Homeಕಥೆಹೂಲಿಯೋ ಕೋರ್ಟಾಜ್ಹಾರ್‌ನ ನಾಲ್ಕು ಅತಿ ಸಣ್ಣ ಕಥೆಗಳು

ಹೂಲಿಯೋ ಕೋರ್ಟಾಜ್ಹಾರ್‌ನ ನಾಲ್ಕು ಅತಿ ಸಣ್ಣ ಕಥೆಗಳು

- Advertisement -
- Advertisement -

1. ದಿನಪತ್ರಿಕೆಯ ದಿನಚರಿ

ವ್ಯಕ್ತಿಯೊಬ್ಬ ದಿನಪತ್ರಿಕೆಯನ್ನು ಕೊಂಡುಕೊಂಡ ಮೇಲೆ ಅದನ್ನು ತನ್ನ ಕಂಕುಳಲ್ಲಿ ಸಿಕ್ಕಿಸಿಕೊಂಡು, ಬಸ್ ಏರುತ್ತಾನೆ. ಆ ದಿನಪತ್ರಿಕೆ ಕಂಕುಳಲ್ಲಿ ಇನ್ನೂ ಹಾಗೆ ಇರುವಾಗಲೇ, ಅರ್ಧ ಗಂಟೆಯ ನಂತರ ಆ ವ್ಯಕ್ತಿ ಬಸ್‌ನಿಂದ ಇಳಿಯುತ್ತಾನೆ.

ಪ್ಲಾಜ್ಹಾವೊಂದರ ಬೆಂಚ್ ಮೇಲೆ ಆ ದಿನಪತ್ರಿಕೆಯನ್ನು ಎಸೆದಾಗ ಅದು ಅದೇ ದಿನಪತ್ರಿಕೆಯಾಗಿ ಉಳಿಯದೆ, ಮುದ್ರಣಗೊಂಡಿರುವ ಹಾಳೆಗಳ ರಾಶಿಯಾಗುತ್ತದೆ.

ಅದು ಬೆಂಚಿನ ಮೇಲೆ ತಾನಾಗಿಯೇ ಕೇವಲ ಒಂದು ನಿಮಿಷ ಬಿದ್ದುಕೊಂಡಿದೆಯಷ್ಟೇ, ಯುವ ಬಾಲಕನೊಬ್ಬ ಅದನ್ನು ಕಂಡು, ಓದಿದಾಗ ಮುದ್ರಿತ ಹಾಳೆಗಳು ರಾಶಿ ಮತ್ತೆ ದಿನಪತ್ರಿಕೆಯಾಗಿ ಬದಲಾಗುತ್ತದೆ, ಮತ್ತೆ ಆತ ಅಲ್ಲೇ ಬಿಟ್ಟುಹೋದಮೇಲೆ ಅದು ಮುದ್ರಣಗೊಂಡ ಹಾಳೆಗಳ ರಾಶಿಯಾಗುತ್ತದೆ.

ಏಕಾಂಗಿಯಾಗಿ ಅದು ಬೆಂಚಿನ ಮೇಲೆ ಒಂದು ನಿಮಿಷ ಕೂತಿದೆಯಷ್ಟೇ, ಮುದುಕಿಯೊಬ್ಬಳು ಅದನ್ನು ಕಂಡು ಓದಿದಾಗ ಅದು ಮತ್ತೆ ಮುದ್ರಿತ ಹಾಳೆಗಳಿಂದ ದಿನಪತ್ರಿಕೆಯಾಗಿ ಬದಲಾಗುತ್ತದೆ, ಅಲ್ಲೇ ಬಿಟ್ಟು ಎದ್ದ ನಂತರ ಮುದ್ರಣಗೊಂಡ ಹಾಳೆಗಳ ರಾಶಿಯಾಗುತ್ತದೆ. ಆದರೆ ಆ ಮುದುಕಿ ಅದನ್ನು ಮನೆಗೆ ಎತ್ತುಕೊಂಡು ಹೊರಡುತ್ತಾಳೆ, ಹಾಗೆ ಮಾಡುವಾಗ ಮಾರ್ಗ ಮಧ್ಯದಲ್ಲಿ ಒಂದು ಕೆಜಿ ಬೀಟ್‌ರೂಟ್‌ಗಳನ್ನು ಕಟ್ಟಿಕೊಳ್ಳಲು ಅದನ್ನು ಬಳಸುತ್ತಾಳೆ. ಇಷ್ಟೆಲ್ಲಾ ರೂಪಾಂತರಗಳ ನಂತರವೂ ಆ ದಿನಪತ್ರಿಕೆಯ ಯೋಗ್ಯ ಉಪಯೋಗವಿಷ್ಟೇ.

2. ಪ್ರಗತಿ ಮತ್ತು ಪ್ರತಿಗಾಮಿತನ

ಜೇನುನೊಣಗಳು ತೂರಿಹೋಗಬಹುದಾದ ಗಾಜಿನ ಬಗೆಯನ್ನು ಅವರು ಅನ್ವೇಷಿಸಿದರು. ಜೇನುನೊಣ ಬಂದು ಗಾಜನ್ನು ತಲೆಯಿಂದ ನೂಕಿದರೆ ಮತ್ತೊಂದು ಬದಿಯಿಂದ ಹೊರಹೊಮ್ಮುತ್ತಿತ್ತು. ಇದು ಜೇನುನೊಣದ ಕಡೆಯಿಂದ ಅತೀವ ಸಂತಸಕ್ಕೆ ಕಾರಣವಾಗಿತ್ತು.

ಆ ಗಾಜಿನಲ್ಲಿ ಯಾವ ಗಿಮಿಕ್ ಬಳಸಲಾಗಿತ್ತು ಅಥವಾ ಅದು ಫೈಬ್ರಾಯ್ಡ್ ಆಗಿದ್ದರಿಂದ ಆ ಫೈಬರ್‌ಗಳಲ್ಲಿ ಫ್ಲೆಕ್ಸಿಬಲಿಟಿ ಏನಿತ್ತು ಎಂದು ತಿಳಿಯದೆ ಇದ್ದರಿಂದ, ಒಳಹೋದ ಜೇನುನೊಣ ಹೊರಬರಲಾರದು ಅಥವಾ ಹೊರಹೋಗಿದ್ದು ಒಳಬರಲಾರದ್ದು ಎಂಬುದನ್ನು ಪತ್ತೆಹಚ್ಚಿನ ಹಂಗೇರಿಯಾದ ವಿಜ್ಞಾನಿಯೊಬ್ಬರಿಂದ ಎಲ್ಲವೂ ಸರ್ವನಾಶವಾಯಿತು. ಆ ಕೂಡಲೇ, ಒಳಗೆ ಸಕ್ಕರೆ ಅಚ್ಚು ಇಟ್ಟು ಜೇನುನೊಣಗಳನ್ನು ಹಿಡಿಯುವ ಬೋನನ್ನು ಕಂಡುಹಿಡಿದರು ಮತ್ತು ಅದರಿಂದ ಆ ಜೇನುನೊಣಗಳು ನರಳಿ ಸತ್ತವು. ಇನ್ನೂ ಉತ್ತಮ ಅದೃಷ್ಟ ಇರಬೇಕಿದ್ದ ಈ ಪ್ರಾಣಿಗಳ ಜೊತೆಗೆ ಮೂಡಬಹುದಿದ್ದ ಸಂಭವನೀಯ ಭ್ರಾತೃತ್ವ ಕೊನೆಯಾದದ್ದು ಹೀಗೆ.

3. ಒಂದು ನಿಜವಾದ ಕಥೆ

ಒಬ್ಬ ಧೀಮಂತ ವ್ಯಕ್ತಿ ತನ್ನ ಕನ್ನಡಕವನ್ನು ನೆಲದ ಮೇಲೆ ಬೀಳಿಸಿದ್ದರಿಂದ, ಅದು ನೆಲದ ಟೈಲ್ಸ್‌ಗೆ ಬಡಿದಾಗ, ಒಂದು ಭಯಾನಕ ಸದ್ದನ್ನು ಮೂಡಿಸಿತು. ಅವನ್ನು ಎತ್ತಿಕೊಳ್ಳಲು ಆ ಧೀಮಂತ ವ್ಯಕ್ತಿ ಕೆಳಕ್ಕೆ ಬಗ್ಗಿದಾಗ, ಆ ಗಾಜು ಬಹಳ ದುಬಾರಿಯದ್ದಾದ್ದರಿಂದ, ಬಹಳ ದುಗುಡದಿಂದಿದ್ದ, ಆದರೆ ಯಾವುದೋ ಅದ್ಭುತ ಪವಾಡದಿಂದ ಅವುಗಳನ್ನು ತಾನು ಒಡೆದುಹಾಕಿಲ್ಲ ಎಂಬುದನ್ನು ಅತ್ಯಾಶ್ಚರ್ಯದಿಂದ ಕಂಡುಕೊಳ್ಳುತ್ತಾನೆ.

ಈಗ ಈ ಧೀಮಂತ ವ್ಯಕ್ತಿ ತನ್ನಷ್ಟಕ್ಕೇ ತುಂಬುಮನಸ್ಸಿನ ಧನ್ಯವಾದ ಹೇಳಿಕೊಂಡು ಮತ್ತು ಈಗ ನಡೆದಿರುವುದು ಒಂದು ಸ್ನೇಹಪೂರ್ವಕ ಎಚ್ಚರಿಕೆ ಎಂಬುದನ್ನು ಅರ್ಥಮಾಡಿಕೊಂಡು, ಕನ್ನಡಕದ ಅಂಗಡಿಗೆ ನಡೆದು, ಕನ್ನಡಕ್ಕಾಗಿ ಎರಡು ಹೊದಿಕೆಯ ಸಂರಕ್ಷಣೆ ಇರುವ ಚರ್ಮದ ಚೀಲವನ್ನು ಕೊಂಡು, ಮುನ್ನೆಚ್ಚರಿಕೆ ವಹಿಸುವುದು ಎಲ್ಲದ್ದಕ್ಕಿಂತ ಮುಖ್ಯವಾದದ್ದು ಎಂಬಿತ್ಯಾದಿಯಾಗಿ ಅಂದುಕೊಳ್ಳುತ್ತಾನೆ. ಒಂದು ಗಂಟೆಯ ನಂತರ ಆ ಚರ್ಮದ ಹೊದಿಕೆ ಇದ್ದ ಚೀಲ ಕೆಳಗೆ ಬೀಳುತ್ತದೆ, ಯಾವುದೇ ಆತಂಕವಿಲ್ಲದೆ ಅದನ್ನು ಎತ್ತಿಕೊಳ್ಳಲು ಬಗ್ಗಿದಾಗ, ಗಾಜು ಚೂರುಚೂರಾಗಿರುವುದನ್ನು ಕಂಡುಕೊಳ್ಳುತ್ತಾನೆ. ಸೃಷ್ಟಿಕರ್ತನ ವಿನ್ಯಾಸ ತರ್ಕಕ್ಕೆ ನಿಲುಕದ್ದು ಎಂದೂ ಮತ್ತು ವಾಸ್ತವದಲ್ಲಿ ಪವಾಡ ಈ ಕ್ಷಣವಷ್ಟೇ ನಡೆದಿದೆ ಎಂದು ಅರ್ಥಮಾಡಿಕೊಳ್ಳಲು ಈ ಧೀಮಂತ ವ್ಯಕ್ತಿಗೆ ತುಸು ಸಮಯ ಹಿಡಿಯುತ್ತದೆ.

4. ಕಚೇರಿಯಲ್ಲಿ

ಕೊನೆಯ ಕಾಮಾವನ್ನೂ ಬಿಡದಂತೆ ತನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳುವ ವ್ಯಕ್ತಿಗಳಲ್ಲಿ ನನ್ನ ನಂಬಿಕಸ್ಥ ವೈಯಕ್ತಿಕ ಕಾರ್ಯದರ್ಶಿಯೂ ಒಬ್ಬಳು. ಸರಣಿ ಆದೇಶಗಳನ್ನು ದಾಟಿ, ಬೇರೆಯವರ ಸ್ಥಾನಗಳನ್ನು ಅತಿಕ್ರಮಿಸಿ, ಹಾಲಿನ ಗ್ಲಾಸಿನಲ್ಲಿ ಬಿದ್ದಿರುವ ಒಂದು ಸಣ್ಣ ಕೂದಲನ್ನು ತೆಗೆಯಲು ಐದೂ ಬೆರಳನ್ನು ಅದ್ದುವುದೇನೆಂದರೆ ನಿಮಗೆ ತಿಳಿದಿರಬೇಕು.

ನನ್ನ ಕಚೇರಿಯಲ್ಲಿ ನನ್ನ ನಂಬಿಕಸ್ಥ ಕಾರ್ಯದರ್ಶಿ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ ಅಥವಾ ನೋಡಿಕೊಳ್ಳಲು ಇಚ್ಛಿಸುತ್ತಾಳೆ. ನಮ್ಮನಮ್ಮ ಕಾರ್ಯವ್ಯಾಪ್ತಿಯ ಬಗ್ಗೆ ಸ್ನೇಹಪೂರ್ವಕ ಜಗಳಗಳನ್ನು ಮಾಡುತ್ತಾ, ನಾವು ದಿನವನ್ನ ಖುಷಿಯಿಂದ ಕಳೆಯುತ್ತೇವೆ, ನಾವುಗಳು ನಗುನಗುತ್ತಾ ಪರಸ್ಪರ ನಿರ್ಲಕ್ಷ್ಯ ಮಾಡಿಕೊಳ್ಳುತ್ತೇವೆ, ನಂತರ ಒಬ್ಬರ ಕೆಲಸದಲ್ಲಿ ಮತ್ತೊಬ್ಬರು ಮೂಗುತೂರಿಸುವುದಿದೆ, ಒಬ್ಬರಿಗೊಬ್ಬರು ರೇಗಿಸುವುದಿರುತ್ತದೆ, ಅದರಿಂದ ಅವಾಕ್ಕಾಗುವುದಿದೆ, ಆಕ್ರಮಿಸಿಕೊಳ್ಳುವುದು ಮತ್ತು ಅದರಿಂದ ಬಿಡುಗಡೆಗೊಳಿಸುವುದೂ ಕೂಡ. ಆದರೆ ಆಕೆಗೆ ಎಲ್ಲದ್ದಕ್ಕೂ ಸಮಯವಿದೆ, ಕಚೇರಿಯ ಮೇಲೆ ಸ್ವಾಮ್ಯ ಸಾಧಿಸುವುದಕ್ಕೆ ಪ್ರಯತ್ನಿಸುವದಷ್ಟೇ ಅಲ್ಲದೆ, ಚಾಕಚಕ್ಯತೆಯಿಂದ, ತನ್ನೆಲ್ಲಾ ಕೆಲಸಗಳನ್ನು ಪೂರೈಸುತ್ತಾಳೆ. ಉದಾಹರಣೆಗೆ ಪದಗಳನ್ನೇ ತೆಗೆದುಕೊಳ್ಳಿ, ಅವುಗಳನ್ನು ಉತ್ತಮಪಡಿಸುವುದು, ಕೈಬಿಡುವುದು, ಒಂದು ಕ್ರಮದಲ್ಲಿ ಜೋಡಿಸುವುದು, ಅವುಗಳನ್ನು ಚೆನ್ನಾಗಿ ನೋಡಿಕೊಂಡು ದಿನನಿತ್ಯದ ಕೆಲಗಳಿಗೆ ಸಿದ್ಧಪಡಿಸುವುದು, ಇವುಗಳನ್ನು ಮಾಡದ ದಿನವೇ ಇಲ್ಲ.

ಯಾವುದೋ ಒಂದು ಕಳಪೆ ವಿಶೇಷಣ ನನ್ನ ಬಾಯಿಂದ ಜಾರಿತು ಎಂದರೆ – ಅವೆಲ್ಲಾ ನನ್ನ ಕಾರ್ಯದರ್ಶಿಯ ಪರಿಧಿಯಾಚೆಗೇ ನಡೆಯುವುದು, ಮತ್ತು ಒಂದು ಮಟ್ಟದ ನಿರ್ದಿಷ್ಟತೆಯಲ್ಲಿ ಹೇಳುವುದಾದರೆ ನನ್ನ ಪರಿಧಿಯಾಚೆಗೇ – ಏಕೆಂದರೆ ಆಕೆ ಸದಾ ತನ್ನ ಪೆನ್ಸಿಲ್ ಜೊತೆಗೆ ಸಿದ್ಧರಿರುತ್ತಾಳೆ, ಆ ವಿಶೇಷಣವನ್ನು ಹಿಡಿದು ಕೊಲ್ಲುವುದಕ್ಕೆ. ಕೆಟ್ಟ ಚಟ ಅಥವಾ ಉದಾಸೀನದಿಂದಾಗಿ, ಆ ಪದ ಹೇಗೋ ಉಳಿದ ವಾಕ್ಯದ ಜೊತೆ ಕೂಡಿಕೊಂಡು ಬದುಕುವುದಕ್ಕೆ ಆಕೆ ಎಂದಿಗೂ ಬಿಡುವುದಿಲ್ಲ. ಆಕೆಯನ್ನು ತನ್ನಷ್ಟಕ್ಕೆ ಬಿಟ್ಟರೆ, ಆ ಕ್ಷಣದಲ್ಲಿ ಆಕೆಯ ಪಾಡಿಗೆ ಬಿಟ್ಟುಬಿಟ್ಟರೆ, ಹಾಳೆಗಳನ್ನು ಕೋಪದಲ್ಲಿ ಮುದುರಿ ಕಸದ ಡಬ್ಬಿಗೆ ಬಿಸಾಕುತ್ತಾಳೆ. ಅವಳದ್ದು ಎಷ್ಟು ದೃಢಮನಸ್ಸು ಎಂದರೆ, ನಾನು ವ್ಯವಸ್ಥಿತವಾದ ಬದುಕು ಬದುಕುತ್ತಿದ್ದೇನೆ ಮತ್ತು ಯಾವುದೇ ಮುನ್ಸೂಚನೆಯಿಲ್ಲದ ನಡೆ, ಆಕೆಯನ್ನು ಎದ್ದುಕೂರುವಂತೆ ಮಾಡಿ, ಎಲ್ಲಾ ಕಿವಿ, ಬಾಲ, ಮತ್ತು ಮೂಗು ನಿಮಿರುವಂತೆ ಮಾಡಿ, ಗಾಳಿಯಲ್ಲಿ ಕುರಿಯ ಕೊರಳಿನ ಗಂಟೆ ಅಲ್ಲಾಡುವಂತೆ ಮಾಡಿಬಿಡುತ್ತದೆ.

ನಾನು ಕೆಲವೊಮ್ಮೆ ಅಸತ್ಯದಿಂದ ನಡೆದುಕೊಳ್ಳಬೇಕಾಗುತ್ತದೆ, ಮತ್ತು ನಾನು ವರದಿಯೊಂದನ್ನು ಸಂಪಾದಿಸುತ್ತಿರುವ ನೆಪದಲ್ಲಿ, ಅವುಗಳ ತುಂಟಾಟದಿಂದ ಮತ್ತು ಅವುಗಳ ನೆಗೆತದಿಂದ ಮತ್ತು ಅವುಗಳ ಕೋಪಪೀಡಿತ ಜಗಳದಿಂದ ನನ್ನನ್ನು ಸಂತಸಪಡಿಸುವ ಪದಗಳನ್ನು, ಕಂದು ಮತ್ತು ಹಸಿರು ಬಣ್ಣದ ಕೆಲವು ಹಾಳೆಗಳಲ್ಲಿ ತುಂಬಬೇಕಾಗುತ್ತದೆ. ನನ್ನ ನಂಬಿಕಸ್ಥ ಕಾರ್ಯದರ್ಶಿ, ಅದರ ಮೇಲೆ ಎರಗಲು ಸಿದ್ಧಳಿದ್ದರೂ, ಬಹುತೇಕ ವಿಚಲಿತಳಾಗಿರುವ ಕಾರಣಕ್ಕೆ, ಕಚೇರಿಯನ್ನು ಒಪ್ಪಓರಣ ಮಾಡುತ್ತಿರುತ್ತಾಳೆ. ಉಲ್ಲಾಸದಾಯಕವಾಗಿ ಒಂದು ಪದ್ಯ ಮೂಡುತ್ತಿರುವ ಮಧ್ಯದಲ್ಲಿ, ತನಗೆ ಒಪ್ಪಿಗೆಯಿಲ್ಲ ಎಂಬಂತೆ ಉಗ್ರವಾಗಿ ಕಿರುಚುವುದು ನನಗೆ ಕೇಳಿಸತ್ತೆ, ಆಗ ನಿಷೇಧಿತ ಪದಗಳಗಾಗಿ ನನ್ನ ಪೆನ್ಸಿಲ್ ನಾಗಾಲೋಟದಿಂದ ಓಡುತ್ತೆ, ಆಕೆ ಅವುಗಳನ್ನು ಅಷ್ಟೇ ನಿಷ್ಠೆಯಿಂದ ಅಳಿಸುತ್ತಾಳೆ, ಅಸ್ತವ್ಯಸ್ತಿವಿರುವುವನ್ನು ವ್ಯವಸ್ಥಿತಗೊಳಿಸುತ್ತಾಳೆ, ಕತ್ತರಿಸುತ್ತಾಳೆ, ಅದನ್ನು ಸ್ವಚ್ಛಗೊಳಿಸುತ್ತಾಳೆ, ಅದನ್ನು ಕಾಂತಿಯುತಗೊಳಿಸುತ್ತಾಳೆ, ಆದರೆ ಈ ದುಗುಡ, ನಾಲಿಗೆ ಮೇಲಿನ ಈ ವಿಶ್ವಾಸಘಾತುಕತನದ ರುಚಿ, ತನ್ನ ಕಾರ್ಯದರ್ಶಿಯನ್ನು ಎದುರಿಸುವ ಬಾಸ್‌ನ ಮುಖಚರ್ಯೆ ಹೊರತುಪಡಿಸಿ, ಇನ್ನು ಉಳಿದುಕೊಂಡಿದ್ದು ಬಹುಶಹ ಚೆನ್ನಾಗಿರಬಹುದು.

(ಕನ್ನಡಕ್ಕೆ): ಗುರುಪ್ರಸಾದ್ ಡಿ ಎನ್

ಹೂಲಿಯೋ ಕೋರ್ಟಾಜಾರ್

ಹೂಲಿಯೋ ಕೋರ್ಟಾಜಾರ್
ಖ್ಯಾತ ಸ್ಪಾನಿಶ್ ಬರಹಗಾರ ಮತ್ತು ಕವಿ. ’ಹಾಪ್‌ಸ್ಕಾಚ್’, ’ಬ್ಲೋ ಅಪ್ ಅಂಡ್ ಅದರ್ ಸ್ಟೋರೀಸ್’, ’ದ ವಿನ್ನರ್ಸ್’, ’ಎಂಡ್ ಆಫ್ ಗೇಮ್’ ಕೋರ್ಟಾಜಾರ್‌ನ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆಗಳನ್ನು ಅವರ ಅತಿ ಸಣ್ಣ ಕಥೆಗಳ ಇಂಗ್ಲಿಷ್ ಅನುವಾದ ’ಕ್ರೋನೋಪಿಯೋಸ್ ಅಂಡ್ ಫಾಮಾಸ್’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ಭಾನುವಾರದ ಓದು; ದಯಾ ಗಂಗನಘಟ್ಟ ಅವರ ಕಥೆ ‘ಒಂದು ಕುರ್ಚಿಯ ಸಾವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....