Homeನಿಜವೋ ಸುಳ್ಳೋವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

- Advertisement -
- Advertisement -

ದಿ ಕ್ವಿಂಟ್ ಪೋರ್ಟಲ್‍ನವರು ಮೊದಲ ನಾಲ್ಕು ಹಂತಗಳಲ್ಲಿ ನಡೆದ ಮತದಾನ ಪ್ರಮಾಣ ಮತ್ತು ಏಣಿಕೆಯಾದ ಮತಗಳ ಸಂಖ್ಯೆಯನ್ನು ಕೂಲಂಕುಶವಾಗಿ ಪರಿಗಣಿಸಿದಾಗ ದಿಗ್ಭ್ರಮೆಗೊಳಿಸುವ ವಿಚಾರ ಹೊರಬಂದಿದೆ. 373 ಕ್ಷೇತ್ರಗಳಲ್ಲಿ ವೋಟ್ ಆದ ಮತಗಳಿಗೂ, ಎಣಿಕೆ ಆದ ಮತಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೆ ಇಲ್ಲಿವರೆಗೆ ಈ ಕುರಿತು ಸ್ಪಷ್ಟನೆ ನೀಡದ ಚುನಾವಣಾ ಆಯೋಗ, ತನ್ನ ವೆಬ್‍ಸೈಟಿನಿಂದ ಮಾಹಿತಿ-ಅಂಕಿಅಂಶಗಳನ್ನೇ ತೆಗೆದು ಹಾಕುವ ದುಸ್ಸಾಹಸ ಮಾಡುವ ಮೂಲಕ ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ…..

ಚುನಾವಣಾ ಅಯೋಗವೇ ಅಧಿಕೃತವಾಗಿ ಸಾರ್ವಜನಿಕರಿಗೆಂದೇ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದ ಎರಡು ಸೆಟ್ ಅಂಕಿ-ಸಂಖ್ಯೆಗಳನ್ನು ತೆಗೆದುಕೊಂಡು ಈ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿದೆ. ಮೊದಲ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳಲ್ಲಿ ಜನರು ವೋಟ್ ಮಾಡಿದ್ದ ಮತಗಳು ಮತ್ತು ಮೇ 23ರಂದು ಕೌಂಟ್ ಆದ ಮತಗಳಲ್ಲಿ ಸಾಕಷ್ಟು ವ್ಯತ್ಯಾಸ ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದೆ.

ತಮಿಳುನಾಡಿನ ಕಂಚೀಪುರಂ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 12,14,036 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,32,417 ಮತಗಳು! ಈ ಹೆಚ್ಚುವರಿ 18,331 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಧರ್ಮಪುರಿ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 11,94, 440 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,12,311 ಮತಗಳು! ಈ ಹೆಚ್ಚುವರಿ 17,871 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಪೆರಂಬದೂರು ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 13,88,666 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 14,03,178 ಮತಗಳು! ಈ ಹೆಚ್ಚುವರಿ 14,512 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಇವು ಮೊದಲ ಹಂತದಲ್ಲಿ ನಡೆದ 373 ಕೇತ್ರಗಳಲ್ಲಿ ಅತಿ ಹೆಚ್ಚು ಪ್ರಮಾಣದ ವ್ಯತ್ಯಾಸ ತೋರಿಸಿದ 4 ಕ್ಷೇತ್ರಗಳು. ಹೀಗೇ ಇನ್ನು 220 ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ‘ಉದ್ಭವಿಸಿದರೆ’, ಉಳಿದ ಕ್ಷೇತ್ರಗಳಲ್ಲಿ ಅವು ವೋಟ್ ಆಗಿದ್ದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿವೆ!

ಆಯೋಗದ ವೆಬ್‍ಸೈಟಿನಿಂದ ‘ಡೇಟಾ’ ಮಾಯ!

ಚುನಾವಣಾ ಆಯೋಗವು ಮೊದಲ ನಾಲ್ಕು ಹಂತಗಳ ಡೇಟಾವನ್ನು ಪ್ರಕಟಿಸಿ, ಇವು ಪರಿಪೂರ್ಣ ಅಂಕಿಅಂಶಗಳು ಎಂದು ಸಾರಿತ್ತು. ಹಾಗಾಗಿ ಕ್ವಿಂಟ್ ಪೋರ್ಟಲ್ ಈ ಡೇಟಾದ ಆಧಾರದಲ್ಲೇ ಪರೀಕ್ಷೆ ನಡೆಸಿತು. ಯಾವಾಗ ದೊಡ್ಡ ವ್ಯತ್ಯಾಸಗಳು ಕಂಡವೋ, ಕ್ವಿಂಟ್ ಈ ಕುರಿತಾಗಿ ಆಯೋಗವನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸದ ಆಯೋಗವು, ತನ್ನ ವೆಬ್‍ಸೈಟಿನಿಂದ ಈ ಎಲ್ಲ ಅಂಕಿಅಂಶಗಳನ್ನು ತೆಗೆದು ಹಾಕುವ ಮೂಲಕ ಜನರ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕ್ವಿಂಟ್ ತಾನು ಆಯೋಗದ ವೆಬ್‍ಸೈಟಿನಿಂದ ಡೌನ್‍ಲೋಡ್ ಮಾಡಿದ ಅಂಕಿಅಂಶಗಳು ಮತ್ತು ಪತ್ತೆ ಮಾಡಿದ ವ್ಯತ್ಯಾಸಗಳ ಕಾಪಿಗಳನ್ನು ಮೇಲ್ ಮೂಲಕ ಇನ್ನೊಮ್ಮೆ ಆಯೋಗಕ್ಕೆ ಕಳಿಸಿತು. ಈವರೆಗೂ ಆಯೋಗದಿಂದ ಉತ್ತರವೇ ಇಲ್ಲ!

ಮೇ 23ರ ಚುನಾವಣೆ ಮುಗಿದು 6-7 ದಿನಗಳಾದರೂ (ಮೇ 27ರಂದು) ಉಳಿದೆಲ್ಲ ಕ್ಷೇತ್ರಗಳ ವೋಟ್ ಆದ ಡೇಟಾವನ್ನು ಕಂಪೈಲ್ ಮಾಡಲಾಗಿಲ್ಲ ಎಂಬ ಸಬೂಬನ್ನೂ ಆಯೋಗ ನೀಡಿದೆ. ಯಾಕೆ ಸಂಪೂರ್ಣ ಮತ ಎಣಿಕೆ ಮುಗಿದ ಏಳು ದಿನವಾದರೂ ಡೇಟಾವನ್ನು ಕಂಪೈಲ್ ಮಾಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಈ ಕುರಿತಂತೆ ಕ್ವಿಂಟ್ ಜೊತೆ ಮಾತಾಡಿರುವ ಮಾಜಿ ಚುನಾವಣಾ ಆಯುಕ್ತ ರಾವತ್ ಅವರು. ‘ಇದೊಂದು ಗಂಭೀರ ವಿಷಯ. ನಾನು ಆಯುಕ್ತನಾಗಿದ್ದಾಗ ಇಂಥದ್ದು ಎಂದೂ ಸಂಭವಿಸರಲೇ ಇಲ್ಲ. ಆಯೋಗ ಇದಕ್ಕೆ ಸ್ಪಷ್ಟನೆ ನೀಡಲೇಬೇಕು’ ಎಂದು ಒತ್ತಾಯಿಸಿದ್ದಾರೆ. ಇತರ ಮಾಜಿ ಆಯುಕ್ತರಾದ ಗೋಪಾಲಸ್ವಾಮಿ, ಖುರೇಶಿ ಮತ್ತು ಬ್ರಹ್ಮಾ ಅವರು ಕೂಡ ಆಯೋಗ ಇದಕ್ಕೆಲ್ಲ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಚಲಾವಣೆಯಾದ ಮತಗಳಿಗಿಂತ ಕೌಂಟ್ ಆದ ಮತಗಳೆ ಹೆಚ್ಚು 

ಇಲ್ಲಿ ಆಯೋಗ ಈ ನಾಲ್ಕು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವ ಹೊಣೆ ಹೊರಬೇಕು:

ಮೊದಲ 4 ಹಂತದ ಮತದಾನದಲ್ಲಿ ಮತದಾನವಾದ ಅಂತಿಮ ಅಂಕಿಅಂಶಗಳು ಎಂದು ಆಯೋಗ ತನ್ನ ವೆಬ್‍ಸೈಟಿನಲ್ಲಿ ಅಪ್‍ಲೋಡ್ ಮಾಡಿದ್ದು ಏಕೆ?
ದಿಡೀರ್ ಎಂದು ಈ ಡೇಟಾವನ್ನು ವೆಬ್‍ಸೈಟಿನಿಂದ ತೆಗೆದದ್ದು ಏಕೆ?
ಈ ಗಂಭಿರ ವ್ಯತ್ಯಾಸಗಳ ಕುರಿತು ಆಯೋಗ ಏಕೆ ಉತ್ತರಿಸುತ್ತಿಲ್ಲ? ಅದಕ್ಕೆ ಇದರಲ್ಲಿ ಮುಚ್ಚಿಡುವಂತಾದ್ದು ಏನಾದರೂ ಇದೆಯೇ?
ಈ ದೊಡ್ಡ ವ್ಯತ್ಯಾಸಗಳು ಕಂಡುಬರಲು ಕಾರಣವೇನು? ಇವಿಎಂಗಳು ದೋಷಪೂರಿತವಾಗಿವೆಯೇ?

(ಆಧಾರ: ದಿ ಕ್ವಿಂಟ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...