Homeಅಂಕಣಗಳುಚಂದ್ರೇಗೌಡರ ಕಟ್ಟೆಪುರಾಣ: ವಾಟಿಸ್ಸೆ ಉವಾಚ - ಎಡೂರಪ್ಪ ರಿಯಲಿ ಗ್ರೇಟು!

ಚಂದ್ರೇಗೌಡರ ಕಟ್ಟೆಪುರಾಣ: ವಾಟಿಸ್ಸೆ ಉವಾಚ – ಎಡೂರಪ್ಪ ರಿಯಲಿ ಗ್ರೇಟು!

- Advertisement -
- Advertisement -

‘ಎಡೂರಪ್ಪನ್ನ ಇಳುಸ್ತರಂತೆ ನಿಜವೇನ್ಲ’ ಎಂದಳು ಜುಮ್ಮಿ.
‘ನಿನಿಗ್ಯಾರಕ್ಕ ಹೇಳಿದೊರು’ ಎಂದ ವಾಟಿಸ್ಸೆ.
‘ಯಲ್ಲ ಅಂಗಂತ ಮಾತಾಡತಿದ್ರು ಕಂಡ್ಳ’.
‘ಈ ಟೈಮಲ್ಲಿ ಎಡೂರಪ್ಪನ್ನ ಮುಟ್ಟಕ್ಕಾದತೆ ಯಾವೊ ಪೋಲಿ ಬಡ್ಡೆತ್ತವು ಅಂಗಂದವೆ’ ಎಂದ ಉಗ್ರಿ.
‘ಪೋಲಿ ಬಡ್ಡೆತ್ತವಲ್ಲ ಕಣೊ, ಎಡೂರಪ್ಪ ಮಂತ್ರಿ ಮಾಡ್ತನೆ ಅಂತ ಕಾಯ್ಕಂಡಿದ್ದವಲ್ಲಾ ಅವ್ಯಲ್ಲ ಸೇರಿ ಹಟ್ಟಿರೊ ಗುಲ್ಲು’.
‘ಈ ಟೈಮಲ್ಲಿ ಮಂತ್ರಿ ಮಾಡಿದ್ರೆ ಏನು ಮಾಡ್ಯವೂ’.
‘ಏನು ಮಾಡ್ತರೆ ಅಂತ ಕೇಳ್ತಿಯಾ, ಈಗಾಗ್ಲೆ ಕರೋನದ ಕತೆ ಮುಗುಸ್ತಿವಿ ಅಂತ ಕಿಟ್ಟಲ್ಲಿ ಮೆಡಿಸನ್ನಲಿ ಮಾಸಕಲ್ಲಿ ಮುಕ್ಕತ ಕುಂತಿದ್ದರಂತೆ ಕಣೊ ಉಗ್ರೀ’.
‘ಕೊರೋನಾದಲ್ಲೂ ದುಡ್ಡು ಹ್ವಡಿತರಾ’.
‘ವಾಜಪೇಯಿ ಪ್ರಧಾನಿಯಾಗಿದ್ದಾಗ, ಶವದ ಪೆಟಿಗಲೇ ಹಣ ವಡದಿದ್ರು, ಇನ್ನ ಇದರಲ್ಲಿ ಬುಡ್ತರೇನಕ್ಕ’.
‘ಓಹೊಹೊ, ಕೊರೋನಾದ್ರಲ್ಲಿ ತಿನ್ನದ ನೋಡಕ್ಕಾಗದೆ, ನಮ್ಮನ್ನ ಮಂತ್ರಿ ಮಾಡಿ ಅಂತ ಕೇಳ್ತಾಯಿದ್ದರೆ’.
‘ಊ ಕಣೊ ಉಗ್ರಿ, ಆ ಯತ್ನಾಳ್ ಕತ್ತಿ ಇಂತ ಘಟಾನು ಘಟಿ ನಾಯಕರು, ನಾವು ಮಂತ್ರಿಯಾಗದೆ ಇದ್ರೆ ಕರ್ನಾಟಕ ಉದ್ದಾರಾಗದಿಲ್ಲ ಅನ್ನಂಗೆ ಮಾತಾಡ್ತ ಅವುರೆ’.
‘ಯತ್ನಾಳ ಕತ್ತಿ ತಿರುಗುಸ್ತಯಿದನೆ’.
‘ಯತ್ನಾಳ ಅಂದ್ರೆ ಬಸವನಗೌಡ ಪಾಟೀಲ ಯತ್ನಾಳ ಅಂತ ಬಿಜಾಪುರದ ನಿಜಾಮಿದ್ದಂಗವುನೆ, ನೋಡಕ್ಕೆ ಸಾಬರಂಗವುನೆ ಆದ್ರೆ ಲಿಂಗಾಯಿತ್ರೊನು. ಅವುನಿಗೆ ಸಾಬರ ಕಂಡ್ರಾಗದಿಲ್ಲ’.
‘ಯಾಕೇ?’.
‘ಬಿಜಾಪುರದಲ್ಲಿ ಇಜಾರದೋರು ಹಜಾರಮಂದಿ ಅಂತ ಸಾಬರ ಜಾಸ್ತಿಯಲವೆ. ಅದಕ್ಕೆ ಅವುರ ಕಂಡ್ರೆ ಕ್ಯಂಡ ಕಾರತನೆ ಕಣಕ್ಕ’.
‘ಅದೆ ಯಾಕೆ ಅಂದೆ’.
‘ಯಾಕೆ ಅಂದ್ರೆ, ಈ ಬಿಜೆಪಿಲಿ ಯಾರು ಜಾಸ್ತಿ ಸಾಬರನ್ನ ಬೈತರೊ ಅವುರು ನಮ್ಮ ಪಾರ್ಟಿಗೆ ಲಗತ್ತಾದ ಲೀಡ್ರು ಅಂತ ತಿಳಕಂಡರಂತೆ, ಅದು ಗೊತ್ತಾಗಿ ಆ ಅನಂತಕುಮಾರ ಹೆಗಡೆ ಅನ್ನೊ ಮೂರ್ಖ, ರೇಣುಕಾಚಾರಿ ಅನ್ನೊ ಕಾಮುಕ, ಈ ಯತ್ನಾಳ್ ಅನ್ನೊ ಯಬಡ ಇವ್ರ್ಯಲ್ಲ ಸಾಬರನ ಬಾಯಿಗೆ ಬಂದಂತೆ ಬೈತರೆ ಕಣಕ್ಕ’.
‘ಅಂಗ್ಯಲ್ಲ ಬೈಬಾರ್ದು ಕಂಡ್ಳ. ಬೋದುದ್ದು ಬರ್ಲಾಯ್ತು. ಬೈಸಿಗಂಡೋನು ಬಸವಣ್ಣಾದ ಅಂತ ಗಾದೆ ಮಾತೆ ಅದೆ’.
‘ಅದಿವುನಿಗೆ ಗೊತ್ತಾಗಬೇಕಲ್ಲ ಹೇಳು. ಆ ಬಿಜಾಪುರದ ಸಾಬರು ಬ್ಯಾರೆ ಕಡೆ ಸಾಬರತರ ಅಲ್ಲ ಬಸವ ಜಯಂತಿ ಮ್ಯರವಣಿಗೆಗೊ ಬಂದರಂತೆ’.
‘ಮತ್ತೆ ಅಂತ ಜಾಗದ ಯಮ್ಮೆಲ್ಲೆ ಆಗಿ ಹಿಂಗೆ ಮಾತಾಡಕ್ಕೆ ನಾಚಗೆ ಆಗಬೇಕು ಕಣೊ ಅವುನಿಗೆ’ ಎಂದ ಉಗ್ರಿ.
‘ನಾಚಿಕೆ ಅನ್ನೊ ಪದ ಬಿಜೆಪಿ ಡಿಕ್ಸ್‍ನರಿಲೆ ಇಲ್ಲ ಕಣೊ ಉಗ್ರಿ. ಆ ಎ.ಕೆ.ಸುಬ್ಬಯ್ಯ, ಶಿವಪ್ಪ ಅವುರ್ಯಲ್ಲ ಅಧ್ಯಕ್ಷರಾಗಿದ್ದಾಗ ನಾಚಿಕೆ ಒಂದಿಷ್ಟು ಆ ಪಾರ್ಟಿಲಿತ್ತು. ಅಮ್ಯಾಲೆ ಇದ್ಯಾಕೊ ಸರಿಯಾಗದಿಲ್ಲ ಅಂತ ಅದ ಬುಟ್ರು. ಹಿಂಗಾದ್ರು’.
‘ಯತ್ನಾಳ ಮದ್ಲಂಗಿರಲಿಲ್ಲ ಅಲವೆ’ ಎಂದ ಉಗ್ರಿ.
‘ಇರಲಿಲ್ಲ ಎತ್ತರಕ್ಕೆ ಹ್ಯಾಂಡಸಮ್ಮಾಗಿದ್ದ. ಅದ ನೋಡಿ ವಾಜಪೇಯಿ ವಳ್ಳೆ ಮನ್ಸ ಅಂತ ತಿಳಕಂಡು ಮಂತ್ರಿನೂ ಮಾಡಿದ್ರು. ಆದ್ರಿವತ್ತು ಇವುನ್ಯಂಥಾ ಮಂತ್ರಿಯಾಗಿದ್ದ ಅಂತ ಅವುನೇ ಹೇಳಿ ಕಂಡು ತಿರುಗಂಗಾಗ್ಯದೆ’.
‘ಎಡೂರಪ್ಪ ಇವುನ್ನ ಮಂತ್ರಿ ಮಾಡ್ಯನೆ’.
‘ಡವುಟು ಕಣೊ ಉಗ್ರಿ. ಯಾಕಂದ್ರೆ ಈ ಯತ್ನಾಳ ಮದ್ಲಿಂದ ಎಡೂರಪ್ಪನ್ನ ವಿರೋದಿಸಿಕೊಂಡು ಬಂದೊನು. ಮದ್ಲು ಎಡೂರಪ್ಪ ಮುಖ್ಯಮಂತ್ರಿಯಾದಾಗ, ಇದೇ ಯತ್ನಾಳ ಶೋಭ ಕರಂದ್ಲಾಜೆಯಿಂದ ಎಡೂರಪ್ಪ ಹಾಳಾಯ್ತ ಅವುರೆ, ಮೊದ್ಲು ಅವುಳ ಸವಾಸ ಬುಡಬೇಕು ಅಂದಿದ್ದ’.
‘ನಿಜವೇನ್ಲ ನೀನೇಳದು’ ಎಂದಳು ಜುಮ್ಮಿ.
‘ನಾನ್ಯಾಕಕ್ಕ ಸುಳ್ಳೇಳ್ಳಿ, ಇನ್ನ ಒಂದು ಮಾತಂದಿದ್ದ ಅದು ಹೆಚ್ಚು ಪ್ರಚಾರ ತಗಳ್ಳಿಲ್ಲ. ಏನಪ್ಪ ಅಂದ್ರೆ ಈ ಬಿಜೆಪಿಯಿಂದ ಲಿಂಗಾಯಿತ ಧರ್ಮ ಹಾಳಾಯ್ತದೆ. ಅದರಿಂದ ಅಂದ್ರೆ ಬಿಜೆಪಿವಳಗಿಂದ ಲಿಂಗಾಯಿತ ಧರ್ಮ ಬ್ಯಾರೆ ಮಾಡಬೇಕು ಅಂದಿದ್ದ’.
‘ಮತ್ತೆ ಅಂಥೋನ್ಯಾಕೆ ಹಿಂಗಾಗ್ಯವುನೆ’.
‘ಪಾರ್ಟಿ ಅಂಗೆ ಮಾಡುಸ್ತವೆ ಕಣೊ. ಈಗವುನ್ನ ಬಿಜೆಪಿಯಿಂದ ತಗದಾಕ್ಲಿ ಪ್ಲೇಟ ಬದಲಾಸ್ತೆಯಿದ್ರು ಕೇಳು’.
‘ನೀನೇಳದು ನಿಜ ಕಣೊ. ಈಗಾಗ್ಲೆ ವಿಶ್ವನಾಥನ ಮಾತೇ ಬದಲಾಗ್ಯದೆ’.
‘ಅದೋಗ್ಲಿ ಕಣೊ, ಇದೇ ಎಡೂರಪ್ಪ ಕೆಜೆಪಿ ಮಾಡಿದಾಗ ಇನ್ನ ಬಿಜೆಪಿ ಸವಾಸಕ್ಕೆ ಹೋಗದಿಲ್ಲ ಅಂದಿದ್ದ’.
‘ನೋಡು ಮತ್ತೆ’.
‘ಲ್ಯಕ್ಕ ಹಾಕು ಅದೇ ಇವತ್ತು ಬಿಜೆಪಿ ಲೀಡ್ರು ಮುಖ್ಯಮಂತ್ರಿ ಇದಕೇನೇಳನ’.
‘ಏನೇ ಅದ್ರು ಪಾಪ ಎಡೂರಪ್ಪ ಭಾಳ ಅನುಭವಿಸಿ ಬುಟ್ಟ ಕಂಡ್ಳ’.
‘ನಿಜ ಕಣಕ್ಕ ಮುಖ್ಯಮಂತ್ರಿ ಕುರ್ಚಿ ಮ್ಯಾಲೆ ಕುಂತಗಂಡು ಇವುನಷ್ಟು ಗೋಳಾಡಿದೋರೆ ಇಲ್ಲ. ಇವತ್ತಿಗೂ ಅವುನ ಮಕ ನೋಡಿದ್ರೆ ಯಾರಿಗೆ ಬೇಕಪ್ಪ ಆ ಸ್ಥಾನ ಅನ್ನಂಗೆ ಕಾಣ್ತನೆ’.
‘ಆದ್ರು ಅವುನ ಸಾಧನೆ ಯಾರೂ ಮಾಡಕ್ಕಾಗದಿಲ್ಲ ಕಣೋ ವಾಟಿಸ್ಸೆ’.
‘ಡೆವಲಪ್‍ಮೆಂಟ್ ವರಕಲ್ಲಾ’.
‘ವರಕಲ್ಲ ಕಣೊ ಅವುನು ಮದ್ಲಿಗೆ ಕುಮಾರಸ್ವಾಮಿಯ ಮುಖ್ಯಮಂತ್ರಿ ಮಾಡಿದ. ಅಮ್ಯಾಲೆ ತಾನಾದ. ಆ ಶೋಭ ಕರಂದ್ಲಾಜೆ ಕಾಟ ತಾಳಕ್ಕಾಗದೆ ಇಳಿಸಿ ಸದಾನಂದಗೌಡಾಗಂಗಾಯ್ತು. ಅಮ್ಯಾಲೆ ಜಗದೀಶ್ ಶೆಟ್ಟರ್‍ನ ಮಾಡಿದ. ಬಿಜೆಪಿ ಬುಟ್ಟೊಗಿ ಕೆಜೆಪಿ ಮಾಡಿ ಸಿದ್ದರಾಮಯ್ಯನ್ನ ಮುಖ್ಯಮಂತ್ರಿ ಮಾಡಿದ. ತಿರಗ ಬಿಜೆಪಿಗೆ ಬಂದು ತಾನು ಆದ. ಮೂರು ದಿನ ಬುಟಗಂಡು ಕುಮಾರಸ್ವಾಮಿ ಆದ. ಅವುನ್ನ ಅತ್ತಗೆ ಉಂಡಿಸಿ ತಿರುಗ ತಾನೇ ಮುಖ್ಯಮಂತ್ರಿಯಾದ. ಇಂತ ಸಾಧನೆಯ ಯಾವ ರಾಜಕಾರಣಿ ಮಾಡ್ಯವುನೆ ತೋರು’.
‘ಇಲ್ಲ ಕಣೊ ಉಗ್ರಿ, ಆ ವಿಷಯದಲ್ಲಿ ಎಡೂರಪ್ಪ ಗ್ರೇಟ್’.
‘ಈಗ್ಯಾರ್ನು ಮಾಡ್ತನೆ’.
‘ಬಿಜೆಪಿನೆ ಉಡಾಯಿಸ್ತನೆ’.
‘!?’


ಇದನ್ನು ಓದಿ: ಕವನ | ಅಂತಿಮ ವಲಸೆಯ ಮುನ್ನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...