Homeಅಂತರಾಷ್ಟ್ರೀಯಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

ಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

- Advertisement -
- Advertisement -

ಜಮ್ಮುಕಾಶ್ಮೀರದಲ್ಲಿ ವಿಶೇಷಾಧಿಕಾರ ರದ್ದಾದ ನಂತರ ಮೊದಲ ಬಾರಿಗೆ ಅಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿ, ವರದಿ ನೀಡಲು ಯೂರೋಪಿಯನ್‌ ಒಕ್ಕೂಟ ಸಂಸದರು ಭೇಟಿ ನೀಡಿದ್ದರು. ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ. ಇಲ್ಲಿನ ರಾಜಕೀಯ ನಮಗೆ ಬೇಡ, ವಾಸ್ತವ ಸ್ಥಿತಿಯನ್ನು ಅರಿತು ಭಯೋತ್ಪಾದನೆ ನಿರ್ಮೂಲನೆಯಲ್ಲಿ ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಈಗ ಅಂತಹದ್ದೊಂದು ಯೂರೋಪಿಯನ್‌ ಒಕ್ಕೂಟದ ಪ್ರಾಯೋಜಕತ್ವದ ಹಿಂದೆ ಫೇಕ್‌ (ಸುಳ್ಳಿನ) ನ್ಯೂಸ್‌ ಜಾಲವೇ ಇದೆ ಎಂಬುದು ಬೆಳಕಿಗೆ ಬಂದಿದೆ.

ಹಾಗಿದ್ದರೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯೂರೋಪಿಯನ್‌ ಒಕ್ಕೂಟದ ಹಿಂದೆ ಫೇಕ್‌ ನ್ಯೂಸ್‌ ಜಾಲದ ಕೈವಾಡವಿದೆಯಾ..? ಇದೆಲ್ಲಾ ಬಿಜೆಪಿ ಪರ ಸರ್ಕಾರವನ್ನು ಬೆಂಬಲಿಸಲು, ಫೇಕ್‌ ನೆಟ್‌ವರ್ಕ್‌‌ನ್ನು ಬಳಸಿಕೊಳ್ಳಲಾಗಿತ್ತಾ..? ಎಂಬ ಪ್ರಶ್ನೆಗಳಿಗೆ ಸಿಕ್ಕಿರುವ ಉತ್ತರ ಹೌದು… ಸುಳ್ಳು ಜಾಲದ ಪ್ರಾಯೋಜಕತ್ವದಲ್ಲಿ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿತ್ತು ಅಂತಾ ಯೂರೋಪ್ ಮೂಲದ ಸರ್ಕಾರೇತರ, ಸುಳ್ಳುಸುದ್ದಿಗಳ ಮೂಲ ಪತ್ತೆ ಹಚ್ಚುವ ಡಿಸಿನ್ಫೋಲ್ಯಾಬ್‌ ಹೇಳಿರುವುದಾಗಿ ಸ್ಕ್ರೋಲ್.ಇನ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.

ಕಳೆದ ತಿಂಗಳು ಯುರೋಪಿಯನ್ ಯೂನಿಯನ್ ನಿಯೋಗ ಕಾಶ್ಮೀರ ಭೇಟಿ ನೀಡಿ, ವಸ್ತುಸ್ಥಿತಿ ಅಧ್ಯಯನ ನಡೆಸಿತ್ತು. ನಂತರ ಸುದ್ದಿಗೋಷ್ಠಿ ನಡೆಸಿ, ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿತ್ತು. ಆದರೆ ಇದೊಂದು ಪ್ರಾಯೋಜಕತ್ವದ ಭೇಟಿಯಾಗಿತ್ತು. ವಿಶ್ವಸಂಸ್ಥೆಯಾಗಲಿ ಅಥವಾ ಸ್ವತಃ ಭಾರತ ಸರ್ಕಾರವಾಗಲಿ ಇದನ್ನು ಪ್ರಾಯೋಜಿಸಿರಲಿಲ್ಲ. ಹಾಗಾದರೆ ಪ್ರಾಯೋಜಿಸಿದ್ದು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿರುವ ಡಿಸ್-ಇನ್ಫೋಲ್ಯಾಬ್ ಸಂಸ್ಥೆಯು ಅಚ್ಚರಿಯ ಸತ್ಯಗಳನ್ನು ಹೊರಗೆಡವಿದೆ. ಅಧಿಕೃತ ದಾಖಲೆಗಳ ಪ್ರಕಾರ ಇದನ್ನು ಪ್ರಾಯೋಜಿಸಿದ್ದು ನವದೆಹಲಿ ಮೂಲದ International Institute for Non-Aligned Studies ಎಂಬ ಥಿಂಕ್ ಟ್ಯಾಂಕ್ ಸಂಸ್ಥೆ. ಈ ಥಿಂಕ್ ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್ ಹೆಸರಿನ ಕಂಪನಿ. ಇದೇ ಶ್ರೀವಾಸ್ತವ್ ಕಂಪನಿಯ ಮುಖ್ಯ ಸ್ಟೇಕ್ ಹೋಲ್ಡರುಗಳು ಒಂದು ಅಂತರ್ಜಾಲ ಪತ್ರಿಕೆಯನ್ನೂ ಸಲಹುತ್ತಿದ್ದಾರೆ. ಅದರ ಹೆಸರು ಇಪಿ ಟುಡೇ. ಈ ಇಪಿ ಟುಡೆ ಅಂತರ್ಜಾಲ ಪತ್ರಿಕೆ ಸರ್ವರ್ ನ ಮೂಲ ಹಿಡಿದು ಹೊರಟ ಡಿಸ್-ಇನ್ಫೋಲ್ಯಾಬ್ ಸಂಸ್ಥೆ `65ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿರುವ ಸುಮಾರು 265ಕ್ಕೂ ಹೆಚ್ಚು ಫೇಕ್ ನ್ಯೂಸ್ ಸುದ್ದಿಗಳನ್ನು ಪ್ರಸಾರ ಮಾಡುವ ವೆಬ್ಸೈಟ್‌ಗಳ ನಂಟು ಇರುವುದು’ ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ.

ಚುನಾಯಿತ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು, ಪಾಕಿಸ್ತಾನದ ವಿರುದ್ಧ ಸಾರ್ವಜನಿಕರು ರೊಚ್ಚಿಗೇಳುವಂತೆ ಮಾಡಲು ಸ್ಥಳೀಯ ಪತ್ರಿಕೆ ಅಥವಾ ನೈಜ ಮಾಧ್ಯಮಗಳ ಹೆಸರುಗಳನ್ನು ಹೊಂದಿರುವ ನಕಲಿ ವೆಬ್ಸೈಟ್‌ಗಳನ್ನು ರನ್‌ ಮಾಡುವುದೇ ಈ ಫೇಕ್ ನ್ಯೂಸ್ ಜಾಲಗಳ ಪ್ರಧಾನ ಕಸುಬು ಎನ್ನಲಾಗಿದೆ. ಇಂಥಾ ನಕಲಿ ವೆಬ್ಸೈಟ್‌ಗಳು ನೈಜ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಯಥಾವತ್ತಾಗಿ ಪ್ರಕಟಿಸುತ್ತಿರುವುದನ್ನು ಡಿಸಿನ್ಫೋಲ್ಯಾಬ್‌ ಕಂಡು ಹಿಡಿದಿದೆ. ವಿವಿಧ ದೇಶಗಳಲ್ಲಿನ ಬಲಪಂಥೀಯ ರಾಜಕಾರಣವನ್ನು ಉದ್ದೀಪಿಸುವ ಕೆಲಸ ಮಾಡುತ್ತಲೇ ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ನೆಪದಲ್ಲಿ ನವದೆಹಲಿಯಲ್ಲಿರುವ ಅಧಿಕಾರದಲ್ಲಿರುವ ಸರ್ಕಾರಕ್ಕೆ ಜಾಗತಿಕ ಒಲವು ಸಿಗುವಂತೆ ಈ ನ್ಯೂಸ್ ವೆಬ್ಸೈಟ್ ಗಳ ಮೂಲಕ ಮಾಡಲಾಗುತ್ತಿದೆ.

ಕಳೆದ ಕೆಲ ವಾರಗಳ ಹಿಂದೆ ಇಪಿ ಟುಡೇ (EP Today) ವೆಬ್ಸೈಟ್‌ `ರಷ್ಯಾ ಟುಡೇ' ಮತ್ತು `ವಾಯ್ಸ್‌ ಆಫ್‌ ಅಮೆರಿಕ’ ಎಂಬ ಸುದ್ದಿಸಂಸ್ಥೆಗಳಲ್ಲಿ ಪ್ರಕಟಗೊಂಡಿರುವ ಲೇಖನಗಳನ್ನು ಕೃಪೆ ಕೂಡಾ ದಾಖಲಿಸದೆ ಯಥಾವತ್ತು ಪ್ರಕಟಿಸಿತ್ತು. ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಈ ಸಂಗತಿಯನ್ನು ಬಯಲು ಮಾಡಿದ ತರುವಾಯ ಇಪಿ ಟುಡೆ ಕ್ಷಮಾಪಣೆಯನ್ನೂ ಕೇಳಿತ್ತು. ಆದರೂ ಸಂಶಯ ಕಡಿಮೆಯಾಗದ ಕಾರಣ ಡಿಸ್-ಇನ್ಫೋಲ್ಯಾಬ್ ಸಂಸ್ಥೆ, ಇಪಿ ಟುಡೆ ಸುದ್ದಿಜಾಲದ ಆರ್ಕೈವ್ ಗಳನ್ನು ಶೋಧಿಸಿದಾಗ ಒಂದು ನಿರ್ದಿಷ್ಟ ದೇಶದ ವಿರುದ್ಧ ಜನಾಭಿಪ್ರಾಯ ರೂಪಿಸುವಂತ ಒಂದೇ ಬಗೆಯ ನ್ಯೂಸ್ ಗಳು ಇದ್ದವೇ ಹೊರತು ಸುದ್ದಿ ಸಂಸ್ಥೆಯೊಂದು ಕಾಯ್ದುಕೊಳ್ಳಬೇಕಾದ ವೈವಿಧ್ಯಮಯ ಶೇಖರಣೆ ಅಲ್ಲಿರಲಿಲ್ಲ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೋಷಿ ಎಂದು ಬಿಂಬಿಸುವ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕತೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ, ಭಾರತ ಮತ್ತು ಪಾಕ್‌ ನಡುವಿನ ಹಳಸಲು ಸಂಬಂಧ, ಕಾಶ್ಮೀರದಲ್ಲಿ ಪಾಕಿಸ್ತಾನ ಭಯೋತ್ಪಾದಕರಿಂದ ದಾಳಿ ಹೀಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಾಧಾರಿತ ಲೇಖನಗಳೇ ಹೆಚ್ಚು ಪಬ್ಲಿಶ್‌ ಆಗಿರುವುದು ಕಂಡು ಬಂದಿದೆ ಎಂದು ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಹೇಳಿಕೊಂಡಿದೆ.

ಇದೆಲ್ಲವನ್ನೂ ನೋಡಿದ ಮೇಲೆ, ಈ ಇಪಿ ಟುಡೇ ಹೇಗೆ ನಡೆಯುತ್ತಿದೆ..? ಇದರ ಹಿಂದಿರುವವರು ಯಾರು ಎಂದು ಕೆದಕುತ್ತಾ ಹೋದಂತೆ ಸಿಕ್ಕ ಉತ್ತರ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ. ಯಾಕಂದ್ರೆ ಇಪಿ ಟುಡೇ ಎಂಬ ದೈತ್ಯ ನಕಲಿ ವೆಬ್ಸೈಟ್‌ ಹಿಂದಿರುವವರು ಭಾರತೀಯ ಮೂಲದ ಹೂಡಿಕೆದಾರರು. ಎನ್‌ಜಿಒ, ಇಪಿ ಟುಡೇ ವೆಬ್ಸೈಟ್‌, ಇತರೆ ಕಂಪನಿಗಳ ನಕಲಿ ಜಾಲದ ಲಿಂಕ್‌ ಬಂದು ತಲುಪುವುದು ಶ್ರೀವಾಸ್ತವ್‌ ಎಂಬ ಗ್ರೂಪ್‌ನ್ನು. ಏನಿದು ಶ್ರೀವಾಸ್ತವ್‌ ಗ್ರೂಪ್‌ ಎಂದು ನೋಡಿದಾಗ, ಇದೊಂದು ನವದೆಹಲಿ ಮೂಲದ ಸಂಸ್ಥೆ ಎಂದು ಗೊತ್ತಾಯಿತು. ಶ್ರೀವಾಸ್ತವ್‌ ಗ್ರೂಪ್‌ಗೆ ಸೇರಿದ ಪ್ರಮುಖ ಆಸ್ತಿಯೆಂದರೆ ನವದೆಹಲಿ ಟೈಮ್ಸ್‌ ಮತ್ತು International Institute for Non-Aligned Studies ಥಿಂಕ್‌ಟ್ಯಾಂಕ್.

ಅಕ್ಟೋಬರ್‌ 30ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅನಧಿಕೃತ ಯೂರೋಪಿಯನ್‌ ನಿಯೋಗದ 23 ಸದಸ್ಯರ ತಂಡಕ್ಕೆ ಪ್ರಾಯೋಜಕತ್ವ ( sponsor) ನೀಡಿದ್ದೇ ಈ ಥಿಂಕ್‌ಥ್ಯಾಂಕ್‌. ನಿಯೋಗ ಭೇಟಿಯ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದು ಅಂತಾರಾಷ್ಟ್ರೀಯ ವ್ಯಾಪಾರ ದಲ್ಲಾಳಿ ಮದಿ ಶರ್ಮಾ.

ಇಪಿ ಟುಡೇ ಆನ್ಲೈನ್ ಪತ್ರಿಕೆಯ ಬೆನ್ನುಬಿದ್ದಿದ್ದ ಡಿಸ್-ಇನ್ಫೋಲ್ಯಾಬ್ ಸಂಸ್ಥೆಗೆ ಕೆಲ ದಿನಗಳಿಂದ ಇಪಿ ಟುಡೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನಗಳೇ  `ಟೈಮ್ಸ್‌ ಆಫ್‌ ಜಿನಿವಾ’ ಎಂಬ ಮತ್ತೊಂದು ಆನ್‌ಲೈನ್‌ ಪತ್ರಿಕೆಯಲ್ಲೂ ಮರು ಪ್ರಕಟವಾಗುತ್ತಿರೋದು ಗಮನಕ್ಕೆ ಬಂದಿತ್ತು. ಶೋಧಿಸಿ ನೋಡಿದಾಗ ಈ ಟೈಮ್ಸ್ ಆಫ್ ಜಿನೇವಾ ಕೂಡಾ ಇದೇ ಜಾಲದ ಭಾಗವೆಂಬುದು ಪತ್ತೆಯಾಗಿದೆ. ‘ವೆಬ್ಸೈಟಿನ ನೋಂದಣಿ ವಿಳಾಸ, ಇಮೇಲ್ ವಿಳಾಸ, ಇಂಟರ್ನೆಟ್ ಡೊಮೈನ್ ಗಳನ್ನು ಪರಿಶೀಲಿಸಿದಾಗ ಇವುಗಳ ಹಿಂದೆ ಎರಡು ಪ್ರಭಾವಿ ಜಾಲಗಳು ಇರುವುದು ತಿಳಿದು ಬಂದಿದೆ’ ಎಂದು ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

 

ಇಪಿ ಟುಡೇ ಮತ್ತು ಟೈಮ್ಸ್‌ ಆಫ್‌ ಜಿನಿವಾ ಸುದ್ದಿ ಸಂಸ್ಥೆಗಳು ಸುದ್ದಿ ಮೂಲಕ್ಕಾಗಿ ಯಾವುದನ್ನು ಅವಲಂಬಿಸಿವೆ ಎಂದು ಹುಡುಕಿ ಹೊರಟರೆ 4newsagency.com  ಎಂಬ ನ್ಯೂಸ್ ಏಜೆನ್ಸಿ ಬೆಳಕಿಗೆ ಬರುತ್ತದೆ. ತಾನೇ ಹೇಳಿಕೊಂಡಿರುವಂತೆ ಇದೊಂದು independent not-for-profit news cooperative ಸಂಸ್ಥೆ. ಇದರ ಪ್ರಧಾನ ಕಚೇರಿ ಸ್ವಿಡ್ಜ್‌ರ್ಲ್ಯಾಂಡ್‌ನಲ್ಲಿದೆ. ಈ ಸುದ್ದಿ ಸಂಸ್ಥೆ ಪ್ರಕಟಿಸಿರುವ ಎಲ್ಲಾ ಟ್ವೀಟ್‌, ಯೂ ಟ್ಯೂಬ್‌ ವಿಡಿಯೋಗಳು, ಸುದ್ದಿಗಳು, ಪ್ರಮುಖ ವಿಷಯಗಳು ಕೇವಲ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ ಮತ್ತು ಪಾಕ್‌ ವಿರೋಧಿ ಚಟುವಟಿಕೆಗಳಿಗೇ ಸಂಬಂಧಿಸಿದ್ದಾಗಿವೆ!

ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖೆಯಿಂದ ಈ ತೀರ್ಮಾನಕ್ಕೆ ಬರಬಹುದು. ವಿಶ್ವಸಂಸ್ಥೆಯಾಗಲಿ, ಯುರೋಪ್ ಒಕ್ಕೂಟದ ಸಂಸತ್ತಾಗಲಿ ಅಥವಾ ಭಾರತ ಸರ್ಕಾರವಾಗಲಿ ಅಧಿಕೃತವಾಗಿ ಪ್ರಾಯೋಜಿಸದ; ಕೇವಲ `ಬಲಪಂಥೀಯ’ ವಿಚಾರಧಾರೆಯ ಚುನಾಯಿತ ಪ್ರತಿನಿಧಿಗಳನ್ನಷ್ಟೇ ಒಳಗೊಂಡಿದ್ದ ನಿಯೋಗವೊಂದರ ಭೇಟಿಯನ್ನು ಆಯೋಜಿಸಿದ್ದು International Institute for Non-Aligned Studies ಎಂಬ ಥಿಂಕ್‌ಟ್ಯಾಂಕ್. ಈ ಥಿಂಕ್‌ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್‌ ಗ್ರೂಪ್‌. ಇದೇ ಗ್ರೂಪಿನ ಪ್ರಧಾನ ಸ್ಟೇಕ್ ಹೋಲ್ಡರುಗಳು `ಇಪಿ ಟುಡೇ’ ಎಂಬ ಅಂತರ್ಜಾಲ ಪತ್ರಿಕೆಗೂ ಫಂಡ್ ಮಾಡುತ್ತಿದೆ. ಈ ಪತ್ರಿಕೆ ಒಂದು ನಿರ್ದಿಷ್ಟ ಐಡಿಯಾಲಜಿಕಲ್ ಅಜೆಂಡಾ ಇಟ್ಟುಕೊಂಡ ಸುದ್ದಿಗಳನ್ನಷ್ಟೇ ಪ್ರಕಟಿಸುತ್ತಿದೆ. ಇದೇ ಇಪಿ ಟುಡೇ ಪತ್ರಿಕೆಯ ಸರ್ವರ್ ನಲ್ಲೇ ಸುಮಾರು 265 ವೆಬ್ಸೈಟ್ಗಳು 65 ದೇಶಗಳಲ್ಲಿ ವ್ಯಾಪಿಸಿವೆ. ಹೆಚ್ಚೂ ಕಮ್ಮಿ ಇವೆಲ್ಲವೂ ಒಂದೇ ತೆರನಾದ ಸುದ್ದಿಯನ್ನು ಬಿತ್ತರಿಸುತ್ತಿವೆ, ಮತ್ತು ಅವೇ ಲೇಖನಗಳು ಮರು ಪ್ರಕಟವಾಗುತ್ತಿವೆ. ಅವುಗಳಲ್ಲಿ ಫೇಕ್ ನ್ಯೂಸ್ ಗಳೂ ಇರುತ್ತವೆ. ಜಾಗತಿಕ ಮಟ್ಟದಲ್ಲಿ ಹರಿದಾಡುವ ಇಂಥಾ ನ್ಯೂಸ್ ಗಳಿಂದ ಭಾರತದ ಪ್ರಧಾನಿ ಮೋದಿಯವರಿಗೆ ವಿದೇಶಿ ನೆಲದಲ್ಲಿ ಪ್ರಚಾರ ಸಿಗುತ್ತಾ ಬಂದಿದೆ. ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯುರೋಪಿಯನ್ ಒಕ್ಕೂಟದ ನಿಯೋಗದಿಂದಲೂ ಅನುಕೂಲ ಆದದ್ದು ಮೋದಿಯವರಿಗೆ. ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ರದ್ದು ಪಡಿಸುವಾಗ ಅಲ್ಲಿನ ಜನರಿಗೆ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಗಳು ಕೂಡಾ ಲಭಿಸದಂತೆ ನಿರ್ಬಂಧ ಹೇರಿ, ಅಲ್ಲಿನ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದ್ದ ಮೋದಿ ಸರ್ಕಾರದ ವಿರುದ್ಧ ಜಾಗತಿಕ ವೇದಿಕೆಗಳಲ್ಲಿ ಮಾನವಹಕ್ಕು ಉಲ್ಲಂಘನೆಯ ಮಾತುಗಳು ಕೇಳಿಬಂದಿದ್ದವು. ಆ ಆರೋಪದಿಂದ ಮೋದಿಯವರನ್ನು ವಿಮುಕ್ತಿಗೊಳಿಸಲೆಂದೇ ಈ ಪ್ರಚಾರ ಜಾಲಗಳು ಈ ವ್ಯವಸ್ಥಿತ ಭೇಟಿಯನ್ನು ಆಯೋಜಿಸಿದ್ದವೇ ಎಂಬ ಅನುಮಾನ  ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖಾ ವರದಿಯಿಂದ ದಟ್ಟವಾಗುತ್ತಿದೆ.

ಕೃಪೆ: ಸ್ಕ್ರಾಲ್‌.ಇನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...