Homeಕರ್ನಾಟಕಆಪರೇಷನ್ ಕಮಲಕ್ಕೆ ಬ್ರೇಕ್: ಯಡಿಯೂರಪ್ಪನವರ ಈ ಮಾತಿನ ಹಿಂದಿರುವ ಮರ್ಮವೇನು?

ಆಪರೇಷನ್ ಕಮಲಕ್ಕೆ ಬ್ರೇಕ್: ಯಡಿಯೂರಪ್ಪನವರ ಈ ಮಾತಿನ ಹಿಂದಿರುವ ಮರ್ಮವೇನು?

ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಬೀಳಿಸಿದ ಅಪಖ್ಯಾತಿ ಬಿಜೆಪಿ ಮೇಲೆ ಬಾರದಂತೆ, ಅದನ್ನು ಸಿದ್ದರಾಮಯ್ಯ ಮೇಲೆ ಆರೋಪಿಸಿ, ಒಳಗೊಳಗೇ ಆಪರೇಷನ್ ನಡೆಸುವ ತಂತ್ರಗಾರಿಕೆ ಭಾಗವಾಗಿ ಯಡಿಯೂರಪ್ಪನವರಿಂದ ಇಂಥಾ ಹೇಳಿಕೆ ಹೇಳಿಸಲಾಗಿದೆ ಎನ್ನಲಾಗುತ್ತಿದೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ದೆಹಲಿಯಿಂದ ಮರಳಿದ ಯಡಿಯೂರಪ್ಪ ತುಂಬಾ ನಿರಾಶೆಯಲ್ಲಿದ್ದಾರೆ. ಪ್ರಚಂಡ ಜಯದಿಂದ ಯಾರ ಮಾತನ್ನೂ ಕೇಳಿಸಿಕೊಳ್ಳದ ಸ್ಥಿತಿಯಲ್ಲಿರುವ `ಮೋದಿ-ಶಾ’ ಹೈಕಮಾಂಡ್ ಸದ್ಯಕ್ಕೆ ಯಾವ ಆಪರೇಷನ್ನೂ ಮಾಡಬೇಡಿ, ಸುಮ್ಮನೇ ವಿರೋಧ ಪಕ್ಷದಲ್ಲಿ ಕೂಡಿ ಎಂದು ಖಡಕ್ ಆದೇಶವನ್ನು ಯಡಿಯೂರಪ್ಪರಿಗೆ ನೀಡಿ ಕಳಿಸಿದೆ. ಇನ್ನೊಂದು ಕಡೆ ಯಡಿಯೂರಪ್ಪ ಸೂಚಿಸಿದ ಬೆಜೆಪಿ ಸಂಸದರಿಗೆ ಒಂದೂ ಸಚಿವ ಸ್ಥಾನ ನೀಡದೇ ಯಡಿಯೂರಪ್ಪರನ್ನು ಹೈಕಮಾಂಡ್ ಮೂಲೆಗೆ ತಳ್ಳಿದೆ. ಬಿಜೆಪಿಯಲ್ಲಿ ಯುಡಿಯೂರಪ್ಪ ಕತೆ ಮುಗಿದೇ ಹೋಯ್ತಾ?

ಮೋದಿಯವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಬಂದಿಳಿದ ಯಡಿಯೂರಪ್ಪನವರ ಮುಖದಲ್ಲಿ ಈ ಮೊದಲಿದ್ದ ಯಾವ ಲವಲವಿಕೆಯೂ ಉಳಿದಿಲ್ಲ. ಮೇ 23ಕ್ಕೆ ರಾಜ್ಯ ಮೈತ್ರಿ ಸರ್ಕಾರ ಮುರಿದುಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ತುಂಬು ಹುಮ್ಮಸ್ಸಿನಲ್ಲಿ ಮಾತಾಡುತ್ತಿದ್ದ ಯಡಿಯೂರಪ್ಪನವರು ದಿಲ್ಲಿಯಿಂದ ಬರುತ್ತಿದ್ದಂತೆಯೇ “ಸದ್ಯಕ್ಕೆ ಸರ್ಕಾರದ ಪತನಕ್ಕೆ ಕೈಯಾಕಬೇಡಿ ಎಂದು ವರಿಷ್ಠರು ಸೂಚಿಸಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡದೇ ವಿರೋಧ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ” ಎಂಬ ಅಚ್ಚರಿ ಹೇಳಿಕೆ ನೀಡಿ ಅವರ ಹಿಂಬಾಲಕರೇ ತಬ್ಬಿಬ್ಬಾಗುವಂತೆ ಮಾಡಿದ್ದಾರೆ.

ಇದಕ್ಕೆ ಅವರು ಕೊಡುತ್ತಿರುವ ಕಾರಣ, “ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಸಿದ್ದರಾಮಯ್ಯ ತಮ್ಮ ಪಕ್ಷದ ನಾಲ್ಕು ಶಾಸಕರನ್ನು ಅತೃಪ್ತರಂತೆ ಮುಂದೆ ಬಿಟ್ಟು ಬಿಜೆಪಿಗೆ ಕಳುಹಿಸುವ ಹುನ್ನಾರ ನಡೆಸಿದ್ದಾರೆ. ಆದ್ದರಿಂದ ನೀವು ಸರ್ಕಾರ ಪತನದ ಯತ್ನಕ್ಕೆ ಕೈಹಾಕಬೇಡಿ ಎಂಬ ಸಲಹೆ ನೀಡಿದ್ದಾರೆ” ಎನ್ನುತ್ತಿದ್ದಾರೆ.

ಆದರೆ ದಿಲ್ಲಿಯ ಬಲ್ಲ ಮೂಲಗಳು ಹೇಳುವಂತೆ ಯಡಿಯೂರಪ್ಪನವರು ಪ್ರಮಾಣವಚನ ಕಾರ್ಯಕ್ರಮದ ನೆಪದಲ್ಲಿ ದಿಲ್ಲಿಗೆ ಬಂದಿದ್ದೇ ಎರಡು ಅಜೆಂಡಾ ಇಟ್ಟುಕೊಂಡು. ಮೊದಲನೆಯದ್ದು, ತಮ್ಮ ಬೆಂಬಲಿಗ ಸಂಸದರಿಗೆ ಮೋದಿ ಸಂಪುಟದಲ್ಲಿ ಮಂತ್ರಿ ಮಾಡಿಸುವುದು. ಎರಡನೆಯದ್ದು, ಆಪರೇಷನ್ ಕಮಲಕ್ಕೆ ಅಧಿಕೃತ ಸಮ್ಮತಿ ಪಡೆದುಕೊಂಡು ಬರುವುದು. ಆದರೆ ಇವೆರಡೂ ಈಡೇರಿಲ್ಲ ಮಾತ್ರವಲ್ಲ, ಇನ್ನುಮುಂದೆ ಬಿಜೆಪಿಯಲ್ಲಿ ನಿಮ್ಮ ಪ್ರಾಧಾನ್ಯತೆ ಸಾಕು ಎಂಬ ಸ್ಪಷ್ಟ ಸುಳಿವನ್ನೂ ಅಮಿತ್ ಶಾ ನೀಡಿ ಕಳಿಸಿದ್ದಾರೆ ಎನ್ನುತ್ತವೆ ದಿಲ್ಲಿ ಮೂಲಗಳು.

ಯಡಿಯೂರಪ್ಪನವರು, ತಮ್ಮ ಆಪ್ತರಾದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಗದ್ದಿಗೌಡರ್, ಹಾವೇರಿ ಶಿವಕುಮಾರ್ ಉದಾಸಿ, ಕೊಪ್ಪಳದ ಕರಡಿ ಸಂಗಣ್ಣ ಮತ್ತು ತುಮಕೂರಿನ ಬಸವರಾಜು- ಇವರಲ್ಲಿ ಒಬ್ಬಿಬ್ಬರಿಗೆ ಸಚಿವ ಸ್ಥಾನ ಅಪೇಕ್ಷಿಸಿದ್ದರು! ಇದಕ್ಕೆ ತಣ್ಣೀರು ಎರಚಿದ ಹೈಕಮಾಂಡ್ ಯಡಿಯೂರಪ್ಪ ಬಣದಿಂದ ಹೊರಗಡೆ ಗುರುತಿಸಿಕೊಂಡಿರುವ ಪ್ರಹ್ಲಾದ್ ಜೋಷಿ, ಸದಾನಂದಗೌಡ, ಸುರೇಶ್ ಅಂಗಡಿಗೆ ಮಾತ್ರ ಸಚಿವಗಿರಿ ದಯಪಾಲಿಸಿದೆ. ರಾಜ್ಯದಿಂದ ಈ ಹೆಸರುಗಳನ್ನು ಆರೆಸ್ಸೆಸ್ ಪರವಾಗಿ ಶಿಫಾರಸ್ಸು ಮಾಡಿದ್ದೇ ಸಂತೋಷ್‍ಜೀ ಎಂಬ ಸತ್ಯ ಯಡಿಯೂರಪ್ಪನವರನ್ನು ಮತ್ತಷ್ಟು ದಿಗ್ಭ್ರಮೆ ಗೊಳಿಸಿರಲಿಕ್ಕೂ ಸಾಕು.

ಎಂಪಿ ಎಲೆಕ್ಷನ್ನಿಗೆ ಟಿಕೇಟ್ ಹಂಚಿಕೆಯಲ್ಲೂ ಯಡಿಯೂರಪ್ಪನವರ ಶಿಫಾರಸ್ಸಿಗೆ ಹೈಕಮಾಂಡ್ ಮಣೆ ಹಾಕರಲಿಲ್ಲ ಎನ್ನುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಅಲ್ಲೂ ತೇಜಸ್ವಿ ಸೂರ್ಯನಂತ ಸಂತೋಷ್‍ಜಿ ಶಿಷ್ಯರಿಗೇ ಮಣೆ ಹಾಕಲಾಗಿತ್ತು. ಶೋಭಾ ಕರಂದ್ಲಾಜೆ ಮತ್ತು ಕರಡಿ ಸಂಗಣ್ಣರಿಗೆ ಟಿಕೇಟು ತರಲು ಯಡಿಯೂರಪ್ಪ ಹರಸಾಹಸ ಪಡಬೇಕಾಗಿ ಬಂದಿತ್ತು. ಅಲ್ಲದೇ ಚಿಕ್ಕೋಡಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಶಾಸಕ ಉಮೇಶ ಕತ್ತಿಯ ಸಹೋದರ ರಮೇಶ ಕತ್ತಿಗೂ ಟಿಕೆಟ್ ತರುವಲ್ಲಿ ಯಡಿಯೂರಪ್ಪ ಮುಗ್ಗರಿಸಿದ್ದರು.

ಕುಂದಗೋಳ ಉಪ ಚುನಾವಣೆಯಲ್ಲೂ ಯಡಿಯೂರಪ್ಪ ಬೀಗ ಚಿಕ್ಕನಗೌಡರಿಗೆ ಟಿಕೆಟ್ ತಪ್ಪಿಸುವ ಯತ್ನ ಮಾಡಲಾಗಿತ್ತು. ಕೊನೆಗೂ ಯಡಿಯೂರಪ್ಪ ಟಿಕೆಟ್ ತಂದರಾದರೂ ಹುಬ್ಬಳ್ಳಿ-ಧಾರವಾಡದ ಬಿಜೆಪಿ ನಾಯಕರು ಚಿಕ್ಕನಗೌಡರ ಪರ ಮನಪೂರ್ವಕ ಪ್ರಚಾರ ಮಾಡದೇ ಯಡಿಯೂರಪ್ಪ ಬೀಗನಿಗೆ ಸೋಲು ತಂದಿಟ್ಟರು. ಚಿಂಚೋಳಿಯಲ್ಲಿ ತಮ್ಮ ಶಿಷ್ಯ, ತಮ್ಮ ಸಂಪುಟದಲ್ಲಿ ಸಚಿವ ಸ್ಥಾನವನ್ನೂ ನೀಡಿದ್ದ ಸುನೀಲ್ ವಲ್ಯಾಪುರೆಗೆ ಟಿಕೆಟ್ ಕೊಡಿಸುವ ಯಡಿಯೂರಪ್ಪರ ಯತ್ನಕ್ಕೆ ಹಿನ್ನಡೆ ಮಾಡಿದ ಸಂತೋಷ್‍ಜಿ ಬಣ ಅಲ್ಲಿ ವಲಸಿಗ ಉಮೇಶ ಜಾಧವರ ಮಗ ಅವಿನಾಶ ಜಾಧವ್‍ಗೆ ಟಿಕೆಟು ನೀಡಿತ್ತು.

ಗಾಯದ ಮೇಲೆ ಬರೆ ಎಂಬಂತೆ, ಈಗ ಆಪರೇಷನ್ ಕಮಲ ಮಾಡಬೇಡಿ, ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ, ತೆಪ್ಪಗೆ ವಿರೋಧ ಪಕ್ಷವಾಗಿ ಕೆಲಸ ಮಾಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿಕೊಳ್ಳುತ್ತಿದ್ದಾರೆ. ಅಂದರೆ ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಕನಸಿಗೆ ಹೈಕಮಾಂಡ್ ಅಂತಿಮ ಮೊಳೆ ಹೊಡೆಯಿತೇ? ಎಂಬ ಅನುಮಾನ ಮೂಡದಿರದು.

ಲಿಂಗಾಯತ ಪ್ರಾಬಲ್ಯವಿರುವ ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಹಳೇ ಮೈಸೂರು ಪ್ರಾಂತ್ಯದಲ್ಲೂ ಕಾಂಗ್ರೆಸ್-ಜೆಡಿಎಸ್ ಹಿಂದಿಕ್ಕಿ ಅದ್ಭುತ ಯಶಸ್ಸು ಗಳಿಸಿರುವುದರಿಂದ ಇನ್ಮುಂದೆ ಕರ್ನಾಟಕದ ರಾಜಕಾರಣಕ್ಕೆ ಯಡಿಯೂರಪ್ಪ ತಮಗೆ ತೀರಾ ಅನಿವಾರ್ಯ ಆಗಲಾರರು ಎಂಬ ತರ್ಕಕ್ಕೆ ಬಿಜೆಪಿ ಹೈಕಮಾಂಡನ್ನು ಸಂತೋಷ್‍ಜಿ ಪಡೆ ತಂದು ನಿಲ್ಲಿಸಿದೆ ಎನ್ನುವುದು ಲೇಟೆಸ್ಟ್ ವರ್ತಮಾನ.

ಈ ಕ್ಷಣದಲ್ಲೇ ಆಪರೇಷನ್ ಕಮಲ ನಡೆಸಿ ಸರ್ಕಾರ ರಚಿಸಲು ಮುಂದಾದರೆ ಅನಿವಾರ್ಯವಾಗಿ ಯಡಿಯೂರಪ್ಪನವರನ್ನೇ ಸಿಎಂ ಮಾಡಬೇಕಾಗುತ್ತೆ. ಅದರ ಬದಲು ಅದನ್ನು ಕೊಂಚ ಮುಂದೂಡಿದರೆ, ಈಗ ಶುರುವಾಗಿರುವ ಮೋದಿ ಪರ್ವವನ್ನು ಕರ್ನಾಟಕದಲ್ಲಿ ಇನ್ನಷ್ಟೂ ಬಿಗಿಗೊಳಿಸುತ್ತಲೇ ಯಡಿಯೂರಪ್ಪನವರನ್ನು ರಾಜಕಾರಣದಲ್ಲಿ ಸಂಪೂರ್ಣ ಅಪ್ರಸ್ತುತಗೊಳಿಸಿದ ನಂತರ ತಮಗಿಷ್ಟ ಬಂದ ವ್ಯಕ್ತಿಯನ್ನು, (ಸಂತೋಷ್‍ರನ್ನು) ಸಿಎಂ ಮಾಡಬಹುದೆನ್ನುವ ಲೆಕ್ಕಾಚಾರವನ್ನು ಬಿಜೆಪಿ ಹೆಣೆದು ಕೂತಿದೆ ಎನ್ನಲಾಗುತ್ತಿದೆ. ಅಷ್ಟರೊಳಗೆ ಮೈತ್ರಿ ನಾಯಕರ ನಡುವಿನ ಕಿತ್ತಾಟ ತಾರಕಕ್ಕೇರಿ ಸರ್ಕಾರ ಬಿದ್ದರೆ, ಬಿಜೆಪಿಗೆ ಅಪಖ್ಯಾತಿಯೂ ತಟ್ಟುವುದಿಲ್ಲ ಎಂಬ ತರ್ಕ ಇಲ್ಲಿ ಕೆಲಸ ಮಾಡಿರುವ ಸಾಧ್ಯತೆಯೇ ಹೆಚ್ಚು.

ಮತ್ತೊಂದು ತರ್ಕದ ಪ್ರಕಾರ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಬೀಳಿಸಿದ ಅಪಖ್ಯಾತಿ ಬಿಜೆಪಿ ಮೇಲೆ ಬಾರದಂತೆ, ಅದನ್ನು ಸಿದ್ದರಾಮಯ್ಯ ಮೇಲೆ ಆರೋಪಿಸಿ, ಒಳಗೊಳಗೇ ಆಪರೇಷನ್ ನಡೆಸುವ ತಂತ್ರಗಾರಿಕೆ ಭಾಗವಾಗಿ ಯಡಿಯೂರಪ್ಪನವರಿಂದ ಇಂಥಾ ಹೇಳಿಕೆ ಹೇಳಿಸಲಾಗಿದೆ ಎನ್ನಲಾಗುತ್ತಿದೆ. ಅದೇನೆ ಇರಲಿ, ದಿಲ್ಲಿಯಿಂದ ವಾಪಾಸು ಬಂದ ಯಡಿಯೂರಪ್ಪನವರ ಮುಖದಲ್ಲಿ ಮೊದಲಿದ್ದ ಹುಮ್ಮಸ್ಸು ನಾಪತ್ತೆಯಾಗಿರುವುದು ಮಾತ್ರ ಸತ್ಯ.

ಲೋಕಸಭಾ ಚುನಾವಣೆ ನಡೆದು ತಿಂಗಳೊಪ್ಪತ್ತಿನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ 509 ಸ್ಥಾನ ಗೆದ್ದು ಚೇತರಿಸಿಕೊಂಡಿದ್ದರೆ, 25 ಸಂಸದರನ್ನು ಗೆದ್ದುಕೊಂಡ ಖುಷಿಯಲ್ಲಿದ್ದ ಬಿಜೆಪಿ ಕೇವಲ 366 ಲೋಕಲ್ ಬಾಡಿ ಸ್ಥಾನಗಳಿಗಷ್ಟೇ ಸೀಮಿತಗೊಂಡು ಆಘಾತಕ್ಕೆ ತುತ್ತಾಗಿರೋದು ಕೂಡಾ ಯಡಿಯೂರಪ್ಪನವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಲಕ್ಷಣವಲ್ಲ ಎನ್ನಲಾಗುತ್ತಿದೆ.

ಇದನ್ನು ಓದಿ: ಲಿಂಗಾಯಿತರಿಗೆ ಬಿಜೆಪಿ ಕೊಟ್ಟಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...