Homeನಿಜವೋ ಸುಳ್ಳೋFact check: ಕೊರೊನಾ ಮಾನವ ನಿರ್ಮಿತ ವೈರಸ್ ಎಂದು ಜಪಾನ್‌ನ ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆಯೇ?

Fact check: ಕೊರೊನಾ ಮಾನವ ನಿರ್ಮಿತ ವೈರಸ್ ಎಂದು ಜಪಾನ್‌ನ ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆಯೇ?

- Advertisement -
- Advertisement -

ಕೊರೊನಾ ವೈರಸ್ ನೈಸರ್ಗಿದಕವಲ್ಲ, ಇದನ್ನು ತಯಾರಿದಲಾಗಿದೆ ಎಂದು ಜಪಾನಿನ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಹೇಳಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಜಪಾನಿನ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಕ್ಯಾನ್ಸರ್ ಚಿಕಿತ್ಸೆಯ ವಿಭಿನ್ನ ಆವಿಷ್ಕಾರಕ್ಕಾಗಿ 2018 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.

ವೈರಲಾಗುತ್ತಿರುವ ಸಂದೇಶ ಕೆಳಗಿನಂತಿದೆ.

“ಜಪಾನ್‌ನ ಔಷಧ ವಿಭಾಗದ ಪ್ರಾಧ್ಯಾಪಕ, ಪ್ರೊಫೆಸರ್ ಡಾ. ತಸುಕು ಹೊಂಜೊ, ಕೊರೊನಾ ವೈರಸ್ ನೈಸರ್ಗಿಕವಲ್ಲ ಎಂದು ಹೇಳುವ ಮೂಲಕ ಮಾಧ್ಯಮಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಇದು ಸ್ವಾಭಾವಿಕವಾಗಿದ್ದರೆ ಇಡೀ ಪ್ರಪಂಚದ ಮೇಲೆ ಈ ರೀತಿಯ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಪ್ರಕೃತಿಯ ಪ್ರಕಾರ, ವಿವಿಧ ದೇಶಗಳಲ್ಲಿ ತಾಪಮಾನವು ವಿಭಿನ್ನವಾಗಿರುತ್ತದೆ. ವೈರಸ್ ಸ್ವಾಭಾವಿಕವಾಗಿದ್ದರೆ ಅದು ಚೀನಾದಂತೆಯೇ ಇರುವ ತಾಪಮಾನದಲ್ಲಿ ಮಾತ್ರ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಆದರೆ ಇದು ಸ್ವಿಟ್ಜರ್ಲೆಂಡ್‌ನಂತಹ ದೇಶದಲ್ಲಿ ಹರಡುತ್ತಿದೆ, ಅದೇ ರೀತಿ ಮರುಭೂಮಿಯಲ್ಲಿ ಕೂಡಾ ಹರಡುತ್ತಿದೆ… ಪ್ರಾಣಿಗಳು ಮತ್ತು ವೈರಸ್‌ಗಳ ಬಗ್ಗೆ ನಾನು 40 ವರ್ಷಗಳ ಸಂಶೋಧನೆ ಮಾಡಿದ್ದೇನೆ. ಇದು ಸ್ವಾಭಾವಿಕವಲ್ಲ, ಇದನ್ನು ತಯಾರಿಸಲಾಗಿದೆ ಹಾಗೂ ಸಂಪೂರ್ಣವಾಗಿ ಕೃತಕವಾಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ನಾನು 4 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಆ ಪ್ರಯೋಗಾಲಯದ ಎಲ್ಲಾ ಸಿಬ್ಬಂದಿಗಳು ನನಗೆ ಪರಿಚಯವಿದೆ. ಕೊರೊನಾ ಅಪಘಾತದ ನಂತರ ನಾನು ಅವರೆಲ್ಲರಿಗೂ ಫೋನ್ ಮಾಡುತ್ತಿದ್ದೇನೆ. ಆದರೆ ಅವರೆಲ್ಲರ ಫೋನ್ ಮೂರು ತಿಂಗಳಿನಿಂದ ಡೆಡ್ ಆಗಿದೆ. ಈ ಎಲ್ಲಾ ಲ್ಯಾಬ್ ತಂತ್ರಜ್ಞರು ಸಾವನ್ನಪ್ಪಿದ್ದಾರೆ ಎಂಬುವುದು ನನ್ನ ನಿಲುವ”

“ಇಲ್ಲಿಯವರೆಗಿನ ನನ್ನ ಎಲ್ಲ ಜ್ಞಾನ ಮತ್ತು ಸಂಶೋಧನೆಯ ಆಧಾರದ ಮೇಲೆ ಹೇಳುತ್ತಿದ್ದೇನೆ, ಕೊರೊನಾ ಸ್ವಾಭಾವಿಕವಲ್ಲ ಎಂದು 100% ಆತ್ಮವಿಶ್ವಾಸದಿಂದ ಹೇಳಬಲ್ಲೆ. ಇದು ಬಾವಲಿಗಳಿಂದ ಬಂದಿಲ್ಲ, ಚೀನಾ ಇದನ್ನು ತಯಾರಿಸಿದೆ. ನಾನು ಹೇಳುತ್ತಿರುವುದು ಈಗ ಅಥವಾ ನನ್ನ ಮರಣದ ನಂತರ ಸುಳ್ಳು ಎಂದು ಸಾಬೀತಾದರೆ, ನನ್ನ ನೊಬೆಲ್ ಪ್ರಶಸ್ತಿಯನ್ನು ವಾಪಾಸು ಪಡೆಯಬಹುದು. ಚೀನಾ ಸುಳ್ಳು ಹೇಳುತ್ತಿದೆ ಹಾಗೂ ಸತ್ಯವು ಒಂದು ದಿನ ಎಲ್ಲರೆದುರು ಬಹಿರಂಗಗೊಳ್ಳುತ್ತದೆ. ”

ಈ ಸಂದೇಶವು ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯದ ಪ್ರೊ.ತಸುಕು ಹೊಂಜೊ ಅವರು ಹೇಳುತ್ತಿದ್ದಾರೆ, ನಾನು ನನ್ನ ಜೀವನದ 40 ವರ್ಷಗಳನ್ನು ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದ್ದೇನೆ. ಕೊರೊನಾ ವೈರಸ್ ಚೀನಾ ಪ್ರಯೋಗಾಲಯದಲ್ಲಿ ಅಸ್ವಾಭಾವಿಕವಾಗಿ ಸಿದ್ಧಪಡಿಸಿದೆ, ಎಂದು ಬಿಜೆಪಿಯ ಡಿ. ಆರ್. ಯಶ್ಪಾಲ್ ಸಿಂಗ್ ಟ್ವೀಟ್ ಮಾಡಿದ್ದರು.

ಫ್ಯಾಕ್ಟ್ ಚೆಕ್:

ವೈರಲ್ ಸಂದೇಶದಲ್ಲಿ ಇರುವಂತೆ ತಸುಕು ಹೊಂಜೊ, ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕ ಎಂಬುವುದು ನಿಜ. ಕ್ಯಾನ್ಸರ್ ಚಿಕಿತ್ಸೆಯ ಆವಿಷ್ಕಾರಕ್ಕಾಗಿ ಅವರು ಜೇಮ್ಸ್ ಆಲಿಸನ್ ಅವರೊಂದಿಗೆ 2018 ರಲ್ಲಿ ಔಷಧಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪುರಸ್ಕೃತರಾಗಿದ್ದರು. ನ್ಯೂಸ್‌ಮೀಟರ್ ಎಂಬ ಸುದ್ದಿ ಸಂಸ್ಥೆ ಈ-ಮೇಲ್ ಮುಖಾಂತರ ಪ್ರಾಧ್ಯಾಪಕರನ್ನು ಇದರ ಬಗ್ಗೆ ಕೇಳಿದಾಗ ಅವರು, ಈ ಎಲ್ಲಾ ಸುದ್ದಿಗಳುನ್ನು ನಿರಾಕರಿಸಿದ್ದಾರೆ. ಇ-ಮೇಲ್‌ನಲ್ಲಿ, ತಸುಕು ಹೊಂಜೊ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪಿಎಚ್ಡಿ ವಿದ್ಯಾರ್ಥಿ ಅಲೋಕ್ ಕುಮಾರ್ ಪ್ರಾಧ್ಯಾಪಕರ ಪರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.

“ಪ್ರೊ. ಹೊಂಜೊ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಸಂದೇಶದ ಪ್ರತಿಯೊಂದು ವಾಕ್ಯವೂ ಸಂಪೂರ್ಣವಾಗಿ ಸುಳ್ಳು ಮತ್ತು ಸತ್ಯದೊಂದಿಗೆ ಯಾವುದೇ ಸಂಬಂಧವಿಲ್ಲ. ಪ್ರೊ. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ಕೆಲಸ ಮಾಡಲಿಲ್ಲ, ಎಂದಿಗೂ ಅಲ್ಲಿಗೆ ಕರೆ ಮಾಡಿಲ್ಲ ಹಾಗೂ ಅವರು ವೈರಸ್ ಮೂಲ ಮತ್ತು ಕಾರ್ಯಗಳು, ಇತರ ಸಂಬಂಧಿತ ವಿಷಯಗಳ ಬಗ್ಗೆ ಕೆಲಸ ಮಾಡಲಿಲ್ಲ.” ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ವೈರಲ್ ಸಂದೇಶದಲ್ಲಿ ಇರುವಂತೆ, ಪ್ರೊಫೆಸರ್ ತಸುಕು ಹೊಂಜೊ ಕಳೆದ ನಾಲ್ಕು ವರ್ಷಗಳಿಂದ ಚೀನಾದ ವುಹಾನ್‌ನಲ್ಲಿರುವ ಯಾವುದೇ ಪ್ರಯೋಗಾಲಯದಲ್ಲಿ ಕೆಲಸ ಮಾಡಿಲ್ಲ. ಕ್ಯೋಟೋ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ ನ ಅವರ ಜೀವನಚರಿತ್ರೆಯಲ್ಲಿ, ಪ್ರಾಧ್ಯಾಪಕರು 1984 ರಿಂದ 2005 ರವರೆಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಪೂರ್ಣ ಸಮಯ ಬೋಧಿಸುತ್ತಿದ್ದಾರೆಂದು ಹೇಳುತ್ತಿದೆ. ಪ್ರಸ್ತುತ, ಅವರು ಕ್ಯೋಟೋ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಮತ್ತು ಜೀನೋಮಿಕ್ ಮೆಡಿಸಿನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.


ಇದನ್ನೂ ಓದಿ: ಮುಸ್ಲಿಮರಿಂದ ಕಲ್ಲು ತೂರಾಟಕ್ಕೊಳಗಾಗಿ ಯುಪಿ ವೈದ್ಯೆ ವಂದನಾ ತಿವಾರಿ ಸಾವಿಗೀಡಾದರೆ?


ಕೊರೊನಾ ವೈರಸ್ ಸ್ವಾಭಾವಿಕವಲ್ಲ’ ​​ಎಂಬ ಹೇಳಿಕೆಯ ಬಗ್ಗೆ ಗೂಗಲ್ ನಲ್ಲಿ ಹುಡುಕಾಡಿದರೆ ಈ ಸಂಬಂಧ ಹುಡುಕಾಟ ನಡೆಸಿದರೆ ಪ್ರಾಧ್ಯಾಪಕ ತಸುಕು ಹಂಜೊ ಹೇಳಿರುವ ಯಾವುದೇ ಫಲಿತಾಂಶಗಳು ನೀಡುವುದಿಲ್ಲ. ವಾಸ್ತವವಾಗಿ ತಸುಕು ಹಂಜೊ 2020 ರ ಏಪ್ರಿಲ್ 10 ರಂದು ಪ್ರಕಟವಾದ ಜಪಾನ್ ಮೂಲದ ಸುದ್ದಿ ಪೋರ್ಟಲ್ ನಿಕ್ಕಿ ಏಷ್ಯನ್ ರಿವ್ಯೂಗೆ ಸಂದರ್ಶನವೊಂದನ್ನು ನೀಡಿ “ರೋಗವೂ ಚೀನಾದಲ್ಲಿ ಹುಟ್ಟಿಕೊಂಡಿತು ಆದರೆ ದೇಶವು ಮೊದಲನೆಯದಾಗಿ ಚೇತರಿಸಿಕೊಂಡಿತು. ಇದರಿಂದಾಗಿ ಚೀನಾ ಪ್ರಭಾವವನ್ನು ಹೆಚ್ಚಿಸುತ್ತದೆ ಅಥವಾ ಜಗತ್ತು ಚೀನಾವನ್ನು ದೂರವಿಡುತ್ತದೆಯೆ ಎಂದು ನಾನು ಹೇಳಲಾರೆ, ಆದರೆ ವೈರಸ್ ಸ್ಪೋಟಗೊಂಡ ನಂತರ ಜಾಗತಿಕ ಕ್ರಮವು ಬದಲಾಗುವ ಸಾಧ್ಯತೆಯಿದೆ.” ಎಂದಷ್ಟೆ ಹೇಳಿದ್ದರು. ಆದರೆ ಕೊರೊನಾ ಮಾನವ ನಿರ್ಮಿತ ವೈರಸ್ ಎಂಬ ಬಗ್ಗೆ ತಸುಕು ಹಂಜೊ ಎಲ್ಲೂ ಉಲ್ಲೇಖಿಸಿಲ್ಲ.

ಆದರೆ, ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ವೈರಾಲಜಿಸ್ಟ್ ವೈರಸ್ ಮಾನವ ನಿರ್ಮಿತ ಎಂದಿದ್ದಾರೆಂದು ಹೇಳಿರುವ ಮಾಧ್ಯಮ ವರದಿಗಳಿವೆ. “ಫ್ರೆಂಚ್ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ, ಔಷಧದಲ್ಲಿ 2008 ರ ನೊಬೆಲ್ ಪ್ರಶಸ್ತಿಯನ್ನು ಪಡೆದ ಏಡ್ಸ್ ವೈರಸ್ನ ಸಹ-ಅನ್ವೇಷಕ, ಕೊರೊನಾ ವೈರಸ್ ಜೀನೋಮ್ನಲ್ಲಿ ಎಚ್ಐವಿ ಮತ್ತು ಮಲೇರಿಯಾದ ಸೂಕ್ಷ್ಮಾಣು ಅಂಶಗಳು ಹೆಚ್ಚು ಶಂಕಿತವಾಗಿದೆ ಮತ್ತು ವೈರಸ್ನ ಗುಣಲಕ್ಷಣಗಳು ಸ್ವಾಭಾವಿಕವಾಗಿ ಹುಟ್ಟಿಕೊಂಡಿಲ್ಲ ”ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ಪ್ರೊ. ತಸುಕು ಹೊಂಜೊ ಎಂಬ ಹೆಸರಿನ ಖಾತೆ “ಕೊರೊನಾ ವೈರಸ್ ಯಾವ ಉದ್ದೇಶಕ್ಕಾಗಿ ಉತ್ಪತ್ತಿಯಾಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ಇದು ಮಾನವ ನಿರ್ಮಿತ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.” ಎಂದು ಬರೆದಿದೆ. ಆದರೆ ಟ್ವಿಟರ್ ಹ್ಯಾಂಡಲ್ ಅದು ತಸುಕು ಹೊಂಜೊ ಅವರದೆ ಎಂಬ ಬಗ್ಗೆ ಪರಿಶೀಲಿಸಲಾಗಿಲ್ಲ. ಹೊಂಜೊ ಅವರ ಹೇಳಿಕೆಯಂತೆ “ನೀವು ಪ್ರಸ್ತಾಪಿಸಿದ ಟ್ವಿಟರ್ ಹ್ಯಾಂಡಲ್ ಪ್ರೊ. ತಸುಕು ಹೊಂಜೊಗೆ ಸೇರಿಲ್ಲ. ದುರುದ್ದೇಶಪೂರಿತ ಉದ್ದೇಶಗಳೊಂದಿಗೆ ಇದನ್ನು ಯಾರೋ ರಚಿಸಿದ್ದಾರೆ. ದಯವಿಟ್ಟು ಈ ನಕಲಿ ಸುದ್ದಿಯನ್ನು ನಿಲ್ಲಿಸಿ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹುಡುಕಾಟ ನಡೆಸಿದರೆ ಈ ಖಾತೆಯನ್ನು 2020 ರ ಏಪ್ರಿಲ್‌ನಲ್ಲಿ ರಚಿಸಲಾಗಿದೆ ಎಂದು ತಿಳಿಯಬಹುದು, ಏಪ್ರಿಲ್ 24 ರಿಂದ ಕೇವಲ ಎರಡು ಟ್ವೀಟ್‌ಗಳು ಇದ್ದು, ಇದು ನಕಲಿ ಖಾತೆ ಎಂದು ಸೂಚಿಸುತ್ತದೆ.

ಈ ಮೂಲಕ ನಾವು ತಸುಕು ಅವರದ್ದು ಎಂದು ಹೇಳಿಕೊಂಡು ವೈರಲಾಗಿರುವ ಸಂದೇಶವೂ ಸುಳ್ಳು ಎಂದು ತಿಳಿದುಕೊಳ್ಳಬಹುದು. ಕೊರೊನಾವನ್ನು ತಯಾರಿಸಲಾಗಿದೆ ಮತ್ತು ವೈರಸ್ ಸಂಪೂರ್ಣವಾಗಿ ಕೃತಕವಾಗಿದೆ ಎಂದು ತಸುಕು ಹೊಂಜೊ ಹೇಳಿದ್ದಾರೆನ್ನುವ ಸಂದೇಶ ಸುಳ್ಳಾಗಿದೆ. ಯಾಕೆಂದರೆ ಪ್ರೊ. ಹೊಂಜೊ ಅವರೆ ಸ್ವತಃ ಇದನ್ನು ನಿರಾಕರಿಸಿದ್ದಾರೆ. ಅಲ್ಲದೆ ಕೊರೊನಾ ವೈರಸನ್ನು ತಯಾರಿಸಲಾಗಿದೆ ಎಂದ ಪ್ರೊ.ತಾಸುಕು ಹೊಂಜೊ ಕುರಿತ ಯಾವುದೇ ಮಾಧ್ಯಮ ವರದಿಗಳಿಲ್ಲ.

ಜಪಾನಿನ ಪ್ರೊಫೆಸರ್ ವುಹಾನ್ ಲ್ಯಾಬ್‌ನಲ್ಲಿ 4 ವರ್ಷಗಳನ್ನು ಕಳೆದಿದ್ದಾರೆ ಎಂಬ ಸುದ್ದಿ ಕೂಡಾ ಸುಳ್ಳಾಗಿದ್ದು. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ನಾಲ್ಕು ವರ್ಷಗಳನ್ನು ಕಳೆದಿಲ್ಲ ಎಂದು ಅವರ ಜೀವನಚರಿತ್ರೆ ಹೇಳುತ್ತದೆ, ಹಾಗೂ ಅವರದು ಎಂದು ಹೇಳಿಕೊಳ್ಳುವ ಟ್ವಿಟರ್ ಹ್ಯಾಂಡಲ್ ಕೂಡಾ ನಕಲಿಯಾಗಿದೆ.


ಇದನ್ನೂ ಓದಿ:  ಅರ್ನಬ್ ಗೋಸ್ವಾಮಿಯ ದಾಳಿಯ ವಿಡಿಯೋ, ದಾಳಿಗೂ ಮುನ್ನವೇ ಮಾಡಲಾಗಿತ್ತೇ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...