Homeಮುಖಪುಟನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -
- Advertisement -

ಭರತಖಂಡವನ್ನೇ ಅಖಂಡವಾಗಿ ಬೆಚ್ಚಿಬೀಳಿಸಿದ ನಿರ್ಭಯಾ ಪ್ರಕರಣದ ಪಾತಕಿಗಳನ್ನು ಗಲ್ಲಿಗೇರಿಸಲಾಗಿದೆ. ಅಮಾಯಕ ಹುಡುಗಿಯ ಮೇಲೆ ಬರ್ಬರ ಲೈಂಗಿಕ ದಾಳಿ ನಡೆಸಿ ಕೊಂದು ಹಾಕಿದ್ದ ಪಾತಕಿಗಳು ಪ್ರಭಾವಿಗಳಾಗಿರಲಿಲ್ಲ, ಅಧಿಕಾರಸ್ಥರ ವಂಶಜರೂ ಆಗಿರಲಿಲ್ಲ. ಬಹುಷಃ ಈ ಕಾರಣದಿಂದಲೇ ಸದರಿ ರೇಪ್ ಅಂಡ್ ಮರ್ಡರ್ ಕೇಸ್‌ನ ತನಿಖೆಯಲ್ಲಿ ದೊಡ್ಡ ಅಡ್ಡಿ ಎದುರಾಗಿರಲಿಲ್ಲ. ಅಂತಿಮವಾಗಿ ನ್ಯಾಯಾಲಯಗಳೂ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿದವು. ಅದು ಮೊನ್ನೆ ಜಾರಿಯೂ ಆಯಿತು. ಈ ಹೊತ್ತಲ್ಲಿ ನಿರ್ಭಯಳಷ್ಟೇ ಕ್ರೂರವಾಗಿ ಅತ್ಯಾಚಾರ ಹತ್ಯೆಗೀಡಾದ ದಕ್ಷಿಣ ಕನ್ನಡದ ಧರ್ಮಸ್ಥಳದ ’ನಿರ್ಭಯ’ ಗೌಡ ಎಂಬ ಪಾಪದ ವಿದ್ಯಾರ್ಥಿನಿ ಕರಾವಳಿಗರಿಗೆ ನೆನಪಾಗುತ್ತಿದ್ದಾಳೆ!!

’ನಿರ್ಭಯಳನ್ನು ಅತ್ಯಾಚಾರವೆಸಗಿ ಸಾಯಿಸಿರುವ ಸಂಶಯ ದೇವದೂತ ಪ್ರಭಾವಳಿಯ ಪರಿವಾರದ ಮೇಲಿದೆ. ಈ ಕುಟುಂಬದ ಯಜಮಾನ ಸಾಕ್ಷಾತ್ ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ ಸರ್ಕಾರಗಳ ನಡೆಸುವ ಅಷ್ಟೂ ಅಧಿಕಾರಸ್ಥರನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದ ಸರ್ವಶಕ್ತ!! ಹೀಗಾಗಿಯೇ ನ್ಯಾಯದೇವತೆ ಎಂಬ ಪ್ರತೀತಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಪಾತಕ ಪ್ರಕರಣ ನ್ಯಾಯದ ಪರಿಧಿಗೆ ಒಳಪಡುತ್ತಲೇ ಇಲ್ಲವೆಂಬ ಚರ್ಚೆ ಇವತ್ತಿಗೂ ನಡೆಯುತ್ತಿದೆ!!. ಕಾಲೇಜಿನಿಂದ ಮನೆಗೆ ಹೋಗುವಾಗ ಉಜಿರೆ-ಧರ್ಮಸ್ಥಳ ಹೆದ್ದಾರಿಯಲ್ಲಿ ಹಾಡುಹಗಲೇ ಅಪಹರಿಸಲ್ಪಟ್ಟ ಹುಡುಗಿ ಕಣ್ಮರೆಯಾದ ಕ್ಷಣದಿಂದಲೇ ತನಿಖೆಯ ದಿಕ್ಕುತಪ್ಪಿಸುವ ವ್ಯವಸ್ಥಿತ ಸ್ಕೆಚ್ ಒಂದು ಕಾರ್ಯಾಚರಣೆ ನಾಜೂಕಾಗಿ ನಡೆಯುತ್ತಲೇ ಇದೆ. ಈ ಪ್ರಕರಣಕ್ಕೆ ನ್ಯಾಯ ಸಿಗುವ ಸಾಧ್ಯತೆ ದಿನಕಳೆದಂತೆ ಕಮ್ಮಿಯಾಗುತ್ತಲೇ ಇದೆ.

ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ-ಕೊಲೆ ನಡೆದಿದ್ದು 2012ರ ಡಿಸೆಂಬರ್ 16ರಂದು ಅದಕ್ಕೂ ಎರಡು ಕಾಲು ತಿಂಗಳು ಮೊದಲು ಅಂದರೆ 2012 ಅಕ್ಟೋಬರ್ 8ರಂದು ಧರ್ಮಸ್ಥಳದ ನಿರ್ಭಯಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಆಕೆಯ ಮನೆ ಹತ್ತಿರ ಕಾಡಿನಲ್ಲಿ ಎಸೆಯಲಾಗಿತ್ತು. ಆಕೆ ಕಾಣೆಯಾದಾಗ ರಾತ್ರಿಯಿಡೀ ಹುಡುಕಾಡಿದ ಕಾಡಿನಲ್ಲೆ ಬೆಳಿಗ್ಗೆ ಅತ್ಯಾಚಾರಗೊಂಡಿದ್ದ ದೇಹ ಕಂಡುಬಂದಿತ್ತು. ಆಕೆಯ ಮರ್ಮಾಂಗಕ್ಕೆ ಮಣ್ಣು ಹಾಕಿ ವೀರ್ಯ ಪರೀಕ್ಷೆ ವಿಫಲಗೊಳಿಸುವ ಯೋಜನೆ ಮಾಡಲಾಗಿತ್ತು. ಆ ರಾತ್ರಿ ಮಳೆಯಾಗಿತ್ತು, ಆದರೆ ಮೃತ ದೇಹದ ಹತ್ತಿರವೇ ಬಿದ್ದಿದ್ದ ಆಕೆಯ ಪಠ್ಯಪುಸ್ತಕ ಒಂಚೂರು ಒದ್ದೆಯಾಗಿರಲಿಲ್ಲ. ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ನಾಶ ಮಾಡುವ ಶತಪ್ರಯತ್ನ ರೇಪಿಸ್ಟ್ ಗ್ಯಾಂಗ್ ಮಾಡಿತ್ತು.

ಉಜಿರೆ-ಧರ್ಮಸ್ಥಳದಲ್ಲಿ ಪ್ರತಿಭಟನೆಗಳು ಸರಣಿಯಾಗಿ ಭುಗಿಲೆದ್ದು ಇಡೀ ದಕ್ಷಿಣ ಕನ್ನಡಕ್ಕೆ ಹೋರಾಟದ ಕಿಚ್ಚು ವ್ಯಾಪಿಸಿತ್ತು. ಪ್ರತಿಭಟನಾಕಾರರ ಆಕ್ರೋಶ, ಅನುಮಾನ ಧರ್ಮ ವ್ಯಾಪಾರಿಯ ರಕ್ತಸಂಬಂಧಿ ಪುಂಡ ಹುಡುಗರ ಮೇಲೆ ಕೇಂದ್ರೀಕೃತವಾಗಿತ್ತು. ಜನರು ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ ಪೋಲಿಸರು ಪ್ರಕರಣ ಹಳ್ಳ ಹಿಡಿಸಲು ಹವಣಿಸುತ್ತಿದ್ದರು. ಧರ್ಮಸ್ಥಳದ ಮಂಜುನಾಥ, ಧರ್ಮ ದೇವತೆ ಅಣ್ಣಪ್ಪ ಸ್ವಾಮಿ ಅಂಗಳದಲ್ಲಿ ಅಂಡೆಲೆಯುತ್ತಿದ್ದ ಮಾನಸಿಕ ಅಸ್ವಸ್ಥ ಸಂತೋಷ್‌ರಾವ್ ಹುಡುಗಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಕತೆ ಕಟ್ಟಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಯೂ ದೈವ ಸ್ವರೂಪಿ ಎಂದೇ ಧರ್ಮಸ್ಥಳದ ಶ್ರದ್ಧಾಳುಗಳು ನಂಬುವ ವೀರೇಂದ್ರ ಹೆಗ್ಗಡೆ ಪರಿವಾರದ ಉದಯ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಎಂಬ ನವ ತರುಣರು ಸಂತೋಷ್‌ರಾವ್‌ನೇ ಅತ್ಯಾಚಾರಿ ಎಂದು ತೀರ್ಪು ಕೊಟ್ಟು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು! ಇಲ್ಲಿ ಅಡಗಿದೆ ನಿರ್ಭಯಳ ರೇಪ್ ಆಂಡ್ ಮರ್ಡರ್ ಮಿಸ್ಟರಿ!!

ಧರ್ಮಸ್ಥಳ ದೇವರ ದೊರೆಗಳ ಪರಿವಾರದ ಮೇಲಿದ್ದ ಜನತೆಯ ಶಂಕೆ ಬಲವಾಯಿತು. ಧರ್ಮಸ್ಥಳದಲ್ಲಿ ಅಸಂಖ್ಯಾ ಹೆಣ್ಣು ಜೀವಗಳ ಅಸಹಜ ಸಾವು ಸಂಭವಿಸುತ್ತಿರುವ ಪುಕಾರುಗಳು ಎದ್ದವು. ಪೊಲೀಸರೇ ಕೊಟ್ಟ ಮಾಹಿತಿಯಂತೆ ನಿರ್ಭಯಳಿಗಿಂತ ಮೊದಲು ದೇವ ಸನ್ನಿಧಿಯಲ್ಲಿ ನೂರಾರು ಹೆಣ್ಣು ಬಲಿ-ಬಲಾತ್ಕಾರ ನಡೆದಿರುವುದು ಹೊರಗೆ ಬಂದಿತು. ಸಿಬಿಐನಿಂದಲೇ ನಿರ್ಭಯ ಅತ್ಯಾಚಾರದ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಇಟ್ಟರು. ಸ್ಥಳೀಯ ಪೊಲೀಸರು ನೈಜ ಅಪರಾಧಿಗಳನ್ನು ರಕ್ಷಿಸಲು ನಾಟಕ ನಡೆಸುತ್ತಿದ್ದಾರೆಂಬ ಅನಿಸಿಕೆ ಜನರದ್ದಾಗಿತ್ತು. ಕೊನೆಗೆ ಸರ್ಕಾರವು ಸಿಬಿಐಗೆ ಸೌಜನ್ಯ ಪ್ರಕರಣವನ್ನು ಹಸ್ತಾಂತರಿಸಬೇಕಾಗಿ ಬಂತು. ಆದರೆ ಸಿಬಿಐ ಸಹ ಪ್ರಾಮಾಣಿಕ ತನಿಖೆ ನಡೆಸಲೇ ಇಲ್ಲ. ಸ್ಥಳೀಯ ಪೊಲೀಸರ ತನಿಖೆ ಜಾಡಿನಲ್ಲೇ ಸಾಗಿದ ಸಿಬಿಐ ಶೂರರು ಅಪರಾಧಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗುವಂತ “ತನಿಖೆ” ತಂತ್ರ ನಡೆಸಿತು.

2017ರಲ್ಲಿ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಸಿಬಿಐ ವೈಫಲ್ಯವನ್ನು ನ್ಯಾಯಾಧೀಶೆ ಬಿ.ಎಸ್. ರೇಖಾ ಎತ್ತಿ ತೋರಿಸಿದರು. ಸರಿಯಾಗಿ ಯಾಕೆ ತನಿಖೆ ನಡೆಸಿಲ್ಲವೆಂದು ಕಟುವಾಗಿ ಸಿಬಿಐಗೆ ಪ್ರಶ್ನಿಸಿದ್ದರು. ವೈದ್ಯರುಗಳ ಪ್ರಕಾರ ಅರೆಹುಚ್ಚ ಸಂತೋಷ್ ರಾವ್‌ಗೆ ಲೈಂಗಿಕ ಸಾಮರ್ಥ್ಯವೇ ಇಲ್ಲ. ವೈಜ್ಞಾನಿಕ ವಿವರಗಳಂತೆ ಸೌಜನ್ಯಳ ಮೃತದೇಹದಲ್ಲಿ ಸಿಕ್ಕ ಕೂದಲೂ ಸಂತೋಷ್ ರಾವ್‌ನದ್ದಾಗಿರಲಿಲ್ಲ. ವೀರ್ಯ ಸಂಗ್ರಹಿಸದಿರುವುದು ಸೇರಿದಂತೆ ಹಲವು ಲೋಪ-ದೋಷಗಳ ಬಗ್ಗೆ ನ್ಯಾಯಾಧೀಶರು ಸಿಬಿಐ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇವ ಪರಿವಾರದ ಜೈನ್‌ಗಳನ್ನು ಸಿಬಿಐ ನಿಷ್ಠುರ ತನಿಖೆಗೆ ಒಳಪಡಿಸಿರಲೇ ಇಲ್ಲ.

ನಿರ್ಭಯಳ ತಂದೆ ಚಂದಪ್ಪಗೌಡ ತನಗೆ ಉದಯ್ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಮೇಲೆ ಬಲವಾದ ಅನುಮಾನವಿದೆ ಎಂದು ಹೇಳಿದ್ದರು. ಸಿಬಿಐ ನ್ಯಾಯಾಲಯ ಈ ತ್ರಿಮೂರ್ತಿಗಳಿಗೆ ಸಮನ್ಸ್ ಕಳುಹಿಸಿತ್ತು, ಅದಕ್ಕೆ ಅವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದರು. ಈ ನಡುವೆ ನಿರ್ಭಯಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದ ರವಿ ಪೂಜಾರಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡರು. ಕೇಸ್ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಬಡ್ತಿ ಪಡೆದುಕೊಂಡರು. ವಿಚಾರಣೆಗೆ ಬಿದ್ದಿರುವ ತಡೆ ತೆರವಾಗುವ ಲಕ್ಷಣವೊಂದೂ ಕಾಣಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಧರ್ಮವ್ಯಾಪಾರಿಯ ಶಿಷ್ಯರೇ ಆಡಳಿತ ನಡೆಸುತ್ತಿದ್ದಾರೆ. ಈ ಧರ್ಮಾಡಳಿತದಲ್ಲಿ ನಿರ್ಭಯಾಗೆ ಸಿಕ್ಕಂತೆ ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

(ಸಂತ್ರಸ್ತೆಯ ನಿಜವಾದ ಹೆಸರನ್ನು ಧರ್ಮಸ್ಥಳದ ನಿರ್ಭಯ ಎಂದು ಬದಲಿಸಲಾಗಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...