Homeಮುಖಪುಟರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

ರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

- Advertisement -
- Advertisement -

ನೆಲ ಹದ ಮಾಡುವ ಮಳೆಯ ನಿರಿಕ್ಷೆಯಲ್ಲಿರುವ ರೈತರಿಗೆ ಈ ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೊಡ್ಡ ಹೊಡೆತ ನೀಡಿದೆ. ರಸ ಗೊಬ್ಬರ ದರಗಳನ್ನು ಏರಿಸುವ ಮೂಲಕ ಅದು ರೈತರನ್ನು ‘ಕೊಲ್ಲಲು’ ಹೊರಟಿದೆಯಾ ಎಂಬ ಪ್ರಶ್ನೆ ಕೇಳಿ ಬರುತ್ತಿವೆ.

ಶೇ. 45-58 ರವೆರೆಗೆ ಇಫ್ಕೋ ಗೊಬ್ಬರದ ದರಗಳನ್ನು ಏರಿಸಿದೆ. ಅಂದರೆ 50 ಕೆಜಿ ಡಿಎಪಿ ಬೆಲೆ 1200 ಇದ್ದುದ್ದು ಏಕಾಏಕಿ 1900 ರೂ ಆಗಿದೆ. ಇದು ದೇಶದ ಕೃಷಿ ವ್ಯವಸ್ಥೆಯನ್ನು ಜರ್ಜರಿತಗೊಳಿಸಲಿದೆ. ಈ ಕುರಿತು ರಾಜ್ಯದ ವಿವಿಧ ಭಾಗಗಳ ರೈತರು, ಕೃಷಿತಜ್ಞರನ್ನು  ನಾನುಗೌರಿ.ಕಾಂ ಮಾತನಾಡಿಸಿತು.

‘ಈ ಸಲ ಗೊಬ್ಬರ ತೆಗೆದುಕೊಳ್ಳಾಕೂ ಮೊದ್ಲು, ಎಣ್ಣಿ (ಕ್ರಿಮಿನಾಶಕ) ತಗೋಳ್ಳೊದೇ ವಾಸಿ’ ಎಂದರು ಸಿಂಧನೂರು ತಾಲೂಕಿನ ಮಾಟೂರಿನ ಯುವ ರೈತ ಬಸನಗೌಡ ಸಂಜಿ.
‘ಅಲ್ರಿ, ಡಿಎಪಿ ಗೊಬ್ಬರದ 50 ಕೆಜಿ ಚಿಲಕ್ಕ 1,900 ರೂ ಅಂತೆ. ಅಂದ್ರ ಈ ಸಲ ಎರಡು ಎಕರೆ ಭತ್ತದ ಬೆಳಗೆ 5-6 ಸಾವಿರ ಹೆಚ್ಚುವರಿ ರೊಕ್ಕ ಹಾಕ್ಬೇಕು. ಅದ್ಯಾವುದೋ ತಾಂತ್ರಿಕ ನೆಪದಲ್ಲಿ ನಮ್ಮ ಕಡೆ ಬೆಳೆದ ಭತ್ತಕ್ಕೆ ಸರಿಯಾದ ಎಂಎಸ್‌ಪಿನೂ ಕೊಡ್ತಾ ಇಲ್ಲ. ಪಂಜಾಬಿನ ರೈತರಂತೆ ನಾವು ಕೂಡ ಸಂಘಟಿತರಾಗುವ ಸಂದರ್ಭವಿದು’ ಎಂದು ಬಸನಗೌಡ ಹೇಳಿದರು.

‘ಈಗೀಗ ನಮಗೆ ಗೊತ್ತಾಗುತ್ತಿದೆ, ಯೋಗೇಂದ್ರ ಯಾದವ್, ದೇವಿಂದರ್ ಸಿಂಗ್ ಹೇಳುವ ಸತ್ಯಗಳು. ಇವೆಲ್ಲ ನಮ್ಮ ರೈತರಿಗೆ ತಲುಪಲು ನಿಮ್ಮಂತಹ ಮೀಡಿಯಾ ಕನ್ನಡದಲ್ಲಿ ಇನ್ನಷ್ಟು ವಿವರ ಕೊಡಬೇಕು’ ಎಂದರಲ್ಲದೇ, ‘ಭೂರಹಿತರು ಲೀಸ್‌ನಲ್ಲಿ ಒಂದೋ-ಎರಡು ಎಕರೆ ಜಮೀನಿನಿನಲ್ಲಿ ಬೆಳೆದು ಬದುಕು ಕಟ್ಟಕೊಳ್ತಾ ಇದ್ದರು. ಈ ಸಲ ಅವರು ಈ ಅಪಾಯದ ಕೃಷಿ ಮಾಡಂಗಿಲ್ಲ. ಮತ್ತೆ ಗುಳೆ ಹೋಗ್ತಾರೆ ಅಷ್ಟೇ’ ಎಂದು ಆ ಭಾಗದ ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ಇಟ್ಟರು.

‘ಕಳೆದ ವರ್ಷ ಎಲ್ಲ ಕ್ಷೇತ್ರಗಳೂ ಮುಗ್ಗಟ್ಟಿನಲ್ಲಿದ್ದಾಗ, ಈ ದೇಶದ ಜಿಡಿಪಿಗೆ ಹೆಚ್ಚಿನ ನೆರವು ನಿಡಿದ್ದು ಕೃಷಿ. ಅದು ಎಲ್ಲಾ ಸಂಕಷ್ಟಗಳ ನಡುವೆಯೂ ಈ ದೇಶಕ್ಕೆ ಅನ್ನ ನಿಡಿದೆ. ಈಗ ಗೊಬ್ಬರದ ದರ ಹೆಚ್ಚಿಸಿ ಕೃಷಿ ಕ್ಷೇತ್ರವನ್ನೆ ನಾಶ ಮಾಡಲು ಹೊರಟಿದೆ ಮೋದಿ ಸರ್ಕಾರ’ ಎಂದು ಹಿಂದೆ ಹಲವು ದಶಕಗಳ ಕಾಲ ಕೃಷಿ ಮಾಡಿದ ಲೇಖಕ ಕೆ.ಪಿ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದೇ ತರಹದ ಅಭಿಪ್ರಾಯ ವ್ಯಕ್ತಪಡಿಸಿದ ಕೃಷಿ ತಜ್ಞ ಪ್ರಕಾಶ ಕಮ್ಮರಡಿ, ‘ನಾಟಿ, ಬಿತ್ತನೆ ಮಾಡುವ ಈ ಸಂದರ್ಭದಲ್ಲಿ ಇವರು ಗೊಬ್ಬರದ ದರ ಜಾಸ್ತಿ ಮಾಡಿ ರೈತರನ್ನು ಕೊಲ್ಲಲು ಹೊರಟಿದ್ದಾರೆ. ಈ ಸಂದರ್ಭದಲ್ಲಿ ರೈತರು ಹೇಗೋ ಬೀಜದ ತಯಾರಿ ಮಾಡಿಕೊಂಡಿದ್ದಾರೆ. ಆದರೆ 1,900 ರೂಪಾಯಿ ಕೊಟ್ಟು 50ಕೆಜಿಯ ಡಿಎಪಿ ಪಡೆಯಲು ಆಗುತ್ತದಾ? ನಮ್ಮ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಕಳೆದ ಸಾಲಿನ ಶೇ.30ರಷ್ಟು ಕೃಷಿ ಉತ್ಪನ್ನ ಮಾರಾಟವಾಗಿಯೇ ಇಲ್ಲ. ಅದರಲ್ಲಿ ಶೇ. 18ರಷ್ಟು ಹಾಳಾಗಿ ಹೋಗಿದೆ. ರೈತರ ಬಳಿ ಹಣವಿಲ್ಲ. ಚುನಾವಣೆಗಳ ನಂತರ ಈ ಸರ್ಕಾರ ಕ್ರೂರವಾಗಿ ರೈತರ ಮೇಲೆ ಆಕ್ರಮಣ ಮಾಡಿದೆ’ ಎಂದರು.

ಮಂಡ್ಯದ ಎಲೆಚಾಕನಹಳ್ಳಿಯ ಸಣ್ಣ ರೈತ ವೈ.ಜೆ. ಸ್ವಾಮಿ ಮಾತನಾಡಿ, ‘ಮುಕ್ಕಾಲು ಎಕರೆಯಲ್ಲಿ ಚೊಟ್ ಪೈರು (ಬೀನ್ಸ್ ತರಹದ ತರಕಾರಿ) ಹಾಕಿದ್ದೇವೆ. ಈಗ ಕೆಜಿಗೆ 15 ರೂ ದರ ಇದೆ. ಆದರೆ ಡಿಎಪಿ ದರ ಹೆಚಾಗಿದ್ದರಿಂದ ಮತ್ತೆ ಗೊಬ್ಬರ ಹಾಕಿದರೆ ನಾವು ಮಾಡಿದ ಖರ್ಚು ಸಹ ನಮ್ಮ ಕೈಗೆ ಸಿಗಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಒಣ ಬೇಸಾಯದವರ ಕಷ್ಟ ಕೇಳುವಂತಿಲ್ಲ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಣ್ಣ ರೈತ ಮಲ್ಲಪ್ಪ ಅವರು, ನಮ್ಮ ಎದುರು ಕೃಷಿ ಸಂಕಷ್ಟದ ಇನ್ನೊಂದು ಆಯಾಮವನ್ನು ಮುಂದೆ ಇಟ್ಟರು. ‘ಹಳ್ಳಿಕಡೆ ಜಮೀನ್ದಾರರು ಬೀಜ, ಗೊಬ್ಬರ ಅಂಗಡಿ ಇಟ್ಟಾರು. ಮೊದ್ಲ ಅಪರಾತಪರಾ ರೇಟು ಹಾಕಿ, ಬಡ್ಡಿ ವಸೂಲಿ ಮಾಡ್ತಾ ಇದ್ದರು. ಈಗ ಗೊಬ್ಬರ ರೇಟು ಜಾಸ್ತಿ ಆದ ಮ್ಯಾಗ ಅವರ ಕಂತ್ರಿಗಿರಿ ಇನ್ನಾಕಿಷ್ಟ ಹೆಚ್ಚಾಗುತ್ತ. ಇಲ್ಲಿ ನಾವು ಮಳಿ ನಂಬಿ ಹೊಲ ಮಾಡೋ ಮಂದಿ. ಎರಡೆಕೆಗೆ ಗೊಬ್ಬರ ಖರ್ಚು 5-6 ಸಾವಿರ ಹೆಚಾದ್ರ, ಸಣ್ಣಪುಟ್ಟ ಹೊಲ ಹೊಂದಿರೋ ಮಂದಿ ಹೊಲ ಲಾವಣಿ ಹಾಕಿ ಎಲ್ಲೇರ ದುಡಿಯಾಕ್ ಹೋಗಬೇಕಾಗುತ್ತದೆ’ ಎಂದು ಮಲ್ಲಪ್ಪ ತಿಳಿಸಿದರು.

‘ಒಂದು ಕೈಗಾರಿಕೆಗೆ ಮೊದಲ ವರ್ಷ ಉಚಿತ ಅಥವಾ ರಿಯಾಯತಿ ದರದಲ್ಲಿ ನೀರು, ವಿದ್ಯುತ್ ಕೊಡುವ ಸರ್ಕಾರ, ಈಗ ರೈತರಿಗೆ ಸಬ್ಸಿಡಿಯಲ್ಲಿ ಗೊಬ್ಬರ ನೀಡಬೇಕು. ನಾಲ್ಕು ತಿಂಗಳಷ್ಟೇ, ಅವರು ಅದರ ಹತ್ತು ಪಟ್ಟು ವಾಪಾಸ್ ನೀಡುತ್ತಾರೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಗ್ರಾಮೀಣ ಭಾಗ ಉಳಿದಿದ್ದೇ ರೈತರ ಉತ್ಪನ್ನಗಳಿಂದ. ಹಾಗೆಯೇ ನಗರದವರಿಗೂ ಆಹಾರಧಾನ್ಯ ಸಹಜ ಬೆಲೆಯಲ್ಲಿ ಸಿಕ್ಕಿದ್ದು ರೈತರ ಪರಿಶ್ರಮದಿಂದ. ಸರ್ಕಾರ ಕೃಷಿಯನ್ನೇ ನಾಶ ಮಾಡಲು ಹೊರಟಂತಿದೆ’ ಎಂದು ಕೆ.ಪಿ. ಸುರೇಶ್ ಹೇಳುತ್ತಾರೆ.

ಗೊಬ್ಬರದ ಬೆಲೆ ಏರಿಕೆಗೆ ಕಾರಣವೇನು?: ಶಿವಸುಂದರ್

ಈ ಗೊಬ್ಬರದ ರಾಜಕೀಯ ಕುರಿತು ರಾಜಕೀಯ ಚಿಂತಕ ಶಿವಸುಂದರ್ ಅಭಿಪ್ರಾಯಗಳು ಹೀಗಿವೆ:

ಇದು ಗೊಬ್ಬರ ಕಂಪನಿಗಳು ದಿಢೀರನೆ ತೆಗೆದುಕೊಂಡ ತೀರ್ಮಾನವಲ್ಲ. ಬದಲಿಗೆ ಗೊಬ್ಬರ ಸಬ್ಸಿಡಿಯನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳ ತಾರ್ಕಿಕ ಪರಿಣಾಮವೇ ಆಗಿದೆ. ಈ ಗೊಬ್ಬರ ಸಬ್ಸಿಡಿ ಹಿಂತೆಗೆತ ಯೋಜನೆ 1992ರ ಭೋಸ್ಲೆ ಸಮಿತಿಯ ಪರಿಣಾಮವಾಗಿ ಪ್ರಾರಂಭವಾಗಿದ್ದು, ಈಗಿನ ಮೋದಿ ಸರ್ಕಾರದಲ್ಲಿ ತೀವ್ರ ಆಕ್ರಮಣಕಾರಿ ಸ್ವರೂಪವನ್ನು ಪಡೆಯುತ್ತಿದೆ….

1991ರ ತನಕ ಭಾರತ ಸರ್ಕಾರದ ಗೊಬ್ಬರ ನೀತಿಗಳು ಪ್ರಧಾನವಾಗಿ ಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಅದನ್ನು ಅಗ್ಗದ ದರದಲ್ಲಿ ರೈತಾಪಿಗೆ ತಲುಪಿಸುವ ಬಗ್ಗೆ ಗಮನ ಕೇಂದ್ರೀಕರಿಸಿದ್ದವು. ಹೀಗಾಗಿಯೇ 1977ರಲ್ಲಿ ರಸಗೊಬ್ಬರ ಬೆಲೆ ನಿಯಂತ್ರಣ ಮತ್ತು ಸರಬರಾಜು ನಿಯಮಗಳು ಜಾರಿಗೆ ಬಂದವು. ಅದರಡಿಯಲ್ಲಿ ಸರ್ಕಾರವೇ ಮೊದಲು ಯೂರಿಯಾ ಮತ್ತು ಆ ನಂತರ ಎಲ್ಲಾ ಬಗೆಯ ರಸಗೊಬ್ಬರಗಳಿಗೂ ಮಾರಾಟ ಬೆಲೆಯನ್ನು ನಿಗದಿ ಮಾಡಿತು. ಅದಕ್ಕೇ ಮೀರಿ ಆಗುತ್ತಿದ್ದ ಉತ್ಪಾದನಾ ವಚ್ಚವನ್ನು ನೇರವಾಗಿ ಗೊಬ್ಬರ ಕಂಪನಿಗಳಿಗೆ ಪಾವತಿ ಮಾಡುತ್ತಿತ್ತು. ಹೀಗಾಗಿ 1990ರ ದಶಕದವರೆಗೂ ಎಲ್ಲಾ ಗೊಬ್ಬರಗಳೂ ಯೂರಿಯಾದಷ್ಟೇ ಬೆಲೆಗೆ ಮಾರಾಟವಾಗುತ್ತಿದ್ದವು.

ಆದರೆ 1991ರಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ಜಾರಿಗೆ ಬಂದ ನಂತರ ಜನರ ಕಲ್ಯಾಣಕ್ಕಾಗಿ ಮಾಡುತ್ತಿದ್ದ ವೆಚ್ಚಗಳನ್ನು ಕಡಿಮೆ ಮಾಡಿ ಆ ಸಂಪನ್ಮೂಲವನ್ನು ಉದ್ದಿಮೆಗಳ ಲಾಭವನ್ನು ಹೆಚ್ಚಿಸಲು ಬೇಕಾದ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವುದು ಆರ್ಥಿಕ ತತ್ವವಾಯಿತು.

ಅದರ ಭಾಗವಾಗಿಯೇ ಗೊಬ್ಬರ ನೀತಿಯೂ ಬದಲಾಗಿ, ಗೊಬ್ಬರಕ್ಕೆ ಕೊಡುತ್ತಿದ್ದ ಸಬ್ಸಿಡಿ ಹೊರೆಯನ್ನು ಹಾಗೂ ಆಮದು ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚುತ್ತಿರುವ ವಿದೇಶಿ ವಿನಿಮಯ ಹೊರೆಯನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂಬುದೇ 1991ರ ನಂತರದ ಎಲ್ಲಾ ಸರ್ಕಾರಗಳ ಪ್ರಮುಖ ಲಕ್ಷ್ಯವಾಯಿತು. ಅದರ ಭಾಗವಾಗಿ 1992ರಲ್ಲಿ ಯೂರಿಯಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು ಪಾಕ್ಷಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಹೀಗಾಗಿ ಯೂರಿಯವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳ ಬೆಲೆ ಹಲವು ಪಟ್ಟು ಏರಿಕೆಯಾಯಿತು. ಸಹಜವಾಗಿಯೇ ಇದರಿಂದ ಯೂರಿಯೇತರ ಗೊಬ್ಬರಗಳ ಬಳಕೆ ಹಾಗೂ ಉತ್ಪಾದನೆಯೂ ಕುಂಠಿತವಾಯಿತು.


ಇದನ್ನೂ ಓದಿ; ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...