Homeಕರ್ನಾಟಕಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

ಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

- Advertisement -
- Advertisement -

ಪುಟ್ಟ ಪುಟ್ಟ ಅಲಕ್ಷಿತ ಸಮುದಾಯಗಳು ಈಗಲೂ ಈ ಸಂವಿಧಾನವೇ ಒದಗಿಸಿದ ಮೀಸಲು ಸೌಲಭ್ಯದಿಂದ ವಂಚಿತರಾಗುತ್ತಿವೆ. ಜನಪ್ರತಿನಿಧಿಗಳನ್ನು ಯಾಮಾರಿಸಬಲ್ಲ ಕೆಲವು ಆಧಿಕಾರಿಗಳು ಯಾವುದೋ ತಾಂತ್ರಿಕ ನೆಪ ಒಡ್ಡುತ್ತ ಇಂತಹ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಅಂತಹುದೇ ಘಟನೆ ಗದಗ ಜಿಲ್ಲೆಯಲ್ಲಿಯೂ ನಡೆದಿದೆ.

ಶತಮಾನಗಳ ಕಾಲ ಹೊಟ್ಟೆಪಾಡಿಗಾಗಿ ಕಳ್ಳತನವನ್ನೇ ಕಾಯಕವಾಗಿ ಮಾಡಿಕೊಂಡಿದ್ದ ಗಂಟಿಚೋರ್ ಸಮುದಾಯ ಕ್ರಮೇಣ ಸಮಾಜದ ಭಾಗವಾಗಿ ಶ್ರಮದ ಕಾಯಕದಲ್ಲಿ ನಿರತವಾಗಿದೆ. ಈಗಲೂ ಅಧಿಕಾರಸ್ಥರು ಮತ್ತು ಪೊಲೀಸ್ ವ್ಯವಸ್ಥೆ, ಇದೆಲ್ಲದಕ್ಕೂ ಮುಖ್ಯವಾಗಿ ಮೇಲ್ಜಾತಿಯ ಸಮುದಾಯಗಳು ಈ ಸಮುದಾಯವನ್ನು ಅಪರಾಧಿಗಳು ಎಂಬಂತೆ ಚಿತ್ರಿಸುತ್ತಿವೆ. ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಈ ಸಣ್ಣ ಸಮುದಾಯ ಎಸ್‍ಸಿ ಸಮುದಾಯ ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆಹೊಸೂರು ಗ್ರಾಮದ ಗಂಟಿಚೋರ್ ಸಮುದಾಯಕ್ಕೆ 2015ರಿಂದ ಎಸ್‍ಸಿ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತ ಸತಾಯಿಸುತ್ತಿದೆ. ಇದರ ಮೂಲ ಹುಡುಕುತ್ತ ಹೋದರೆ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಯವರ ಸೇಡಿನ ಆಟಕ್ಕೆ ಈ ಸಮುದಾಯ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.

ಗಂಟಿಚೋರ್ ಸಮುದಾಯಕ್ಕೆ ಎಸ್‍ಸಿ ಮೀಸಲು ಇದೆ, ಅದು ಅವರ ಹಕ್ಕು, ಅದನ್ನು ಸಂವಿಧಾನದ ಅನುಸಾರವೇ ಅವರಿಗೆ ನೀಡಲಾಗಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗಂಟಿಚೋರರಿಗೆ 2015ರಿಂದ ಎಸ್‍ಸಿ ಜಾತಿ ಪ್ರಮಾಣವನ್ನು ನೀಡಲು ಶಿರಹಟ್ಟಿ ತಾಲೂಕಾ ಆಡಳಿತ ನಿರಾಕರಿಸತೊಡಗಿದೆ. ಸತತ ಐದು ವರ್ಷಗಳಿಂದ ತಮ್ಮ ಹಕ್ಕಿಗಾಗಿ ಹೋರಾಡುತ್ತ ಬಂದಿದ್ದರೂ ತಾವುದೋ ತಾಂತ್ರಿಕ ನೆಪ ಒಡ್ಡುವ ತಾಲೂಕಾ ಆಡಳಿತ ಜಿಲ್ಲಾಡಳಿತದತ್ತ ಕೈ ತೋರಿಸುತ್ತಿದೆ.

ಜಿಲ್ಲಾಡಳಿತಕ್ಕೆ ಕೇಳಿದರೆ, ಜಾತಿ ಪರಿಶೀಲನಾ ಸಮಿತಿಗೆ ಈ ವಿಷಯವನ್ನು ವರ್ಗಾಯಿಸುತ್ತೇವೆ, ಸದ್ಯದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತದೆ. ಸಾಕು ಸಾಕಾದ ಗಂಟಿಚೋರ್ ಸಮುದಾಯದ ಜನ ಎರಡು ದಿನಗಳ ಕಾಲ ಶಿರಹಟ್ಟಿ ತಹಶೀಲ್ದಾರ್ ಕಚೇರಿ ಮುಂದೆ ಟೆಂಟು ಹಾಕಿ ಪ್ರತಿಭಟನೆ ನಡೆಸಿದರು. ಮೊನ್ನೆ (ಬುಧವಾರ) ಧರಣಿನಿರತರನ್ನು ಭೇಟಿಯಾದ ತಹಶಿಲ್ದಾರ್ ಕೋರಿಶೆಟ್ಟರು, ಖಂಡಿತ ಸದ್ಯದಲ್ಲೇ ಎಲ್ಲ ಸರಿ ಹೋಗುತ್ತೆ. ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು. ಪ್ರತಿಭಟನಾಕಾರರು ಜಗ್ಗದೇ ಇದ್ದಾಗ ನೇರವಾಗಿ ಜಿಲ್ಲಾಧಿಕಾರಿ ಹಿರೇಮಠರಿಗೆ ಫೋನ್ ಮಾಡಿ, ಸ್ಪೀಕರ್ ಆನ್ ಮಾಡಿ ಮಾತಾಡಿದರು. ಜಿಲ್ಲಾಧಿಕಾರಿ ಕೂಡ ಪರಿಶೀಲಿಸಿ ನ್ಯಾಯ ಒದಗಿಸುತ್ತೇವೆ ಎಂದರು.

ಆಗಿನ ಜಿಲ್ಲಾಧಿಕಾರಿ ನೀಡಿದ್ದ ಪತ್ರ

ಇಲ್ಲಿ ನಿಜಕ್ಕೂ ತಾಂತ್ರಿಕ ಸಮಸ್ಯೆ ಇದೆಯೇ? ಇಲ್ಲವೇ ಇಲ್ಲ. ಹಾಗಂತ ಒಂದು ಹಂತದಲ್ಲಿ 2014ರಲ್ಲಿ ಅದನ್ನು ಹುಟ್ಟು ಹಾಕಲಾಗಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರ ಬಹಿರಂಗ ಸೂಚನೆಯಂತೆ ಅಂದಿನ ಜಿಲ್ಲಾಧಿಕಾರಿ ಅಧ್ಯಯನ ಕೈಗೊಂಡು, ಗಂಟಿಚೋರರಿಗೆ ಮತ್ತು ಅದೇ ಸಮುದಾಯದವರಾಗಿದ್ದು ಗಿರಣಿ ವಡ್ಡರ್, ಗಂಟಿಚೋರ್ ಇಂತಹ ಅಡ್ಡಹೆಸರು ಇರುವವರಿಗೆಲ್ಲ ಎಸ್‍ಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಮಾಡಿದ್ದರು. ನಂತರ ಜಿಲ್ಲಾಧಿಕಾರಿಯಾಗಿ ಬಂದ ದರ್ಪಣ್ ಜೈನ್ ಮೇಲೆ ಶಿರಹಟ್ಟಿ ತಾಲೂಕಿನ ಲಿಂಗಾಯತ ಮಠದ ಭಕ್ತರು ಕೆಲವು ರಾಜಕಾರಣಿಗಳಿಂದ ಒತ್ತಡ ಹಾಕಿಸಿದರು. ಜಿಲ್ಲಾಧಿಕಾರಿ ಇದನ್ನು ಆಯುಕ್ತರ ಕಚೇರಿಗೆ ವರ್ಗಾಯಿಸಿದರು. ಜಾತಿ ಪರಿಶೀಲನಾ ಸಮಿತಿಯ ಸದಸ್ರೆಲ್ಲರೂ ಸಹಿ ಹಾಕಿರಲಿಲ್ಲ ಎಂಬ ನೆಪ ಒಡ್ಡಿ ಮತ್ತೆ ಈ ವಿಷಯವನ್ನು ಜಾತಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಯಿತು.

ಪ್ರತಿವರ್ಷ ಕಾಲೇಜು ಪ್ರವೇಶ, ನೇಮಕಾತಿ ಅಧಿಸೂಚನೆ ಬಂದಾಗ ಯುವಕರು ಪರದಾಡುವುದೇ ಆಗಿತು. ಶಿರಹಟ್ಟಿಯ ಹಿಂದಿನ ತಹಶೀಲ್ದಾರ್ ವೆಂಕಟೇಶ ನಾಯ್ಕ್ ಅಂತೂ ತಮ್ಮ ಲಂಬಾಣಿ ಸಮುದಾಯಕ್ಕೆ ಅವಕಾಶ ಕಡಿಮೆ ಆಗಬಹುದು ಎಂಬ ಭ್ರಮೆಯಿಂದ ಇನ್ನಷ್ಟು ವ್ಯತಿರಿಕ್ತವಾಗಿ ವರ್ತಿಸಿದರು. ಈ ಸಲ ಗಟ್ಟಿ ನಿರ್ಧಾರ ಮಾಡಿದ ಶಿರಹಟ್ಟಿಯ ಗಂಟಿಚೋರ್ ಸಮುದಾಯ ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ತಹಶಿಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲೆಯ ಗಮನ ಸೆಳೆದ ಮೇಲಷ್ಟೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೂಡಲೇ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿ ಕೊಡುವುದಾಗಿ ಭರವಸೆ ನೀಡಿದೆ.

ಆದರೆ, ಈಗಲೂ ಗಂಟಿಚೋರ್ ಸಮುದಾಯಕ್ಕೆ ಈ ಭರವಸೆ ಬಗ್ಗೆ ನಂಬಿಕೆ ಇಲ್ಲ. ಅವರೀಗ ಇಂಥದ್ದೇ ಸಮಸ್ಯೆ ಎದುರಿಸುತ್ತಿರುವ ನರಗುಂದ ತಾಲೂಕಿನ ಗಂಟಿಚೋರ್ ಸಮುದಾಯದವರನ್ನು ಜೊತೆಗೆ ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡಲು ಅಣಿಯಾಗುತ್ತಿದ್ದಾರೆ.

ಈ ಸಮಸ್ಯೆಯ ಮೂಲ ದಿಂಗಾಲೇಶ್ವರ ಎಂಬ ಸ್ವಾಮೀಜಿ!
ಗದಗ ಜಿಲ್ಲೆಯ ಇತರ ತಾಲೂಕುಗಳಲ್ಲಿರುವ ಗಂಟಿಚೋರ್ ಸಮುದಾಯದವರಿಗೆ ಎಸ್‍ಸಿ ಪ್ರಮಾಣ ಪತ್ರ ಪಡೆಯವ ಯಾವುದೇ ತಾಂತ್ರಿಕ ಅಡೆತಡೆ ಆಗಿಲ್ಲ. ಗೋಕಾಕ್, ಬಾಗಲಕೋಟೆ, ಕೊಪ್ಪಳ ಮತ್ತು ಹುಬ್ಬಳ್ಳಿ ಸುತ್ತಮುತ್ತ ಇರುವ ಗಂಟಿಚೋರರಿಗೂ ಈ ಸಮಸ್ಯೆ ಕಾಡಿಲ್ಲ. ಆದರೆ ಶಿರಹಟ್ಟಿಯ ಅದರಲ್ಲೂ ಬಾಲೆಹೊಸೂರು ಗ್ರಾಮದ ಗಂಟಿಚೊರರಿಗಷ್ಟೇ 2015ರಿಂದ ಈ ಸಮಸ್ಯೆ ಕಾಡಲು ಶುರುವಾಗಿದೆ. ಅದಕ್ಕೆ ಮೂಲ ಕಾರಣ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ.

ದಿಂಗಾಲೇಶ್ವರ ಸ್ವಾಮಿ

2014ರಲ್ಲಿ ಲಿಂಗಾಯತ ಸ್ವಾಮಿ ದಿಂಗಾಲೇಶ್ವರರ ಮಠ ತನ್ನ ವ್ಯಾಪ್ತಿಯನ್ನು ಬೆಳೆಸಲು ಬಾಲೆಹೊಸೂರಿನ ಕೆರೆಯೊಂದನ್ನು ಇಡಿಯಾಗಿ ಆಕ್ರಮಿಸಿಕೊಳ್ಳುತ್ತದೆ. ಸಂಖ್ಯೆ ಮತ್ತು ಜಾತಿ ಸ್ಥಾನದಲ್ಲಿ ಪ್ರಬಲರಾಗಿರುವ ಲಿಂಗಾಯತ ಸಮುದಾಯದ ಕೆಲವು ಪುಡಾರಿಗಳ ಬೆಂಬಲ, ಆ ಮೂಲಕ ಕೆಲವು ಲಿಂಗಾಯತ ರಾಜಕಾರಣಿಗಳ ಬೆಂಬಲ ಹೊಂದಿದ ದಿಂಗಾಲೇಶ್ವರ ಸ್ವಾಮೀಜಿಯ ಈ ಒತ್ತುವರಿಯನ್ನು ಪಂಚಾಯತಿ ಮತ್ತು ತಾಲೂಕಾ ಆಡಳಿತ ಪ್ರಶ್ನಿಸಲೇ ಇಲ್ಲ. ಮಠದ ತೇರಿನ ಮೆರವಣಿಗೆಯನ್ನು ವಿಸ್ತರಿಸಲು ಮತ್ತು ಮಠದ ಮುಂಭಾಗ ಇನ್ನಷ್ಟು ಭವ್ಯವಾಗಿ ಕಾಣಲು ಯೋಜನೆ ರೂಪಿಸಿದ ಸ್ವಾಮೀಜಿ ಅದಕ್ಕೆ ಅಡ್ಡಿಯಾಗಿದ್ದ ಸಾರ್ವಜನಿಕ ರಸ್ತೆಯನ್ನೇ ಆಕ್ರಮಿಸಲು ಹೊರಟರು. ಈ ಒತ್ತುವರಿಯಿಂದ ಹಲವಾರು ಬಡ ಗಂಟಿಚೋರರ ಕುಟುಂಬಗಳ ಮನೆಗಳೇ ವಿನಾಶದ ಭಿತಿಗೆ ಒಳಗಾದಾಗ ಗಂಟಿಚೋರ್ ಸಮುದಾಯ ಇದರ ಧ್ವನಿ ಎತ್ತಿ ಕಾನೂನು ಹೋರಾಟಕ್ಕೆ ಮುಂದಾಗಿತು. ಕೋರ್ಟಿನಲ್ಲಿ ತಮ್ಮ ಅತಿಕ್ರಮಣಕ್ಕೆ ಅವಕಾಶ ಸಿಗದು ಎಂದು ಅರಿತ ಸ್ವಾಮೀಜಿ ಕೆಲವು ಹುಂಬ ಲಿಂಗಾಯತ, ಕುರುಬ ಮತ್ತು ಇತರೆ ದಲಿತ ಪುಡಾರಿಗಳ ಮೂಲಕ ಜನರನ್ನು ಗಂಟಿಚೋರರ ವಿರುದ್ಧ ಎತ್ತಿ ಕಟ್ಟಿದರು.

ಇದರ ಪರಿಣಾಮವಾಗಿ ಗಂಟಿಚೋರರ ಮೇಲೆ ಹಲ್ಲೆಗಳಾಗಲು ಶುರುವಾದವು. 2015ರಲ್ಲಿ ಸ್ವಾಮಿಯ ಪ್ರಚೋದನೆಯಿಂದ ದೊಡ್ಡ ಗುಂಪೊಂದು ರಾತ್ರೋ ರಾತ್ರಿ ಗಂಟಿಚೋರರ ಮನೆ ಹೊಕ್ಕು ಮಹಿಳೆ ಮಕ್ಕಳೆನ್ನದೇ ಥಳಿಸುತ್ತ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತ ಸಾಗಿತು. ಏನಾಗುತ್ತಿದೆ ಎಂದು ನೋಡಲು ಹೊರಬಂದ ವೃದ್ಧ ಮಾಂತಪ್ಪ ಗುಡಗೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಆಯಿತು. ಮರುದಿನ ಇಡೀ ಬಾಲೆಹೊಸೂರು ಪ್ರಕ್ಷುಬ್ದತೆಗೆ ಒಳಗಾಗಿತು.

ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ಗಂಟಿಚೋರ್ ಸಮುದಾಯದ ಹಿರಿಯರು ಮತ್ತು ಯುವಕರು ಸ್ವಾಮಿ ವಿರುದ್ಧ ಕೊಲೆಪ್ರಯತ್ನ ದೂರು ದಾಖಲಿಸಿದರು. ಸ್ವಾಮಿ ರಾತ್ರೋರಾತ್ರಿ ಪರಾರಿಯಾದರು. ಬಂಧನದ ಭೀತಿಯಿಂದ ಭೂಗತರಾದರು. ಆಗಲೇ ಸ್ವಾಮಿಗೆ ಯಾವನೋ ಒಬ್ಬ ಕ್ರಿಮಿನಲ್ ಐಡಿಯಾ ಕೊಟ್ಟ. ಬಾಲೆಹೊಸುರಿನಲ್ಲಿ ಇರುವ ಗಂಟಿಚೋರರೆಲ್ಲ ನಿಜವಾಗಿಯೂ ಗಂಟಿಚೋರರಲ್ಲ. ಗಿರಣಿ ವಡ್ಡರ್ ಎಂಬ ಸರ್‍ನೇಮ್ ( ಅಡ್ಡ ಹೆಸರು) ಇರುವವರೆಲ್ಲಾ ನಕಲಿ ಗಂಟಿಚೋರರಾಗಿದ್ದು, ಇವರೆಲ್ಲ ಎಸ್‍ಸಿ ಸಮುದಾಯದ ಸವಲತ್ತನ್ನು ಬಾಚಿಕೊಳ್ಳುತ್ತಿದ್ದಾರೆ ಎಂದು ಕೆಲವರನ್ನು ಮುಂದೆ ಕಳಿಸಿ ಕೋರ್ಟಿಗೆ ಅರ್ಜಿ ಹಾಕಿಸಿದ. ಇದನ್ನೇ ನೆಪ ಮಾಡಿಕೊಂಡ ಜಿಲ್ಲಾಡಳಿತ ತಟಸ್ಥ ಸ್ಥಿತಿಗೆ ಬಂದಿತು. ಆದರೆ ಇದರ ವಿರುದ್ದ ಗಂಟಿಚೋರರು ಪ್ರಗತಿಪರರ ನೇತೃತ್ವದಲ್ಲಿ ಅನಿರತ ಹೋರಾಟ ಮಾಡಿದಾಗ ಎಚ್‍ಕೆ ಪಾಟೀಲರು ಮತ್ತು ಅಂದಿನ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಕಾಳಜಿ ವಹಿಸಿದ್ದರಿಂದ ಗಿರಣಿ ವಡ್ಡರ್ ಸೇರಿದಂತೆ ಹಾಗೆ ಹೋಲುವ ಅಡ್ಡ ಹೆಸರಿನ ಎಲ್ಲರಿಗೂ ಎಸ್‍ಸಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಹೊರಬಿತ್ತು. ಮುಂದೆ ಪ್ರಸನ್ನಕುಮಾರ್ ವರ್ಗಾ ಆಗಿ ಹೋದರು. ನಂತರ ಬಂದ ಡಿಸಿಗಳ ಮೇಲೆ ದಿಂಗಾಲೇಶ್ವರ ಸ್ವಾಮಿಯ ಪುಡಾರಿ ಭಕ್ತರು ಒತ್ತಡ ಹಾಕಿ ಈ ವಿಷಯ ನೆನೆಗುದಿಗೆ ಬರುವಂತೆ ಮಾಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣಕುಮಾರ್ ಜೋಳದಕೂಡ್ಲಿಗಿ ಅವರಿಂದ ನಡೆಸಿದ ಸಂಶೋಧನೆಯಲ್ಲೂ ಈ ವಿಷಯದ ಬಗ್ಗೆ ಸಾಕಷ್ಟು ದಾಖಲೆಗಳನ್ನು ಒದಗಿಸಿದ್ದು, ಗಿರಣಿ ವಡ್ಡರ್ ಸೇರಿದಂತೆ ಇತರ ಹೆಸರಿನ ಎಲ್ಲ ಗಂಟಿಚೋರರೂ ಎಸ್‍ಸಿ ಸಮುದಾಯಕ್ಕೆ ಸೇರಿದವರು, ಇದಕ್ಕೆ ಸಂವಿಧಾನದ ಆಸರೆಯಿದೆ ಎಂದು ಸಾಬೀತು ಮಾಡಲಾಗಿದೆ.

ಆದರೂ, ಈಗಲೂ ಜಿಲ್ಲಾಡಳಿತ ಗಂಟಿಚೋರ್ ಎಂಬ ಸಣ್ಣ ಜನಸಂಖ್ಯೆ ಸಮುದಾಯಕ್ಕೆ. ಅದೂ ಮುಖ್ಯವಾಗಿ ಬಾಲೆ ಹೊಸೂರಿನ ಸಮುದಾಯಕ್ಕೆ ಕಾಟ ಕೊಡುತ್ತಿದೆ ಎಂದರೆ ಏನರ್ಥ? ಕೊಲೆ ಆರೋಪಿ ದಿಂಗಾಲೇಶ್ವರ ಸ್ವಾಮಿಯ ಒತ್ತಡವೇ ಅಲ್ಲವೇ?

ಜಿಲ್ಲಾಧಿಕಾರಿ ಹಿರೇಮಠರು ಇಂತಹ ಒತ್ತಡಕ್ಕೆ ಒಳಗಾಗಿರುವ ಸಂಶಯ ಕಾಣುತ್ತಿದೆ. ಗಂಟಿಚೋರರಿಗೆಲ್ಲ ಎಸ್‍ಸಿ ಪ್ರಮಾಣಪತ್ರ ಕೊಡಬೇಕು ಎಂಬ ಆದೇಶ ಬರಲು ಕಾರಣವಾಗಿದ್ದ ಎಚ್‍ಕೆ ಪಾಟೀಲರು ಈ ಬಗೆ ಕೂಡಲೇ ಗಮನ ಹರಿಸಬೇಕಾಗಿದೆ. ಶಿರಹಟ್ಟಿಯ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕೂಡ ಸ್ವಾಮಿಯ ಬೆಂಬಲಕ್ಕೆ ಇದ್ದಾರೆ ಎಂಬ ಮಾತೂ ಇದೆ.

ಆದಷ್ಟು ಬೇಗ ಈ ವಿಷಯದಲ್ಲಿ ಗಂಟಿಚೋರರಿಗೆ ನ್ಯಾಯ ಸಿಗಲೇಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರ ಹೋರಾಟ ನಡೆಸಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...

ವಿಬಿ-ಜಿ ರಾಮ್ ಜಿ ಮಸೂದೆ ‘ರಾಜ್ಯ ವಿರೋಧಿ’ ಮತ್ತು ‘ಗ್ರಾಮ ವಿರೋಧಿ’: ರಾಹುಲ್ ಗಾಂಧಿ

ಎರಡು ದಶಕಗಳ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಒಂದೇ ದಿನದಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...