Homeಪುಸ್ತಕ ವಿಮರ್ಶೆಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

ಅತ್ಯಂತ ಕೆಟ್ಟ ಮನುಷ್ಯನೂ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಹೃದಯವಂತನಾಗಿರುತ್ತಾನೆ

- Advertisement -
- Advertisement -

ಕೆ. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ಫ್ಯೋದೊರ್ ದಾಸ್ತೋವ್‌ಸ್ಕಿಯವರ ’ಕರಮಜೋವ್ ಸಹೋದರರು’ ಕಾದಂಬರಿಯ ಮೊದಲ ಅಧ್ಯಾಯ

ಕರಮಜೋವ್ ಕುಟುಂಬದ ಚರಿತ್ರೆ- ಫೈಡರ್ ಪಾವ್ಲೋವಿಚ್ ಕರಮಜೋವ್

ಅಲೆಕ್ಸಿ ಕರಮಜೋವ್, ಫೈಡರ್ ಪಾವ್ಲೋವಿಚ್ ಕರಮಜೋವ್‌ನ ಮೂರನೆ ಮಗ. ಈ ಫೈಡರ್, ನಮ್ಮ ಪ್ರದೇಶದ ಎಲ್ಲೆಲ್ಲೂ ತನ್ನದೇ ಆದ ವಿಶಿಷ್ಟವಾದ ಕಾರಣಗಳಿಗೋಸ್ಕರ ಪ್ರಚಲಿತನಾದ ಜಮೀನುದಾರ, ಮತ್ತು ಇಂದಿಗೆ ಹದಿಮೂರು ವರ್ಷಗಳ ಹಿಂದೆ ನಡೆದ ಅವನ ದುರ್ಮರಣದಿಂದಾಗಿ ಎಲ್ಲರ ನೆನಪಿನಲ್ಲೂ ಉಳಿದಿರುವ ವ್ಯಕ್ತಿ. ಈ ಘಟನೆಯ ಬಗ್ಗೆ ವಿವರವಾಗಿ ಮುಂದೆ ಪ್ರಸ್ತಾಪಿಸುತ್ತೇನೆ. ಸದಕ್ಕೆ, ಅವನು ಎಂದೂ ತನ್ನ ಜಮೀನಿನಲ್ಲಿ ಕಾಲಿಟ್ಟಿರಲಿಲ್ಲದಿದ್ದರೂ ಅವನನ್ನು ಜಮೀನುದಾರ ಅಂತಲೇ ಕರೆಯುತ್ತೇನೆ. ನಾವು ಆಗಾಗ್ಗೆ ಸಮಾಜದಲ್ಲಿ ಕಾಣುವಂತಹ ಈ ರೀತಿಯ ವಿಚಿತ್ರ ವ್ಯಕ್ತಿಗಳ ಜಾತಿಗೆ ಇವನೂ ಸೇರಿದ್ದಾನೆ. ಇವನಲ್ಲಿರುವ ವೈಚಿತ್ರ್ಯ ಏನೆಂದರೆ, ಇವನೊಬ್ಬ ಅಹಿತಕರವಾದ ದುಷ್ಟ ಮತ್ತು ಅವಿವೇಕದಿಂದ ಕೂಡಿದ ವ್ಯಕ್ತಿ.

ಇವನು ಎಷ್ಟೇ ಪ್ರಜ್ಞಾಶೂನ್ಯನಾಗಿದ್ದರೂ ತನ್ನ ಸ್ವಂತ ವಹಿವಾಟುಗಳನ್ನು ನಿಭಾಯಿಸುವ ಸಾಮರ್ಥ್ಯವುಳ್ಳವನಾಗಿದ್ದ. ಅವನಲ್ಲಿದ್ದ ಸಣ್ಣ ಜಮೀನನ್ನು ಬಿಟ್ಟರೆ, ಅವನ ಜೀವನ ಸೊನ್ನೆಯಿಂದಲೇ ಶುರುವಾಯಿತು. ಅವನು ಬೇರೆಯವರ ಔತಣಕೂಟಗಳಲ್ಲಿ, ಆಮಂತ್ರಣವಿರಲಿ ಇಲ್ಲದಿರಲಿ, ಯಾವುದೇ ಹಿಂಜರಿಕೆಯಿಲ್ಲದೆ ವಿನಮ್ರತೆಯಿಂದಲೇ ಭಾಗವಹಿಸುತ್ತಿದ್ದ. ಆದರೆ, ಅವನ ಸಾವಿನ ನಂತರ ಬಹಿರಂಗವಾದದ್ದು, ಅವನಲ್ಲಿ ಒಂದು ಲಕ್ಷ ರೂಬಲ್ಲುಗಳಷ್ಟು ನಗದು ಹಣವಿತ್ತೆಂಬುದು. ಅವನು ತನ್ನ ಇಡೀ ಜೀವನವನ್ನು ಒಬ್ಬ ಅಪ್ರಜ್ಞಾವಂತ ಮತ್ತು ಹಾಸ್ಯಾಸ್ಪದ ವ್ಯಕ್ತಿಯಾಗಿಯೇ ಸವೆಸಿದ. ಆದರೆ ಅವನು ಅತಿ ಮೂರ್ಖನಾಗಿರಲಿಲ್ಲ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿಗಳು ಸಾಕಷ್ಟು ಜಾಣರೂ ಬುದ್ಧಿವಂತರೂ ಆಗಿರುತ್ತಾರೆ.

ಅವನಿಗೆ ಎರಡು ಮದುವೆಗಳಾಗಿದ್ದು, ಎರಡೂ ಮದುವೆಗಳಿಂದ ಮೂರು ಗಂಡು ಮಕ್ಕಳಿದ್ದರು. ಮೊದಲನೇ ಹೆಂಡತಿಯ ಮಗ ಡಿಮಿಟ್ರಿ; ಇವಾನ್ ಮತ್ತು ಅಲೆಕ್ಸಿ ಎರಡನೇ ಹೆಂಡತಿಯ ಮಕ್ಕಳು. ಫೈಡರ್‌ನ ಮೊದಲನೇ ಹೆಂಡತಿ, ಅಡೆಲೈಡ ಇವಾನೊವ್ನ, ಶ್ರೀಮಂತ ಮತ್ತು ಪ್ರತಿಷ್ಠಿತ ವರ್ಗದ ಕುಟುಂಬದಿಂದ ಬಂದವಳು, ಮತ್ತು ಈ ಕುಟುಂಬ ಆ ಫಾಸಲೆಯ ಪ್ರತಿಷ್ಠಿತ ಜಮೀನುದಾರರಲ್ಲಿ ಒಂದು. ಅವರದು ಮಿಯುಸೋವ್ ಎಂಬ ಕುಟುಂಬ. ಈ ರೀತಿಯ ಐಶ್ವರ್ಯದ ವಾರಸುದಾರಳೂ ರೂಪವತಿಯೂ ಆದ, ಅಲ್ಲದೇ ಬುದ್ಧಿವಂತಳೂ ಆದ ಅಡೆಲೈಡ, ಇಂಥ ನಾಲಾಯಕ್ ಮನುಷ್ಯನನ್ನು ಹೇಗೆ ಮದುವೆಯಾದಳು ಅನ್ನುವ ವಿಸ್ಮಯವನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.

ಆದರೆ, ನನಗೊಬ್ಬಳು ಯುವತಿಯ ಬಗ್ಗೆ ತಿಳಿದಿದೆ. ಹಿಂದಿನ ಭಾವನಾತ್ಮಕತೆಯಲ್ಲಿ ವಿಹರಿಸುತ್ತಿದ್ದ ಯುವತಿಯರ ಪೀಳಿಗೆಗೆ ಸೇರಿದವಳು ಅವಳು ಮತ್ತು ಸ್ವಲ್ಪ ಸಮಯದ ನಂತರ ಒಬ್ಬ ಯುವಕನ ಜತೆಗೆ ನಿಗೂಢವಾಗಿ ನೆಲೆಸಿದ್ದ ಗಾಢಪ್ರೇಮದ ಕಾರಣಗಳಿಗೋಸ್ಕರ, ಅವನನ್ನು ಸುಲಭ ರೀತಿಯಲ್ಲಿ ವಿವಾಹವಾಗಬಹುದಾಗಿದ್ದರೂ, ಒಂದು ಮನೋಹರ ನದಿಯ ಬದಿಯಿದ್ದ ಶಿಖರವೊಂದರಿಂದ ಕೆಳಗೆ ಹಾರಿ ಅವರ ಪರಸ್ಪರ ಸಂಬಂಧವನ್ನು ಕೊನೆಗೊಳಿಸಿಕೊಂಡಳು. ಈ ರೀತಿ ಎಸಗಿದ ಕೃತ್ಯ, ಬರಿಯ ಅವಳ ಚಂಚಲಚಿತ್ತವನ್ನು ತೃಪ್ತಿಗೊಳಿಸಲೋಸ್ಕರ ಮತ್ತು ಶೇಕ್ಸ್‌ಪಿಯರಿನ ಒಪೀಲಿಯಾ ಪಾತ್ರವನ್ನು ಅನುಕರಿಸುವುದಕ್ಕೋಸ್ಕರ. ಈ ಶಿಖರ ಮನೋಹರವಾದ ಮತ್ತು ದೃಶ್ಯ ವಿಹಂಗಮವಾಗಿಲ್ಲದೆ ಇದ್ದಿದ್ದರೆ ಮತ್ತು ನೀರಸ ನದಿಯ ದಡವಾಗಿದ್ದಿದ್ದರೆ ಈ ಆತ್ಮಹತ್ಯೆಯ ಘಟನೆ ನಡೆಯುತ್ತಿರಲಿಲ್ಲವೋ ಏನೋ! ಇದೊಂದು ನಡೆದ ಘಟನೆ ಮತ್ತು ಇಂಥ ಘಟನೆ ಕಳೆದ ಹಿಂದಿನ ಮೂರು ಪೀಳಿಗೆಗಳಲ್ಲೆಂದೂ ಪುನರಾವರ್ತನೆಯಾಗಿರಲಿಲ್ಲ.

ಅಡೆಲೈಡಳ ಈ ವಿವಾಹ ಒಂದು ರೀತಿಯಲ್ಲಿ, ಬೇರೆ ವ್ಯಕ್ತಿಗಳ ಅನಿಸಿಕೆಗಳ ಒಂದು ಪ್ರತಿಧ್ವನಿ ಎನ್ನಬಹುದು. ಅವಳು ಮಾನಸಿಕ ಸ್ವಾತಂತ್ರ್ಯದಿಂದ ವಂಚಿತಳಾದ ಕಾರಣ ಸಿಟ್ಟಿಗೆದ್ದು ಉದ್ರೇಕದಿಂದ ಕೈಗೊಂಡ ನಿರ್ಧಾರ ಅದು. ಅವಳು ಬಹುಶಃ, ಸ್ತ್ರೀಸ್ವಾತಂತ್ರ್ಯದ ಮಹತ್ವವನ್ನು ಎತ್ತಿ ಹಿಡಿಯುವುದಕ್ಕೋಸ್ಕರ, ಅಲ್ಲದೇ ವರ್ಗಭೇದ ಮತ್ತು ಅವಳ ಕುಟುಂಬದಲ್ಲಿನ ನಿರಂಕುಶತೆಯನ್ನು ಧಿಕ್ಕರಿಸುವುದಕ್ಕೋಸ್ಕರ ಈ ವಿವಾಹವಾದಳು ಅನ್ನಿಸುತ್ತದೆ. ಅನಿಶ್ಚಿತವಾದ ಕಲ್ಪನೆಯ ಲೋಕದಲ್ಲಿ ತೇಲಾಡುವ ಅವಳ ಮನಸ್ಥಿತಿ ಅವಳನ್ನು ಈ ಕೆಲಸಕ್ಕೆ ಪ್ರೇರೇಪಿಸಿರಬಹುದು.

ಈ ರೀತಿಯ ಉದಾತ್ತವಾದ ಅನಿಸಿಕೆಗಳ ಜತೆ, ತನ್ನ ಪರಾವಲಂಬಿ ಜೀವನ ಮತ್ತು ದುರುಳತನವಿದ್ದರೂ ಯಾವುದೋ ಒಂದು ತಾತ್ಕಾಲಿಕ ಕ್ಷಣದಲ್ಲಿ ಫೈಡರ್‌ನ ಮನೋಪ್ರವೃತ್ತಿ ಇವಳ ಜತೆ ಹೊಂದಿಕೊಂಡುಬಿಟ್ಟಿತ್ತೇನೊ? ಈ ಮದುವೆ ಹೆಚ್ಚು ರಸವತ್ತಾಗಿದ್ದು, ಅವರಿಬ್ಬರ ಪ್ರೇಮ ಪಲಾಯನದಿಂದ. ಅಡೆಲೈಡಳ ಅಭಿರುಚಿ ಈ ಪಲಾಯನಕ್ಕೆ ಪುಷ್ಟಿ ಕೊಟ್ಟಿತು. ಫೈಡರ್‌ನ ಅಂದಿನ ಹೀನಾಯ ಪರಿಸ್ಥಿತಿಯಲ್ಲಿ, ತನ್ನ ಬದುಕನ್ನು ರೂಪಿಸಿಕೊಳ್ಳಲು ಈ ಕೃತ್ಯ ಅವನಿಗೆ ಅತ್ಯವಶ್ಯಕವಾಗಿತ್ತು. ಸುಸಂಸ್ಕೃತ ಕುಟುಂಬದ ಜತೆಗೆ ಅವನ ನೆಂಟಸ್ತನ ಬೆಳೇಸಿ, ಅವನ ಮುಂದಿನ ಬದುಕಿಗೆ ಅತ್ಯಮೂಲ್ಯವಾದ ವರದಕ್ಷಿಣೆಯೇ ಅವನ ಈ ಮದುವೆಯ ಮೂಲೋದ್ದೇಶವಾಗಿತ್ತು. ಸ್ತ್ರೀಲಂಪಟ ಸ್ವಭಾವದ ಫೈಡರ್‌ಗೆ ಅಡೆಲೈಡಳ ಸೌಂದರ್ಯವೊಂದೇ ಆಕರ್ಷಣೆಯಾಗಿರಲಿಲ್ಲ.

ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ತಮ್ಮ ಪ್ರೇಮಪಲಾಯನದ ನಂತರ, ಕ್ಷಣಮಾತ್ರದಲ್ಲಿ ಅಡೆಲೈಡಳಿಗೆ ತನ್ನ ಗಂಡನ ಬಗ್ಗೆ ತಿರಸ್ಕಾರವಲ್ಲದೇ ಬೇರೆ ಯಾವ ಭಾವನೆಗಳೂ ಇರಲಿಲ್ಲ. ಈ ಮದುವೆಯ ಯಶಸ್ಸಿನ ನಿಜವಾದ ಬಣ್ಣ ಶೀಘ್ರವಾಗಿ ಗೋಚರಿಸತೊಡಗಿತು. ಅಡೆಲೈಡಳ ಕುಟುಂಬದವರು ಸ್ವಲ್ಪ ಸಮಯದ ನಂತರ ಈ ಮದುವೆಯನ್ನು ಒಪ್ಪಿಕೊಂಡು, ಅಡೆಲೈಡಳ ಪಾಲಿನ ವರದಕ್ಷಿಣೆಯನ್ನು ಬೇರೆ ತೆಗೆದಿಟ್ಟರೂ ಕೂಡ ಈ ಗಂಡ-ಹೆಂಡಿರ ವೈವಾಹಿಕ ಜೀವನ ಎಡರುತೊಡರುಗಳಿಂದಲೇ ಕೂಡಿತ್ತು. ಅವರಿಬ್ಬರ ನಡುವೆ ನಿರಂತರ ಅಹಿತಕರ ಘಟನೆಗಳು ನಡೆಯುತ್ತಲೇ ಇದ್ದವು. ಅವನ ಹೆಂಡತಿ, ತರುಣಿ, ಅವನಿಗಿಂತಲೂ ಹೆಚ್ಚು ಧಾರಾಳಿ ಮತ್ತು ಘನತೆಯಿಂದ ಕೂಡಿದವಳಾಗಿದ್ದಳು.

ಅಡೆಲೈಡಳಿಗೆ ತಂದೆಯ ಮನೆಯಿಂದ ಸಂದಾಯವಾದ ಇಪ್ಪತ್ತೈದು ಸಾವಿರ ರೂಬಲ್ಲುಗಳನ್ನು ಫೈಡರೇ ಲಪಟಾಯಿಸಿಬಿಟ್ಟಿದ್ದ. ಅವಳ ವರದಕ್ಷಿಣೆಯ ಭಾಗವಾದ ಒಂದು ಸಣ್ಣ ಹಳ್ಳಿ ಮತ್ತು ಒಂದು ಅಮೂಲ್ಯವಾದ ಮನೆಯನ್ನು ಮೋಸದಿಂದ ಹೊಡೆದುಕೊಳ್ಳಲು ಫೈಡರ್ ಹೊಂಚುಹಾಕುತ್ತಿದ್ದ. ಈ ಕೆಲಸದಲ್ಲಿ ಫೈಡರ್ ಬಹುಶಃ, ಅಡೆಲೈಡಳ ನೈತಿಕ ನಿಶ್ಯಕ್ತಿ ಮತ್ತು ಅವನ ಸಾನ್ನಿಧ್ಯದಿಂದ ದೂರ ಹೋಗುವ ಹಂಬಲಗಳ ಕಾರಣಗಳಿಂದ ಈ ಆಸ್ತಿಗಳನ್ನು ಹೊಡೆದುಕೊಳ್ಳುವಲ್ಲಿ ಸಫಲನಾಗುತ್ತಿದ್ದನೇನೋ, ಆದರೆ ಅಡೆಲೈಡಳ ಕುಟುಂಬದವರ ಮಧ್ಯಸ್ಥಿಕೆಯಿಂದ ಅದು ಅಸಾಧ್ಯವಾಯಿತು. ಇವರಿಬ್ಬರ ನಡುವೆ ಆಗಿಂದಾಗ್ಗೆ ಹೊಡೆದಾಟಗಳು ಆಗುತ್ತಲೇ ಇದ್ದವು. ವಿಚಿತ್ರವೇನೆಂದರೆ, ಫೈಡರ್ ಅಡೆಲೈಡಳನ್ನು ಹೊಡೆಯುತ್ತಿರಲಿಲ್ಲ, ಆದರೆ ಅಡೆಲೈಡಳೇ ಅವನಿಗೆ ಬಾರಿಸುತ್ತಿದ್ದಳು.

ಅಡೆಲೈಡ ಶಕ್ತಿವಂತ ಮತ್ತು ಮುಂಗೋಪಿ ಹೆಣ್ಣಾಗಿದ್ದರಿಂದ ಇದು ನಿಜವಿರಬಹುದು. ಕೊನೆಗೆ ಅಡೆಲೈಡ, ಒಬ್ಬ ಅನಾಥ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಅಲ್ಲಿಂದ ಪಲಾಯನಗೈದಳು. ಜತೆಗೆ ಅವಳಿಗೆ ಹುಟ್ಟಿದ್ದ ಡಿಮಿಟ್ರಿ ಎಂಬ ಮಗುವನ್ನೂ ಅನಾಥನನ್ನಾಗಿ ಮಾಡಿ ಹೊರಟುಹೋಗಿದ್ದಳು. ನಂತರ ಫೈಡರ್ ತನ್ನ ಮನೆಯನ್ನು ವ್ಯಭಿಚಾರ ಕೇಂದ್ರವನ್ನಾಗಿ ಪರಿವರ್ತಿಸಿದ, ಮತ್ತು ಅವನು ಕುಡಿತ ವ್ಯಭಿಚಾರಗಳ ಬಲಿಪಶುವಾದ. ಮಧ್ಯೆ ಮಧ್ಯೆ ಇಡೀ ಪ್ರಾಂತ್ಯದ ಪ್ರದೇಶಗಳಿಗೆ ಹೋಗಿ ಅಡೆಲೈಡ ತನ್ನನ್ನು ಬಿಟ್ಟುಹೋದದ್ದರ ಬಗ್ಗೆ ಎಲ್ಲರ ಮುಂದೆ ಕಣ್ಣೀರಿಡುತ್ತಿದ್ದ. ಒಬ್ಬ ಸಂಭಾವಿತ ಗಂಡ, ತನ್ನ ವೈವಾಹಿಕ ಜೀವನದ ಬಗ್ಗೆ ಹೇಳಬಾರದಂತಹ ನಾಚಿಕೆಗೇಡಿನ ವಿಷಯಗಳನ್ನೆಲ್ಲ ಬಹಿರಂಗಪಡಿಸುತ್ತಿದ್ದ. ಅವನಿಗೆ ಆತ್ಮ ಸಂತೋಷವನ್ನುಂಟು ಮಾಡುತ್ತಿದ್ದ ಸಂಗತಿಯೆಂದರೆ, ಅವನೊಂದು ರೀತಿಯ ಘಾಸಿಗೊಂಡ ಪತಿಯೆಂಬ ಅವನ ಕಪಟನಾಟಕದ ಪಾತ್ರ.

“ನೀನೊಬ್ಬ, ದುಃಖಪಡುವ ಬದಲು, ನಿನ್ನ ಜೀವನದಲ್ಲಿ ಬಡ್ತಿ ಸಿಕ್ಕವನಂತೆ, ಸಂತೋಷ ಪಡುತ್ತಿದ್ದೀಯಲ್ಲ ಅಂತ ಜನ ಅವನನ್ನು ಅಪಹಾಸ್ಯ ಮಾಡುತ್ತಿದ್ದರು. ಅವಹೇಳನಕ್ಕೊಳಗಾದ ಪರಿಸ್ಥಿತಿಯನ್ನೂ ಲೆಕ್ಕಿಸದೆ ಅವನು ವಿದೂಷಕನ ರೀತಿ ವರ್ತಿಸುತ್ತಿದ್ದ.

ಕೊನೆಗೂ ಅವನ ಓಡಿಹೋದ ಹೆಂಡತಿ ಎಲ್ಲಿದ್ದಾಳೆ ಎಂಬ ಸುಳಿವು ಅವನಿಗೆ ಸಿಕ್ಕಿತು. ಆ ಪಾಪದ ಹೆಣ್ಣು ಪೀಟರ್ಸ್‌ಬರ್ಗಿಗೆ ದೈವಶಾಸ್ತ್ರದ ವಿದ್ಯಾರ್ಥಿಯ ಜತೆ ಹೋಗಿದ್ದಳು. ಅಲ್ಲಿ ಅವಳು ಸಂಪೂರ್ಣ ವಿಮೋಚನೆಗೆ ತನ್ನನ್ನು ತಾನೇ ಅರ್ಪಿಸಿಕೊಂಡಿದ್ದಳು. ಫೈಡರ್ ಕೂಡಲೇ ಪೀಟರ್ಸ್‌ಬರ್ಗಿಗೆ ಹೊರಡಲು ತರಾತುರಿ ನಡೆಸುತ್ತಿದ್ದ. ಆದರೆ ಅದು ಯಾವ ಕಾರಣಕ್ಕೆನ್ನುವುದು ಅವನಿಗೇ ತಿಳಿದಿರಲಿಲ್ಲ. ಅಲ್ಲಿಗೆ ಹೊರಡುವುದಕ್ಕೆ ತನ್ನಲ್ಲಿ ಧೈರ್ಯ ತುಂಬಿಕೊಳ್ಳುವ ಕಾರಣವನ್ನೊಡ್ಡಿ ಅತಿಯಾಗಿ ಕುಡಿಯಲಾರಂಭಿಸಿದ. ಅದೇ ಸಮಯದಲ್ಲೇ ಅವನ ಹೆಂಡತಿಯ ಕುಟುಂಬದವರಿಗೆ ಅಡೆಲೈಡಳ ಸಾವಿನ ಸುದ್ದಿ ಮುಟ್ಟಿತು. ಅವಳ ಸಾವಿನ ಕಾರಣಗಳ ಬಗ್ಗೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿದ್ದವು.

ಕೆಲವು, ಅವಳು ಸಣ್ಣ ರೂಮಿನಲ್ಲಿ ಹಸಿವಿನಿಂದ ಅಸು ನೀಗಿದಳು ಎಂದೂ, ಮತ್ತೆ ಕೆಲವು ಟೈಫಾಯ್ಡಿನಿಂದ ಸತ್ತಳು ಎಂದು. ಫೈಡರ್ ಅವಳ ಸಾವಿನ ಸುದ್ದಿ ಕೇಳಿದಾಗ ಕುಡಿದಿದ್ದ. ಕೆಲವರು ಅವನು ಅದನ್ನು ಕೇಳಿದವನೇ ಬೀದಿಯಲ್ಲಿ ಓಡಿ ಸಂತೋಷದಿಂದ ಕುಣಿದಾಡಿದ ಎಂದೂ, ಇನ್ನು ಕೆಲವರು ಸಣ್ಣ ಮಗುವಿನ ರೀತಿ ಗೋಳಿಟ್ಟ ಎಂದೂ ಹೇಳುತ್ತಾರೆ. ಅವನ ಬಗ್ಗೆ ಅವನೇ ಹುಟ್ಟುಹಾಕಿದ್ದ ಅಸಹ್ಯದ ಭಾವನೆಗಳ ನಂತರವೂ, ಜನರು ಅವನ ಬಗ್ಗೆ ಮರುಗಿದರು. ಇಲ್ಲಿ ಎರಡೂ ಹೇಳಿಕೆಗಳು ನಿಜವಿರಬಹುದು. ಒಂದು ಅವನಿಗೆ ಸಿಕ್ಕ ವಿಮೋಚನೆಯಿಂದ ಸಂತೋಷ ಮತ್ತು ಇನ್ನೊಂದು ವಿಮೋಚನೆ ಕೊಟ್ಟವಳ ಬಗ್ಗೆ ಸಂತಾಪ. ವಾಡಿಕೆಯಲ್ಲಿರುವ ನಿಯಮವೇನೆಂದರೆ, ಅತ್ಯಂತ ಕೆಟ್ಟ ಮನುಷ್ಯನೂ ಕೂಡ ಕೆಲವು ಬಾರಿ ನಾವು ತಿಳಿದುಕೊಂಡಿರುವುದಕ್ಕಿಂತ ಜಾಸ್ತಿಯೇ ಅಮಾಯಕ ಮತ್ತು ಹೃದಯವಂತನಾಗಿರುತ್ತಾನೆ. ಇದರಲ್ಲಿ ನಾವೂ ಸೇರಿದ್ದೇವೆ.


ಇದನ್ನೂ ಓದಿ: ಪುಟಕ್ಕಿಟ್ಟ ಪುಟಗಳು: ಚೈತನ್ಯಪೂರ್ಣವಾಗಿರಲು ಪ್ರೇರೇಪಿಸುವ ಓಶೋನ ‘ಭಾರತ ಎನ್ನೊಲವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...