Homeಕಥೆಹೂಲಿಯೋ ಕೋರ್ಟಾಜ್ಹಾರ್‌ನ ನಾಲ್ಕು ಅತಿ ಸಣ್ಣ ಕಥೆಗಳು

ಹೂಲಿಯೋ ಕೋರ್ಟಾಜ್ಹಾರ್‌ನ ನಾಲ್ಕು ಅತಿ ಸಣ್ಣ ಕಥೆಗಳು

- Advertisement -
- Advertisement -

1. ದಿನಪತ್ರಿಕೆಯ ದಿನಚರಿ

ವ್ಯಕ್ತಿಯೊಬ್ಬ ದಿನಪತ್ರಿಕೆಯನ್ನು ಕೊಂಡುಕೊಂಡ ಮೇಲೆ ಅದನ್ನು ತನ್ನ ಕಂಕುಳಲ್ಲಿ ಸಿಕ್ಕಿಸಿಕೊಂಡು, ಬಸ್ ಏರುತ್ತಾನೆ. ಆ ದಿನಪತ್ರಿಕೆ ಕಂಕುಳಲ್ಲಿ ಇನ್ನೂ ಹಾಗೆ ಇರುವಾಗಲೇ, ಅರ್ಧ ಗಂಟೆಯ ನಂತರ ಆ ವ್ಯಕ್ತಿ ಬಸ್‌ನಿಂದ ಇಳಿಯುತ್ತಾನೆ.

ಪ್ಲಾಜ್ಹಾವೊಂದರ ಬೆಂಚ್ ಮೇಲೆ ಆ ದಿನಪತ್ರಿಕೆಯನ್ನು ಎಸೆದಾಗ ಅದು ಅದೇ ದಿನಪತ್ರಿಕೆಯಾಗಿ ಉಳಿಯದೆ, ಮುದ್ರಣಗೊಂಡಿರುವ ಹಾಳೆಗಳ ರಾಶಿಯಾಗುತ್ತದೆ.

ಅದು ಬೆಂಚಿನ ಮೇಲೆ ತಾನಾಗಿಯೇ ಕೇವಲ ಒಂದು ನಿಮಿಷ ಬಿದ್ದುಕೊಂಡಿದೆಯಷ್ಟೇ, ಯುವ ಬಾಲಕನೊಬ್ಬ ಅದನ್ನು ಕಂಡು, ಓದಿದಾಗ ಮುದ್ರಿತ ಹಾಳೆಗಳು ರಾಶಿ ಮತ್ತೆ ದಿನಪತ್ರಿಕೆಯಾಗಿ ಬದಲಾಗುತ್ತದೆ, ಮತ್ತೆ ಆತ ಅಲ್ಲೇ ಬಿಟ್ಟುಹೋದಮೇಲೆ ಅದು ಮುದ್ರಣಗೊಂಡ ಹಾಳೆಗಳ ರಾಶಿಯಾಗುತ್ತದೆ.

ಏಕಾಂಗಿಯಾಗಿ ಅದು ಬೆಂಚಿನ ಮೇಲೆ ಒಂದು ನಿಮಿಷ ಕೂತಿದೆಯಷ್ಟೇ, ಮುದುಕಿಯೊಬ್ಬಳು ಅದನ್ನು ಕಂಡು ಓದಿದಾಗ ಅದು ಮತ್ತೆ ಮುದ್ರಿತ ಹಾಳೆಗಳಿಂದ ದಿನಪತ್ರಿಕೆಯಾಗಿ ಬದಲಾಗುತ್ತದೆ, ಅಲ್ಲೇ ಬಿಟ್ಟು ಎದ್ದ ನಂತರ ಮುದ್ರಣಗೊಂಡ ಹಾಳೆಗಳ ರಾಶಿಯಾಗುತ್ತದೆ. ಆದರೆ ಆ ಮುದುಕಿ ಅದನ್ನು ಮನೆಗೆ ಎತ್ತುಕೊಂಡು ಹೊರಡುತ್ತಾಳೆ, ಹಾಗೆ ಮಾಡುವಾಗ ಮಾರ್ಗ ಮಧ್ಯದಲ್ಲಿ ಒಂದು ಕೆಜಿ ಬೀಟ್‌ರೂಟ್‌ಗಳನ್ನು ಕಟ್ಟಿಕೊಳ್ಳಲು ಅದನ್ನು ಬಳಸುತ್ತಾಳೆ. ಇಷ್ಟೆಲ್ಲಾ ರೂಪಾಂತರಗಳ ನಂತರವೂ ಆ ದಿನಪತ್ರಿಕೆಯ ಯೋಗ್ಯ ಉಪಯೋಗವಿಷ್ಟೇ.

2. ಪ್ರಗತಿ ಮತ್ತು ಪ್ರತಿಗಾಮಿತನ

ಜೇನುನೊಣಗಳು ತೂರಿಹೋಗಬಹುದಾದ ಗಾಜಿನ ಬಗೆಯನ್ನು ಅವರು ಅನ್ವೇಷಿಸಿದರು. ಜೇನುನೊಣ ಬಂದು ಗಾಜನ್ನು ತಲೆಯಿಂದ ನೂಕಿದರೆ ಮತ್ತೊಂದು ಬದಿಯಿಂದ ಹೊರಹೊಮ್ಮುತ್ತಿತ್ತು. ಇದು ಜೇನುನೊಣದ ಕಡೆಯಿಂದ ಅತೀವ ಸಂತಸಕ್ಕೆ ಕಾರಣವಾಗಿತ್ತು.

ಆ ಗಾಜಿನಲ್ಲಿ ಯಾವ ಗಿಮಿಕ್ ಬಳಸಲಾಗಿತ್ತು ಅಥವಾ ಅದು ಫೈಬ್ರಾಯ್ಡ್ ಆಗಿದ್ದರಿಂದ ಆ ಫೈಬರ್‌ಗಳಲ್ಲಿ ಫ್ಲೆಕ್ಸಿಬಲಿಟಿ ಏನಿತ್ತು ಎಂದು ತಿಳಿಯದೆ ಇದ್ದರಿಂದ, ಒಳಹೋದ ಜೇನುನೊಣ ಹೊರಬರಲಾರದು ಅಥವಾ ಹೊರಹೋಗಿದ್ದು ಒಳಬರಲಾರದ್ದು ಎಂಬುದನ್ನು ಪತ್ತೆಹಚ್ಚಿನ ಹಂಗೇರಿಯಾದ ವಿಜ್ಞಾನಿಯೊಬ್ಬರಿಂದ ಎಲ್ಲವೂ ಸರ್ವನಾಶವಾಯಿತು. ಆ ಕೂಡಲೇ, ಒಳಗೆ ಸಕ್ಕರೆ ಅಚ್ಚು ಇಟ್ಟು ಜೇನುನೊಣಗಳನ್ನು ಹಿಡಿಯುವ ಬೋನನ್ನು ಕಂಡುಹಿಡಿದರು ಮತ್ತು ಅದರಿಂದ ಆ ಜೇನುನೊಣಗಳು ನರಳಿ ಸತ್ತವು. ಇನ್ನೂ ಉತ್ತಮ ಅದೃಷ್ಟ ಇರಬೇಕಿದ್ದ ಈ ಪ್ರಾಣಿಗಳ ಜೊತೆಗೆ ಮೂಡಬಹುದಿದ್ದ ಸಂಭವನೀಯ ಭ್ರಾತೃತ್ವ ಕೊನೆಯಾದದ್ದು ಹೀಗೆ.

3. ಒಂದು ನಿಜವಾದ ಕಥೆ

ಒಬ್ಬ ಧೀಮಂತ ವ್ಯಕ್ತಿ ತನ್ನ ಕನ್ನಡಕವನ್ನು ನೆಲದ ಮೇಲೆ ಬೀಳಿಸಿದ್ದರಿಂದ, ಅದು ನೆಲದ ಟೈಲ್ಸ್‌ಗೆ ಬಡಿದಾಗ, ಒಂದು ಭಯಾನಕ ಸದ್ದನ್ನು ಮೂಡಿಸಿತು. ಅವನ್ನು ಎತ್ತಿಕೊಳ್ಳಲು ಆ ಧೀಮಂತ ವ್ಯಕ್ತಿ ಕೆಳಕ್ಕೆ ಬಗ್ಗಿದಾಗ, ಆ ಗಾಜು ಬಹಳ ದುಬಾರಿಯದ್ದಾದ್ದರಿಂದ, ಬಹಳ ದುಗುಡದಿಂದಿದ್ದ, ಆದರೆ ಯಾವುದೋ ಅದ್ಭುತ ಪವಾಡದಿಂದ ಅವುಗಳನ್ನು ತಾನು ಒಡೆದುಹಾಕಿಲ್ಲ ಎಂಬುದನ್ನು ಅತ್ಯಾಶ್ಚರ್ಯದಿಂದ ಕಂಡುಕೊಳ್ಳುತ್ತಾನೆ.

ಈಗ ಈ ಧೀಮಂತ ವ್ಯಕ್ತಿ ತನ್ನಷ್ಟಕ್ಕೇ ತುಂಬುಮನಸ್ಸಿನ ಧನ್ಯವಾದ ಹೇಳಿಕೊಂಡು ಮತ್ತು ಈಗ ನಡೆದಿರುವುದು ಒಂದು ಸ್ನೇಹಪೂರ್ವಕ ಎಚ್ಚರಿಕೆ ಎಂಬುದನ್ನು ಅರ್ಥಮಾಡಿಕೊಂಡು, ಕನ್ನಡಕದ ಅಂಗಡಿಗೆ ನಡೆದು, ಕನ್ನಡಕ್ಕಾಗಿ ಎರಡು ಹೊದಿಕೆಯ ಸಂರಕ್ಷಣೆ ಇರುವ ಚರ್ಮದ ಚೀಲವನ್ನು ಕೊಂಡು, ಮುನ್ನೆಚ್ಚರಿಕೆ ವಹಿಸುವುದು ಎಲ್ಲದ್ದಕ್ಕಿಂತ ಮುಖ್ಯವಾದದ್ದು ಎಂಬಿತ್ಯಾದಿಯಾಗಿ ಅಂದುಕೊಳ್ಳುತ್ತಾನೆ. ಒಂದು ಗಂಟೆಯ ನಂತರ ಆ ಚರ್ಮದ ಹೊದಿಕೆ ಇದ್ದ ಚೀಲ ಕೆಳಗೆ ಬೀಳುತ್ತದೆ, ಯಾವುದೇ ಆತಂಕವಿಲ್ಲದೆ ಅದನ್ನು ಎತ್ತಿಕೊಳ್ಳಲು ಬಗ್ಗಿದಾಗ, ಗಾಜು ಚೂರುಚೂರಾಗಿರುವುದನ್ನು ಕಂಡುಕೊಳ್ಳುತ್ತಾನೆ. ಸೃಷ್ಟಿಕರ್ತನ ವಿನ್ಯಾಸ ತರ್ಕಕ್ಕೆ ನಿಲುಕದ್ದು ಎಂದೂ ಮತ್ತು ವಾಸ್ತವದಲ್ಲಿ ಪವಾಡ ಈ ಕ್ಷಣವಷ್ಟೇ ನಡೆದಿದೆ ಎಂದು ಅರ್ಥಮಾಡಿಕೊಳ್ಳಲು ಈ ಧೀಮಂತ ವ್ಯಕ್ತಿಗೆ ತುಸು ಸಮಯ ಹಿಡಿಯುತ್ತದೆ.

4. ಕಚೇರಿಯಲ್ಲಿ

ಕೊನೆಯ ಕಾಮಾವನ್ನೂ ಬಿಡದಂತೆ ತನ್ನ ಕೆಲಸವನ್ನು ಗಂಭೀರವಾಗಿ ತೆಗೆದುಕೊಳ್ಳುವ ವ್ಯಕ್ತಿಗಳಲ್ಲಿ ನನ್ನ ನಂಬಿಕಸ್ಥ ವೈಯಕ್ತಿಕ ಕಾರ್ಯದರ್ಶಿಯೂ ಒಬ್ಬಳು. ಸರಣಿ ಆದೇಶಗಳನ್ನು ದಾಟಿ, ಬೇರೆಯವರ ಸ್ಥಾನಗಳನ್ನು ಅತಿಕ್ರಮಿಸಿ, ಹಾಲಿನ ಗ್ಲಾಸಿನಲ್ಲಿ ಬಿದ್ದಿರುವ ಒಂದು ಸಣ್ಣ ಕೂದಲನ್ನು ತೆಗೆಯಲು ಐದೂ ಬೆರಳನ್ನು ಅದ್ದುವುದೇನೆಂದರೆ ನಿಮಗೆ ತಿಳಿದಿರಬೇಕು.

ನನ್ನ ಕಚೇರಿಯಲ್ಲಿ ನನ್ನ ನಂಬಿಕಸ್ಥ ಕಾರ್ಯದರ್ಶಿ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ ಅಥವಾ ನೋಡಿಕೊಳ್ಳಲು ಇಚ್ಛಿಸುತ್ತಾಳೆ. ನಮ್ಮನಮ್ಮ ಕಾರ್ಯವ್ಯಾಪ್ತಿಯ ಬಗ್ಗೆ ಸ್ನೇಹಪೂರ್ವಕ ಜಗಳಗಳನ್ನು ಮಾಡುತ್ತಾ, ನಾವು ದಿನವನ್ನ ಖುಷಿಯಿಂದ ಕಳೆಯುತ್ತೇವೆ, ನಾವುಗಳು ನಗುನಗುತ್ತಾ ಪರಸ್ಪರ ನಿರ್ಲಕ್ಷ್ಯ ಮಾಡಿಕೊಳ್ಳುತ್ತೇವೆ, ನಂತರ ಒಬ್ಬರ ಕೆಲಸದಲ್ಲಿ ಮತ್ತೊಬ್ಬರು ಮೂಗುತೂರಿಸುವುದಿದೆ, ಒಬ್ಬರಿಗೊಬ್ಬರು ರೇಗಿಸುವುದಿರುತ್ತದೆ, ಅದರಿಂದ ಅವಾಕ್ಕಾಗುವುದಿದೆ, ಆಕ್ರಮಿಸಿಕೊಳ್ಳುವುದು ಮತ್ತು ಅದರಿಂದ ಬಿಡುಗಡೆಗೊಳಿಸುವುದೂ ಕೂಡ. ಆದರೆ ಆಕೆಗೆ ಎಲ್ಲದ್ದಕ್ಕೂ ಸಮಯವಿದೆ, ಕಚೇರಿಯ ಮೇಲೆ ಸ್ವಾಮ್ಯ ಸಾಧಿಸುವುದಕ್ಕೆ ಪ್ರಯತ್ನಿಸುವದಷ್ಟೇ ಅಲ್ಲದೆ, ಚಾಕಚಕ್ಯತೆಯಿಂದ, ತನ್ನೆಲ್ಲಾ ಕೆಲಸಗಳನ್ನು ಪೂರೈಸುತ್ತಾಳೆ. ಉದಾಹರಣೆಗೆ ಪದಗಳನ್ನೇ ತೆಗೆದುಕೊಳ್ಳಿ, ಅವುಗಳನ್ನು ಉತ್ತಮಪಡಿಸುವುದು, ಕೈಬಿಡುವುದು, ಒಂದು ಕ್ರಮದಲ್ಲಿ ಜೋಡಿಸುವುದು, ಅವುಗಳನ್ನು ಚೆನ್ನಾಗಿ ನೋಡಿಕೊಂಡು ದಿನನಿತ್ಯದ ಕೆಲಗಳಿಗೆ ಸಿದ್ಧಪಡಿಸುವುದು, ಇವುಗಳನ್ನು ಮಾಡದ ದಿನವೇ ಇಲ್ಲ.

ಯಾವುದೋ ಒಂದು ಕಳಪೆ ವಿಶೇಷಣ ನನ್ನ ಬಾಯಿಂದ ಜಾರಿತು ಎಂದರೆ – ಅವೆಲ್ಲಾ ನನ್ನ ಕಾರ್ಯದರ್ಶಿಯ ಪರಿಧಿಯಾಚೆಗೇ ನಡೆಯುವುದು, ಮತ್ತು ಒಂದು ಮಟ್ಟದ ನಿರ್ದಿಷ್ಟತೆಯಲ್ಲಿ ಹೇಳುವುದಾದರೆ ನನ್ನ ಪರಿಧಿಯಾಚೆಗೇ – ಏಕೆಂದರೆ ಆಕೆ ಸದಾ ತನ್ನ ಪೆನ್ಸಿಲ್ ಜೊತೆಗೆ ಸಿದ್ಧರಿರುತ್ತಾಳೆ, ಆ ವಿಶೇಷಣವನ್ನು ಹಿಡಿದು ಕೊಲ್ಲುವುದಕ್ಕೆ. ಕೆಟ್ಟ ಚಟ ಅಥವಾ ಉದಾಸೀನದಿಂದಾಗಿ, ಆ ಪದ ಹೇಗೋ ಉಳಿದ ವಾಕ್ಯದ ಜೊತೆ ಕೂಡಿಕೊಂಡು ಬದುಕುವುದಕ್ಕೆ ಆಕೆ ಎಂದಿಗೂ ಬಿಡುವುದಿಲ್ಲ. ಆಕೆಯನ್ನು ತನ್ನಷ್ಟಕ್ಕೆ ಬಿಟ್ಟರೆ, ಆ ಕ್ಷಣದಲ್ಲಿ ಆಕೆಯ ಪಾಡಿಗೆ ಬಿಟ್ಟುಬಿಟ್ಟರೆ, ಹಾಳೆಗಳನ್ನು ಕೋಪದಲ್ಲಿ ಮುದುರಿ ಕಸದ ಡಬ್ಬಿಗೆ ಬಿಸಾಕುತ್ತಾಳೆ. ಅವಳದ್ದು ಎಷ್ಟು ದೃಢಮನಸ್ಸು ಎಂದರೆ, ನಾನು ವ್ಯವಸ್ಥಿತವಾದ ಬದುಕು ಬದುಕುತ್ತಿದ್ದೇನೆ ಮತ್ತು ಯಾವುದೇ ಮುನ್ಸೂಚನೆಯಿಲ್ಲದ ನಡೆ, ಆಕೆಯನ್ನು ಎದ್ದುಕೂರುವಂತೆ ಮಾಡಿ, ಎಲ್ಲಾ ಕಿವಿ, ಬಾಲ, ಮತ್ತು ಮೂಗು ನಿಮಿರುವಂತೆ ಮಾಡಿ, ಗಾಳಿಯಲ್ಲಿ ಕುರಿಯ ಕೊರಳಿನ ಗಂಟೆ ಅಲ್ಲಾಡುವಂತೆ ಮಾಡಿಬಿಡುತ್ತದೆ.

ನಾನು ಕೆಲವೊಮ್ಮೆ ಅಸತ್ಯದಿಂದ ನಡೆದುಕೊಳ್ಳಬೇಕಾಗುತ್ತದೆ, ಮತ್ತು ನಾನು ವರದಿಯೊಂದನ್ನು ಸಂಪಾದಿಸುತ್ತಿರುವ ನೆಪದಲ್ಲಿ, ಅವುಗಳ ತುಂಟಾಟದಿಂದ ಮತ್ತು ಅವುಗಳ ನೆಗೆತದಿಂದ ಮತ್ತು ಅವುಗಳ ಕೋಪಪೀಡಿತ ಜಗಳದಿಂದ ನನ್ನನ್ನು ಸಂತಸಪಡಿಸುವ ಪದಗಳನ್ನು, ಕಂದು ಮತ್ತು ಹಸಿರು ಬಣ್ಣದ ಕೆಲವು ಹಾಳೆಗಳಲ್ಲಿ ತುಂಬಬೇಕಾಗುತ್ತದೆ. ನನ್ನ ನಂಬಿಕಸ್ಥ ಕಾರ್ಯದರ್ಶಿ, ಅದರ ಮೇಲೆ ಎರಗಲು ಸಿದ್ಧಳಿದ್ದರೂ, ಬಹುತೇಕ ವಿಚಲಿತಳಾಗಿರುವ ಕಾರಣಕ್ಕೆ, ಕಚೇರಿಯನ್ನು ಒಪ್ಪಓರಣ ಮಾಡುತ್ತಿರುತ್ತಾಳೆ. ಉಲ್ಲಾಸದಾಯಕವಾಗಿ ಒಂದು ಪದ್ಯ ಮೂಡುತ್ತಿರುವ ಮಧ್ಯದಲ್ಲಿ, ತನಗೆ ಒಪ್ಪಿಗೆಯಿಲ್ಲ ಎಂಬಂತೆ ಉಗ್ರವಾಗಿ ಕಿರುಚುವುದು ನನಗೆ ಕೇಳಿಸತ್ತೆ, ಆಗ ನಿಷೇಧಿತ ಪದಗಳಗಾಗಿ ನನ್ನ ಪೆನ್ಸಿಲ್ ನಾಗಾಲೋಟದಿಂದ ಓಡುತ್ತೆ, ಆಕೆ ಅವುಗಳನ್ನು ಅಷ್ಟೇ ನಿಷ್ಠೆಯಿಂದ ಅಳಿಸುತ್ತಾಳೆ, ಅಸ್ತವ್ಯಸ್ತಿವಿರುವುವನ್ನು ವ್ಯವಸ್ಥಿತಗೊಳಿಸುತ್ತಾಳೆ, ಕತ್ತರಿಸುತ್ತಾಳೆ, ಅದನ್ನು ಸ್ವಚ್ಛಗೊಳಿಸುತ್ತಾಳೆ, ಅದನ್ನು ಕಾಂತಿಯುತಗೊಳಿಸುತ್ತಾಳೆ, ಆದರೆ ಈ ದುಗುಡ, ನಾಲಿಗೆ ಮೇಲಿನ ಈ ವಿಶ್ವಾಸಘಾತುಕತನದ ರುಚಿ, ತನ್ನ ಕಾರ್ಯದರ್ಶಿಯನ್ನು ಎದುರಿಸುವ ಬಾಸ್‌ನ ಮುಖಚರ್ಯೆ ಹೊರತುಪಡಿಸಿ, ಇನ್ನು ಉಳಿದುಕೊಂಡಿದ್ದು ಬಹುಶಹ ಚೆನ್ನಾಗಿರಬಹುದು.

(ಕನ್ನಡಕ್ಕೆ): ಗುರುಪ್ರಸಾದ್ ಡಿ ಎನ್

ಹೂಲಿಯೋ ಕೋರ್ಟಾಜಾರ್

ಹೂಲಿಯೋ ಕೋರ್ಟಾಜಾರ್
ಖ್ಯಾತ ಸ್ಪಾನಿಶ್ ಬರಹಗಾರ ಮತ್ತು ಕವಿ. ’ಹಾಪ್‌ಸ್ಕಾಚ್’, ’ಬ್ಲೋ ಅಪ್ ಅಂಡ್ ಅದರ್ ಸ್ಟೋರೀಸ್’, ’ದ ವಿನ್ನರ್ಸ್’, ’ಎಂಡ್ ಆಫ್ ಗೇಮ್’ ಕೋರ್ಟಾಜಾರ್‌ನ ಪುಸ್ತಕಗಳಲ್ಲಿ ಕೆಲವು. ಪ್ರಸ್ತುತ ಕಥೆಗಳನ್ನು ಅವರ ಅತಿ ಸಣ್ಣ ಕಥೆಗಳ ಇಂಗ್ಲಿಷ್ ಅನುವಾದ ’ಕ್ರೋನೋಪಿಯೋಸ್ ಅಂಡ್ ಫಾಮಾಸ್’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.


ಇದನ್ನೂ ಓದಿ: ಭಾನುವಾರದ ಓದು; ದಯಾ ಗಂಗನಘಟ್ಟ ಅವರ ಕಥೆ ‘ಒಂದು ಕುರ್ಚಿಯ ಸಾವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...