Homeಮುಖಪುಟಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

ಕುವೆಂಪು ಅವರ ’ಬ್ರಹ್ಮ ನಾಯಿ-ಶೂದ್ರ ಕೋಳಿ’ ಕವನವೂ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಪುಸ್ತಕವೂ..

- Advertisement -
- Advertisement -

ಕಳೆದ 40 ವರ್ಷಗಳ ಕಾಲ ಆರ್‌ಎಸ್‌ಎಸ್‌ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ ಹನುಮೇಗೌಡರು ಅಲ್ಲಿ ತಮಗಾದ ಅನುಭವಗಳನ್ನು, ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬ ಈ ಕಿರು ಹೊತ್ತಿಗೆಯಲ್ಲಿ ಅನಾವರಣ ಮಾಡಿದ್ದಾರೆ. ಸಂಘದ ಕರಾಳ ಮುಖ ಮುಚ್ಚಿಟ್ಟರೆ ಸಮಾಜಕ್ಕೆ ದ್ರೋಹ ಮಾಡಿದಂತೆ ಎಂಬ ಆತ್ಮಸಾಕ್ಷಿಗೆ ಓಗೊಟ್ಟು ಹನುಮೇಗೌಡರು ರಾಜ್ಯದ ಜನತೆಗೆ ಸತ್ಯದರ್ಶನ ಮಾಡಿಸಲು ಹೊರಟಿದ್ದಾರೆ. ಅಲ್ಲಿ ತಾವು ಅನುಭವಿಸಿದ ಮಾನಸಿಕ ಹಿಂಸೆ, ನೋವುಗಳು ಭವಿಷ್ಯದಲ್ಲಿ ಬೇರಾರಿಗೂ ಬರದಿರಲಿ ಎಂಬ ಸದುದ್ದೇಶ ಅವರದಾಗಿದೆ. ಆದ ಕಾರಣ ಆರ್‌ಎಸ್‌ಎಸ್‌ನ ಕಾನೂನು ಬಾಹಿರ ಒಳವ್ಯವಹಾರಗಳನ್ನು ಎಳೆಎಳೆಯಾಗಿ ಹೊರಹಾಕುತ್ತಿದ್ದಾರೆ. ಸಾರ್ವಜನಿಕರಿಗೆ ಸಂಘಪರಿವಾರದ ಮುಖವಾಡವನ್ನು ತೆಗೆದು ನಿಜವಾದ ಮುಖವನ್ನು ಅನಾವರಣ ಮಾಡಿದ್ದಾರೆ.

ದೇಶಭಕ್ತಿ, ಹಿಂದುತ್ವ, ಶಿಸ್ತು-ತ್ಯಾಗ-ಸೇವೆ, ನಿಸ್ವಾರ್ಥ, ಪ್ರಾಮಾಣಿಕತೆ, ಶುದ್ಧತೆ-ಬದ್ಧತೆ, ಗೋಭಕ್ತಿ ಸಂಸ್ಕೃತಿಯ ಸಂಸ್ಕಾರಗಳ ಪಡೆದಿದ್ದೇವೆಂದು, ನಿಜ ದೇಶಭಕ್ತರು ತಾವೇ ಎನ್ನುತ್ತಾ ಪರಮ ವೈಭವದ ಸ್ಥಿತಿಗೆ ಭಾರತವನ್ನು ಕೊಂಡೊಯ್ದು ರಾಮರಾಜ್ಯ ನಿರ್ಮಾಣ ಮಾಡುತ್ತೇವೆಂದು ಹೊರಟ ದೇಶೋದ್ಧಾರಕ ಭಕ್ತರು-ದೇಶದ ನಿಜ ಬೆಳವಣಿಗೆಗೆ ಕಟಿಬದ್ಧರಾದ ನಾಯಕರಿಂದ ನಿರೀಕ್ಷಿತ ಫಲ ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಬದುಕಿಗೆ ಬೇಕಾದ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಗಳಿಗೆ ಕಾರಣರಾದವರಿಂದಲೇ ರೈಲು, ವಿಮಾನ, ಬ್ಯಾಂಕು, ಮುಂತಾದ ದೇಶದ ಸ್ವತ್ತುಗಳ ಮಾರಾಟದ ಕೆಲಸಗಳನ್ನು ನೋಡುತ್ತಾ, ಇವರ ಸುಳ್ಳು ಭಾಷಣಗಳ ಕೇಳುತ್ತಾ ಅಂಧಭಕ್ತಿಯಲ್ಲಿ ಮೈಮರೆತಿದ್ದಾರೆ. ಯಾವುದೇ ’ಸಂಸ್ಕಾರವಂತರು’ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದ, ಭರವಸೆಗಳ ಪೊಳ್ಳು ಭಾಷಣಗಳ ಮಾಡದ, ಅನ್ಯಪಕ್ಷದ ನಾಯಕರನ್ನ ನಿಂದಿಸುತ್ತಾ ಆತ್ಮವಂಚನೆಗೆ ಮುಂದಾಗಿದ್ದಾರೆ. ಆದರೆ, ನಿಷ್ಪಕ್ಷಪಾತಿಯಾದ ಮತ್ತು ವಿಚಾರವಂತಿಕೆಗೆ ತೆರೆದುಕೊಳ್ಳಲು ಸಾಧ್ಯವಾದ ಕೆಲವು ಸ್ವಯಂಸೇವಕರು ಈಗ ವಿಮರ್ಶೆ ಮಾಡಲು ಮುಂದಾಗಿದ್ದಾರೆ.

ಆರ್‌ಎಸ್‌ಎಸ್ ಜನತೆಗೆ ನಂಬಿಕೆ ದ್ರೋಹ ಮಾಡಿ, ಹಿಂದುತ್ವವಾದಿ ಹೆಸರಿನಲ್ಲಿ ಬಿಜೆಪಿ ಮುಖವಾಡ ಧರಿಸಿ ರಾಜ್ಯದ ಯುವಕರ ದಾರಿ ತಪ್ಪಿಸಿ, ಬಾಲಕರನ್ನು ಸೆಳೆದು ಅವರ ಚಿಂತನಾ ಶಕ್ತಿಯನ್ನು ಕುಗ್ಗಿಸಿ, ಅವರ ತಲೆಗೆ ಸುಳ್ಳಿನ ಕಂತೆಗಳನ್ನು ತುಂಬಿ, ಯುವಶಕ್ತಿಯನ್ನು ಬಳಸಿ ಬಿಸಾಡುತ್ತಿದೆ. ಕಪಟ ಗೋಭಕ್ತಿಯ ನಾಟಕ ಮಾಡುತ್ತಿದೆ. ಸಂವಿಧಾನ ವಿರೋಧಿ ಮನುಧರ್ಮವಾದಿ ಕುತಂತ್ರದ ರೂಪವಾಗಿದೆ ಆರ್‌ಎಸ್‌ಎಸ್ ಎಂದೆನ್ನುವ ಹನುಮೇಗೌಡರು ’ನಾನೇಕೆ ಈ ಪುಸ್ತಕ ಬರೆದೆ’ ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.

’ಆರ್‌ಎಸ್‌ಎಸ್‌ನ ಸ್ವಯಂಸೇವಕರು ಶಿಸ್ತು-ತ್ಯಾಗ-ಸೇವೆಗೆ ಸದಾ ಸಿದ್ಧರು. ನಂಬಿಕೆ ಪ್ರಾಮಾಣಿಕತೆಗೆ ಯೋಗ್ಯರು. ಪ್ರತಿಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥಿಗಳಾಗಿ ಬದ್ಧತೆ-ಶುದ್ಧತೆಗಳಿಂದ ದೇಶ ಧರ್ಮಕ್ಕಾಗಿ ದುಡಿಯುತ್ತಾರೆ’ ಎಂಬುದಾಗಿ ನಮ್ಮ ಜನ ಮೆಚ್ಚುತ್ತಾರೆ. ಅದೇ ಕಾರಣಕ್ಕೆ ಸಂಘದ ವಿರೋಧಿಗಳೂ ಸಹ ಸಂಘದ ಕಾರ್ಯಶೈಲಿ, ಶಿಸ್ತು ಬದ್ಧತೆಗಳನ್ನು ಒಪ್ಪುತ್ತಾರೆ. ಇಂತಹ ಸಂಘಟನೆಯಲ್ಲಿರುವ ಶೇ.95ರಷ್ಟು ಕೆಳಹಂತದ ಸ್ವಯಂಸೇವಕರು ಇಂದಿಗೂ ಪ್ರಾಮಾಣಿಕರು ಮತ್ತು ಅಮಾಯಕರು. ಹಣವಿಲ್ಲ, ಹಣದ ಹಂಬಲವಿಲ್ಲ, ಅಧಿಕಾರದ ಅಂದಣವಿಲ್ಲ, ಜನವಿಲ್ಲ, ಜನದ ಬೆಂಬಲವಿಲ್ಲ, ಅನುಕೂಲತೆಗಳ ಸುಳಿವಿಲ್ಲ ಎಂಬ ಹಾಡಿನೊಂದಿಗೆ ಮೈಮರೆಯುವವರು ಇವರು. ಆದರೆ ಈ ಶೇ.95ರಷ್ಟಿರುವ ಸ್ವಯಂಸೇವಕರೆಲ್ಲ ಹಿಂದುಳಿದ ವರ್ಗದವರು ಮತ್ತು ಶೂದ್ರ ಜನಾಂಗದವರು ಎಂಬುದು ಇಲ್ಲಿ ಮುಖ್ಯ. ಇವರೆಲ್ಲರೂ ಸಂಘದ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಸಂಘದ ಪ್ರಮುಖರನ್ನು ಪ್ರಶ್ನಿಸಬಾರದು. ಇದೊಂದು ಸರ್ವಾಧಿಕಾರಿ ಧೋರಣೆ. ಪ್ರಮುಖರ ಮಾತಿಗೆ ಮರುಮಾತಿಲ್ಲದೆ ಕೆಲಸ ಮಾಡಬೇಕು. ಒಂದು ರೀತಿಯಲ್ಲಿ ಗುಲಾಮಿ ಮನೋಭಾವನೆಗೆ ಹೊಂದಿಕೊಂಡಿರಬೇಕು. ಇದನ್ನು ಹಿಟ್ಲರ್‌ನ ಸರ್ವಾಧಿಕಾರ ಮತ್ತು ಫ್ಯಾಸಿಸಂ ಎಂದು ಕರೆಯಬಹುದು. ಇಂತಹ ಸೂಕ್ಷ್ಮತೆ ಗಮನಿಸಿದವರು ಪ್ರಾರಂಭದಲ್ಲಿಯೇ ಸಂಘಟನೆಯಿಂದ ದೂರ ಸರಿಯುತ್ತಾರೆ. ಧರ್ಮ, ದೇಶ, ಹಿಂದುತ್ವ ಎಂದು ಮುಂತಾಗಿ ಕೆಲವರು ಹಲವು ವರ್ಷಗಳ ಕಾಲ ಸಹಿಸಿಕೊಂಡು ಮುಂದುವರಿಯುತ್ತಾರೆ. ಮತ್ತೆ ಕೆಲವರು ಸಂಘದ ಪ್ರಮುಖರ ಮಾತಿನ ಮೋಡಿಗೆ ಒಳಗಾಗಿ ಭಕ್ತರಾಗುತ್ತಾರೆ. ಆದರೆ ಹಿಡನ್ ಅಜೆಂಡಾ ಹೊಂದಿದ ಶೇ.5ರಷ್ಟು ಸ್ವಯಂಸೇವಕರು, ಪ್ರಮುಖರು, ಕಾರ್ಯಕರ್ತರು ಮತ್ತು ಪ್ರಚಾರಕರು ಶೇ.95ರಷ್ಟು ಸ್ವಯಂಸೇವಕರನ್ನು ದುರ್ಬಳಕೆ ಮಾಡಿಕೊಂಡು ಬಳಸಿ ಬಿಸಾಡುತ್ತಿದ್ದಾರೆ. ಆ ರೀತಿ ಬಳಸಿ ಬಿಸಾಕಿದ ಕಾರ್ಯಕರ್ತರಲ್ಲಿ ನಾನೂ ಒಬ್ಬ- ಎಂದು ತಮ್ಮ ನೋವನ್ನು ವ್ಯಕ್ತಪಡಿಸಿರುತ್ತಾರೆ- ಹನುಮೇಗೌಡರು. ಹಾಗೆಯೇ ಬೃಹದಾಕಾರವಾಗಿ ಬೆಳೆದು ನಿಂತಿರುವ ಆರ್‌ಎಸ್‌ಎಸ್ ಸಂಘಟನೆಯು ಯಾವ ದಾಖಲೆಯೂ ಇಲ್ಲದ ಬೇನಾಮಿ ಸಂಘಟನೆಯಾಗಿದೆ ಎಂಬುದನ್ನು ಮನಗಾಣಿಸುತ್ತಾರೆ.

ಇದನ್ನೂ ಓದಿ: ಕೃತಿ ವಿಮರ್ಶೆ: ಆರ್‌ಎಸ್‌ಎಸ್‌ ಜಾತಿ ರಾಜಕೀಯ ಕನಸುಗಳ ಸಾಕಾರಕ್ಕೆ ಟಿಪ್ಪು ಹೆಸರಲ್ಲಿ ನಕಲಿ ಇತಿಹಾಸ ಸೃಷ್ಟಿ!

ನಾನು ಈ ಸಂಘಟನೆಗೆ ಸದಸ್ಯ ಎಂದು ದಾಖಲೆ ಒದಗಿಸಲು ಯಾವ ಕಾರ್ಯಕರ್ತನಿಗೂ ಸಾಧ್ಯವಾಗದು. ಈ ಪರಿಸ್ಥಿತಿಯಲ್ಲಿ ನಾನು ಅನುಭವಿಸಿದ ನೋವು, ಅವಮಾನ ಮತ್ತ್ಯಾರೂ ಅನುಭವಿಸಬಾರದು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದೇನೆ. ನಾನು ನನ್ನ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೇನೆ. ಆದ್ದರಿಂದ ನಾನು ಮೌನಕ್ಕೆ ಶರಣಾಗದೆ, ದೇಶದ ಜನತೆಗೆ ಸತ್ಯ ದರ್ಶನ ಮಾಡಿಸಬೇಕು ಎಂದು ನಿರ್ಧರಿಸಿದ್ದೇನೆ. ಭವಿಷ್ಯದಲ್ಲಿ ದೇಶದ ಮಕ್ಕಳು, ಯುವಕರು ಆರ್‌ಎಸ್‌ಎಸ್ ಸಂಘಟನೆಯ ವಂಚನೆಯ ಜಾಲಕ್ಕೆ ಸಿಲುಕದೆ, ಮೋಸದ ಕೂಪಕ್ಕೆ ಬೀಳದೆ, ಬೀದಿ ಹೆಣವಾಗದೆ, ತಂದೆ ತಾಯಿಗಳ ಋಣ ತೀರಿಸಿ, ಧನ್ಯತೆ ಪಡೆಯುವಂತಾಗಲಿ ಎನ್ನುವ ಕಳಕಳಿ ನನ್ನದು. ನಾನು ಮತ್ತು ನನ್ನಂತೆ ದಾರಿ ತಪ್ಪಿದವರು ತಂದೆ ತಾಯಿಯರಿಗೆ ನೋವು ಕೊಡುವುದೂ ಬೇಡ; ಮಕ್ಕಳು ಬೀದಿ ಹೆಣವಾಗುವುದೂ ಬೇಡ; ಕೋಮು ದಳ್ಳುರಿಯಲ್ಲಿ ಸಿಲುಕಿ ಜೈಲುಪಾಲಾದ ಮಕ್ಕಳ ತಂದೆ ತಾಯಂದಿರಂತೆ ಮತ್ತ್ಯಾರೂ ನೋವಿಗೆ ಸಿಗಬಾರದೆಂಬುದು ನನ್ನ ದೃಢ ನಿಲುವಾಗಿದೆ. ಈಗಾಗಲೇ ಬೀದಿ ಹೆಣವಾಗಿ, ಜೈಲು ಪಾಲಾಗಿ, ಬಳಸಿ ಬಿಸಾಡಿದ ಮಕ್ಕಳ ನೋವಿನಲ್ಲಿ ಕೊರಗಿ ಸೊರಗಿ ಸ್ವರ್ಗವಾಸಿ ಆದವರಿಗೂ ಮುಕ್ತಿ ಸಿಗುವಂತಾಗಲಿ ಎಂಬ ಆಶಾಭಾವನೆ ನನ್ನದಾಗಿದೆ. ನನ್ನಂತೆ ನೋವುಂಡವರು, ತುಳಿತಕ್ಕೆ ಒಳಗಾದವರು, ಧ್ವನಿಕಳೆದುಕೊಂಡು ಅಸಹಾಯಕರಾಗಿರುವ ಸ್ವಯಂಸೇವಕರು ನನಗೆ ತಿಳಿಸಿದ ಒಂದಷ್ಟು ವಿಷಯಗಳನ್ನೂ ಈ ಹೊತ್ತಿಗೆಯಲ್ಲಿ ಸೇರಿಸಿರುತ್ತೇನೆ. ಅವರಿಗೂ ನ್ಯಾಯ ಸಿಗುವಂತಾಗಲಿ.

ಕುವೆಂಪು

ಹೀಗೆ ಇವತ್ತಿಗೂ ದೇಶದಲ್ಲಿ ಇದೇ ಪರಿಸ್ಥಿತಿ ಇದೆ. ಆಡಿಸುವಾತ ಬೀಳಿಸುವಾತ ’ರಿಮೋಟ್ ಕಂಟ್ರೊಲ್’ ಹಿಡಿದು ಎಲ್ಲೋ ಕುಳಿತಿರುತ್ತಾನೆ. ಅವನ ಒಂದು ಕೂದಲೂ ಕೊಂಕುವುದಿಲ್ಲ. ಆದರೆ ಸಂಘಕ್ಕೆ ಸೇರ್ಪಡೆಯಾಗಿ ಬ್ರೈನ್‌ವಾಷ್ ಆದ ಶೂದ್ರವರ್ಗದ ಕಾರ್ಯಕರ್ತರು ಹಿಂದುತ್ವ-ಬಿಜೆಪಿ ಎಂದು ತಮ್ಮ ತಮ್ಮಲ್ಲೇ ಬಡಿದಾಡಿ ಹೊಡೆದಾಡಿ ಸಾಯುತ್ತಾರೆ. ಕಾರ್ಯಕರ್ತರನ್ನು ಪ್ರಚೋದಿಸುವುದೇ ಆರ್‌ಎಸ್‌ಎಸ್‌ನ ಹುಟ್ಟುಗುಣ ಎನ್ನುತ್ತಾರೆ ಗೌಡರು. ಹೀಗೆ ಕಾರ್ಯಕರ್ತರನ್ನು ಬಲಿಗೊಟ್ಟು ಅಧಿಕಾರ ಹಿಡಿವ ಹಿಂದುತ್ವವಾದಿಗಳು ಆಮೇಲೆ ಏರಿದ ಏಣಿಯನ್ನು ಒದ್ದು ಅವರ ಕಷ್ಟನಷ್ಟದತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಈ ಕಾರಣಕ್ಕಾಗಿಯೇ ಪತ್ರಕರ್ತೆ ಗೌರಿ ಲಂಕೇಶ್ ಅವರು ’ನೀವು ಸಂಘಪರಿವಾರದ ಕೈ ಹತಾರಗಳಾಗಬೇಡಿ; ಏಳಿ, ಎಚ್ಚರಗೊಳ್ಳಿ ನಿಮ್ಮ ಹಕ್ಕುಗಳನ್ನು ಮರೆಯದಿರಿ’ ಎಂದು ಎಚ್ಚರಿಸುತ್ತಿದ್ದರು. ಅದೇ ಕಾರಣಕ್ಕೆ ಅವರು ಹಂತಕನ ಗುಂಡಿಗೆ ಬಲಿಯಾದರು. ಕೊಲೆಗಾರ ಯಾರೆಂಬುದಕ್ಕೆ ಇನ್ನೂ ವಿಚಾರಣೆಯಾಗುತ್ತಿದೆ!

ಹನುಮೇಗೌಡರು ಬಿಚ್ಚಿಡುವಂತೆ ಪ್ರತಿಪಕ್ಷದ ಹಲವಾರು ರಾಜಕಾರಣಿಗಳಿಗೂ ಕೂಡ ನಿಜವಾದ ಸಾಮಾನ್ಯ ಕಾರ್ಯಕರ್ತರ ಶುದ್ಧತೆ ಬದ್ಧತೆ ಏನೇನೂ ಇರುವುದಿಲ್ಲ; ವಿರೋಧಪಕ್ಷದಲ್ಲಿರುವಾಗ ಸಂಘಪರಿವಾರವನ್ನು ಬಾಯಿಗೆ ಬಂದಂತೆ ಅವರು ದೂಷಿಸುತ್ತಾರೆ; ಆದರೆ ಅಂಥವರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿ ಒಳಬರಮಾಡಿಕೊಂಡ ಕೂಡಲೇ ಅವರೆಲ್ಲರೂ ಸಂಪನ್ನರೂ ಶುದ್ಧರೂ ಬದ್ಧರೂ ಪ್ರಾಮಾಣಿಕರೂ ಆಗಿಬಿಡುತ್ತಾರೆ. ಇದೇ ವ್ಯಂಗ್ಯ! ಬಿಜೆಪಿಗೆ ಬಹುಮತ ಒಂದಿದ್ದರೆ ಸಾಕು; ಸಿದ್ಧಾಂತಕ್ಕೆ ತಿಲಾಂಜಲಿ ಕೊಟ್ಟರೂ ಪರವಾಗಿಲ್ಲ. ಹೀಗಾಗಿ ನಿಜವಾಗಿ ದುಡಿವ ಸ್ವಯಂಸೇವಕರನ್ನು ಆರ್‌ಎಸ್‌ಎಸ್ ಮೂಲೆಗುಂಪಾಗಿಸುತ್ತದೆ. ಇಂಥ ಕಠೋರ ಸತ್ಯಗಳಿಗೆ ಈ ಕಿರು ಪುಸ್ತಕ ಕನ್ನಡಿಯಾಗಿದೆ.

ಇದನ್ನೂ ಓದಿ: ’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ ಮಾತುಕತೆ

ಕೊನೆಯದಾಗಿ, ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬ ಪುಸ್ತಕವನ್ನು ಓದುತ್ತಿದ್ದರೆ ರಾಷ್ಟ್ರಕವಿ ಕುವಂಪು ಅವರು 1967ರಲ್ಲಿ ಬರೆದ ಪ್ರೇತ-ಕ್ಯೂ ಕವನ ಸಂಕಲನದ ’ಬ್ರಾಹ್ಮ ನಾಯಿ-ಶೂದ್ರ ಕೋಳಿ’ ಎಂಬ ಪದ್ಯ ನೆನಪಾಗುತ್ತದೆ. ’ವರ್ಣೋತ್ಪತ್ತೀಯ, ವರ್ಣ ಸ್ಪರ್ಧೆಯ, ವರ್ಣ ಸಂಘರ್ಷಗಳ ಹಾಗೂ ಅವುಗಳ ದುಷ್ಪರಿಣಾಮದ ಕತೆಯೇ ಭರತಖಂಡದ ಇತಿಹಾಸ. ಬ್ರಾಹ್ಮಣ್ಯದವರ ಕುತಂತ್ರಕ್ಕೆ ಮುಗ್ಧ ಶೂದ್ರರು ಹೇಗೆ ಬಲಿಯಾಗುತ್ತಿದ್ದಾರೆಂಬುದೇ ’ಬ್ರಾಹ್ಮ ನಾಯಿ-ಶೂದ್ರ ಕೋಳಿ’ ಕವನದ ವಸ್ತು. ನಡೆದೊಂದು ಘಟನೆಯಿಂದ ಈ ಕವಿತೆ ಪ್ರೇರಿತವಾಯಿತೆಂದು ಕವಿಗಳೇ ಅಡಿ ಟಿಪ್ಪಣಿಯಲ್ಲಿ ಹೇಳಿದ್ದಾರೆ:

1

ಶೂದ್ರ ಕೋಳಿ ಮೇಯುತ್ತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮ ನಾಯಿ ಹೊಂಚುತ್ತಿತ್ತು
ಅಲ್ಲಿ ಇಲ್ಲಿ.
ಶೂದ್ರ ಕೋಳಿಗೇನು ಗೊತ್ತು
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮನೆ ಮೇಯುತ್ತಿತ್ತು

2

ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಿನಲ್ಲಿ ಖಾಲಿ ಹೊಟ್ಟೆ
ಮೆಲ್ಲ ಮೆಲ್ಲ ಸುಳಿದು ಸುತ್ತಿ
ಹತ್ತೆ ಬಂತು
ಸಾಧು ಎಂದು ಶೂದ್ರ ಕೋಳಿ
ನೋಡೆ ನಿಂತು.
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್‍ವವೀಡನೊಂದು ಗೋಡೆ
ರಕ್ಷೆಯಾಯ್ತು;
ಪಾರ್ವನಾಯ್ಗೆ ಶೂದ್ರ ಕೋಳಿ
ಭಕ್ಷ್ಯವಾಯ್ತು!

ಪ್ರಸ್ತುತ ಹನುಮೇಗೌಡರ ’ಆರ್‌ಎಸ್‌ಎಸ್ ಕರಾಳ ಮುಖಗಳು’ ಎಂಬೀ ಪುಸ್ತಕವು ಕುವೆಂಪು ಅವರ ’ಬ್ರಾಹ್ಮ ನಾಯಿ – ಶೂದ್ರ ಕೋಳಿ’ ಎಂಬ ಕವಿತೆಗೆ ಬರೆದ ಆಧುನಿಕ ಭಾಷ್ಯವೊ ಎಂಬಂತಿದೆ.

***

(ಇಲ್ಲಿ ಬರುವ ಬ್ರಾಹ್ಮ ಎಂಬ ಮಾತು ಸಂಕುಚಿತ ಮನೋಧರ್ಮದ ಬ್ರಾಹ್ಮಣತನಕ್ಕೆ ಅನ್ವಯವಾಗುತ್ತದೆಯೇ ಹೊರತು ಬ್ರಾಹ್ಮಣ ಜಾತಿಗಲ್ಲ ಎಂದು ತಿಳಿಯಬೇಕಾಗುತ್ತದೆ ಎಂದು ಕುವೆಂಪು ಟಿಪ್ಪಣಿ ಹಾಕಿದ್ದಾರೆ.)

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...