Homeಅಂಕಣಗಳುಚಳಿಮಳೆಗೆ ಬಗ್ಗದ ರೈತರೂ ಮತ್ತು ಬರ ಬಿದ್ದ 56 ಅಂಗುಲದ ಎದೆಯೂ: ಉಮಾಪತಿ ಡಿ

ಚಳಿಮಳೆಗೆ ಬಗ್ಗದ ರೈತರೂ ಮತ್ತು ಬರ ಬಿದ್ದ 56 ಅಂಗುಲದ ಎದೆಯೂ: ಉಮಾಪತಿ ಡಿ

- Advertisement -
- Advertisement -

ಸಕಾಲಕ್ಕೆ ಬೀಳುವ ಮಳೆಯನ್ನು ರೈತರು ಬಗೆ ಬಗೆಯಾಗಿ ಬಣ್ಣಿಸಿ ಸಂತಸಪಡುವುದುಂಟು. ಉತ್ತರ ಭಾರತದ ಕಡೆಗೆ ಇಂತಹ ಮಳೆ ಸುರಿದರೆ ತುಪ್ಪ ಸುರಿಯಿತು, ಬಂಗಾರವೇ ಭುವಿಗಿಳಿಯಿತು ಎಂದು ಉದ್ಗರಿಸುತ್ತಾರೆ. ಹಿಂದಿ-ಪಂಜಾಬಿ ಸೀಮೆಯ ಹೊಲಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಇದೀಗ ಕಾಣುವುದು ಸಾಸಿವೆ ಪೈರಿನ ಹಳದಿ ಹೂ ವಿಸ್ತಾರ. ದಕ್ಷಿಣದವರು ಒಗ್ಗರಣೆಗೆ-ಉಪ್ಪಿನಕಾಯಿಗೆ ಮಾತ್ರವೇ ಸಾಸಿವೆ ಬಳಸಿದರೆ, ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಹರಿಯಾಣ, ಪಂಜಾಬ್, ದೆಹಲಿ ಮಾತ್ರವಲ್ಲದೆ ಒಡಿಶಾ ಬಂಗಾಳ ಅಸ್ಸಾಮಿನಲ್ಲಿ ಅಡುಗೆ ಎಣ್ಣೆಯಾಗಿ ಸಾಸಿವೆ ಎಣ್ಣೆಯೇ ಜನಪ್ರಿಯ. ಹೀಗಾಗಿ ಸಾಸಿವೆ ಭಾರೀ ಪ್ರಮಾಣದ ಬೆಳೆ. ಕೊರೆಯುವ ಚಳಿಯಲ್ಲಿ ಮೈಯಲ್ಲಿ ಬಿಸಿ ಹುಟ್ಟಿಸುವ ಆಹಾರ ಸಾಸಿವೆ. ಸಾಸಿವೆ ಸೊಪ್ಪನ್ನು ಅರೆದು ಮಾಡಿದ ಪಲ್ಯ ಮತ್ತು ಮುಸುಕಿನ ಜೋಳದ ರೊಟ್ಟಿ ಚಳಿಯನ್ನು ಓಡಿಸುವ ಜನಪ್ರಿಯ ಮತ್ತು ರುಚಿಕರ ಖಾದ್ಯ. ರಸ್ತೆ ಬದಿಯ ಡಾಬಾಗಳಿಂದ ಹಿಡಿದು ಪಂಚತಾರಾ ಹೋಟೆಲುಗಳೂ ಉಣಬಡಿಸುವ ಊಟ ’ಸರಸೋಂ ದಾ ಸಾಗ್- ಮಕ್ಕೀ ದೀ ರೋಟಿ’.

ಉತ್ತರ ಭಾರತದುದ್ದಗಲವನ್ನು ಶೀತ ಮಾರುತಗಳು ರಾಚಿ ಬಡಿಯತೊಡಗಿವೆ. ಇಂತಹ ಜನವರಿಯಲ್ಲಿ ಅಷ್ಟಿಷ್ಟು ಮಳೆ ಬೀಳುವುದುಂಟು. ಆದರೆ ಕಳೆದ ಮೂರು ದಿನಗಳಿಂದ ಅನಿರೀಕ್ಷಿತವಾಗಿ ದೊಡ್ಡ ಮಳೆಯೇ ಸುರಿಯತೊಡಗಿದೆ ಮತ್ತು ಸತತವಾಗಿ ಸುರಿಯತೊಡಗಿದೆ. ಮೇ-ಜೂನ್-ಜುಲೈ ತಿಂಗಳುಗಳಲ್ಲಿ ಉಗ್ರ ಉಷ್ಣಮಾರುತಗಳು ನೆಲವನ್ನು ಸುಟ್ಟು, ಕಟುವಾದ ಕರಕಲು ವಾಸನೆಯನ್ನು ಗಾಳಿಗೆ ತೂರಿ ಬೆರೆಸುತ್ತವೆ. ಇವುಗಳ ಪ್ರಕೋಪಕ್ಕೆ ಕಷ್ಟಜೀವಿಗಳು ಕಣ್ಣೀರಿಟ್ಟು ಸಾವುನೋವುಗಳು ಉಂಟಾಗುವುದು ದುರಂತ ವಾರ್ಷಿಕ ವಿಧಿ. ಚಳಿಗಾಲವೂ ಅಂತೆಯೇ. ಹಿಮಾಲಯದ ತಪ್ಪಲು ಸೀಮೆಯಲ್ಲಿ ಹಿಮ ಸುರಿಯತೊಡಗಿದರೆ ಬಯಲು ಸೀಮೆ ಗಡಗಡ ನಡುಗುತ್ತದೆ. ನಿರ್ಗತಿಕರು ರಾತ್ರಿ ವೇಳೆ ಕೈ ಕಾಯಿಸಿಕೊಳ್ಳಲು ಸರ್ಕಾರಗಳೇ ಹಾದಿಬೀದಿಗಳಲ್ಲಿ ಕಟ್ಟಿಗೆ ಉರಿಸುವ ಯೋಜನೆಗಳಿದ್ದವು.

ಕಳೆದ ಗುರುವಾರ ಶುಕ್ರವಾರ ಶೀತಮಾರುತಗಳು ಉತ್ತರದ ತಾಪಮಾನವನ್ನು ಎರಡು ಡಿಗ್ರಿಗಿಂತ ಕೆಳಗಿಳಿಸಿದ್ದವು. ಹದಿನೈದು ವರ್ಷಗಳ ದಾಖಲೆಯ ಚಳಿ. ದೆಹಲಿಯ ಗಡಿಗಳ ಹೆದ್ದಾರಿಗಳ ವಿಸ್ತಾರದಲ್ಲಿ ಆಕಾಶವನ್ನೇ ಹೊದ್ದು ಮೈ ಚಾಚಿದೆ ರೈತ ಪ್ರತಿಭಟನೆ. ಮಣ್ಣಿನ ಮಕ್ಕಳಿಗೆ ಚಳಿ ಮಳೆ ಬಿಸಿಲು ಲೆಕ್ಕವೇ ಅಲ್ಲ. ’ರಾಜ್ಯಗಳಳಿಯಲಿ, ರಾಜ್ಯಗಳುದಿಸಲಿ, ಹಾರಲಿ ಗದ್ದುಗೆ ಮುಕುಟಗಳು… ಬಿತ್ತುಳುವುದ ತಾನು ಬಿಡುವುದೆ ಇಲ್ಲ ಎಂಬ ಕವಿವಾಣಿಯ ಯೋಗಿಗಳು ರೈತರು- ಕೃಷಿ ಕಾರ್ಮಿಕರು. ಆದರೆ ಒಕ್ಕಲುತನದ ಮಳೆಗಾಳಿ ಚಳಿ ಬಿಸಿಲುಗಳ ಗೇಮೆಯ ನಂತರ ತಲೆ ಮರೆಸಿಕೊಂಡು ನಿದ್ರಿಸಲು ಸೂರೊಂದು ಇರುತ್ತದೆ. ಪ್ರತಿಭಟಿಸುತ್ತಿರುವ ರೈತರಿಗೆ ಅಂತಹ ಅನುಕೂಲವಿಲ್ಲ.

ಶೀತದೊಂದಿಗೆ ಮಳೆಯೂ ಸುರಿಯುತ್ತಿದ್ದು ಪ್ರತಿಭಟನಾನಿರತ ರೈತರ ಹಿಟ್ಟು, ಕಾಳು, ಬೇಳೆಗಳು, ಕಟ್ಟಿಗೆ-ಬೆರಣಿ ಉರುವಲುಗಳು, ಹಾಸಿಗೆ ಹೊದಿಕೆ ಬಟ್ಟೆ ಬರೆಗಳು ತೋಯ್ದು ಹೋಗಿವೆ. ದಿನಗಟ್ಟಲೆ ಸೂರ್ಯನ ದರ್ಶನವಿಲ್ಲದೆ ಮುಚ್ಚಿಕೊಂಡ ಆಗಸ. ಜಲನಿರೋಧಕ ಟೆಂಟುಗಳು, ತಾಡಪಾಲುಗಳು ಎಲ್ಲರ ಬಳಿಯೂ ಇಲ್ಲ. ಇದ್ದರೂ ಅವುಗಳಿಂದ ಚಳಿಯನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಟೆಂಟಿನೊಳಗೆ ನೆಲದ ಮೇಲೆ ನೀರು ಹರಿದು ನಿಲ್ಲುವುದನ್ನು ತಡೆಯಲಾಗುವುದಿಲ್ಲ. ಉತ್ತರದ ಚಳಿಯ ಈ ಉಪಟಳದ ತೀವ್ರತೆ ಅನುಭವಿಸಿದವರಿಗಷ್ಟೇ ತಿಳಿದೀತು.

ಅನ್ನ ಬೆಳೆಯುವ ರೈತರು-ಕೂಲಿಕಾರರು ದಿನಗಟ್ಟಲೆ ಈ ಸಂಕಟಕ್ಕೆ ಸಿಲುಕಿದ್ದಾರೆ. ಆದರೆ ಅವರಲ್ಲಿಯ ಪ್ರತಿಭಟನೆಯ ಕಾವು ತುಸುವೂ ಕುಂದಿಲ್ಲ. ವಯಸ್ಸು ಸಂದ ವೃದ್ಧರು ಮಕ್ಕಳು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವ ಸಂಘರ್ಷವಿದು. ಆತ್ಮಹತ್ಯೆಗಳೂ ಸೇರಿದಂತೆ ರೈತ ಪ್ರತಿಭಟನೆಯಲ್ಲಿ ಸಾವುಗಳು ನಿತ್ಯ ಸಂಭವಿಸುತ್ತಲೇ ಇವೆ. ಈ ಸಂಖ್ಯೆ ಐವತ್ತನ್ನು ದಾಟಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಒಕ್ಕಲುತನಕ್ಕೆ ಇಳಿದಿರುವ ಜವಾನ್-ಕಿಸಾನ್‌ರು ಕೂಡ ಈ ಪ್ರತಿಭಟನೆಯಲ್ಲಿದ್ದಾರೆ. ಜೈ ಜವಾನ್-ಜೈ ಕಿಸಾನ್ ಎಂದು ಘೋಷಣೆ ಹಾಕುವವರು ತಮ್ಮ ಕಾಮಾಲೆಗೆ ಔಷಧಿ ಸೇವಿಸಿ ಈ ಚಳವಳಿಯನ್ನು ನೋಡಬೇಕಿದೆ.

ಯೋಧರನ್ನೂ ರೈತರನ್ನೂ ಆಕಾಶದೆತ್ತರಕ್ಕೆ ಹೊಗಳುವ ದೊಡ್ಡ ವರ್ಗವೊಂದು ಈ ಚಳವಳಿಯನ್ನು ಹಳಿಯುವ ನೀಚತನಕ್ಕೆ ಇಳಿದಿದೆ. ದೇಶದ ಪ್ರಧಾನಮಂತ್ರಿಯವರ ಐವತ್ತಾರು ಅಂಗುಲದ ಭಾರೀ ಎದೆಯಲ್ಲಿ ದೆಹಲಿಯ ಗಡಿಗಳ ಬಯಲಿನಲ್ಲಿ ಬೀಡು ಬಿಟ್ಟಿರುವ ಕಿಸಾನ್- ಜವಾನ್‌ರ ಕುರಿತು ತುಸುವಾದರೂ ಪಸೆ ಕಂಡಿಲ್ಲದಿರುವುದು ಅತೀವ ವ್ಯಥೆಯ ಸಂಗತಿ. ಎಂತೆಂತಹ ವಿಷಯಗಳ ಕುರಿತು ಟ್ವೀಟ್ ಮಾಡುವ ಪ್ರಧಾನಿಯವರ ಕಲ್ಲು ಗುಂಡಿಗೆಯನ್ನು ರೈತರ ದುಮ್ಮಾನ ತಾಕಿಯೇ ಇಲ್ಲ! ಅವರು ಅಲ್ಲಿ ಚಳಿಮಳೆ ಗಾಳಿಯಲ್ಲಿ ಪಾಡುಪಡುತ್ತಿದ್ದರೆ ಇತ್ತ ಕೋಟಿನ ಮೇಲೆ ಕೋಟು ಉಟ್ಟು ಬೆಚ್ಚಗಿರುವ ದೇಶ ಆಳುವವರಿಗೆ ಮನಸು ಹೇಗೆ ಬರುತ್ತದೆಯೋ ಎಂಬುದು ಸೋಜಿಗದ ಸಂಗತಿ.

ಪ್ರತಿಭಟನಾನಿರತ ರೈತರು ಮೋದಿಯವರ ಶತ್ರುಗಳಲ್ಲ. ಅವರನ್ನು ಗದ್ದುಗೆಯಿಂದ ಇಳಿಸಬೇಕೆಂದು ಕಳೆದ ಆರು ವರ್ಷಗಳಲ್ಲಿ ಒಮ್ಮೆಯೂ ಚಕಾರ ಎತ್ತಿದವರಲ್ಲ. ಆದರೂ ಪ್ರಧಾನಿಯವರು ಅವರನ್ನು ವೈರಿಗಳಂತೆ ಕಾಣುತ್ತಿರುವುದು ದುಃಖದ ಸಂಗತಿ. ಭಾಷಣಗಳಲ್ಲಿ ರೈತನನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುವವರು ಆತ ಪ್ರತ್ಯಕ್ಷನಾಗಿ ಎದುರಾದರೆ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆಯಿದು. ’ಕಲ್ಲನಾಗರೆ ಕಂಡರೆ ಹಾಲೆರೆವರು, ಉಣ್ಣದ ಲಿಂಗಕ್ಕೆ ಬೋನವನಿಕ್ಕುವರು, ಉಣುವ ಜಂಗಮ ಬಂದರೆ ಪೋ ಪೋ ಎಂಬುವರು’ ಎಂಬ ವಚನದಂತೆ ಡಂಭಾಚಾರದ ಪರಾಕಾಷ್ಠೆಯಿದು.


ಇದನ್ನೂ ಓದಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್‍ಯಾಲಿಯ ಟ್ರೈಲರ್ ಜನವರಿ 7 ರಂದು ತೋರಿಸುತ್ತೇವೆ: ರೈತ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...