Homeಮುಖಪುಟರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

ರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

‘ಗಾಂಧೀಜಿಯವರು ಪಂಚೆ ಮಾತ್ರವೇ ತನ್ನ ಉಡುಗೆಯೆಂದು ನಿರ್ಧರಿಸಿ ನೂರು ವರ್ಷವಾಯಿತು’ ಎಂದು ರಾಮ್‌ರಾಜ್‌ ಸಂಸ್ಥೆ ನೀಡಿರುವ ಜಾಹೀರಾತು ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

- Advertisement -
- Advertisement -

‘ಪಂಚೆ ಮಾತ್ರವೇ ತನ್ನ ಉಡುಗೆಯೆಂದು ಗಾಂಧೀಜಿಯವರು ಘೋಷಿಸಿ ನೂರು ವರ್ಷಗಳಾಯಿತು’ ಎಂದು ರಾಮ್‌ರಾಜ್‌ ಕಾಟನ್‌ ಸಂಸ್ಥೆ ನೀಡಿರುವ ಜಾಹೀರಾತು (ಸೆ.22, ಬುಧವಾರ) ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

‘ಪ್ರಜಾವಾಣಿ’ ದಿನಪತ್ರಿಕೆಯ ಮುಖಮುಖಪುಟದಲ್ಲಿ ಪ್ರಕಟವಾಗಿರುವ ಜಾಹೀರಾತನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕ ಓದುಗರು, ಜಾಹೀರಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಅನೇಕರು ಇದು ಬಂಡವಾಳಶಾಹಿ ವ್ಯವಸ್ಥೆಯ ವ್ಯಾಪಾರಿ ಗುಣವಷ್ಟೇ ಎಂದು ಟೀಕಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಬಳಿಯ ಜವಳಿ ನಗರವೆಂದೇ ಖ್ಯಾತವಾದ ತಿರುಪುರದಲ್ಲಿ 1983ರಲ್ಲಿ ಸ್ಥಾಪನೆಯಾದ ರಾಮ್‌ರಾಜ್‌, ಇಂದು ಭಾರತದಲ್ಲಿ ಮನೆಮಾತಾಗಿರುವ ಬ್ರಾಂಡ್‌ಗಳಲ್ಲಿ ಒಂದಾಗಿದೆ. ದೋತಿ, ಅಂಗಿಗಳು, ಒಳ ಉಡುಪುಗಳು ಇತ್ಯಾದಿ ಉತ್ಪನ್ನಗಳಿಗೆ ರಾಮ್‌ರಾಜ್‌ ಅಚ್ಚುಮೆಚ್ಚಾಗಿದೆ. ಇಂದು ನೀಡಿರುವ ಜಾಹೀರಾತಿನಲ್ಲಿ ಗಾಂಧೀಜಿಯವರ ‘ಪಂಚೆ ಪ್ರೀತಿ’ಯನ್ನು ಸ್ಮರಿಸಲಾಗಿದೆ.

ಜಾಹೀರಾತಿನಲ್ಲಿ ಇರುವುದೇನು?

“ಕಳೆದ 100 ವರ್ಷಗಳ ಹಿಂದೆ ಇದೇ ದಿನದಂದು ತಮಿಳುನಾಡಿನ ಮಧುರೈ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಪಂಚೆ ಮಾತ್ರವೇ ಇನ್ನು ತನ್ನ ಉಡುಗೆಯೆಂದು ನಿರ್ಧರಿಸಿದ, ಮಾನವೀಯತೆ ತುಂಬಿದ ಮಹಾನ್‌ ವ್ಯಕ್ತಿ ಮಹಾತ್ಮಾ ಗಾಂಧೀಜಿಯರಿಗೆ ರಾಮ್‌ರಾಜ್‌ನ ಹೆಮ್ಮೆಯ ಸೆಲ್ಯೂಟ್‌”

ನನ್ನ ಜೀವನದ ಹಾದಿಯಲ್ಲಿ ನಾನು ತೆಗೆದುಕೊಂಡ ಎಲ್ಲಾ ಬದಲಾವಣೆಗಳೂ ಮುಖ್ಯವಾದ ಘಟನೆಳಿಂದಲೇ ನಡೆದಿವೆ. ಈ ನಿರ್ಣಯಗಳು ಆಳವಾದ ಆಲೋಚನೆಯ ನಂತರ ತೆಗೆದುಕೊಂಡವುಗಳು. ಆದುದರಿಂದ ನಾನು ಬೇಸರಗೊಳ್ಳ ಬೇಕಾದುದೇನೂ ಇಲ್ಲ. ನನ್ನಿಂದ ಮಾಡಲು ಸಾಧ್ಯವಾದ ಒಂದೇ ಒಂದು ಸಹಾಯ ನಾನು ತೆಗೆದುಕೊಂಡ ಈ ನಿರ್ಧಾರವೇ. ಮಧುರೈಯಲ್ಲಿ ನನ್ನ ಉಡುಪಿನಲ್ಲಿ ನಾನು ತೆಗೆದುಕೊಂಡ ಈ ಬದಲಾವಣೆಯ ಪರಿಣಾಮವಾಗಿ ನಂತರ ಪಂಚೆ ನನ್ನ ಗುರುತಾಗಿಯೇ ಪರಿಣಮಿಸಿತು.

– ಗಾಂಧೀಜಿ

‘ಪಂಚೆ ನನ್ನ ಗುರುತು’ ಎಂದು ನೀವು ಹೇಳಿದ ನುಡಿಯನ್ನೇ ವೇದವಾಕ್ಯದಂತೆ ಅನುಸರಿಸಿ, 40 ವರ್ಷಗಳಿಂದಲೂ ಪಂಚೆಯನ್ನು ಭಾರತದ ಗುರುತನ್ನಾಗಿಸಿದ್ದು ಮಾತ್ರವಲ್ಲದೆ, ಸಾವಿರಾರು ನೇಕಾರರ ಜೀವನಾಧಾರವನ್ನೂ ಉನ್ನತಮಟ್ಟಕ್ಕೇರಿಸಿದ, ‘ರಾಮ್‌ರಾಜ್‌’ ಎನ್ನುವ ಹೆಮ್ಮೆಯನ್ನು ನಿಮ್ಮ ಪಾದಕಮಲಗಳಿಗೆ ಅರ್ಪಿಸುತ್ತೇವೆ.

– ಇದು ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಸಾರಾಂಶ.

ಜನರ ಪ್ರತಿಕ್ರಿಯೆ

ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತಿನ ಪೋಟೋ ಹಂಚಿಕೊಂಡು, “ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಜಾಹೀರಾತು
ಯಾಕೋ ನನಗಿಷ್ಟವಾಯಿತು
” ಎಂದು ಚಿಂತಕ, ಕಲಾವಿದ ಗಿರಿಧರ್‌ ಕಾರ್ಕಳ ಅವರು ತಮ್ಮ ಎಫ್‌.ಬಿ. ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನನಗೂ ಖಷಿಯಾಯಿತು ಗಿರಿಧರ್. ಅದರೇ ಸಲ್ಪ ಭಯವೂ ಆಯಿತು, ಎಲ್ಲದರೂ ಗಡ್ಡಪ್ಪನ ಪೋಟೋ ಇರಬಹುದೋ ಎಂದು, ಆದರೆ ಇರಲಿಲ್ಲ ಬಚಾವ್’ ಎಂದು ಉದ್ಯಾವರ ನಾಗೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಲಿಂಗ ಸಮಾನತೆ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್‌ ಜಾಹೀರಾತಿಗೆ ಭರಪೂರ ಮೆಚ್ಚುಗೆ

“ಎಲ್ಲಿ ಸ್ವಲ್ಪ ಸುಳ್ಳು ಕೂಡಾ ಇದೆ . ಅದು 100% ಖಾದಿ ಅಲ್ವಾ? ರಾಮ್‌ರಾಜ್ ಆ ಬಗೆಯದ್ದೇ?” ಎಂದು ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ ಪ್ರತಿಕ್ರಿಯಿಸಿದ್ದು, “ಪಂಚೆ ಎಂದಷ್ಟೇ ಉಲ್ಲೇಖಿಸಿರೋದ್ರಿಂದ ನಾವೂ ಪಂಚೆಯ ಕುರಿತೇ ಪಂಚಾತಿಕೆ ಮಾಡೋಣ ಅಲ್ವಾ?” ಎಂದು ಗಿರಿಧರ್‌ ಪ್ರತಿಕ್ರಿಯಿಸಿದ್ದಾರೆ.

ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರ ಸಂತತಿ ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದಾರೆ. ಹೀಗಾಗಿ ರಾಮ್‌ರಾಮ್‌ ಜಾಹೀರಾತು ದುರಿತ ಕಾಲದ ಹೊಸ ಭರವಸೆ ಎಂಬುದು ಅನೇಕರ ಮನದಾಳ.

ಜಾಹೀರಾತಿನ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ. “ಬಂಡವಾಳಶಾಹಿ ಗುಣ ಅದು. ಚಾಲ್ತಿಯಲ್ಲಿರುವ ಎಲ್ಲ ಸಾಂಕೇತಿಕ ಭಾಷೆಗಳನ್ನು, ಸಂಕೇತಗಳನ್ನು ಮತ್ತು ರೂಪಕಗಳನ್ನು ತನ್ನದಾಗಿಸಿಕೊಳ್ಳುತ್ತಾ ವಿಸ್ತರಿಸಿಕೊಳ್ಳುವುದು ಬಂಡವಾಳದ ಲಕ್ಷಣ. ರಾಮರಾಜ್ ಅದನ್ನೇ ಮಾಡಿದೆ ನಾಳೆ ಅದಾನಿ ಅಂಬಾನಿ ಸಹ ಇದನ್ನೇ ಅನುಕರಿಸುತ್ತಾರೆ” ಎಂದು ಚಿಂತಕ ನಾ.ದಿವಾಕರ್‌ ಅಭಿಪ್ರಾಯ ತಾಳಿದ್ದಾರೆ.

ಲೈಂಗಿಕ ರೋಗಗಳ ತಜ್ಞರಾದ ನಡಹಳ್ಳಿ ವಸಂತ್‌ ಪ್ರತಿಕ್ರಿಯಿಸಿದ್ದು, “ವಿಪರ್ಯಾಸವೆಂದರೆ ಗಾಂಧೀಜಿಯೂ ಕಾರ್ಪೋರೇಟ್‌ ಆಸ್ತಿಯಾಗುತ್ತಿದ್ದಾರೆ. ಕೈಮಗ್ಗವನ್ನು ಸ್ವಾಭಿಮಾನದ ಆರ್ಥಿಕ ಸ್ವಾವಲಂಬನೆಯ ಗುರುತಾಗಿ ಪ್ರಾರಂಭಿಸಿದ್ದರು ಗಾಂಧೀಜಿ. ಇವರ ಹೆಸರನ್ನು ಯಂತ್ರಗಳಿಂದ ತಯಾರಿಸುವ ಕಾರ್ಪೋರೇಟ್‌ಗಳು ಬಳಸುತ್ತಿದ್ದಾರೆ. ಎಲ್ಲರೂ ದುರಪಯೋಗ ಪಡಿಸಿಕೊಂಡಮೇಲೂ ಗಾಂಧಿ ಎನ್ನುವ ಹೆಸರು ಪರಿಶುದ್ಧವಾಗಿಯೇ ಉಳಿಯುತ್ತದೆ’ ಎಂದಿದ್ದಾರೆ.

ಒಟ್ಟಾರೆ ಜಾಹೀರಾತಿಯ ಸಂದೇಶ ತಾತ್ವಿಕವಾಗಿ ಒಳ್ಳೆಯದಿದ್ದರೂ ವ್ಯಾಪಾರಿ ಮನೋಭಾವದ ಆಯಾಮಗಳನ್ನು ಅಲ್ಲಗಳೆಯುವಂತಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯಲ್ಲಿ ಕಾರ್ಪೊರೇಟ್‌ ವ್ಯವಸ್ಥೆಯನ್ನು ಗಾಂಧಿ ಒಪ್ಪುವುದಿಲ್ಲ ಎನ್ನುವವರ ವಾದದಲ್ಲಿ ಉರುಳಿದೆ.


ಇದನ್ನೂ ಓದಿ: ಸರಕಾರಿ ಜಾಹೀರಾತು 100% ಕಡಿತ: ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...