Homeಮುಖಪುಟಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು.

- Advertisement -
- Advertisement -

ಲಂಗರ್… ರೈತ ಹೋರಾಟ ಶುರುವಾದಾಗಿನಿಂದ ಎಲ್ಲರ ಬಾಯಲ್ಲಿ ಬರುತ್ತಿರುವ ಮತ್ತು ಹೆಚ್ಚು ಪ್ರಚುರಗೊಳ್ಳುತ್ತಿರುವ ಪದ. ಲಂಗರ್ ಎಂದರೆ ಅಡುಗೆಮನೆ ಎಂಬ ಅರ್ಥ ಇದೆ. ಇದು ಸಿಖ್ ಸಮುದಾಯದ ಜನರು ಒಂದಾಗಿ, ಒಕ್ಕೂಟದ ರೀತಿಯಲ್ಲಿ ಅಡುಗೆ ಮಾಡಿ, ಗುರುದ್ವಾರಗಳಲ್ಲಿ ನೀಡುವ ಉಚಿತ ಊಟದ ಸೇವೆಯಾಗಿದೆ.

ಲಂಗರ್‌ಗಳಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಇಲ್ಲಿ ಎಲ್ಲರು ಸಮಾನರು. ಎಲ್ಲರು ಜೊತೆಯಲ್ಲಿ ಕುಳಿತು ಊಟ ಮಾಡಬೇಕು. ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬುದು ಲಂಗರ್‌ಗಳ ಆಶಯ. ಲಂಗರ್‌ಗಳು ಸಸ್ಯಹಾರವನ್ನು ಒದಗಿಸುತ್ತವೆ. ಸಿಖ್ ಸಮುದಾಯದ ಸ್ವಯಂ ಸೇವಕರು ಲಂಗರ್‌ಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಲಂಗರ್‌ಗಳ ಇತಿಹಾಸ

ಲಂಗರ್‌ಗಳಿಗೆ 1500 ವರ್ಷಗಳ ಇತಿಹಾಸವಿದೆ. ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಕಾಲದಿಂದಲು ಲಂಗರ್‌ಗಳು ಸೇವೆ ನೀಡುತ್ತಿವೆ. ಪಂಜಾಬ್‌ನಲ್ಲಿ ಈ ಲಂಗರ್‌ಗಳ ಆರಂಭವಾಯಿತು ಎಂದು ಪ್ರತಿಭಟನಾ ನಿರತ ಪಂಜಾಬ್‌ನ ರೈತರು ತಿಳಿಸುತ್ತಾರೆ.

ಸಿಖ್ ಧರ್ಮದ ಎರಡನೇ ಗುರುಗಳಾದ ಗುರು ಅಂಗದ್ ಅವರು ಗುರುದ್ವಾರಗಳಲ್ಲಿ ಈ ಲಂಗರ್‌ಗಳಿಗೆ ನಿಯಮಬದ್ಧವಾಗಿ ಚಾಲನೆ ನೀಡಿದವರು. ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು. ಗುರುದ್ವಾರಗಳಿಂದ ಹೊರಭಾಗದಲ್ಲೂ ಹಸಿವಿನಿಂದ ಬಳಲುವವರಿಗೆ ಊಟ ಸಿಗಬೇಕು ಎಂದು ಪ್ರತಿಪಾದಿಸಿದರು. ತಮ್ಮನ್ನು ಭೇಟಿಯಾಗಲು ಬರುವವರು ಮೊದಲು ಊಟ ಮಾಡಿ ನಂತರ ಭೇಟಿಯಾಗಬೇಕು ಎಂಬ ಹವ್ಯಾಸವನ್ನು ಬೆಳೆಸಿದರು. ಇದು ಈಗಲೂ ಸಿಖ್ ಸಮುದಾಯದಲ್ಲಿ ಜಾರಿಯಿದೆ.

ಗಡಿಗಳಲ್ಲಿ ಲಂಗ್‌ರ್‌ಗಳು ತಲೆಎತ್ತಿದ ಬಗೆ

ಕಳೆದ 5 ತಿಂಗಳಿನಿಂದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ನಡೆಯುತ್ತಿರುವ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಪ್ರಮುಖವಾಗಿದೆ. ವಿಶ್ವದಾದ್ಯಂತ ಹಬ್ಬಿಕೊಂಡಿರುವ ಲಂಗರ್‌ಗಳು ಈ ಹೋರಾಟದಲ್ಲಿ ಚಾರಿತ್ರಿಕ ಕೊಡುಗೆ ನೀಡುತ್ತಿವೆ. ಪ್ರತಿಭಟನೆಗೆ ಬರುವವರಿಗೆ ಮೊದಲು ಲಂಗರ್‌ಗಳ ದಾರಿ ತಿಳಿಸಲಾಗುತ್ತದೆ. ಮೊದ ಮೊದಲು ಸಾಮಾನ್ಯ ಊಟಕ್ಕೆ ಮಾತ್ರ ಸೀಮಿತವಾಗಿದ್ದ ಲಂಗರ್‌ಗಳು ಈಗ ಜನರ ಜೀವನ ಶೈಲಿ ಜೊತೆಗೆ ಸಾಕಾಷ್ಟು ಬದಲಾವಣೆ ಹೊಂದಿವೆ.

ನವೆಂಬರ್ 26 ರಂದು ಪಂಜಾಬ್ ರೈತರು ಆಂಭಿಸಿದ ದೆಹಲಿ ಚಲೋ ಜೊತೆಗೆ ಲಂಗರ್‌ಗಳು ರೈತರ ಬೆನ್ನು ಹತ್ತಿದ್ದವು. ರೈತರು ತಮ್ಮ ಪ್ರತಿಭಟನಾ ಸ್ಥಳಗಳನ್ನು ಗುರುತಿಸಿ ಟ್ರ್ಯಾಲಿಗಳನ್ನು ನಿಲ್ಲಿಸಿದ ಕೂಡಲೇ ಲಂಗರ್‌ಗಳು ಕೂಡ ಕಾರ್ಯನಿರ್ವಹಿಸಲು ಆರಂಭಿಸಿದ್ದವು. ದೆಹಲಿಯ ಗಡಿಭಾಗಗಳಾದ ಸಿಂಘು ಬಾರ್ಡರ್, ಟಿಕ್ರಿ ಬಾರ್ಡರ್, ಶಹಾಜಾನ್ಪುರ, ಗಾಝಿಪುರ್, ಚಿಲ್ಲಾ, ಪಲ್ವಲ್ ಬಾರ್ಡರ್, ಇಂದ್ರಪ್ರಸ್ಥ ಬಾರ್ಡರ್‌ಗಳು ಸೇರಿದಂತೆ ಲಕ್ಷಾಂತರ ಜನ ಪ್ರತಿಭಟನಾಕಾರರು ಇರುವಲ್ಲಿಯೇ ಸಾವಿರಾರು ಲಂಗರ್‌ಗಳು ತಲೆ ಎತ್ತಿದವು.

ಸಿಖ್ ಧರ್ಮ ರೂಪುಗೊಂಡಿರುವುದೆ ಒಂದು ಸಂಘಟನೆಯ ಮಾದರಿಯಲ್ಲಿ. ಇಲ್ಲಿ ಎಲ್ಲರೂ ನಿಯಮಗಳಿಗೆ ಬದ್ಧರಾಗಿರಬೇಕು. ತಾವು ಸಂಪಾದಿಸಿದ ಸಂಪತ್ತಿನಲ್ಲಿ ಶೇಕಡಾ 10 ರಷ್ಟನ್ನು ಲಂಗರ್‌ಗಳಿಗೆ ಪ್ರತಿಯೊಬ್ಬರು ದೇಣಿಗೆ ನೀಡಲೇಬೇಕು. ಇದರಿಂದಲೇ ಲಂಗರ್‌ಗಳಿಗೆ ಬೇಕಾದ ದೇಣಿಗೆ ಸಂಗ್ರಹವಾಗುತ್ತದೆ.

ದಿನವೀಡಿ ಸೇವೆ

ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿರುವ ಲಂಗರ್‌ಗಳು 24 ಗಂಟೆಗಳು ಪ್ರತಿಭಟನಾ ನಿರತರ ಹಸಿವನ್ನು ಇಂಗಿಸುತ್ತಿವೆ. ಬೆಳಗ್ಗೆ 4 ಗಂಟೆಯಿಂದ ಕಾರ್ಯ ನಿರ್ವಹಿಸಲು ಆರಂಭಿಸುವ ಇವುಗಳ ಕೆಲಸ ರಾತ್ರಿ 10 ಗಂಟೆಯವರೆಗೂ ಸಾಗುತ್ತಲೇ ಇರುತ್ತದೆ. ನಂತರವೂ ಯಾರಾದರೂ ಊಟಕ್ಕೆ ಬಂದರೇ ಇಲ್ಲ ಎನ್ನುವುದಿಲ್ಲ. ರೈತ ಹೋರಾಟದಲ್ಲಿರುವ ಲಂಗರ್‌ಗಳು ಬೆಳಗ್ಗೆ ಚಹಾ ನೀಡುವ ಮೂಲಕ ಆರಂಭವಾಗುತ್ತವೆ. ರಾತ್ರಿ ಹಾಲು ನೀಡುವ ಮೂಲಕ ಕೊನೆಗೊಳ್ಳುತ್ತವೆ.

ಸಾಮಾನ್ಯ ಊಟ ಉಪಚಾರಕ್ಕೆ ಮೀಸಲಾಗಿದ್ದ ಇವುಗಳಲ್ಲಿ ಈಗ ಹಲವಾರು ಬದಲಾವಣೆಗಳು ಕಂಡು ಬಂದಿವೆ. ಹಲವು ವಿಭಿನ್ನ ಲಂಗರ್‌ಗಳು ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿವೆ. ಚಹಾದ ಲಂಗರ್, ಕೀರ್ ಕಿ ಲಂಗರ್, ಬೆಳಗಿನ ತಿಂಡಿ ಲಂಗರ್, ಊಟದ ಲಂಗರ್, ಸಂಜೆ ಸ್ಯಾಕ್ಸ್ ಲಂಗರ್, ಬರ್ಗರ್ ಲಂಗರ್, ಪಿಜ್ಜಾ ಲಂಗರ್, ಪಿಂಡಿ (ಸಿಹಿ ಉಂಡೆಗಳು) ಕಾ ಲಂಗರ್, ಹಲ್ವಾ ಮತ್ತು ಜಿಲೇಬಿ ಲಂಗರ್‌ಗಳೆಂಬ ಹಲವು ರೀತಿಯಲ್ಲಿ ಬದಲಾಗಿವೆ.

ದೇಶ-ವಿದೇಶಗಳ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಂಗರ್‌ಗಳ ಒಂದು ಭಾಗಗಳು ಈ ಪ್ರತಿಭಟನಾ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದೇಶ ವಿದೇಶಗಳ ಸಾವಿರಾರು ಸ್ವಯಂ ಸೇವಕರು ಲಂಗರ್‌ಗಳಲ್ಲಿ ಅಡುಗೆ ಮಾಡುವುದು, ಸ್ವಚ್ಛತೆ, ಬಡಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ಗುರುದ್ವಾರಗಳ ಲಂಗರ್‌ಗಳ ಜೊತೆಗೆ ಪ್ಯಾಮಿಲಿ ಲಂಗರ್‌ಗಳು ಇಲ್ಲಿವೆ. ಹಳ್ಳಿಯ ಎರಡು ಮೂರು ಮನೆಗಳ ಸದಸ್ಯರು ಸೇರಿಯು ಲಂಗರ್‌ಗಳನ್ನು ನಡೆಸುತ್ತಿದ್ದಾರೆ. ಕುಟುಂಬದ ಲಂಗರ್‌ಗಳಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆಗೆ ಹೊರ ಭಾಗಗಳಿಂದ ಬಂದವರಿಗೂ ಆಹಾರ ಒದಗಿಸಲಾಗುತ್ತದೆ. ಇವುಗಳಲ್ಲಿ ಮನೆಯ ಸದಸ್ಯರೇ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ.

ರೈತ ಹೋರಾಟದಲ್ಲಿರುವ ಲಂಗರ್‌ಗಳಲ್ಲಿ ಊಟ ಉಪಚಾರದ ಜೊತೆಗೆ ದಿನ ಬಳಕೆಯ ಅಗತ್ಯ ವಸ್ತುಗಳಾದ ಬ್ರಶ್, ಪೇಸ್ಟ್, ಸೋಪ್, ಶೂ, ಚಪ್ಪಲಿ, ಬಟ್ಟೆ, ಚಳಿಗಾಲದ ಕ್ರೀಮ್‌ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್, ಒಳಉಡುಪುಗಳನ್ನು ಸಹ ನೀಡಲಾಗುತ್ತಿದೆ.

ಲಂಗ್‌ರ್‌ಗಳ ಮಹತ್ವ

70 ದಿನಗಳ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಹೋರಾಟಗಳು ಹಲವು ಬಾರಿ ಹಣಕಾಸು ಕೊರತೆ, ಊಟದ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೊನೆಗೊಂಡ ಉದಾಹರಣೆಗಳಿವೆ. ಲಕ್ಷಾಂತರ ಜನರು ಒಂದೆಡೆ ಇರುವಾಗ ಊಟ-ಉಪಚಾರಗಳು ಸರಿಯಾಗಿ ಇಲ್ಲದಿದ್ದರೇ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹೋರಾಟ ಕೂಡ ಕೊನೆಗೊಳ್ಳಬಹುದು. ಇಂತಹ ಸ್ಥಿತಿಗಳನ್ನು ಈ ಲಂಗರ್‌ಗಳು ಪಾರು ಮಾಡಿವೆ.

ಲಂಗರ್‌ಗಳಲ್ಲಿ ಮೈಕ್‌ಗಳ ಮೂಲಕ ಇಡೀ ದಿನ ಪ್ರತಿಭಟನಾಕಾರರನ್ನು ಊಟಕ್ಕೆ ಕರೆಯಲಾಗುತ್ತಿರುತ್ತದೆ. ಹೋರಾಟಕ್ಕೆ ಶಕ್ತಿ ತುಂಬುವ ವಾಕ್ಯಗಳನ್ನು ಘೋಷಿಸುತ್ತಿರುತ್ತವೆ. ಲಂಗರ್‌ಗಳು ಇಡೀ ದಿನ ಆಹಾರ, ಚಹಾ ನೀಡುವ ಮೂಲಕ ತೀವ್ರ ಚಳಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಚ್ಚಗಿನ ಭಾವ ಒದಗಿಸುತ್ತಿವೆ. ಉತ್ತಮ ಆಹಾರ ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಮನಸ್ಸಿಗೂ ಹೋರಾಟದ ಹುಮ್ಮಸ್ಸು ನೀಡುತ್ತಿದೆ.

  • ಮಮತ ಎಂ

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...