Homeಅಂಕಣಗಳುಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. - ಮೋದಿಯ ಹೊಸ ಮಂತ್ರ

ಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. – ಮೋದಿಯ ಹೊಸ ಮಂತ್ರ

- Advertisement -
- Advertisement -

ಮೋದಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಿಲ್ಲ. ಬದಲಿಗೆ ಗಡಿಯಲ್ಲಿನ ಭಯೋತ್ಪಾದನೆ ಮತ್ತು ದೇಶದೊಳಗಿನ ಮುಸ್ಲಿಮರ ‘ಗುಮ್ಮ’ ತೋರಿಸುತ್ತಿದ್ದಾರೆ. ಅವರ ಪ್ರಕಾರ ಇದು ನಿಜವಾದ ಯುದ್ಧವಂತೆ……

                                                -ಶೇಖರ್ ಗುಪ್ತಾ

ಅಧಿಕಾರದಲ್ಲಿರುವ ವ್ಯಕ್ತಿ ಮರು ಆಯ್ಕೆಗಾಗಿ ಮತದಾರರನ್ನು ಸಹಜವಾಗಿ ಕೇಳಬೇಕಾದ ಮುಖ್ಯ ಪ್ರಶ್ನೆ: ‘ನನಗೆ ವೋಟ್ ಮಾಡಿ ಗೆಲ್ಲಿಸಿದ ಸಂದರ್ಭಕ್ಕಿಂತ ಈಗ ನೀವು ಇನ್ನೂ ಹೆಚ್ಚಿನ ಸೌಖ್ಯದಲ್ಲಿದ್ದೀರಿ ತಾನೇ?’… ಆದರೆ ಮೋದಿಯ ವರಸೆ ಹೀಗಿದೆ: “ನನ್ನನ್ನು ಗೆಲ್ಲಿಸಿದ ನಂತರ ನಿಮಗೆ ಹೆಚ್ಚಿನ ಸುರಕ್ಷತಾ ಭಾವ ಬಂದಿದೆಯಲ್ಲವೇ?’…

ಇದಕ್ಕೆ ಉತ್ತರ ‘ಹೌದು’ ಎಂದಾದರೆ ಮತ್ತೆ ನೀವು ಅಸುರಕ್ಷತೆಯ ಬಗ್ಗೆ ದೂಸರಾ ಮಾತೇ ಎತ್ತುವ ಹಾಗಿಲ್ಲ. ಉತ್ತರ ‘ಇಲ್ಲ’ ಎಂದಾದರೆ, ಮತ್ತೇಕೆ ನಿಮ್ಮನ್ನು ಮರು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ. ಆದರೆ ಮೋದಿ ಜಗತ್ತಿನಲ್ಲಿ ಮೂರನೆಯ ಸಾಧ್ಯತೆಯನ್ನೂ ಸೃಷ್ಟಿಸಬಹುದು. ‘ಹಿಂದಿಗಿಂತ, ಮುಖ್ಯವಾಗಿ, 2008ರ ಮುಂಬೈ ದಾಳಿಯ ಸಂದರ್ಭಕ್ಕಿಂತ ಈಗ ನೀವು ಹೆಚ್ಚು ಅಸುರಕ್ಷಿತರೇ?’ ಎಂಬ ಪ್ರಶ್ನೆಯನ್ನು ಹಾಕಲಾಗುತ್ತದೆ. ಒಬ್ಬ ಸಾಂಪ್ರದಾಯಿಕ ಅಥವಾ ಸಹಜ ವೃತ್ತಿ ರಾಜಕಾರಣಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಾನೆ. ಆದರೆ ‘ಜಾಣ’ನಾದವನು ತನ್ನ ವಿರೋಧಿಗಳ ವಿಷಯ ಇಟ್ಟುಕೊಂಡು ವೋಟು ಬೇಡುತ್ತಾನೆ. ಈ ವಿಷಯದಲ್ಲಿ ಮೋದಿ ‘ಜಾಣ’ನಲ್ಲದೇ ಇನ್ನೇನು?

ನೀವು ವಿವರ ತೆಗೆದು ವಾದಿಸಬಹುದು, ಆದರೆ ಈ ಐದು ವರ್ಷಗಳಲ್ಲಿ ಕಾಶ್ಮೀರ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ದೊಡ್ಡ ಭಯೋತ್ಪಾದನಾ ಕೃತ್ಯ ನಡೆದಿಲ್ಲ ಎಂಬುದನ್ನು ಈ ಸರ್ಕಾರ ಮುಂದೆ ಮಾಡುತ್ತದೆ. ಅಂತರಾಷ್ಟ್ರೀಯ ಗಡಿಯಿಂದ ಹಲವು ಮೈಲುಗಳ ದೂರದ ಗುರುದಾಸಪುರ ಮತ್ತು ಪಠಾನಕೋಟ್‍ನಲ್ಲಿ ಎರಡು ವಿಫಲ ದಾಳಿ ನಡೆದದ್ದು ಬಿಟ್ಟರೆ ಬೇರೆಲ್ಲೂ ಅಂತಹ ದಾಳಿ ನಡೆದಿಲ್ಲ. ಯುಪಿಎ ಅವಧಿಯ ದಿನಗಳು ತುಂಬ ಸುರಕ್ಷಿತವಾಗಿದ್ದವು ಎಂಬುದೂ ಸತ್ಯವಲ್ಲ. ಕಾಶ್ಮೀರ ಆಗಲೂ ಸಾಪೇಕ್ಷವಾಗಿ ಶಾಂತವಾಗಿರಲಿಲ್ಲ. ಕಾಂಗ್ರೆಸ್ ಕೂಡ ಇದನ್ನು ಮರೆತಿತ್ತು.

ಮೋದಿ ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ತನ್ನ ಸಾಧನೆ ಇಟ್ಟುಕೊಂಡು ತಮ್ಮ ಪ್ರಚಾರವನ್ನು ಕಟ್ಟುತ್ತಿಲ್ಲ. ಆದರೆ ಅವರು ಇನ್ನಷ್ಟು ಅಭದ್ರತೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಜೈಷ್, ಲಷ್ಕರ್, ಐಎಸ್‍ಐಗಳೆಂಬ ಗುಮ್ಮಗಳನ್ನು ಅವರು ಮುಂದು ಮಾಡಿ ಮತ ಪಡೆಯಲು ಹೊರಟಿದ್ದಾರೆ.

2014ರ ಚುನಾವಣೆಯನ್ನು ಮೋದಿ ಭರವಸೆಗಳ ಆಧಾರದಲ್ಲಿ ಗೆದ್ದರು. 5 ವರ್ಷಗಳ ನಂತರ ಅವರು ಪಾಕಿಸ್ತಾನದ ಕಪ್ಪು ಭಯೋತ್ಪಾದನೆಯ ಭೀತಿಯ ಆಧಾರದಲ್ಲಿ ಮತ್ತೊಂದು ಅವಧಿಗೆ ತಮ್ಮನ್ನು ಆಯ್ಕೆ ಮಾಡಲು ಕೇಳುತ್ತಿದ್ದಾರೆ. ಅದಕ್ಕೇ ಆತ ಮತ್ತೆ ಮತ್ತೆ ಹೇಳುತ್ತಿರುವುದು: ಕೇವಲ ಭಯೋತ್ಪಾದಕರು ಮತ್ತು ಪಾಕಿಸ್ತಾನಿಯರು ತಮ್ಮನ್ನು ಸೋಲಿಸಲು ಬಯಸಿದ್ದಾರೆಂದು! ಅದೇ ಉಸಿರಿನಲ್ಲಿ ಅವರು, ಸೇನಾ ಕಾರ್ಯಾಚರಣೆಗಳ ಯಶಸ್ಸಿನ ಬಗ್ಗೆ ಕೇಳಿದ ವಿದೋಧ ಪಕ್ಷಗಳನ್ನು ಮೂದಲಿಸುತ್ತ, ಸೇನೆಯ ಮನೋಸ್ಥೈರ್ಯವನ್ನು ಕುಂದಿಸುತ್ತಿದ್ದಾರೆ ಎಂದೂ ಅಪಾದಿಸುತ್ತಾರೆ.

2014ರ ಆಶಾವಾದ ಮತ್ತು 2019ರ ಭೀತಿ- ಈ ಶಿಫ್ಟ್‍ ಗೆ ಕಾರಣವೇನು?

ಮೋದಿ-ಶಾ ಜೋಡಿ ಯಾವುದನ್ನು ನಾವು ‘ಪುಟ್ಟಾಪೂರಾ ಪಾಲಿಟಿಕ್ಸ್’ ( ಕಂಪ್ಲೀಟ್ ಪಾಲಿಟಿಕ್ಸ್) ಎನ್ನುತ್ತವೆಯೋ ಅದರಲ್ಲಿ ನಂಬಿಕೆ ಇಟ್ಟಿದೆ. ಅಂದರೆ ಇದು ರಾಜಕಾರಣವೇ ಮನರಂಜನೆ, ಹುಚ್ಚು ಮತ್ತು 24 ಗಂಟೆಗಳ ಗೀಳು… ಹೀಗಾದಾಗ ರಾಜಕೀಯದ ಹೊರತಾಗಿ ಇಲ್ಲಿ ಬೇರೆ ಯಾವುದಕ್ಕೂ ಜಾಗವೇ ಇಲ್ಲ. ನಿಮ್ಮ ಸಾಧನೆಗಳ ಆಧಾರದಲ್ಲಿ ಹೋದರೆ ಅದು ಅಪಾಯಕಾರಿ. ಏಕೆಂದರೆ, ನೀವು ಮಾಡುವ ಕ್ಲೇಮುಗಳನ್ನು ಜನ ತಮ್ಮ ರಿಯಾಲಿಟಿಯೊಂದಿಗೆ ಇಟ್ಟು ಚೆಕ್ ಮಾಡುತ್ತಾರೆ. ನೀವು ಉದ್ಯೋಗ ಕುರಿತ ಎಲ್ಲ ದತ್ತಾಂಶಗಳನ್ನು ಮುಚ್ಚಿಡಬಹುದು, ಜಿಡಿಪಿ ಲೆಕ್ಕವನ್ನು ಫಿಕ್ಸ್ ಮಾಡಬಹುದು. ಆದರೆ, ನಿಮಗೆ ಹೇಗೆ ಅನಿಸುತ್ತಿದೆ, ಸೌಖ್ಯವೇ ಅಂತ ಕೇಳಿದ ಕೂಡಲೇ ಜನರು ರಿಯಾಲಿಟಿ ಚೆಕ್‍ಗೆ ಇಳಿಯುತ್ತಾರೆ. ನಿಮ್ಮ ಉಜ್ವಲಾ, ಮುದ್ರಾ, ರೈತರಿಗೆ ನೇರ ಹಣ, ಶೌಚಾಲಯ ಯೋಜನೆಗಳ ಫಲಾನುಭವಿಗಳಿರಬಹುದು. ಆದರೆ ಇದೆಲ್ಲದರಿಂದ ಹೊರಗುಳಿದ ಒಂದು ದೊಡ್ಡ ಜನಸಮೂಹವೇ ಇರುತ್ತದೆ. ಇದು ಎಷ್ಟು ಅಪಾಯಕಾರಿ ಎಂದು ತಿಳಿಯಲು, 2004ರ ಶೈನಿಂಗ್ ಇಂಡಿಯಾ ಬಗ್ಗೆ ಅದ್ವಾನಿಗೆ ಕೇಳಿ ನೋಡಿ.

ಮೋದಿಯ ಈಗಿನ ಭಾಷಣಗಳಂತೆ ಮುಂದೆಯೂ ಭಯೋತ್ಪಾದನೆ, ಪಾಕಿಸ್ತಾನ, ರಾಷ್ಟ್ರೀಯ ಸುರಕ್ಷತೆಯ ಕುರಿತಾದ ಭಾಷಣಗಳೇ ಇರುತ್ತವೆ. ಉದ್ಯೋಗ, ಅಭಿವೃದ್ಧಿ, ರೈತರ ಸಂಕಷ್ಟಗಳ ಬಗ್ಗೆ ಅವರು ಮಾತನಾಡಲ್ಲ. ತಮ್ಮನ್ನು ಡಿಫೆಂಡ್ ಮಾಡಿಕೊಳ್ಳುವ ಬದಲು, ವಿರೋಧಿಗಳ ಮೇಲೆ ಹರಿ ಹಾಯುವುದನ್ನೇ ಅವರು ಮುಂದುವರೆಸಲಿದ್ದಾರೆ.

‘ಭಯೋತ್ಪಾದನೆ’ ಶಬ್ದದ ಜೊತೆಗೊಂದು ಇಲ್ಲಿ ಉಪಶಬ್ದವೂ ಇದೆ-‘ಮುಸ್ಲಿಮರು’.  2014ರಲ್ಲಿ ಗೆದ್ದ ನಂತರ ಕ್ಯಾಬಿನೆಟ್ ಸೇರಿದಂತೆ ಯಾವ ಸಾಂವಿಧಾನಿಕ ಸಂಸ್ಥೆಗಳಲ್ಲೂ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲದಂತೆ ನೋಡಿಕೊಂಡರು. ದೇಶದಲ್ಲಿ ಶೇ 14ರಷ್ಟು ಇರುವ ಮುಸ್ಲಿಮರಿಗೆ ಕೇವಲ 7 ಸೀಟು ನೀಡಿ, ಶೇ. 20ರಷ್ಟಿರುವ ಉತ್ತರ ಪ್ರದೇಶದಲ್ಲಿ ಒಂದೂ ಸೀಟು ನೀಡದೇ ಭಾರಿ ದಿಗ್ವಿಜಯ ಸಾಧಿಸಿದ್ದರು. ಈ ತಂತ್ರ ಎಷ್ಟು ಯಶಸ್ವಿಯಾಗಿತ್ತು ಎಂದರೆ, ಈಗಲೂ ಕಾಂಗ್ರೆಸ್ ತನ್ನನ್ನು ಮುಸ್ಲಿಮರ  ಹಿತೈಷಿ ಎಂದು ಬಿಡುತ್ತಾರೇನೋ ಎಂಬ ಭಯದಲ್ಲಿ ಮುಸ್ಲಿಮರಿಗೆ ಟಿಕೆಟು ಕೊಡಲು ಹಿಂಜರಿಯುತ್ತಿದೆ.

ಈಗಲೂ ಅದನ್ನೇ ಮೋದಿ ಮುದುವರೆಸಿದ್ದಾರೆ. ಭಯೋತ್ಪಾದಕರು, ಪಾಕಿಸ್ತಾನಿಯರು ಮತ್ತು ಮುಸ್ಲಿಮರನ್ನು ಗುಮ್ಮನಂತೆ ತೋರಿಸುವುದು, ಭಯೋತ್ಪಾದಕರು, ಪಾಕಿಗಳು ಮತ್ತು ವಿರೋಧ ಪಕ್ಷಗಳು ತಮ್ಮನ್ನು ಸೋಲಿಸಲು ಬಯಸಿವೆ ಎಂದು ಭಾಷಣ ಮಾಡುವುದು. ಮುಸ್ಲಿಮರು ಓಟು ಹಾಕದಿದ್ದರೂ ಪರವಾಗಿಲ್ಲ, ಈ ಕಾರಣಕ್ಕಾಗಿ ಹಿಂದೂಗಳು ಧ್ರುವೀಕರಣ ಆಗುತ್ತಾರೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಇಲ್ಲಿನ ಮುಸ್ಲಿಮರ ವಿರುದ್ಧ ನೇರ ದಾಳಿ ಮಾಡಿದರೆ ವರ್ಕೌಟ್ ಆಗುವುದಿಲ್ಲ ಎಂದು ಅರಿತಿರುವ ಮೋದಿ, ಪಾಕಿಸ್ತಾನ, ಬಾಂಗ್ಲಾ ಮುಸ್ಲಿಮರನ್ನು ವೈರಿಗಳು ಎಂನಂತೆ ಚಿತ್ರಿಸುವ ತಂತ್ರಕ್ಕೆ ಶರಣಾಗಿದ್ದಾರೆ.

 (ಕೃಪೆ: ದಿ ಪ್ರಿಂಟ್)

ಅನುವಾದ: ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...