Homeಫ್ಯಾಕ್ಟ್‌ಚೆಕ್ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ

ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ

- Advertisement -
- Advertisement -

ನಾನು ಇಂದು ಬೆಳಿಗ್ಗೆ 4.30ಕ್ಕೆ ಗಾಢ ನಿದ್ರೆ ಮಾಡುತ್ತಿರುವಾಗ ಮನೆಯಿಂದ ನಮ್ಮ ಚಿಕ್ಕಪ್ಪನ ಮಗ ಕಾಲ್ ಮಾಡಿದ. ನಾನು ಗಾಬರಿಯಿಂದ ಫೋನ್ ತೆಗೆದೆ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಮನೆಗೆ ಹೋಗದೇ ಬೆಂಗಳೂರಿನಲ್ಲೇ ಇರುವುದರಿಂದ ಕೊರೊನಾ ವೈರಸ್ ಬಗ್ಗೆ ಆತಂಕದಲ್ಲಿರುವಾಗ ಇಂತಹ ಕಾಲ್ ಬೆಳ್ಳಂ ಬೆಳಿಗ್ಗೆ ಬಂದುದರಿಂದ ಭಯವಾಯಿತು. ನನ್ನ ತಮ್ಮನ ಕಾಲ್‌ ರಿಸಿವ್ ಮಾಡುತ್ತಲೇ ಅಣ್ಣ ಎದ್ದೇಳು ಎದ್ದೇಳು ಅಂದ. ನಾನು ಎದ್ದಿದಿನಿ ಹೇಳೋ ಏನೋ ಅಂದೆ. ಮೊದಲು ಎದ್ದು ಕುಳಿತಿಕೋ, ನಮ್ಮ ಅತ್ತೆ ಹೇಳಿದರು ಈಗ ಯಾರು ಮಲಗಬಾರದಂತೆ ಎದ್ದೇ ಇರಬೇಕೆಂತೆ ಅಂತ ಹೇಳೀದ. ನಾನು ಆಯಿತು ಅಂತ ಕಾಲ್ ಕಟ್ ಮಾಡಿ ಮಲಗಿದೆ.

ಆದರೆ ಬೆಳಿಗ್ಗೆ ಎದ್ದು ಕಾಲ್ ಮಾಡಿ ವಿಷಯ ಏನು ಎಂದು ವಿಚಾರಿಸದರೆ, ಎಲ್ಲೋ ಹಸು ಹೊಟ್ಟೆಯಲ್ಲಿ ಮಗು ಹುಟ್ಟಿದೆಯಂತೆ. ಹಾಗಾಗಿ ಇವತ್ತು ಬೆಳಿಗಿನ ಜಾವಾ ನಿದ್ದೆ ಮಾಡಿದ್ರೆ ಏನಾದರೂ ಆಗುತ್ತೆ ಅಂತ ನಮ್ಮ ಏರಿಯಾದವರನ್ನೆಲ್ಲ ಎಬ್ಬಿಸಿದ್ದಾರೆ. ಎಲ್ಲರೂ ಫೋನ್‌ ಮಾಡಿ ಹೇಳು ಅಂದರು, ಅದಕ್ಕಾಗಿ ನಿನಗೆ ಕಾಲ್ ಮಾಡಿದೆ ಅಂದ. ನಾನು ಇವೆಲ್ಲ ನಂಬಬೇಡ ಬರೀ ಸುಳ್ಳು ಸುದ್ಧಿಗಳು ಬುದ್ಧಿ ಇಲ್ವಾ ನಿಮಗೆ ಎಂದು ಬೈಯ್ದು ಫೋನಿಟ್ಟೆ.

ಆನಂತರ ತಿಳಿಯಿತು ಇದು ಎಲ್ಲಾ ಹಳ್ಳಿಹಳ್ಳಿಗಳಿಗೂ ಹಬ್ಬುತ್ತಿದೆ ಎಂದು. ವಾಟ್ಸಪ್‌ನಲ್ಲಿ ನಿರಂತರವಾಗಿ ಈ ರೀತಿಯ ಸುಳ್ಳು ಸುದ್ಧಿಗಳನ್ನು ಹರಡಿ ಗ್ರಾಮೀಣ ಜನರನ್ನು ಇಂತಹ ಮೌಢ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಹುನ್ನಾರವೆ ಇದೆ ಹಾಗಾಗಿ ಇದರ ಕುರಿತು ಫ್ಯಾಕ್ಟ್‌ಚೆಕ್ ಮಾಡಲು ನಿರ್ಧರಿಸಿದೆವು.

ವಾಟ್ಸಾಪ್‌ನಲ್ಲಿ ಹಸುವೊಂದು ಮಗುವಿಗೆ ಜನ್ಮಕೊಟ್ಟಿದೆ ಎಂಬ ಐದು ಚಿತ್ರಗಳು ಹರಿದಾಡುತ್ತಿವೆ. ಇವುಗಳನ್ನು ಗೂಗಲ್‌ ರಿವರ್ಸ್‌ ಸರ್ಚ್‌ ಮಾಡಿದಾಗ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆ ಔಶಾ ತಾಲ್ಲೂಕಿನಲ್ಲಿ ವಿಕಲಾಂಗ ಮಗುವೊಂದು ಜನಿಸಿದ್ದು ಮಾತು ಬರುತ್ತಿಲ್ಲ ಎಂದು ಸುದ್ದಿ ಹರಡಿದೆ. ಹಾಗಾಗಿ ಅದು ಹುಟ್ಟಿದ ಸಮಯದಲ್ಲಿ ಉಳಿದವರೂ ಎಚ್ಚರವಿರಬೇಕು ಇಲ್ಲದಿದ್ದರೆ ಅವರ ಮಾತು ನಿಂತು ಹೋಗುತ್ತದೆ ಎಂದು ಯಾರೋ ಕಿಡಿಗೇಡಿಗಳು ಸುದ್ದಿ ಹರಡಿದ್ದಾರೆ.

ಅಲ್ಲಿಂದ ಒಬ್ಬರಿಂದ ಒಬ್ಬರಿಗೆ ನಿದ್ದೆ ಮಾಡಬೇಡಿ ಎದ್ದೇಳಿ ಎಂದು ಎಚ್ಚರಿಸುವ, ಇಡೀ ರಾತ್ರಿ ಎಚ್ಚರದಿಂದಿರುವ ಚಾಳಿ ಶುರುವಾಗಿದೆ ಮಾತ್ರವಲ್ಲ, ಆ ಮಗು ಹಸುವಿಗೆ ಹುಟ್ಟಿದ್ದು ಎಂಬ ಸುಳ್ಳು ಸಹ ಸೇರಿಕೊಂಡಿದೆ. ಅದೇ ಫೋಟೊಗಳನ್ನು ಷೇರ್‌ ಮಾಡಿ ಆಂಧ್ರ ಪ್ರದೇಶದ ಯಾವುದೋ ಊರು ಎಂದೆಲ್ಲಾ ಸುಳ್ಳು ಪಸರಿಸಿದೆ. ಅದೇ ಕಾಲ್ ಕೊನೆಗೆ ಬೆಂಗಳೂರನ್ನು ಸಹ ಮುಟ್ಟಿದೆ. ಇದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ವೆಬ್‌ಸೈಟ್‌ ಸಕಲ್‌.ಕಾಂ ಸ್ಪಷ್ಟಪಡಿಸಿದೆ.

ಅಲ್ಲದೇ ಸಂಬಂಧವಿಲ್ಲದ ಫೋಟೊಗಳನ್ನೆಲ್ಲಾ ಷೇರ್‌ ಮಾಡಲಾಗಿದೆ. ಆಂಧ್ರದ ಎದುಟ್ಲ ಗೋಪಾಲ್‌ಪೇಟ್‌ ತಾಲ್ಲೂಕು ಎಂಬಲ್ಲಿ ನಡೆದಿದೆ ಎಂಬ ಫೋಟೊಗಳನ್ನು ಸಹ ಹರಿಬಿಡಲಾಗಿದೆ. ಒಟ್ಟಾರೆ ಇದೊಂದು ಶುದ್ಧ ಮೌಢ್ಯಾಚರಣೆಯಾಗಿದೆ.

ಇಂತಹ ವದಂತಿಗಳನ್ನು ಹರಡುವ ಮೂಲಕ, ಕಾರಣವಿಲ್ಲದೆ ಜನರಲ್ಲಿ ಭಯವದ ವಾತಾವರಣ ಸೃಷ್ಟಿಸಲಾಗುತ್ತದೆ. ಯಾರೋ ಮಾನಸಿಕ ಅಸ್ವಸ್ಥರು ಈ ಸುಳ್ಳು ಸುದ್ದಿ ಹರಡಿದ್ದಾರೆ. ಇದರಿಂದ ಯಾವುದೇ ಅಪಾಯ ಯಾರಿಗೂ ಆಗುವುದಿಲ್ಲ. ಮಗು ಬೆಳೆಯುತ್ತಿದ್ದಂತೆ ಮಗುವಿನ ಮಾತುಕತೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಆದ್ದರಿಂದ ಜನರು ವದಂತಿಗಳಿಗೆ ಬಲಿಯಾಗಬಾರದು. ಎಂದು ಔಶಾ ತಾಲ್ಲೂಕಿನ ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಸಚಿನ್ ಮಿಟ್ಕರಿ ತಿಳಿಸಿದ್ದಾರೆ.

ಇತ್ತಿಚಿಗೆ ಉತ್ತರಕರ್ನಾಟಕದ ಹಳ್ಳಿಗಳಲ್ಲಿ ನಿಮ್ಮ ತಾಳಿಯಲ್ಲಿರುವ ಹವಳವನ್ನು ಕುಟ್ಟಿ ಪುಡಿಮಾಡಬೇಕು ಇಲ್ಲವಾದರೆ ನಿಮ್ಮ ಗಂಡು ಸತ್ತು ಹೋಗುತ್ತಾನೆ ಎಂದು ಸುಳ್ಳು ಸುದ್ಧಿ ಹಬ್ಬಿಸಿದ್ದಾರೆ ಇದರಿಂದ ಗ್ರಾಮೀಣ ಹೆಣ್ಣು ಮಕ್ಕಳು ಹಾಗೇ ಮಾಡಿದ್ದಾರೆ.

ಇನ್ನು ಕೆಲವು ತಿಂಗಳುಗಳ ಕೆಳಗೆ ಒಬ್ಬನೇ ಮಗ ಇದ್ದರೆ ಆತನಿಗೆ ಅತ್ತೆಯಂದಿರು ಬೆಳ್ಳಿ ಕಡಗ ಹಾಕಬೇಕು ಇಲ್ಲವಾದರೆ ಆತನಿಗೆ ಕೇಡಾಗುತ್ತದೆ ಎಂದು ಹೇಳಿದ್ದರು ಇದಕ್ಕಾಗಿ ಜನ ಸಾಲ ಮಾಡಿ ಬೆಳ್ಳಿ ಅಂಗಡಿಗಳ ಬಾಗಿಲು ತಟ್ಟಿದ್ದರು. ಆದಾದ ಕೆಲವೇ ದಿನಗಳಿಗೆ ಬೆಳ್ಳಿ ಕಡಗ ಇದ್ದರೆ ತೆಗೆದು ಹಾಗಬೇಕು ಎಂದರೆ ತೆಗೆದು ಹಾಕಿದ್ಧಾರೆ. ಈ ರೀತಿ ಗ್ರಾಮೀಣ ಜನರ ಜೀವನದ ಜೊತೆ ಸುಳ್ಳು ಸುದ್ಧಿಗಳನ್ನು ಹಬ್ಬಿಸಿ ಆಟ ಆಡುತ್ತಿದ್ದಾರೆ.


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ: ಇಟಲಿಗೆ ಬಲಿಷ್ಟ ವೈದ್ಯರ ತಂಡ ಕಳುಹಿಸಿಕೊಟ್ಟ ʼಕ್ಯೂಬಾʼ


ಈ ಬಗ್ಗೆ ಸರ್ಕಾರಗಳು ಒಂದಷ್ಟು ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇತ್ತಿಚಿಗೆ ವಿದ್ಯಾವಂತರೇ ಸುಳ್ಳು ಸುದ್ಧಿಗಳನ್ನು ಹರಡುತ್ತಿರುವುದು ಹೆಚ್ಚಾಗಿದೆ. ಇದನ್ನು ಮೊದಲು ನಿಲ್ಲಿಸಬೇಕು. ಸತ್ಯ ಎಂದು ತಿಳಿಯದ ಹೊರತು ವಿಷಯಗಳನ್ನು ಶೇರ್ ಮಾಡದೆ ಇರುವುದನ್ನು ರೂಢಿಸಿಕೊಳ್ಳಬೇಕು.

ಇದನ್ನೂ ಓದಿ:

ಯೋಜನೆಯೇ ಇಲ್ಲದ ಮೋದಿ ಲಾಕ್‌ಡೌನ್ : ವೈರಸ್ ಕೊಲ್ಲದಿದ್ದರೂ, ಆರ್ಥಿಕತೆಯ ಮರಣ ನಿಶ್ಚಿತ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....