Homeಮುಖಪುಟ“free Kashmir” ಅದು ಹೇಗೆ ದೇಶದ್ರೋಹ? - ಬಿ.ಟಿ ವೆಂಕಟೇಶ್

“free Kashmir” ಅದು ಹೇಗೆ ದೇಶದ್ರೋಹ? – ಬಿ.ಟಿ ವೆಂಕಟೇಶ್

ಕಳ್ಳನೇ ಆಗಿರಲಿ, ಕೊಲೆಗಾರನೇ ಆಗಿರಲಿ, ಅತ್ಯಾಚಾರವೇ ಮಾಡಿರಲಿ, ದೌರ್ಜನ್ಯ ಮಾಡಿರಲಿ, ಮೋಸ ಮಾಡಿರಲಿ, ಭ್ರಷ್ಟನಾಗಿರಲಿ., ಪ್ರತಿಯೊಬ್ಬನಿಗೂ ತನ್ನ ಆಯ್ಕೆಯ ವಕೀಲನನ್ನು ನೇಮಿಸಿಕೊಳ್ಳುವ ಹಕ್ಕಿದೆ.

- Advertisement -
- Advertisement -

‘ಹೀಗೂ ಉಂಟೇ’ ಅನ್ನುವ ಕಾರ್ಯಕ್ರಮ ಟೀವಿಲಿ ನೀವು ನೋಡಿರುತ್ತೀರಿ. ನೋಡಿಲ್ಲವಾದಲ್ಲಿ ಅಟ್ಲೀಸ್ಟ್ ಕೇಳಿರುತ್ತೀರಿ. ಇಂದು ದೇಶಾದ್ಯಂತ ರಾಜಕೀಯ ದಿವಾಳಿಕೋರತನ ಒಂದು ಕಡೆಯಾದರೆ, ಇನ್ನೊಂದೆಡೆ ಜನರ ಭುಗಿಲೆದ್ದ ಆಕ್ರೋಶ. ಈ ದೇಶವನ್ನೆಂದೂ ಒಡೆಯಲು ಬಿಡೆವೆಂಬ ಹಠ. ಇಂದು ದೇಶದ ಮೂಲೆಮೂಲೆಯಲ್ಲಿಯೂ ಕಿವಿಗೆ ಅಪ್ಪಳಿಸುತ್ತಿದೆ. ಮಾರಿಕೊಂಡುಹೋದ ಮೀಡಿಯಾ, ಮಾರಿಕೊಳ್ಳಲೆಂದೇ ಇರುವ ಜನಪ್ರತಿನಿಧಿಗಳು, ಜನರ ಹೋರಾಟ ಮುಗಿಲಿಗೇರಿದೆ. ಈ ಸುನಾಮಿಯನ್ನು ಹಿಡಿದಿಡಲು ದೇಶದ ಆಡಳಿತ ಪೊಲೀಸರನ್ನು ಛೂಬಿಟ್ಟಿದೆ. ಅವರಿಗಿಷ್ಟಬಂದಂತೆ ಕೊಲೆ, ಸುಲಿಗೆ, ಮಾರಣಹೋಮ ಉತ್ತರ ಪ್ರದೇಶದಲ್ಲಾದರೆ, ಸಾಕಷ್ಟು ಕಡೆ ಜನರ ಮೇಲೆ ಇಲ್ಲದ ಕೇಸುಗಳನ್ನು ಜಡಿಯಲಾಗುತ್ತಿದೆ. ಬೆಂಗಳೂರಲ್ಲೂ ಈಗಾಗಲೇ ಸಾಕಷ್ಟು ಯುವಕ-ಯುವತಿಯರ ಮೇಲೆ ಮೊಕದ್ದಮೆಗಳನ್ನು ಹೂಡಲಾಗಿದೆ. ಇಂದು ಜನಪರ ವಕೀಲರಿಗೆ ಕೊರತೆಯಿಲ್ಲ, ಎಲ್ಲರಿಗೂ ಬೇಲ್ ಪಡೆಯಲಾಗಿದೆ.

ಜೆಎನ್‍ಯುನಲ್ಲಿ ಪೊಲೀಸರ ಸುಪರ್ದಿಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರದ ವಿರುದ್ಧದ ಹೋರಾಟ ದೇಶದ ಮೂಲೆಮೂಲೆ ತಲುಪಿದೆ. ಶಹೀನ್‍ಬಾಗ್ ದೆಹಲಿಯಲ್ಲಿ ಮಾತ್ರವಲ್ಲದೇ ದೇಶದೆಲ್ಲೆಡೆ ತಲೆ ಎತ್ತುತ್ತಿವೆ. ಮೈಸೂರಿನಲ್ಲಿಯೂ ಅತ್ಯಂತ ಶಾಂತಿಯುತವಾದ ಪ್ರತಿಭಟನೆ ಎಲ್ಲರ ಗಮನ ಸೆಳೆದಿತ್ತು. ಯಾವುದಾದರೊಂದು ಕಾರಣಕ್ಕಾಗಿ ಕಾಯುತ್ತಿದ್ದ ಮಾರಿಕೊಂಡುಹೋದ ಮೀಡಿಯಾ ನಳಿನಿ ಬಾಲಕುಮಾರ್ ಹಿಡಿದಿದ್ದ “free Kashmir”ಪೋಸ್ಟರನ್ನು ತೋರಿಸಿ ದೇಶವನ್ನೇ ಒಡೆದುಬಿಟ್ಟಳೆಂಬಂತೆ ತೋರಿಸಿದ್ದಾರೆ. ಆ ವಿಡಿಯೋ ಆಧಾರದಲ್ಲಿ ಹುಡುಗಿಯ ಮೇಲೆ ದೇಶದ್ರೋಹದ ಮೊಕದ್ದಮೆಯನ್ನು ಪೊಲೀಸರು ಹೂಡಿದ್ದು ಈ ದೇಶದ ಆಡಳಿತ ಹೇಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬ ವಿಷಯ ಎಲ್ಲರಿಗೂ ಕಾಣುತ್ತಿದೆ.

ಈ ದೇಶದಲ್ಲಿ ಅತ್ಯಂತ ಸುಲಭವಾಗಿ ಬಳಕೆಯಾಗುವ ಕಾನೂನು “ದೇಶದ್ರೋಹ”. ಯಾವುದೇ ವಿಷಯಕ್ಕಾಗಲಿ ಆಡಳಿತ ವರ್ಗವನ್ನು ವಿಮರ್ಶಿಸಿದರೆ ಅದು ಯಾರೇ ಆಗಲೀ ‘ದೇಶದ್ರೋಹ’ ಎಂಬ ಪಟ್ಟ ಕಟ್ಟಲಾಗುತ್ತದೆ. ಯು.ಆರ್ ಅನಂತಮೂರ್ತಿಯಾಗಲೀ, ಗೌರಿಯಾಗಲೀ, ಈ ಕೆಲದಿನಗಳ ಹಿಂದೆಯಷ್ಟೇ ದೇಶದ ಇತಿಹಾಸತಜ್ಞ ರಾಮಚಂದ್ರ ಗುಹಾ ಆಗಲಿ… ಎಲ್ಲರ ಮೇಲೂ ಕೂರಿಸವ ಸುಲಭವಾದ ಗೂಬೆಯದು.
ಮೈಸೂರಿನ ಪೊಲೀಸರು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮುಂಚೆ ಮಾನವ ಹಕ್ಕು ಹೋರಾಟಗಾರ್ತಿ ಪ್ರೊ. ರತಿರಾವ್‍ರನ್ನು ಕಾಡಿದ್ದನ್ನು ನೋಡಿದ್ದೇವೆ.

ನಳಿನಿ ಬಾಲಕುಮಾರ್ ಹಿಡಿದ ಪೋಸ್ಟರ್‍ನಲ್ಲಿದ್ದ “free Kashmir”ಅದು ಹೇಗೆ ದೇಶದ್ರೋಹವಾಯಿತು? ಆ ವಿಷಯವನ್ನು ಸುಪ್ರೀಂಕೋರ್ಟಿನವರು ಹೇಳಿಲ್ಲವೇ? ಕಾಶ್ಮಿರ ಜನರ ಮೇಲೆ ಹೇರಿರುವ ನಿರ್ಬಂಧ, ನಡೆಯುತ್ತಿರುವ ಹಿಂಸೆಯ ಬಗ್ಗೆ ಇಡೀ ಪ್ರಪಂಚವೇ ಭಾರತದ ಸರ್ಕಾರವನ್ನು ಪ್ರಶ್ನಿಸುತ್ತಿದೆ. ಫೋನಿಲ್ಲದೇ, ಇಂಟರ್‍ನೆಟ್ ಇಲ್ಲದೇ, ಯಾವುದೇ ಸಂಪರ್ಕವಿಲ್ಲದೇ ಈ ದೇಶದ ಒಂದು ಇಡೀ ರಾಜ್ಯವನ್ನು ಬಂಧಿಸಿರುವ ವಿಷಯದ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣದ ವಾದ ನಡೆಯುತ್ತಿದೆ.

CAA, NRC ಹಾಗೂ NPRವಿರುದ್ಧದ ಯಾವುದೇ ಪ್ರತಿಭಟನೆಯನ್ನು ಸಹಿಸದ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ನಳಿನಿ ಬಾಲಕುಮಾರ್ ಮೇಲೆ ಹಾಕಿದ ಮೊಕದ್ದಮೆಯೂ ಅದೇ ರೀತಿಯದು. ಒಂದು ರೀತಿ ಮಿಕ್ಕ ಪ್ರತಿಭಟನಾಕಾರರಿಗೆ ಎಚ್ಚರಿಸುವ ಮಾರ್ಗ.

ದುರಂತವೆಂದರೆ ಮೊಕದ್ದಮೆ ದಾಖಲಿಸಿದ ಮೇಲೆ ಮೈಸೂರು ವಕೀಲರ ಸಂಘ ತೆಗೆದುಕೊಂಡ ನಿರ್ಣಯ. ನಳಿನಿಗೆ ಯಾರೂ ಮೈಸೂರಿನಲ್ಲಿ ವಕಾಲತ್ತು ಹಾಕುವುದಿಲ್ಲವೆಂಬ ತೀರ್ಮಾನ. ವಕೀಲರ ಸಂಘಗಳ ಇಂಥಾ ನಿಲುವು ಇದು ಹೊಸತೇನಲ್ಲ. ತಿಂಗಳ ಹಿಂದೆಯಷ್ಟೇ ಹೈದರಾಬಾದ್ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಹೈದರಾಬಾದ್, ಮೆಹಬೂಬ್‍ನಗರ್ ಮತ್ತಿತರ ಜಿಲ್ಲೆಗಳ ವಕೀಲರ ಸಂಘಗಳು ಆರೋಪಿಗಳಿಗೆ ನಾವು ವಕಾಲತ್ತು ಹಾಕುವುದಿಲ್ಲವೆಂಬ ತೀರ್ಮಾನಗಳನ್ನು ತೆಗೆದುಕೊಂಡಿದ್ದವು. ಅದೆಷ್ಟು ಸರಿ? ಈ ದೇಶದ ಸಂವಿಧಾನ ಹೇಳುತ್ತದೆ “ಯಾವುದೇ ವ್ಯಕ್ತಿಯ ವಿರುದ್ಧ ಅಪರಾಧ ಸಾಬೀತಾಗದ ಹೊರತು ಶಿಕ್ಷಿಸಲಾಗದು ಹಾಗೂ ಯಾವುದೇ ಆರೋಪಿಗೆ ತನ್ನ ಆಯ್ಕೆಯ ವಕೀಲರನ್ನು ನೇಮಿಸಿಕೊಳ್ಳುವ ಹಕ್ಕನ್ನು ಕೊಡಲಾಗಿದೆ.”

ಈ ದೇಶದ ಪ್ರತಿಯೊಬ್ಬ ವಕೀಲ ‘ಯಾವುದೇ ಭೇದ-ಭಾವ ಮಾಡದೇ, ತಾರತಮ್ಯ ತೋರದೇ ವೃತ್ತಿ ನಡೆಸುವುದಾಗಿ’ ಪ್ರಮಾಣವಚನ ಮಾಡಿರುತ್ತಾರೆ. ಇವು ಪ್ರಜಾಸತ್ತೆಯನ್ನು ನಿರ್ಧರಿಸುವ ಬುನಾದಿಗಳು. ಕಳ್ಳನೇ ಆಗಿರಲಿ, ಕೊಲೆಗಾರನೇ ಆಗಿರಲಿ, ಅತ್ಯಾಚಾರವೇ ಮಾಡಿರಲಿ, ದೌರ್ಜನ್ಯ ಮಾಡಿರಲಿ, ಮೋಸ ಮಾಡಿರಲಿ, ಭ್ರಷ್ಟನಾಗಿರಲಿ., ಪ್ರತಿಯೊಬ್ಬನಿಗೂ ತನ್ನ ಆಯ್ಕೆಯ ವಕೀಲನನ್ನು ನೇಮಿಸಿಕೊಳ್ಳುವ ಹಕ್ಕಿದೆ.

ಅಜ್ಮಲ್ ಕಸಬ್‍ನಂಥಾ ಆತಂಕವಾದಿಗೂ ಆಯ್ಕೆಯ ವಕೀಲನನ್ನು ನೇಮಿಸಿ, ವಿಚಾರಣೆ ನಡೆಸಿ, ತೀರ್ಪನ್ನು ಕೊಟ್ಟು, ಮೇಲ್ಮನವಿಗೆ ಅವಕಾಶ ಮಾಡಿಕೊಟ್ಟು ಕೊನೆಯಲ್ಲಿ ಶಿಕ್ಷೆ ನೀಡಲಾಯಿತು. ವಕೀಲರ ಸಂಘಗಳು ಈ ರೀತಿ ತೀರ್ಮಾನ ತೆಗೆದುಕೊಳ್ಳುವುದು ಸಮಂಜಸವಲ್ಲವೆಂದು ಈ ದೇಶದ ನುರಿತ ನ್ಯಾಯಾಧೀಶರು, ನ್ಯಾಯವಾದಿಗಳು ಸಾಕಷ್ಟು ಸಲ ಹೇಳಿದ್ದಾರೆ.

ಇಂದು ನಳಿನಿಗೆ 170ಕ್ಕೂ ಹೆಚ್ಚು ವಕೀಲರು ಬೇರೆಬೇರೆ ಜಿಲ್ಲೆಗಳಿಂದ ಮೈಸೂರಿಗೆ ಬಂದು ಆಕೆಗೆ ಬೆಂಬಲವಾಗಿ ನಿಂತಿದ್ದು ಒಂದು ಆರೋಗ್ಯಪೂರ್ಣ ಬದಲಾವಣೆಯಾಗಿದೆ. ಈ ದೇಶದಲ್ಲಿ ಉನ್ನಾವ್ ರೇಪ್ ಪ್ರಕರಣದ ಆರೋಪಿಗೆ, ಕಥುವಾ ಹಸುಗೂಸಿನ ರೇಪ್ ಆರೋಪಿಗಳಿಗೆ, ಗಣಿ ಹಗರಣಗಳ ಆರೋಪಿಗಳಿಗೆ, ದೇಶ ಲೂಟಿಮಾಡಿ ರಕ್ತ ಹೀರಿಹೋದ ನೀರವ್ ಮೋದಿಗಳಿಗೆ, ವಿಜಯ್ ಮಲ್ಯರುಗಳಿಗೆ, ಮೆಹುಲ್ ಚೋಕ್ಸಿಗಳಿಗೆ, ನೂರಾರು ರಾಜಕಾರಣಿಗಳಿಗೆ ವಕಾಲತ್ತು ವಹಿಸಲು ಇಲ್ಲದ ತಕರಾರು ಒಂದು ಚಿಕ್ಕ ಪೋಸ್ಟರ್ ಇಡಿಗೆ ಹುಡುಗಿಗೆ ಅಂಥಾ ಸಹಾಯ ನೀಡುವುದಿರಲಿ ಹಿಂಜರಿಕೆ ತೋರಿದ್ದು ಎಷ್ಟು ಸಮಂಜಸ?

ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಮೂಲಭೂತ ಹಕ್ಕು. ಪ್ರಜಾಸತ್ತೆ ಮೂಲಸ್ತಂಭವದು. ಅದರಿಂದಲೇ ನಮ್ಮ ಎಲೆಕ್ಷನ್ ಸಾಧ್ಯ. ಅದರಿಂದಲೇ ನನ್ನ ನೀತಿಗಳು, ನಮ್ಮ ಪತ್ರಿಕೋದ್ಯಮ, ನಮ್ಮ ವೃತ್ತಿಯ ಆಯ್ಕೆಯ ಸ್ವಾತಂತ್ರ್ಯ, ನಮ್ಮ ಧರ್ಮಶ್ರದ್ಧೆಯ ಸ್ವಾತಂತ್ರ್ಯ, ನಮ್ಮ ಸಂಘಜೀವನದ ಸ್ವಾತಂತ್ರ್ಯ ಸಾಧ್ಯವಾಗಿರುವುದು. ಅದಕ್ಕಾಗಿಯೇ ಇಂದು ಹೋರಾಟ ನಡೆಯುತ್ತಿರುವುದು. ಅದು ಕೇವಲ CAA, NRC ಹಾಗೂ NPR ವಿರುದ್ಧ ಮಾತ್ರವೆಂದು ತಿಳಿದುಕೊಂಡರೇ ಅದು ಅಪ್ಪಟ ಮೂರ್ಖತನ.

(ಲೇಖಕರು ಪ್ರಗತಿಪರ ಚಿಂತಕರು ಮತ್ತು ಬೆಂಗಳೂರು ಹೈಕೋರ್ಟ್ ವಕೀಲರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...