Homeಅಂಕಣಗಳುಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. - ಮೋದಿಯ ಹೊಸ ಮಂತ್ರ

ಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. – ಮೋದಿಯ ಹೊಸ ಮಂತ್ರ

- Advertisement -
- Advertisement -

ಮೋದಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಿಲ್ಲ. ಬದಲಿಗೆ ಗಡಿಯಲ್ಲಿನ ಭಯೋತ್ಪಾದನೆ ಮತ್ತು ದೇಶದೊಳಗಿನ ಮುಸ್ಲಿಮರ ‘ಗುಮ್ಮ’ ತೋರಿಸುತ್ತಿದ್ದಾರೆ. ಅವರ ಪ್ರಕಾರ ಇದು ನಿಜವಾದ ಯುದ್ಧವಂತೆ……

                                                -ಶೇಖರ್ ಗುಪ್ತಾ

ಅಧಿಕಾರದಲ್ಲಿರುವ ವ್ಯಕ್ತಿ ಮರು ಆಯ್ಕೆಗಾಗಿ ಮತದಾರರನ್ನು ಸಹಜವಾಗಿ ಕೇಳಬೇಕಾದ ಮುಖ್ಯ ಪ್ರಶ್ನೆ: ‘ನನಗೆ ವೋಟ್ ಮಾಡಿ ಗೆಲ್ಲಿಸಿದ ಸಂದರ್ಭಕ್ಕಿಂತ ಈಗ ನೀವು ಇನ್ನೂ ಹೆಚ್ಚಿನ ಸೌಖ್ಯದಲ್ಲಿದ್ದೀರಿ ತಾನೇ?’… ಆದರೆ ಮೋದಿಯ ವರಸೆ ಹೀಗಿದೆ: “ನನ್ನನ್ನು ಗೆಲ್ಲಿಸಿದ ನಂತರ ನಿಮಗೆ ಹೆಚ್ಚಿನ ಸುರಕ್ಷತಾ ಭಾವ ಬಂದಿದೆಯಲ್ಲವೇ?’…

ಇದಕ್ಕೆ ಉತ್ತರ ‘ಹೌದು’ ಎಂದಾದರೆ ಮತ್ತೆ ನೀವು ಅಸುರಕ್ಷತೆಯ ಬಗ್ಗೆ ದೂಸರಾ ಮಾತೇ ಎತ್ತುವ ಹಾಗಿಲ್ಲ. ಉತ್ತರ ‘ಇಲ್ಲ’ ಎಂದಾದರೆ, ಮತ್ತೇಕೆ ನಿಮ್ಮನ್ನು ಮರು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ. ಆದರೆ ಮೋದಿ ಜಗತ್ತಿನಲ್ಲಿ ಮೂರನೆಯ ಸಾಧ್ಯತೆಯನ್ನೂ ಸೃಷ್ಟಿಸಬಹುದು. ‘ಹಿಂದಿಗಿಂತ, ಮುಖ್ಯವಾಗಿ, 2008ರ ಮುಂಬೈ ದಾಳಿಯ ಸಂದರ್ಭಕ್ಕಿಂತ ಈಗ ನೀವು ಹೆಚ್ಚು ಅಸುರಕ್ಷಿತರೇ?’ ಎಂಬ ಪ್ರಶ್ನೆಯನ್ನು ಹಾಕಲಾಗುತ್ತದೆ. ಒಬ್ಬ ಸಾಂಪ್ರದಾಯಿಕ ಅಥವಾ ಸಹಜ ವೃತ್ತಿ ರಾಜಕಾರಣಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಾನೆ. ಆದರೆ ‘ಜಾಣ’ನಾದವನು ತನ್ನ ವಿರೋಧಿಗಳ ವಿಷಯ ಇಟ್ಟುಕೊಂಡು ವೋಟು ಬೇಡುತ್ತಾನೆ. ಈ ವಿಷಯದಲ್ಲಿ ಮೋದಿ ‘ಜಾಣ’ನಲ್ಲದೇ ಇನ್ನೇನು?

ನೀವು ವಿವರ ತೆಗೆದು ವಾದಿಸಬಹುದು, ಆದರೆ ಈ ಐದು ವರ್ಷಗಳಲ್ಲಿ ಕಾಶ್ಮೀರ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ದೊಡ್ಡ ಭಯೋತ್ಪಾದನಾ ಕೃತ್ಯ ನಡೆದಿಲ್ಲ ಎಂಬುದನ್ನು ಈ ಸರ್ಕಾರ ಮುಂದೆ ಮಾಡುತ್ತದೆ. ಅಂತರಾಷ್ಟ್ರೀಯ ಗಡಿಯಿಂದ ಹಲವು ಮೈಲುಗಳ ದೂರದ ಗುರುದಾಸಪುರ ಮತ್ತು ಪಠಾನಕೋಟ್‍ನಲ್ಲಿ ಎರಡು ವಿಫಲ ದಾಳಿ ನಡೆದದ್ದು ಬಿಟ್ಟರೆ ಬೇರೆಲ್ಲೂ ಅಂತಹ ದಾಳಿ ನಡೆದಿಲ್ಲ. ಯುಪಿಎ ಅವಧಿಯ ದಿನಗಳು ತುಂಬ ಸುರಕ್ಷಿತವಾಗಿದ್ದವು ಎಂಬುದೂ ಸತ್ಯವಲ್ಲ. ಕಾಶ್ಮೀರ ಆಗಲೂ ಸಾಪೇಕ್ಷವಾಗಿ ಶಾಂತವಾಗಿರಲಿಲ್ಲ. ಕಾಂಗ್ರೆಸ್ ಕೂಡ ಇದನ್ನು ಮರೆತಿತ್ತು.

ಮೋದಿ ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ತನ್ನ ಸಾಧನೆ ಇಟ್ಟುಕೊಂಡು ತಮ್ಮ ಪ್ರಚಾರವನ್ನು ಕಟ್ಟುತ್ತಿಲ್ಲ. ಆದರೆ ಅವರು ಇನ್ನಷ್ಟು ಅಭದ್ರತೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಜೈಷ್, ಲಷ್ಕರ್, ಐಎಸ್‍ಐಗಳೆಂಬ ಗುಮ್ಮಗಳನ್ನು ಅವರು ಮುಂದು ಮಾಡಿ ಮತ ಪಡೆಯಲು ಹೊರಟಿದ್ದಾರೆ.

2014ರ ಚುನಾವಣೆಯನ್ನು ಮೋದಿ ಭರವಸೆಗಳ ಆಧಾರದಲ್ಲಿ ಗೆದ್ದರು. 5 ವರ್ಷಗಳ ನಂತರ ಅವರು ಪಾಕಿಸ್ತಾನದ ಕಪ್ಪು ಭಯೋತ್ಪಾದನೆಯ ಭೀತಿಯ ಆಧಾರದಲ್ಲಿ ಮತ್ತೊಂದು ಅವಧಿಗೆ ತಮ್ಮನ್ನು ಆಯ್ಕೆ ಮಾಡಲು ಕೇಳುತ್ತಿದ್ದಾರೆ. ಅದಕ್ಕೇ ಆತ ಮತ್ತೆ ಮತ್ತೆ ಹೇಳುತ್ತಿರುವುದು: ಕೇವಲ ಭಯೋತ್ಪಾದಕರು ಮತ್ತು ಪಾಕಿಸ್ತಾನಿಯರು ತಮ್ಮನ್ನು ಸೋಲಿಸಲು ಬಯಸಿದ್ದಾರೆಂದು! ಅದೇ ಉಸಿರಿನಲ್ಲಿ ಅವರು, ಸೇನಾ ಕಾರ್ಯಾಚರಣೆಗಳ ಯಶಸ್ಸಿನ ಬಗ್ಗೆ ಕೇಳಿದ ವಿದೋಧ ಪಕ್ಷಗಳನ್ನು ಮೂದಲಿಸುತ್ತ, ಸೇನೆಯ ಮನೋಸ್ಥೈರ್ಯವನ್ನು ಕುಂದಿಸುತ್ತಿದ್ದಾರೆ ಎಂದೂ ಅಪಾದಿಸುತ್ತಾರೆ.

2014ರ ಆಶಾವಾದ ಮತ್ತು 2019ರ ಭೀತಿ- ಈ ಶಿಫ್ಟ್‍ ಗೆ ಕಾರಣವೇನು?

ಮೋದಿ-ಶಾ ಜೋಡಿ ಯಾವುದನ್ನು ನಾವು ‘ಪುಟ್ಟಾಪೂರಾ ಪಾಲಿಟಿಕ್ಸ್’ ( ಕಂಪ್ಲೀಟ್ ಪಾಲಿಟಿಕ್ಸ್) ಎನ್ನುತ್ತವೆಯೋ ಅದರಲ್ಲಿ ನಂಬಿಕೆ ಇಟ್ಟಿದೆ. ಅಂದರೆ ಇದು ರಾಜಕಾರಣವೇ ಮನರಂಜನೆ, ಹುಚ್ಚು ಮತ್ತು 24 ಗಂಟೆಗಳ ಗೀಳು… ಹೀಗಾದಾಗ ರಾಜಕೀಯದ ಹೊರತಾಗಿ ಇಲ್ಲಿ ಬೇರೆ ಯಾವುದಕ್ಕೂ ಜಾಗವೇ ಇಲ್ಲ. ನಿಮ್ಮ ಸಾಧನೆಗಳ ಆಧಾರದಲ್ಲಿ ಹೋದರೆ ಅದು ಅಪಾಯಕಾರಿ. ಏಕೆಂದರೆ, ನೀವು ಮಾಡುವ ಕ್ಲೇಮುಗಳನ್ನು ಜನ ತಮ್ಮ ರಿಯಾಲಿಟಿಯೊಂದಿಗೆ ಇಟ್ಟು ಚೆಕ್ ಮಾಡುತ್ತಾರೆ. ನೀವು ಉದ್ಯೋಗ ಕುರಿತ ಎಲ್ಲ ದತ್ತಾಂಶಗಳನ್ನು ಮುಚ್ಚಿಡಬಹುದು, ಜಿಡಿಪಿ ಲೆಕ್ಕವನ್ನು ಫಿಕ್ಸ್ ಮಾಡಬಹುದು. ಆದರೆ, ನಿಮಗೆ ಹೇಗೆ ಅನಿಸುತ್ತಿದೆ, ಸೌಖ್ಯವೇ ಅಂತ ಕೇಳಿದ ಕೂಡಲೇ ಜನರು ರಿಯಾಲಿಟಿ ಚೆಕ್‍ಗೆ ಇಳಿಯುತ್ತಾರೆ. ನಿಮ್ಮ ಉಜ್ವಲಾ, ಮುದ್ರಾ, ರೈತರಿಗೆ ನೇರ ಹಣ, ಶೌಚಾಲಯ ಯೋಜನೆಗಳ ಫಲಾನುಭವಿಗಳಿರಬಹುದು. ಆದರೆ ಇದೆಲ್ಲದರಿಂದ ಹೊರಗುಳಿದ ಒಂದು ದೊಡ್ಡ ಜನಸಮೂಹವೇ ಇರುತ್ತದೆ. ಇದು ಎಷ್ಟು ಅಪಾಯಕಾರಿ ಎಂದು ತಿಳಿಯಲು, 2004ರ ಶೈನಿಂಗ್ ಇಂಡಿಯಾ ಬಗ್ಗೆ ಅದ್ವಾನಿಗೆ ಕೇಳಿ ನೋಡಿ.

ಮೋದಿಯ ಈಗಿನ ಭಾಷಣಗಳಂತೆ ಮುಂದೆಯೂ ಭಯೋತ್ಪಾದನೆ, ಪಾಕಿಸ್ತಾನ, ರಾಷ್ಟ್ರೀಯ ಸುರಕ್ಷತೆಯ ಕುರಿತಾದ ಭಾಷಣಗಳೇ ಇರುತ್ತವೆ. ಉದ್ಯೋಗ, ಅಭಿವೃದ್ಧಿ, ರೈತರ ಸಂಕಷ್ಟಗಳ ಬಗ್ಗೆ ಅವರು ಮಾತನಾಡಲ್ಲ. ತಮ್ಮನ್ನು ಡಿಫೆಂಡ್ ಮಾಡಿಕೊಳ್ಳುವ ಬದಲು, ವಿರೋಧಿಗಳ ಮೇಲೆ ಹರಿ ಹಾಯುವುದನ್ನೇ ಅವರು ಮುಂದುವರೆಸಲಿದ್ದಾರೆ.

‘ಭಯೋತ್ಪಾದನೆ’ ಶಬ್ದದ ಜೊತೆಗೊಂದು ಇಲ್ಲಿ ಉಪಶಬ್ದವೂ ಇದೆ-‘ಮುಸ್ಲಿಮರು’.  2014ರಲ್ಲಿ ಗೆದ್ದ ನಂತರ ಕ್ಯಾಬಿನೆಟ್ ಸೇರಿದಂತೆ ಯಾವ ಸಾಂವಿಧಾನಿಕ ಸಂಸ್ಥೆಗಳಲ್ಲೂ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲದಂತೆ ನೋಡಿಕೊಂಡರು. ದೇಶದಲ್ಲಿ ಶೇ 14ರಷ್ಟು ಇರುವ ಮುಸ್ಲಿಮರಿಗೆ ಕೇವಲ 7 ಸೀಟು ನೀಡಿ, ಶೇ. 20ರಷ್ಟಿರುವ ಉತ್ತರ ಪ್ರದೇಶದಲ್ಲಿ ಒಂದೂ ಸೀಟು ನೀಡದೇ ಭಾರಿ ದಿಗ್ವಿಜಯ ಸಾಧಿಸಿದ್ದರು. ಈ ತಂತ್ರ ಎಷ್ಟು ಯಶಸ್ವಿಯಾಗಿತ್ತು ಎಂದರೆ, ಈಗಲೂ ಕಾಂಗ್ರೆಸ್ ತನ್ನನ್ನು ಮುಸ್ಲಿಮರ  ಹಿತೈಷಿ ಎಂದು ಬಿಡುತ್ತಾರೇನೋ ಎಂಬ ಭಯದಲ್ಲಿ ಮುಸ್ಲಿಮರಿಗೆ ಟಿಕೆಟು ಕೊಡಲು ಹಿಂಜರಿಯುತ್ತಿದೆ.

ಈಗಲೂ ಅದನ್ನೇ ಮೋದಿ ಮುದುವರೆಸಿದ್ದಾರೆ. ಭಯೋತ್ಪಾದಕರು, ಪಾಕಿಸ್ತಾನಿಯರು ಮತ್ತು ಮುಸ್ಲಿಮರನ್ನು ಗುಮ್ಮನಂತೆ ತೋರಿಸುವುದು, ಭಯೋತ್ಪಾದಕರು, ಪಾಕಿಗಳು ಮತ್ತು ವಿರೋಧ ಪಕ್ಷಗಳು ತಮ್ಮನ್ನು ಸೋಲಿಸಲು ಬಯಸಿವೆ ಎಂದು ಭಾಷಣ ಮಾಡುವುದು. ಮುಸ್ಲಿಮರು ಓಟು ಹಾಕದಿದ್ದರೂ ಪರವಾಗಿಲ್ಲ, ಈ ಕಾರಣಕ್ಕಾಗಿ ಹಿಂದೂಗಳು ಧ್ರುವೀಕರಣ ಆಗುತ್ತಾರೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಇಲ್ಲಿನ ಮುಸ್ಲಿಮರ ವಿರುದ್ಧ ನೇರ ದಾಳಿ ಮಾಡಿದರೆ ವರ್ಕೌಟ್ ಆಗುವುದಿಲ್ಲ ಎಂದು ಅರಿತಿರುವ ಮೋದಿ, ಪಾಕಿಸ್ತಾನ, ಬಾಂಗ್ಲಾ ಮುಸ್ಲಿಮರನ್ನು ವೈರಿಗಳು ಎಂನಂತೆ ಚಿತ್ರಿಸುವ ತಂತ್ರಕ್ಕೆ ಶರಣಾಗಿದ್ದಾರೆ.

 (ಕೃಪೆ: ದಿ ಪ್ರಿಂಟ್)

ಅನುವಾದ: ಮಲ್ಲನಗೌಡರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...