Homeಮುಖಪುಟರೈತರ ಆಕ್ರೋಶದ ಪರಿಣಾಮ: ಸರ್ಕಾರ ಪತನದ ಭೀತಿಯಲ್ಲಿ ಹರಿಯಾಣ ಸಿಎಂ!

ರೈತರ ಆಕ್ರೋಶದ ಪರಿಣಾಮ: ಸರ್ಕಾರ ಪತನದ ಭೀತಿಯಲ್ಲಿ ಹರಿಯಾಣ ಸಿಎಂ!

ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಈಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನೇ ಕಡಿಮೆ ಮಾಡಿದ್ದಾರೆ.

- Advertisement -
- Advertisement -

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‌ಗೆ ಒಂದು ಕಡೆ ರೈತರ ಪ್ರತಿಭಟನೆಯ ಆಕ್ರೋಶದ ಬಿಸಿ ತಟ್ಟತೊಡಗಿದ್ದರೆ, ಇನ್ನೊಂದು ಕಡೆ ಆಡಳಿತದ ಮಿತ್ರ ಪಕ್ಷ ಜನತಾ ಜನನಾಯಕ್ ಪಾರ್ಟಿ (ಜೆಜೆಪಿ) ರೈತರಿಗೆ ಬೆಂಬಲವಾಗಿ ಯಾವ ಕ್ಷಣದಲ್ಲಾದರೂ ಹೋಳಾಗಬಹದು ಅಥವಾ ಅದರ ಎಲ್ಲ 10 ಶಾಸಕರೂ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳಬಹುದು ಎಂಬ ಭಯ ಕಾಡತೊಡಗಿದೆ.

ಪ್ರತಿವರ್ಷ ಎಲ್ಲ ಮುಖ್ಯಮಂತ್ರಿಗಳು ನಿರ್ದಿಷ್ಟ ಸ್ಥಳದಲ್ಲಿ ಗಣರಾಜ್ಯೋತ್ಸವ ಧ್ವಜ ಹಾರಿಸುತ್ತಾರೆ. ಆದರೆ, ಈ ಸಲ ಖಟ್ಟರ್ ಗಣರಾಜ್ಯೋತ್ಸವ ಕಾರ್ಯಕ್ರಮದ ಸ್ಥಳವನ್ನೇ ಶಿಫ್ಟ್ ಮಾಡಿಸಿದ್ದರು. ಪಾಣಿಪತ್‌ನಲ್ಲಿ ಧ್ವಜ ಹಾರಿಸಲು ಹಿಂದೇಟು ಹಾಕಿದ ಖಟ್ಟರ್, ಸ್ವಲ್ಪ ಸುರಕ್ಷಿತ ಸ್ಥಳವೆಂದು ಪಂಚಕುಲಾದಲ್ಲಿ ಕಾರ್ಯಕ್ರಮ ನಡೆಸಿ ತ್ರಿವರ್ಣ ಧ್ವಜ ಹಾರಿಸಿದರು!

ಅರೆ, ಯಾರ ಭಯ? ಉಗ್ರರ ಭಯವಾ? ಊಹೂಂ, ರೈತರು ಕಪ್ಪು ಬಟ್ಟೆ ಪ್ರದರ್ಶನ ಮಾಡಬಹುದು ಅಥವಾ ಘೇರಾವ್ ಹಾಕಬಹುದು ಎಂಬ ಆತಂಕ. ತನ್ನ ರಾಜ್ಯದಲ್ಲೇ ಇಷ್ಟು ಆತಂಕಿತನಾಗಿ ಆಡಳಿತ ಮಾಡಿದ ಸಿಎಂ ಇನ್ನೊಬ್ಬರಿರಲಿಕ್ಕಿಲ್ಲ.

ಪಾಣಿಪತ್ ಮನೋಹರಲಾಲ್ ಖಟ್ಟರ್ ಸ್ವಗ್ರಾಮ ಕರ್ನಾಲ್‌ನಿಂದ 16 ಕಿಮೀ ದೂರದಲ್ಲಿದೆ. 15 ದಿನಗಳ ಹಿಂದೆ ಖಟ್ಟರ್ ಕರ್ನಾಲ್‌ಗೆ ಹೋಗಲೂ ಆಗಲಿಲ್ಲ. ಏಕೆಂದರೆ, ರೈತರು ಅಲ್ಲಿನ ಹೆಲಿಪ್ಯಾಡ್ ಧ್ವಂಸಗೊಳಿಸಿದ್ದರು. ಕಾರ್ಯಕ್ರಮ ನಡೆಯಬೇಕಿದ್ದ ವೇದಿಕೆಗೆ ನುಗ್ಗು ಚೆಲ್ಲಾಪಿಲ್ಲಿ ಮಾಡಿದ್ದರು. ತಿಂಗಳ ಹಿಂದೆ ಅದೇ ಕರ್ನಾಲ್‌ನಲ್ಲಿ ನಡೆಯಬೇಕಿದ್ದ ಸಾರ್ವಜನಿಕ ಕಾರ್ಯಕ್ರಮವನ್ನೇ ಖಟ್ಟರ್ ರದ್ದು ಮಾಡಬೇಕಾಯಿತು. ಕಾರಣ ರೈತರನ್ನು ಎದುರಿಸುವ ರಾಜಕೀಯ ದೃಢತೆಯೇ ಇಲ್ಲ.

ಅಂಬಾಲಾದಲ್ಲಿ 13 ರೈತರ ಮೇಲೆ ಕೊಲೆ ಯತ್ನ, ದಂಗೆ ಪ್ರಕರಣ ದಾಖಲಿಸಲಾಗಿದೆ. ರೈತರು ಖಟ್ಟರ್‌ಗೆ ಕಪ್ಪು ದ್ವಜ ಪ್ರದರ್ಶನ ಮಾಡಿದ್ದರು. ಹಾಗೆಯೇ ರೈತರು ಖಟ್ಟರ್ ಬೆಂಗಾವಲು ವಾಹನವನ್ನು ತಡೆದು ವಾಪಸ್ ಕಳಿಸಿದ್ದರು.

ರಾಜ್ಯದಲ್ಲಿ ಅರಾಜಕತೆ ಉಂಟಾಗಬಹುದು ಎಂಬ ನೆಪ ನೀಡಿ, 22 ಜಿಲ್ಲೆಗಳ ಪೈಕಿ 17ರಲ್ಲಿ ಇಂಟರ್‌ನೆಟ್ ಸೇವೆಯನ್ನು ಖಟ್ಟರ್ ಸ್ಥಗಿತಗೊಳಿಸಿದ್ದಾರೆ. ರೈತ ಹೋರಾಟ ಎಲ್ಲೆಡೆ ಹರಡದಂತೆ ತಡೆಯುವ ಕುತಂತ್ರ ಇದಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರಿದು ರೈತರು ದೇವಸ್ಥಾನದ ಮೈಕ್‌ಗಳನ್ನು ಉಪಯೋಗಿಸಿ ರೈತ ಹೋರಾಟದ ಪರಿಸ್ಥಿತಿಯನ್ನು ವಿವರಿಸಿ, ಹೋರಾಟ ಸೇರಿಕೊಳ್ಳಲು ಕರೆ ನೀಡುತ್ತಿದ್ದಾರೆ.

ಸರ್ಕಾರ ಪತನದ ಭೀತಿ

ಇನ್ನೊಂದು ಕಡೆ ಖಟ್ಟರ್‌ಗೆ ಸರ್ಕಾರ ಬೀಳಬಹುದೆಂಬ ಆತಂಕ ಶುರುವಾಗಿದೆ. ಜನವರಿ 26ರ ಕೆಂಪುಕೋಟೆಯ ಅಹಿತಕರ ಘಟನೆ ನಂತರ ಸ್ವಲ್ಪ ನಿರಾಳರಾಗಿದ್ದ ಅವರಿಗೆ, ಟಿಕಾಯತ್ ಮನವಿ ನಂತರ ತೀವ್ರಗೊಳ್ಳುತ್ತಿರುವ ರೈತರ ಪ್ರತಿಭಟನೆ ಚಿಂತೆಗೀಡುಮಾಡಿದೆ.

90 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 40. 10 ಜೆಜೆಪಿ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಯಾಗಿದೆ. ಇಬ್ಬರು ಪಕ್ಷೇತರರು ರೈತರ ಬೆಂಬಲಾರ್ಥವಾಗಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಾರೆ.

ಜೆಜೆಪಿ ನಾಯಕ, ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌತಾಲರ ಮೇಲೆ ಅವರ ಪಕ್ಷದ ಶಾಸಕರೆ ಒತ್ತಡ ಹೇರುತ್ತಿದ್ದು, ರೈತರ ಪರ ನಿಲ್ಲೋಣ, ಸರ್ಕಾರಕ್ಕೆ ಬೆಂಬಲ ಹಿಂಪಡೆಯೋಣ ಎನ್ನುತ್ತಿದ್ದಾರೆ. ಕೆಲವರು ಜೆಜೆಪಿ ಬಿಡಲೂ ತಯಾರಾಗಿದ್ದಾರೆ. ಐಎನ್‌ಎಲ್‌ಡಿ ಶಾಸಕ ಅಭಯ ಸಿಂಗ್ ಚೌತಾಲ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ, ದುಷ್ಯಂತ್ ರಾಜಿನಾಮೆಗೆ ಒತ್ತಡ ಹೆಚ್ಚುತ್ತಿದೆ.

ಕೃಷಿ ಕಾಯ್ದೆ ಪರ ಮೋದಿಯವರನ್ನು ಬೆಂಬಲಿಸಿ, ಪ್ರಧಾನಿಗೆ ಶಕ್ತಿ ತುಂಬಬೇಕಿದ್ದ ಖಟ್ಟರ್, ಕಳೆದ ವಾರ ಡಿಸಿಎಂ ದುಷ್ಯಂತರನ್ನು ದೆಹಲಿಗೆ ಕರೆದುಕೊಂಡು ಹೋಗಿ, ಮೋದಿ-ಶಾ ಎದುರು ನಿಲ್ಲಿಸಿ, ನೀವೇ ನನ್ನ ಸರ್ಕಾರ ಉಳಿಸಿ ಎಂದು ಮನವಿ ಮಾಡಿದ್ದರು.

ರಾಜ್ಯವೊಂದರ ಪ್ರಬಲ ಸಮುದಾಯಕ್ಕೆ ಮುಖ್ಯಮಂತ್ರಿ ಪದವಿ ನೀಡದೇ, ಸಣ್ಣ ಸಮುದಾಯಕ್ಕೆ ನೀಡುವ ಮುಲಕ ಮುಖ್ಯಮಂತ್ರಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಮೋದಿ-ಶಾ ತಂತ್ರದ ಭಾಗವಾಗಿ ಖಟ್ಟರ್‌ರನ್ನು ಹರಿಯಾಣ ಸಿಎಂ ಮಾಡಲಾಗಿದೆ. ಪ್ರಬಲ ಜಾಟ್ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನಿರಾಕರಿಸಿ, ಪಂಜಾಬಿ ಖತ್ರಿ ಸಮುದಾಯಕ್ಕೆ ಸೇರಿದ ಖಟ್ಟರ್‌ಗೆ ಕಿರೀಟ ತೊಡಿಸಲಾಗಿತ್ತು. ಐದು ವರ್ಷಗಳ ಅಡಳಿತದಲ್ಲಿ ಅಂಥದ್ದೇನೂ ಮಾಡದ ಪರಿಣಾಮ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 40 ಸೀಟು ಸಿಕ್ಕವು. ಕಾಂಗ್ರೆಸ್‌ನ ಭೂಪಿಂದರ್ ಹೂಡಾ ಮತ್ತು ಐಎನ್‌ಎಲ್‌ಡಿಯ ಓಂಪ್ರಕಾಶ್ ಚೌತಾಲರ (ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿದ್ದಾರೆ) ಭ್ರಷ್ಟಾಚಾರ ಪ್ರಕರಣಗಳ ಲಾಭ ಪಡೆದೂ ಬಿಜೆಪಿಗೆ ಸಿಕ್ಕಿದ್ದು 40 ಸೀಟು ಮಾತ್ರ.
ಈಗ ಜೆಜೆಪಿ ಕೈ ಕೊಟ್ಟರೆ ಖಟ್ಟರ್ ಸರ್ಕಾರ ಬೀಳುವುದು ಖಚಿತ. ಅದಕ್ಕೆ ನೇರ ಕಾರಣ ಎಂಬುದರಲ್ಲಿ ಸಂಶಯವಿಲ್ಲ.

  • ಪಿ.ಕೆ ಮಲ್ಲನಗೌಡರ್, (ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವು)

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...