Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು?

ಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು?

ವರದಿ ಮಾಡಿದ ಶ್ಯಾಮ್ ಪರೇಖ್ "ಇದು 18 ವರ್ಷದ ಹಿಂದೆ ಗುಜರಾತ್‌ನಲ್ಲಿ ನಡೆದಿದೆ. ಆ ಸಮಯದಲ್ಲಿ ಹಸುವಿನೊಂದಿಗೆ ಚಿರತೆ ಮರಿ ಇದ್ದುದ್ದನ್ನು ಹೇಳಿದಾಗ ಹಲವಾರು ಜನರು ನಂಬಲಿಲ್ಲ. ಅದಕ್ಕಾಗಿ ನಾವು ಇದನ್ನು ದೃಢೀಕರಿಸಲು ವನ್ಯಜೀವಿ ಛಾಯಾಗ್ರಾಹಕನನ್ನು ಕರೆಸಿ ಅವುಗಳ ಫೋಟೊ ತೆಗೆಯಲು ಕೇಳಿದೆವು" ಎಂದಿದ್ದಾರೆ.

- Advertisement -
- Advertisement -

ಅಸ್ಸಾಂನಲ್ಲಿ ಹುಟ್ಟಿದ ಕೂಡಲೇ ತಾಯಿ ಕಳೆದುಕೊಂಡ ಚಿರತೆ ಮರಿಗೆ ಹಸುವೊಂದು ಅಮ್ಮನ ಪ್ರೀತಿ ನೀಡುತ್ತಿದೆ ಎಂಬ ಚಿತ್ರಗಳು ಮತ್ತು ಸುದ್ದಿ ವೈರಲ್ ಆಗತೊಡಗಿವೆ. ಉದ್ಯಮಿ ಸಿದ್ಧಾರ್ಥ್‌ ಪೈ ಇದೇ ಸ್ಕ್ರೀನ್‌ಶಾಟ್‌ ಅನ್ನು ಟ್ವೀಟ್ ಮಾಡಿ ನಂತರ ಡಿಲಿಟ್ ಮಾಡಿದ್ದಾರೆ.

If only some Humans could learn from this….This took place in Assam. A man bought a cow from the neighboring village…

Posted by Robindro Sharma on Saturday, June 6, 2020

ಚಿತ್ರಗಳೊಂದಿಗೆ ಹಂಚಿಕೊಂಡ ಕಥೆಯಲ್ಲಿ ಹಸು ಚಿರತೆ ಮರಿಯನ್ನು ರಾತ್ರಿವೇಳೆ ಮುದ್ದಾಡುತ್ತದೆ ಎಂದು ಹೇಳಲಾಗುತ್ತಿದೆ. ಸಂಪೂರ್ಣ ಕಥೆ ಹೀಗಿದೆ, “ಇದು ಅಸ್ಸಾಂನಲ್ಲಿ ನಡೆಯಿತು. ಒಬ್ಬ ವ್ಯಕ್ತಿಯು ಪಕ್ಕದ ಹಳ್ಳಿಯಿಂದ ಹಸುವೊಂದನ್ನು ಖರೀದಿಸಿ ಮನೆಗೆ ತಂದನು, ಅದರ ನಂತರ ಆ ಹಳ್ಳಿಯಲ್ಲಿ ಪ್ರತಿ ರಾತ್ರಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದವು. ಆಗ ಅವನು ಕಳ್ಳರು ಲಾಕ್ ಡೌನ್‌ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆಂದು ಅನುಮಾನಿಸಿ, ಹಸು ಕಟ್ಟಿರುವಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದನು. ಬೆಳಿಗ್ಗೆ ಎದ್ದು ಆ ವೀಡಿಯೊ ನೋಡಿ ಅವನು ನೋಡಿ ಆಘಾತಕ್ಕೊಳಗಾದನು. ಏಕೆಂದರೆ ಪ್ರತಿದಿನ ರಾತ್ರಿ ಹಸುವಿರುವಲ್ಲಿಗೆ ಚಿರತೆ ಮರಿಯೊಂದು ಬರುತ್ತಿದ್ದು ಹಸು ಅದನ್ನು ಮುದ್ದಾಡುತ್ತಿತ್ತು. ಆಗ ಅವನು ಹಸುವನ್ನು ಖರೀದಿಸಿದ ಹಳ್ಳಿಗೆ ಹಿಂತಿರುಗಿ, ಹಿಂದಿನ ಮಾಲೀಕರ ಬಳಿಗೆ ಹೋಗಿ ಚಿರತೆ ಬಗ್ಗೆ ತಿಳಿಸಿ, ಚಿತ್ರ ಮತ್ತು ವೀಡಿಯೊಗಳನ್ನು ತೋರಿಸಿದರು. ಆಗ ಹಿಂದಿನ ಮಾಲೀಕರು ಆ ಮನುಷ್ಯನಿಗೆ ನಡೆದ ಕಥೆಯನ್ನು ಹೇಳಿದರು. ಚಿರತೆ ಮರಿಗೆ ಕೇವಲ 20 ದಿನವಾಗಿದ್ದಾಗ, ಅದರ ತಾಯಿಯನ್ನು ಕೊಲ್ಲಲ್ಪಟ್ಟಿತು. ನಂತರ ಅವನು ಮರಿಯನ್ನು ನೋಡಿ ಕನಿಕರವಾಗಿ ತನ್ನ ಹಸುವಿನ ಬಳಿಗೆ ತಂದುಬಿಟ್ಟನು. ಹಸು ಅದನ್ನು ಸಾಕಿತು. ಚಿರತೆ ಬೆಳೆದು ದೊಡ್ಡದಾದಾಗ ಅದನ್ನು ಕಾಡಿಗೆ ಬಿಡಲಾಯಿತು. ಆದರೆ ಅದು ಯಾವಾಗಲೂ ಹಸುವಿನೊಂದಿಗೆ ಮುದ್ದಾಡಲು ಮತ್ತು ವಿಶ್ರಾಂತಿ ಪಡೆಯಲು ಮರಳಿ ಬರುತ್ತಿದೆ”.

MOTHER'S DAYThese are pictures of a village in Assam (India). A man bought the cow from a neighboring village and…

Posted by John Helios on Tuesday, May 12, 2020

ಈ ಪೋಸ್ಟ್ ಅನ್ನು ಹಲವಾರು ವೈಯಕ್ತಿಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇತ್ತೀಚೆಗೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಸಾವಿಗೆ ಇದನ್ನು ಲಿಂಕ್ ಮಾಡಿ ಆನೆ ಮರಿಯೂ ಉಳಿಯಲಿಲ್ಲ. ಪಶುಗಳಿಗಿಂತ ಮನುಷ್ಯರೆ ಕೆಟ್ಟವರು ಎಂದು ಹೇಳಲಾಗಿದೆ. ಇನ್ನು ಕೆಲವರು ಕಳೆದ ಮೇ ತಿಂಗಳಿನಲ್ಲಿ ಅಮ್ಮಂದಿರ ದಿನದಂದು ಇದೇ ಕಥೆಯನ್ನು ಫೋಟೊ ಜೊತೆಗೆ ಹಂಚಿಕೊಂಡಿದ್ದರು. ಇದಲ್ಲವೇ ತಾಯಿ ಪ್ರೀತಿ ಎಂದು ಬರೆದಿದ್ದರು. ಆ ಪೋಸ್ಟನ್ನು 9000 ಜನ ಹಂಚಿಕೊಂಡಿದ್ದರು.

ಫ್ಯಾಕ್ಟ್-ಚೆಕ್

ಗೂಗಲ್‌ನಲ್ಲಿ ಹಲವು ಕೀವರ್ಡ್ ಹುಡುಕಾಟ ನಡೆಸಿದಾಗ ಅಸ್ಸಾಂನಲ್ಲಿ ಈ ಘಟನೆ ನಡೆದ ಯಾವುದೇ ಸಾಕ್ಷ್ಯ ಸಿಗಲಿಲಲ್ಲ. ಆದರೆ onforest.com ವೆಬ್‌ಸೈಟ್‌ನಲ್ಲಿನ ಲೇಖನವೊಂದು ಸಿಕ್ಕಿತು. ಅಲ್ಲಿ ಹೆಚ್ಚಿನ ರೆಸಲ್ಯೂಶನ್‌ನ ಅದೇ ಚಿತ್ರಗಳು ಲಭ್ಯವಿದೆ. 2002 ರಲ್ಲಿ ಗುಜರಾತ್‌ನ ವಡೋದರಾ ಜಿಲ್ಲೆಯ ಆಂಟೋಲಿ ಗ್ರಾಮದಲ್ಲಿ ಹಸು ಮತ್ತು ಚಿರತೆ ಜೊತೆಗಿದ್ದ ವಿಚಿತ್ರ ಘಟನೆ ನಡೆದಿದೆ ಎಂದು ಲೇಖನ ಹೇಳುತ್ತದೆ.

ಪತ್ರಕರ್ತ ಶ್ಯಾಮ್ ಪರೇಖ್ ಅವರು 2002 ರಲ್ಲಿ ಟೈಮ್ಸ್ ಆಫ್ ಇಂಡಿಯಾಕ್ಕಾಗಿ ಈ ಚಿತ್ರವನ್ನು ಕಳಿಸಿ ವರದಿ ಮಾಡಿದ್ದಾರೆ. ಆದರೆ ಮೇಲಿನ ಕಥೆ ಹೇಳುವಂತೆ ಚಿರತೆ ಮರಿಯ ತಾಯಿ ಸತ್ತು ಹೋಯಿತು, ಹಸು ಸಾಕಿತು ಎಂಬುದು ಯಾವುದೂ ಇಲ್ಲಿ ಉಲ್ಲೇಖವಾಗಿಲ್ಲ. ಅಲ್ಲಿನ ಕಥೆಗೂ ಇಲ್ಲಿನ ವರದಿಗೂ ಯಾವುದೇ ಸಂಬಂಧವಿಲ್ಲ.

ಆದರೆ ಹಸು ಜೊತೆ ಚಿರತೆ ಮರಿ ಇದ್ದುದು ನಿಜವಾಗಿದ್ದರೆ ಅದು ಹೇಗೆ ಸಾಧ್ಯ ಎಂದು ಟೈಮ್ಸ್ ಆಫ್ ಇಂಡಿಯಾ ವಡೋದರಾದ ಕಾಡು ಸಂರಕ್ಷಣಾಧಿಕಾರಿ ಎಚ್ ಎಸ್ ಸಿಂಗ್ ಅವರನ್ನು ಪ್ರಶ್ನಿಸಿದೆ. ಅವರು “ಕೆಲವೊಮ್ಮೆ ಪ್ರಾಣಿಗಳ ನಡವಳಿಕೆಯನ್ನು ಮಾರ್ಪಡಿಸಬಹುದು. ಈ ಸಂದರ್ಭದಲ್ಲಿ, ಬಹುಶಃ ಚಿರತೆ ಉಪ-ವಯಸ್ಕ ಹಂತವನ್ನು ದಾಟಿದೆ, ಅದು ಕಾಡು ಪರಿಸರದಲ್ಲಿ ಬೆಳೆಯದೇ ಗ್ರಾಮೀಣ ಪ್ರದೇಶದಲ್ಲಿ ಬೆಳೆದುದರಿಂದ ಅದು ಬೇಟೆಯಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿಲ್ಲ” ಎಂದಿದ್ದಾರೆ.

ವರದಿ ಮಾಡಿದ ಶ್ಯಾಮ್ ಪರೇಖ್ “ಇದು 18 ವರ್ಷದ ಹಿಂದೆ ಗುಜರಾತ್‌ನಲ್ಲಿ ನಡೆದಿದೆ. ಆ ಸಮಯದಲ್ಲಿ ಹಸುವಿನೊಂದಿಗೆ ಚಿರತೆ ಮರಿ ಇದ್ದುದ್ದನ್ನು ಹೇಳಿದಾಗ ಹಲವಾರು ಜನರು ನಂಬಲಿಲ್ಲ. ಅದಕ್ಕಾಗಿ ನಾವು ಇದನ್ನು ದೃಢೀಕರಿಸಲು ವನ್ಯಜೀವಿ ಛಾಯಾಗ್ರಾಹಕನನ್ನು ಕರೆಸಿ ಅವುಗಳ ಫೋಟೊ ತೆಗೆಯಲು ಕೇಳಿದೆವು” ಎಂದಿದ್ದಾರೆ.

ತೀರ್ಮಾನ

ಗುಜರಾತ್‌ನಲ್ಲಿ ವರದಿಯಾದ ಸುಮಾರು ಎರಡು ದಶಕಗಳಷ್ಟು ಹಳೆಯದಾದ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಇದು ಅಸ್ಸಾಂನಲ್ಲಿ ಸಂಭವಿಸಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ, ಅದಕ್ಕೆ ಮತ್ತಷ್ಟು  ವಿಸ್ತಾರವಾದ ಕಥೆ ಕಟ್ಟಿ ಪುನರುಜ್ಜೀವನಗೊಳಿಸಲಾಗಿದೆ.


ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ

ಇದನ್ನೂ ಓದಿ: ಕೊರೊನಾ Fact check : ಜನ ಮನೆಯಿಂದ ಹೊರಬರದಿರಲು ಬೀದಿಗಳಿಗೆ 800 ಸಿಂಹಗಳನ್ನು ಬಿಟ್ಟ ರಷ್ಯಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...