Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ನಾವು ಒಂದು ಕ್ರಾಂತಿಯನ್ನು ಪದಕೋಶದ ಅರ್ಥದಲ್ಲಿ- ಸರಳವಾಗಿ, ಈಗಿರುವ ಸರಕಾರವನ್ನು ಶಾಂತಿಯುತವಾಗಿ ಅಥವಾ ಹಿಂಸಾತ್ಮಕವಾಗಿ ಕಿತ್ತೆಸೆಯುವುದು ಮತ್ತದರ ಜಾಗದಲ್ಲಿ ಹೊಸ ಸರಕಾರವೊಂದನ್ನು ಸ್ಥಾಪಿಸುವುದು ಎಂದು ಹೇಳುವುದರ ಮೂಲಕ ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇದೊಂದು ಬಹಳ ಔಪಚಾರಿಕ ರಾಜಕೀಯ ವ್ಯಾಖ್ಯಾನವಾದರೂ, ನಿರ್ದಿಷ್ಟವಾಗಿ ಅಷ್ಟೇನೂ ಅರ್ಥಪೂರ್ಣವಲ್ಲ. ನಾವು ಒಂದು ರೀತಿಯ ಹೆಚ್ಚು ಮಾರ್ಕ್ಸ್‌ವಾದಿ ಅರ್ಥದಲ್ಲಿ ಒಂದು ಕ್ರಾಂತಿಯನ್ನು, ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಂದನ್ನು ಹೆಚ್ಚು ಪ್ರಗತಿಪರವಾದ ವ್ಯವಸ್ಥೆಯಿಂದ ಬದಲಿಸುವುದು ಎಂದು ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇಲ್ಲಿ ಪ್ರಶ್ನೆಯೊಂದು ಯಾವಾಗಲೂ ಏಳುತ್ತದೆ; ಏನೆಂದರೆ, ಯಾವುದು “ಐತಿಹಾಸಿಕವಾಗಿ ಹೆಚ್ಚು ಪ್ರಗತಿಪರ” ಎಂಬುದನ್ನು ನಿರ್ಧರಿಸುವವರು ಯಾರು ಎಂಬುದು. ಸಾಮಾನ್ಯವಾಗಿ- ಕನಿಷ್ಟ ಪಕ್ಷ ತಮ್ಮತಮ್ಮ ದೇಶದಲ್ಲಾದರೂ- ಅದು ಗೆದ್ದವರೇ ಆಗಿರುತ್ತಾರೆ.

ಅಂತಿಮವಾಗಿ, ಒಂದು ಕ್ರಾಂತಿಯನ್ನು ಕ್ರಾಂತಿಕಾರಿ ಗುಣಸ್ವಭಾವ ಹೊಂದಿರುವವರ ನೇತೃತ್ವವಿರುವ, ಕ್ರಾಂತಿಕಾರಿ ಗುಣಸ್ವಭಾವದ ಜನರನ್ನು ಆಕರ್ಷಿಸುವ ಒಂದು ರಾಜಕೀಯ ಚಳವಳಿ ಎಂದು ಹೇಳುವ ಮೂಲಕ ನಾವು ಮನಃಶಾಸ್ತ್ರೀಯ ಅರ್ಥದಲ್ಲಿ ವ್ಯಾಖ್ಯಾನಿಸಬಹುದು.

ಅದು, ಖಂಡಿತವಾಗಿಯೂ, ಅಂತಾ ಉತ್ತಮ ವ್ಯಾಖ್ಯಾನವೇನಲ್ಲವಾದರೂ, ಈ ಪ್ರಬಂಧದ ನಿಲುವಿನಿಂದ ನೋಡಿದಲ್ಲಿ, ಒಂದು ಉಪಯುಕ್ತ ಹೇಳಿಕೆಯಾಗಿದ್ದು, ಈಗ ಚರ್ಚಿಸಲಿರುವ ಪ್ರಶ್ನೆಯ ಮೇಲೆ ಎಲ್ಲಾ ಒತ್ತನ್ನು ನೀಡುತ್ತದೆ: ಅದೆಂದರೆ, ಯಾವುದು ಕ್ರಾಂತಿಕಾರಿ ಗುಣಸ್ವಭಾವ?

“ಕ್ರಾಂತಿಕಾರಿ ಗುಣಸ್ವಭಾವ”ದ ಅತ್ಯಂತ ಮೂಲಭೂತ ಗುಣಲಕ್ಷಣ ಎಂದರೆ, ಆತ ಸ್ವತಂತ್ರ ಮತ್ತು ಮುಕ್ತ. ಸ್ವಾತಂತ್ರ್ಯ ಎಂದರೆ, ಮೇಲಿರುವ ಬಲಶಾಲಿಗಳಿಗೆ ಸಹವಾಸದ ನಿಷ್ಠೆಯ ಮತ್ತು ನಾನು ಹಿಂದೆ ಸರ್ವಾಧಿಕಾರಿ ಗುಣಸ್ವಭಾವದ ಕುರಿತು ಮಾತನಾಡುವಾಗ ವಿವರಿಸಿದ ತಮಗಿಂತ ಕೆಳಗಿರುವ ಬಲಹೀನರ ಬಗೆಗಿನ ನಿಷ್ಠೆಯ ತದ್ವಿರುದ್ಧವಾದದ್ದು ಎಂದು ಮನಗಾಣುವುದು ಸುಲಭ.

ಆದರೆ, ಇದು “ಮುಕ್ತತೆ” ಮತ್ತು “ಸ್ವಾತಂತ್ರ್ಯ” (ಇಂಡಿಪೆಂಡೆನ್ಸ್ ಮತ್ತು ಫ್ರೀಡಂ) ಎಂದರೆ ಏನು ಎಂಬುದನ್ನು ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. ಸಮಸ್ಯೆ ಇರುವುದು ನಿರ್ದಿಷ್ಟವಾಗಿ “ಫ್ರೀಡಂ” ಮತ್ತು “ಇಂಡಿಪೆಂಡೆನ್ಸ್” ಎಂಬ ಪದಗಳನ್ನು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಪ್ರತಿಯೊಬ್ಬರೂ ಮುಕ್ತರು ಮತ್ತು ಸ್ವತಂತ್ರರು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. (ಕನ್ನಡದಲ್ಲಿ ಎರಡೂ ಪದಗಳನ್ನು ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ- ಅನುವಾದಕನ ಟಿಪ್ಪಣಿ). ಈ ಎರಡೂ ಪದಗಳ ಪರಿಕಲ್ಪನೆಯ ಬೇರು ಇರುವುದು ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದ ಕ್ರಾಂತಿಯಲ್ಲಿ ಮತ್ತು ಅವುಗಳನ್ನು ಪ್ರಭುತ್ವಗಳ ತದ್ವಿರುದ್ಧವಾಗಿ ಇಟ್ಟು ನೋಡುವುದರಿಂದ ಅವು ಹೊಸ ಶಕ್ತಿಯನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

ಊಳಿಗಮಾನ್ಯ ಮತ್ತು ರಾಜಾಡಳಿತದ ಸರ್ವಾಧಿಕಾರದ ವ್ಯವಸ್ಥೆಯ ಕಾಲದಲ್ಲಿ, ವ್ಯಕ್ತಿಯು ಮುಕ್ತನಾಗಲೀ, ಸ್ವತಂತ್ರನಾಗಲೀ ಆಗಿರಲಿಲ್ಲ. ಆತ ತನಗಿಂತಲೂ ಮೇಲಿನವರ ಸಾಂಪ್ರದಾಯಿಕ ಅಥವಾ ನಿರಂಕುಶ ನಿಯಮ, ಕಾನೂನು ಮತ್ತು ಆಜ್ಞೆಗಳಿಗೆ ಅಧೀನನಾಗಿದ್ದ. ಯೂರೋಪ್ ಮತ್ತು ಅಮೆರಿಕಾದಲ್ಲಿ ಬೂರ್ಜ್ವಾ (bourgeois, ಮಧ್ಯಮ ವರ್ಗ) ಕ್ರಾಂತಿಗಳು ವ್ಯಕ್ತಿಗೆ ರಾಜಕೀಯ ಮುಕ್ತತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟವು.

ಈ ಸ್ವಾತಂತ್ರ್ಯವು “ಒಂದದಿಂದ ಸ್ವಾತಂತ್ರ್ಯ” ಆಗಿತ್ತು. ಅಂದರೆ, ರಾಜಕೀಯ ಅಧಿಕಾರಸ್ಥರಿಂದ ಸ್ವಾತಂತ್ರ್ಯ ಆಗಿತ್ತು. ಇಂದಿನ ಕೈಗಾರಿಕಾವಾದವು ಹೊಸ ರೀತಿಯ ಅಧಿಕಾರಶಾಹಿಗಳಲ್ಲಿ ಸಾಮಾನ್ಯರಿಗೆ ಹೊಸ ರೀತಿಯ ಅವಲಂಬನೆಗಳನ್ನು ಸೃಷ್ಟಿಸಿದ್ದರೂ, ಇದೊಂದು ಪ್ರಮುಖ ಬೆಳವಣಿಗೆಯಾಗಿತ್ತು, ಏಕೆಂದರೆ ಇದಕ್ಕೆ ವ್ಯತಿರಿಕ್ತವಾಗಿ ಕೈಗಾರಿಕಾವಾದವು ಹತ್ತೊಂಭತ್ತನೇ ಶತಮಾನದಲ್ಲಿ ವ್ಯಾಪಾರಿಗಳಿಗೆ ಅನಿಯಮಿತ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಒದಗಿಸಿತ್ತು.

ಏನಿದ್ದರೂ, ಮುಕ್ತತೆ ಮತ್ತು ಸ್ವಾತಂತ್ರ್ಯದ ಸಮಸ್ಯೆಯು ಮೇಲೆ ಹೇಳಿದ ಅರ್ಥದ ಮುಕ್ತತೆ ಮತ್ತು ಸ್ವಾತಂತ್ರ್ಯಕ್ಕಿಂತ ಹೆಚ್ಚು ಆಳವಾಗಿದೆ. ವಾಸ್ತವದಲ್ಲಿ, ಸ್ವಾತಂತ್ರ್ಯದ ಸಮಸ್ಯೆಯು ಮಾನವ ಅಭಿವೃದ್ಧಿಯ ಆತ್ಯಂತ ಮೂಲಭೂತ ಅಂಶಗಳಲ್ಲಿ ಒಂದು- ನಾವು ಅದನ್ನು ಅದರ ಸಂಪೂರ್ಣ ಆಳ ಮತ್ತು ಅಗಲದಲ್ಲಿ ನೋಡಿದಲ್ಲಿ ಮಾತ್ರ.

ಆಗ ತಾನೇ ಹುಟ್ಟಿದ ಶಿಶು ತನ್ನ ಪರಿಸರದೊಂದಿಗೆ ಒಂದಾಗಿರುತ್ತದೆ. ಅದಕ್ಕೆ ಹೊರಗಿನ ಪ್ರಪಂಚವು ಆಗಿನ್ನೂ, ತನ್ನಿಂದ ಪ್ರತ್ಯೇಕವಾದ ಒಂದು ವಾಸ್ತವವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ. ಆಗಲೂ ಕೂಡಾ ಶಿಶುವು ತನ್ನಿಂದ ಹೊರಗಿರುವ ವಸ್ತುಗಳನ್ನು ಗುರುತಿಸಬಲ್ಲದು. ಹಾಗಿದ್ದೂ, ಅದು ಇನ್ನೂ ಬಹಳ ಕಾಲ ಅಸಹಾಯಕವಾಗಿರುತ್ತದೆ ಮತ್ತು ತನ್ನ ತಂದೆ, ತಾಯಿಯ ನೆರವಿಲ್ಲದೆ ಬದುಕಿ ಉಳಿಯಲಾರದು. ಇತರ ಎಳೆಯ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ, ಮಾನವನ ಈ ದೀರ್ಘಕಾಲದ ಅಸಹಾಯಕತೆಯು ಅದರ ಬೆಳವಣಿಗೆಗೆ ಒಂದು ತಳಹದಿಯಾಗಿದ್ದರೂ, ಅದು ಅದಕ್ಕೆ ಅಧಿಕಾರವನ್ನು ಅವಲಂಬಿಸಿರಲು ಮತ್ತು ಅಧಿಕಾರಕ್ಕೆ ಭಯಪಡಲು ಕಲಿಸುತ್ತದೆ.

ಸಾಮಾನ್ಯವಾಗಿ ಹುಟ್ಟಿನಿಂದ ಪ್ರೌಢಾವಸ್ಥೆಯ ತನಕದ ವರ್ಷಗಳಲ್ಲಿ ಅಧಿಕಾರವನ್ನು ಪ್ರತಿನಿಧಿಸುವವರು ಹೆತ್ತವರಾಗಿರುತ್ತಾರೆ ಮತ್ತು ಅದು ಇಬ್ಬಗೆಯ ಆಯಾಮಗಳನ್ನು ಹೊಂದಿರುತ್ತದೆ: ನೆರವಾಗುವುದು ಮತ್ತು ಶಿಕ್ಷಿಸುವುದು. ಒಬ್ಬ ಎಳೆಯ ವ್ಯಕ್ತಿ ಪ್ರೌಢಾವಸ್ಥೆಗೆ ತಲಪುವ ಕಾಲದ ಆಸುಪಾಸಿನಲ್ಲಿ ತನ್ನನ್ನು ತಾನೇ ರಕ್ಷಿಸಿಕೊಳ್ಳಬಲ್ಲಂತ ಅಭಿವೃದ್ಧಿಯ ಹಂತ ತಲಪಿರುತ್ತಾನೆ (ಖಂಡಿತವಾಗಿಯೂ, ಸರಳ ಬೇಸಾಯಗಾರ ಸಮಾಜಗಳಲ್ಲಿ.) ಮತ್ತು ಇನ್ನೂ ತನ್ನ ಸಾಮಾಜಿಕ ಅಸ್ತಿತ್ವಕ್ಕಾಗಿ ಹೆತ್ತವರ ಋಣದಲ್ಲಿ ಇರಬೇಕಾದ ಅಗತ್ಯವಿರುವುದಿಲ್ಲ. ಆತ ಆರ್ಥಿಕವಾಗಿ ಅವರಿಂದ ಸ್ವತಂತ್ರನಾಗಿರಬಹುದು. ಹಲವು ಪ್ರಾಚೀನ ಸಮಾಜಗಳಲ್ಲಿ ಈ ಸ್ವಾತಂತ್ರ್ಯವನ್ನು (ಮುಖ್ಯವಾಗಿ ತಾಯಿಯಿಂದ) ದೀಕ್ಷೆಯ ವಿಧಿವಿಧಾನಗಳ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಆದರೆ, ಅವು ತನ್ನ ಕುಲದ ಮೇಲಿನ ಅಥವಾ ಅದರ ಗಂಡು ಅಂಶದ ಮೇಲಿನ ಅವಲಂಬನೆಯನ್ನು ಮುಟ್ಟಲು ಹೋಗುವುದಿಲ್ಲ. ಲೈಂಗಿಕವಾಗಿ ಪ್ರೌಢವಾಗುವುದು ಕೂಡಾ ಹೆತ್ತವರಿಂದ ಬಿಡುಗಡೆಯ ಪ್ರಕ್ರಿಯೆಯನ್ನು ಮುನ್ನಡೆಸುವ ಇನ್ನೊಂದು ಅಂಶವಾಗಿದೆ. ಲೈಂಗಿಕ ಬಯಕೆ ಮತ್ತು ಲೈಂಗಿಕ ತೃಪ್ತಿಯು ಒಬ್ಬ ವ್ಯಕ್ತಿಯನ್ನು ತನ್ನ ಕುಟುಂಬದ ಹೊರಗಿನವರ ಜೊತೆಗೆ ಕಟ್ಟಿಹಾಕುತ್ತದೆ. ಸ್ವತಃ ಲೈಂಗಿಕ ಕ್ರಿಯೆಯಲ್ಲಿ ಮಾತ್ರ- ತಂದೆಯಾಗಲೀ, ತಾಯಿಯಾಗಲೀ ನೆರವಾಗಲು ಸಾಧ್ಯವಿಲ್ಲ ಮತ್ತು ಇದರಲ್ಲಿ ಯುವ ವ್ಯಕ್ತಿ ತನ್ನ ದಾರಿ ಹುಡುಕಿಕೊಳ್ಳುತ್ತಾನೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಪ್ರೌಢಾವಸ್ಥೆಗೆ ತಲಪಿದ ನಂತರದ ಐದು ಅಥವಾ ಹತ್ತು ವರ್ಷಗಳ ತನಕ ಲೈಂಗಿಕ ತೃಪ್ತಿಯನ್ನು ಮುಂದೂಡಲಾಗುವ ಸಮಾಜಗಳಲ್ಲಿ ಕೂಡಾ, ಎಚ್ಚೆತ್ತ ಲೈಂಗಿಕ ಬಯಕೆಯು ಸ್ವಾತಂತ್ರ್ಯಕ್ಕಾಗಿ ಹಂಬಲವನ್ನು ಹುಟ್ಟಿಸುತ್ತದೆ ಮತ್ತು ಹೆತ್ತವರ ಮತ್ತು ಸಾಮಾಜಿಕ ಅಧಿಕಾರಗಳ ಜೊತೆಗೆ ಸಂಘರ್ಷಗಳನ್ನುಂಟುಮಾಡುತ್ತದೆ. ಸಹಜ ವ್ಯಕ್ತಿಗಳು ಪ್ರೌಢಾವಸ್ಥೆಯ ನಂತರದ ಈ ವರ್ಷಗಳಲ್ಲಿ ಈ ಮಟ್ಟದ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಆದರೆ, ಆತ ಸ್ವಂತ ಸಂಪಾದನೆ ಮಾಡಿ ಜೀವನ ನಡೆಸಿದರೂ, ಮದುವೆಯಾಗಿ ಸ್ವಂತ ಮಕ್ಕಳನ್ನು ಸಾಕಿದರೂ, ಆತ ನಿಜವಾಗಿಯೂ ಮುಕ್ತ ಮತ್ತು ಸ್ವತಂತ್ರನಾಗುವುದಿಲ್ಲ.

ಅವನು ಇನ್ನೂ ಬಹುತೇಕ ಅಸಹಾಯಕನಾದ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು, ತನಗೊಂದು ಖಾತರಿ, ಸ್ಥಿರತೆ ನೀಡುವಂತ ಅಧಿಕಾರವನ್ನು ಹುಡುಕಲು ಯತ್ನಿಸುತ್ತಿರುವ ಒಬ್ಬ ವಯಸ್ಕ ವ್ಯಕ್ತಿ ಮಾತ್ರ. ಈ ಸಹಾಯಕ್ಕೆ ಬದಲಾಗಿ ನೀಡುವ ಬೆಲೆಯಾಗಿ- ಆತ ತನ್ನನ್ನು ಅವರ (ಅಧಿಕಾರಸ್ಥರ) ಅವಲಂಬಿತನನ್ನಾಗಿ ಮಾಡಿಕೊಳ್ಳುತ್ತಾನೆ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಬೆಳವಣಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾನೆ. ಅವನು ತನ್ನ ಯೋಚನೆ, ಚಿಂತನೆಗಳನ್ನು ಅವರಿಂದ ಎರವಲು ಪಡೆಯುತ್ತಾನೆ- ತನ್ನ ಭಾವನೆಗಳು, ತನ್ನ ಗುರಿಗಳು, ತನ್ನ ಮೌಲ್ಯಗಳನ್ನು ಕೂಡಾ; ಯೋಚನೆ ಮಾಡುತ್ತಿರುವುದು, ಭಾವನೆಗಳನ್ನು ಹೊಂದಿರುವುದು ತಾನೇ ಮತ್ತು ತನ್ನ ನಿರ್ಧಾರಗಳನ್ನು ತಾನೇ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದರೂ ಕೂಡಾ.

(ಮುಂದುವರಿಯುತ್ತದೆ…)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...