Homeಅಂಕಣಗಳುಕೃಷಿ ಕಥನಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- "ಬೆಳಕಿನ ಬೇಸಾಯ"

ಸುಸ್ಥಿರ ಕೃಷಿ ಚಿಂತನೆಗೊಂದು ಮೌಲಿಕ ಕೈಪಿಡಿ- “ಬೆಳಕಿನ ಬೇಸಾಯ”

- Advertisement -
- Advertisement -

ಕೃಷಿ ಲೋಕದ ಪಡಿಪಾಟಲಿನಿಂದ ಹೊರಬರಲು ಪರ್ಯಾಯಗಳ ಗುಚ್ಛಗಳನ್ನು ರೈತಾಪಿಗೆ ನೀಡುತ್ತಲೇ ಬಂದಿರುವ ಪಥ ದರ್ಶಕರಿದ್ದಾರೆ. ಫುಕೋಕಾ, ಬಿಲ್ ಮಾಲಿಸನ್, ಧಾಬೋಲ್ಕರ್ ಮುಂತಾದವರು ವಿಶಿಷ್ಟ ತಂತ್ರೋಪಾಯಗಳ ತತ್ವಗಳನ್ನು ಮುಂದಿಟ್ಟರೆ, ಭಾಸ್ಕರ ಸಾವೆ, ನಾರಾಯಣ ರೆಡ್ಡಿಯಂಥವರು ಇವುಗಳನ್ನೆಲ್ಲಾ ಅಳವಡಿಸಿಕೊಳ್ಳುವ ಮ್ಯಾಪ್ ಒಂದನ್ನು ಮುಂದಿಟ್ಟರು.

ಸುಸ್ಥಿರ ಕೃಷಿಯ ಬಗೆಗಿನ ಈ ಕಾಳಜಿಗಳನ್ನು ಸ್ಥೂಲವಾಗಿ ಹೀಗೆ ಹಿಡಿದಿಡಬಹುದು.

1. ಮಣ್ಣಿನ ಗುಣಮಟ್ಟದ ಅವನತಿ

2. ನೀರಿನ ದುರುಪಯೋಗ ಅಥವಾ ಜಾಣ ಉಪಯೋಗದ ಅವಜ್ಞೆ

3. ಬೆಳೆಗಳ ಆಯ್ಕೆ ಮತ್ತು ಸಾಂದ್ರತೆಯ ಗೊಂದಲ

4. ಪೋಷಕಾಂಶಗಳ ಮೂರಾಬಟ್ಟೆ ಬಳಕೆ

5. ರೋಗ/ಕೀಟಬಾಧೆಗೆ ಅಸಡ್ಡಾಳ ಕೀಟನಾಶಕ ಬಳಕೆ

ಇವುಗಳ ಇತಿಹಾಸ ನೋಡಿದರೆ ಇವು ನಮ್ಮನ್ನು ಅರ್ಧ ಶತಮಾನದ ಹಿಂದೆ ಜರುಗಿದ ಪಲ್ಲಟಗಳ ಮೂಲಕ್ಕೆ ಒಯ್ಯುತ್ತವೆ. ಈ ಪಲ್ಲಟ ತಂದ ಆತ್ಯಂತಿಕ ಪರಿಣಾಮಗಳ ಬಗ್ಗೆ ಸರಕಾರ ದೊಡ್ಡ ಮಟ್ಟದಲ್ಲಿ ಸ್ಪಂದಿಸಿಲ್ಲ. ಆದರೆ ಸೂಕ್ಷ್ಮ ವೈಜ್ಞಾನಿಕ ಧೋರಣೆಯ ಹಲವಾರು ರೈತರು ಪರ್ಯಾಯಗಳನ್ನು ಮುಂದಿಟ್ಟಿದ್ದಾರೆ.

ಇವುಗಳಲ್ಲಿ ಬಹು ಮುಖ್ಯವಾದದ್ದು ಪ್ರಸಕ್ತ ಸರಕಾರ ಪ್ರೋತ್ಸಾಹಿಸುತ್ತಿರುವ ರಾಸಾಯನಿಕ ಬಳಕೆ ಮತ್ತು ಏಕಬೆಳೆಯ ವಿರುದ್ಧ ಪ್ರತಿಕ್ರಿಯಿಸಿದ ಚಿಂತನೆಗಳು.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಮ್ಮ ರೈತರ ಹಿಡುವಳಿ ವಿಘಟನೆಗೊಂಡು ಸರಾಸರಿ ಎರಡು ಎಕರೆಗೆ ಬಂದು ನಿಂತಿದೆ. ಬಹುತೇಕ ಸಣ್ಣ ರೈತರು ಅರೆಕಾಲಿಕ ಕೃಷಿ ಕೂಲಿಗಳಾಗಿ ಬದುಕುತ್ತಿದ್ದಾರೆ. ಅರ್ಥಾತ್, ಕೃಷಿ ಭೂಮಿ ಅವರಿಗೆ ಸುಭದ್ರ ಜೀವನೋಪಾಯ ಒದಗಿಸುತ್ತಿಲ್ಲ.

ಹಿಂದೆಯೂ ಸಣ್ಣ ರೈತರಿಗೆ ಭೂಮಿಯೊಂದೇ ಏಕೈಕ ಆದಾಯ ಮೂಲವಾಗಿರಲಿಲ್ಲ. ಆಗಲೂ ಅದು ಆದಾಯದ ಅರ್ಧಾಂಶ ಮಾತ್ರ ಪೂರೈಸುತ್ತಿತ್ತು. ಆದರೆ ಮನೆಗೆ ಬೇಕಾದ ದವಸ ಧಾನ್ಯ ಬೆಳಕೊಂಡು ಒಂದು ಮಟ್ಟದ ಪ್ರಾಥಮಿಕ ಭದ್ರತೆಯನ್ನು ಪಡೆಯುವುದು ಬೇಸಾಯದ ಪ್ರಮುಖ ಗುರಿಯಾಗಿತ್ತು. ಈಗ ಈ ಪ್ರಾಥಮಿಕ ಭದ್ರತೆಯೂ ಮರೀಚಿಕೆಯಾಗಿದೆ.

ರೈತರಿಗೆ ಯಾವುದೇ ಒಳಸುರಿಯ ಬಳಕೆಯ ವೈಜ್ಞಾನಿಕ ತತ್ವಗಳ ಅರಿವು ಮೂಡಿಸದೇ ಇದ್ದದ್ದು ಹಸಿರು ಕ್ರಾಂತಿ ಮಾಡಿದ ಘೋರ ಅಪರಾಧ. ಕೃಷಿಯೆಂಬುದು ಅದ್ಭುತವಾದ ವೈಜ್ಞಾನಿಕ ಪ್ರಯೋಗ. ಪ್ರತಿ ಹಂಗಾಮು, ಪ್ರತಿ ವರ್ಷ ಬದಲಾಗಬಹುದಾದ ಸನ್ನಿವೇಶಗಳಿಗೆ ವೈಜ್ಞಾನಿಕ ಅರಿವಿನೊಂದಿಗೆ ಪ್ರತಿಕ್ರಿಯಿಸುವ ಕೌಶಲ್ಯ ಅದು.

ನಮ್ಮ ವಾತಾವರಣ ಹೇಗಿದೆ? ಅದರ ಮೂಲ ಪರಿಕರಗಳ ಕೆಲಸವೇನು? ಸಸ್ಯವೊಂದು ಏನೇನು ಪೋಷಕಾಂಶಗಳನ್ನು ಯಾಕೆ ಮತ್ತು ಹೇಗೆ ಬಳಸುತ್ತದೆ? ಸಸ್ಯವೊಂದರಲ್ಲಿ ಆಗುವ ಹಂತಹಂತದ ಬದಲಾವಣೆಗಳೇನು? ಮಣ್ಣಿನಲ್ಲಿ ಯಾವ ರೀತಿಯ ಪ್ರಕ್ರಿಯೆ ನಡೆಯುತ್ತದೆ? ಇವೆಲ್ಲಾ ರೋಮಾಂಚನಕಾರಿ ತಿಳಿವಳಿಕೆ. ಇವುಗಳ ಮೂಲ ವಿವರಗಳನ್ನು ಮನದಟ್ಟು ಮಾಡುವುದು ರಾಕೆಟ್ ಸಯನ್ಸ್ ಅಲ್ಲ. ಈ ವಿವರಗಳನ್ನು ಕರಗತ ಮಾಡಿಕೊಂಡಂತೆಯೇ, ರೈತನೊಬ್ಬನ ಗಮನಿಸುವ ಶಕ್ತಿ ಹೆಚ್ಚುತ್ತದೆ. ಗಮನಿಸುವ ಶಕ್ತಿ ಹೆಚ್ಚಿದಷ್ಟೂ ಇನ್ನೂ ಆಳವಾದ ಸಂಗತಿಗಳು ಅರಿವಿಗೆ ಬರುತ್ತವೆ. Observation power ಹೆಚ್ಚಿದಷ್ಟೂ ರೈತನೊಬ್ಬ ವಿಜ್ಞಾನಿಯೂ ಆಗುತ್ತಾನೆ, ವೃತ್ತಿಯ ಕುಶಲಿಯೂ ಆಗುತ್ತಾನೆ. ಅದಕ್ಕೇ “ರೈತನ ಹೆಜ್ಜೆ ಗುರುತೇ ಅತ್ಯುತ್ತಮ ಗೊಬ್ಬರ” ಎಂಬ ಚೈನಾದ ಗಾದೆ ಅಷ್ಟು ಮುಖ್ಯವೆನಿಸುವುದು.

ಇವ್ಯಾವುದೂ ಅರಿವಾಗಿ ದಕ್ಕದೇ, ಕೊಟ್ಟದ್ದು “ಎರಚು, ಸಿಂಪಡಿಸು, ಬೆಳೆ..!” ಎಂಬ ಆಜ್ಞೆಯನ್ನು ಸರಕಾರ ಮಾಡುತ್ತಾ ಬಂದು ರೈತರನ್ನು ಹೇಳಿದ್ದನ್ನು ಅನುಷ್ಠಾನ ಮಾಡುವ ಕುರಿಗಳನ್ನಾಗಿಸಿತು. ಹೀಗೆ ನೀಡಿದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿ ಏನಾದರೂ ಹೆಚ್ಚು ಕಮ್ಮಿಯಾದರೆ, ಸರಕಾರ ಈ ಅನಾಹುತದ ಜವಾಬ್ದಾರಿ ಹೊರಲು ಎಂದೂ ತಯಾರಿರಲಿಲ್ಲ. ಇದು ದೇವಸ್ಥಾನಗಳಲ್ಲಿ ಪುರೋಹಿತರು ಹೇಳಿದಂತೆ ಅಂಗ ಭಂಗಿ ಪ್ರದರ್ಶಿಸಿ ಪೂಜೆ ಮಾಡಿಸಿದ ಹಾಗೆ! ಇಂತಹ ಅಧ್ವಾನಗಳ ಕ್ರೋಢೀಕೃತ ಪರಿಣಾಮವೇ ಈಗ ನಾವು ನೋಡುತ್ತಿರುವ ಗ್ರಾಮ ಭಾರತ.

ನೀರಿಲ್ಲ, ನೀರು ಹೀರಿಟ್ಟುಕೊಳ್ಳುವ ಶಕ್ತಿ ಭೂಮಿಗಿಲ್ಲ. ಸ್ವಂತ ಬೀಜವಿಲ್ಲ; ಬಳಸುವ ಬೀಜದ ಬಗ್ಗೆ ಗ್ಯಾರಂಟಿ ಇಲ್ಲ. ಗೊಬ್ಬರವಿಲ್ಲ; ಬಳಸುವ ಗೊಬ್ಬರದ ವೈಪರೀತ್ಯ ನಿಯಂತ್ರಣ ಗೊತ್ತಿಲ್ಲ. ರೋಗ ಯಾಕೆ ಬಂತು/ಬರುತ್ತೆ ಅಂತ ಗೊತ್ತಿಲ್ಲ; ಕೀಟನಾಶಕ ಹೊಡೆಯುವುದಷ್ಟೇ ಗೊತ್ತು. ಆದರೂ ರೈತರಿಗೆ ಹೇಳುವ ಪ್ರಯತ್ನ ಆಗಲೇಬೇಕಲ್ಲ; ಊರಿಗೆ, ಜಿಲ್ಲೆಗೆ, ರಾಜ್ಯಕ್ಕೆ ಬೋಧೆ ಮಾಡುವುದು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಆದರೆ ಆಸಕ್ತಿಯುಳ್ಳ ರೈತನಿಗೆ ಹೊರದಾರಿ ತಿಳಿಸುವ ಕೆಲಸ ಮಾತ್ರ ಪ್ರಮುಖವಾದದ್ದು.

ಇದನ್ನೂ ಓದಿ: ಕೃಷಿಕಥನ -06: ನೀರ ಸಂಕಷ್ಟದ ಹೆಜ್ಜೆಗಳು

ಅವಿನಾಶ್ ಅವರ ’ಬೆಳಕಿನ ಬೇಸಾಯ’ ಈ ಎಲ್ಲವನ್ನೂ ತಾಳ್ಮೆಯಿಂದ ಹೇಳುವ ಪುಸ್ತಕ. ಓದಿ ಅರಿತದ್ದನ್ನು, ಮಾಡಿ ತಿಳಿದದ್ದನ್ನು ಅನುಭವದ ಆಧಾರದ ಮೇಲೆ ಅವರು ಪ್ರಸ್ತುತಪಡಿಸುತ್ತಾರೆ.

ಈ ಪುಸ್ತಕದಲ್ಲಿ ಕೃಷಿಯ ವೈಜ್ಞಾನಿಕ ಮೂಲ ವಿಷಯಗಳ ವಿವರಣೆ ಇದೆ. ಮೊದಲ ನಾಲ್ಕು ಅಧ್ಯಾಯಗಳಲ್ಲಿ ಬೆಳಕು, ಭೂಮಿ, ಜೀವಾಣು ಮತ್ತು ಜೀವ ಚೈತನ್ಯ ಪೂರೈಸಲು ಬೇಕಾದ ತಯಾರಿಗಳ ಸ್ಥೂಲ ವಿವರಣೆ ಇದೆ. ಬಳಿಕ ಬೆಳೆಗಳ ಸಂಯೋಜನೆಯ ತಾರ್ಕಿಕ ವಿವರಗಳಿವೆ.

ಪುಸ್ತಕದ ಆರಂಭಕ್ಕೇ ಅವಿನಾಶ್ ಅವರು ತಮ್ಮ ಬೌದ್ಧಿಕ ಋಣವನ್ನು ಉಲ್ಲೇಖಿಸುತ್ತಾರೆ. ಧಾಬೋಲ್ಕರ್ ಅವರ ತತ್ವಗಳನ್ನು ಅನುಭವಪ್ರೇರಿತ ಉದಾಹರಣೆಗಳ ಮೂಲಕ ಅವರು ಮಂಡಿಸುತ್ತಾರೆ. ಹಾಗೆಯೇ ನಾರಾಯಣ ರೆಡ್ಡಿಯವರು ಕಲಿಸಿದ ಪಾಠಗಳ ಬಗ್ಗೆಯೂ. ಬೆಳೆಗಳ ಸಂಯೋಜನೆಯಲ್ಲಿ ಸ್ವಾವಲಂಬಿಯಾಗುವುದನ್ನು ಸಾಧಿಸುವ ವಿವರಗಳು ಇಲ್ಲಿವೆ. ಕೃಷಿಗೆ ಅದರಲ್ಲೂ ಸುಸ್ಥಿರ ಕೃಷಿಗೆ ಬಹುಮುಖ್ಯ ಕೊಂಡಿಯಾಗಿರುವ ಪಶು ಸಾಕಣೆ ಬಗ್ಗೆ ಅವಿನಾಶ್ ತಾಳ್ಮೆಯಿಂದ ಚರ್ಚಿಸುತ್ತಾರೆ. ನಾಟಿ ಹಸುವನ್ನು ಧಾರ್ಮಿಕ ನಿಲುವಿನಲ್ಲಿ ಮುಂದಿಡುವ ಮಂದಿಯ ಮಧ್ಯೆ ಅವಿನಾಶ್ ಮಿಶ್ರ ತಳಿಗಳ ಬಗ್ಗೆಯೂ ಚರ್ಚಿಸುತ್ತಾರೆ. ಇದು ಗಮನಾರ್ಹ.

ಹಸುವಿನ ಬಳಕೆಯೇ ಇಲ್ಲದ ಚೀನಾ ಜಗತ್ತಿನಲ್ಲೇ ಅತ್ಯಧಿಕ ಸಾವಯವ ಭೂ ಪ್ರದೇಶ ಹೊಂದಿದೆ! ಹಂದಿ ಹಿಕ್ಕೆ, ಮನುಷ್ಯನ ಮಲಮೂತ್ರಗಳನ್ನು ಬಳಕೆ ಮಾಡುವ ಚೀನಾ ಕೃಷಿಯಲ್ಲಿ ಧಾರ್ಮಿಕ ಬೇತಾಳವನ್ನು ಹೆಗಲಿಗೇರಲು ಬಿಟ್ಟಿಲ್ಲ.

ಕುರಿ, ಮೇಕೆ ಸಾಕಣೆಯಲ್ಲಿ ರೋಗ ನಿಯಂತ್ರಣ ಇತ್ಯಾದಿ ಬಗ್ಗೆ ಕೆಲವು ಟಿಪ್ಸ್ ನೀಡುವ ಲೇಖಕರು ಅಧ್ಯಾಯದ ಕೊನೆಯಲ್ಲಿ, “ಇಲ್ಲಿರುವುದು ಕೇವಲ ಒಂದೆರಡು ಉದಾಹರಣೆ ಮಾತ್ರ. ನಮ್ಮ ರೈತರ ಹತ್ತಿರ, ಮೂಲ ನಿವಾಸಿಗಳಲ್ಲಿ, ದನಗಾಹಿಗಳಲ್ಲಿ ಇನ್ನೂ ಹಲವಾರು ಉತ್ತರಗಳು, ವಿಧಾನಗಳು, ನಾಟಿ ಔಷಧಿಗಳ ಭಂಡಾರವೇ ಇವೆ. ಇವುಗಳನ್ನು ಕ್ರೋಢೀಕರಿಸುವ ಕೆಲಸಕಾರ್ಯಗಳಾದಾಗ ಮಾತ್ರ ಇನ್ನೂ ಹತ್ತು ಹಲವು ಸರಳ ವಿಧಾನಗಳು ತಿಳಿಯಬಹುದು” ಎನ್ನುತ್ತಾರೆ. ಈ ಎಚ್ಚರ ಬಹಳ ಮುಖ್ಯವಾದದ್ದು.

ಅಂಚಿಗೆ ಸರಿದಿರುವ ನಮ್ಮ ದೇಶೀ ಜ್ಞಾನದ ಕೊನೆ ಕೊಂಡಿಗಳು ನಾಶವಾಗುವ ಹಂತದಲ್ಲಿ ನಾವಿದ್ದೇವೆ. ನೈಜ ವೈಜ್ಞಾನಿಕ ವಿಧಾನಗಳ ಬದಲಿಗೆ ಗತದ ಹುಂಬ ವೈಭವೀಕರಣದ ಈ ದಿನಗಳಲ್ಲಿ ವೈಜ್ಞಾನಿಕ ನಿಕಷದೊಂದಿಗೇ ಈ ಜ್ಞಾನ ರಾಶಿಯನ್ನು ಪುನಶ್ಚೇತನಗೊಳಿಸಬೇಕಿದೆ. ಧಾಬೋಲ್ಕರ್ ಮುಂದಿಟ್ಟ ಬೆಳಕಿನ ಬೇಸಾಯ ಹಾಗೂ ಹತ್ತು ಗುಂಟೆ ಜಮೀನಿನಲ್ಲಿ ಬೇಕಾದಷ್ಟು ಬೆಳೆದುಕೊಳ್ಳುವ ಮಾದರಿಗೆ ಅವಿನಾಶ್ ಟ್ರೆಂಚ್ ವ್ಯವಸ್ಥೆಯನ್ನು ಸೇರ್ಪಡೆಗೊಳಿಸುತ್ತಾರೆ. ಇದು ಸ್ವಾಗತಾರ್ಹ. ಮಲೆನಾಡಿನ ತೋಟಗಳಲ್ಲಿ ಬಹುತೇಕ ರೈತರು ಈ ಟ್ರೆಂಚ್ ಅಳವಡಿಸಿಕೊಂಡು ಕೃಷಿ ತ್ಯಾಜ್ಯ ಮರುಬಳಕೆಯನ್ನು ಮಾಡುತ್ತಿದ್ದಾರೆ. ಬಯಲು ಸೀಮೆಯಲ್ಲಿ ಈ ವಿಧಾನಕ್ಕೆ ಚಾಲನೆ ಸಿಕ್ಕರೆ ಅಲ್ಲಿಯೂ ಕೃಷಿ ಸುಧಾರಣೆ ಸಾಧ್ಯವಾಗುತ್ತದೆ.

ಈ ಕೃತಿಯಲ್ಲಿ ಮಿತಿಗಳಿಲ್ಲವೆಂದಲ್ಲ. ಕೃಷಿ ಕುರಿತಾದ ಬಹುತೇಕ ಎಲ್ಲಾ ಪುಸ್ತಕಗಳೂ ರೈತನೊಬ್ಬ ವ್ಯಕ್ತಿಯಾಗಿ ಮಾಡಬಹುದಾದ ಬದಲಾವಣೆಗಳ ಬಗ್ಗೆ ಮಾತಾಡುತ್ತವೆ. ವಿವರಣೆಗೆ ನೀಡುವ ಒಂದೋ ಎರಡೋ ಎಕರೆಯ ವಿನ್ಯಾಸದ ಮೂಲಕ ಆಸಕ್ತರು ಪ್ರಯೋಗ ಮಾಡಬಹುದೆಂಬ ಮಾದರಿಯನ್ನು ಮುಂದಿಡುತ್ತದೆ.

ಆದರೆ ನಮ್ಮ ಕೃಷಿ ಲೋಕ, ಅದರಲ್ಲೂ ಹವಾಮಾನ ಬದಲಾವಣೆಯ ಕಾರ್ಮೋಡ ಆವರಿಸಿರುವ ಈ ದಿನಗಳಲ್ಲಿ ಸಾಮುದಾಯಿಕವಾಗಿ ಸಂಕಷ್ಟ ಅನುಭವಿಸುತ್ತಿದೆ. ಒಂದು ಸಾಮುದಾಯಿಕ ಕೃಷಿ ವ್ಯವಸ್ಥೆಯಲ್ಲುಂಟಾದ ಏರುಪೇರುಗಳ ಬಗ್ಗೆ, ಈ ಪುಸ್ತಕದಲ್ಲೂ ಯಾವುದೇ ವಿಶ್ಲೇಷಣೆ ಇಲ್ಲ. ಉದಾಹರಣೆಗೆ, “ಸಾರ್ ಫೆನ್ಸ್ ಇದೆ ಅಂದ್ರೆ ಕಾಸಿರೋ ಹೊರಗಿನೋರು ಮಾಡಿರೋ ಜಮೀನು ಅಂತ ಗ್ಯಾರಂಟಿ!” ಎಂದು ರೈತನೊಬ್ಬ ನನ್ನಲ್ಲಿ ಹೇಳಿದ್ದ. ಅರ್ಥಾತ್ ಅವಿನಾಶ್ ಮುಂದಿಡುವ ಮಾದರಿಗಳ ಬಲು ದೊಡ್ಡ ಸವಾಲು ಮಳೆ ಆಶ್ರಿತ ಕೃಷಿಯ ಮೂಲಭೂತ ಅಸಹಾಯಕತೆಯಲ್ಲಿದೆ. ನೀವು ಸುಮ್ಮನೆ ಗಮನಿಸಿದರೂ ಮುಕ್ಕಾಲು ಪಾಲು ನಮ್ಮ ಕೃಷಿ ಜಮೀನುಗಳಿಗೆ ಬೇಲಿ ಇಲ್ಲ; ಅಷ್ಟೇಕೆ ಅವು ಚಿಕಣಿ ಚಿಕಣಿ ತುಂಡುಗಳಾಗಿ ಹರಿದುಹಂಚಿ ಹೋಗಿವೆ. ಈ ಭೂಮಿ ಹರಿದು ಹಂಚಾದರೆ ಹೋಗಲಿ. ಆದರೆ ಭೂಮಿಯೊಂದಿಗೆ ಮನಸುಗಳೂ ಒಡೆದು ಹೋದಂತಿವೆ. ಹತ್ತು ಎಕರೆಯಷ್ಟು ಕ್ರೋಢೀಕೃತ ಜಮೀನಿಗೆ ಸಾಮಾನ್ಯ ಬೇಲಿ, ಬೆಳೆಯನ್ನು ಸೂಚಿಸಿದರೂ ತಲೆದೂಗುವ ರೈತರು ಸಿಗುತ್ತಿಲ್ಲ. ಈ ವಾಸ್ತವ ಸಮುದಾಯ ಮತ್ತು ಸರಕಾರದ ಕರ್ತವ್ಯಲೋಪದ ಕಡೆ ಬೆಟ್ಟು ಮಾಡಿ ತೋರುತ್ತದೆ.

ಇದನ್ನೂ ಓದಿ: ಕೃಷಿಕಥನ 03: ರೈತರದು ಆತ್ಮಹತ್ಯೆಯಲ್ಲ, ಹತ್ಯೆ

ತಮ್ಮ ಟ್ರೆಂಚ್ ಮತ್ತು ಬೆಳೆ ವಿನ್ಯಾಸದ ಬಗ್ಗೆ ನಿಖರವಾಗಿ ಬರೆಯುವ ಅವಿನಾಶ್ ಮಳೆ ಆಶ್ರಿತ ಕೃಷಿಯಲ್ಲೂ ಇದು ಸಾಧ್ಯ ಎಂದಾಗ ಅದು ಅಷ್ಟೇನೂ ವಿಶ್ವಾಸಾರ್ಹವಾಗಿ ಕಾಣುವುದಿಲ್ಲ. ಅದೊಂದು ಆಶಯವಾಗಿಯಷ್ಟೇ ಕಂಡುಬರುತ್ತದೆ. ಮಣ್ಣಿನ ಪುನರುಜ್ಜೀವನ, ಬೆಳೆಗಳ ಸಾಂದ್ರೀಕರಣ ಮತ್ತು ವೈವಿಧ್ಯತೆಯ ಮಾದರಿ ಯಶಸ್ಸು ಕಾಣಲು ನೀರಿನ ಮೂಲ ಇರುವುದು ಮತ್ತು ಬೇಲಿ ಅನಿವಾರ್ಯ. ಅಂದರೆ ಆರಂಭಿಕ ಬಂಡವಾಳ ಇಲ್ಲಿ ಅಪೇಕ್ಷಿತ.

ಇದನ್ನು ಟೀಕೆಯಾಗಿ ಹೇಳುತ್ತಿಲ್ಲ. ಆದರೆ ಸಾಲದಲ್ಲಿ ಬಿದ್ದು ಕುಸಿದಿರುವ ನಮ್ಮ ರೈತರನ್ನು ಸಮದಾಯವಾಗಿ ಸುಸ್ಥಿರ ಕೃಷಿಯತ್ತ ಒಯ್ಯುವ ಮಾರ್ಗೋಪಾಯಗಳ ಬಗ್ಗೆ ನಾವು ಇಂದು ಹೆಚ್ಚು ಚರ್ಚಿಸಬೇಕಾಗಿದೆ. ಈ ಅರಿವು ’ಬೆಳಕಿನ ಬೇಸಾಯ’ ಲೇಖಕ ಅವಿನಾಶ್ ಅವರಿಗೆ ಇದೆ ಎಂಬುದಕ್ಕೆ ಪುಸ್ತಕದಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಆದರೆ ಅವು ಮುಖ್ಯ ಪ್ರಸ್ಥಾನವಾಗಿಲ್ಲ. ಮುಂದಿನ ಕೃತಿಗಳಲ್ಲಿ ಅವಿನಾಶ್ ಈ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದು ಎಂಬ ನಿರೀಕ್ಷೆ ನನ್ನದು.

ಸುಸ್ಥಿರ ಕೃಷಿಯ ಬಗೆಗಿನ ಈ ಮೌಲಿಕ ಕೃತಿ ಬೇಸಾಯದಲ್ಲಿ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಎಲ್ಲಾ ಆಸಕ್ತರಿಗೂ ಖಂಡಿತಾ ಕೈಪಿಡಿಯಾಗಬಲ್ಲದು.

ಪುಸ್ತಕ: ಬೆಳಕಿನ ಬೇಸಾಯ
ಲೇಖಕರು: ಅವಿನಾಶ್ ಟಿ.ಜಿ.ಎಸ್
ಪ್ರಕಟಣೆ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: 235 ರೂಗಳು
ಪುಸ್ತಕಗಳಿಗಾಗಿ ಸಂಪರ್ಕಿಸಿ: 9449174662

 

ಕೆ.ಪಿ.ಸುರೇಶ್

ಕೆ.ಪಿ.ಸುರೇಶ್
ಇಂಗ್ಲಿಷ್ ಅಧ್ಯಾಪಕರಾಗಲು ಎಂ.ಎ ಓದಿದ್ದ ಕೆ.ಪಿ.ಸುರೇಶ ಅವರು ಕೃಷಿಯಲ್ಲಿ ತೊಡಗಲು ಸುಳ್ಯ ತಾಲೂಕಿನ ತಮ್ಮ ಊರಿಗೆ ಮರಳಿದ್ದರು. ತಮ್ಮ ಸ್ವಂತ ಅನುಭವ, ಅಧ್ಯಯನ ಹಾಗೂ ಒಳನೋಟಗಳ ಕಾರಣಕ್ಕೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ವಿಚಾರದಲ್ಲಿ ತಜ್ಞರಿಗೂ, ರೈತರಿಗೂ ಪಾಠ ಮಾಡಬಲ್ಲರು. ಅಪಾರ ಕೀಟಲೆಯ ಸ್ವಭಾವದ ಅವರು ಹಲವು ವಿಚಾರಗಳ ಕುರಿತು ಬರೆಯುತ್ತಿರುವ ಆಲ್‌ರೌಂಡರ್ ಕೂಡ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...