Homeಮುಖಪುಟ‘ಗಾರ್ಗಿ’ ವಿಮರ್ಶೆ: ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ ಅನಾವರಣ

‘ಗಾರ್ಗಿ’ ವಿಮರ್ಶೆ: ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ ಅನಾವರಣ

- Advertisement -
- Advertisement -

ಲೇಡಿ ಸೂಪರ್‌ ಸ್ಟಾರ್‌ ಎಂದೇ ಖ್ಯಾತರಾದ, ಬಹುಭಾಷಾ ನಟಿ ಸಾಯಿ ಪಲ್ಲವಿ ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ‘ಗಾರ್ಗಿ’ ಸಿನಿಮಾ ಅದರ ಮುಂದುವರಿದ ಭಾಗವಾಗಿ ದಾಖಲಾಗಿದೆ.

ತೆಲುಗು, ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ತೆರೆಕಂಡಿರುವ ‘ಗಾರ್ಗಿ’, ಹೆಣ್ಣಿನ ಮೇಲಾಗುತ್ತಿರುವ ಅನಾದಿಕಾಲದ ಕಿರುಕುಳದ ಕುರಿತು ಮಾತನಾಡುತ್ತದೆ. ‘ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ, ಅಲ್ಲಿ ದೇವತೆಗಳು ನಲೆಸಿರುತ್ತಾರೆ’ ಎಂಬುದೆಲ್ಲ ಬಾಯಿ ಮಾತಿನ ಗೌರವ. ಆದರೆ ಹೆಣ್ಣನ್ನು ಭೋಗದ ವಸ್ತು ಎಂದು ನೋಡುವ ಪುರುಷಪ್ರಧಾನ ಮನಸ್ಥಿತಿಯೇ ವಾಸ್ತವ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಬೇಟಿ ಪಡಾವೋ, ಬೇಟಿ ಬಜಾವೋ’ ಎಂದು ಸರ್ಕಾರವೂ ಹೇಳುತ್ತದೆ. ಹೆಣ್ಣಿನ ರಕ್ಷಣೆಯ ಮೇಲೆ ಮಾಡುವ ಉದ್ದುದ್ದದ ಭಾಷಣಗಳಿಗೆ ಕೊನೆಯೂ ಇಲ್ಲ. ಆದರೆ ಸಮಾಜ ತನ್ನ ಆಂತರ್ಯದಲ್ಲಿ ಇಟ್ಟುಕೊಂಡಿರುವ ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ, ಯಾವಾಗ, ಯಾವ ರೀತಿಯಲ್ಲಿ ಅನಾವರಣವಾಗುತ್ತದೆ ಎಂದು ಹೇಳಲಾಗದು. ನಿರ್ದೇಶಕ ಗೌತಮ್‌ ರಾಮಚಂದ್ರನ್‌ ಈ ಕಹಿ ಸತ್ಯವನ್ನು ಇಲ್ಲಿ ಚರ್ಚಿಸಿದ್ದಾರೆ.

“ಹೆಣ್ಣಿನ ಜಗತ್ತಿನಲ್ಲೇ ಹೆಣ್ಣೇ ಹೆಣ್ಣಿಗೆ ಅಂತಿಮ ಆಸರೆ. ವಿಕೃತ ಜಗತ್ತನ್ನು ಎದುರಿಸಬೇಕಾದರೆ ಹೆಣ್ಣೊಬ್ಬಳು ಇನ್ನೊಬ್ಬ ಹೆಣ್ಣಿನ ಕೈ ಹಿಡಿದು ಸಂಘಟಿತವಾಗಿ ನಡೆಯಬೇಕು. ತನ್ನ ಮೇಲಾಗುವ ದೌರ್ಜನ್ಯವನ್ನು ಯಾವುದೇ ಮರ್ಜಿಗೆ ಒಳಗಾಗದೆ ಮಣಿಸಬೇಕು” ಎಂಬ ಸಂದೇಶವನ್ನು ‘ಗಾರ್ಗಿ’ ಸಿನಿಮಾ ನೀಡುತ್ತದೆ.

ಬಾಲಕಿಯೊಬ್ಬಳ ಮೇಲೆ ನಡೆಯುವ ಗ್ಯಾಗ್ ರೇಪ್‌ವೊಂದರ ಸುತ್ತಲಿನ ಕಥಾ ಹಂದರವನ್ನು ಒಳಗೊಂಡಿರುವ ‘ಗಾರ್ಗಿ’- ಕೋರ್ಟ್ ರೂಮ್‌ ಡ್ರಾಮಾ ಕೂಡ ಹೌದು. ‘ಪೊಲೀಸರು ಬಂಧಿಸಿರುವವರೆಲ್ಲರೂ ತಪ್ಪಿತಸ್ಥರಾ?’ ಎಂಬ ಪ್ರಶ್ನೆಯ ಮೇಲೆ ಸಾಗುವ ಸಿನಿಮಾ ಅಂತಿಮವಾಗಿ ನೀಡುವ ಸಂದೇಶವೂ ಮೌಲಿಕವಾಗಿದೆ. ಹಿತಮಿತವಾದ ಸಿನಿಮ್ಯಾಟಿಕ್‌ ನಿರೂಪಣೆಯಲ್ಲಿ ಸಾಗುವ ಕೆಳ ಮಧ್ಯಮ ವರ್ಗವೊಂದರ ಕಥೆಯನ್ನೊಳಗೊಂಡ ‘ಗಾರ್ಗಿ’ ವಾಸ್ತವಗಳಿಗೆ ಹತ್ತಿರವಾಗಿ ಚಿತ್ರಿತವಾಗಿದೆ.

‘ಗಾರ್ಗಿ’ ಎಂಬ ಹೆಸರಿಗೆ ವಿಶೇಷ ಅರ್ಥವೂ ಇದೆ. ಆಕೆ, ವೇದ ಕಾಲದಲ್ಲಿ ದಾಖಲಾಗಿರುವ ಮಹಿಳಾ ವಿದ್ವಾಂಸೆಯೂ ಹೌದು. ಆರಂಭಿಕ ಮಹಿಳಾವಾದಿಗಳ ಸಾಲಿನಲ್ಲೂ ಆಕೆಯನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘ಗಾರ್ಗಿ’ ಎಂಬ ಹೆಸರಿಗೆ ವಿಶೇಷವಾದ ಅರ್ಥವಂತಿಕೆ ಪ್ರಾಪ್ತವಾಗಿದೆ.

“ಹೆಣ್ಣೆಂದರೆ ಅಬಲೆ, ಆಕೆಯ ಹಣೆಯ ಬರವೇ ಇಷ್ಟು, ಅವಳಿಂದ ಏನೂ ಆಗದು” ಎಂಬ ಸಿದ್ಧಮಾದರಿ ಚೌಕಟ್ಟುಗಳನ್ನು ಶಿಕ್ಷಕಿ ಗಾರ್ಗಿ ಪ್ರಶ್ನಿಸುತ್ತಾಳೆ. “ನೀನು ಹಣೆಬರ, ಕಾಲ, ವಿಧಿ ಎಲ್ಲವನ್ನೂ ನಂಬು. ನನ್ನನ್ನು ಮಾತ್ರ ನಂಬಬೇಡ. ಯಾಕಂದ್ರೆ ನಾನು ಗಂಡು ಹುಡುಗ ಅಲ್ಲ, ಹೆಣ್ಣು ತಾನೇ?” ಎಂದು ತನ್ನ ತಾಯಿಗೆ ಗಾರ್ಗಿ ಬೇಸರದಿಂದ ಕೇಳುತ್ತಾಳೆ. ಸತ್ಯಕ್ಕಾಗಿ ಹೋರಾಡುತ್ತಾಳೆ. ಸತ್ಯ ತಿಳಿದ ಮೇಲೆ ದಿಟ್ಟ ನಿಲುವನ್ನು ತಾಳುತ್ತಾಳೆ.

ಇಲ್ಲಿ ಟ್ರಾನ್ಸ್‌ಜೆಂಡರ್‌ ಮಹಿಳೆಯೊಬ್ಬರು ನ್ಯಾಯಾಧೀಶೆಯಾಗಿದ್ದಾರೆ. ಸಂತ್ರಸ್ತೆಯ ಪರವಾಗಿ ವಾದ ಮಂಡಿಸುತ್ತಿರುವ ವಕೀಲನ ಒರಟು ಮಾತುಗಳಿಗೆ ನ್ಯಾಯಾಧೀಶೆ ತೀಕ್ಷ್ಣವಾಗಿ ಉತ್ತರಿಸುತ್ತಾರೆ. ಅಂತಿಮವಾಗಿ ಸತ್ಯದ ಅನಾವರಣವಷ್ಟೇ ಮುಖ್ಯವಾಗಬೇಕು ಎಂಬುದನ್ನು ಟ್ರಾನ್ಸ್‌ಜೆಂಡರ್‌ ನ್ಯಾಯಾಧೀಶೆ ಮನವರಿಕೆ ಮಾಡಿಕೊಡುತ್ತಾರೆ.

ಒಂದು ಸಣ್ಣ ಎಳೆಯ ಕಥೆಯಾದರೂ ತೀರಾ ಮೈನವಿರೇಳಿಸುವ ರೋಚಕತೆಯನ್ನೇನೂ ಗಾರ್ಗಿ ಒಳಗೊಂಡಿಲ್ಲ. ಅಗತ್ಯಕ್ಕೂ ಮೀರಿ ರೋಚಕತೆಯನ್ನು ಸೇರಿಸಲು ನಿರ್ದೇಶಕರು ಪ್ರಯತ್ನಿಸಿಲ್ಲ. ಬಂಧನಕ್ಕೊಳಗಾದ ತಂದೆಯನ್ನು ಹೊರಗೆ ತರಲು ಒಬ್ಬೊಂಟಿಯಾಗಿ ಹೋರಾಡುವ, ಸತ್ಯದ ಹುಡುಕಾಟಕ್ಕಾಗಿ ಪರಿತಪಿಸುತ್ತಿರುವ ಹೆಣ್ಣು ಮಗಳೊಬ್ಬಳ ತೊಳಲಾಟಗಳನ್ನು ಗಾರ್ಗಿ ಕಟ್ಟಿಕೊಡುತ್ತದೆ. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಆಕೆಯ ಮನೋಬಲ ಚಿತ್ರಕತೆಯಲ್ಲಿ ನಿರೂಪಣೆಗೊಂಡಿದೆ.

ಸೂಕ್ಷ್ಮ ಸಂಗತಿಯೊಂದರ ಸುತ್ತ ಮಾಧ್ಯಮಗಳು ತೋರುವ ಧಾವಂತವನ್ನು ಇಲ್ಲಿಯೂ ನಿಕಶಕ್ಕೊಡ್ಡಿದ್ದರೂ, ಅಂತಿಮ ಜಿಜ್ಞಾಸೆಯಾಗಿ ಅದು ಉಳಿದಿಲ್ಲ. ಮಾಧ್ಯಮಗಳು ತೋರುವುದೆಲ್ಲ ಸತ್ಯವಲ್ಲದಿದ್ದರೂ ಅವುಗಳು ತೋರಿಸುವ ಕೆಲವು ಸಂಗತಿಗಳು ಸತ್ಯವೂ ಆಗಿರಬಹುದು ಎನಿಸುತ್ತದೆ.

ಇದನ್ನೂ ಓದಿರಿ: ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

ಸಾಯಿ ಪಲ್ಲವಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವುದು ಖಚಿತ. ಕನ್ನಡ ವರ್ಷನ್‌ನಲ್ಲಿ ಸಾಯಿ ಪಲ್ಲವಿಯವರೇ ಡಬ್‌ ಮಾಡಿರುವುದು ಇಲ್ಲಿನ ಅಭಿಮಾನಿಗಳಿಗೆ ಮುದ ನೀಡುತ್ತದೆ. ಅತ್ಯಾಚಾರಿ ಆರೋಪಿಯಾಗಿ ಅಭಿನಯಿಸಿರುವ ಆರ್‌.ಎಸ್‌.ಶಿವಾಜಿ, ತಣ್ಣನೆಯ ಕ್ರೌರ್ಯವನ್ನು ಪರಿಚಯಿಸುತ್ತಾರೆ. ವಕೀಲನಾಗಿ ಕಾಳಿ ವೆಂಕಟ್‌, ಪತ್ರಕರ್ತೆಯಾಗಿ ಐಶ್ವರ್ಯ ಲಕ್ಷ್ಮಿ, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯ ಪಾತ್ರದಲ್ಲಿ ಸರವಣ್‌ ಅಭಿನಯಿಸಿದ್ದಾರೆ.

ಹಿನ್ನೆಲೆ ಸಂಗೀತ ಮತ್ತಷ್ಟು ತೀವ್ರವಾಗಿಸಬಹುದಿತ್ತು ಎನಿಸುತ್ತದೆ. ಸಿನಿಮಾದಲ್ಲಿ ಬಳಸಿರುವ ಬಿಟ್ ಸಾಂಗ್‌ಗಳು ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ‘ಗಾರ್ಗಿ’ಯ ಪ್ರಿಯಕರನ ಪಾತ್ರ- ಹಾಗೆ ಬಂದು ಹೀಗೆ ಹೋದಂತೆ ಭಾಸವಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರದಂತಹ ವ್ಯವಸ್ಥೆಯನ್ನು ಅತ್ಯಂತ ಬಾಲಿಷವಾಗಿ ತೋರಿಸಿದ್ದಾರೆನಿಸುತ್ತದೆ. ಇಂತಹ ದೃಶ್ಯಗಳಿಂದಾಗಿ ನ್ಯಾಯಾಂಗದ ನೆರವಿನ ಕುರಿತು ಜನರಲ್ಲಿ ಕೆಟ್ಟ ಅಭಿಪ್ರಾಯವೂ ಮೂಡಿಬಿಡಬಹುದು. ಇಂತಹ ಕೆಲವು ಕೊರತೆ ಬಿಟ್ಟರೆ ‘ಗಾರ್ಗಿ’, ಚರ್ಚೆಗೊಳಪಡಬೇಕಾದ ಸಿನಿಮಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...