Homeಅಂಕಣಗಳುಚುನಾವಣೆ ನಂತವೂ ಪ್ರಜಾತಂತ್ರ ಉಳಿಯಲಿ

ಚುನಾವಣೆ ನಂತವೂ ಪ್ರಜಾತಂತ್ರ ಉಳಿಯಲಿ

- Advertisement -
- Advertisement -

ನಮ್ಮ ಪತ್ರಿಕೆ ನಿಮ್ಮ ಕೈ ಸೇರುವ ವೇಳೆಗೆ ಕರ್ನಾಟಕದ ಮೊದಲ ಸುತ್ತಿನ ಚುನಾವಣೆ ಮತ್ತು ದೇಶದ ಎರಡನೇ ಸುತ್ತಿನ ಚುನಾವಣೆ ಮುಗಿದಿರುತ್ತದೆ. ಹಾಗೆಯೇ ಮುಂದಿನ ಸುತ್ತಿನ ಚುನಾವಣೆಗೆ ದೇಶ ಎದುರು ನೋಡುತ್ತಿರುತ್ತದೆ. ಹೆಚ್ಚು ಜನ ಮತಗಟ್ಟೆಗೆ ಹೋಗಿ ಮತ ಚಲಾಯಿಸುವಂತೆ ಚುನಾವಣಾ ಆಯೋಗ ವಿವಿಧ ಜನ ಸಂಘಟನೆಗಳ ಸಹಯೋಗದಿಂದ ಜನರ ಮನಸ್ಸನ್ನು ಒಲಿಸುವ ಕೆಲಸವನ್ನು ಈ ಬಾರಿ ಹಿಂದೆಂದಿಗಿಂತಲೂ ಭರದಿಂದ ಕೈಗೆತ್ತಿಕೊಂಡಿದೆ. ಹೆಚ್ಚು ಜನ ಮತ ಚಲಾಯಿಸಿದಷ್ಟೂ ನಮ್ಮ ಪ್ರಜಾಪ್ರಭುತ್ವ ಹೆಚ್ಚು ಗಟ್ಟಿಯಾಗುತ್ತದೆ; ಅದು ಪ್ರಜಾತಂತ್ರಕ್ಕೆ ಸಂದ ವಿಜಯ ಎಂಬಂತೆ ಈ ಪ್ರಚಾರ ಸಾಗುತ್ತಿದೆ. ಯಾವುದೇ ಆಮಿಷ, ಬೆದರಿಕೆಗೆ ಒಳಗಾಗದೆ ಮತ ಚಲಾಯಿಸುವಂತೆ ಮಾಡಲು ಈ ಪ್ರಯತ್ನ ಸ್ವಾಗತಾರ್ಹವೇ. ಹಾಗೆಯೇ ‘ಒಳ್ಳೆಯ’ ಅಭ್ಯರ್ಥಿಯನ್ನು ಗೆಲ್ಲಿಸಿ ಎಂಬ ಘೋಷವಾಕ್ಯವೂ ಈ ಪ್ರÀಚಾರದಲ್ಲಿ ಸೇರಿದೆ. ಮತ ಚಲಾವಣೆ ಒಂದು ಹಕ್ಕು ಮಾತ್ರವಲ್ಲ ಅದು ಕರ್ತವ್ಯ ಕೂಡ. ಒಂದು ಆಶಯವಾಗಿ ಇವೆಲ್ಲವೂ ಸರಿಯೇ ಆದರೂ ಇದು ಕೆಲವು ಮುಖ್ಯ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.
ಒಂದು, ಇಡೀ ಪ್ರಜಾಪ್ರಭುತ್ವವನ್ನೇ ಚುನಾವಣಾ ಪ್ರಕ್ರಿಯೆಗೆ ಸಮೀಕರಿಸುವುದಕ್ಕೆ ಸಂಬಂಧಪಟ್ಟಿದ್ದು. ಇಂದು ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳಲು ಚುನಾವಣೆಗಳನ್ನು ಕಾಲಕ್ಕೆ ಸರಿಯಾಗಿ ನಡೆಸುವುದನ್ನೇ ಆಧಾರವಾಗಿಟ್ಟುಕೊಳ್ಳಲಾಗುತ್ತಿದೆ. ಹೀಗಾಗಿ ಇಲ್ಲಿ ಪ್ರಜಾಪ್ರಭುತ್ವದ ಉಳಿವು-ಬೆಳವಣಿಗೆಗೆ ಚುನಾವಣೆಗಳನ್ನೇ ಕಾರಣವಾಗಿಸುವ ಒಂದು ಪ್ರಯತ್ನವಿದೆ. ಚುನಾವಣೆಗಳು ಪ್ರಜಾತಂತ್ರದ ಮುಖ್ಯ ಅಂಗ ನಿಜ. ಆದರೆ ಅದೇ ಅದರ ಜೀವಾಳವಲ್ಲ. ಯಾಕೆಂದರೆ ಇದೇ ಚುನಾವಣೆಯ ಪ್ರಕ್ರಿಯೆಯ ಮೂಲಕವೇ, ಅದನ್ನು ಬಳಸಿಕೊಂಡೇ, ಆಳುವ ರಾಜಕೀಯ ಪಕ್ಷಗಳು ಅಪ್ರಜಾತಾಂತ್ರಿಕವಾದ ಕಾನೂನುಗಳನ್ನು ಮತ್ತು ಅಚರಣೆಗಳನ್ನು ಜಾರಿ ಮಾಡಿರುವುದನ್ನು ನಾವು ಕಂಡಿದ್ದೇವೆ. ಈಗ ಭಾರತದಲ್ಲಿರುವ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಮುಂದೆ ಇದು ಇನ್ನೂ ಹೆಚ್ಚಾಗುವ ಸಂಭವವೇ ಜಾಸ್ತಿ. ಹೀಗಾಗಿ ಹೆಚ್ಚು ಜನ ಮತ ಚಲಾಯಿಸುವುದನ್ನೇ ಪ್ರಜಾಪ್ರಭಯತ್ವದ ದಿಗ್ವಿಜಯ ಎಂದು ಹೇಳಲಾಗದು. ಚುನಾವಣೆಯನ್ನು ಅಧಿಕಾರಕ್ಕೆ ಬರುವ ಮಾರ್ಗ ಎಂದು ಮಾತ್ರ ಭಾವಿಸುವ ಆಳುವ ಪಕ್ಷಗಳೂ ಕೂಡ ಚುನಾವಣೆಯನ್ನೇ ಪ್ರಜಾಪ್ರಭುತ್ವದ ಒಂದು short hand ಆಗಿ ಭಾವಿಸುತ್ತವೆ. ‘ಯಾರು ಬಂದರೂ ರಾಗಿ ಬೀಸುವುದು ತಪ್ಪದು’ ಎಂಬ ನಿತ್ಯ ಸತ್ಯದ ಗೊಣಗಾಟದಲ್ಲಿ ಮತದಾರರು ತಮ್ಮ ಯಾವತ್ತೂ ಜೀವನಕ್ಕೆ ಮರಳಿದರೆ, ಗೆದ್ದ ಹುರಿಯಾಳುಗಳು ಇನೈದು ವರ್ಷ ಯಾರ ಮುಂದೆಯೂ ಕೈ ಚಾಚ ಬೇಕಿಲ್ಲ ಎಂಬ ಹಮ್ಮಿನೊಂದಿಗೆ ಅಧಿಕಾರ ಹಿಡಿಯುತ್ತಾರೆ. ಮತ್ತೆ ಇನ್ನೊಂದು ಚುನಾವಣೆ ಬರುವವರೆಗೂ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತದೆ.
ಇನ್ನು ‘ಒಳ್ಳೆಯ ವ್ಯಕ್ತಿ’ಯನ್ನು ಗೆಲ್ಲಿಸುವ ವಿಚಾರ. ಚುನಾವಣಾ ಕಣದಲ್ಲಿ ‘ಒಳ್ಳೆಯ ವ್ಯಕ್ತಿ’ಗಳು ಕಾಣಿಸಿಕೊಳ್ಳುವುದೇ ಅಪರೂಪ. ಹೀಗಿರುವಾಗ ಕುರುಡರ ಪೈಕಿ ಮೇಲುಗಣ್ಣರನ್ನು ಆಯುವುದಷ್ಟೇ ಮತದಾರರ ಮುಂದಿರುವ ಆಯ್ಕೆ. ‘ಒಳ್ಳೆಯ ವ್ಯಕ್ತಿ’ ಯಾರು ಎಂದು ನಿರ್ಧರಿಸುವುದಕ್ಕೆ ಆಗದಹಾಗೆ ನಮ್ಮ ಚುನಾವಣಾ ಪ್ರಕ್ರಿಯೆ ಸಜ್ಜುಗೊಂಡಿದೆ. ಹಣವಿರದ ಆದರೆ ಜನಪರ ಕಾಳಜಿ ಇರುವ ಹಾಗೂ ಜನರೊಂದಿಗೆ ಹೋರಾಟದಲ್ಲಿ ತೊಡಗಿರುವ ವ್ಯಕ್ತಿಗಳು ಗೆದ್ದು ಬರಲು ಸಾಧ್ಯವೇ ಇಲ್ಲದ ಹಾಗೆ ಚುನಾವಣಾ ಸ್ವರೂಪವನ್ನು ರಚಿಸಲಾಗಿದೆ. ಇಷ್ಟಾದರೂ ಕಷ್ಟಪಟ್ಟು ಪಕ್ಷೇತರರಾಗಿ ಚುನಾವಣೆಗೆ ನಿಂತ ಹ¯ವಾರು ಖ್ಯಾತನಾಮರು ಠೇವಣಿ ಕಳೆದುಕೊಂಡಿರುವುದೇ ಹೆಚ್ಚು. ಹಣ ಇರುವವರು ಮಾತ್ರ ಚುನಾವಣೆಗೆ ನಿಲ್ಲುವಂಥ ಪರಿಸ್ಥಿತಿಯನ್ನು ಸೃಷ್ಟಿಸಿರುವುದೇ ನಮ್ಮ ಪ್ರಜಾತಂತ್ರದ ದೋಷಗಳಲ್ಲಿ ಒಂದು. ಇಷ್ಟಾದರೂ, ಹಣ-ಜಾತಿ ಆಮಿಷಗಳ ನಡುವೆಯೂ, ಜನ ತೀರಾ ಸಿನಿಕರಾಗದೆ ಮತ ಚಲಾಯಿಸಿಕೊಂಡು ಬಂದಿದ್ದಾರೆ. ಆಳುವ ಪಕ್ಷಗಳನ್ನು ಬದಲಾಯಿಸಿದ್ದಾರೆ. ಒಟ್ಟಾರೆಯಾಗಿ ಚುನಾವಣೆಗಳು ಒಂದು ಸ್ಥೂಲ ಅರ್ಥದಲ್ಲಿ ಜನಾಭಿಪ್ರಾಯದ ಸೂಚನೆಯಾಗಿದೆ. ಆದರೆ ಇವೇ ಚುನಾವಣೆಗಳ ಮೂಲಕವೇ ಮೋದಿಯಂಥವರು ಗೆದ್ದು ಬರಲು ಸಾಧ್ಯವಾಗಿದೆ. ಗೆದ್ದವರು ಐದು ವರ್ಷಗಳ ಕಾಲ ಎಲ್ಲಾ ರಂಗಗಳಲ್ಲೂ ತೀವ್ರ ವೈಫಲ್ಯ ಕಂಡಾಗಲೂ, ವಿರೋಧಿ ಅಲೆ ಎಷ್ಟಿರಬೇಕಿತ್ತೋ ಅಷ್ಟಿಲ್ಲದೇ ಹೋಗಲು ಕಾರಣಗಳಿರಬಹುದು, ಆದರೆ ವಾಸ್ತವ.
ಚುನಾವಣೆಯಲ್ಲಿ ಮತ ಚಲಾಯಿಸುವುದು ಜನರ ಹಕ್ಕು ಮತ್ತು ಕರ್ತವ್ಯ ಸರಿ. ಆದರೆ ಮತ ಚಲಾವಣೆಯಲ್ಲಿ ಭಾಗವಹಿಸದವರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆಯೇ? ಅಥವಾ ತಾವು ಮತ ಹಾಕಿದ ಪಕ್ಷ/ವ್ಯಕ್ತಿ ಸೋತುಹೋದರೆ, ತಾವು ಮತಹಾಕದ ಸಂಸದ/ ಶಾಸಕರುಗಳಲ್ಲಿ ನಮ್ಮ ಬೇಡಿಕೆಗಳನ್ನು ಇಟ್ಟು ಹೋರಾಟ ಮಾಡಬಾರದೆ? ಪ್ರಜಾತಂತ್ರದಲ್ಲಿ ಎಷ್ಟೇ ಮತದ ಅಂತರದಿಂದ ಗೆದ್ದರೂ ಆ ಗೆದ್ದ ವ್ಯಕ್ತಿ/ಪಕ್ಷ ಎಲ್ಲರನ್ನೂ- ತಮ್ಮ ವಿರೋಧಿಗಳನ್ನೂ ಒಳಗೊಂಡಂತೆ – ಪ್ರತಿನಿಧಿಸುವುದು ಪ್ರಜಾತಂತ್ರದ ಅವಿಭಾಜ್ಯ ಅಂಗ. ನಮ್ಮ ಆಳುವ ಪಕ್ಷ/ವ್ಯಕ್ತಿಗಳಲ್ಲಿ ಈ ಭಾವನೆ ಮೂಡುವವರೆಗೂ ಪ್ರಜಾತಂತ್ರ ಗಟ್ಟಿಯಾಗುವುದಿಲ್ಲ.
ಹೀಗಾಗಿ ಚುನಾವಣೆಗಳು ಪ್ರತಿನಿಧಿಗಳನ್ನು ಆಯುವ ಪ್ರಕ್ರಿಯೆಯೇ ಹೊರತು ಪ್ರಾತಿನಿಧ್ಯವನ್ನೇ ಮೊಟಕುಗೊಳಿಸುವ ಸಾಧನ ಅಲ್ಲ; ಆಗಬಾರದು. ಈ ಪ್ರಾತಿನಿಧ್ಯದ ಹಕ್ಕನ್ನು ಎಲ್ಲ ಪ್ರಜೆಗಳು, ಮತ ಚಲಾಯಿಸದವರೂ ಸೇರಿದಂತೆ, ಹೊಂದಿರುತ್ತಾರೆ. ಆದರೆ ಈ ಪ್ರಾತಿನಿಧ್ಯ ಹಾಗೆಯೇ ಒದಗಿ ಬರುವುದಿಲ್ಲ. ಅದಕ್ಕೆ ಸದಾಕಾಲ ಎಚ್ಚರದಿಂದ ಇರುವ ಮತ್ತು ಇದು ನಮ್ಮದೇ ಪ್ರಭುತ್ವ ಎಂಬ ಜಾಗೃತಿ ಇರುವ ಪ್ರಜೆಗಳು ಒಟ್ಟಾಗಿ ಹೋರಾಡಬೇಕಾಗುತ್ತದೆ. ಇದು ಚುನಾವಣೆಯ ನಂತರವೂ ಪ್ರಜಾತಂತ್ರವನ್ನ ಉಳಿಸಿಕೊಳ್ಳಲು ಅಗತ್ಯವಾದ ಪ್ರಕ್ರಿಯೆ. ಈ ಬಾರಿಯ ಚುನಾವಣೆಗಳ ನಂತರ ಪ್ರಜಾತಾಂತ್ರಿಕ ಹೋರಾಟದ ಅವಶ್ಯಕತೆ ಇನ್ನೂ ಹೆಚ್ಚಾಗಲಿದೆ. ಪ್ರಜಾಪ್ರಭುತ್ವವನ್ನು ಕಡೆÀಗೂ ಕಾಪಾಡುವುದು ಜನರೇ ಹೊರತು ಇಂಥ ಚುನಾವಣೆಗಳಲ್ಲ. ಇದಕ್ಕೆ ಸಜ್ಜಾಗುವುದೊಂದೇ ನಮ್ಮ ಮುಂದಿರುವ ನಿಜವಾದ ಆಯ್ಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...