Homeಕರ್ನಾಟಕರೈತನಿಗೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಹೆಣಗುವುದು, ಬೆಂಕಿಯೊಡನೆ ಸೆಣಸಿದಂತೆಯೇ!

ರೈತನಿಗೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಹೆಣಗುವುದು, ಬೆಂಕಿಯೊಡನೆ ಸೆಣಸಿದಂತೆಯೇ!

- Advertisement -
- Advertisement -

ಕಳೆದ ಕೆಲವು ವರ್ಷಗಳಿಂದ ನನ್ನ ಭಾಗದ ಜಮೀನಿನಲ್ಲಿ ಸುಮಾರು ನೂರೈವತ್ತು ಹಣ್ಣಿನ ಸಸಿ ಮತ್ತು ನೂರು ತೆಂಗಿನ ಸಸಿ ನೆಟ್ಟು, ಡ್ರಿಪ್ ನೀರಾವರಿ ಸಹಾಯದಿಂದ ಬದುಕಿನ ಅಂತ್ಯ ಅರ್ಥಪೂರ್ಣವಾಗುವಂತೆ ಮಾಡತೊಡಗಿದೆ. ಕಳೆದ ಮುಂಗಾರಿನಲ್ಲಿ ರಾಗಿಯನ್ನು ಬಿತ್ತಿದೆ. ರಾಗಿ ಚೆನ್ನಾಗಿ ಬಂದು ಇನ್ನೇನು ಕುಯ್ಯುವ ಸಮಯಕ್ಕೆ ನಿರಂತರವಾಗಿ ಮಳೆ ಹಿಡಿದುಕೊಂಡಿತು. ಇದರಿಂದ ಜವುಗಿಗೆ ಸಿಕ್ಕ ರಾಗಿ ಪೈರು ತೆನೆ ಹೊರಲಾರದೆ ಹೊಲದಲ್ಲಿ ಮಗ್ಗ ಮಲಗಿಬಿಟ್ಟಿತು. ಹೊಲಕ್ಕೆ ಕಾಲಿಟ್ಟರೆ ಬೆರಳ ಸಂದಿ ಕೆಸರು ಮೇಲೆ ಬರುತ್ತಿತ್ತು. ಆದ್ದರಿಂದ ದಡದಲ್ಲಿ ನಿಂತು ಅಸಹಾಯಕನಾಗಿ ಕೈಗೆ ಬಂದ ತುತ್ತು ಮಣ್ಣಾಗುವುದನ್ನು ನೋಡುತ್ತ ನಿಲ್ಲುವಂತಾಯ್ತು. ಮಲಗಿದ್ದ ರಾಗಿ ಪೈರಿನಿಂದ ತೆನೆ ಕಟಾವು ಮಾಡಿಕೊಂಡ ಇಲಿಗಳು ಮತ್ತು ತ್ಲಾಡಗಳು ಹೊಲದ ತುಂಬ ಬಿಲ ತೋಡಿಕೊಂಡು ರಾಗಿ ಸಂಗ್ರಹಿಸತೊಡಗಿದವು. ಇಷ್ಟೊಂದು ಇಲಿ ಬಿಲಗಳನ್ನು ನಾನು ಈವರೆಗೆ ಕಂಡಿರಲಿಲ್ಲ. ಮೊದಲಾಗಿದ್ದರೆ ಮಣ್ಣು ವಡ್ಡರು ಮತ್ತು ಕಲ್ಲು ವಡ್ಡರ ಜೊತೆ ನಾವು ಸೇರಿಕೊಂಡು ಇಲಿ ಬಿಲ ಅಗೆದು ಈಚಲು ದೊಣ್ಣೆಯಿಂದ ಬೀಸಿ ಹೊಡೆದು ಕೊಲ್ಲುತ್ತಿದ್ದೆವು ಮತ್ತು ಅಲ್ಲೇ ಸುಟ್ಟುಕೊಂಡು ತಿನ್ನುತ್ತಿದ್ದೆವು, ಮನೆಗೆ ತಂದು ಸಾರು ಮಾಡುವುದೂ ಇತ್ತು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಇನ್ನ ರಾತ್ರಿವೇಳೆ ಬಂದು ಕಾದು ಕೂತು ಬೇಟೆಯಾಡುವ ಗೂಬೆಗಳಿಂದಲೂ ಇಲಿ ಸಂತತಿಯನ್ನು ನಿಯಂತ್ರಿಸಲಾಗಿಲ್ಲ. ಸಾಮಾನ್ಯವಾಗಿ ಹೊಲದ ಇಲಿಗಳು ದಾಸ್ತಾನು ಸಂಗ್ರಹಿಸುವುದು ರಾತ್ರಿವೇಳೆ. ಅವುಗಳ ಈ ಕೆಲಸಕ್ಕೆ ಅವೇ ಮಾಡಿಕೊಂಡ ರೋಡುಗಳು ಇವೆ. ಈ ಚಟುವಟಿಕೆ ಗಮನಿಸುತ್ತ ಕುಳಿತ ಗೂಬೆ ಸದ್ದಿಲ್ಲದೆ ಬಂದು ಇಲಿಗಳನ್ನು ಅಪಹರಿಸುತ್ತಿದ್ದವು. ಇಲಿಯ ಹತ್ತಿರ ಬಂದರೂ ಈ ಗೂಬೆಗಳ ರಕ್ಕೆ ಸದ್ದು ಮಾಡುವುದಿಲ್ಲವಂತೆ.

ಇದೆಲ್ಲಕ್ಕಿಂತ ಮುಖ್ಯವಾದ ಘಟನೆಯೊಂದನ್ನು ಇಲ್ಲಿ ದಾಖಲಿಸಬೇಕಿದೆ. ಅಂಗರು ಗಿಡ ಅಗೆದು ತೆಗೆಯುತ್ತಿರುವಾಗ ಹೆಬ್ಬಾವಿನ ಗಾತ್ರದ ಮಂಡಲದ ಹಾವು ನಮ್ಮ ಹುಡುಗನ ಗುದ್ದಲಿಗೆ ಸಿಕ್ಕಿತ್ತು. ಸೀಳಿಹೋದ ಅದರೆ ಹೊಟ್ಟೆಯಿಂದ ಮೂರ್ನಾಲ್ಕು ಮರಿಗಳು ದೂರಕ್ಕೆ ಸಿಡಿದವು. ಆಶ್ಚರ್ಯವೆಂದರೆ ಐದೇ ನಿಮಿಷಕ್ಕೆ ಎರಡು ಹದ್ದುಗಳು ಪ್ರತ್ಯಕ್ಷವಾಗಿ ವಿಮಾನ ಇಳಿದಂತೆ ಬಂದು ಮಂಡಲದ ಹಾವಿನ ಮರಿಗಳನ್ನ ಎಗರಿಸಿಕೊಂಡು ಹೋದವು. ನಾನು ದಂಗು ಬಡಿದು ನಿಂತೆ. ಮಂಡಲದ ಹಾವಿನ ಹತ್ಯೆ ಈ ಹದ್ದುಗಳಿಗೆ ತಿಳಿದಿದ್ದು ಹೇಗೆ? ಆಹಾರ ಸರಪಳಿಯ ಜಾಲ ಇನ್ನೆಷ್ಟು ಸೂಕ್ಷ್ಮವಾಗಿರಬೇಕೆಂದು ಆಶ್ಚರ್ಯವಾಯ್ತು. ಈ ಭೂಮಿ ಸಂಬಂಧ ಕೊಡುವ ನೆಮ್ಮದಿ ಅಸಾಧಾರಣವಾದದ್ದು.

ಭೂಮಿಯ ಒಡನಾಟದಲ್ಲಿದ್ದರೆ ಹೊರ ಜಗತ್ತಿನ ಯಾವುದೂ ಬೇಕಾಗುವುದಿಲ್ಲ. ಟಿವಿ ಪತ್ರಿಕೆಗಳೂ ಕೂಡ ನಮ್ಮನ್ನ ಸೆಳೆಯಲಾರವು. ಇಂತಹದ್ದೊಂದು ಜೀವನ ಕ್ರಮಕ್ಕೆ ಮತ್ತೆ ಒಗ್ಗಿಕೊಂಡು ಇರಬೇಕಾದರೆ ತೆಂಗು ಮತ್ತು ಹಣ್ಣಿನ ತೋಟ ನಳನಳಿಸುತ್ತಿತ್ತು. ಇದರೊಳಗೆ ಮಲಗಿದ್ದ ರಾಗಿ ಮುಂದೆ ಗೊಬ್ಬರವಾಗುವದರಲ್ಲಿ ಯಾವ ಸಂಶಯವೂ ಇಲ್ಲ ಎಂದುಸಮಾಧಾನದಿಂದಿರಬೇಕಾದರೆ, ಇದ್ದಕ್ಕಿದ್ದಂತೆ ಜಮೀನಿಗೆ ಬೆಂಕಿ ಬಿದ್ದಿತು. ಅದೆಷ್ಟು ವೇಗವಾಗಿ ಉರಿದು ಬೂದಿಯಾಯ್ತೆಂದರೆ, ನಾಗಮಂಗಲದಿಂದ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಎಲ್ಲವೂ ಸರ್ವನಾಶವಾಗಿತ್ತು. ಹೊಲದಲ್ಲಿ ಒಣಗಿ ಮಲಗಿದ್ದ ರಾಗಿಹುಲ್ಲಿಗೆ ಬಿದ್ದ ಬೆಂಕಿ, ಪೆಟ್ರೋಲ್ ಎರಚಿದೆಯೇನೋ ಎಂಬಂತೆ ವೇಗವಾಗಿ ಹಬ್ಬಿ ಓಡತೊಡಗಿತು. ಹತ್ತಾರು ಮಾರು ದೂರದಲ್ಲಿದ್ದ ಬದುಗಳು ಕೂಡ ಬೆಂಕಿ ರವೆಗೆ ದಿಗ್ಗನೆ ಹತ್ತಿಕೊಳ್ಳುತ್ತಿದ್ದವು. ಕೆಲವು ವಾರಗಳ ಹಿಂದೆ ನಿರಂತರವಾಗಿ ಹೊಡೆದಿದ್ದ ಮಳೆ ದೆಸೆಯಿಂದ, ಹುಲ್ಲು ಚೆನ್ನಾಗಿ ಬೆಳೆದು ಒಣಗಿಕೊಂಡಿತ್ತು.

ಅಗ್ನಿಶಾಮಕ ದಳದವರು ಯಾವ ಆತಂಕವೂ ಇಲ್ಲದೆ ಮಹಜರು ರಿಪೋರ್ಟು ತಯಾರಿಸಿ ಸಹಿ ಪಡೆದರು. ಸಮಾಧಾನದಿಂದ ಎಳನೀರು ಕುಡಿದು ಮುಂದಿನ ಕೃಷಿಯ ಬಗ್ಗೆ ಮುಫತ್ತಾದ ಸಲಹೆಕೊಟ್ಟು ಹೊರಟರು. ಆಗ ಅವರು ಮಾಡಿದ ಮಹಜರಿನ ಕಾಪಿ ಕೇಳಿದೆ. ಮಂಡ್ಯಕ್ಕೆ ಹೋಗಿ ಪಡೆದುಕೊಳ್ಳಿ, ಇನ್ನೆರಡು ದಿನ ಬಿಟ್ಟು ಅಲ್ಲಿಗೆ ಕಳಿಸುತ್ತೇವೆ ಎಂದರು. ಹೀಗಂದು ಅಗ್ನಿಶಾಮಕ ವಾಹನ ಹತ್ತುವ ಮುನ್ನ ಕೈಬಾಯಿ ನೋಡಿದರು, ನಾನು ನಮಸ್ಕಾರ ಹಾಕಿದೆ.

ಮೂರ್ನಾಲ್ಕು ದಿನ ಬಿಟ್ಟು ಮಂಡ್ಯದ ಅಗ್ನಿಶಾಮಕ ಕಚೇರಿಗೆ ಹೋದರೆ ಎಸ್‌ಬಿಐನಲ್ಲಿ ಇನ್ನೂರು ರೂಪಾಯಿ ತುಂಬಿ ಬನ್ನಿ, ಆ ನಂತರ ವರದಿ ಕೊಡುತ್ತೇವೆ ಎಂದರು. ಅಲ್ಲಿ ನನ್ನಂತೆ ಬೆಂಕಿಗೆ ಭೂಮಿಯೊದಗಿಸಿದ್ದ ಇನ್ನಿಬ್ಬರಿದ್ದರು. ಅವರಲ್ಲೊಬ್ಬ ಮೆದೆಗೆ ಬಿದ್ದ ಬೆಂಕಿ ಆರಿಸಲು ಹೋರಾಡಿ ಮುಖ ಕೈಕಾಲನ್ನ ಸುಟ್ಟುಕೊಂಡು ಬಂದಿದ್ದ; ನಡೆಯಲಾರದೆ ಕುಂಟುತ್ತಿದ್ದ. ಅವನನ್ನ ಹತ್ತಿಸಿಕೊಂಡು ಎಸ್‌ಬಿಐ ಶಾಖೆ ಹುಡುಕುತ್ತ ಹೊರಟೆ. ಆಟೊದವನು ನಮ್ಮ ಜೊತೆಯೇ ಹುಡುಕಲು ಸಹಕರಿಸಿ, ಕೊನೆಗೆ ಕಚೇರಿಯ ಬಳಿ ಬಿಟ್ಟು ಹೊರಟುಹೋದ. ಬಸ್‌ಸ್ಟಾಂಡಿನಿಂದ ಅಗ್ನಿಶಾಮಕದಳದ ಆಫೀಸಿಗೆ ಬಿಡಲು ನೂರಿಪ್ಪತ್ತುರೂ ಆಟೋ ಖರ್ಚಾಗಿತ್ತು. ಅಷ್ಟೇ ದುಡ್ಡು ಎಸ್‌ಬಿಐ ಹುಡುಕಲು ಕೊಟ್ಟೆ. ಈಗ ಚಲನ್ ತುಂಬಿದ ನಂತರ, ಅದರ ರಸೀದಿ ಹಿಡಿದು ಅಗ್ನಿಶಾಮಕ ಕಚೇರಿಗೆ ಹೋಗಬೇಕು, ಆನಂತರ ವರದಿ ತೆಗೆದುಕೊಂಡು ಊರಿಗೆ ಹೋಗಬೇಕು. ಇದರ ಬದಲು ನಾಗಮಂಗಲದಲ್ಲಿ ಅಥವಾ ಬೆಂಕಿಬಿದ್ದ ಜಾಗದಲ್ಲೇ ಮಹಜರು ವರದಿಯ ನಕಲನ್ನು ವಿತರಿಸಲು ಇವರಿಗ್ಯಾವ ತೊಂದರೆ ಎಂದು ಯೋಚಿಸುತ್ತ ಆಫೀಸ್ ಒಳಗೇ ನಿಂತೆ. “ಹೊರಗೋಗಿ ಕುತಗಳಿ ಸುಮಾರೊತ್ತಾಗತ್ತೆ” ಎಂದ ಸಿಬ್ಬಂದಿಗೆ ಗದರುವ ಸ್ಥಿತಿಯಲ್ಲಿರಲಿಲ್ಲ. ಆದರೂ ಸಂಯಮದಿಂದ, “ನಾನೂ ಕೂಡ ಡಿಸ್ಟ್ರಿಕ್ಟ್ ಆಫೀಸರಾಗಿದ್ದೆ, ಬಂದವರಿಗೆ ಸಮಾಧಾನವಾಗಿ ಕೂತಗಳಿ ಅಂತ ಹೇಳತಿದ್ದೆ” ಎಂದೆ. ನನ್ನ ಮಾತನ್ನೇನು ಆತ ಕಿವಿಯ ಮೇಲೆ ಹಾಕಿಕೊಳ್ಳದೆ, “ನಮ್ಮ ಈ ವರದಿಯಿಂದ ಪರಿಹಾರ ಸಿಗಲ್ಲ, ನಾವು ಹೋಗಿ ಬಂದಿರೊ ರಿಪೋರ್ಟು ಅಷ್ಟೇ” ಎಂದ. “ಇರ್ಲಿ ವಿಲೇಜ್ ಅಕೌಂಟೆಂಟರಿಗೆ ವರದಿ ಬೇಕಂತೆ ಕೊಡಿ” ಎಂದೆ. ತಾಲೂಕಿನಲ್ಲಿರುವ ಅಗ್ನಿಶಾಮಕದಳ ಬರುವಷ್ಟರಲ್ಲಿ ಎಲ್ಲ ಸುಟ್ಟುಹೋಗಿತ್ತು. ಆ ಬಗೆಗಿನ ವರದಿ ಪಡೆಯಲು ಜಿಲ್ಲೆಗೆ ಅಲೆದಾಡಬೇಕಾದಾಗ ರೈತನಾಗಿ ಬದುಕುವುದು ಎಷ್ಟು ಕಷ್ಟ ಎಂಬುದರ ಜೊತೆಗೆ, ರೈತನ ಬೆಂಗಾವಲಿಗೆ ನಿಂತುಬಿಟ್ಟಿದ್ದ ಪ್ರೊ ನಂಜುಂಡಸ್ವಾಮಿ, ಸುಂದರೇಶ್, ಶಾಮಣ್ಣ ಬಾಬಾಗೌಡ ಪಾಟೀಲರೆಲ್ಲಾ ನೆನಪಿಗೆ ಬಂದು, ಅಯ್ಯೋ ಈಗ ರೈತನ ಪರ ಯಾರೂ ಇಲ್ಲವಲ್ಲ ಅನ್ನಿಸಿತು!


ಇದನ್ನೂ ಓದಿ: ಗಲಭೆಗೆ ಪ್ರಚೋದನೆ: ಪಬ್ಲಿಕ್ ಟಿವಿ ರಂಗನಾಥ್‌ ವಿರುದ್ಧ ಜಾಮೀನು ರಹಿತ ಕೇಸ್‌ ದಾಖಲಿಸುವಂತೆ ಕೋರ್ಟ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...