Homeನಿಜವೋ ಸುಳ್ಳೋವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

- Advertisement -
- Advertisement -

ದಿ ಕ್ವಿಂಟ್ ಪೋರ್ಟಲ್‍ನವರು ಮೊದಲ ನಾಲ್ಕು ಹಂತಗಳಲ್ಲಿ ನಡೆದ ಮತದಾನ ಪ್ರಮಾಣ ಮತ್ತು ಏಣಿಕೆಯಾದ ಮತಗಳ ಸಂಖ್ಯೆಯನ್ನು ಕೂಲಂಕುಶವಾಗಿ ಪರಿಗಣಿಸಿದಾಗ ದಿಗ್ಭ್ರಮೆಗೊಳಿಸುವ ವಿಚಾರ ಹೊರಬಂದಿದೆ. 373 ಕ್ಷೇತ್ರಗಳಲ್ಲಿ ವೋಟ್ ಆದ ಮತಗಳಿಗೂ, ಎಣಿಕೆ ಆದ ಮತಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೆ ಇಲ್ಲಿವರೆಗೆ ಈ ಕುರಿತು ಸ್ಪಷ್ಟನೆ ನೀಡದ ಚುನಾವಣಾ ಆಯೋಗ, ತನ್ನ ವೆಬ್‍ಸೈಟಿನಿಂದ ಮಾಹಿತಿ-ಅಂಕಿಅಂಶಗಳನ್ನೇ ತೆಗೆದು ಹಾಕುವ ದುಸ್ಸಾಹಸ ಮಾಡುವ ಮೂಲಕ ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ…..

ಚುನಾವಣಾ ಅಯೋಗವೇ ಅಧಿಕೃತವಾಗಿ ಸಾರ್ವಜನಿಕರಿಗೆಂದೇ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದ ಎರಡು ಸೆಟ್ ಅಂಕಿ-ಸಂಖ್ಯೆಗಳನ್ನು ತೆಗೆದುಕೊಂಡು ಈ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿದೆ. ಮೊದಲ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳಲ್ಲಿ ಜನರು ವೋಟ್ ಮಾಡಿದ್ದ ಮತಗಳು ಮತ್ತು ಮೇ 23ರಂದು ಕೌಂಟ್ ಆದ ಮತಗಳಲ್ಲಿ ಸಾಕಷ್ಟು ವ್ಯತ್ಯಾಸ ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದೆ.

ತಮಿಳುನಾಡಿನ ಕಂಚೀಪುರಂ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 12,14,036 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,32,417 ಮತಗಳು! ಈ ಹೆಚ್ಚುವರಿ 18,331 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಧರ್ಮಪುರಿ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 11,94, 440 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,12,311 ಮತಗಳು! ಈ ಹೆಚ್ಚುವರಿ 17,871 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಪೆರಂಬದೂರು ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 13,88,666 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 14,03,178 ಮತಗಳು! ಈ ಹೆಚ್ಚುವರಿ 14,512 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಇವು ಮೊದಲ ಹಂತದಲ್ಲಿ ನಡೆದ 373 ಕೇತ್ರಗಳಲ್ಲಿ ಅತಿ ಹೆಚ್ಚು ಪ್ರಮಾಣದ ವ್ಯತ್ಯಾಸ ತೋರಿಸಿದ 4 ಕ್ಷೇತ್ರಗಳು. ಹೀಗೇ ಇನ್ನು 220 ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ‘ಉದ್ಭವಿಸಿದರೆ’, ಉಳಿದ ಕ್ಷೇತ್ರಗಳಲ್ಲಿ ಅವು ವೋಟ್ ಆಗಿದ್ದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿವೆ!

ಆಯೋಗದ ವೆಬ್‍ಸೈಟಿನಿಂದ ‘ಡೇಟಾ’ ಮಾಯ!

ಚುನಾವಣಾ ಆಯೋಗವು ಮೊದಲ ನಾಲ್ಕು ಹಂತಗಳ ಡೇಟಾವನ್ನು ಪ್ರಕಟಿಸಿ, ಇವು ಪರಿಪೂರ್ಣ ಅಂಕಿಅಂಶಗಳು ಎಂದು ಸಾರಿತ್ತು. ಹಾಗಾಗಿ ಕ್ವಿಂಟ್ ಪೋರ್ಟಲ್ ಈ ಡೇಟಾದ ಆಧಾರದಲ್ಲೇ ಪರೀಕ್ಷೆ ನಡೆಸಿತು. ಯಾವಾಗ ದೊಡ್ಡ ವ್ಯತ್ಯಾಸಗಳು ಕಂಡವೋ, ಕ್ವಿಂಟ್ ಈ ಕುರಿತಾಗಿ ಆಯೋಗವನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸದ ಆಯೋಗವು, ತನ್ನ ವೆಬ್‍ಸೈಟಿನಿಂದ ಈ ಎಲ್ಲ ಅಂಕಿಅಂಶಗಳನ್ನು ತೆಗೆದು ಹಾಕುವ ಮೂಲಕ ಜನರ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕ್ವಿಂಟ್ ತಾನು ಆಯೋಗದ ವೆಬ್‍ಸೈಟಿನಿಂದ ಡೌನ್‍ಲೋಡ್ ಮಾಡಿದ ಅಂಕಿಅಂಶಗಳು ಮತ್ತು ಪತ್ತೆ ಮಾಡಿದ ವ್ಯತ್ಯಾಸಗಳ ಕಾಪಿಗಳನ್ನು ಮೇಲ್ ಮೂಲಕ ಇನ್ನೊಮ್ಮೆ ಆಯೋಗಕ್ಕೆ ಕಳಿಸಿತು. ಈವರೆಗೂ ಆಯೋಗದಿಂದ ಉತ್ತರವೇ ಇಲ್ಲ!

ಮೇ 23ರ ಚುನಾವಣೆ ಮುಗಿದು 6-7 ದಿನಗಳಾದರೂ (ಮೇ 27ರಂದು) ಉಳಿದೆಲ್ಲ ಕ್ಷೇತ್ರಗಳ ವೋಟ್ ಆದ ಡೇಟಾವನ್ನು ಕಂಪೈಲ್ ಮಾಡಲಾಗಿಲ್ಲ ಎಂಬ ಸಬೂಬನ್ನೂ ಆಯೋಗ ನೀಡಿದೆ. ಯಾಕೆ ಸಂಪೂರ್ಣ ಮತ ಎಣಿಕೆ ಮುಗಿದ ಏಳು ದಿನವಾದರೂ ಡೇಟಾವನ್ನು ಕಂಪೈಲ್ ಮಾಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಈ ಕುರಿತಂತೆ ಕ್ವಿಂಟ್ ಜೊತೆ ಮಾತಾಡಿರುವ ಮಾಜಿ ಚುನಾವಣಾ ಆಯುಕ್ತ ರಾವತ್ ಅವರು. ‘ಇದೊಂದು ಗಂಭೀರ ವಿಷಯ. ನಾನು ಆಯುಕ್ತನಾಗಿದ್ದಾಗ ಇಂಥದ್ದು ಎಂದೂ ಸಂಭವಿಸರಲೇ ಇಲ್ಲ. ಆಯೋಗ ಇದಕ್ಕೆ ಸ್ಪಷ್ಟನೆ ನೀಡಲೇಬೇಕು’ ಎಂದು ಒತ್ತಾಯಿಸಿದ್ದಾರೆ. ಇತರ ಮಾಜಿ ಆಯುಕ್ತರಾದ ಗೋಪಾಲಸ್ವಾಮಿ, ಖುರೇಶಿ ಮತ್ತು ಬ್ರಹ್ಮಾ ಅವರು ಕೂಡ ಆಯೋಗ ಇದಕ್ಕೆಲ್ಲ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಚಲಾವಣೆಯಾದ ಮತಗಳಿಗಿಂತ ಕೌಂಟ್ ಆದ ಮತಗಳೆ ಹೆಚ್ಚು 

ಇಲ್ಲಿ ಆಯೋಗ ಈ ನಾಲ್ಕು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವ ಹೊಣೆ ಹೊರಬೇಕು:

ಮೊದಲ 4 ಹಂತದ ಮತದಾನದಲ್ಲಿ ಮತದಾನವಾದ ಅಂತಿಮ ಅಂಕಿಅಂಶಗಳು ಎಂದು ಆಯೋಗ ತನ್ನ ವೆಬ್‍ಸೈಟಿನಲ್ಲಿ ಅಪ್‍ಲೋಡ್ ಮಾಡಿದ್ದು ಏಕೆ?
ದಿಡೀರ್ ಎಂದು ಈ ಡೇಟಾವನ್ನು ವೆಬ್‍ಸೈಟಿನಿಂದ ತೆಗೆದದ್ದು ಏಕೆ?
ಈ ಗಂಭಿರ ವ್ಯತ್ಯಾಸಗಳ ಕುರಿತು ಆಯೋಗ ಏಕೆ ಉತ್ತರಿಸುತ್ತಿಲ್ಲ? ಅದಕ್ಕೆ ಇದರಲ್ಲಿ ಮುಚ್ಚಿಡುವಂತಾದ್ದು ಏನಾದರೂ ಇದೆಯೇ?
ಈ ದೊಡ್ಡ ವ್ಯತ್ಯಾಸಗಳು ಕಂಡುಬರಲು ಕಾರಣವೇನು? ಇವಿಎಂಗಳು ದೋಷಪೂರಿತವಾಗಿವೆಯೇ?

(ಆಧಾರ: ದಿ ಕ್ವಿಂಟ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....