Homeಕರ್ನಾಟಕಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ.. -...

ಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ.. – ಡಿ.ಆರ್.ಪಾಟೀಲ

- Advertisement -
- Advertisement -

ಸಂದರ್ಶನ:| ಪಿ.ಕೆ ಮಲ್ಲನಗೌಡರ್ |

ಧಗಧಗ ಝಳದ ನಡುವೆ ಒಂದು ‘ತಣ್ಣನೆ’ ಸಂದರ್ಶನ
ಈ ಸಲ ಹಾವೇರಿ-ಗದಗು ಸೇರಿದಂತೆ ಈ ಕಡೆಯಲ್ಲಿ ಎಂದಿಗಿಂತ ಜಾಸ್ತಿ ಬಿಸಿಲು. ಚುನಾವಣೆಯ ಕಾಳಗದಲ್ಲೂ ಉರಿ ಉರಿ. ರಾತ್ರಿ ಹತ್ತೂವರೆ ಹೊತ್ತಿಗೆ ಬಯಲಿನಲ್ಲಿ ಈ ಸಂದರ್ಶನ ನಡೆದಾಗ ಝಳ ಝಳ. ಪತ್ರಿಕೆಯ ಪ್ರಶ್ನೆಗಳಿಗೆ ಅಭ್ಯರ್ಥಿ ಕೊಡುತ್ತಿದ್ದ ತಣ್ಣನೆಯ ಉತ್ತರಗಳಲ್ಲಿ ವ್ಯವಸ್ಥೆಯ ವಿರುದ್ಧದ ‘ಕಾವು’ ಕಾಣತೊಡಗಿತ್ತು… ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲರೊಂದಿಗಿನ ಸಂದರ್ಶನ ಇಲ್ಲಿದೆ…

ಪತ್ರಿಕೆ: ಈ ಚುನಾವಣೆ ಮಹತ್ತದ್ದು, ಭಿನ್ನವಾದುದು ಎಂದು ವಿವಿಧ ಪಾರ್ಟಿಗಳು ತಮ್ಮ ಧಾಟಿಯಲ್ಲಿ ಹೇಳ್ತಾ ಇವೆ. ವೈಯಕ್ತಿಕವಾಗಿ ಈ ಚುನಾವಣೆ ಬಗ್ಗೆ ನಿಮ್ಮ ಅಭಿಪ್ರಾಯ?
ಡಿ.ಆರ್.ಪಾಟೀಲ್: ಇಲ್ಲಿ ವೈಯಕ್ತಿಕ ಅಭಿಪ್ರಾಯವು ಸಾರ್ವಜನಿಕ ಅಭಿಪ್ರಾಯವೂ ಅಗಬಹುದಲ್ಲ? ನಮ್ಮ ಪಕ್ಷದ ಮಟ್ಟಿಗೆ ಇದು ಚಾಲೆಂಜಿಂಗ್ ಚುನಾವಣೆ. ನನಗಂತೂ ಈ ಚುನಾವಣೆ ಪ್ರಜಾಪ್ರಭುತ್ವದ ಮೌಲ್ಯಗಳ ಜೀವನ್ಮರಣದ ಪ್ರಶ್ನೆ ಅನಿಸ್ತಾ ಇದೆ. ಇನ್ನೊಮ್ಮೆ ಅಧಿಕಾರ ಸಿಕ್ಕರೆ ಅವರೆಲ್ಲ (ಬಿಜೆಪಿ) ಸಂವಿಧಾನವನ್ನೇ ಬದಲಿಸಬಹುದು. ಇದು ಆತಂಕದ ವಿಷಯ. ಆ ಕಾರಣಕ್ಕಾಗಿ ಬಿಜೆಪಿಗೆ ಅಧಿಕಾರ ಸಿಗಲೇಬಾರದು.

ಪತ್ರಿಕೆ: ಈಗ ಮೋದಿ ಮತ್ತೊಮ್ಮೆ ಎನ್ನುವ ಸದ್ದು ಜೋರಾಗಿದೆಯಲ್ಲ?
ಡಿ.ಆರ್.ಪಾಟೀಲ್: ಜೋರಾಗಿ ಇರುವುದು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ. ಕಾಂಗ್ರೆಸ್ ತಪ್ಪು ಮಾಡಿದಾಗೆಲ್ಲ ಜನ ಶಿಕ್ಷೆ ಕೊಟ್ಟಿದ್ದಾರೆ. ಆದರೆ ಆ ಕಾರಣಕ್ಕೆ ಬಂದ ಇತರ ಸರ್ಕಾರಗಳನ್ನು ಎಂದೂ ಮರು ಆಯ್ಕೆ ಮಾಡಿಯೇ ಇಲ್ಲ. ವಾಜಪೇಯಿ 13 ತಿಂಗಳ ನಂತರ ಮತ್ತೆ ಸರ್ಕಾರ ಮಾಡಿದ್ದನ್ನು ಬಿಟ್ಟರೆ, ಇಲ್ಲಿ ಯಾವ ಕಾಂಗ್ರೆಸ್ಸೇತರ ಸರ್ಕಾರ ಮರು ಆಯ್ಕೆ ಆಗಿಲ್ಲ. ಈ ಸಲವೂ ಅದೇ ಘಟಿಸಲಿದೆ.


ಪತ್ರಿಕೆ: ಸದ್ಯದ ಸರ್ಕಾರದ ಕುರಿತು ಹೇಳಿ.
ಡಿ.ಆರ್. ಪಾಟೀಲ್: ಮೋದಿ ಒಬ್ಬ ಜನದ್ರೋಹಿ ನಾಯಕ. ಇಂತಹ ಮನುಷ್ಯನಿಂದ ಒಳ್ಳೆ ಕೆಲಸ ಅಪೇಕ್ಷಿಸುವುದೇ ಮೂರ್ಖತನ. 2014ರಲ್ಲಿ ಈ ಮನುಷ್ಯ ಸಿಕ್ಕಾಪಟ್ಟೆ ಭರವಸೆ ಕೊಟ್ರು. ಒಂದಾದರೂ ಈಡೇರಿತಾ? ಕಪ್ಪುಹಣ ತರ್ತೀನಿ ಅಂದವ್ರು ಕಪ್ಪುಹಣ ಹೊಂದಿದವರ ಪೋಷಣೆ ಮಾಡಿದರು. 15 ಲಕ್ಷದ ಬಗ್ಗೆ ಮಾತಾಡೊಕ್ಕೆ ಅಸಹ್ಯ ಆಗುತ್ತೆ. ಮೋದಿ ಗೆಲುವಿಗೆ ಕಾರಣವಾಗಿದ್ದು ದೊಡ್ಡ ಯುವ ಸಮೂಹ. ಅವರಿಗೆ ಉದ್ಯೋಗ ಕೊಡುವುದಿರಲಿ, ನೋಟು ರದ್ಧತಿಯಂತಹ ಮೂರ್ಖ ಯೋಜನೆಯಿಂದ ಇದ್ದ ಉದ್ಯೋಗಗಳನ್ನು ನಾಶ ಮಾಡಿಬಿಟ್ಟರು. ನಮ್ಮ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಮೂರಾಬಟ್ಟೆ ಮಾಡಿದ್ದಾರೆ. ದೇಶದ ಗ್ರಾಮೀಣ ಭಾಗ ಅದರಲ್ಲೂ ಕೃಷಿ ಆಧಾರಿತ ವ್ಯವಸ್ಥೆ ಇವತ್ತು ತೀವ್ರ ಸಂಕಷ್ಟದಲ್ಲಿದೆ. ಅಂಬಾನಿ, ಅದಾನಿಗಳನ್ನು ಪಕ್ಕಕ್ಕೆ ಇಟ್ಟುಕೊಂಡು ಜಗತ್ತು ಸುತ್ತಿದರೆ ಇನ್ನೇನಾಗುತ್ತೇ?

ಪತ್ರಿಕೆ: ‘ನ್ಯಾಯ್’ ಯೋಜನೆ ಲೆಫ್ಟ್‍ನ ಪ್ರಭಾವದಿಂದ ಬಂದಿದ್ದು ಅನಿಸುತ್ತಿದೆ. 90ರ ದಶಕದ ಆರಂಭದಲ್ಲಿ ಜಾಗತೀಕರಣವನ್ನು ಇಂಟ್ರುಡ್ಯೂಸ್ ಮಾಡಿದ ಕಾಂಗ್ರೆಸ್‍ಗೆ ಈಗ ಎಚ್ಚರವಾಯಿತಾ?
ಡಿ.ಆರ್.ಪಾಟೀಲ್: ಒಂದು ಮಾತು ಹೇಳ್ತೇನೆ. ಇದು ಕಾಂಗ್ರೆಸ್‍ನ ನಿಲುವೂ ಹೌದು, ಅದಕ್ಕಿಂತ ಮುಖ್ಯವಾಗಿ ನನ್ನ ನಿಲುವಂತೂ ಹೌದೇ ಹೌದು. ನೀವು ಅದು ಲೆಫ್ಟ್ ಅಂತ ಪ್ರಸ್ತಾಪ ಮಾಡಿದರಲ್ಲ, ಆ ಎಡ ಚಿಂತನೆಗಳಲ್ಲಿ ಸದಾ ಸಮಷ್ಠಿ ಕಲ್ಯಾಣದ ಅಂಶಗಳು ಇವೆ. ಸಮಾಜವಾದಿ ಸಿದ್ದಾಂತಗಳೂ, ಗಾಂಧಿಯ ಸ್ವರಾಜ್ಯ ಕನಸೂ ನಮ್ಮ ಪಕ್ಷದೊಳಗೆ ಅಂತರ್ಗತವಾಗಿದೆ. ನೆಹರೂಗೆ ಸಮಾಜವಾದದ ಒಲವಿತ್ತು. ಇಂದಿರಾ ಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದು, ಉಳುವವನೇ ಒಡೆಯ ಕಾಯ್ದೆ ಜಾರಿಗೆ ತಂದಿದ್ದು-ಇವೆಲ್ಲ ಲೆಫ್ಟ್ ಚಿಂತನೆ ಅನ್ನುವುದಾದರೆ ಅನ್ನಲಿ. ಎಲ್ಲ ಚಿಂತನೆಗಳಲ್ಲಿರುವ ಸಮಾಜಮುಖಿ ಆಶಯಗಳನ್ನು ಕಾಂಗ್ರೆಸ್ ಗೌರವಿಸುತ್ತದೆ.

ಹಾಂ, ನೀವು ಜಾಗತೀಕರಣದ ಬಗ್ಗೆಯೂ ಕೇಳಿದಿರಿ. ಅಲ್ಲಿ ಖಾಸಗೀಕರಣವೂ ಇದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಹೇಳುವೆ. ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳನ್ನು ಹುಟ್ಟು ಹಾಕಿದ್ದು, ಅವಕ್ಕೆ ಬಲ ತುಂಬಿದ್ದು ನಮ್ಮ ಪಕ್ಷವೇ. 90ರ ಆರಂಭದಲ್ಲಿ ಜಾಗತಿಕ ಅರ್ಥವ್ಯವಸ್ಥೆಯ ಜೊತೆ ಹೆಜ್ಜೆ ಹಾಕುವ ಆಶಯದಲ್ಲಿ ಜಾಗತೀಕರಣವನ್ನು ಬರ ಮಾಡಿಕೊಂಡೆವಷ್ಟೇ. ಅದರೆ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಹಿತಕ್ಕೆ ನಾವೆಂದೂ ಅನ್ಯಾಯ ಮಾಡಿಲ್ಲ. ನಮ್ಮ ಆದ್ಯತೆ ಎಚ್‍ಎಎಲ್, ಬಿಎಸ್‍ಎನ್‍ಎಲ್‍ಗೆ ಹೊರತು ರಿಲಾಯನ್ಸ್ ಡಿಫೆನ್ಸ್, ಜಿಯೋಗಳಿಗೆ ಅಲ್ಲ. ‘ನ್ಯಾಯ್’ ಎಂಬುದು ಇವತ್ತಿನ ತುರ್ತು ಅಗತ್ಯ. ಅದು ಬಡವರ, ಅದರಲ್ಲೂ ಹಳ್ಳಿಗಳ ಬಡವರ ಬದುಕಿಗೆ ಘನತೆ, ಗೌರವ ತರುವ ಕೆಲಸ. ಹಿಂದೆ ನಾವು ನರೇಗಾ ಜಾರಿಗೆ ತಂದಿದ್ದೂ ಇದೇ ಉದ್ದೇಶದಿಂದಲೇ…

ಪತ್ರಿಕೆ: ಎರಡು ಸಲ ಗದಗಿನಿಂದ ಶಾಸಕರಾಗಿ, ನಿಮ್ಮ ಸಹೋದರನಿಗೆ ಸೀಟು ಬಿಟ್ಟುಕೊಟ್ಟ ನೀವು ಈಗ ಮೊದಲ ಸಲ ಲೋಕಸಭೆ ಚುನಾವಣೆಗೆ ನಿಲ್ತಾ ಇದ್ದೀರಿ. ಹೇಗಿದೆ ಜನರ ಪ್ರತಿಕ್ರಿಯೆ?
ಡಿ.ಆರ್.ಪಾಟೀಲ್: ಇಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಗೆಲ್ತಾವು ಅಂತ ಜನರು ಹೇಳ್ತಾ ಇದ್ದಾರ.., ಹಾಲಿ ಸಂಸದರ ಕೆಲಸ ಅಷ್ಟಕ್ಕಷ್ಟೇ. ಆದರೆ ನಮ್ಮ ಹೋರಾಟ ಎದುರಿನ ಅಭ್ಯರ್ಥಿ ವಿರುದ್ಧ ಮಾತ್ರವಲ್ಲ. ಈ ದೇಶದ ಸಂವಿಧಾನ, ಸೌಹಾರ್ದತೆ ಕಾಪಾಡುವುದರ ಪರ ಇದೆ.

ಪತ್ರಿಕೆ: ಪಂಚಾಯತ್‍ರಾಜ್ ವ್ಯವಸ್ಥೆಯಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆಗೆ, ಗ್ರಾಮೀಣ ಅಭಿವೃದ್ಧಿಗೆ ತಾವು ತೆರೆಮರೆಯಲ್ಲಿ ಸಾಕಷ್ಟು ಕೆಲಸ ಮಾಡಿದವರು. ಗದಗ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿಮಗಿರುವ ಸಪೋರ್ಟು ಹಾವೇರಿ ಭಾಗದಲ್ಲಿ ಸಿಗ್ತಾ ಇದೆಯಾ?
ಡಿ.ಆರ್.ಪಾಟೀಲ್: ಆರಂಭದಲ್ಲಿ ನನಗೂ ಡೌಟೇ ಇತ್ತರಿ. ಬಟ್, ಹಾವೇರಿ ಭಾಗದಲ್ಲೂ ಜನ ಬೆಂಬಲ ಸಿಗ್ತಾ ಇದೆ. ಈ ದೇಶದ ನಾಯಕರಿಗಿಂತ ಜನ ಹೆಚ್ಚು ಬುದ್ಧಿವಂತರು ಅನ್ನೋ ಮಾತಿನಾಗ ನನಗ ನಂಬಿಕೆ ಅದ..

ಪತ್ರಿಕೆ: ನೀವು 101 ಕಿ.ಮೀ. ‘ಗಾಂಧಿಯಾನ’ ಮಾಡಿದಿರಿ. ಆದರೆ ಈ ವಿಷಯ ತುಂಗಭದ್ರಾ ತಟ ದಾಟಿ ಆಚೆ ಮುಟ್ಟಲೇ ಇಲ್ಲವಲ್ಲ?
ಡಿ.ಆರ್.ಪಾಟೀಲ್: ನಮ್ಮ ಕೆಲಸ ನಾವು ಮಾಡಿದ್ದೇವೆ. ನಿಮ್ಮ ಈ ಪ್ರಶ್ನೆಯನ್ನೇ ನೆಪ ಮಾಡಿಕೊಂಡು ಒಂದು ವಿಷಯ ಹೇಳ್ತೇನೆ ಕೇಳಿ: ಮೋದಿ ಪೌರ ಕಾರ್ಮಿಕರ ಕಾಲು ತೊಳೆದ ನಾಟಕೀಯ ಪ್ರಸಂಗ ಈ ದೇಶದಲ್ಲಿ ಇವತ್ತು ಟಿಆರ್‍ಪಿ ಸರಕು ಎಂಬುದೇ ಅಸಹ್ಯದ ವಿಷಯ. ಬಹುಪಾಲು ಮಾಧ್ಯಮಗಳನ್ನು ಮೋದಿ-ಶಾ ಖರೀದಿಸಿದ್ದಾರೆ ಎಂಬ ಮಾತು ನಿಜ ಅನಿಸುತ್ತ ಅಲ್ರಿ? ನಂಗಿಂತಲೂ ನಿಮ್ಗ ಆ ವಿಷಯ ಜಾಸ್ತಿ ಗೊತ್ತಿರತೈತಿ ಅಲ್ಲೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...