Homeಮುಖಪುಟಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

- Advertisement -
- Advertisement -

ಬಹುಶಃ ಇಪ್ಪತ್ತನೇ ಶತಮಾನದಲ್ಲಿ ಸಾರ್ವಜನಿಕ ಜೀವನದಲ್ಲಿದ್ದವರಲ್ಲಿ ಅತ್ಯಂತ ಹೆಚ್ಚು ಶಿಕ್ಷಿತರಾದವರು ಎಂದರೆ ಡಾ. ಬಿ ಆರ್ ಅಂಬೇಡ್ಕರ್ ಎಂಬ ವಾಸ್ತವವನ್ನು ಅನೇಕ ಸಲ ಕಡೆಗಣಿಸಲಾಗಿದೆ. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಜೊತೆಗೆ ಪಿಎಚ್‌ಡಿ ಕೂಡ ಮಾಡಿದ್ದರು, ಅದರೊಂದಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಎಂ.ಎಸ್.ಸಿ ಮತ್ತು ಡಿಎಸ್‌ಸಿ ಪದವೀಧರರು ಹಾಗೂ ಲಂಡನ್‌ನ ಲಾ ಆಫ್ ದಿ ಗ್ರೇ ಇನ್‌ನಲ್ಲಿ ವಕೀಲರಾಗಿ ತರಬೇತಿ ಪಡೆದಿದ್ದರು. ಶೋಷಿತ ಜಾತಿಯಿಂದ ಹುಟ್ಟಿದ ಕಾರಣಕ್ಕೆ ಸಾಮಾಜಿಕ ಅಡೆತಡೆಗಳನ್ನು ಎದುರಿಸಬೇಕಾಗಿದ್ದರಿಂದ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಇಪ್ಪತ್ತನೇ ಶತಮಾನದ ಮೊದಲಿನ ಆ ವರ್ಷಗಳಲ್ಲಿ ಜಾತಿ ಮಲಿನತೆಯ ಪರಿಕಲ್ಪನೆ ಎಷ್ಟು ಗಟ್ಟಿಯಾಗಿತ್ತೆಂದರೆ ಅಂಬೇಡ್ಕರ್ ಅವರಂತಹ ಮೇಧಾವಿ ವಿದ್ಯಾರ್ಥಿಗೂ ಅವುಗಳನ್ನು ಸುಲಭವಾಗಿ ಮುರಿಯಲು ಸಾಧ್ಯವಿರಲಿಲ್ಲ.

14ನೇ ಏಪ್ರಿಲ್ 1891 ರಂದು ಮಧ್ಯಪ್ರದೇಶದ ಮಹುವಿನಲ್ಲಿ ಅಂಬೇಡ್ಕರ್ ಹುಟ್ಟಿದ್ದು, ಅವರ ತಂದೆ ರಾಮಜಿ ಸಕ್‌ಪಾಲ್ ಅವರು ಭಾರತೀಯ ಸೈನ್ಯದಲ್ಲಿ ಸುಬೇದಾರ್ ಹುದ್ದೆಯಲ್ಲಿದ್ದರು. ಅಂಬೇಡ್ಕರ್ ರಾಮಜಿ ಸಕ್‌ಪಾಲ್ ಅವರ ಹದಿನಾಲ್ಕು ಮಕ್ಕಳಲ್ಲಿ ಕೊನೆಯವರಾಗಿದ್ದರು. ಇವರ ಮೂಲ ಊರು ಅಂಬಾವಡೆ ಆಗಿದ್ದರಿಂದ ಶಾಲೆಯಲ್ಲಿಯ ಶಿಕ್ಷಕರೊಬ್ಬರು ಭೀಮರಾವ್ ಅವರ ಹೆಸರನ್ನು ಅಂಬೇಡ್ಕರ್ ಎಂದು ಬದಲಿಸಿದರು. ಶಾಲಾದಿನಗಳು ಅತ್ಯಂತ ಕಷ್ಟಕರವಾಗಿದ್ದರೂ ಬಾಬಾಸಾಹೇಬ್ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ1908ರಲ್ಲಿ ಉತ್ತೀರ್ಣರಾದರು. ನಂತರ ಬಾಂಬೆಯ ಎಲ್ಫಿನ್ಸ್ಟೋನ್ ಕಾಲೇಜಿನಿಂದ 1912ರಲ್ಲಿ ಪದವಿ ಪಡೆದರು. ಅದೇ ವರ್ಷ ಅವರ ತಂದೆ ತೀರಿಕೊಂಡರು. ಹಾಗೂ ಅದೇ ವರ್ಷ ಸರ್ ಸಯಾಜಿರಾವ್ ಗಾಯಕವಾಡ್ ಅವರು ನೀಡುವ ವಿದ್ಯಾರ್ಥಿವೇತನಕ್ಕೆ ಅವರನ್ನು ಆಯ್ಕೆ ಮಾಡಲಾಯಿತು. ತಿಂಗಳಿಗೆ 11 ಪೌಂಡ್ 6 ಶಿಲಿಂಗ್ಸ್‌ನ ಆ ವಿದ್ಯಾರ್ಥಿವೇತನದಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯಲು ನ್ಯೂಯಾರ್ಕ್‌ನಲ್ಲಿಯ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಹೋಗಲು ಅನುವು ಮಾಡಿಕೊಟ್ಟಂತಾಯಿತು. ಅಲ್ಲಿ ಅವರು ಎಂ.ಎ. ಪದವಿ ಮಾತ್ರವಲ್ಲದೆ, ’ನ್ಯಾಷನಲ್ ಡಿವಿಡೆಂಡ್ ಫಾರ್ ಇಂಡಿಯಾ: ಅ ಹಿಸ್ಟಾರಿಕಲ್ ಆಂಡ್ ಅನಾಲಿಟಿಕಲ್ ಸ್ಟಡಿ’ ಎಂಬ ಪ್ರಬಂಧವನ್ನು ಬರೆದು ಡಾಕ್ಟರೇಟ್ ಕೂಡ ಪಡೆದರು.

ಕೊಲಂಬಿಯಾದ ಅವರ ಅಧ್ಯಯನದ ಸಮಯದಲ್ಲಿಯೇ ಯುರೋಪಿನ ಹಲವಾರು ದೇಶಗಳಲ್ಲಿ ಭೀಕರ ಯುದ್ಧ ಶುರುವಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ನಂತರ ಮೊದಲ ವಿಶ್ವಯುದ್ಧ ಎಂದು ಕರೆಯಲಾದ ಈ ಯುದ್ಧವು ವಿಶ್ವದೆಲ್ಲೆಡೆ ಹಲವಾರು ದೇಶಗಳ ಮೇಲೆ ಪರಿಣಾಮ ಬೀರಿತು. ಬಹುತೇಕ ದೇಶಗಳ ಆರ್ಥಿಕತೆ ನರಳುವಂತೆ ಮಾಡಿತ್ತು. ಅದರ ಪರಿಣಾಮವಾಗಿ, ಅಂಬೇಡ್ಕರ್ ಅವರ ವೈಯುಕ್ತಿಕ ಜೀವನದಲ್ಲೂ ಬದಲಾವಣೆಗಳಾದವು. ಅವರ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲಾಗಿ, ಅವರು ಭಾರತಕ್ಕೆ ಮರಳುವಂತಾಯಿತು. ಸಯ್ಯಾಜಿರಾವ್ ಅವರ ಬಗ್ಗೆ ಹೊಂದಿದ್ದ ಕೃತಜ್ಞತಾಭಾವದಿಂದ ಅಂಬೇಡ್ಕರ್ ಅವರು ಬರೋಡಾ ಸ್ಟೇಟ್ ಸರ್ವೀಸ್‌ನಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಹಾಗೂ ಅವರಿಗೆ ಮಹಾರಾಜರ ರಾಜಕೀಯ ಕಾರ್ಯದರ್ಶಿಯ ಹುದ್ದೆಯನ್ನು ನೀಡಲಾಯಿತು.

ಆದರೆ ನ್ಯೂಯಾರ್ಕ್‌ನಲ್ಲಿ ಸೆಲಿಗ್ಮಾನ್, ಕ್ಲಾರ್ಕ್, ಸೀಗರ್, ಮೂರ್, ಮಿಶೆಲ್, ಚಾಡ್‌ವಿಕ್, ಸಿಮ್‌ಕೋವಿಚ್, ಗಿಡಿಂಗ್ಸ್ ಮತ್ತು ಡ್ಯೂ ಅವರಂತಹ ಗಣ್ಯ ಚಿಂತಕರ ಅಡಿಯಲ್ಲಿ ಅಧ್ಯಯನ ಮಾಡಿ, ಅವರೊಂದಿಗೆ ಅಂತಾರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದ ಅಂಬೇಡ್ಕರ್ ಅವರಿಗೆ ಬರೋಡಾದಲ್ಲಿ ತಾರತಮ್ಯ ಮತ್ತು ಅವಮಾನ ಅನುಭವಿಸಬೇಕಾಗಿ ಬಂತು. ಮೊದಲನೆಯದಾಗಿ, ಬರೋಡಾದಲ್ಲಿ ಅವರನ್ನು ಬರಮಾಡಿಕೊಳ್ಳಲು ಯಾರೂ ಬರಲಿಲ್ಲ ಹಾಗೂ ಅವರ ಸಹಾಯಕರು ಅವರ ಆದೇಶಗಳನ್ನು ಪಾಲಿಸುವಲ್ಲಿ ಹಿಂಜರಿಕೆ ತೋರುತ್ತಿದ್ದರು. ಅದಕ್ಕಿಂತ ಮುಖ್ಯವಾಗಿ, ಅವರಿಗೆ ಕೊಡಬೇಕಾಗಿದ್ದ ಸರಕಾರಿ ಬಂಗಲೆಯ ಸಲುವಾಗಿ ಕಾಯಬೇಕಾದಾಗ ಅವರಿಗೆ ಬರೋಡಾದಲ್ಲಿ ಒಂದು ಸರಳ ವಸತಿಯನ್ನು ಹುಡುಕುವುದು ಅಸಾಧ್ಯವಾಯಿತು.

ಬರೋಡಾ ತಲುಪಿದ ನಂತರ ತಮಗೆ ಯಾರು ವಸತಿ ನೀಡಬಲ್ಲರು ಎಂದು ಚಿಂತಿಸುತ್ತಾ ಹೋಟೆಲ್‌ಗಳನ್ನು ಹುಡುಕತೊಡಗಿದರು. ಹಿಂದೂ ಹೋಟೆಲ್‌ಗಳು ಅವರನ್ನು ನಿರಾಕರಿಸುತ್ತವೆ ಎಂದು ಅವರಿಗೆ ತಿಳಿದಿತ್ತು. ಹಾಗಾಗಿ ಅವರು ಕೆಲವು ಪಾರ್ಸಿ ಹೋಟೆಲ್‌ಗಳಿಗೆ ಹೋಗಿ ಪ್ರಯತ್ನಿಸಿದರು ಆದರೆ ಅವೆಲ್ಲವುಗಳು ಕೇವಲ ಪಾರ್ಸಿ ವ್ಯಕ್ತಿಗಳಿಗೆ ಮಾತ್ರ ಮೀಸಲಿರುವುದು ಅವರಿಗೆ ಶೀಘ್ರವೇ ತಿಳಿಯಿತು. ಬೇರೆ ದಾರಿ ಕಾಣದೇ, ಒಂದು ಪಾರ್ಸಿ ಹೋಟೆಲ್‌ನ ಮಾಲೀಕರಿಗೆ ಮನವಿ ಮಾಡಿಕೊಂಡಾಗ, ಯಾರಿಗೂ ಗೊತ್ತಾಗದಂತೆ ರಹಸ್ಯವಾಗಿ ಅಲ್ಲಿರಬೇಕೆಂಬ ಷರತ್ತಿನೊಂದಿಗೆ ಅಲ್ಲಿ ವಾಸಿಸಲಾರಂಭಿಸಿದರು. ಇತರ ಪಾರ್ಸಿಗಳಿಗೆ ಗೊತ್ತಾದರೆ ಈ ಹೊಟೆಲ್‌ಗೆ ಬಹಿಷ್ಕಾರ ಹಾಕಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡಬೇಕಾಯಿತು. ಇದು ತಾತ್ಕಾಲಿತ ಸಮಸ್ಯೆ ಎಂದು, ಸರಕಾರಿ ಬಂಗಲೆ ತಮಗೆ ಸಿಗುವುದೆಂದು ಅವರು ತಮ್ಮ ವಾಸ್ತವ್ಯ ಶುರು ಮಾಡಿದರು ಆದರೆ, ಅಲ್ಲಿನ ವಾಸ್ತವ್ಯ ಶೀಘ್ರವೇ ದುರಂತದಲ್ಲಿ ಕೊನೆಗೊಳ್ಳುವುದೆಂದು ಅವರಿಗೆ ಗೊತ್ತಿರಲಿಲ್ಲ. ಅವರ ಅಧಿಕೃತ ಸ್ಥಾನಕ್ಕೆ ಆ ಜಾಗ ತಕ್ಕುದಾಗಿರಲಿಲ್ಲ. ಎರಡು ದಶಕಗಳ ನಂತರ ಅಂಬೇಡ್ಕರ್ ಅವರು ಈ ತಮ್ಮ ಅನುಭವದ ಬಗ್ಗೆ ಹೀಗೆ ಬರೆದರು.

“ಆ ಹೋಟೆಲ್‌ನ ಮೊದಲ ಮಹಡಿಯಲ್ಲಿ ಒಂದು ಪುಟ್ಟ ಬೆಡ್‌ರೂಮ್ ಇತ್ತು, ಅದಕ್ಕೆ ಹೊಂದಿಕೊಂಡು ಒಂದು ಬಚ್ಚಲು, ಅದರಲ್ಲಿ ನೀರಿಗಾಗಿ ಒಂದು ನಳ. ಆ ಮಹಡಿಯಲ್ಲಿ ಮಿಕ್ಕದ್ದೆಲ್ಲಾ ಒಂದು ದೊಡ್ಡ ಹಾಲ್. ಆಗ ಆ ಹಾಲ್‌ನಲ್ಲಿ ಎಲ್ಲಾ ರೀತಿಯ ಕಸ ತುಂಬಿತ್ತು, ಮುರುಕು ಕುರ್ಚಿಗಳು, ಬೆಂಚ್‌ಗಳು, ಹಲಗೆಗಳು ಇತ್ಯಾದಿ. ಇಂತಹ ವಾತಾವರಣದ ನಡುವೆ ನಾನೊಬ್ಬನೇ ಏಕಾಂಗಿಯಾಗಿ ಇರುತ್ತಿದ್ದೆ. ಅಲ್ಲಿಯ ಸಹಾಯಕ ಬೆಳಗ್ಗೆ ಒಂದು ಕಪ್ ಚಹಾದೊಂದಿಗೆ ಬರುತ್ತಿದ್ದ. 9.30ಗೆ ಮತ್ತೆ ತಿಂಡಿಯೊಂದಿಗೆ ಅಥವಾ ಬೆಳಗ್ಗಿನ ಊಟದೊಂದಿಗೆ ಬರುತ್ತಿದ್ದ. ಆತ ಮೂರನೇ ಬಾರಿ ಸಂಜೆ 8.30ಕ್ಕೆ ರಾತ್ರಿಯ ಊಟದೊಂದಿಗೆ ಬರುತ್ತಿದ್ದ. ಆತ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಮೇಲೆ ಬರುತ್ತಿದ್ದ ಹಾಗೂ ಬಂದಾಗಲೆಲ್ಲ ಒಂದೂ ಮಾತನಾಡದೇ ಹೋಗುತ್ತಿದ್ದ. ಹೇಗೋ ದಿನ ಕಳೆಯುತ್ತಿತ್ತು.

ನನ್ನನ್ನು ಬರೋಡಾದ ಮಹಾರಾಜರು ಅಕೌಂಟೆಂಟ್ ಜೆನರಲ್ ಆಫೀಸಿನಲ್ಲಿ ಪ್ರೊಬೇಷನರ್ ಆಗಿ ನೇಮಿಸಿದ್ದರು. ನಾನು ಬೆಳಗ್ಗೆ ಹತ್ತು ಗಂಟೆಗೆ ಹೋಟೆಲ್ ಬಿಡುತ್ತಿದ್ದೆ ಹಾಗೂ ಸಂಜೆ ತಡವಾಗಿ ಸುಮಾರು 8 ಗಂಟೆಗೆ ಮರಳುತ್ತಿದ್ದೆ. ಗೆಳೆಯರೊಂದಿಗೆ ಆ ಹೋಟೆಲ್‌ನ ಹೊರಗೇ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದೆ. ಆ ಹೋಟೆಲ್‌ಗೆ ಹೋಗಿ, ಅಲ್ಲಿ ರಾತ್ರಿ ಕಳೆಯುವ ಕಲ್ಪನೆಯೇ ನನಗೆ ಭೀಕರವಾಗಿತ್ತು. ನನಗೆ ವಿಶ್ರಾಂತಿ ಪಡೆಯಲು ಬೇರೆಲ್ಲೂ ಅವಕಾಶವಿಲ್ಲದ ಕಾರಣಕ್ಕಾಗಿ ನಾನು ಹೋಟೆಲ್‌ಗೆ ಮರಳುತ್ತಿದ್ದೆ.

ಮೊದಲ ಮಹಡಿಯ ದೊಡ್ಡ ಹಾಲ್‌ನಲ್ಲಿ ಮಾತನಾಡಿಸಲು ಯಾವ ಮನುಷ್ಯರೂ ಇರುತ್ತಿರಲಿಲ್ಲ. ನಾನು ತುಂಬಾ ಏಕಾಂಗಿಯಾಗಿದ್ದೆ. ಇಡೀ ಹಾಲ್ ಕತ್ತಲೆಯಿಂದ ಆವರಿಸಿಕೊಂಡಿತ್ತು. ಅಲ್ಲಿ ವಿದ್ಯುತ್ ದೀಪಗಳನ್ನು ಬಿಡಿ, ಕತ್ತಲೆಯನ್ನು ಹೊಡೆದೋಡಿಸಲು ಎಣ್ಣೆದೀಪಗಳೂ ಇದ್ದಿಲ್ಲ. ಅಲ್ಲಿಯ ಸಹಾಯಕ ಗಾಜು ಹೊಂದಿದ್ದ ಒಂದು ಚಿಕ್ಕ ಬುಡ್ಡಿ ದೀಪವನ್ನು ನನ್ನ ಸಲುವಾಗಿ ತರುತ್ತಿದ್ದ. ಅದರ ಬೆಳಕು ಒಂದೆರಡು ಇಂಚಿನ ಮುಂದೆ ಬೀಳುತ್ತಿರಲಿಲ್ಲ. ನಾನೊಂದು, ಕತ್ತಲಕೋಣೆಯಲ್ಲಿದ್ದೇನೆ ಎಂದು ಭಾಸವಾಗುತ್ತಿತ್ತು. ನಾನು ಮಾತನಾಡಿಸಲು ಮನುಷ್ಯರ ಸಾಂಗತ್ಯಕ್ಕೆ ಹಾತೊರೆಯುತ್ತಿದ್ದೆ. ಆದರೆ ಅಲ್ಲಿ ಯಾರೂ ಇದ್ದಿಲ್ಲ. ಮನುಷ್ಯಜೀವಿಗಳ ಅನುಪಸ್ಥಿತಿಯಲ್ಲಿ ನಾನು ಪುಸ್ತಕಗಳ ಮೊರೆ ಹೋದೆ ಹಾಗೂ ನಿರಂತರವಾಗಿ ಓದಿದೆ”.

ಈ ಹೇಯ ಮತ್ತು ವಿಚಿತ್ರ ವ್ಯವಸ್ಥೆಯ ಹನ್ನೊಂದನೆಯ ದಿನದಂದು ಪಾರ್ಸಿ ಸಮುದಾಯದ ಇತರ ಸದಸ್ಯರು ಅಂಬೇಡ್ಕರ್ ಅವರ ವಾಸ್ತವ್ಯದ ಬಗ್ಗೆ ತಿಳಿದುಕೊಂಡರು ಹಾಗೂ ಯಾವುದೇ ಮುಲಾಜು ತೋರದೆ, ಜಾಗವನ್ನು ಖಾಲಿ ಮಾಡಬೇಕೆಂದು ಆದೇಶಿಸಿದರು. ಆ ಅವಮಾನ ಮತ್ತು ನೋವು ಡಾ. ಅಂಬೇಡ್ಕರ್ ಅವರಿಗೆ ಸಹಿಸಲಾಗಲಿಲ್ಲ ಹಾಗೂ ಅದೇ ದಿನ ರಾತ್ರಿ ಬಾಂಬೆಗೆ ಹೋಗುವ 9 ಗಂಟೆಯ ರೈಲನ್ನು ಹಿಡದರು. ಬಾಂಬೆಗೆ ಮರಳಿದ ನಂತರ ಅವರು ಕೋಲ್ಹಾಪುರದ ಶಾಹು ಮಹಾರಾಜರ ಸಂಪರ್ಕಕ್ಕೆ ಬಂದರು ಹಾಗೂ ಒಂದು ಜಾತಿರಹಿತ ಸಮಾಜವನ್ನು ಸೃಷ್ಟಿಸುವ ಕೆಲಸದಲ್ಲಿ ಸಕ್ರಿಯರಾದರು ಹಾಗೂ ಅದೇ ಮುಂದೆ ಅವರ ಜೀವನದ ಗುರಿಯಾಯಿತು. ಮತ್ತೆ ಯುದ್ಧ ಮುಗಿದ ನಂತರ ಲಂಡನ್‌ಗೆ ಹೋಗಿ ಕಾನೂನು ಪದವಿ ಒಳಗೊಂಡು ಉನ್ನತ ಶಿಕ್ಷಣ ಮುಂದುವರೆಸಬೇಕೆಂದು ನಿರ್ಧರಿಸಿದರು. ಮುಂದೆ ಅವರು ಸಮಾಜದ ಅಂಚಿನಲ್ಲಿರುವ ಶೋಷಿತ ಮತ್ತು ವಂಚಿತ ಸಮುದಾಯಕ್ಕೆ ಭಾರತದ ಇತಿಹಾಸ ಕಂಡ ಶ್ರೇಷ್ಠ ವಕ್ತಾರರಾದರು. ಆದರೆ, ನಂತರದ ಯಾವ ಘಟನೆಗಳೂ ಅವರನ್ನು ಬರೋಡಾಗೆ ಮರಳುವಂತೆ ಮಾಡಲಿಲ್ಲ. ಆದಾಗ್ಯೂ, ಬರೋಡಾದಲ್ಲಿ ಕೆಲಸ ಮಾಡಿದ ದಿನಗಳ ಸಮಯದಲ್ಲಿ ಅಸಮಾನತೆ ಮತ್ತು ತಾರತಮ್ಯದ ಕಹಿ ಅನುಭವಗಳು ಅವರ ಸಾಮಾಜಿಕ ಕಾರ್ಯಕ್ಕೆ ಒಂದು ರೀತಿಯ ತುರ್ತಿನಲ್ಲಿ ಪ್ರಚೋದನೆಯನ್ನು ನೀಡಿದವು ಎಂದು ಹೇಳಬಹುದಾಗಿದೆ. ಸಯ್ಯಾಜಿರಾವ್ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ನೀತಿಗಳ ಬಗ್ಗೆ ಅಂಬೇಡ್ಕರ್ ಅವರಿಗೆ ಅರಿವಿತ್ತು. ಹಾಗೂ ಸ್ವಾಭಾವಿಕವಾಗಿಯೇ ಎಲ್ಲಾ ಜಾತಿ, ವರ್ಗ, ಧರ್ಮ, ಭಾಷೆ, ಸಂಸ್ಕೃತಿ, ಲಿಂಗ ಹಾಗೂ ಆರ್ಥಿಕ ಹಿನ್ನೆಲೆಯ ನಾಗರಿಕರಿಗೆ ಸಮಾನತೆ ಮತ್ತು ಘನತೆಯನ್ನು ನೀಡಿದ ನಮ್ಮ ಸಂವಿಧಾನವನ್ನು ರಚಿಸಿದಾಗ ಈ ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಂಡಿದ್ದರು.

(ಬರೋಡಾ ಆಲ್ ಇಂಡಿಯಾ ರೇಡಿಯೋಗೆ ಜಿ ಎನ್ ದೇವಿಯವರು ನೀಡಿದ ಉಪನ್ಯಾಸವಿದು)

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...