Homeಮುಖಪುಟರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

ರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

- Advertisement -
- Advertisement -

ನೆಲ ಹದ ಮಾಡುವ ಮಳೆಯ ನಿರಿಕ್ಷೆಯಲ್ಲಿರುವ ರೈತರಿಗೆ ಈ ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೊಡ್ಡ ಹೊಡೆತ ನೀಡಿದೆ. ರಸ ಗೊಬ್ಬರ ದರಗಳನ್ನು ಏರಿಸುವ ಮೂಲಕ ಅದು ರೈತರನ್ನು ‘ಕೊಲ್ಲಲು’ ಹೊರಟಿದೆಯಾ ಎಂಬ ಪ್ರಶ್ನೆ ಕೇಳಿ ಬರುತ್ತಿವೆ.

ಶೇ. 45-58 ರವೆರೆಗೆ ಇಫ್ಕೋ ಗೊಬ್ಬರದ ದರಗಳನ್ನು ಏರಿಸಿದೆ. ಅಂದರೆ 50 ಕೆಜಿ ಡಿಎಪಿ ಬೆಲೆ 1200 ಇದ್ದುದ್ದು ಏಕಾಏಕಿ 1900 ರೂ ಆಗಿದೆ. ಇದು ದೇಶದ ಕೃಷಿ ವ್ಯವಸ್ಥೆಯನ್ನು ಜರ್ಜರಿತಗೊಳಿಸಲಿದೆ. ಈ ಕುರಿತು ರಾಜ್ಯದ ವಿವಿಧ ಭಾಗಗಳ ರೈತರು, ಕೃಷಿತಜ್ಞರನ್ನು  ನಾನುಗೌರಿ.ಕಾಂ ಮಾತನಾಡಿಸಿತು.

‘ಈ ಸಲ ಗೊಬ್ಬರ ತೆಗೆದುಕೊಳ್ಳಾಕೂ ಮೊದ್ಲು, ಎಣ್ಣಿ (ಕ್ರಿಮಿನಾಶಕ) ತಗೋಳ್ಳೊದೇ ವಾಸಿ’ ಎಂದರು ಸಿಂಧನೂರು ತಾಲೂಕಿನ ಮಾಟೂರಿನ ಯುವ ರೈತ ಬಸನಗೌಡ ಸಂಜಿ.
‘ಅಲ್ರಿ, ಡಿಎಪಿ ಗೊಬ್ಬರದ 50 ಕೆಜಿ ಚಿಲಕ್ಕ 1,900 ರೂ ಅಂತೆ. ಅಂದ್ರ ಈ ಸಲ ಎರಡು ಎಕರೆ ಭತ್ತದ ಬೆಳಗೆ 5-6 ಸಾವಿರ ಹೆಚ್ಚುವರಿ ರೊಕ್ಕ ಹಾಕ್ಬೇಕು. ಅದ್ಯಾವುದೋ ತಾಂತ್ರಿಕ ನೆಪದಲ್ಲಿ ನಮ್ಮ ಕಡೆ ಬೆಳೆದ ಭತ್ತಕ್ಕೆ ಸರಿಯಾದ ಎಂಎಸ್‌ಪಿನೂ ಕೊಡ್ತಾ ಇಲ್ಲ. ಪಂಜಾಬಿನ ರೈತರಂತೆ ನಾವು ಕೂಡ ಸಂಘಟಿತರಾಗುವ ಸಂದರ್ಭವಿದು’ ಎಂದು ಬಸನಗೌಡ ಹೇಳಿದರು.

‘ಈಗೀಗ ನಮಗೆ ಗೊತ್ತಾಗುತ್ತಿದೆ, ಯೋಗೇಂದ್ರ ಯಾದವ್, ದೇವಿಂದರ್ ಸಿಂಗ್ ಹೇಳುವ ಸತ್ಯಗಳು. ಇವೆಲ್ಲ ನಮ್ಮ ರೈತರಿಗೆ ತಲುಪಲು ನಿಮ್ಮಂತಹ ಮೀಡಿಯಾ ಕನ್ನಡದಲ್ಲಿ ಇನ್ನಷ್ಟು ವಿವರ ಕೊಡಬೇಕು’ ಎಂದರಲ್ಲದೇ, ‘ಭೂರಹಿತರು ಲೀಸ್‌ನಲ್ಲಿ ಒಂದೋ-ಎರಡು ಎಕರೆ ಜಮೀನಿನಿನಲ್ಲಿ ಬೆಳೆದು ಬದುಕು ಕಟ್ಟಕೊಳ್ತಾ ಇದ್ದರು. ಈ ಸಲ ಅವರು ಈ ಅಪಾಯದ ಕೃಷಿ ಮಾಡಂಗಿಲ್ಲ. ಮತ್ತೆ ಗುಳೆ ಹೋಗ್ತಾರೆ ಅಷ್ಟೇ’ ಎಂದು ಆ ಭಾಗದ ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ಇಟ್ಟರು.

‘ಕಳೆದ ವರ್ಷ ಎಲ್ಲ ಕ್ಷೇತ್ರಗಳೂ ಮುಗ್ಗಟ್ಟಿನಲ್ಲಿದ್ದಾಗ, ಈ ದೇಶದ ಜಿಡಿಪಿಗೆ ಹೆಚ್ಚಿನ ನೆರವು ನಿಡಿದ್ದು ಕೃಷಿ. ಅದು ಎಲ್ಲಾ ಸಂಕಷ್ಟಗಳ ನಡುವೆಯೂ ಈ ದೇಶಕ್ಕೆ ಅನ್ನ ನಿಡಿದೆ. ಈಗ ಗೊಬ್ಬರದ ದರ ಹೆಚ್ಚಿಸಿ ಕೃಷಿ ಕ್ಷೇತ್ರವನ್ನೆ ನಾಶ ಮಾಡಲು ಹೊರಟಿದೆ ಮೋದಿ ಸರ್ಕಾರ’ ಎಂದು ಹಿಂದೆ ಹಲವು ದಶಕಗಳ ಕಾಲ ಕೃಷಿ ಮಾಡಿದ ಲೇಖಕ ಕೆ.ಪಿ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದೇ ತರಹದ ಅಭಿಪ್ರಾಯ ವ್ಯಕ್ತಪಡಿಸಿದ ಕೃಷಿ ತಜ್ಞ ಪ್ರಕಾಶ ಕಮ್ಮರಡಿ, ‘ನಾಟಿ, ಬಿತ್ತನೆ ಮಾಡುವ ಈ ಸಂದರ್ಭದಲ್ಲಿ ಇವರು ಗೊಬ್ಬರದ ದರ ಜಾಸ್ತಿ ಮಾಡಿ ರೈತರನ್ನು ಕೊಲ್ಲಲು ಹೊರಟಿದ್ದಾರೆ. ಈ ಸಂದರ್ಭದಲ್ಲಿ ರೈತರು ಹೇಗೋ ಬೀಜದ ತಯಾರಿ ಮಾಡಿಕೊಂಡಿದ್ದಾರೆ. ಆದರೆ 1,900 ರೂಪಾಯಿ ಕೊಟ್ಟು 50ಕೆಜಿಯ ಡಿಎಪಿ ಪಡೆಯಲು ಆಗುತ್ತದಾ? ನಮ್ಮ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಕಳೆದ ಸಾಲಿನ ಶೇ.30ರಷ್ಟು ಕೃಷಿ ಉತ್ಪನ್ನ ಮಾರಾಟವಾಗಿಯೇ ಇಲ್ಲ. ಅದರಲ್ಲಿ ಶೇ. 18ರಷ್ಟು ಹಾಳಾಗಿ ಹೋಗಿದೆ. ರೈತರ ಬಳಿ ಹಣವಿಲ್ಲ. ಚುನಾವಣೆಗಳ ನಂತರ ಈ ಸರ್ಕಾರ ಕ್ರೂರವಾಗಿ ರೈತರ ಮೇಲೆ ಆಕ್ರಮಣ ಮಾಡಿದೆ’ ಎಂದರು.

ಮಂಡ್ಯದ ಎಲೆಚಾಕನಹಳ್ಳಿಯ ಸಣ್ಣ ರೈತ ವೈ.ಜೆ. ಸ್ವಾಮಿ ಮಾತನಾಡಿ, ‘ಮುಕ್ಕಾಲು ಎಕರೆಯಲ್ಲಿ ಚೊಟ್ ಪೈರು (ಬೀನ್ಸ್ ತರಹದ ತರಕಾರಿ) ಹಾಕಿದ್ದೇವೆ. ಈಗ ಕೆಜಿಗೆ 15 ರೂ ದರ ಇದೆ. ಆದರೆ ಡಿಎಪಿ ದರ ಹೆಚಾಗಿದ್ದರಿಂದ ಮತ್ತೆ ಗೊಬ್ಬರ ಹಾಕಿದರೆ ನಾವು ಮಾಡಿದ ಖರ್ಚು ಸಹ ನಮ್ಮ ಕೈಗೆ ಸಿಗಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಒಣ ಬೇಸಾಯದವರ ಕಷ್ಟ ಕೇಳುವಂತಿಲ್ಲ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಣ್ಣ ರೈತ ಮಲ್ಲಪ್ಪ ಅವರು, ನಮ್ಮ ಎದುರು ಕೃಷಿ ಸಂಕಷ್ಟದ ಇನ್ನೊಂದು ಆಯಾಮವನ್ನು ಮುಂದೆ ಇಟ್ಟರು. ‘ಹಳ್ಳಿಕಡೆ ಜಮೀನ್ದಾರರು ಬೀಜ, ಗೊಬ್ಬರ ಅಂಗಡಿ ಇಟ್ಟಾರು. ಮೊದ್ಲ ಅಪರಾತಪರಾ ರೇಟು ಹಾಕಿ, ಬಡ್ಡಿ ವಸೂಲಿ ಮಾಡ್ತಾ ಇದ್ದರು. ಈಗ ಗೊಬ್ಬರ ರೇಟು ಜಾಸ್ತಿ ಆದ ಮ್ಯಾಗ ಅವರ ಕಂತ್ರಿಗಿರಿ ಇನ್ನಾಕಿಷ್ಟ ಹೆಚ್ಚಾಗುತ್ತ. ಇಲ್ಲಿ ನಾವು ಮಳಿ ನಂಬಿ ಹೊಲ ಮಾಡೋ ಮಂದಿ. ಎರಡೆಕೆಗೆ ಗೊಬ್ಬರ ಖರ್ಚು 5-6 ಸಾವಿರ ಹೆಚಾದ್ರ, ಸಣ್ಣಪುಟ್ಟ ಹೊಲ ಹೊಂದಿರೋ ಮಂದಿ ಹೊಲ ಲಾವಣಿ ಹಾಕಿ ಎಲ್ಲೇರ ದುಡಿಯಾಕ್ ಹೋಗಬೇಕಾಗುತ್ತದೆ’ ಎಂದು ಮಲ್ಲಪ್ಪ ತಿಳಿಸಿದರು.

‘ಒಂದು ಕೈಗಾರಿಕೆಗೆ ಮೊದಲ ವರ್ಷ ಉಚಿತ ಅಥವಾ ರಿಯಾಯತಿ ದರದಲ್ಲಿ ನೀರು, ವಿದ್ಯುತ್ ಕೊಡುವ ಸರ್ಕಾರ, ಈಗ ರೈತರಿಗೆ ಸಬ್ಸಿಡಿಯಲ್ಲಿ ಗೊಬ್ಬರ ನೀಡಬೇಕು. ನಾಲ್ಕು ತಿಂಗಳಷ್ಟೇ, ಅವರು ಅದರ ಹತ್ತು ಪಟ್ಟು ವಾಪಾಸ್ ನೀಡುತ್ತಾರೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಗ್ರಾಮೀಣ ಭಾಗ ಉಳಿದಿದ್ದೇ ರೈತರ ಉತ್ಪನ್ನಗಳಿಂದ. ಹಾಗೆಯೇ ನಗರದವರಿಗೂ ಆಹಾರಧಾನ್ಯ ಸಹಜ ಬೆಲೆಯಲ್ಲಿ ಸಿಕ್ಕಿದ್ದು ರೈತರ ಪರಿಶ್ರಮದಿಂದ. ಸರ್ಕಾರ ಕೃಷಿಯನ್ನೇ ನಾಶ ಮಾಡಲು ಹೊರಟಂತಿದೆ’ ಎಂದು ಕೆ.ಪಿ. ಸುರೇಶ್ ಹೇಳುತ್ತಾರೆ.

ಗೊಬ್ಬರದ ಬೆಲೆ ಏರಿಕೆಗೆ ಕಾರಣವೇನು?: ಶಿವಸುಂದರ್

ಈ ಗೊಬ್ಬರದ ರಾಜಕೀಯ ಕುರಿತು ರಾಜಕೀಯ ಚಿಂತಕ ಶಿವಸುಂದರ್ ಅಭಿಪ್ರಾಯಗಳು ಹೀಗಿವೆ:

ಇದು ಗೊಬ್ಬರ ಕಂಪನಿಗಳು ದಿಢೀರನೆ ತೆಗೆದುಕೊಂಡ ತೀರ್ಮಾನವಲ್ಲ. ಬದಲಿಗೆ ಗೊಬ್ಬರ ಸಬ್ಸಿಡಿಯನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳ ತಾರ್ಕಿಕ ಪರಿಣಾಮವೇ ಆಗಿದೆ. ಈ ಗೊಬ್ಬರ ಸಬ್ಸಿಡಿ ಹಿಂತೆಗೆತ ಯೋಜನೆ 1992ರ ಭೋಸ್ಲೆ ಸಮಿತಿಯ ಪರಿಣಾಮವಾಗಿ ಪ್ರಾರಂಭವಾಗಿದ್ದು, ಈಗಿನ ಮೋದಿ ಸರ್ಕಾರದಲ್ಲಿ ತೀವ್ರ ಆಕ್ರಮಣಕಾರಿ ಸ್ವರೂಪವನ್ನು ಪಡೆಯುತ್ತಿದೆ….

1991ರ ತನಕ ಭಾರತ ಸರ್ಕಾರದ ಗೊಬ್ಬರ ನೀತಿಗಳು ಪ್ರಧಾನವಾಗಿ ಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಅದನ್ನು ಅಗ್ಗದ ದರದಲ್ಲಿ ರೈತಾಪಿಗೆ ತಲುಪಿಸುವ ಬಗ್ಗೆ ಗಮನ ಕೇಂದ್ರೀಕರಿಸಿದ್ದವು. ಹೀಗಾಗಿಯೇ 1977ರಲ್ಲಿ ರಸಗೊಬ್ಬರ ಬೆಲೆ ನಿಯಂತ್ರಣ ಮತ್ತು ಸರಬರಾಜು ನಿಯಮಗಳು ಜಾರಿಗೆ ಬಂದವು. ಅದರಡಿಯಲ್ಲಿ ಸರ್ಕಾರವೇ ಮೊದಲು ಯೂರಿಯಾ ಮತ್ತು ಆ ನಂತರ ಎಲ್ಲಾ ಬಗೆಯ ರಸಗೊಬ್ಬರಗಳಿಗೂ ಮಾರಾಟ ಬೆಲೆಯನ್ನು ನಿಗದಿ ಮಾಡಿತು. ಅದಕ್ಕೇ ಮೀರಿ ಆಗುತ್ತಿದ್ದ ಉತ್ಪಾದನಾ ವಚ್ಚವನ್ನು ನೇರವಾಗಿ ಗೊಬ್ಬರ ಕಂಪನಿಗಳಿಗೆ ಪಾವತಿ ಮಾಡುತ್ತಿತ್ತು. ಹೀಗಾಗಿ 1990ರ ದಶಕದವರೆಗೂ ಎಲ್ಲಾ ಗೊಬ್ಬರಗಳೂ ಯೂರಿಯಾದಷ್ಟೇ ಬೆಲೆಗೆ ಮಾರಾಟವಾಗುತ್ತಿದ್ದವು.

ಆದರೆ 1991ರಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ಜಾರಿಗೆ ಬಂದ ನಂತರ ಜನರ ಕಲ್ಯಾಣಕ್ಕಾಗಿ ಮಾಡುತ್ತಿದ್ದ ವೆಚ್ಚಗಳನ್ನು ಕಡಿಮೆ ಮಾಡಿ ಆ ಸಂಪನ್ಮೂಲವನ್ನು ಉದ್ದಿಮೆಗಳ ಲಾಭವನ್ನು ಹೆಚ್ಚಿಸಲು ಬೇಕಾದ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವುದು ಆರ್ಥಿಕ ತತ್ವವಾಯಿತು.

ಅದರ ಭಾಗವಾಗಿಯೇ ಗೊಬ್ಬರ ನೀತಿಯೂ ಬದಲಾಗಿ, ಗೊಬ್ಬರಕ್ಕೆ ಕೊಡುತ್ತಿದ್ದ ಸಬ್ಸಿಡಿ ಹೊರೆಯನ್ನು ಹಾಗೂ ಆಮದು ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚುತ್ತಿರುವ ವಿದೇಶಿ ವಿನಿಮಯ ಹೊರೆಯನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂಬುದೇ 1991ರ ನಂತರದ ಎಲ್ಲಾ ಸರ್ಕಾರಗಳ ಪ್ರಮುಖ ಲಕ್ಷ್ಯವಾಯಿತು. ಅದರ ಭಾಗವಾಗಿ 1992ರಲ್ಲಿ ಯೂರಿಯಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು ಪಾಕ್ಷಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಹೀಗಾಗಿ ಯೂರಿಯವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳ ಬೆಲೆ ಹಲವು ಪಟ್ಟು ಏರಿಕೆಯಾಯಿತು. ಸಹಜವಾಗಿಯೇ ಇದರಿಂದ ಯೂರಿಯೇತರ ಗೊಬ್ಬರಗಳ ಬಳಕೆ ಹಾಗೂ ಉತ್ಪಾದನೆಯೂ ಕುಂಠಿತವಾಯಿತು.


ಇದನ್ನೂ ಓದಿ; ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...