ಜುಮ್ಮಿ.
‘ನಾನ್ಯಾಕಕ್ಕ ಸುಳ್ಳೇಳ್ಳಿ, ಇನ್ನ ಒಂದು ಮಾತಂದಿದ್ದ ಅದು ಹೆಚ್ಚು ಪ್ರಚಾರ ತಗಳ್ಳಿಲ್ಲ. ಏನಪ್ಪ ಅಂದ್ರೆ ಈ ಬಿಜೆಪಿಯಿಂದ ಲಿಂಗಾಯಿತ ಧರ್ಮ ಹಾಳಾಯ್ತದೆ. ಅದರಿಂದ ಅಂದ್ರೆ ಬಿಜೆಪಿವಳಗಿಂದ ಲಿಂಗಾಯಿತ ಧರ್ಮ ಬ್ಯಾರೆ ಮಾಡಬೇಕು ಅಂದಿದ್ದ’.
‘ಮತ್ತೆ ಅಂಥೋನ್ಯಾಕೆ ಹಿಂಗಾಗ್ಯವುನೆ’.
‘ಪಾರ್ಟಿ ಅಂಗೆ ಮಾಡುಸ್ತವೆ ಕಣೊ. ಈಗವುನ್ನ ಬಿಜೆಪಿಯಿಂದ ತಗದಾಕ್ಲಿ ಪ್ಲೇಟ ಬದಲಾಸ್ತೆಯಿದ್ರು ಕೇಳು’.
‘ನೀನೇಳದು ನಿಜ ಕಣೊ. ಈಗಾಗ್ಲೆ ವಿಶ್ವನಾಥನ ಮಾತೇ ಬದಲಾಗ್ಯದೆ’.
‘ಅದೋಗ್ಲಿ ಕಣೊ, ಇದೇ ಎಡೂರಪ್ಪ ಕೆಜೆಪಿ ಮಾಡಿದಾಗ ಇನ್ನ ಬಿಜೆಪಿ ಸವಾಸಕ್ಕೆ ಹೋಗದಿಲ್ಲ ಅಂದಿದ್ದ’.
‘ನೋಡು ಮತ್ತೆ’.
‘ಲ್ಯಕ್ಕ ಹಾಕು ಅದೇ ಇವತ್ತು ಬಿಜೆಪಿ ಲೀಡ್ರು ಮುಖ್ಯಮಂತ್ರಿ ಇದಕೇನೇಳನ’.
‘ಏನೇ ಅದ್ರು ಪಾಪ ಎಡೂರಪ್ಪ ಭಾಳ ಅನುಭವಿಸಿ ಬುಟ್ಟ ಕಂಡ್ಳ’.
‘ನಿಜ ಕಣಕ್ಕ ಮುಖ್ಯಮಂತ್ರಿ ಕುರ್ಚಿ ಮ್ಯಾಲೆ ಕುಂತಗಂಡು ಇವುನಷ್ಟು ಗೋಳಾಡಿದೋರೆ ಇಲ್ಲ. ಇವತ್ತಿಗೂ ಅವುನ ಮಕ ನೋಡಿದ್ರೆ ಯಾರಿಗೆ ಬೇಕಪ್ಪ ಆ ಸ್ಥಾನ ಅನ್ನಂಗೆ ಕಾಣ್ತನೆ’.
‘ಆದ್ರು ಅವುನ ಸಾಧನೆ ಯಾರೂ ಮಾಡಕ್ಕಾಗದಿಲ್ಲ ಕಣೋ ವಾಟಿಸ್ಸೆ’.
‘ಡೆವಲಪ್‍ಮೆಂಟ್ ವರಕಲ್ಲಾ’.
‘ವರಕಲ್ಲ ಕಣೊ ಅವುನು ಮದ್ಲಿಗೆ ಕುಮಾರಸ್ವಾಮಿಯ ಮುಖ್ಯಮಂತ್ರಿ ಮಾಡಿದ. ಅಮ್ಯಾಲೆ ತಾನಾದ. ಆ ಶೋಭ ಕರಂದ್ಲಾಜೆ ಕಾಟ ತಾಳಕ್ಕಾಗದೆ ಇಳಿಸಿ ಸದಾನಂದಗೌಡಾಗಂಗಾಯ್ತು. ಅಮ್ಯಾಲೆ ಜಗದೀಶ್ ಶೆಟ್ಟರ್‍ನ ಮಾಡಿದ. ಬಿಜೆಪಿ ಬುಟ್ಟೊಗಿ ಕೆಜೆಪಿ ಮಾಡಿ ಸಿದ್ದರಾಮಯ್ಯನ್ನ ಮುಖ್ಯಮಂತ್ರಿ ಮಾಡಿದ. ತಿರಗ ಬಿಜೆಪಿಗೆ ಬಂದು ತಾನು ಆದ. ಮೂರು ದಿನ ಬುಟಗಂಡು ಕುಮಾರಸ್ವಾಮಿ ಆದ. ಅವುನ್ನ ಅತ್ತಗೆ ಉಂಡಿಸಿ ತಿರುಗ ತಾನೇ ಮುಖ್ಯಮಂತ್ರಿಯಾದ. ಇಂತ ಸಾಧನೆಯ ಯಾವ ರಾಜಕಾರಣಿ ಮಾಡ್ಯವುನೆ ತೋರು’.
‘ಇಲ್ಲ ಕಣೊ ಉಗ್ರಿ, ಆ ವಿಷಯದಲ್ಲಿ ಎಡೂರಪ್ಪ ಗ್ರೇಟ್’.
‘ಈಗ್ಯಾರ್ನು ಮಾಡ್ತನೆ’.
‘ಬಿಜೆಪಿನೆ ಉಡಾಯಿಸ್ತನೆ’.
‘!?’


ಇದನ್ನು ಓದಿ: ಕವನ | ಅಂತಿಮ ವಲಸೆಯ ಮುನ್ನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...