Homeಅಂಕಣಗಳುಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

ಮೋದಿ ಬಂಡವಾಳಶಾಹಿಗಳ ಬಾಲ ಎಂಬುದಕ್ಕೆ ಇನ್ನೆಷ್ಟು ಸಾಕ್ಷ್ಯ ಬೇಕು?

- Advertisement -
- Advertisement -

| ಮಲ್ಲಿ |

ಮೋದಿಯ ಲೋಕಸಂಚಾರದ ಫಲಾನುಭವಿಗಳು: ಅಂಬಾನಿ ಮತ್ತು ಅದಾನಿ

ಮೋದಿ ವಿದೇಶ ಪ್ರವಾಸ ಕೈಗೊಂಡಾಗ ಸಾಕಷ್ಟು ಸಲ ಅನಿಲ್ ಅಂಬಾನಿ ಮತ್ತು ಗೌತಮ್ ಅದಾನಿ ಜೊತೆಗಿದ್ದು, ಭೇಟಿಯಾದ ದೇಶಗಳ ಕಂಪನಿಗಳ ಜೊತೆಗೆ  ಇವರಿಬ್ಬರ ಕಂಪನಿಗಳು ಕನಿಷ್ಠ 18 ಪ್ರಮುಖ ಡೀಲ್‍ಗಳಿಗೆ ಸಹಿ ಹಾಕಿವೆ….. ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ.

ತಮ್ಮ ಅಧಿಕಾರವಧಿಯ ಮೊದಲ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 41 ಸಲ ವಿದೇಶ ಪ್ರವಾಸ ಮಾಡಿದ್ದು, 52 ದೇಶಗಳನ್ನು ಸಂದರ್ಶಿಸಿದ್ದಾರೆ. ಈ ಪ್ರವಾಸದ ಒಟ್ಟು ಅವಧಿ 165 ದಿನಗಳು. ಇದಕ್ಕಾಗಿ ಅವರು 355 ಕೋಟಿ ರೂ ಖರ್ಚು ಮಾಡಿದ್ದು, ಅದು ತೆರೆಗೆದಾರನ ಹಣವಾಗಿದೆ. ಬಹುಪಾಲು ವಿದೇಶಿ ಭೇಟಿಗಳಲ್ಲಿ ಅವರ ಜೊತೆ ಅಂಬಾನಿ, ಅದಾನಿ ಇದ್ದು, 16 ರಾಷ್ಟ್ರಗಳಲ್ಲಿ ಇವರಿಬ್ಬರ ಕಂಪನಿಗಳು 18 ಡೀಲ್‍ಗಳಿಗೆ ಸಹಿ ಹಾಕಿವೆ. ಇದರಲ್ಲಿ ಅದಾನಿ ಕಂಪನಿಗಳು 13 ಮತ್ತು ಅನಿಲ್ ಅಂಬಾನಿಯ ಕಂಪನಿ 5 ಡೀಲ್‍ಗಳಿಗೆ ಸಹಿ ಹಾಕಿವೆ. ಇಲ್ಲಿ ಅಂತಹ ಡೀಲ್‍ಗಳ ಕೆಲವನ್ನು ಇಲ್ಲಿ ನೀಡಿದ್ದೇವೆ.

ರಕ್ಷಣೆ

ಫ್ರಾನ್ಸ್

ಮೋದಿ ಭೇಟಿ: ಏಪ್ರಿಲ್ 09-12-2015 ಮತ್ತು  ಜೂನ್ 02-03-2017 (ಅನಿಲ್ ಅಂಬಾನಿ)

ಡೀಲ್ ದಿನ: ಮಾರ್ಚ್ 28-2015

ಮೋದಿ ರಫೇಲ್ ಡೀಲ್ ಘೋಷಿಸುವ 12 ದಿನ ಮೊದಲು ಅನಿಲ್ ಅಂಬಾನಿಯ ಆಗತಾನೇ ಹುಟ್ಟಿದ ಕಂಪನಿಯೊಂದು ಡಸಾಲ್ಟ್ ಕಂಪನಿಯೊಂದಿಗೆ ರಫೇಲ್ ಡೀಲ್ ಭಾಗವಾಗಿ ಒಪ್ಪಂದ ಮಾಡಿಕೊಂಡಿತು. ಅನುಭವಿ ಸರ್ಕಾರಿ ಎಚ್‍ಎಎಲ್ ಕಂಪನಿಯನ್ನು ತಿರಸ್ಕರಿಸಿ ಅಂಬಾನಿಯ ಅನನನುಭವಿ ಕಂಪನಿಯನ್ನು ರಿಲೆಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಪ್ರಧಾನಿ ಮೋದಿಯೇ ಕಾರಣ ಎಂಬ ಆರೋಪವಿದೆ. ಎರಡು ವರ್ಷಗಳಲ್ಲಿ ರಫೇಲ್ ವಿಮಾನಗಳು ಭಾರತಕ್ಕೆ ತಲುಪಬೇಕಿತ್ತು. ಇನ್ನೂ ಒಂದೂ ವಾಯುಸೇನೆಗೆ ದೊರೆತಿಲ್ಲ.

ಸ್ವೀಡನ್

ಡೀಲ್ ದಿನ: ಮಾರ್ಚ್ 22-2015 (ಅಂಬಾನಿ)

ಸ್ವೀಡನ್ ಪ್ರಧಾನಿಯ ಭಾರತ ಭೇಟಿ: ಫೆಬ್ರುವರಿ 13, 2016

ಡೀಲ್ ದಿನ : ಸೆಪ್ಟೆಂಬರ್ 1, 2017 (ಅದಾನಿ)

ಪ್ರಧಾನಿ ಭೇಟಿ: ಏಪ್ರಿಲ್ 16-18,  2018

ಇಲ್ಲಿ ಅಂಬಾನಿಯ ಕಂಪನಿ ಸ್ವೀಡನ್ನಿನ SAAB ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಭಾರತೀಯ ನೌಕಾದಳಕ್ಕೆ ಉನಮ್ಯಾನಡ್ ಏರಿಯಲ್ ವೆಹಿಕಲ್ (ಯುಎವಿ) ಪೂರೈಸುವ ಜವಾಬ್ದಾರಿ ಹೊರುತ್ತದೆ. ಪ್ರತಿ ಸಾಧನದ ಬೆಲೆ 1 ಸಾವಿರ ಕೋಟಿ.

ಅದೇ ಸ್ವೀಡನ್ ಕಂಪನಿಯೊಂದಿಗೆ ಸಿಂಗಲ್ ಎಂಜಿನ್ ಏರ್‍ಕ್ರಾಫ್ಟ್ ತಯಾರಿಸುವ 60 ಸಾವಿರ ಕೋಟಿ ಮೊತ್ತದ ಡೀಲ್‍ಗೆ ಅದಾನಿ ಸಹಿ ಮಾಡಿದ್ದಾರೆ.

ಹೀಗೆ ಪ್ರಧಾನಿ ನೀಡಿದ 16 ದೇಶಗಳ  ಕಂಪನಿಗಳ ಜೊತೆಗೆ ಅಂಬಾನಿ ಮತ್ತು ಅದಾನಿಯ ಕಂಪನಿಗಳು ಡೀಲ್ ಮಾಡಿಕೊಳ್ಳುತ್ತವೆ. ಇಸ್ರೇಲ್, ರಷ್ಯಾ, ಅಮೆರಿಕ, ಜಪಾನ್, ಪಾಕಿಸ್ತಾನ್, ಆಸ್ಟ್ರೇಲಿಯಾ, ಮೊಜಾಂಬಿಕ್, ಇರಾನ್, ಒಮನ್, ಬಾಂಗ್ಲಾ ದೇಶಗಳಿಗೆ ಪ್ರಧಾನಿ ಭೇಟಿ ನೀಡಿದಾಗ ಅವರ ಜತೆ ಅಂಬಾನಿ ಅಥವಾ ಅದಾನಿ ಅಥವಾ ಇಬ್ಬರೂ ಇರುತ್ತಿದ್ದರು.

ಕೆಲವು ಡೀಲ್‍ಗಳು ಪ್ರಧಾನಿ ಭೇಟಿ ಸಂದರ್ಭದಲ್ಲೇ ಕುದುರಿದರೆ, ಕೆಲವು ಭೇಟಿಗೂ ಮೊದಲು, ಇನ್ನು ಕೆಲವು ಭೇಟಿಯ ನಂತರ ಕುದುರಿವೆ. ವಿಚಿತ್ರ ಎಂದರೆ ಡಿಫೆನ್ಸ್ ಸಲಕರಣೆಗಳಲ್ಲಿ ಯಾವುದೇ ಅನುಭವ ಇಲ್ಲದ ಅಂಬಾನಿ, ಅದಾನಿ ಕಂಪನಿಗಳಿಗೆ ಪ್ರಧಾನಿಯ ಪ್ರಭಾವದಿಂದ ಡಿಫೆನ್ಸ್ ಡೀಲ್‍ಗಳು ಸಿಕ್ಕಿವೆ!

 ಪಾಕ್ ಜತೆಗೂ ಚಕ್ಕಂದ!

ಮಾತೆತ್ತಿದ್ದರೆ ಪಾಕ್ ವಿರುದ್ಧ ಹರಿಹಾಯುವ ಮೋದಿ ಮತ್ತು ಅವರ ಭಕ್ತರಿಗೆ ಇದೇ ಅದಾನಿ ಪಾಕ್ ಜೊತೆಗೆ ಹಲವು ವಾಣಿಜ್ಯ ವ್ಯಹಾರ ಹೊಂದಿದ್ದಾರೆ. ಪ್ರಧಾನಿ ಏಕಾಏಕಿ 2015 ಡಿಸೆಂಬರ್ 25ರಂದು ಪಾಕ್‍ಗೆ ಭೇಟಿ ನೀಡಿದಾಗ ಅವರ ಜೊತೆ ಅದಾನಿಯೂ ಇದ್ದ! ಅದರ ಹಿಂದಿನ ವರ್ಷವೇ ಅದಾನಿ 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಡೀಲ್‍ಗೆ ಸಹಿ ಹಾಕಿದ್ದರು. ಎರಡು ದೇಶಗಳ ನಡುವಿನ ತಿಕ್ಕಾಟದ ಕಾರಣಕ್ಕೆ ಆ ಯೋಜನೆ ನೆನೆಗುದಿಗೆ ಬಿದ್ದಿದೆ.

ಮೋದಿ ಗುಜರಾತಿನ ಮುಖ್ಯಮಂತ್ರಿ ಆದಾಗಿನಿಂದ ಅದಾನಿಯ ಕಂಪನಿ ಕ್ರಮೇಣ ಮುನ್ನೆಲೆಗೆ ಬಂದಿದೆ. ಪ್ರಧಾನಿಯಾದ ಮೇಲಂತೂ ಅದಾನಿಯ ಆದಾಯ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಇನ್ನು ಸಾಲದ ಸುಳಿಯಲ್ಲಿದ್ದ ಅನಿಲ್ ಅಂಬಾನಿ ಚೇತರಿಸಿಕೊಳ್ಳಲೂ ಮೋದಿ ನೆರವಾಗಿದ್ದಾರೆ.

(ಆಧಾರ: ನ್ಯೂಸ್‍ಕ್ಲಿಕ್)

ಅನುವಾದ: ಮಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...