Homeಮುಖಪುಟಇಂದಿನ ಆಡಳಿತಕ್ಕೆ ಹೋಲಿಸಿದರೆ ತುರ್ತು ಪರಿಸ್ಥಿತಿ ಏನೇನೂ ಅಲ್ಲ: ಪಿ. ಸಾಯಿನಾಥ್

ಇಂದಿನ ಆಡಳಿತಕ್ಕೆ ಹೋಲಿಸಿದರೆ ತುರ್ತು ಪರಿಸ್ಥಿತಿ ಏನೇನೂ ಅಲ್ಲ: ಪಿ. ಸಾಯಿನಾಥ್

ಮೂರು ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಎರಡು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಏರಿಸುವ ನಿರ್ಧಾರವು ಇತಿಹಾಸದ ಶೂನ್ಯ ಜ್ಞಾನವಿರುವ ಪೆದ್ದರಿಂದ ಬಂದಿದೆ.

- Advertisement -
- Advertisement -

ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಬಗ್ಗೆ ಇರುವ ಪೋಡ್‌ಕಾಸ್ಟ್ ಆಗಿರುವ “ಜೆ-ಪೋಡ್”ನಲ್ಲಿ ಮಾತಾಡುತ್ತಾ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ, “ಎವ್ರಿಬಡಿ ಲವ್ಸ್ ಎ ಗುಡ್ ಡ್ರೌಟ್” ಎಂಬ ಪ್ರಸಿದ್ಧ ಕೃತಿಯ ಲೇಖಕ ಪತ್ರಕರ್ತ ಪಿ. ಸಾಯಿನಾಥ್ ಅವರು ಭಾರತ ಮತ್ತು ಕೋವಿಡ್ ನಂತರದ ಭಾರತೀಯ ಮಾಧ್ಯಮ ಮತ್ತು ವಲಸೆ ಕಾರ್ಮಿಕರ ಬಗ್ಗೆ ವಿವರಿಸಿದ್ದಾರೆ. ಶೂನ್ಯ ಜ್ಞಾನದ ಪೆದ್ದರು ನಮ್ಮ ಕಾರ್ಮಿಕ ಕಾನೂನುಗಳನ್ನು ಮರುರೂಪಿಸುತ್ತಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ. ಸಾರಾಂಶ ಇಲ್ಲಿದೆ.

ಅನುವಾದ: ನಿಖಿಲ್ ಕೋಲ್ಪೆ

ಅಭಿವೃದ್ಧಿಯ ಮರಣೋತ್ತರ ಪರೀಕ್ಷೆ

ಕೋವಿಡ್ ನಮಗೆ ಕಳೆದ ಮೂವತ್ತು ವರ್ಷಗಳ ನಮ್ಮ ಅಭಿವೃದ್ಧಿಯ ಸಂಪೂರ್ಣ, ಸಮಗ್ರ ಮತ್ತು ಎಗ್ಗಿಲ್ಲದ ಮರಣೋತ್ತರ ಪರೀಕ್ಷೆ ನಡೆಸುವ ಅವಕಾಶವನ್ನು ಒದಗಿಸಿಕೊಟ್ಟಿದೆ. ನೋಟು ಅಮಾನ್ಯೀಕರಣವನ್ನು ನಾವು ಕಡೆಗಣಿಸಬಹುದಾಗಿತ್ತು. ಆದರೆ ಈಗ ಬೆಂಕಿ ನಮ್ಮ ಮನೆ ಹೊಸ್ತಿಲಲ್ಲಿದೆ.

ನಾವು ನಮ್ಮ ಇತಿಹಾಸದಲ್ಲಿ ಸಂಸದೀಯ ಪ್ರಜಾಪ್ರಭುತ್ವವು ಅತ್ಯಂತ ವೇಗವಾಗಿ ಶಿಥಿಲಗೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಹೋಲಿಸಿದರೆ ತುರ್ತುಪರಿಸ್ಥಿತಿ ಏನೇನೂ ಅಲ್ಲ. ಇಲ್ಲೀಗ ಸಂಸತ್ತಾಗಲಿ, ಇ- ಸಂಸತ್ತಾಗಲಿ, ವರ್ಚುವಲ್ ಸಂಸತ್ತಾಗಲೀ, ಒಂದೂ ಇಲ್ಲ.

ನಮ್ಮಲ್ಲೀಗ ಕೆಲಸ ಮಾಡುತ್ತಿರುವ ವಿಧಾನಸಭೆಗಳಿಲ್ಲ. ಮುಖ್ಯಮಂತ್ರಿಗಳು ಈಗ ಕೇಂದ್ರ ಸರಕಾರದ ಕೃಪೆಯಲ್ಲಿದ್ದಾರೆ. ಕೇಂದ್ರವು ರಾಜ್ಯಗಳಿಗೆ ಬರಬೇಕಾದ ಜಿಎಸ್‌ಟಿ ನಿಧಿಯನ್ನು ತಡೆಹಿಡಿಯುತ್ತಿದೆ ಮತ್ತು ಖಾಸಗಿಯಾಗಿ ನೋಂದಾಯಿತವಾದ ‘ಪಿಎಂ ಕೇರ್ಸ್’ ಟ್ರಸ್ಟ್ ಮುಖಾಂತರ ರಾಜ್ಯಗಳಿಗೆ ಬರಬೇಕಾದ ಹಣವನ್ನು ಕೊಳ್ಳೆಹೊಡೆಯುತ್ತಿದೆ.

ಮೂರು ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಎರಡು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ ಎಂಟು ಗಂಟೆಗಳಿಂದ 12 ಗಂಟೆಗಳಿಗೆ ಏರಿಸುವ ನಿರ್ಧಾರವು ಇತಿಹಾಸದ ಶೂನ್ಯ ಜ್ಞಾನವಿರುವ ಪೆದ್ದರಿಂದ ಬಂದಿದೆ.

ಯುಎಸ್‌ಎಯಲ್ಲಿ ಬಂಡವಾಳಶಾಹಿ ಗುಂಪುಗಳು ದಿನಕ್ಕೆ ಎಂಟು ಗಂಟೆಗಳ ಕೆಲಸದ ಅವಧಿಯನ್ನು ಒಪ್ಪಿಕೊಂಡಿವೆ ಏಕೆಂದರೆ, ಎಂಟು ಗಂಟೆಗಳ ಬಳಿಕ ಉತ್ಪಾದಕತೆ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.

ಭಾರತವು ಸಮಾಜೋ-ಧಾರ್ಮಿಕ ಮೂಲಭೂತವಾದಿಗಳು ಮತ್ತು ಆರ್ಥಿಕ-ಮಾರುಕಟ್ಟೆ ಮೂಲಭೂತವಾದಿಗಳ ಮೈತ್ರಿಕೂಟದ ಕಪಿಮುಷ್ಟಿಯಲ್ಲಿದೆ. ಅವರು ಜೊತೆಸೇರುವ, ಹಂಚಿಕೊಳ್ಳುವ ಹಾಸಿಗೆಯೆಂದರೆ, ಕಾರ್ಪೊರೇಟ್ ಮಾಧ್ಯಮ ಅಥವಾ ಮುಖ್ಯವಾಹಿನಿಯ ಮಾಧ್ಯಮ.

ಮಾಧ್ಯಮ ಮನಸ್ಥಿತಿಯ ಬ್ರೈನ್ ಸ್ಕ್ಯಾನಿಂಗ್

ಕೋವಿಡ್ ನಮಗೆ ಭಾರತೀಯ ಸಮಾಜದ ಮರಣೋತ್ತರ ಪರೀಕ್ಷೆಯ ವರದಿಯನ್ನು ಒದಗಿಸಿದಂತೆಯೇ, ಅದು ಮೇಲ್ವರ್ಗದ ಚಿಂತನೆಯ, ಮಾಧ್ಯಮಗಳ ಚಿಂತನೆಯ ಮೆದುಳಿನ ಪರೀಕ್ಷೆಯ ವರದಿಯನ್ನೂ ಒದಗಿಸಿದೆ.

ಪ್ರಮುಖ ಪತ್ರಕರ್ತನೊಬ್ಬ ತನ್ನದೇ ಆನ್‌ಲೈನ್‌ ಟಿವಿಯಲ್ಲಿ ಎನು ಹೇಳುತ್ತಾನೆ ಎಂದರೆ, “ಒಳ್ಳೆಯ ಬಿಕ್ಕಟ್ಟನ್ನು ಯಾವಾಗಲೂ ವ್ಯರ್ಥಮಾಡಬೇಡಿ” ಎಂದು! ಇದು ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಮುನ್ನುಗ್ಗಿಸಲು ಸರಿಯಾದ ಸಮಯವೆಂದು ಆತ ಹೇಳುತ್ತಾನೆ. ಇದು ಭಾರತದ ಮೇಲ್ವರ್ಗದ ಚಿಂತನೆಯ ಬಗ್ಗೆ ಅದರ ಕ್ರೌರ್ಯದ ಬಗ್ಗೆ, ಸಮಾಜದ ದುರ್ಬಲ ವರ್ಗಗಳ ಕುರಿತು ಸಂಪೂರ್ಣ ದಯಾಹೀನತೆಯ ಬಗ್ಗೆ ಏನು ಹೇಳುತ್ತದೆ?

ಏನು ಬದಲಾಗಿದೆಯೋ, ಯಾವುದು ರಾಜಕೀಯವನ್ನು ಬದಲಾಯಿಸಿದೆಯೋ, ಯಾವುದು ಎಲ್ಲಾ ರೀತಿಯಲ್ಲಿ ಪತ್ರಿಕೋದ್ಯಮದ ಮೇಲೆ ಪರಿಣಾಮ ಬೀರಿದೆಯೋ, ಅದು ನಮ್ಮನ್ನು ಬಾಧಿಸದೇ ಇರಬಹುದು. ಆದರೆ ಅದು ಇತರನ್ನು ಬಾಧಿಸಿದೆ ಎಂಬುದು ಬಹಳ ಮುಖ್ಯ. ನ್ಯಾಯ ಎಂಬುದು ಎಲ್ಲರಿಗೂ ಸೇರಿದ್ದು, ಅದನ್ನು ನಿರಾಕರಿಸುವವರಿಗೆ ಮಾತ್ರವಲ್ಲ.

ಇಡೀ ಒಂದು ಯುವಜನರ ಪೀಳಿಗೆಯೇ ಪತ್ರಿಕೆಗಳ ಪುರವಣಿಗಳಲ್ಲಿ ಬರುವುದಕ್ಕಿಂತ ಬೇರೆ ಪತ್ರಿಕೋದ್ಯಮವೇ ಇಲ್ಲ; ನವ ಉದಾರವಾದಕ್ಕಿಂತ ಬೇರೆಯಾದ ಆರ್ಥಿಕತೆಯೇ ಇಲ್ಲ ಎಂದು ನಂಬಿಕೊಂಡು ಬೆಳೆದುಬಿಟ್ಟಿದೆ. ವಲಸೆ ಕಾರ್ಮಿಕರ ಬಿಕ್ಕಟ್ಟು ಪತ್ರಕರ್ತರ ಮೇಲೆ, ಅದರಲ್ಲೂ ಎಳೆಯ ಪತ್ರಕರ್ತರ ಮೇಲೆ ಆಳವಾದ ಪರಿಣಾಮ ಬೀರಿದೆ.

ಕೋಣೆಯೊಳಗೊಂದು ವಾನರ!

ಸರಾಸರಿಯಾಗಿ ರಾಷ್ಟ್ರೀಯ ದಿನಪತ್ರಿಕೆಗಳು 69 ಶೇಕಡಾ ಜನರು ವಾಸಿಸುವ ಗ್ರಾಮೀಣ ಪ್ರದೇಶಗಳ ಸುದ್ದಿಗೆ ತಮ್ಮ ಮುಖಪುಟದಲ್ಲಿ ಕೇವಲ 0.67 ಶೇಕಡಾ ಜಾಗವನ್ನು ಮಾತ್ರ ನೀಡುತ್ತವೆ ಎಂದು ಐದು ವರ್ಷಗಳ ಅಧ್ಯಯನ ತೋರಿಸುತ್ತದೆ. ನೀವು ಚುನಾವಣಾ ವರ್ಷವನ್ನು ಪರಿಗಣನೆಗೆ ಹೊರತುಪಡಿಸಿದರೆ ಇದು 0.18ರಿಂದ 0.24ಶೇಕಡಾದಷ್ಟಿದೆ. ಅಂದರೆ, 75 ಶೇಕಡಾ ಜನರು ಚುನಾವಣೆಯಲ್ಲದ ಕಾಲದಲ್ಲಿ ಯಾವುದೇ ಸುದ್ದಿಗಳನ್ನು ಮಾಡುವುದಿಲ್ಲ ಎಂದು ಮಾಧ್ಯಮಗಳು ನಿರ್ಧರಿಸಿದಂತಿದೆ.

ಮಾರ್ಚ್ 25ರಿಂದ 1,000ದಷ್ಟು ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಜನರಿಗೆ ಅವರ ಅತ್ಯಂತ ಜರೂರಿ ಇರುವ ಹೊತ್ತಿನಲ್ಲಿಯೇ ಸೆನ್ಸೆಕ್ಸ್‌ನ 30 ಅತ್ಯನ್ನತ ಸ್ಥಾನಗಳಲ್ಲಿ ಇರುವ ಕಂಪನಿಗಳು ಅಸೂಯೆಪಡುವಷ್ಟು ಆದಾಯವಿರುವ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಹೊರಗೆಸೆಯುತ್ತಿವೆ.

ನಿಮ್ಮಲ್ಲಿ ಇಷ್ಟು ಹಣವಿದೆ. ನಿಮ್ಮ ಕಾಲಂಗಳಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಮಿಡಿಯುತ್ತಾ ನಿಮ್ಮ ಹೃದಯವು ರಕ್ತ ಸುರಿಸುತ್ತದೆ. ಆದರೂ ನೀವು 24 ಗಂಟೆಗಳ ನೋಟಿಸ್ ನೀಡಿ ಪತ್ರಕರ್ತರು ರಾಜೀನಾಮೆ ನೀಡುವಂತೆ ಮಾಡುತ್ತೀರಿ. ಏಕೆಂದರೆ, ನೀವು ಜನರ ಕಣ್ಣಲ್ಲಿ ವಾನರರಂತೆ ಕಾಣಬಾರದಲ್ಲ!

ಕೊರೋನಕ್ಕೆ ಮಿಡಿಯುತ್ತಿರುವ ಪತ್ರಿಕೆಗಳೇ ಜನರನ್ನು ಕಸದಂತೆ ಹೊರಗೆಸೆಯುತ್ತಿವೆ. ಭಾರತದ ಅತ್ಯಂತ ದೊಡ್ಡ ಮಾಧ್ಯಮದ ಮಾಲೀಕ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ಭಾರತೀಯ. ತಮ್ಮದೇ ದೇಶದ ಬಗ್ಗೆ ಸುದ್ದಿ ಪ್ರಸಾರ ಮಾಡುವುದಕ್ಕಿಂತಲೂ ಹೆಚ್ಚಾಗಿ ನೆರೆಯ ರಾಷ್ಟ್ರದ ಬಗ್ಗೆ ಸುದ್ದಿ ಪ್ರಸಾರ ಮಾಡುವ ಟಿ.ವಿ. ಚಾನೆಲ್‌ಗಳಿರುವ ಏಕೈಕ ದೇಶ ಭಾರತ! ನಮ್ಮ ಸಾಲಿಸಿಟರ್ ಜನರಲ್ ಮಾಧ್ಯಮಗಳನ್ನು ದೂರುತ್ತಿದ್ದಾಗ, ಅವರು ಯಾವ ಮಾಧ್ಯಮಗಳನ್ನು ದೂರುತ್ತಿದ್ದಾರೆ ಎಂದು ಆಶ್ಚರ್ಯಪಟ್ಟಿದ್ದೆ! ಏಕೆಂದರೆ, 90 ಶೇಕಡಾ ಮಾಧ್ಯಮಗಳು ಅವರ ಜೊತೆಗೇ ಇವೆ!

ಪಿ. ಸಾಯಿನಾಥ್ ರವರ ಪೂರ್ಣ ಪಾಡ್‌ಕಾಸ್ಟ್‌ಕೇಳಲು ಇಲ್ಲಿ ಕ್ಲಿಕ್‌ ಮಾಡಿ.


ಇದನ್ನೂ ಓದಿ: ಶ್ರಮಿಕ್ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು: ಫ್ಯಾಕ್ಟ್‌ಚೆಕ್ ಮಾಡುವ ಪಿಐಬಿ ಸತ್ಯ ಮರೆಮಾಚಿತೆ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...