Homeಮುಖಪುಟ‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ - ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ – ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

- Advertisement -
- Advertisement -

ಆಧುನಿಕ ಭಾರತೀಯ ಚಿಂತಕರ ಆಯ್ದ ಬರಹಗಳ ಮೂಲಕ ಅವರ ಚಿಂತನೆ ಪರಿಚಯ ಮಾಡುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ‘ಬೆಳಕಿನ ಬೆಳೆ’  ಎಂಬ ಮಾಲಿಕೆಯಡಿ ಪ್ರಕಟಿಸಿದ 7 ಪುಸ್ತಕಗಳು ಗಮನ ಸೆಳೆದಿದ್ದವು. ಈ ಮಾಲಿಕೆಯ ಪ್ರಕಟಣೆಯನ್ನು ಡಾ.ಎಂ.ಜಿ. ಹೆಗಡೆ ಅವರ ಸಂಪಾದಕತ್ವದಲ್ಲಿ ಮುಂದುವರೆಸಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಕ್ರಿಯಾ ಮಾಧ್ಯಮ ವಹಿಸಿಕೊಂಡಿದೆ.  ‘ಬೆಳಕಿನ ಬೆಳೆ’ ಮಾಲಿಕೆಯ ಎಂಟನೆಯ ಪುಸ್ತಕವಾಗಿ ಮತ್ತು ಈ ಮಾಲಿಕೆಯಲ್ಲಿ ಕ್ರಿಯಾ ಮಾಧ್ಯಮದ ಪ್ರಕಟಣೆಗಳಲ್ಲಿ ಮೊದಲನೆಯದಾಗಿ, ಪ್ರಸಿದ್ಧ ಚಿಂತಕ ”ಜಿ.ಎನ್. ದೇವಿ ಅವರ ಆಯ್ದ ಬರಹಗಳು’ ಕೃತಿಯು ಅಕ್ಟೋಬರ್ 29 ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಯಾಗುತ್ತಿದೆ.

ಕೃತಿ ವಾಚನದ ಮೂಲಕ ಡಾ.ಶ್ರೀಪಾದ ಭಟ್ ರವರು ಕೃತಿ ಬಿಡುಗಡೆ ಮಾಡಲಿದ್ದು,  ಡಾ.ಸಿರಾಜ್ ಅಹ್ಮದ್ ಮತ್ತು ಡಾ.ರಾಜೇಂದ್ರ ಚೆನ್ನಿಯವರು ಡಾ.ಜಿ.ಎನ್ ದೇವಿಯವರ ಬರಹಗಳ ಕುರಿತು ಮಾತನಾಡಲಿದ್ದಾರೆ. ಡಾ.ದೇವಿದಾಸ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಒರ್ಫಿಯಸ್‌ನ ಹಾಡು, ಅಪೂರ್ಣ ರಕ್ತ ಕಣ, ಕಳ್ಳನೆನಿಸಿಕೊಂಡ ಅಲೆಮಾರಿ, ಹಿಂಸೆಯ ಪೂರ್ವಾಪರ, ಭಾಷೆಯ ಇರವು: ಜ್ಞಾನ, ಸಮಾಜ ಮತ್ತು ವಾಚೋಹೀನತೆ, ವಾಚೋಹೀನತೆ, ಸ್ಮೃತಿಯ ಭವಿಷ್ಯ – ದೇವಿ ಅವರ ಈ ಐದು ಪ್ರಸಿದ್ಧ ಲೇಖನಗಳು ಪುಸ್ತಕದಲ್ಲಿ ಇವೆ. ಈ ಪುಸ್ತಕದ ಆಯ್ದ ಭಾಗ ನಿಮ್ಮ ಓದಿಗಾಗಿ….

ಪರ್ಯಾಯದ ಹುಡುಕಾಟ

ಪ್ರಸ್ತುತ ಕೃತಿಯಲ್ಲಿ ಮೂರು ಬಹುಮುಖ್ಯ ವಿಷಯಗಳನ್ನು ಕುರಿತು ದೇವಿಯವರು ಧ್ಯಾನಿಸಿ ಬರೆದ ಬರಹಗಳ ಅನುವಾದಗಳಿವೆ. ಪಶ್ಚಿಮ ಹಾಗೂ ಪೂರ್ವಗಳ ವಿದ್ವತ್ತು, ಜಗತ್ತಿನ ಮಹಾನ್ ಕೃತಿಗಳ ಆಳವಾದ ಓದು, ಚರಿತ್ರೆಯ ದಾರ್ಶನಿಕವಾದ ತಿಳವಳಿಕೆ ಹಾಗೂ ಸಾಮಾಜಿಕ ಬದ್ಧತೆಗಳು ಮುಪ್ಪುರಿಗೊಂಡು ಸೃಷ್ಟಿಸಿದ ಜ್ಞಾನವು ಈ ಬರಹಗಳಲ್ಲಿದೆ. ಅಪ್ರಾಮಾಣಿಕವಾದ ಭಾಷಾಡಂಬರದ “ಜಾಗತಿಕ” ಚಿಂತನೆಯ ಹಗಲುವೇಷದ ಬದಲಾಗಿ ಇಪ್ಪತ್ತನೆಯ ಶತಮಾನದಿಂದ ಇತ್ತೀಚೆಗೆ ಮನುಷ್ಯ ಕುಲವು ಎದುರಿಸಿದ ಆತ್ಮ ಘಾತುಕವಾದ ಹಿಂಸೆಗಳು, ಅತಾರ್ಕಿಕವಾದ ಸ್ವವಿನಾಶ, ಸಿನಿಕತನವುಳ್ಳ ಹತಾಶೆ ಇವುಗಳ ಜೊತೆಗೆ ಇವೆಲ್ಲವನ್ನು ಬದಲಾಯಿಸಬೇಕು ಎನ್ನುವ, ‘ಇನ್ನೊಂದುಜಗತ್ತು ಸಾಧ್ಯವಿದೆ ಎನ್ನುವ ನೈತಿಕವಾದ ನಂಬಿಕೆ ಈ ಬರಹಗಳಲ್ಲಿದೆ. ಎಂ.ಜಿ. ಹೆಗಡೆಯವರ ಮಾಂತ್ರಿಕ ಅನುವಾದವು ದಟ್ಟವಾದ, ಸಂಕೀರ್ಣವಾದ ಅನುಭವಗಳನ್ನು ಕನ್ನಡದಲ್ಲಿಅದ್ಭುತವಾಗಿ ಹಿಡಿದುಕೊಡುತ್ತದೆ. ನನಗಂತೂ ಈ ಕೃತಿಯನ್ನುಓದಿದ್ದು ಇಳಿವಯಸ್ಸಿನಲ್ಲಿ ದೊರೆತ ಶಿಕ್ಷಣವಾಗಿದೆ.

– ಡಾ. ರಾಜೇಂದ್ರಚೆನ್ನಿ

ಒರ್ಫಿಯಸ್‌ನ ಹಾಡು

ಬಹಳ ಹಿಂದೆ–ಎಷ್ಟೆಂದರೆ ಐತಿಹಾಸಿಕ ಯುಗಗಳಲ್ಲಿಅಲ್ಲ, ಪೌರಾಣಿಕ ಕಲ್ಪಗಳಲ್ಲಿ- ಒರ್ಫಿಯಸ್‌ತನ್ನ ಪ್ರೀತಿಯ ಯುರಿಡಿಸಿಯನ್ನು ಮೃತ್ಯುಲೋಕದಿಂದ ಮರಳಿ ತರಲು ಹೋರಾಟ ನಡೆಸಿದ. ಮೃತ್ಯು ದೇವತೆಯು ಒರ್ಫಿಯಸ್‌ಗೆ ಯುರಿಡಿಸಿಯನ್ನು ಹಿಂತಿರುಗಿಸಲು ಒಪ್ಪಿದ. ಆದರೆ ಅವಳು ಅವನನ್ನು ಅನುಸರಿಸಿಕೊಂಡು ಹೋಗುತ್ತಿರುವಾಗ ನಿಜಕ್ಕೂ ಅವಳು ತನ್ನನ್ನು ಹಿಂಬಾಲಿಸುತ್ತಿರುವಳೆ ಎಂದು ಅವನು ಹಿಂತಿರುಗಿ ನೋಡುವಂತಿಲ್ಲಎಂದು ಷರತ್ತು ವಿಧಿಸಿದ. ಒರ್ಫಿಯಸ್‌ ಕತ್ತಲೆಯಚಿಂನ ಜಗತ್ತಿನಿಂದ ಹೊರಬಂದಾಗ ಯುರಿಡಿಸಿ ದಿಟವಾಗಿಯೂ ತನ್ನನ್ನು ಹಿಂಬಾಲಿಸಿ ಬರುತ್ತಿದ್ದಾಳೆ ಎಂಬ ನಂಬಿಕೆಯ ಬಲದ ಮೇಲೇ ಕವನಗಳನ್ನು ರಚಿಸಿ ಪಟ್ಟಿಯಾಗಿ ಹಾಡುತ್ತಿದ್ದ– ಯುರಿಡಿಸಿಗೆ ತನ್ನೆದೆಯ ತವಕ ತಲ್ಲಣಗಳ ನಿವೇದನೆ; ಪ್ರಿಯತಮೆಯನ್ನು ಮೃತ್ಯುಮುಖದಿಂದ ರಕ್ಷಿಸಿ ತಂದಯ ಶೋಕಗೀತೆಯಾಗಿ; ಅದೆಲ್ಲಕ್ಕಿಂತ, ಯುರಿಡಿಸಿ ವಾಸ್ತವವಾಗಿಯೂ ತನ್ನನ್ನು ಹಿಂಬಾಲಿಸುತ್ತಿರುವುದು ಹೌದೇ ಎಂಬ ಆಂತಕವನ್ನು ಗೆಲ್ಲುವ ಉಪಾಚಿಂತವಾಗಿ. ಅವನ ದೈವಿಕ ಸಂಗೀತಕ್ಕೆ ಮರುಳಾಗಿ ಲಕ್ಷಂತರ ಹಕ್ಕಿಗಳು ಯುರಿಡಿಸಿಯನ್ನು ಹಿಂಬಾಲಿಸಿದವೆಂದು ಹೇಳುತ್ತಾರೆ. ಅವುಗಳ ಕಿವಿಯಿಂಪದು ಸಂಗೀತ; ಅದರೆ ಒರ್ಫಿಯಸ್‌ಗೆ ಅದು ಯಾತನೆಗೀತೆ; ಹಾಗೆಯೇ ನಂಬಿಕೆಯಘೋಷಣೆ! ಒರ್ಫಿಯಸ್‌ನ ಆ ಹಾಡು ಪ್ರತಿಯೊಬ್ಬ ಪ್ರವರ್ತಕನ ಕ್ರಿಯೆಯಲ್ಲೂ ಪ್ರತಿಧ್ವನಿಸುತ್ತ…

– ಗಣೇಶ್‌ದೇವಿ (ಒರ್ಫಿಯಸ್‌ನ ಹಾಡು)


ಇದನ್ನೂ ಓದಿ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...