ಕೇರಳದ ಆಲಫುಝದಲ್ಲಿ ಬಲಪಂಥೀಯ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ರ್ಯಾಲಿಯಲ್ಲಿ, ‘ಸಂಘ ಪರಿವಾರದವರನ್ನು ಕೊಲೆ ಮಾಡುತ್ತೇವೆ’ ಎಂದು ‘ದ್ವೇಷ’ ಘೋಷಣೆಗಳನ್ನು ಕೂಗಿದ ‘ಅಪ್ರಾಪ್ತ ಬಾಲಕ’ನ ತಂದೆಯನ್ನು ಶನಿವಾರ ಬಂಧಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ 20 ಮಂದಿಯನ್ನು ಬಂಧಿಸಲಾಗಿದೆ.
ಮೇ 21 ರಂದು ಬಲಪಂಥೀಯ ಸಂಘಟನೆ ಪಿಎಫ್ಐ ಸಂಘಟಿಸಿದ್ದ ರ್ಯಾಲಿಯಲ್ಲಿ 11 ವರ್ಷದ ಬಾಲಕ ವ್ಯಕ್ತಿಯೊಬ್ಬನ ಭುಜದ ಮೇಲೆ ಕುಳಿತು, “ಅಕ್ಕಿ, ಹೂವು ಮತ್ತು ಕರ್ಪೂರಗಳನ್ನು ಮನೆಯಲ್ಲಿ ತಯಾರಾಗಿಟ್ಟುಕೊಳ್ಳಿ. ನಿಮ್ಮ ‘ಯಮದೂತ’ರು ಬರುತ್ತಿದ್ದೇವೆ. ನಮ್ಮ ನಾಡಿನಲ್ಲಿ ಮರ್ಯಾದೆಯಿಂದ ಇದ್ದರೆ ಜೀವಿಸಬಹುದು” ಎಂದು ಸಂಘಪರಿವಾರದ ವಿರುದ್ಧ ಘೋಷಣೆ ಕೂಗಿದ್ದರು. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿವಾದದ ಹಿನ್ನೆಲೆಯಲ್ಲಿ ಬಾಲಕನ ಕುಟುಂಬ ಕೇರಳದ ಕೊಚ್ಚಿಯಲ್ಲಿ ತಲೆಮರೆಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರ್ಯಾಲಿ ನಡೆದ ಎರಡು ದಿನಗಳ ನಂತರ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದು, ಆತನ ತಂದೆ ಇಂದು ಅಲಪ್ಪುಝಕ್ಕೆ ಮನೆಗೆ ಮರಳುತ್ತಿದ್ದಾಗ ಬಂಧಿಸಲಾಗಿದೆ.
ಇದನ್ನೂ ಓದಿ: ಉಪ್ಪಿನಂಗಡಿ ಅಶಾಂತಿ ಪ್ರಕರಣಕ್ಕೆ ಪಿಎಫ್ಐ, ಸಂಘ ಪರಿವಾರ, ಪೊಲೀಸರು ಸಮಾನ ಹೊಣೆಗಾರರು- ಸಿಪಿಐ(ಎಂ)
ಬಾಲಕನನ್ನು ಒಳಗೊಂಡ ವರದಿಯನ್ನು ಕೇರಳ ಸರ್ಕಾರ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸುವ ಸಾಧ್ಯತೆ ಇದೆ.
ಈ ಮಧ್ಯೆ ಬಾಲಕನ ತಂದೆ ತನ್ನ ಮಗನ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎನ್ಆರ್ಸಿ, ಸಿಎಎ ವಿರುದ್ಧದ ಪ್ರತಿಭಟನೆಗಳಲ್ಲಿ ಕೂಡಾ ಅವರು ಈ ಹಿಂದೆ ಅದೇ ಘೋಷಣೆಗಳನ್ನು ಕೂಗಿದ್ದರು ಎಂದು ಬಾಲಕನ ತಂದೆ ಹೇಳಿದ್ದಾರೆ.
“ನಾವು ಈ ಹಿಂದೆಯೂ ಇದೇ ಘೋಷಣೆಗಳನ್ನು ಕೂಗಿದ್ದೇವೆ. ನಾವು ಯಾವುದೇ ಧರ್ಮವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ. ಇದು ನಮ್ಮ ಪಕ್ಷದ ಚಟುವಟಿಕೆಯ ಭಾಗವಾಗಿದೆ” ಎಂದು ಬಾಲಕನ ತಂದೆ ಹೇಳಿದ್ದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಮುಸ್ಲಿಮರ ಹತ್ಯಾಕಾಂಡ ಪ್ರಚೋದನೆ: ಫೆಡರಲ್ ಬ್ಯಾಂಕ್ ಅಧಿಕಾರಿ ವಿರುದ್ಧ FIR
ಈ ಘೋಷವಾಕ್ಯವನ್ನು ನಿಮಗೆ ಯಾರು ಹೇಳಿಕೊಟ್ಟರು ಎಂದು ಪತ್ರಕರ್ತರು ಬಾಲಕನ್ನು ಪ್ರಶ್ನಿಸಿದಾ, “ನಾನು ಎನ್ಆರ್ಸಿ ಕಾರ್ಯಕ್ರಮಕ್ಕೆ ಹೋದಾಗ ಇದೇ ಘೋಷಣೆಯನ್ನು ಹೇಳಿದ್ದೆ. ಅದನ್ನೆ ಮತ್ತೆ ಇಲ್ಲಿ ಹೇಳಿದ್ದೇನೆ. ಅದನ್ನು ನಾನಾಗೆ ಕಲಿತಿದ್ದೇನೆ” ಎಂದು ಹೇಳಿದ್ದಾರೆ.
ಬಾಲಕನ ತಂದೆ ಬಲಪಂಥೀಯ ಸಂಘಟನೆಯಾದ ಪಿಎಫ್ಐ ಸದಸ್ಯ ಎಂದು ಎನ್ಡಿಟಿವಿ ಉಲ್ಲೇಖಿಸಿದೆ. “ಘೋಷವಾಕ್ಯವು ಸಂಘ ಪರಿವಾರದ ವಿರುದ್ಧ ಮಾತ್ರವೇ ಹೊರತು ಹಿಂದೂ ಅಥವಾ ಕ್ರಿಶ್ಚಿಯನ್ನರ ವಿರುದ್ಧ ಅಲ್ಲ. ಎನ್ಆರ್ಸಿ ಮತ್ತು ಸಿಎಎ ಪ್ರತಿಭಟನೆಯ ಸಂದರ್ಭದಲ್ಲೂ ಈ ಘೋಷಣೆಯನ್ನು ಕೂಗಲಾಯಿತು” ಎಂದು ಹೇಳಿದ್ದಾರೆ.
ದ್ವೇಷ ಘೋಷಣೆಗಳನ್ನು ಕೂಗಿದ ಮಗುವಿಗೆ ಸಮಾಲೋಚನೆ ನೀಡುವಂತೆ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಟ್ಟಂಚೇರಿ ಸಹಾಯಕ ಪೊಲೀಸ್ ಕಮಿಷನರ್ ವಿಜಿ ರವೀಂದ್ರನಾಥ್ ಹೇಳಿದ್ದಾರೆ.
ಮೇ 21 ರಂದು ಪಿಎಫ್ಐ ರ್ಯಾಲಿಗೆ ಗಂಟೆಗಳ ಮೊದಲು, ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆಯಾದ ಬಜರಂಗದಳ ಕಾರ್ಯಕರ್ತರು ಅಲಪ್ಪುಝದಲ್ಲಿ ‘ಶೌರ್ಯ ರ್ಯಾಲಿ’ ನಡೆಸಿದ್ದರು. “ದೇಶವನ್ನು ದೇಶ ವಿರೋಧಿಗಳು ಮತ್ತು ಕೋಮುವಾದಿಗಳಿಗೆ ಒಪ್ಪಿಸಲು ಸಾಧ್ಯವಿಲ್ಲ” ಎಂಬ ಘೋಷಣೆಗಳನ್ನು ಕೂಗಿದ್ದರು.



ಕಮ್ಯುನಿಸ್ಟ್ ರು ಸಾಕಿ ಸಲುಹಿದ ಕೂಸುಗಳು ಈಗ ಅಕ್ಕಿ ,ಕರ್ಪೂರ ರೆಡಿ ಇಟ್ಕೊಳ್ಳಿ ಅನ್ನುವ ಮಟ್ಟಕ್ಕೆ ಹೆಳೆ ಮಕ್ಕಳನ್ನು ತರಬೇತಿ ಮಾಡಿದೆ
Action and reaction