Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು?

ಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು?

ವರದಿ ಮಾಡಿದ ಶ್ಯಾಮ್ ಪರೇಖ್ "ಇದು 18 ವರ್ಷದ ಹಿಂದೆ ಗುಜರಾತ್‌ನಲ್ಲಿ ನಡೆದಿದೆ. ಆ ಸಮಯದಲ್ಲಿ ಹಸುವಿನೊಂದಿಗೆ ಚಿರತೆ ಮರಿ ಇದ್ದುದ್ದನ್ನು ಹೇಳಿದಾಗ ಹಲವಾರು ಜನರು ನಂಬಲಿಲ್ಲ. ಅದಕ್ಕಾಗಿ ನಾವು ಇದನ್ನು ದೃಢೀಕರಿಸಲು ವನ್ಯಜೀವಿ ಛಾಯಾಗ್ರಾಹಕನನ್ನು ಕರೆಸಿ ಅವುಗಳ ಫೋಟೊ ತೆಗೆಯಲು ಕೇಳಿದೆವು" ಎಂದಿದ್ದಾರೆ.

- Advertisement -
- Advertisement -

ಅಸ್ಸಾಂನಲ್ಲಿ ಹುಟ್ಟಿದ ಕೂಡಲೇ ತಾಯಿ ಕಳೆದುಕೊಂಡ ಚಿರತೆ ಮರಿಗೆ ಹಸುವೊಂದು ಅಮ್ಮನ ಪ್ರೀತಿ ನೀಡುತ್ತಿದೆ ಎಂಬ ಚಿತ್ರಗಳು ಮತ್ತು ಸುದ್ದಿ ವೈರಲ್ ಆಗತೊಡಗಿವೆ. ಉದ್ಯಮಿ ಸಿದ್ಧಾರ್ಥ್‌ ಪೈ ಇದೇ ಸ್ಕ್ರೀನ್‌ಶಾಟ್‌ ಅನ್ನು ಟ್ವೀಟ್ ಮಾಡಿ ನಂತರ ಡಿಲಿಟ್ ಮಾಡಿದ್ದಾರೆ.

If only some Humans could learn from this….This took place in Assam. A man bought a cow from the neighboring village…

Posted by Robindro Sharma on Saturday, June 6, 2020

ಚಿತ್ರಗಳೊಂದಿಗೆ ಹಂಚಿಕೊಂಡ ಕಥೆಯಲ್ಲಿ ಹಸು ಚಿರತೆ ಮರಿಯನ್ನು ರಾತ್ರಿವೇಳೆ ಮುದ್ದಾಡುತ್ತದೆ ಎಂದು ಹೇಳಲಾಗುತ್ತಿದೆ. ಸಂಪೂರ್ಣ ಕಥೆ ಹೀಗಿದೆ, “ಇದು ಅಸ್ಸಾಂನಲ್ಲಿ ನಡೆಯಿತು. ಒಬ್ಬ ವ್ಯಕ್ತಿಯು ಪಕ್ಕದ ಹಳ್ಳಿಯಿಂದ ಹಸುವೊಂದನ್ನು ಖರೀದಿಸಿ ಮನೆಗೆ ತಂದನು, ಅದರ ನಂತರ ಆ ಹಳ್ಳಿಯಲ್ಲಿ ಪ್ರತಿ ರಾತ್ರಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದವು. ಆಗ ಅವನು ಕಳ್ಳರು ಲಾಕ್ ಡೌನ್‌ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆಂದು ಅನುಮಾನಿಸಿ, ಹಸು ಕಟ್ಟಿರುವಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದನು. ಬೆಳಿಗ್ಗೆ ಎದ್ದು ಆ ವೀಡಿಯೊ ನೋಡಿ ಅವನು ನೋಡಿ ಆಘಾತಕ್ಕೊಳಗಾದನು. ಏಕೆಂದರೆ ಪ್ರತಿದಿನ ರಾತ್ರಿ ಹಸುವಿರುವಲ್ಲಿಗೆ ಚಿರತೆ ಮರಿಯೊಂದು ಬರುತ್ತಿದ್ದು ಹಸು ಅದನ್ನು ಮುದ್ದಾಡುತ್ತಿತ್ತು. ಆಗ ಅವನು ಹಸುವನ್ನು ಖರೀದಿಸಿದ ಹಳ್ಳಿಗೆ ಹಿಂತಿರುಗಿ, ಹಿಂದಿನ ಮಾಲೀಕರ ಬಳಿಗೆ ಹೋಗಿ ಚಿರತೆ ಬಗ್ಗೆ ತಿಳಿಸಿ, ಚಿತ್ರ ಮತ್ತು ವೀಡಿಯೊಗಳನ್ನು ತೋರಿಸಿದರು. ಆಗ ಹಿಂದಿನ ಮಾಲೀಕರು ಆ ಮನುಷ್ಯನಿಗೆ ನಡೆದ ಕಥೆಯನ್ನು ಹೇಳಿದರು. ಚಿರತೆ ಮರಿಗೆ ಕೇವಲ 20 ದಿನವಾಗಿದ್ದಾಗ, ಅದರ ತಾಯಿಯನ್ನು ಕೊಲ್ಲಲ್ಪಟ್ಟಿತು. ನಂತರ ಅವನು ಮರಿಯನ್ನು ನೋಡಿ ಕನಿಕರವಾಗಿ ತನ್ನ ಹಸುವಿನ ಬಳಿಗೆ ತಂದುಬಿಟ್ಟನು. ಹಸು ಅದನ್ನು ಸಾಕಿತು. ಚಿರತೆ ಬೆಳೆದು ದೊಡ್ಡದಾದಾಗ ಅದನ್ನು ಕಾಡಿಗೆ ಬಿಡಲಾಯಿತು. ಆದರೆ ಅದು ಯಾವಾಗಲೂ ಹಸುವಿನೊಂದಿಗೆ ಮುದ್ದಾಡಲು ಮತ್ತು ವಿಶ್ರಾಂತಿ ಪಡೆಯಲು ಮರಳಿ ಬರುತ್ತಿದೆ”.

MOTHER'S DAYThese are pictures of a village in Assam (India). A man bought the cow from a neighboring village and…

Posted by John Helios on Tuesday, May 12, 2020

ಈ ಪೋಸ್ಟ್ ಅನ್ನು ಹಲವಾರು ವೈಯಕ್ತಿಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇತ್ತೀಚೆಗೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಸಾವಿಗೆ ಇದನ್ನು ಲಿಂಕ್ ಮಾಡಿ ಆನೆ ಮರಿಯೂ ಉಳಿಯಲಿಲ್ಲ. ಪಶುಗಳಿಗಿಂತ ಮನುಷ್ಯರೆ ಕೆಟ್ಟವರು ಎಂದು ಹೇಳಲಾಗಿದೆ. ಇನ್ನು ಕೆಲವರು ಕಳೆದ ಮೇ ತಿಂಗಳಿನಲ್ಲಿ ಅಮ್ಮಂದಿರ ದಿನದಂದು ಇದೇ ಕಥೆಯನ್ನು ಫೋಟೊ ಜೊತೆಗೆ ಹಂಚಿಕೊಂಡಿದ್ದರು. ಇದಲ್ಲವೇ ತಾಯಿ ಪ್ರೀತಿ ಎಂದು ಬರೆದಿದ್ದರು. ಆ ಪೋಸ್ಟನ್ನು 9000 ಜನ ಹಂಚಿಕೊಂಡಿದ್ದರು.

ಫ್ಯಾಕ್ಟ್-ಚೆಕ್

ಗೂಗಲ್‌ನಲ್ಲಿ ಹಲವು ಕೀವರ್ಡ್ ಹುಡುಕಾಟ ನಡೆಸಿದಾಗ ಅಸ್ಸಾಂನಲ್ಲಿ ಈ ಘಟನೆ ನಡೆದ ಯಾವುದೇ ಸಾಕ್ಷ್ಯ ಸಿಗಲಿಲಲ್ಲ. ಆದರೆ onforest.com ವೆಬ್‌ಸೈಟ್‌ನಲ್ಲಿನ ಲೇಖನವೊಂದು ಸಿಕ್ಕಿತು. ಅಲ್ಲಿ ಹೆಚ್ಚಿನ ರೆಸಲ್ಯೂಶನ್‌ನ ಅದೇ ಚಿತ್ರಗಳು ಲಭ್ಯವಿದೆ. 2002 ರಲ್ಲಿ ಗುಜರಾತ್‌ನ ವಡೋದರಾ ಜಿಲ್ಲೆಯ ಆಂಟೋಲಿ ಗ್ರಾಮದಲ್ಲಿ ಹಸು ಮತ್ತು ಚಿರತೆ ಜೊತೆಗಿದ್ದ ವಿಚಿತ್ರ ಘಟನೆ ನಡೆದಿದೆ ಎಂದು ಲೇಖನ ಹೇಳುತ್ತದೆ.

ಪತ್ರಕರ್ತ ಶ್ಯಾಮ್ ಪರೇಖ್ ಅವರು 2002 ರಲ್ಲಿ ಟೈಮ್ಸ್ ಆಫ್ ಇಂಡಿಯಾಕ್ಕಾಗಿ ಈ ಚಿತ್ರವನ್ನು ಕಳಿಸಿ ವರದಿ ಮಾಡಿದ್ದಾರೆ. ಆದರೆ ಮೇಲಿನ ಕಥೆ ಹೇಳುವಂತೆ ಚಿರತೆ ಮರಿಯ ತಾಯಿ ಸತ್ತು ಹೋಯಿತು, ಹಸು ಸಾಕಿತು ಎಂಬುದು ಯಾವುದೂ ಇಲ್ಲಿ ಉಲ್ಲೇಖವಾಗಿಲ್ಲ. ಅಲ್ಲಿನ ಕಥೆಗೂ ಇಲ್ಲಿನ ವರದಿಗೂ ಯಾವುದೇ ಸಂಬಂಧವಿಲ್ಲ.

ಆದರೆ ಹಸು ಜೊತೆ ಚಿರತೆ ಮರಿ ಇದ್ದುದು ನಿಜವಾಗಿದ್ದರೆ ಅದು ಹೇಗೆ ಸಾಧ್ಯ ಎಂದು ಟೈಮ್ಸ್ ಆಫ್ ಇಂಡಿಯಾ ವಡೋದರಾದ ಕಾಡು ಸಂರಕ್ಷಣಾಧಿಕಾರಿ ಎಚ್ ಎಸ್ ಸಿಂಗ್ ಅವರನ್ನು ಪ್ರಶ್ನಿಸಿದೆ. ಅವರು “ಕೆಲವೊಮ್ಮೆ ಪ್ರಾಣಿಗಳ ನಡವಳಿಕೆಯನ್ನು ಮಾರ್ಪಡಿಸಬಹುದು. ಈ ಸಂದರ್ಭದಲ್ಲಿ, ಬಹುಶಃ ಚಿರತೆ ಉಪ-ವಯಸ್ಕ ಹಂತವನ್ನು ದಾಟಿದೆ, ಅದು ಕಾಡು ಪರಿಸರದಲ್ಲಿ ಬೆಳೆಯದೇ ಗ್ರಾಮೀಣ ಪ್ರದೇಶದಲ್ಲಿ ಬೆಳೆದುದರಿಂದ ಅದು ಬೇಟೆಯಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿಲ್ಲ” ಎಂದಿದ್ದಾರೆ.

ವರದಿ ಮಾಡಿದ ಶ್ಯಾಮ್ ಪರೇಖ್ “ಇದು 18 ವರ್ಷದ ಹಿಂದೆ ಗುಜರಾತ್‌ನಲ್ಲಿ ನಡೆದಿದೆ. ಆ ಸಮಯದಲ್ಲಿ ಹಸುವಿನೊಂದಿಗೆ ಚಿರತೆ ಮರಿ ಇದ್ದುದ್ದನ್ನು ಹೇಳಿದಾಗ ಹಲವಾರು ಜನರು ನಂಬಲಿಲ್ಲ. ಅದಕ್ಕಾಗಿ ನಾವು ಇದನ್ನು ದೃಢೀಕರಿಸಲು ವನ್ಯಜೀವಿ ಛಾಯಾಗ್ರಾಹಕನನ್ನು ಕರೆಸಿ ಅವುಗಳ ಫೋಟೊ ತೆಗೆಯಲು ಕೇಳಿದೆವು” ಎಂದಿದ್ದಾರೆ.

ತೀರ್ಮಾನ

ಗುಜರಾತ್‌ನಲ್ಲಿ ವರದಿಯಾದ ಸುಮಾರು ಎರಡು ದಶಕಗಳಷ್ಟು ಹಳೆಯದಾದ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಇದು ಅಸ್ಸಾಂನಲ್ಲಿ ಸಂಭವಿಸಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ, ಅದಕ್ಕೆ ಮತ್ತಷ್ಟು  ವಿಸ್ತಾರವಾದ ಕಥೆ ಕಟ್ಟಿ ಪುನರುಜ್ಜೀವನಗೊಳಿಸಲಾಗಿದೆ.


ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ

ಇದನ್ನೂ ಓದಿ: ಕೊರೊನಾ Fact check : ಜನ ಮನೆಯಿಂದ ಹೊರಬರದಿರಲು ಬೀದಿಗಳಿಗೆ 800 ಸಿಂಹಗಳನ್ನು ಬಿಟ್ಟ ರಷ್ಯಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...