Homeಮುಖಪುಟರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

ರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

‘ಗಾಂಧೀಜಿಯವರು ಪಂಚೆ ಮಾತ್ರವೇ ತನ್ನ ಉಡುಗೆಯೆಂದು ನಿರ್ಧರಿಸಿ ನೂರು ವರ್ಷವಾಯಿತು’ ಎಂದು ರಾಮ್‌ರಾಜ್‌ ಸಂಸ್ಥೆ ನೀಡಿರುವ ಜಾಹೀರಾತು ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

- Advertisement -
- Advertisement -

‘ಪಂಚೆ ಮಾತ್ರವೇ ತನ್ನ ಉಡುಗೆಯೆಂದು ಗಾಂಧೀಜಿಯವರು ಘೋಷಿಸಿ ನೂರು ವರ್ಷಗಳಾಯಿತು’ ಎಂದು ರಾಮ್‌ರಾಜ್‌ ಕಾಟನ್‌ ಸಂಸ್ಥೆ ನೀಡಿರುವ ಜಾಹೀರಾತು (ಸೆ.22, ಬುಧವಾರ) ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

‘ಪ್ರಜಾವಾಣಿ’ ದಿನಪತ್ರಿಕೆಯ ಮುಖಮುಖಪುಟದಲ್ಲಿ ಪ್ರಕಟವಾಗಿರುವ ಜಾಹೀರಾತನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕ ಓದುಗರು, ಜಾಹೀರಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಅನೇಕರು ಇದು ಬಂಡವಾಳಶಾಹಿ ವ್ಯವಸ್ಥೆಯ ವ್ಯಾಪಾರಿ ಗುಣವಷ್ಟೇ ಎಂದು ಟೀಕಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಬಳಿಯ ಜವಳಿ ನಗರವೆಂದೇ ಖ್ಯಾತವಾದ ತಿರುಪುರದಲ್ಲಿ 1983ರಲ್ಲಿ ಸ್ಥಾಪನೆಯಾದ ರಾಮ್‌ರಾಜ್‌, ಇಂದು ಭಾರತದಲ್ಲಿ ಮನೆಮಾತಾಗಿರುವ ಬ್ರಾಂಡ್‌ಗಳಲ್ಲಿ ಒಂದಾಗಿದೆ. ದೋತಿ, ಅಂಗಿಗಳು, ಒಳ ಉಡುಪುಗಳು ಇತ್ಯಾದಿ ಉತ್ಪನ್ನಗಳಿಗೆ ರಾಮ್‌ರಾಜ್‌ ಅಚ್ಚುಮೆಚ್ಚಾಗಿದೆ. ಇಂದು ನೀಡಿರುವ ಜಾಹೀರಾತಿನಲ್ಲಿ ಗಾಂಧೀಜಿಯವರ ‘ಪಂಚೆ ಪ್ರೀತಿ’ಯನ್ನು ಸ್ಮರಿಸಲಾಗಿದೆ.

ಜಾಹೀರಾತಿನಲ್ಲಿ ಇರುವುದೇನು?

“ಕಳೆದ 100 ವರ್ಷಗಳ ಹಿಂದೆ ಇದೇ ದಿನದಂದು ತಮಿಳುನಾಡಿನ ಮಧುರೈ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಪಂಚೆ ಮಾತ್ರವೇ ಇನ್ನು ತನ್ನ ಉಡುಗೆಯೆಂದು ನಿರ್ಧರಿಸಿದ, ಮಾನವೀಯತೆ ತುಂಬಿದ ಮಹಾನ್‌ ವ್ಯಕ್ತಿ ಮಹಾತ್ಮಾ ಗಾಂಧೀಜಿಯರಿಗೆ ರಾಮ್‌ರಾಜ್‌ನ ಹೆಮ್ಮೆಯ ಸೆಲ್ಯೂಟ್‌”

ನನ್ನ ಜೀವನದ ಹಾದಿಯಲ್ಲಿ ನಾನು ತೆಗೆದುಕೊಂಡ ಎಲ್ಲಾ ಬದಲಾವಣೆಗಳೂ ಮುಖ್ಯವಾದ ಘಟನೆಳಿಂದಲೇ ನಡೆದಿವೆ. ಈ ನಿರ್ಣಯಗಳು ಆಳವಾದ ಆಲೋಚನೆಯ ನಂತರ ತೆಗೆದುಕೊಂಡವುಗಳು. ಆದುದರಿಂದ ನಾನು ಬೇಸರಗೊಳ್ಳ ಬೇಕಾದುದೇನೂ ಇಲ್ಲ. ನನ್ನಿಂದ ಮಾಡಲು ಸಾಧ್ಯವಾದ ಒಂದೇ ಒಂದು ಸಹಾಯ ನಾನು ತೆಗೆದುಕೊಂಡ ಈ ನಿರ್ಧಾರವೇ. ಮಧುರೈಯಲ್ಲಿ ನನ್ನ ಉಡುಪಿನಲ್ಲಿ ನಾನು ತೆಗೆದುಕೊಂಡ ಈ ಬದಲಾವಣೆಯ ಪರಿಣಾಮವಾಗಿ ನಂತರ ಪಂಚೆ ನನ್ನ ಗುರುತಾಗಿಯೇ ಪರಿಣಮಿಸಿತು.

– ಗಾಂಧೀಜಿ

‘ಪಂಚೆ ನನ್ನ ಗುರುತು’ ಎಂದು ನೀವು ಹೇಳಿದ ನುಡಿಯನ್ನೇ ವೇದವಾಕ್ಯದಂತೆ ಅನುಸರಿಸಿ, 40 ವರ್ಷಗಳಿಂದಲೂ ಪಂಚೆಯನ್ನು ಭಾರತದ ಗುರುತನ್ನಾಗಿಸಿದ್ದು ಮಾತ್ರವಲ್ಲದೆ, ಸಾವಿರಾರು ನೇಕಾರರ ಜೀವನಾಧಾರವನ್ನೂ ಉನ್ನತಮಟ್ಟಕ್ಕೇರಿಸಿದ, ‘ರಾಮ್‌ರಾಜ್‌’ ಎನ್ನುವ ಹೆಮ್ಮೆಯನ್ನು ನಿಮ್ಮ ಪಾದಕಮಲಗಳಿಗೆ ಅರ್ಪಿಸುತ್ತೇವೆ.

– ಇದು ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಸಾರಾಂಶ.

ಜನರ ಪ್ರತಿಕ್ರಿಯೆ

ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತಿನ ಪೋಟೋ ಹಂಚಿಕೊಂಡು, “ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಜಾಹೀರಾತು
ಯಾಕೋ ನನಗಿಷ್ಟವಾಯಿತು
” ಎಂದು ಚಿಂತಕ, ಕಲಾವಿದ ಗಿರಿಧರ್‌ ಕಾರ್ಕಳ ಅವರು ತಮ್ಮ ಎಫ್‌.ಬಿ. ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನನಗೂ ಖಷಿಯಾಯಿತು ಗಿರಿಧರ್. ಅದರೇ ಸಲ್ಪ ಭಯವೂ ಆಯಿತು, ಎಲ್ಲದರೂ ಗಡ್ಡಪ್ಪನ ಪೋಟೋ ಇರಬಹುದೋ ಎಂದು, ಆದರೆ ಇರಲಿಲ್ಲ ಬಚಾವ್’ ಎಂದು ಉದ್ಯಾವರ ನಾಗೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಲಿಂಗ ಸಮಾನತೆ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್‌ ಜಾಹೀರಾತಿಗೆ ಭರಪೂರ ಮೆಚ್ಚುಗೆ

“ಎಲ್ಲಿ ಸ್ವಲ್ಪ ಸುಳ್ಳು ಕೂಡಾ ಇದೆ . ಅದು 100% ಖಾದಿ ಅಲ್ವಾ? ರಾಮ್‌ರಾಜ್ ಆ ಬಗೆಯದ್ದೇ?” ಎಂದು ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ ಪ್ರತಿಕ್ರಿಯಿಸಿದ್ದು, “ಪಂಚೆ ಎಂದಷ್ಟೇ ಉಲ್ಲೇಖಿಸಿರೋದ್ರಿಂದ ನಾವೂ ಪಂಚೆಯ ಕುರಿತೇ ಪಂಚಾತಿಕೆ ಮಾಡೋಣ ಅಲ್ವಾ?” ಎಂದು ಗಿರಿಧರ್‌ ಪ್ರತಿಕ್ರಿಯಿಸಿದ್ದಾರೆ.

ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರ ಸಂತತಿ ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದಾರೆ. ಹೀಗಾಗಿ ರಾಮ್‌ರಾಮ್‌ ಜಾಹೀರಾತು ದುರಿತ ಕಾಲದ ಹೊಸ ಭರವಸೆ ಎಂಬುದು ಅನೇಕರ ಮನದಾಳ.

ಜಾಹೀರಾತಿನ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ. “ಬಂಡವಾಳಶಾಹಿ ಗುಣ ಅದು. ಚಾಲ್ತಿಯಲ್ಲಿರುವ ಎಲ್ಲ ಸಾಂಕೇತಿಕ ಭಾಷೆಗಳನ್ನು, ಸಂಕೇತಗಳನ್ನು ಮತ್ತು ರೂಪಕಗಳನ್ನು ತನ್ನದಾಗಿಸಿಕೊಳ್ಳುತ್ತಾ ವಿಸ್ತರಿಸಿಕೊಳ್ಳುವುದು ಬಂಡವಾಳದ ಲಕ್ಷಣ. ರಾಮರಾಜ್ ಅದನ್ನೇ ಮಾಡಿದೆ ನಾಳೆ ಅದಾನಿ ಅಂಬಾನಿ ಸಹ ಇದನ್ನೇ ಅನುಕರಿಸುತ್ತಾರೆ” ಎಂದು ಚಿಂತಕ ನಾ.ದಿವಾಕರ್‌ ಅಭಿಪ್ರಾಯ ತಾಳಿದ್ದಾರೆ.

ಲೈಂಗಿಕ ರೋಗಗಳ ತಜ್ಞರಾದ ನಡಹಳ್ಳಿ ವಸಂತ್‌ ಪ್ರತಿಕ್ರಿಯಿಸಿದ್ದು, “ವಿಪರ್ಯಾಸವೆಂದರೆ ಗಾಂಧೀಜಿಯೂ ಕಾರ್ಪೋರೇಟ್‌ ಆಸ್ತಿಯಾಗುತ್ತಿದ್ದಾರೆ. ಕೈಮಗ್ಗವನ್ನು ಸ್ವಾಭಿಮಾನದ ಆರ್ಥಿಕ ಸ್ವಾವಲಂಬನೆಯ ಗುರುತಾಗಿ ಪ್ರಾರಂಭಿಸಿದ್ದರು ಗಾಂಧೀಜಿ. ಇವರ ಹೆಸರನ್ನು ಯಂತ್ರಗಳಿಂದ ತಯಾರಿಸುವ ಕಾರ್ಪೋರೇಟ್‌ಗಳು ಬಳಸುತ್ತಿದ್ದಾರೆ. ಎಲ್ಲರೂ ದುರಪಯೋಗ ಪಡಿಸಿಕೊಂಡಮೇಲೂ ಗಾಂಧಿ ಎನ್ನುವ ಹೆಸರು ಪರಿಶುದ್ಧವಾಗಿಯೇ ಉಳಿಯುತ್ತದೆ’ ಎಂದಿದ್ದಾರೆ.

ಒಟ್ಟಾರೆ ಜಾಹೀರಾತಿಯ ಸಂದೇಶ ತಾತ್ವಿಕವಾಗಿ ಒಳ್ಳೆಯದಿದ್ದರೂ ವ್ಯಾಪಾರಿ ಮನೋಭಾವದ ಆಯಾಮಗಳನ್ನು ಅಲ್ಲಗಳೆಯುವಂತಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯಲ್ಲಿ ಕಾರ್ಪೊರೇಟ್‌ ವ್ಯವಸ್ಥೆಯನ್ನು ಗಾಂಧಿ ಒಪ್ಪುವುದಿಲ್ಲ ಎನ್ನುವವರ ವಾದದಲ್ಲಿ ಉರುಳಿದೆ.


ಇದನ್ನೂ ಓದಿ: ಸರಕಾರಿ ಜಾಹೀರಾತು 100% ಕಡಿತ: ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...