Homeಮುಖಪುಟರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

ರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

- Advertisement -
- Advertisement -

ನೆಲ ಹದ ಮಾಡುವ ಮಳೆಯ ನಿರಿಕ್ಷೆಯಲ್ಲಿರುವ ರೈತರಿಗೆ ಈ ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೊಡ್ಡ ಹೊಡೆತ ನೀಡಿದೆ. ರಸ ಗೊಬ್ಬರ ದರಗಳನ್ನು ಏರಿಸುವ ಮೂಲಕ ಅದು ರೈತರನ್ನು ‘ಕೊಲ್ಲಲು’ ಹೊರಟಿದೆಯಾ ಎಂಬ ಪ್ರಶ್ನೆ ಕೇಳಿ ಬರುತ್ತಿವೆ.

ಶೇ. 45-58 ರವೆರೆಗೆ ಇಫ್ಕೋ ಗೊಬ್ಬರದ ದರಗಳನ್ನು ಏರಿಸಿದೆ. ಅಂದರೆ 50 ಕೆಜಿ ಡಿಎಪಿ ಬೆಲೆ 1200 ಇದ್ದುದ್ದು ಏಕಾಏಕಿ 1900 ರೂ ಆಗಿದೆ. ಇದು ದೇಶದ ಕೃಷಿ ವ್ಯವಸ್ಥೆಯನ್ನು ಜರ್ಜರಿತಗೊಳಿಸಲಿದೆ. ಈ ಕುರಿತು ರಾಜ್ಯದ ವಿವಿಧ ಭಾಗಗಳ ರೈತರು, ಕೃಷಿತಜ್ಞರನ್ನು  ನಾನುಗೌರಿ.ಕಾಂ ಮಾತನಾಡಿಸಿತು.

‘ಈ ಸಲ ಗೊಬ್ಬರ ತೆಗೆದುಕೊಳ್ಳಾಕೂ ಮೊದ್ಲು, ಎಣ್ಣಿ (ಕ್ರಿಮಿನಾಶಕ) ತಗೋಳ್ಳೊದೇ ವಾಸಿ’ ಎಂದರು ಸಿಂಧನೂರು ತಾಲೂಕಿನ ಮಾಟೂರಿನ ಯುವ ರೈತ ಬಸನಗೌಡ ಸಂಜಿ.
‘ಅಲ್ರಿ, ಡಿಎಪಿ ಗೊಬ್ಬರದ 50 ಕೆಜಿ ಚಿಲಕ್ಕ 1,900 ರೂ ಅಂತೆ. ಅಂದ್ರ ಈ ಸಲ ಎರಡು ಎಕರೆ ಭತ್ತದ ಬೆಳಗೆ 5-6 ಸಾವಿರ ಹೆಚ್ಚುವರಿ ರೊಕ್ಕ ಹಾಕ್ಬೇಕು. ಅದ್ಯಾವುದೋ ತಾಂತ್ರಿಕ ನೆಪದಲ್ಲಿ ನಮ್ಮ ಕಡೆ ಬೆಳೆದ ಭತ್ತಕ್ಕೆ ಸರಿಯಾದ ಎಂಎಸ್‌ಪಿನೂ ಕೊಡ್ತಾ ಇಲ್ಲ. ಪಂಜಾಬಿನ ರೈತರಂತೆ ನಾವು ಕೂಡ ಸಂಘಟಿತರಾಗುವ ಸಂದರ್ಭವಿದು’ ಎಂದು ಬಸನಗೌಡ ಹೇಳಿದರು.

‘ಈಗೀಗ ನಮಗೆ ಗೊತ್ತಾಗುತ್ತಿದೆ, ಯೋಗೇಂದ್ರ ಯಾದವ್, ದೇವಿಂದರ್ ಸಿಂಗ್ ಹೇಳುವ ಸತ್ಯಗಳು. ಇವೆಲ್ಲ ನಮ್ಮ ರೈತರಿಗೆ ತಲುಪಲು ನಿಮ್ಮಂತಹ ಮೀಡಿಯಾ ಕನ್ನಡದಲ್ಲಿ ಇನ್ನಷ್ಟು ವಿವರ ಕೊಡಬೇಕು’ ಎಂದರಲ್ಲದೇ, ‘ಭೂರಹಿತರು ಲೀಸ್‌ನಲ್ಲಿ ಒಂದೋ-ಎರಡು ಎಕರೆ ಜಮೀನಿನಿನಲ್ಲಿ ಬೆಳೆದು ಬದುಕು ಕಟ್ಟಕೊಳ್ತಾ ಇದ್ದರು. ಈ ಸಲ ಅವರು ಈ ಅಪಾಯದ ಕೃಷಿ ಮಾಡಂಗಿಲ್ಲ. ಮತ್ತೆ ಗುಳೆ ಹೋಗ್ತಾರೆ ಅಷ್ಟೇ’ ಎಂದು ಆ ಭಾಗದ ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ಇಟ್ಟರು.

‘ಕಳೆದ ವರ್ಷ ಎಲ್ಲ ಕ್ಷೇತ್ರಗಳೂ ಮುಗ್ಗಟ್ಟಿನಲ್ಲಿದ್ದಾಗ, ಈ ದೇಶದ ಜಿಡಿಪಿಗೆ ಹೆಚ್ಚಿನ ನೆರವು ನಿಡಿದ್ದು ಕೃಷಿ. ಅದು ಎಲ್ಲಾ ಸಂಕಷ್ಟಗಳ ನಡುವೆಯೂ ಈ ದೇಶಕ್ಕೆ ಅನ್ನ ನಿಡಿದೆ. ಈಗ ಗೊಬ್ಬರದ ದರ ಹೆಚ್ಚಿಸಿ ಕೃಷಿ ಕ್ಷೇತ್ರವನ್ನೆ ನಾಶ ಮಾಡಲು ಹೊರಟಿದೆ ಮೋದಿ ಸರ್ಕಾರ’ ಎಂದು ಹಿಂದೆ ಹಲವು ದಶಕಗಳ ಕಾಲ ಕೃಷಿ ಮಾಡಿದ ಲೇಖಕ ಕೆ.ಪಿ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದೇ ತರಹದ ಅಭಿಪ್ರಾಯ ವ್ಯಕ್ತಪಡಿಸಿದ ಕೃಷಿ ತಜ್ಞ ಪ್ರಕಾಶ ಕಮ್ಮರಡಿ, ‘ನಾಟಿ, ಬಿತ್ತನೆ ಮಾಡುವ ಈ ಸಂದರ್ಭದಲ್ಲಿ ಇವರು ಗೊಬ್ಬರದ ದರ ಜಾಸ್ತಿ ಮಾಡಿ ರೈತರನ್ನು ಕೊಲ್ಲಲು ಹೊರಟಿದ್ದಾರೆ. ಈ ಸಂದರ್ಭದಲ್ಲಿ ರೈತರು ಹೇಗೋ ಬೀಜದ ತಯಾರಿ ಮಾಡಿಕೊಂಡಿದ್ದಾರೆ. ಆದರೆ 1,900 ರೂಪಾಯಿ ಕೊಟ್ಟು 50ಕೆಜಿಯ ಡಿಎಪಿ ಪಡೆಯಲು ಆಗುತ್ತದಾ? ನಮ್ಮ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಕಳೆದ ಸಾಲಿನ ಶೇ.30ರಷ್ಟು ಕೃಷಿ ಉತ್ಪನ್ನ ಮಾರಾಟವಾಗಿಯೇ ಇಲ್ಲ. ಅದರಲ್ಲಿ ಶೇ. 18ರಷ್ಟು ಹಾಳಾಗಿ ಹೋಗಿದೆ. ರೈತರ ಬಳಿ ಹಣವಿಲ್ಲ. ಚುನಾವಣೆಗಳ ನಂತರ ಈ ಸರ್ಕಾರ ಕ್ರೂರವಾಗಿ ರೈತರ ಮೇಲೆ ಆಕ್ರಮಣ ಮಾಡಿದೆ’ ಎಂದರು.

ಮಂಡ್ಯದ ಎಲೆಚಾಕನಹಳ್ಳಿಯ ಸಣ್ಣ ರೈತ ವೈ.ಜೆ. ಸ್ವಾಮಿ ಮಾತನಾಡಿ, ‘ಮುಕ್ಕಾಲು ಎಕರೆಯಲ್ಲಿ ಚೊಟ್ ಪೈರು (ಬೀನ್ಸ್ ತರಹದ ತರಕಾರಿ) ಹಾಕಿದ್ದೇವೆ. ಈಗ ಕೆಜಿಗೆ 15 ರೂ ದರ ಇದೆ. ಆದರೆ ಡಿಎಪಿ ದರ ಹೆಚಾಗಿದ್ದರಿಂದ ಮತ್ತೆ ಗೊಬ್ಬರ ಹಾಕಿದರೆ ನಾವು ಮಾಡಿದ ಖರ್ಚು ಸಹ ನಮ್ಮ ಕೈಗೆ ಸಿಗಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಒಣ ಬೇಸಾಯದವರ ಕಷ್ಟ ಕೇಳುವಂತಿಲ್ಲ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಣ್ಣ ರೈತ ಮಲ್ಲಪ್ಪ ಅವರು, ನಮ್ಮ ಎದುರು ಕೃಷಿ ಸಂಕಷ್ಟದ ಇನ್ನೊಂದು ಆಯಾಮವನ್ನು ಮುಂದೆ ಇಟ್ಟರು. ‘ಹಳ್ಳಿಕಡೆ ಜಮೀನ್ದಾರರು ಬೀಜ, ಗೊಬ್ಬರ ಅಂಗಡಿ ಇಟ್ಟಾರು. ಮೊದ್ಲ ಅಪರಾತಪರಾ ರೇಟು ಹಾಕಿ, ಬಡ್ಡಿ ವಸೂಲಿ ಮಾಡ್ತಾ ಇದ್ದರು. ಈಗ ಗೊಬ್ಬರ ರೇಟು ಜಾಸ್ತಿ ಆದ ಮ್ಯಾಗ ಅವರ ಕಂತ್ರಿಗಿರಿ ಇನ್ನಾಕಿಷ್ಟ ಹೆಚ್ಚಾಗುತ್ತ. ಇಲ್ಲಿ ನಾವು ಮಳಿ ನಂಬಿ ಹೊಲ ಮಾಡೋ ಮಂದಿ. ಎರಡೆಕೆಗೆ ಗೊಬ್ಬರ ಖರ್ಚು 5-6 ಸಾವಿರ ಹೆಚಾದ್ರ, ಸಣ್ಣಪುಟ್ಟ ಹೊಲ ಹೊಂದಿರೋ ಮಂದಿ ಹೊಲ ಲಾವಣಿ ಹಾಕಿ ಎಲ್ಲೇರ ದುಡಿಯಾಕ್ ಹೋಗಬೇಕಾಗುತ್ತದೆ’ ಎಂದು ಮಲ್ಲಪ್ಪ ತಿಳಿಸಿದರು.

‘ಒಂದು ಕೈಗಾರಿಕೆಗೆ ಮೊದಲ ವರ್ಷ ಉಚಿತ ಅಥವಾ ರಿಯಾಯತಿ ದರದಲ್ಲಿ ನೀರು, ವಿದ್ಯುತ್ ಕೊಡುವ ಸರ್ಕಾರ, ಈಗ ರೈತರಿಗೆ ಸಬ್ಸಿಡಿಯಲ್ಲಿ ಗೊಬ್ಬರ ನೀಡಬೇಕು. ನಾಲ್ಕು ತಿಂಗಳಷ್ಟೇ, ಅವರು ಅದರ ಹತ್ತು ಪಟ್ಟು ವಾಪಾಸ್ ನೀಡುತ್ತಾರೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಗ್ರಾಮೀಣ ಭಾಗ ಉಳಿದಿದ್ದೇ ರೈತರ ಉತ್ಪನ್ನಗಳಿಂದ. ಹಾಗೆಯೇ ನಗರದವರಿಗೂ ಆಹಾರಧಾನ್ಯ ಸಹಜ ಬೆಲೆಯಲ್ಲಿ ಸಿಕ್ಕಿದ್ದು ರೈತರ ಪರಿಶ್ರಮದಿಂದ. ಸರ್ಕಾರ ಕೃಷಿಯನ್ನೇ ನಾಶ ಮಾಡಲು ಹೊರಟಂತಿದೆ’ ಎಂದು ಕೆ.ಪಿ. ಸುರೇಶ್ ಹೇಳುತ್ತಾರೆ.

ಗೊಬ್ಬರದ ಬೆಲೆ ಏರಿಕೆಗೆ ಕಾರಣವೇನು?: ಶಿವಸುಂದರ್

ಈ ಗೊಬ್ಬರದ ರಾಜಕೀಯ ಕುರಿತು ರಾಜಕೀಯ ಚಿಂತಕ ಶಿವಸುಂದರ್ ಅಭಿಪ್ರಾಯಗಳು ಹೀಗಿವೆ:

ಇದು ಗೊಬ್ಬರ ಕಂಪನಿಗಳು ದಿಢೀರನೆ ತೆಗೆದುಕೊಂಡ ತೀರ್ಮಾನವಲ್ಲ. ಬದಲಿಗೆ ಗೊಬ್ಬರ ಸಬ್ಸಿಡಿಯನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳ ತಾರ್ಕಿಕ ಪರಿಣಾಮವೇ ಆಗಿದೆ. ಈ ಗೊಬ್ಬರ ಸಬ್ಸಿಡಿ ಹಿಂತೆಗೆತ ಯೋಜನೆ 1992ರ ಭೋಸ್ಲೆ ಸಮಿತಿಯ ಪರಿಣಾಮವಾಗಿ ಪ್ರಾರಂಭವಾಗಿದ್ದು, ಈಗಿನ ಮೋದಿ ಸರ್ಕಾರದಲ್ಲಿ ತೀವ್ರ ಆಕ್ರಮಣಕಾರಿ ಸ್ವರೂಪವನ್ನು ಪಡೆಯುತ್ತಿದೆ….

1991ರ ತನಕ ಭಾರತ ಸರ್ಕಾರದ ಗೊಬ್ಬರ ನೀತಿಗಳು ಪ್ರಧಾನವಾಗಿ ಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಅದನ್ನು ಅಗ್ಗದ ದರದಲ್ಲಿ ರೈತಾಪಿಗೆ ತಲುಪಿಸುವ ಬಗ್ಗೆ ಗಮನ ಕೇಂದ್ರೀಕರಿಸಿದ್ದವು. ಹೀಗಾಗಿಯೇ 1977ರಲ್ಲಿ ರಸಗೊಬ್ಬರ ಬೆಲೆ ನಿಯಂತ್ರಣ ಮತ್ತು ಸರಬರಾಜು ನಿಯಮಗಳು ಜಾರಿಗೆ ಬಂದವು. ಅದರಡಿಯಲ್ಲಿ ಸರ್ಕಾರವೇ ಮೊದಲು ಯೂರಿಯಾ ಮತ್ತು ಆ ನಂತರ ಎಲ್ಲಾ ಬಗೆಯ ರಸಗೊಬ್ಬರಗಳಿಗೂ ಮಾರಾಟ ಬೆಲೆಯನ್ನು ನಿಗದಿ ಮಾಡಿತು. ಅದಕ್ಕೇ ಮೀರಿ ಆಗುತ್ತಿದ್ದ ಉತ್ಪಾದನಾ ವಚ್ಚವನ್ನು ನೇರವಾಗಿ ಗೊಬ್ಬರ ಕಂಪನಿಗಳಿಗೆ ಪಾವತಿ ಮಾಡುತ್ತಿತ್ತು. ಹೀಗಾಗಿ 1990ರ ದಶಕದವರೆಗೂ ಎಲ್ಲಾ ಗೊಬ್ಬರಗಳೂ ಯೂರಿಯಾದಷ್ಟೇ ಬೆಲೆಗೆ ಮಾರಾಟವಾಗುತ್ತಿದ್ದವು.

ಆದರೆ 1991ರಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ಜಾರಿಗೆ ಬಂದ ನಂತರ ಜನರ ಕಲ್ಯಾಣಕ್ಕಾಗಿ ಮಾಡುತ್ತಿದ್ದ ವೆಚ್ಚಗಳನ್ನು ಕಡಿಮೆ ಮಾಡಿ ಆ ಸಂಪನ್ಮೂಲವನ್ನು ಉದ್ದಿಮೆಗಳ ಲಾಭವನ್ನು ಹೆಚ್ಚಿಸಲು ಬೇಕಾದ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವುದು ಆರ್ಥಿಕ ತತ್ವವಾಯಿತು.

ಅದರ ಭಾಗವಾಗಿಯೇ ಗೊಬ್ಬರ ನೀತಿಯೂ ಬದಲಾಗಿ, ಗೊಬ್ಬರಕ್ಕೆ ಕೊಡುತ್ತಿದ್ದ ಸಬ್ಸಿಡಿ ಹೊರೆಯನ್ನು ಹಾಗೂ ಆಮದು ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚುತ್ತಿರುವ ವಿದೇಶಿ ವಿನಿಮಯ ಹೊರೆಯನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂಬುದೇ 1991ರ ನಂತರದ ಎಲ್ಲಾ ಸರ್ಕಾರಗಳ ಪ್ರಮುಖ ಲಕ್ಷ್ಯವಾಯಿತು. ಅದರ ಭಾಗವಾಗಿ 1992ರಲ್ಲಿ ಯೂರಿಯಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು ಪಾಕ್ಷಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಹೀಗಾಗಿ ಯೂರಿಯವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳ ಬೆಲೆ ಹಲವು ಪಟ್ಟು ಏರಿಕೆಯಾಯಿತು. ಸಹಜವಾಗಿಯೇ ಇದರಿಂದ ಯೂರಿಯೇತರ ಗೊಬ್ಬರಗಳ ಬಳಕೆ ಹಾಗೂ ಉತ್ಪಾದನೆಯೂ ಕುಂಠಿತವಾಯಿತು.


ಇದನ್ನೂ ಓದಿ; ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...