Homeಮುಖಪುಟನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -
- Advertisement -

ಭರತಖಂಡವನ್ನೇ ಅಖಂಡವಾಗಿ ಬೆಚ್ಚಿಬೀಳಿಸಿದ ನಿರ್ಭಯಾ ಪ್ರಕರಣದ ಪಾತಕಿಗಳನ್ನು ಗಲ್ಲಿಗೇರಿಸಲಾಗಿದೆ. ಅಮಾಯಕ ಹುಡುಗಿಯ ಮೇಲೆ ಬರ್ಬರ ಲೈಂಗಿಕ ದಾಳಿ ನಡೆಸಿ ಕೊಂದು ಹಾಕಿದ್ದ ಪಾತಕಿಗಳು ಪ್ರಭಾವಿಗಳಾಗಿರಲಿಲ್ಲ, ಅಧಿಕಾರಸ್ಥರ ವಂಶಜರೂ ಆಗಿರಲಿಲ್ಲ. ಬಹುಷಃ ಈ ಕಾರಣದಿಂದಲೇ ಸದರಿ ರೇಪ್ ಅಂಡ್ ಮರ್ಡರ್ ಕೇಸ್‌ನ ತನಿಖೆಯಲ್ಲಿ ದೊಡ್ಡ ಅಡ್ಡಿ ಎದುರಾಗಿರಲಿಲ್ಲ. ಅಂತಿಮವಾಗಿ ನ್ಯಾಯಾಲಯಗಳೂ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿದವು. ಅದು ಮೊನ್ನೆ ಜಾರಿಯೂ ಆಯಿತು. ಈ ಹೊತ್ತಲ್ಲಿ ನಿರ್ಭಯಳಷ್ಟೇ ಕ್ರೂರವಾಗಿ ಅತ್ಯಾಚಾರ ಹತ್ಯೆಗೀಡಾದ ದಕ್ಷಿಣ ಕನ್ನಡದ ಧರ್ಮಸ್ಥಳದ ’ನಿರ್ಭಯ’ ಗೌಡ ಎಂಬ ಪಾಪದ ವಿದ್ಯಾರ್ಥಿನಿ ಕರಾವಳಿಗರಿಗೆ ನೆನಪಾಗುತ್ತಿದ್ದಾಳೆ!!

’ನಿರ್ಭಯಳನ್ನು ಅತ್ಯಾಚಾರವೆಸಗಿ ಸಾಯಿಸಿರುವ ಸಂಶಯ ದೇವದೂತ ಪ್ರಭಾವಳಿಯ ಪರಿವಾರದ ಮೇಲಿದೆ. ಈ ಕುಟುಂಬದ ಯಜಮಾನ ಸಾಕ್ಷಾತ್ ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ ಸರ್ಕಾರಗಳ ನಡೆಸುವ ಅಷ್ಟೂ ಅಧಿಕಾರಸ್ಥರನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದ ಸರ್ವಶಕ್ತ!! ಹೀಗಾಗಿಯೇ ನ್ಯಾಯದೇವತೆ ಎಂಬ ಪ್ರತೀತಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಪಾತಕ ಪ್ರಕರಣ ನ್ಯಾಯದ ಪರಿಧಿಗೆ ಒಳಪಡುತ್ತಲೇ ಇಲ್ಲವೆಂಬ ಚರ್ಚೆ ಇವತ್ತಿಗೂ ನಡೆಯುತ್ತಿದೆ!!. ಕಾಲೇಜಿನಿಂದ ಮನೆಗೆ ಹೋಗುವಾಗ ಉಜಿರೆ-ಧರ್ಮಸ್ಥಳ ಹೆದ್ದಾರಿಯಲ್ಲಿ ಹಾಡುಹಗಲೇ ಅಪಹರಿಸಲ್ಪಟ್ಟ ಹುಡುಗಿ ಕಣ್ಮರೆಯಾದ ಕ್ಷಣದಿಂದಲೇ ತನಿಖೆಯ ದಿಕ್ಕುತಪ್ಪಿಸುವ ವ್ಯವಸ್ಥಿತ ಸ್ಕೆಚ್ ಒಂದು ಕಾರ್ಯಾಚರಣೆ ನಾಜೂಕಾಗಿ ನಡೆಯುತ್ತಲೇ ಇದೆ. ಈ ಪ್ರಕರಣಕ್ಕೆ ನ್ಯಾಯ ಸಿಗುವ ಸಾಧ್ಯತೆ ದಿನಕಳೆದಂತೆ ಕಮ್ಮಿಯಾಗುತ್ತಲೇ ಇದೆ.

ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ-ಕೊಲೆ ನಡೆದಿದ್ದು 2012ರ ಡಿಸೆಂಬರ್ 16ರಂದು ಅದಕ್ಕೂ ಎರಡು ಕಾಲು ತಿಂಗಳು ಮೊದಲು ಅಂದರೆ 2012 ಅಕ್ಟೋಬರ್ 8ರಂದು ಧರ್ಮಸ್ಥಳದ ನಿರ್ಭಯಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಆಕೆಯ ಮನೆ ಹತ್ತಿರ ಕಾಡಿನಲ್ಲಿ ಎಸೆಯಲಾಗಿತ್ತು. ಆಕೆ ಕಾಣೆಯಾದಾಗ ರಾತ್ರಿಯಿಡೀ ಹುಡುಕಾಡಿದ ಕಾಡಿನಲ್ಲೆ ಬೆಳಿಗ್ಗೆ ಅತ್ಯಾಚಾರಗೊಂಡಿದ್ದ ದೇಹ ಕಂಡುಬಂದಿತ್ತು. ಆಕೆಯ ಮರ್ಮಾಂಗಕ್ಕೆ ಮಣ್ಣು ಹಾಕಿ ವೀರ್ಯ ಪರೀಕ್ಷೆ ವಿಫಲಗೊಳಿಸುವ ಯೋಜನೆ ಮಾಡಲಾಗಿತ್ತು. ಆ ರಾತ್ರಿ ಮಳೆಯಾಗಿತ್ತು, ಆದರೆ ಮೃತ ದೇಹದ ಹತ್ತಿರವೇ ಬಿದ್ದಿದ್ದ ಆಕೆಯ ಪಠ್ಯಪುಸ್ತಕ ಒಂಚೂರು ಒದ್ದೆಯಾಗಿರಲಿಲ್ಲ. ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ನಾಶ ಮಾಡುವ ಶತಪ್ರಯತ್ನ ರೇಪಿಸ್ಟ್ ಗ್ಯಾಂಗ್ ಮಾಡಿತ್ತು.

ಉಜಿರೆ-ಧರ್ಮಸ್ಥಳದಲ್ಲಿ ಪ್ರತಿಭಟನೆಗಳು ಸರಣಿಯಾಗಿ ಭುಗಿಲೆದ್ದು ಇಡೀ ದಕ್ಷಿಣ ಕನ್ನಡಕ್ಕೆ ಹೋರಾಟದ ಕಿಚ್ಚು ವ್ಯಾಪಿಸಿತ್ತು. ಪ್ರತಿಭಟನಾಕಾರರ ಆಕ್ರೋಶ, ಅನುಮಾನ ಧರ್ಮ ವ್ಯಾಪಾರಿಯ ರಕ್ತಸಂಬಂಧಿ ಪುಂಡ ಹುಡುಗರ ಮೇಲೆ ಕೇಂದ್ರೀಕೃತವಾಗಿತ್ತು. ಜನರು ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ ಪೋಲಿಸರು ಪ್ರಕರಣ ಹಳ್ಳ ಹಿಡಿಸಲು ಹವಣಿಸುತ್ತಿದ್ದರು. ಧರ್ಮಸ್ಥಳದ ಮಂಜುನಾಥ, ಧರ್ಮ ದೇವತೆ ಅಣ್ಣಪ್ಪ ಸ್ವಾಮಿ ಅಂಗಳದಲ್ಲಿ ಅಂಡೆಲೆಯುತ್ತಿದ್ದ ಮಾನಸಿಕ ಅಸ್ವಸ್ಥ ಸಂತೋಷ್‌ರಾವ್ ಹುಡುಗಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಕತೆ ಕಟ್ಟಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಯೂ ದೈವ ಸ್ವರೂಪಿ ಎಂದೇ ಧರ್ಮಸ್ಥಳದ ಶ್ರದ್ಧಾಳುಗಳು ನಂಬುವ ವೀರೇಂದ್ರ ಹೆಗ್ಗಡೆ ಪರಿವಾರದ ಉದಯ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಎಂಬ ನವ ತರುಣರು ಸಂತೋಷ್‌ರಾವ್‌ನೇ ಅತ್ಯಾಚಾರಿ ಎಂದು ತೀರ್ಪು ಕೊಟ್ಟು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು! ಇಲ್ಲಿ ಅಡಗಿದೆ ನಿರ್ಭಯಳ ರೇಪ್ ಆಂಡ್ ಮರ್ಡರ್ ಮಿಸ್ಟರಿ!!

ಧರ್ಮಸ್ಥಳ ದೇವರ ದೊರೆಗಳ ಪರಿವಾರದ ಮೇಲಿದ್ದ ಜನತೆಯ ಶಂಕೆ ಬಲವಾಯಿತು. ಧರ್ಮಸ್ಥಳದಲ್ಲಿ ಅಸಂಖ್ಯಾ ಹೆಣ್ಣು ಜೀವಗಳ ಅಸಹಜ ಸಾವು ಸಂಭವಿಸುತ್ತಿರುವ ಪುಕಾರುಗಳು ಎದ್ದವು. ಪೊಲೀಸರೇ ಕೊಟ್ಟ ಮಾಹಿತಿಯಂತೆ ನಿರ್ಭಯಳಿಗಿಂತ ಮೊದಲು ದೇವ ಸನ್ನಿಧಿಯಲ್ಲಿ ನೂರಾರು ಹೆಣ್ಣು ಬಲಿ-ಬಲಾತ್ಕಾರ ನಡೆದಿರುವುದು ಹೊರಗೆ ಬಂದಿತು. ಸಿಬಿಐನಿಂದಲೇ ನಿರ್ಭಯ ಅತ್ಯಾಚಾರದ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಇಟ್ಟರು. ಸ್ಥಳೀಯ ಪೊಲೀಸರು ನೈಜ ಅಪರಾಧಿಗಳನ್ನು ರಕ್ಷಿಸಲು ನಾಟಕ ನಡೆಸುತ್ತಿದ್ದಾರೆಂಬ ಅನಿಸಿಕೆ ಜನರದ್ದಾಗಿತ್ತು. ಕೊನೆಗೆ ಸರ್ಕಾರವು ಸಿಬಿಐಗೆ ಸೌಜನ್ಯ ಪ್ರಕರಣವನ್ನು ಹಸ್ತಾಂತರಿಸಬೇಕಾಗಿ ಬಂತು. ಆದರೆ ಸಿಬಿಐ ಸಹ ಪ್ರಾಮಾಣಿಕ ತನಿಖೆ ನಡೆಸಲೇ ಇಲ್ಲ. ಸ್ಥಳೀಯ ಪೊಲೀಸರ ತನಿಖೆ ಜಾಡಿನಲ್ಲೇ ಸಾಗಿದ ಸಿಬಿಐ ಶೂರರು ಅಪರಾಧಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗುವಂತ “ತನಿಖೆ” ತಂತ್ರ ನಡೆಸಿತು.

2017ರಲ್ಲಿ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಸಿಬಿಐ ವೈಫಲ್ಯವನ್ನು ನ್ಯಾಯಾಧೀಶೆ ಬಿ.ಎಸ್. ರೇಖಾ ಎತ್ತಿ ತೋರಿಸಿದರು. ಸರಿಯಾಗಿ ಯಾಕೆ ತನಿಖೆ ನಡೆಸಿಲ್ಲವೆಂದು ಕಟುವಾಗಿ ಸಿಬಿಐಗೆ ಪ್ರಶ್ನಿಸಿದ್ದರು. ವೈದ್ಯರುಗಳ ಪ್ರಕಾರ ಅರೆಹುಚ್ಚ ಸಂತೋಷ್ ರಾವ್‌ಗೆ ಲೈಂಗಿಕ ಸಾಮರ್ಥ್ಯವೇ ಇಲ್ಲ. ವೈಜ್ಞಾನಿಕ ವಿವರಗಳಂತೆ ಸೌಜನ್ಯಳ ಮೃತದೇಹದಲ್ಲಿ ಸಿಕ್ಕ ಕೂದಲೂ ಸಂತೋಷ್ ರಾವ್‌ನದ್ದಾಗಿರಲಿಲ್ಲ. ವೀರ್ಯ ಸಂಗ್ರಹಿಸದಿರುವುದು ಸೇರಿದಂತೆ ಹಲವು ಲೋಪ-ದೋಷಗಳ ಬಗ್ಗೆ ನ್ಯಾಯಾಧೀಶರು ಸಿಬಿಐ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇವ ಪರಿವಾರದ ಜೈನ್‌ಗಳನ್ನು ಸಿಬಿಐ ನಿಷ್ಠುರ ತನಿಖೆಗೆ ಒಳಪಡಿಸಿರಲೇ ಇಲ್ಲ.

ನಿರ್ಭಯಳ ತಂದೆ ಚಂದಪ್ಪಗೌಡ ತನಗೆ ಉದಯ್ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಮೇಲೆ ಬಲವಾದ ಅನುಮಾನವಿದೆ ಎಂದು ಹೇಳಿದ್ದರು. ಸಿಬಿಐ ನ್ಯಾಯಾಲಯ ಈ ತ್ರಿಮೂರ್ತಿಗಳಿಗೆ ಸಮನ್ಸ್ ಕಳುಹಿಸಿತ್ತು, ಅದಕ್ಕೆ ಅವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದರು. ಈ ನಡುವೆ ನಿರ್ಭಯಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದ ರವಿ ಪೂಜಾರಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡರು. ಕೇಸ್ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಬಡ್ತಿ ಪಡೆದುಕೊಂಡರು. ವಿಚಾರಣೆಗೆ ಬಿದ್ದಿರುವ ತಡೆ ತೆರವಾಗುವ ಲಕ್ಷಣವೊಂದೂ ಕಾಣಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಧರ್ಮವ್ಯಾಪಾರಿಯ ಶಿಷ್ಯರೇ ಆಡಳಿತ ನಡೆಸುತ್ತಿದ್ದಾರೆ. ಈ ಧರ್ಮಾಡಳಿತದಲ್ಲಿ ನಿರ್ಭಯಾಗೆ ಸಿಕ್ಕಂತೆ ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

(ಸಂತ್ರಸ್ತೆಯ ನಿಜವಾದ ಹೆಸರನ್ನು ಧರ್ಮಸ್ಥಳದ ನಿರ್ಭಯ ಎಂದು ಬದಲಿಸಲಾಗಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...