Homeನಿಜವೋ ಸುಳ್ಳೋವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ವೋಟು ವ್ಯತ್ಯಾಸಕ್ಕೂ ನಮಗೂ ಸಂಬಂಧವಿಲ್ಲ : ಚುನಾವಣಾ ಆಯೋಗ

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

- Advertisement -
- Advertisement -

ದಿ ಕ್ವಿಂಟ್ ಪೋರ್ಟಲ್‍ನವರು ಮೊದಲ ನಾಲ್ಕು ಹಂತಗಳಲ್ಲಿ ನಡೆದ ಮತದಾನ ಪ್ರಮಾಣ ಮತ್ತು ಏಣಿಕೆಯಾದ ಮತಗಳ ಸಂಖ್ಯೆಯನ್ನು ಕೂಲಂಕುಶವಾಗಿ ಪರಿಗಣಿಸಿದಾಗ ದಿಗ್ಭ್ರಮೆಗೊಳಿಸುವ ವಿಚಾರ ಹೊರಬಂದಿದೆ. 373 ಕ್ಷೇತ್ರಗಳಲ್ಲಿ ವೋಟ್ ಆದ ಮತಗಳಿಗೂ, ಎಣಿಕೆ ಆದ ಮತಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೆ ಇಲ್ಲಿವರೆಗೆ ಈ ಕುರಿತು ಸ್ಪಷ್ಟನೆ ನೀಡದ ಚುನಾವಣಾ ಆಯೋಗ, ತನ್ನ ವೆಬ್‍ಸೈಟಿನಿಂದ ಮಾಹಿತಿ-ಅಂಕಿಅಂಶಗಳನ್ನೇ ತೆಗೆದು ಹಾಕುವ ದುಸ್ಸಾಹಸ ಮಾಡುವ ಮೂಲಕ ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ…..

ಚುನಾವಣಾ ಅಯೋಗವೇ ಅಧಿಕೃತವಾಗಿ ಸಾರ್ವಜನಿಕರಿಗೆಂದೇ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದ ಎರಡು ಸೆಟ್ ಅಂಕಿ-ಸಂಖ್ಯೆಗಳನ್ನು ತೆಗೆದುಕೊಂಡು ಈ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿದೆ. ಮೊದಲ ನಾಲ್ಕು ಹಂತಗಳಲ್ಲಿ ನಡೆದ 373 ಕ್ಷೇತ್ರಗಳಲ್ಲಿ ಜನರು ವೋಟ್ ಮಾಡಿದ್ದ ಮತಗಳು ಮತ್ತು ಮೇ 23ರಂದು ಕೌಂಟ್ ಆದ ಮತಗಳಲ್ಲಿ ಸಾಕಷ್ಟು ವ್ಯತ್ಯಾಸ ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದೆ.

ತಮಿಳುನಾಡಿನ ಕಂಚೀಪುರಂ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 12,14,036 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,32,417 ಮತಗಳು! ಈ ಹೆಚ್ಚುವರಿ 18,331 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಧರ್ಮಪುರಿ ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 11,94, 440 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 12,12,311 ಮತಗಳು! ಈ ಹೆಚ್ಚುವರಿ 17,871 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ತಮಿಳುನಾಡಿನ ಪೆರಂಬದೂರು ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 13,88,666 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 14,03,178 ಮತಗಳು! ಈ ಹೆಚ್ಚುವರಿ 14,512 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಉತ್ತರಪ್ರದೇಶದ ಮಥುರಾ  ಕ್ಷೇತ್ರದಲ್ಲಿ ಆಯೋಗವು ಹೇಳುವ ಪ್ರಕಾರ, 10,86,206 ಮತಗಳು ಇವಿಯಂನಲ್ಲಿ ವೋಟ್ ಮಾಡಲ್ಪಟ್ಟಿದ್ದರೆ, ಏಣಿಕೆಯಾಗಿದ್ದು 10,98,112 ಮತಗಳು! ಈ ಹೆಚ್ಚುವರಿ 9,906 ಮತಗಳು ಎಲ್ಲಿಂದ ಬಂದವು? ಆಯೋಗದ ಬಳಿ ಉತ್ತರವಿಲ್ಲ!

ಇವು ಮೊದಲ ಹಂತದಲ್ಲಿ ನಡೆದ 373 ಕೇತ್ರಗಳಲ್ಲಿ ಅತಿ ಹೆಚ್ಚು ಪ್ರಮಾಣದ ವ್ಯತ್ಯಾಸ ತೋರಿಸಿದ 4 ಕ್ಷೇತ್ರಗಳು. ಹೀಗೇ ಇನ್ನು 220 ಕ್ಷೇತ್ರಗಳಲ್ಲಿ ಹೆಚ್ಚುವರಿ ಮತಗಳು ‘ಉದ್ಭವಿಸಿದರೆ’, ಉಳಿದ ಕ್ಷೇತ್ರಗಳಲ್ಲಿ ಅವು ವೋಟ್ ಆಗಿದ್ದಕ್ಕಿಂತ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿವೆ!

ಆಯೋಗದ ವೆಬ್‍ಸೈಟಿನಿಂದ ‘ಡೇಟಾ’ ಮಾಯ!

ಚುನಾವಣಾ ಆಯೋಗವು ಮೊದಲ ನಾಲ್ಕು ಹಂತಗಳ ಡೇಟಾವನ್ನು ಪ್ರಕಟಿಸಿ, ಇವು ಪರಿಪೂರ್ಣ ಅಂಕಿಅಂಶಗಳು ಎಂದು ಸಾರಿತ್ತು. ಹಾಗಾಗಿ ಕ್ವಿಂಟ್ ಪೋರ್ಟಲ್ ಈ ಡೇಟಾದ ಆಧಾರದಲ್ಲೇ ಪರೀಕ್ಷೆ ನಡೆಸಿತು. ಯಾವಾಗ ದೊಡ್ಡ ವ್ಯತ್ಯಾಸಗಳು ಕಂಡವೋ, ಕ್ವಿಂಟ್ ಈ ಕುರಿತಾಗಿ ಆಯೋಗವನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸದ ಆಯೋಗವು, ತನ್ನ ವೆಬ್‍ಸೈಟಿನಿಂದ ಈ ಎಲ್ಲ ಅಂಕಿಅಂಶಗಳನ್ನು ತೆಗೆದು ಹಾಕುವ ಮೂಲಕ ಜನರ ಸಂಶಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕ್ವಿಂಟ್ ತಾನು ಆಯೋಗದ ವೆಬ್‍ಸೈಟಿನಿಂದ ಡೌನ್‍ಲೋಡ್ ಮಾಡಿದ ಅಂಕಿಅಂಶಗಳು ಮತ್ತು ಪತ್ತೆ ಮಾಡಿದ ವ್ಯತ್ಯಾಸಗಳ ಕಾಪಿಗಳನ್ನು ಮೇಲ್ ಮೂಲಕ ಇನ್ನೊಮ್ಮೆ ಆಯೋಗಕ್ಕೆ ಕಳಿಸಿತು. ಈವರೆಗೂ ಆಯೋಗದಿಂದ ಉತ್ತರವೇ ಇಲ್ಲ!

ಮೇ 23ರ ಚುನಾವಣೆ ಮುಗಿದು 6-7 ದಿನಗಳಾದರೂ (ಮೇ 27ರಂದು) ಉಳಿದೆಲ್ಲ ಕ್ಷೇತ್ರಗಳ ವೋಟ್ ಆದ ಡೇಟಾವನ್ನು ಕಂಪೈಲ್ ಮಾಡಲಾಗಿಲ್ಲ ಎಂಬ ಸಬೂಬನ್ನೂ ಆಯೋಗ ನೀಡಿದೆ. ಯಾಕೆ ಸಂಪೂರ್ಣ ಮತ ಎಣಿಕೆ ಮುಗಿದ ಏಳು ದಿನವಾದರೂ ಡೇಟಾವನ್ನು ಕಂಪೈಲ್ ಮಾಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಈ ಕುರಿತಂತೆ ಕ್ವಿಂಟ್ ಜೊತೆ ಮಾತಾಡಿರುವ ಮಾಜಿ ಚುನಾವಣಾ ಆಯುಕ್ತ ರಾವತ್ ಅವರು. ‘ಇದೊಂದು ಗಂಭೀರ ವಿಷಯ. ನಾನು ಆಯುಕ್ತನಾಗಿದ್ದಾಗ ಇಂಥದ್ದು ಎಂದೂ ಸಂಭವಿಸರಲೇ ಇಲ್ಲ. ಆಯೋಗ ಇದಕ್ಕೆ ಸ್ಪಷ್ಟನೆ ನೀಡಲೇಬೇಕು’ ಎಂದು ಒತ್ತಾಯಿಸಿದ್ದಾರೆ. ಇತರ ಮಾಜಿ ಆಯುಕ್ತರಾದ ಗೋಪಾಲಸ್ವಾಮಿ, ಖುರೇಶಿ ಮತ್ತು ಬ್ರಹ್ಮಾ ಅವರು ಕೂಡ ಆಯೋಗ ಇದಕ್ಕೆಲ್ಲ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಚಲಾವಣೆಯಾದ ಮತಗಳಿಗಿಂತ ಕೌಂಟ್ ಆದ ಮತಗಳೆ ಹೆಚ್ಚು 

ಇಲ್ಲಿ ಆಯೋಗ ಈ ನಾಲ್ಕು ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವ ಹೊಣೆ ಹೊರಬೇಕು:

ಮೊದಲ 4 ಹಂತದ ಮತದಾನದಲ್ಲಿ ಮತದಾನವಾದ ಅಂತಿಮ ಅಂಕಿಅಂಶಗಳು ಎಂದು ಆಯೋಗ ತನ್ನ ವೆಬ್‍ಸೈಟಿನಲ್ಲಿ ಅಪ್‍ಲೋಡ್ ಮಾಡಿದ್ದು ಏಕೆ?
ದಿಡೀರ್ ಎಂದು ಈ ಡೇಟಾವನ್ನು ವೆಬ್‍ಸೈಟಿನಿಂದ ತೆಗೆದದ್ದು ಏಕೆ?
ಈ ಗಂಭಿರ ವ್ಯತ್ಯಾಸಗಳ ಕುರಿತು ಆಯೋಗ ಏಕೆ ಉತ್ತರಿಸುತ್ತಿಲ್ಲ? ಅದಕ್ಕೆ ಇದರಲ್ಲಿ ಮುಚ್ಚಿಡುವಂತಾದ್ದು ಏನಾದರೂ ಇದೆಯೇ?
ಈ ದೊಡ್ಡ ವ್ಯತ್ಯಾಸಗಳು ಕಂಡುಬರಲು ಕಾರಣವೇನು? ಇವಿಎಂಗಳು ದೋಷಪೂರಿತವಾಗಿವೆಯೇ?

(ಆಧಾರ: ದಿ ಕ್ವಿಂಟ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...