HomeಅಂಕಣಗಳುFund Transfer from center to states : ’ಸುದ್ದಿಯೇನೆ, ಮನೋಲ್ಲಾಸಿನಿ?’

Fund Transfer from center to states : ’ಸುದ್ದಿಯೇನೆ, ಮನೋಲ್ಲಾಸಿನಿ?’

- Advertisement -
- Advertisement -

ಕೋಟ್ಯಾಂತರ ಜನ ಅತ್ತೂ ಕರದೂ ಹಾಕಿದ ಮೇಲೆ? ನೆರೆ ಪರಿಹಾರಕ್ಕೆ ಅಂತ ಇಟಗೊರಿ? ಅಂತ ಕೇಂದ್ರದವರು ರಾಜ್ಯಕ್ಕೆ 1,200 ಕೋಟಿ ರೂಪಾಯಿ ಕೊಟ್ಟಾರ.

ಇದಕ್ಕ ಥರಾಥರಾ ಪ್ರತಿಕ್ರಿಯೆ ಬಂದಾವ.

‘ಇದು ಕಮ್ಮಿ’ ಅಂತ ಕೆಲವು ಜನಾ, ‘ಇದ ಹೆಚ್ಚು, ಇದಕ್ಕಿಂತ ಹೆಚ್ಚು ಏನ್ ಕೊಡತಾರ’ ಅಂತ ಕೆಲವರು ಅಂದರ, ಇನ್ನೂ ಕೆಲವರು ‘ಅವರು ದೇವರು ಇದ್ದಂಗೆ, ಅವರು ಕೃಪಾ ಮಾಡತಾರ. ಸ್ವಲ್ಪ ತಡಾ ಆಗಬಹುದು, ಅಷ್ಟ- ಖುದಾ ಕೆ ಘರ್ ಮೆ ದೇರ್ ಹೈ, ಅಂಧೇರಾ ನಹಿ,’ ಅಂತನೂ ಹೇಳ್ಯಾರ.

ಈ ಗನಗಂಬೀರ ವಿಷಯವನ್ನು ನಮ್ಮಂತಾ ಹುಲು ಮಾನವರು ಸ್ವಲ್ಪ ತಿಳಕೊಳ್ಳೋಣ, ಬನ್ನಿ

‘ಧನ ವಿನಿಯೋಗ’

ಒಂದು ವರ್ಷದಲ್ಲಿ ಕೇಂದ್ರ ಸರಕಾರದಿಂದಾ ರಾಜ್ಯಗಳಿಗೆ ಬರಬಹುದಾದ ರೊಕ್ಕಕ್ಕ ಧನ ವಿನಿಯೋಗ ಅಂತಾರ
ಇದು ಮೂರು ರೀತಿಯದು-

1. ಹಣಕಾಸು ಆಯೋಗ ಹೇಳಿದಷ್ಟು ಕೊಡುವುದು ಹಾಗೂ ಬ್ಯಾರೆ ರೀತಿ ಹಣ ಹಂಚಿಕೆ.

2. ಕೇಂದ್ರದ ಯೋಜನೆಗಳು

3. ಕೇಂದ್ರ ಹಾಗೂ ರಾಜ್ಯದ ಹೆಸರಿನಲ್ಲಿ ವಸೂಲು ಮಾಡುವ ತೆರಿಗೆ ಅಥವಾ ಸುಂಕ. ನಮ್ಮ ಉತ್ತರ ಕರ್ನಾಟಕದಾಗ ಸುಂಕ ಅಂತೇವೆಲ್ಲಾ, ಅಂತಾ ಸುಂಕ ಅಲ್ಲ ಮತ್ತ.

ಒಂದು ವರ್ಷಕ್ಕ ಕೇಂದ್ರ ರಾಜ್ಯಗಳಿಗೆ ಹಂಚುವ ಹಣ ಸುಮಾರು 50 ಲಕ್ಷ ಕೋಟಿ. ಇದರಾಗ 39 ಲಕ್ಷ ಕೋಟಿ ತೆರಿಗೆಯ ಮರು ಹಂಚಿಕೆ, 6 ಲಕ್ಷ ಕೋಟಿ ಮತ್ತ 5 ಲಕ್ಷ ಕೋಟಿ ವಿನಿಯೋಗ. ಇದನ್ನು ಬಿಟ್ಟು ಸುಮಾರು 3 ಲಕ್ಷ ಕೋಟಿ ನೇರ ಹಾಗೂ ನೇರವಲ್ಲದ ಸಬ್ಸಿಡಿ ಬಿಡುಗಡೆಯಾಗುತ್ತದೆ- ಪೆಟ್ರೋಲು, ಪೆಟ್ರೋಲಿನಿಂದ ಮಾಡಿದ ಗೊಬ್ಬರ, ಹಾಗೂ ಗೊಬ್ಬರದಿಂದ ಬೆಳೆದ ಧಾನ್ಯಗಳಿಗೆ.

ಇನ್ನು ಪ್ರಕೃತಿ ವಿಕೋಪ ಮುಂತಾದ ತುರ್ತುಗಳಿಗೆ ಕೊಡುವ ಧನಸಹಾಯ, ಅದು ಬ್ಯಾರೇನ.

ಸುಂಕ- ತೆರಿಗೆಯೊಳಗ ಎರಡು ಥರಾ. ನೇರ ಹಾಗೂ ನೇರವಲ್ಲದ ಅಥವಾ ಅಪ್ರತ್ಯಕ್ಷ. ಸರಕಾರಕ್ಕ ನಾವೆಲ್ಲಾ ಡೈರೆಕ್ಟಾಗಿ ರೊಕ್ಕ ಕೊಟ್ಟರ ಅದು ನೇರ. ಇನ್ನೊಬ್ಬರ ಮೂಲಕ ಕೊಟ್ಟರ ಅದು ಇನ್‍ಡೈರೆಕ್ಟ್ ತೆರಿಗೆ.

ಕೇಂದ್ರ ನೇರವಾಗಿ ವಸೂಲು ಮಾಡುವ ಆದಾಯ ತೆರಿಗೆಯನ್ನು ಅದು ರಾಜ್ಯಗಳಿಗೆ ಕೊಡೋದಿಲ್ಲ. ಸೆಸ್ ಅನ್ನುವ ಸಂಶಯಾಸ್ಪದ ಹೆಸರಿನ ತೆರಿಗೆ ಒಂದು ಅದ. ಈ ಕೆಲಸಕ್ಕೆ ಇದನ್ನು ಉಪಯೋಗಸ್ತೇವಿ ಅಂತೇಳಿ ವಸೂಲು ಮಾಡೋದು ಸೆಸ್ಸು. ಇದನ್ನೂ ರಾಜ್ಯಗಳ ಜೊತೆ ಹಂಚಿಕೊಳ್ಳಬೇಕಾಗಿಲ್ಲ. ಕಳೆದ 10 ವರ್ಷದಾಗ ಈ ಸೆಸ್ಸುಗಳ ಸಂಖ್ಯೆ ಸುಮಾರು 100 ಶೇಕಡಾ ಹೆಚ್ಚಾಗೇದ.

ಇನ್ನು ಜಿಎಸ್‍ಟಿ ಅಥವಾ ಸರಕು ಹಾಗೂ ಸೇವಾ ತೆರಿಗೆ. ಸಿಂಪಲ್ ಆಗಿ ಹೇಳಬೇಕಂದರೆ ಆದಾಯ ಬಿಟ್ಟರ ಉಳಿದ ಎಲ್ಲಾ ತೆರಿಗೆ ಇದರಾಗ ಬರ್ತಾವ. ಅದು ಆದಾಯದ ಮ್ಯಾಲೆ ಆದರ ಇದು ಖರ್ಚಿನ ಮ್ಯಾಲೆ. ಇದರಾಗ ಏನ್ರಿ, ಯಾವುದರ ಹೆಸರಾಗ ರೊಕ್ಕ ಕಸಗೊಳೋದು ಅಂತೀರೇನು? ಅದಕ್ಕ ಹೇಳೋದು ಸಾವಿನ ನಂತರ ಈ ಜೀವನದಾಗ ಖಾತ್ರಿ ಇರೋದು ತೆರಿಗೆ ಮಾತ್ರ ಅಂತ.

ಜಿಎಸ್‍ಟಿಯ ಪಾಲು ರಾಜ್ಯಗಳಿಗೆ ಸಿಗತದ. ಇನ್ನು ಕೇಂದ್ರಕ್ಕ ಕೊಡಲಾರದ ತಾವ ಹಾಕಿ ತಾವೇ ಬಳಸೋ ತೆರಿಗೆ ಕೆಲವು ಅವ. ಹೊಟೆಲ್ ಒಳಗ ಊಟಾ ಮಾಡಿ, ಬೀರ್ ಬಾಟಲ್ ಕೈಯಾಗ ಹಿಡಕೊಂಡು ಸಿನಿಮಾಕ್ಕ ಹೋದವರು ರಾಜ್ಯಕ್ಕೆ ಮೂರು ಥರದ ಸುಂಕ ಸೇವಾ ಮಾಡಿರತಾರ.

ಕೇಂದ್ರ ಸರಕಾರದ ಯೋಜನೆಗಳು- ಒಟ್ಟು 99. ಇದರೊಳಗ ಮೂರು ಥರಾ. ಹಳೇ ಯೋಜನೆ, ನಡುವೆ ನಿಂತು ಹೋಗಿ, ಮತ್ತೆ ಶುರು ಆದ ಹಳೇ ಯೋಜನೆ, ಹಾಗೂ ಹೊಸಾ ಹೆಸರಿನ ಹಳೇ ಯೋಜನೆ.

ಮನೆ ಕಟ್ಟುವುದು, ಮನೆಯಲ್ಲಿ ಸಂಡಾಸು ಕಟ್ಟುವುದು, ಹಾದಿ ಮ್ಯಾಲೆ ಹೋಗೋರು ಹಾದಿ ಮ್ಯಾಲಿನ ಕಸಾ ಗುಡಸೋದು, ಇಂತಾ ಯೋಜನೆ ಒಂದಿಷ್ಟು. ಇನ್ನ ಉತ್ತರಾಖಂಡೀ ಶುದ್ಧ ಹಿಂದೀ ಯಲ್ಲಿ ಹೆಸರಿಟ್ಟ ಉನ್ನತೀಕರಣ್ ಯೋಜನಾ, ವಿಕಾಸ್ ಯೋಜನಾ, ಆಯೋಜನಾ, ನೀತಿ, ಗೀತಿ, ಅವೆಲ್ಲಾ ಬ್ಯಾರೆ.
ಇದರೊಳಗ ಸಂಪೂರ್ಣ ಕೇಂದ್ರ ತಮ್ಮದೇ ದುಡ್ಡು ಹಾಕಿ ನೇರವಾಗಿ ಜಾರಿ ಮಾಡೋ ಅಂಥಾವು 27 ಸ್ಕೀಮು. ಇನ್ನು ಇದರಾಗ ರಾಜ್ಯದವರದೂ ಪಾಲು ಇರಲಿ ಅಂತೇಳಿ, ರಾಜ್ಯದ ನಿಗರಾಣಿಯಲ್ಲಿ ಮಾಡೋ ಅಂಥಾವು 72. ಇವಕ್ಕ ಬರೋ ಫಂಡು ಬ್ಯಾರೆ.

‘ಅಣಕಾಸು ಹಾಯೋಗ’

ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ವಕೀಲರಾಗಿ, ಭಾರಿ ಭಯಂಕರ ಭಾಷಣಕಾರರಾಗಿ, ‘ಸೋಷಿಯಲ್ ಮೀಡಿಯಾ ಸ್ಟಾರ್’ ಅನ್ನುವ ಬಿರುದಿಗೆ ಭೀಷಣರಾಗಿ, ಆ ನಂತರ ‘ಇದನ್ನ ಯಾಕ್ ಬಿಡೋದ್, ಟ್ರೈಮಾಡೇ ಬಿಡೋಣ’ ಅಂತ ಸಂಸತ್ ಸದಸ್ಯರಾಗಿಯೇ ಬಿಟ್ಟ ನಾಯಕರೊಬ್ಬರು ಕೇಂದ್ರದ ಹತ್ತಿರ ನಾವು ಯಾಕ್ ಕೇಳ್ ಬೇಕು? ನಮ್ಹತ್ರಾನೆ ಇದೆಯಲ್ಲಾ ಬೇಕಾದಷ್ಟು ದುಡ್ಡು, ಮೋದೀಜೀ 14 ನೇ ಅಣಕಾಸು ಹಾಯೋಗದ ಅಡಿಯಲ್ಲಿ ಬೇಕಷ್ಟು ಕೊಟ್ಟಿದಾರೆ, ಅಲ್ವಾ, ಅಂತಂದ್ರು. ನೆನಪ ಅದನ, ಆ ಡೀಪು ಥಾಟಿನ ಗೂಡಾರ್ಥ ಏನು ಹಂಗಂದರೆ?

ಆ ಆಯೊಗದ ಕತಿ ಮಜಾ ಐತಿ. ಸಂವಿಧಾನದ 280ನೇ ಕಲಮಿನ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಒಂದು ಹಣಕಾಸು ಆಯೋಗ ಆಗಬೇಕು. ತಾನು ತೆರಿಗೆದಾರರಿಂದ ಸಂಗ್ರಹಿಸಿದ ಹಣವನ್ನ ರಾಜ್ಯಗಳ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗಳಿಗೆ ಎಷ್ಟೆಷ್ಟು ಪ್ರಮಾಣದಾಗ ಎಷ್ಟೆಷ್ಟು ಕಂತಿನೊಳಗ ಕೊಡಬೇಕು ಅಂತ ನಿರ್ಧಾರ ಮಾಡೋದು ಈ ಆಯೋಗ. ಈಗ ರಿಸರ್ವ ಬ್ಯಾಂಕಿನ ಮಾಜಿ ಗವರ್ನರ್ ವೈ ವಿ ರೆಡ್ಡಿ ಅವರ ಸದಾರತ್ತಿನೊಳಗ 14ನೇ ಆಯೋಗ ಹಣಕಾಸು ಸಂಗ್ರಹದ 42 ಶೇಕಡಾ ರಾಜ್ಯಗಳಿಗೆ ಕೊಡಬೇಕು ಅಂತ ಹೇಳಿತು. ಕೇಂದ್ರ ಸರಕಾರ ಒಪ್ಪಿಕೊಂಡಿತು. ಆದರೆ ಆ ರೊಕ್ಕಾನ ನಾವು ಹೇಳಿದಂಗ ಖರ್ಚು ಮಾಡಬೇಕು ಅನ್ನೋ ಷರತ್ತು ಹಾಕಿತು.

ಹಿಂದಿಗಿಂತ ಹಣ ವಿನಿಯೋಗದ ಪ್ರಮಾಣ ಹೆಚ್ಚಾದರೂ ಖರ್ಚು ಮಾಡುವ ಸ್ವಾತಂತ್ರ್ಯದ ಪ್ರಮಾಣ ಕಮ್ಮಿ ಆಯಿತು.

ಹಂಗೂ ಸ್ವಾತಂತ್ರ್ಯ ಯಾರಿಗೆ ಬೇಕಾಗೇದ ಬಿಡ್ರಿ. ರೊಕ್ಕ ಇದ್ದರ ಸಾಕು.
“ತುಮ್ ಆಜಾದ್ ಹೋ ಸೋನೆ ಕಿ ಪಿಂಜರೇ ಮೆ.
ಚೀಖನೆ ಕೀ ಆಜಾದೀ ಹೈ ತುಮ್ಹೆ
ಮಗರ್ ಆವಾಜ್ ನಹೀ ಉಠಾನಾ,”
ಅನ್ನೋ ಶಾಯರಿ ಅದಅಲ್ಲಾ, ಹಂಗ.
ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಬಂದ ಹಣವನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಆಡಳಿತಕ್ಕಾಗಿ ಖರ್ಚು ಮಾಡಬೇಕು. ಇದು ಕಾನೂನು ಹಾಗೂ ಸಂಪ್ರದಾಯ.

ಉತ್ತರ ಕರ್ನಾಟಕದ ಮೇಲೆ 118 ವರ್ಷಗಳಲ್ಲಿ ಬೀಳದಷ್ಟು ಮಳಿ ಬಿದ್ದು, ಕೃಷ್ಣಾ ನದಿಯಲ್ಲಿ ಕೇವಲ ಮೂರು ವಾರದಲ್ಲಿ 600 ಟಿಎಂಸಿ ನೀರು ಬಂದು ಜನರ ಜೀವಾ, ಜೀವನ ಎರಡನ್ನೂ ಹರಿಸಿಕೊಂಡು ಹೋತಲ್ಲಾ, ಅದು ಪ್ರಕೃತಿ ವಿಕೋಪ ಅಲ್ಲಾ.

14 ನೇ ಹಣಕಾಸು ಆಯೋಗದ ದುಡ್ಡನ್ನು ನೆರೆ ಪರಿಹಾರದಂತ ಕೆಲಸಕ್ಕೆ ಬಳಸಿಗೋಬೇಕು, ಕೇಂದ್ರದಿಂದ ಹೆಚ್ಚಿನ ಹಣ ಕೇಳಬಾರದು ಎನ್ನುವ ಫರಮಾನು ಕೊಡಿಸುವ ಯುವ, ಶಿಕ್ಷಿತ, ನಾಯಕರನ್ನು ನಾವು ಆರಿಸಿ ಕಳಿಸಿದ್ದೇವಲ್ಲಾ, ಅದು ವಿಕೋಪ.

ಅದು ನೈಸರ್ಗಿಕವೋ ಕೃತ್ರಿಮವೋ ಅದು ಇನ್ನೊಂದು ದಿನದ ಚರ್ಚೆಯ ವಿಷಯ, ಅಲ್ಲವೇ ಮನೋಲ್ಲಾಸಿನೀ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...