Homeಪುಸ್ತಕ ವಿಮರ್ಶೆಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ'ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

ಅಕಿರಾ ಕುರೋಸಾವಾ ಆತ್ಮಕತೆಯ ಕನ್ನಡ ಅನುವಾದ ’ನೆನಪಿನೋಣಿಯ’ಲ್ಲಿಂದ ಆಯ್ದ ಅಧ್ಯಾಯ: ಓಣಿಯ ಜಗತ್ತು

- Advertisement -
- Advertisement -

ಉಶಿಗೋಮೆ – ಕಾಗುರಾಜಕದ ಹಾದಿಯಲ್ಲೊಂದು ಓಣಿಯಿತ್ತು. ಅದು ಫ್ಯೂಡಲ್ ಯುಗದ ಪ್ರತಿರೂಪದಂತಿತ್ತು. ಆ ಓಣಿಯಲ್ಲಿನ ಕಟ್ಟಡಗಳ ಮರದ ಬಾಗಿಲುಗಳು ಗಾಜಿಗೆ ಬದಲಾಗಿತ್ತು ಅಷ್ಟೇ. ಅಲ್ಲಿ ಮೂರು ವಠಾರದಂತಹ ಕಟ್ಟಡಗಳಿದ್ದವು. ನನ್ನಣ್ಣ ಉವೇದ್ ಇಲ್ಲಿಯೇ ಒಬ್ಬ ಹೆಂಗಸು ಮತ್ತು ಆಕೆಯ ತಾಯಿಯೊಂದಿಗೆ ಇದ್ದ. ಅನಾರೋಗ್ಯದಿಂದ ಚೇತರಿಸಿಕೊಂಡ ಮೇಲೆ ನಾನಿದ್ದ ಕೋಣೆಯನ್ನು ಖಾಲಿಮಾಡಿ ಅವರೊಂದಿಗೆ ಇರಲು ಹೋದೆ.

ಸಿನಿಮಾ ಪ್ಯಾಲೇಸ್ ಥಿಯೇಟರಿನ ಹಿಂಭಾಗದಲ್ಲಿ ನನ್ನನ್ನು ಮೊದಲ ಸಲ ನೋಡಿ ಅಣ್ಣ ಗಾಬರಿಯಾದ. “ಅಕಿರಾ ಏನಾಯ್ತು? ಹುಷಾರಿಲ್ಲವಾ?” ಗಾಬರಿಯಿಂದ ಕೇಳಿದ. “ಹಾಗೇನಿಲ್ಲ. ಸ್ವಲ್ಪ ಸುಸ್ತಾಗಿದಿನಿ ಅಷ್ಟೇ” ಎಂದೆ. ನನ್ನನ್ನೇ ದಿಟ್ಟಿಸಿ ನೋಡುತ್ತಾ “ಸ್ವಲ್ಪ ಸುಸ್ತಾದ ಹಾಗೆ ಕಾಣ್ತಿಲ್ಲ. ಮನೆಗೆ ನಡಿ” ಅಂದ. ಅಣ್ಣನ ಜೊತೆ ಅವನ ಮನೆಗೆ ಬಂದೆ. ಒಂದು ತಿಂಗಳ ನಂತರ ಅಲ್ಲೇ ಹತ್ತಿರವಿದ್ದ ಮತ್ತೊಂದು ಕೋಣೆಗೆ ವಾಸ್ತವ್ಯ ಬದಲಿಸಿದೆ. ಆದರೂ ಹೆಚ್ಚಿನ ಸಮಯವನ್ನು ಅಣ್ಣನ ಮನೆಯಲ್ಲೇ ಕಳೆಯುತ್ತಿದ್ದೆ. ಮನೆಬಿಟ್ಟು ಬರುವಾಗ ಅಣ್ಣನ ಜೊತೆ ಇರುವೆ ಎಂದು ಅಪ್ಪನಿಗೆ ಸುಳ್ಳು ಹೇಳಿದ್ದೆ. ಈಗ ಆ ಸುಳ್ಳು ನಿಜವಾಗಿತ್ತು.

ಅಣ್ಣನಿದ್ದ ವಠಾರ ಹಾಗೂ ಓಣಿಗಳು ರಾಕುಗೋ (ಜಪಾನಿನ ಕತೆ ಹೇಳುವ ಪ್ರದರ್ಶನಕಲೆ) ಕತೆ ಹೇಳುವವರ ಕತೆಗಳ ಆವಾಸಸ್ಥಾನವಿದ್ದಂತಿತ್ತು. ಅಲ್ಲಿದ್ದ ಒಂದೇ ಬಾವಿಯಿಂದ ಜನ ನೀರು ಸೇದಿಕೊಳ್ಳುತ್ತಿದ್ದರು. ಅಲ್ಲಿನ ನಿವಾಸಿಗಳು ಸಂಪ್ರದಾಯಬದ್ಧವಾದ ಟೋಕಿಯನ್ನರು. ನನ್ನಣ್ಣ ಈ ಪರಿಸರದಲ್ಲಿ ಒಡೆಯನಿಲ್ಲದ ಸಮುರಾಯ್‌ನಂತೆ, ಏಳನೇ ಶತಮಾನದಲ್ಲಿ ಯುದ್ಧಕ್ಕೆ ಹೆದರಿದ ಹೊರಿಬೆ ಯಸುಯಿ ರೀತಿ ಇದ್ದ. ಅವನನ್ನು ಅಲ್ಲಿ ಬಹಳ ಭಕ್ತಿ, ಗೌರವಗಳಿಂದ ಕಾಣುತ್ತಿದ್ದರು.

ಈ ಕಟ್ಟದಲ್ಲಿನ ಪ್ರತಿ ಮನೆಯನ್ನು ಮೂರು ಭಾಗಗಳಾಗಿ ವಿಭಜಿಸಿದ್ದರು. ಪ್ರತಿಯೊಂದು ಮನೆಯ ಮುಂಭಾಗದಲ್ಲಿ 4ಬೈ4 ಅಡಿ ಜಾಗವಿರುತ್ತಿತ್ತು. ಅದಾದ ಮೇಲೆ 12 ಅಡಿ ಜಾಗದಲ್ಲೊಂದು ಕೋಣೆ ಹಾಗೂ ಹಿಂಭಾಗಕ್ಕೆ ಅಡುಗೆಮನೆ, ಬಚ್ಚಲುಮನೆ ಇರುತ್ತಿತ್ತು. ಬಹಳ ಇಕ್ಕಟ್ಟಾದ ಜಾಗ. ಅಣ್ಣ ಅಷ್ಟೊಂದು ಸಂಪಾದಿಸುತ್ತಿದ್ದರೂ ಯಾಕೆ ಇಂತಹ ಸ್ಥಳದಲ್ಲಿದ್ದಾನೆ ಎನ್ನುವುದು ಅರ್ಥವಾಗಿರಲಿಲ್ಲ. ದಿನಕಳೆದಂತೆ ಅಲ್ಲಿನ ಬದುಕಿನ ಶೈಲಿ ಇಷ್ಟವಾಗತೊಡಗಿತು.

ಇದನ್ನೂ ಓದಿ: ಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

ಆ ಪ್ರದೇಶದಲ್ಲಿ ಗಾರೆ ಕೆಲಸಗಾರರು, ಬಡಗಿಗಳು, ಪ್ಲಾಸ್ಟಿಂಗ್ ಮಾಡುವವರು ಹೀಗೆ ವಿವಿಧ ವೃತ್ತಿಯ ಜನರಿದ್ದರು. ಬಹುತೇಕ ಮಂದಿಗೆ ಇಂತಹದ್ದೇ ಎನ್ನುವ ಕೆಲಸವಿರಲಿಲ್ಲ. ನಿರ್ದಿಷ್ಟ ಆದಾಯ ಮೂಲವಿರಲಿಲ್ಲ. ಅದ್ಹೇಗೋ ಅವರೆಲ್ಲ ಒಬ್ಬರೊಂದಿಗೆ ಒಬ್ಬರು ಹಂಚಿಕೊಳ್ಳುತ್ತಾ ಬದುಕುತ್ತಿದ್ದರು. ನರಕವಾಗಬಹುದಾಗಿದ್ದ ಬದುಕನ್ನು ತಮ್ಮ ಹಾಸ್ಯಪ್ರಜ್ಞೆಯಿಂದ ಜೀವಂತವಾಗಿರಿಸಿದ್ದರು. ಸಣ್ಣ ಮಕ್ಕಳು ಕೂಡ ನಗೆಚಟಾಕಿಗಳನ್ನು ಹಾರಿಸುತ್ತಿದ್ದರು.

ದೊಡ್ಡವರ ನಡುವಿನ ಮಾತುಕತೆ ಹೀಗಿರುತ್ತಿತ್ತು- “ಬೆಳಗ್ಗೆ ಮಹಡಿ ಮೇಲೆ ಮಲಗಿದ್ದೆ. ಇದ್ದಕ್ಕಿದ್ದ ಹಾಗೆ ಪಕ್ಕದ ಮನೆ ಕಡೆಯಿಂದ ಸುತ್ತಿದ್ದ ಚಾಪೆ ಹಾರಿಬಂತು. ನೋಡ್ತಿನಿ ಪಕ್ಕದ್ಮನೆಯವನು ಆ ಚಾಪೆ ಮಧ್ಯೆ ಇದ್ದ. ಅವನ ಹೆಂಡತಿ ಮನೆಕ್ಲೀನಿಂಗ್ ಭಯಂಕರ.” ಇದಕ್ಕೆ ಇನ್ನೊಬ್ಬ ಹೇಳುತ್ತಿದ್ದ “ಏ ಹಾಗೇನಿಲ್ಲ. ಗಂಡನಿಗೆ ನೋವಾಗಬಾರದು ಅಂತ ಚಾಪೆಯಲ್ಲಿ ಸುತ್ತಿ ಎಸೆದಿದಾಳೆ ಅಷ್ಟೇ.”

ಮೊದಲೇ ಇಕ್ಕಟ್ಟಾಗಿರೋ ಮನೆಯೊಳಗೆ ಕೋಣೆಗಳನ್ನು ಮಾಡಿ ಅದನ್ನು ಬಾಡಿಗೆಗೆ ಕೊಡುತ್ತಿದ್ದರು. ಅಂತಹದ್ದೇ ಒಂದು ಕೋಣೆಯಲ್ಲಿ ಇದ್ದವನೊಬ್ಬ ಮೀನು ಮಾರುತ್ತಿದ್ದ. ಪ್ರತಿದಿನ ಸೂರ್ಯ ಹುಟ್ಟೋದಕ್ಕೂ ಮುಂಚೆ ನದಿಗೆ ಹೋಗಿ ಮೀನು ಹಿಡಿಯುತ್ತಿದ್ದ. ತಿಂಗಳೆಲ್ಲ ಹೀಗೆ ಮೈಮುರಿದು ಕೆಲಸ ಮಾಡುತ್ತಿದ್ದ. ತಿಂಗಳ ಕೊನೆಯಲ್ಲಿ ಚಂದದ ಬಟ್ಟೆ ಹಾಕಿಕೊಂಡು ಸೂಳೆಯರ ಮನೆಗೆ ಹೋಗುತ್ತಿದ್ದ. ಇಡೀ ತಿಂಗಳು ಅವನು ದುಡಿದಿದ್ದು ಸಾರ್ಥಕವಾಗುವುದು ಹೀಗೆ ಮಾಡಿದಾಗಲೇ ಅಂದುಕೊಂಡಹಾಗಿತ್ತು.

ಇವರುಗಳ ನಡುವೆ ಇದ್ದಾಗ ನನಗೆ ಹದಿನೆಂಟನೆಯ ಶತಮಾನದ ಸಾಂಬಾ, ಕ್ಯೋಡನ್‌ರ ಕತೆಗಳ ಲೋಕದಲ್ಲಿದ್ದಂತೆ ಅನ್ನಿಸೋದು. ಇವರಿಂದ ಬಹಳಷ್ಟನ್ನು ಕಲಿತೆ. ಪಕ್ಕದ ಮನೆಯಲ್ಲಿದ್ದ ಮುದುಕ ಕತೆಹೇಳುವ ಪ್ರದರ್ಶನ ಮಂದಿರದ ಹೊರಗಡೆ ಚಪ್ಪಲಿ ಕಾಯುತ್ತಿದ್ದ ಇಲ್ಲವೇ ಸಿನಿಮಾ ಥಿಯೇಟರುಗಳಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದ. ಇಂತಹವರಿಗೆ ಅಲ್ಲಿನ ಪ್ರದರ್ಶನಗಳಿಗೆ ಪಾಸು ಸಿಗುತ್ತದೆ. ಆ ಪಾಸುಗಳನ್ನು ತಮ್ಮ ನೆರೆಹೊರೆಯವರಿಗೆ ಬಾಡಿಗೆಗೆ ಕೊಡುತ್ತಿದ್ದರು. ಈ ತರಹದ ಪಾಸ್ ಪಡೆದು ಪ್ರತಿದಿನ ಬೆಳಗ್ಗೆ, ಸಂಜೆ ಸಿನಿಮಾ ನೋಡುತ್ತಿದ್ದೆ ಇಲ್ಲವೇ ಕತೆಕೇಳಲು ಹೋಗುತ್ತಿದ್ದೆ.

ಆ ಸಮಯದಲ್ಲಿ ಕಾಗುರಾಜಕದಲ್ಲಿ ಎರಡು ಸಿನಿಮಾ ಥಿಯೇಟರ್‌ಗಳಿದ್ದವು. ಉಶಿಗೋಮೆಕಾನಿನಲ್ಲಿ ವಿದೇಶಿ ಚಿತ್ರಗಳು ಹಾಗೂ ಬುನ್ಮೇಕಾನಿನಲ್ಲಿ ಜಪಾನಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಮೂರು ಕತೆಹೇಳುವ ಪ್ರದರ್ಶನ ಮಂದಿರಗಳಿದ್ದವು. ಕಾಗುರಾಜಕ ಎನ್ಬುಜೊ ಅಂತ ಒಂದರ ಹೆಸರು. ಉಳಿದೆರಡರ ಹೆಸರು ನೆನಪಿಲ್ಲ. ಎರಡು ಥಿಯೇಟರುಗಳನ್ನು ಹೊರತುಪಡಿಸಿ ಅಣ್ಣ ಪರಿಚಯಿಸಿದ್ದ ಸ್ನೇಹಿತರ ಥಿಯೇಟರುಗಳಲ್ಲೂ ನನಗಿಷ್ಟವಾಗುವ ಸಿನಿಮಾಗಳನ್ನು ನೋಡುತ್ತಿದ್ದೆ. ಕತೆಹೇಳುವ ಪ್ರದರ್ಶನಗಳು ಅಷ್ಟು ರುಚಿಸಲು ಕಾರಣ ನಾನಿದ್ದ ಪರಿಸರ. ಭವಿಷ್ಯದಲ್ಲಿ ಈ ಕತೆಹೇಳುವ, ಹಾಡುಹೇಳುವ ಕಲೆ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಎನ್ನುವುದರ ಕಲ್ಪನೆಯೂ ಇಲ್ಲದೆ ಇವುಗಳನ್ನು ಆಸ್ವಾದಿಸುತ್ತಿದ್ದೆ.

ಹೆಸರಾಂತ ಕಲಾವಿದರ ಪ್ರದರ್ಶನಗಳಲ್ಲದೆ ಹಾಸ್ಯಗಾರರ ಪ್ರದರ್ಶನಗಳನ್ನು ಇಲ್ಲಿ ನೋಡಿದ್ದೆ. ಅವರು ಈ ಪ್ರದರ್ಶನ ಮಂದಿರಗಳನ್ನು ಬಾಡಿಗೆಗೆ ಪಡೆದು ತಮ್ಮ ಪ್ರದರ್ಶನಗಳನ್ನು ನೀಡುತ್ತಿದ್ದರು. ಅಂತಹ ಒಂದು ಪ್ರದರ್ಶನ ನೆನಪಿದೆ. “ಮೂರ್ಖನ ಸೂರ್ಯಾಸ್ತ” ಎಂದು ಅದರ ಹೆಸರು. ವ್ಯಕ್ತಿಯೊಬ್ಬ ಮುಳುಗುತ್ತಿರುವ ಸೂರ್ಯ, ಆಕಾಶ, ಗೂಡಿಗೆ ಮರಳುತ್ತಿರುವ ಹಕ್ಕಿಗಳನ್ನು ನೋಡುತ್ತಿರುತ್ತಾನೆ. ಆ ದೃಶ್ಯ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಆ ಪ್ರದರ್ಶನ ನೀಡುತ್ತಿದ್ದ ವ್ಯಕ್ತಿ ಹೊಮ್ಮಿಸುತ್ತಿದ್ದ ಭಾವನೆಗಳನ್ನು ನೋಡಿ ಮನದುಂಬಿತು.

ಇದೇ ಸಮಯದಲ್ಲಿ ಟಾಕಿ ಚಿತ್ರಗಳು ಬರಲಾರಂಭಿಸಿದವು. ಅವುಗಳಲ್ಲಿ ಕೆಲವು ನೆನಪಿದೆ- All Quiet on the Western Front – Lewis Milestone, The Last Company – Curtis Bernhardt, Westfront IQI8 – G. W. Pabst, Hell’s Heroes – William Wyler, Sous les toits de Paris – Rene Clair, The Blue Angel – Josef von Sternberg, The Front Page – Milestone, Street Scene – King Vidor, Morocco, Shanghai Express – von Sternberg, City Lights – Charles Chaplin, The Threepenny Opera – Pabst, Der Kongress tanzt – Erik Charell.

ಟಾಕಿ ಚಿತ್ರಗಳ ಆರಂಭದೊಂದಿಗೆ ಮೂಕಿ ಚಿತ್ರಗಳ ಯುಗ ಅಂತ್ಯಗೊಂಡಿತು. ಅದರೊಂದಿಗೆ ನಿರೂಪಕರ ಅವಶ್ಯಕತೆಯೂ ಮುಗಿಯಿತು. ಅಣ್ಣ ಕೆಲಸ ಕಳೆದುಕೊಂಡ. ಅಲ್ಲಿಯವರೆಗೆ ಅವನ ಜೀವನ ಚೆನ್ನಾಗಿ ಸಾಗುತ್ತಿತ್ತು. ಆ ವೇಳೆಗೆ ಅವನು ನಿರೂಪಕನಾಗಿ ಸಾಕಷ್ಟು ಹೆಸರುವಾಸಿಯಾಗಿದ್ದ. ಕ್ರಮೇಣ ಎಲ್ಲ ಬದಲಾಗಲಾರಂಭಿಸಿತು. ನಾನಷ್ಟು ಇಷ್ಟ ಪಡುತ್ತಿದ್ದ ಓಣಿಯ ಬದುಕಿನ ಕರಾಳ ಮುಖಗಳು ತೆರೆದುಕೊಳ್ಳಲಾರಂಭಿಸಿತು. ಇದು ಮನುಷ್ಯ ಬದುಕಿನ ವಾಸ್ತವ. ಬೆಳಕು ಕತ್ತಲೊಳಗೆ ಕರಗಲಾರಂಭಿಸುತ್ತದೆ. ನನಗದು ಮೊದಲ ಅನುಭವವಾದ್ದರಿಂದ ಆ ಕುರಿತು ಯೋಚಿಸಲಾರಂಭಿಸಿದೆ.

ಇಲ್ಲಿ ಕೂಡ ಎಲ್ಲ ಕಡೆಯಂತೆ ಕೆಟ್ಟ ಸಂಗತಿಗಳು ಘಟಿಸಿದವು. ಮುದುಕನೊಬ್ಬ ತನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿದ. ಹೆಂಗಸೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಾಡುತ್ತಾ ಇಡೀ ಕಟ್ಟಡದ ರಾತ್ರಿಗಳ ನೆಮ್ಮದಿ ಹಾಳುಗೆಡವಿದಳು. ಒಂದು ರಾತ್ರಿ ಅವಳು ನೇಣು ಹಾಕಿಕೊಳ್ಳುತ್ತಿ ರುವುದನ್ನು ನೋಡಿದ ಪಕ್ಕದ ಮನೆಯವನು ನಕ್ಕನಂತೆ. ಆಕೆ ಮೌನವಾಗಿ ಬಾವಿಗೆ ಹಾರಿ ಪ್ರಾಣಬಿಟ್ಟಳು. ಮಲಮಕ್ಕಳ ಕತೆಗಳು ಹರಿದಾಡಲಾ ರಂಭಿಸಿದವು. ಇವೆಲ್ಲ ಮನಸ್ಸಿಗೆ ಬೇಸರ ಉಂಟುಮಾಡುತ್ತಿತ್ತು. ಅಂತಹ ಕತೆಯೊಂದನ್ನು ಹೇಳುತ್ತೇನೆ.

ಮಲತಾಯಿ ತನ್ನ ಮಲಮಗುವಿನ ವಿಷಯದಲ್ಲೇಕೆ ಕ್ರೂರಿಯಾಗಿರಬೇಕು? ಅವಳ ಗಂಡನ ಮೊದಲ ಹೆಂಡತಿಯ ಬಗೆಗಿನ ದ್ವೇಷದಿಂದ ಎನ್ನುವುದು ಸಮರ್ಥನೀಯವಲ್ಲ. ಈ ಅಪರಾಧಕ್ಕಿರುವ ಒಂದೇ ವಿವರಣೆ ಅಜ್ಞಾನ. ಅಜ್ಞಾನವೆನ್ನುವುದು ಮನುಷ್ಯ ಪ್ರಾಣಿಯಲ್ಲಿರುವ ಒಂದು ಬಗೆಯ ಹುಚ್ಚು. ದುರ್ಬಲರಾದ ಮಕ್ಕಳನ್ನು ಹಿಂಸಿಸುವವರು ವಾಸ್ತವವಾಗಿ ಹುಚ್ಚರು. ಭಯಂಕರವಾದ ಸಂಗತಿಯೆಂದರೆ ವೈಯಕ್ತಿಕ ನೆಲೆಯಲ್ಲಿ ಹೀಗೆ ಹುಚ್ಚರಾಗಿರುವವರು ಸಾರ್ವಜನಿಕವಾಗಿ ಬಹಳ ಮುಗ್ಧರೆನ್ನುವಂತೆ ಇರುತ್ತಾರೆ.

ಇದನ್ನೂ ಓದಿ: ಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- “ಬೆಳಕಿನ ಬೇಸಾಯ”

ಹಳೆಯ ಕತೆಯೊಂದರಲ್ಲಿ ಮಲತಾಯಿಯು ಮಲಮಗುವನ್ನು ಸುಡುವುದಕ್ಕಾಗಿ ಬಳಸುವ ವಸ್ತುವನ್ನು ತರಲು ಕಳಿಸುತ್ತಾಳೆ. ಅದು ತನ್ನನ್ನೇ ಸುಡಲು ಎಂದು ಗೊತ್ತಿಲ್ಲದ ಮಗು ಅದನ್ನು ತರಲು ಹೋಗುತ್ತದೆ. ಈ ಕತೆ ನನ್ನನ್ನು ಬಹಳ ಕಾಡಿತ್ತು. ಒಂದು ದಿನ ಅಣ್ಣನ ಮನೆಯಲ್ಲಿದ್ದಾಗ ಪಕ್ಕದಮನೆಯಾಕೆ ಬಿಕ್ಕುತ್ತಾ ಬಂದಳು. ಅವಳು ಅಳುತ್ತಿದ್ದ ರೀತಿಯನ್ನು ನೋಡಿ ಸಹಿಸಲಾಗಲಿಲ್ಲ. ಏನಾಯಿತು ಅಂತ ಕೇಳಿದಾಗ ಅವಳ ಪಕ್ಕದ ಮನೆಯಾಕೆ ಮಲಮಗಳನ್ನು ಹಿಂಸಿಸುತ್ತಿರುವುದಾಗಿ ಹೇಳಿದಳು. ಆ ಹುಡುಗಿ ಅಳುತ್ತಿರುವುದನ್ನು ಕೇಳಿ ತಡೆಯಲಾಗದೆ ಪಕ್ಕದ ಮನೆಯವರ ಅಡುಗೆಮನೆಯಲ್ಲಿ ಇಣುಕಿ ನೋಡಿದ್ದಳು. ಅಲ್ಲಿ ಹುಡುಗಿಯನ್ನು ಕಟ್ಟಿಹಾಕಿ ಆ ಮಲತಾಯಿ ಹುಡುಗಿಯ ಹೊಟ್ಟೆಯನ್ನು ಸುಡುತ್ತಿದ್ದಳಂತೆ. ಅವಳು ಇನ್ನೂ ಏನೋ ಹೇಳುವವಳಿದ್ದಳು. ಹೊರಗೆ ನೋಡಿ ಸುಮ್ಮನಾಗಿಬಿಟ್ಟಳು.

ಅಲಂಕರಿಸಿಕೊಂಡ ಮಹಿಳೆಯೊಬ್ಬಳು ರಸ್ತೆಯಲ್ಲಿ ಹೋಗುತ್ತಿದ್ದಳು. ಆಕೆ ನಮ್ಮನ್ನು ನೋಡಿ ನಸುನಕ್ಕು ವಂದಿಸಿ ಮುಂದೆ ಸಾಗಿದಳು. ಇಷ್ಟು ಹೊತ್ತು ಅಳುತ್ತಿದ್ದ ಹೆಂಗಸು ಅವಳನ್ನೇ ಬೆರಗಿನಿಂದ ನೋಡುತ್ತಾ “ಸ್ವಲ್ಪಹೊತ್ತಿಗೆ ಮುಂಚೆ ರಾಕ್ಷಸಿಯಂತಿದ್ದಳು. ಈಗ ನೋಡಿದರೆ ಕುರಿಮರಿಯಂತಿದ್ದಾಳೆ. ಪಿಶಾಚಿ!” ಅಂದಳು. ಆ ಹುಡುಗಿಯನ್ನು ಹಿಂಸಿಸುತ್ತಿದ್ದ ಮಲತಾಯಿ ಆಗಷ್ಟೇ ಬೀದಿಯಲ್ಲಿ ಹೋದ ಮಹಿಳೆ ಎಂದು ನಂಬಲಾಗಲಿಲ್ಲ. ಪಕ್ಕದಮನೆಯಾಕೆ ನನ್ನತ್ತ ತಿರುಗಿ “ಅಕಿರಾ, ದಯವಿಟ್ಟು ಆ ಹುಡುಗಿಗೆ ಸಹಾಯ ಮಾಡು. ಅವಳನ್ನು ಬಿಡಿಸು” ಎಂದು ಬೇಡಿಕೊಂಡಳು. ಮಾತಿಲ್ಲದೆ, ಅಪನಂಬಿಕೆಯಲ್ಲೇ ಅವಳನ್ನು ಹಿಂಬಾಲಿಸಿದೆ.

ಕಿಟಕಿಯಿಂದ ಇಣುಕಿದಾಗ ಅಲ್ಲಿ ಹುಡುಗಿಯನ್ನು ಕಟ್ಟಿಹಾಕಿರುವುದು ಕಾಣಿಸಿತು. ಕಿಟಕಿ ತೆರೆದಿತ್ತು. ಕಳ್ಳನಂತೆ ಒಳಹೊಕ್ಕೆ. ಕಟ್ಟಿದ್ದ ಕೈಗಳನ್ನು ಬಿಡಿಸುತ್ತಿದ್ದಂತೆ ಅವಳು ಸಿಟ್ಟಿನಿಂದ ನನ್ನ ನೋಡುತ್ತಾ “ಏನ್ಮಾಡ್ತಿದಿಯಾ? ನಿನ್ನ ಯಾರು ಸಹಾಯ ಮಾಡಲು ಕೇಳಿದರು!” ಅಂದಳು. ಆಶ್ಚರ್ಯದಿಂದ ಅವಳತ್ತ ನೋಡಿದೆ. “ಅವಳು ಬರೋ ಹೊತ್ತಿಗೆ ನನ್ನ ಕೈಗಳನ್ನು ಕಟ್ಟಿಹಾಕಿಲ್ಲ ಅಂದರೆ ಮತ್ತೆ ಹಿಂಸಿಸುತ್ತಾಳೆ.” ಕೆನ್ನೆಗೆ ಬಾರಿಸಿದಂತಾಯಿತು. ಅವಳ ಕೈಗಳ ಕಟ್ಟನ್ನು ಬಿಡಿಸಿದರೂ ಆ ಪರಿಸರದಿಂದ ಅವಳಿಗೆ ತಪ್ಪಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅವಳಿಗೆ ಬೇರೆಯವರ ಕರುಣೆಯಿಂದ ಸಹಾಯಕ್ಕಿಂತ ಅಪಾಯವೇ ಹೆಚ್ಚಿತ್ತು. “ಬೇಗ ನನ್ನ ಕಟ್ಟಿಹಾಕು” ಅಂದಳು. ಅವಳು ಹೇಳಿದಂತೆ ಮಾಡದಿದ್ದರೆ ಕಚ್ಚಿ ಬಿಡ್ತಾಳೇನೋ ಅನ್ನಿಸಿ ಕಟ್ಟಿಹಾಕಿದೆ.

ಅಕಿರಾ ಕುರೋಸಾವಾ
ಜಪಾನಿನ ಖ್ಯಾತ ನಿರ್ದೇಶಕ. ’ರಾಶೋಮಾನ್’, ’ಇಕಿರು’, ’ಸೆವೆನ್ ಸಮುರಾಯ್’ ಅವರ ಪ್ರಖ್ಯಾತ ಸಿನಿಮಾಗಳಲ್ಲಿ ಕೆಲವು. ’ರ್‍ಯಾನ್’ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

(ಕನ್ನಡಕ್ಕೆ): ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ
ಕನ್ನಡದಲ್ಲಿ ಎಂ.ಎ ಮತ್ತು ಪಿ.ಎಚ್‌ಡಿ ಪದವೀಧರೆ. ಅನುವಾದದಲ್ಲಿ ಆಸಕ್ತಿ. ಅಬ್ಬಾಸ್ ಕಿಯರಸ್ತೋಮಿಯ ಕಿರು ಪದ್ಯಗಳ ಅನುವಾದ ಸಂಕಲನ ’ಹೆಸರಿಲ್ಲದ ಹೂ’, ಅನುವಾದಿತ ಲೇಖನಗಳ ಸಂಗ್ರಹ ’ಉರಿವ ಬನದ ಕೋಗಿಲೆಗಳು’ ಪ್ರಕಟವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...