Homeದಿಟನಾಗರಫ್ಯಾಕ್ಟ್‌ಚೆಕ್: ಜಿಯೋ ಜಾಹಿರಾತಿನಿಂದ ಶಾರುಖ್ ಖಾನ್‌ನನ್ನು ಮುಖೇಶ್ ಅಂಬಾನಿ ಕಿತ್ತೆಸೆದರೆ?

ಫ್ಯಾಕ್ಟ್‌ಚೆಕ್: ಜಿಯೋ ಜಾಹಿರಾತಿನಿಂದ ಶಾರುಖ್ ಖಾನ್‌ನನ್ನು ಮುಖೇಶ್ ಅಂಬಾನಿ ಕಿತ್ತೆಸೆದರೆ?

ಈ ಟ್ವಿಟ್ಟರ್‌ ಹ್ಯಾಂಡಲ್ ಹಂಚಿಕೊಂಡಿರುವ ಟ್ವೀಟ್ 10,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು 50,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

- Advertisement -
- Advertisement -

ಒಂದು ತಿಂಗಳೊಳಗೆ 12,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಗಳಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೆಸರು ಇರುವ ಟ್ವಿಟರ್ ಖಾತೆ ಜೂನ್ 20 ರಂದು ಟ್ವೀಟ್ ಮಾಡಿ, ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಜಿಯೋ ಜಾಹೀರಾತಿನಿಂದ ತೆಗೆದುಹಾಕಲು ನಿರ್ಧರಿಸಿದ್ದಾರೆ ಎಂದು ಬರೆದಿದೆ.

ಈ ಟ್ವಿಟ್ಟರ್‌ ಹ್ಯಾಂಡಲ್ ಹಂಚಿಕೊಂಡಿರುವ ಟ್ವೀಟ್ 10,000 ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಮತ್ತು 50,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

ಕೇವಲ ಅದೊಂದೆ ಅಲ್ಲದೆ ಮುಕೇಶ್ ಅಂಬಾನಿ ಹೆಸರಿನ ಹಲವಾರು ಟ್ವಿಟ್ಟರ್‌ ಅಕೌಂಟ್‌ಗಳು ”ನಾನು ಜಿಯೊ ಸಿಮ್‌ ಕಾರ್ಡ್‌ನಿಂದ ಶಾರುಖ್ ಖಾನ್‌ನನ್ನು ತೆಗೆದು ಹಾಕುತ್ತಿದ್ದೇನೆ, ನಿಮ್ಮ ಅಭಿಪ್ರಾಯವೇನು?” ಎಂದು ಅದೇ ಪೋಸ್ಟನ್ನು ಬರೆದಿದೆ.

ಫ್ಯಾಕ್ಟ್ ಚೆಕ್

ಮೊದಲನೆಯದಾಗಿ ಮುಖೇಶ್ ಅಂಬಾನಿ ಅವರ ಹಸರಿರುವ ಈ ಖಾತೆಯನ್ನು ಟ್ವಿಟ್ಟರ್‌ ಪರಿಶೀಲಿಸಿಲ್ಲ. ಯಾಕೆಂದರೆ ಈ ಹ್ಯಾಂಡಲ್‌ನಲ್ಲಿ ‘ಬ್ಲೂ ಟಿಕ್’ ಇಲ್ಲ.

ಎರಡನೆಯದಾಗಿ, ಹ್ಯಾಂಡಲ್ ತನ್ನನ್ನು ‘ರಿಯಲ್‌ಮುಕೇಶಂಬನ್’ (Realmukeshamban) ಎಂದು ಉಲ್ಲೇಖಿಸಿದೆ, ಇದರಲ್ಲಿ ‘ಅಂಬಾನಿ’ ಎಂಬೂದನ್ನು ತಪ್ಪಾಗಿ ಬರೆಯಲಾಗಿದೆ.

ಇದಲ್ಲದೆ, ಈ ಖಾತೆಯ ಟ್ವೀಟ್‌ಗಳನ್ನು ಗಾಯಕ ಸೋನು ನಿಗಮ್ ಮತ್ತು ನಟಿ ಕಂಗನಾ ರಾಣಾವತ್ ಅವರ ಹೆಸರಿರುವ ನಕಲಿ ಖಾತೆಗಳು ರಿಟ್ವೀಟ್ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ

ಕಂಗನಾ ರನೌತ್ ಅವರ ನಕಲಿ ಖಾತೆ ಅಂಬಾನಿಯನ್ನು ಜಿಯೋ ಜಾಹೀರಾತಿನಿಂದ ಶಾರುಖ್ ಖಾನ್ ಅವರನ್ನು ತೆಗೆದುಹಾಕುವಂತೆ ಕೇಳಿಕೊಂಡಿತ್ತು.

ಈ ಎರಡೂ ಖಾತೆಗಳು ಶಾರುಖ್ ಖಾನ್ ಅವರನ್ನು ಜಿಯೋ ಜಾಹೀರಾತಿನಿಂದ ತೆಗೆದುಹಾಕುವಂತೆ ಅಂಬಾನಿಯನ್ನು ಒತ್ತಾಯಿಸಿದ್ದವು.

ಅಲ್ಲದೆ ಶಾರುಖ್ ಖಾನ್ ಅವರನ್ನು ತೆಗೆದು ಹಾಕಲಾಗಿದೆ ಎಂದು ಬರೆದಿರುವ ಖಾತೆಯ ಬಯೋದಲ್ಲಿ “ಈ ಖಾತೆಯು ಮುಖೇಶ್ ಅಂಬಾನಿ ಅವರ ಮೀಡಿಯಾ ಪ್ಯಾನೆಲ್ ತಂಡ ನಿರ್ವಹಿಸುತ್ತಿದೆ.” ಎಂದು ಬರೆದಿದೆ.

ಖಾತೆಯ ಸ್ಥಳ ನವದೆಹಲಿ ಎಂದು ಉಲ್ಲೇಖಿಸಿದೆ ಆದರೆ ಅಂಬಾನಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

ಒಟ್ಟಿನಲ್ಲಿ ತಿಳಿದು ಬರುವುದೇನೆಂದರೆ ಪ್ರಸ್ತುತ ಟ್ವಿಟ್ಟರ್ ಖಾತೆ ಹಾಗೂ ಟ್ವೀಟ್ ನಕಲಿಯಾಗಿದ್ದು, ಅಂಬಾನಿ ಅಥವಾ ಅವರ ಕುಟುಂಬದ ಸದಸ್ಯರು ಅಧಿಕೃತ ಟ್ವಿಟರ್ ಖಾತೆಗಳನ್ನು ಹೊಂದಿಲ್ಲ ಎಂದು ”ದಿ ಕ್ವಿಂಟ್ಗೆ” ವರದಿ ಮಾಡಿದೆ.


ಓದಿ: ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿ ಮುಖೇಶ್ ಅಂಬಾನಿ; ಅವರು ಈ ಸ್ಥಾನಕ್ಕೆ ಬಂದಿದ್ದು ಹೇಗೆ ಗೊತ್ತೆ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...