Homeಮುಖಪುಟ‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ - ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ – ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

- Advertisement -
- Advertisement -

ಆಧುನಿಕ ಭಾರತೀಯ ಚಿಂತಕರ ಆಯ್ದ ಬರಹಗಳ ಮೂಲಕ ಅವರ ಚಿಂತನೆ ಪರಿಚಯ ಮಾಡುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ‘ಬೆಳಕಿನ ಬೆಳೆ’  ಎಂಬ ಮಾಲಿಕೆಯಡಿ ಪ್ರಕಟಿಸಿದ 7 ಪುಸ್ತಕಗಳು ಗಮನ ಸೆಳೆದಿದ್ದವು. ಈ ಮಾಲಿಕೆಯ ಪ್ರಕಟಣೆಯನ್ನು ಡಾ.ಎಂ.ಜಿ. ಹೆಗಡೆ ಅವರ ಸಂಪಾದಕತ್ವದಲ್ಲಿ ಮುಂದುವರೆಸಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಕ್ರಿಯಾ ಮಾಧ್ಯಮ ವಹಿಸಿಕೊಂಡಿದೆ.  ‘ಬೆಳಕಿನ ಬೆಳೆ’ ಮಾಲಿಕೆಯ ಎಂಟನೆಯ ಪುಸ್ತಕವಾಗಿ ಮತ್ತು ಈ ಮಾಲಿಕೆಯಲ್ಲಿ ಕ್ರಿಯಾ ಮಾಧ್ಯಮದ ಪ್ರಕಟಣೆಗಳಲ್ಲಿ ಮೊದಲನೆಯದಾಗಿ, ಪ್ರಸಿದ್ಧ ಚಿಂತಕ ”ಜಿ.ಎನ್. ದೇವಿ ಅವರ ಆಯ್ದ ಬರಹಗಳು’ ಕೃತಿಯು ಅಕ್ಟೋಬರ್ 29 ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಯಾಗುತ್ತಿದೆ.

ಕೃತಿ ವಾಚನದ ಮೂಲಕ ಡಾ.ಶ್ರೀಪಾದ ಭಟ್ ರವರು ಕೃತಿ ಬಿಡುಗಡೆ ಮಾಡಲಿದ್ದು,  ಡಾ.ಸಿರಾಜ್ ಅಹ್ಮದ್ ಮತ್ತು ಡಾ.ರಾಜೇಂದ್ರ ಚೆನ್ನಿಯವರು ಡಾ.ಜಿ.ಎನ್ ದೇವಿಯವರ ಬರಹಗಳ ಕುರಿತು ಮಾತನಾಡಲಿದ್ದಾರೆ. ಡಾ.ದೇವಿದಾಸ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಒರ್ಫಿಯಸ್‌ನ ಹಾಡು, ಅಪೂರ್ಣ ರಕ್ತ ಕಣ, ಕಳ್ಳನೆನಿಸಿಕೊಂಡ ಅಲೆಮಾರಿ, ಹಿಂಸೆಯ ಪೂರ್ವಾಪರ, ಭಾಷೆಯ ಇರವು: ಜ್ಞಾನ, ಸಮಾಜ ಮತ್ತು ವಾಚೋಹೀನತೆ, ವಾಚೋಹೀನತೆ, ಸ್ಮೃತಿಯ ಭವಿಷ್ಯ – ದೇವಿ ಅವರ ಈ ಐದು ಪ್ರಸಿದ್ಧ ಲೇಖನಗಳು ಪುಸ್ತಕದಲ್ಲಿ ಇವೆ. ಈ ಪುಸ್ತಕದ ಆಯ್ದ ಭಾಗ ನಿಮ್ಮ ಓದಿಗಾಗಿ….

ಪರ್ಯಾಯದ ಹುಡುಕಾಟ

ಪ್ರಸ್ತುತ ಕೃತಿಯಲ್ಲಿ ಮೂರು ಬಹುಮುಖ್ಯ ವಿಷಯಗಳನ್ನು ಕುರಿತು ದೇವಿಯವರು ಧ್ಯಾನಿಸಿ ಬರೆದ ಬರಹಗಳ ಅನುವಾದಗಳಿವೆ. ಪಶ್ಚಿಮ ಹಾಗೂ ಪೂರ್ವಗಳ ವಿದ್ವತ್ತು, ಜಗತ್ತಿನ ಮಹಾನ್ ಕೃತಿಗಳ ಆಳವಾದ ಓದು, ಚರಿತ್ರೆಯ ದಾರ್ಶನಿಕವಾದ ತಿಳವಳಿಕೆ ಹಾಗೂ ಸಾಮಾಜಿಕ ಬದ್ಧತೆಗಳು ಮುಪ್ಪುರಿಗೊಂಡು ಸೃಷ್ಟಿಸಿದ ಜ್ಞಾನವು ಈ ಬರಹಗಳಲ್ಲಿದೆ. ಅಪ್ರಾಮಾಣಿಕವಾದ ಭಾಷಾಡಂಬರದ “ಜಾಗತಿಕ” ಚಿಂತನೆಯ ಹಗಲುವೇಷದ ಬದಲಾಗಿ ಇಪ್ಪತ್ತನೆಯ ಶತಮಾನದಿಂದ ಇತ್ತೀಚೆಗೆ ಮನುಷ್ಯ ಕುಲವು ಎದುರಿಸಿದ ಆತ್ಮ ಘಾತುಕವಾದ ಹಿಂಸೆಗಳು, ಅತಾರ್ಕಿಕವಾದ ಸ್ವವಿನಾಶ, ಸಿನಿಕತನವುಳ್ಳ ಹತಾಶೆ ಇವುಗಳ ಜೊತೆಗೆ ಇವೆಲ್ಲವನ್ನು ಬದಲಾಯಿಸಬೇಕು ಎನ್ನುವ, ‘ಇನ್ನೊಂದುಜಗತ್ತು ಸಾಧ್ಯವಿದೆ ಎನ್ನುವ ನೈತಿಕವಾದ ನಂಬಿಕೆ ಈ ಬರಹಗಳಲ್ಲಿದೆ. ಎಂ.ಜಿ. ಹೆಗಡೆಯವರ ಮಾಂತ್ರಿಕ ಅನುವಾದವು ದಟ್ಟವಾದ, ಸಂಕೀರ್ಣವಾದ ಅನುಭವಗಳನ್ನು ಕನ್ನಡದಲ್ಲಿಅದ್ಭುತವಾಗಿ ಹಿಡಿದುಕೊಡುತ್ತದೆ. ನನಗಂತೂ ಈ ಕೃತಿಯನ್ನುಓದಿದ್ದು ಇಳಿವಯಸ್ಸಿನಲ್ಲಿ ದೊರೆತ ಶಿಕ್ಷಣವಾಗಿದೆ.

– ಡಾ. ರಾಜೇಂದ್ರಚೆನ್ನಿ

ಒರ್ಫಿಯಸ್‌ನ ಹಾಡು

ಬಹಳ ಹಿಂದೆ–ಎಷ್ಟೆಂದರೆ ಐತಿಹಾಸಿಕ ಯುಗಗಳಲ್ಲಿಅಲ್ಲ, ಪೌರಾಣಿಕ ಕಲ್ಪಗಳಲ್ಲಿ- ಒರ್ಫಿಯಸ್‌ತನ್ನ ಪ್ರೀತಿಯ ಯುರಿಡಿಸಿಯನ್ನು ಮೃತ್ಯುಲೋಕದಿಂದ ಮರಳಿ ತರಲು ಹೋರಾಟ ನಡೆಸಿದ. ಮೃತ್ಯು ದೇವತೆಯು ಒರ್ಫಿಯಸ್‌ಗೆ ಯುರಿಡಿಸಿಯನ್ನು ಹಿಂತಿರುಗಿಸಲು ಒಪ್ಪಿದ. ಆದರೆ ಅವಳು ಅವನನ್ನು ಅನುಸರಿಸಿಕೊಂಡು ಹೋಗುತ್ತಿರುವಾಗ ನಿಜಕ್ಕೂ ಅವಳು ತನ್ನನ್ನು ಹಿಂಬಾಲಿಸುತ್ತಿರುವಳೆ ಎಂದು ಅವನು ಹಿಂತಿರುಗಿ ನೋಡುವಂತಿಲ್ಲಎಂದು ಷರತ್ತು ವಿಧಿಸಿದ. ಒರ್ಫಿಯಸ್‌ ಕತ್ತಲೆಯಚಿಂನ ಜಗತ್ತಿನಿಂದ ಹೊರಬಂದಾಗ ಯುರಿಡಿಸಿ ದಿಟವಾಗಿಯೂ ತನ್ನನ್ನು ಹಿಂಬಾಲಿಸಿ ಬರುತ್ತಿದ್ದಾಳೆ ಎಂಬ ನಂಬಿಕೆಯ ಬಲದ ಮೇಲೇ ಕವನಗಳನ್ನು ರಚಿಸಿ ಪಟ್ಟಿಯಾಗಿ ಹಾಡುತ್ತಿದ್ದ– ಯುರಿಡಿಸಿಗೆ ತನ್ನೆದೆಯ ತವಕ ತಲ್ಲಣಗಳ ನಿವೇದನೆ; ಪ್ರಿಯತಮೆಯನ್ನು ಮೃತ್ಯುಮುಖದಿಂದ ರಕ್ಷಿಸಿ ತಂದಯ ಶೋಕಗೀತೆಯಾಗಿ; ಅದೆಲ್ಲಕ್ಕಿಂತ, ಯುರಿಡಿಸಿ ವಾಸ್ತವವಾಗಿಯೂ ತನ್ನನ್ನು ಹಿಂಬಾಲಿಸುತ್ತಿರುವುದು ಹೌದೇ ಎಂಬ ಆಂತಕವನ್ನು ಗೆಲ್ಲುವ ಉಪಾಚಿಂತವಾಗಿ. ಅವನ ದೈವಿಕ ಸಂಗೀತಕ್ಕೆ ಮರುಳಾಗಿ ಲಕ್ಷಂತರ ಹಕ್ಕಿಗಳು ಯುರಿಡಿಸಿಯನ್ನು ಹಿಂಬಾಲಿಸಿದವೆಂದು ಹೇಳುತ್ತಾರೆ. ಅವುಗಳ ಕಿವಿಯಿಂಪದು ಸಂಗೀತ; ಅದರೆ ಒರ್ಫಿಯಸ್‌ಗೆ ಅದು ಯಾತನೆಗೀತೆ; ಹಾಗೆಯೇ ನಂಬಿಕೆಯಘೋಷಣೆ! ಒರ್ಫಿಯಸ್‌ನ ಆ ಹಾಡು ಪ್ರತಿಯೊಬ್ಬ ಪ್ರವರ್ತಕನ ಕ್ರಿಯೆಯಲ್ಲೂ ಪ್ರತಿಧ್ವನಿಸುತ್ತ…

– ಗಣೇಶ್‌ದೇವಿ (ಒರ್ಫಿಯಸ್‌ನ ಹಾಡು)


ಇದನ್ನೂ ಓದಿ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...