Homeಮುಖಪುಟ‘ಗಾರ್ಗಿ’ ವಿಮರ್ಶೆ: ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ ಅನಾವರಣ

‘ಗಾರ್ಗಿ’ ವಿಮರ್ಶೆ: ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ ಅನಾವರಣ

- Advertisement -
- Advertisement -

ಲೇಡಿ ಸೂಪರ್‌ ಸ್ಟಾರ್‌ ಎಂದೇ ಖ್ಯಾತರಾದ, ಬಹುಭಾಷಾ ನಟಿ ಸಾಯಿ ಪಲ್ಲವಿ ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ‘ಗಾರ್ಗಿ’ ಸಿನಿಮಾ ಅದರ ಮುಂದುವರಿದ ಭಾಗವಾಗಿ ದಾಖಲಾಗಿದೆ.

ತೆಲುಗು, ತಮಿಳು ಹಾಗೂ ಕನ್ನಡ ಭಾಷೆಯಲ್ಲಿ ತೆರೆಕಂಡಿರುವ ‘ಗಾರ್ಗಿ’, ಹೆಣ್ಣಿನ ಮೇಲಾಗುತ್ತಿರುವ ಅನಾದಿಕಾಲದ ಕಿರುಕುಳದ ಕುರಿತು ಮಾತನಾಡುತ್ತದೆ. ‘ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೋ, ಅಲ್ಲಿ ದೇವತೆಗಳು ನಲೆಸಿರುತ್ತಾರೆ’ ಎಂಬುದೆಲ್ಲ ಬಾಯಿ ಮಾತಿನ ಗೌರವ. ಆದರೆ ಹೆಣ್ಣನ್ನು ಭೋಗದ ವಸ್ತು ಎಂದು ನೋಡುವ ಪುರುಷಪ್ರಧಾನ ಮನಸ್ಥಿತಿಯೇ ವಾಸ್ತವ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಬೇಟಿ ಪಡಾವೋ, ಬೇಟಿ ಬಜಾವೋ’ ಎಂದು ಸರ್ಕಾರವೂ ಹೇಳುತ್ತದೆ. ಹೆಣ್ಣಿನ ರಕ್ಷಣೆಯ ಮೇಲೆ ಮಾಡುವ ಉದ್ದುದ್ದದ ಭಾಷಣಗಳಿಗೆ ಕೊನೆಯೂ ಇಲ್ಲ. ಆದರೆ ಸಮಾಜ ತನ್ನ ಆಂತರ್ಯದಲ್ಲಿ ಇಟ್ಟುಕೊಂಡಿರುವ ಪುರುಷಾಧಿಪತ್ಯದ ತಣ್ಣನೆಯ ಕ್ರೌರ್ಯ, ಯಾವಾಗ, ಯಾವ ರೀತಿಯಲ್ಲಿ ಅನಾವರಣವಾಗುತ್ತದೆ ಎಂದು ಹೇಳಲಾಗದು. ನಿರ್ದೇಶಕ ಗೌತಮ್‌ ರಾಮಚಂದ್ರನ್‌ ಈ ಕಹಿ ಸತ್ಯವನ್ನು ಇಲ್ಲಿ ಚರ್ಚಿಸಿದ್ದಾರೆ.

“ಹೆಣ್ಣಿನ ಜಗತ್ತಿನಲ್ಲೇ ಹೆಣ್ಣೇ ಹೆಣ್ಣಿಗೆ ಅಂತಿಮ ಆಸರೆ. ವಿಕೃತ ಜಗತ್ತನ್ನು ಎದುರಿಸಬೇಕಾದರೆ ಹೆಣ್ಣೊಬ್ಬಳು ಇನ್ನೊಬ್ಬ ಹೆಣ್ಣಿನ ಕೈ ಹಿಡಿದು ಸಂಘಟಿತವಾಗಿ ನಡೆಯಬೇಕು. ತನ್ನ ಮೇಲಾಗುವ ದೌರ್ಜನ್ಯವನ್ನು ಯಾವುದೇ ಮರ್ಜಿಗೆ ಒಳಗಾಗದೆ ಮಣಿಸಬೇಕು” ಎಂಬ ಸಂದೇಶವನ್ನು ‘ಗಾರ್ಗಿ’ ಸಿನಿಮಾ ನೀಡುತ್ತದೆ.

ಬಾಲಕಿಯೊಬ್ಬಳ ಮೇಲೆ ನಡೆಯುವ ಗ್ಯಾಗ್ ರೇಪ್‌ವೊಂದರ ಸುತ್ತಲಿನ ಕಥಾ ಹಂದರವನ್ನು ಒಳಗೊಂಡಿರುವ ‘ಗಾರ್ಗಿ’- ಕೋರ್ಟ್ ರೂಮ್‌ ಡ್ರಾಮಾ ಕೂಡ ಹೌದು. ‘ಪೊಲೀಸರು ಬಂಧಿಸಿರುವವರೆಲ್ಲರೂ ತಪ್ಪಿತಸ್ಥರಾ?’ ಎಂಬ ಪ್ರಶ್ನೆಯ ಮೇಲೆ ಸಾಗುವ ಸಿನಿಮಾ ಅಂತಿಮವಾಗಿ ನೀಡುವ ಸಂದೇಶವೂ ಮೌಲಿಕವಾಗಿದೆ. ಹಿತಮಿತವಾದ ಸಿನಿಮ್ಯಾಟಿಕ್‌ ನಿರೂಪಣೆಯಲ್ಲಿ ಸಾಗುವ ಕೆಳ ಮಧ್ಯಮ ವರ್ಗವೊಂದರ ಕಥೆಯನ್ನೊಳಗೊಂಡ ‘ಗಾರ್ಗಿ’ ವಾಸ್ತವಗಳಿಗೆ ಹತ್ತಿರವಾಗಿ ಚಿತ್ರಿತವಾಗಿದೆ.

‘ಗಾರ್ಗಿ’ ಎಂಬ ಹೆಸರಿಗೆ ವಿಶೇಷ ಅರ್ಥವೂ ಇದೆ. ಆಕೆ, ವೇದ ಕಾಲದಲ್ಲಿ ದಾಖಲಾಗಿರುವ ಮಹಿಳಾ ವಿದ್ವಾಂಸೆಯೂ ಹೌದು. ಆರಂಭಿಕ ಮಹಿಳಾವಾದಿಗಳ ಸಾಲಿನಲ್ಲೂ ಆಕೆಯನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ‘ಗಾರ್ಗಿ’ ಎಂಬ ಹೆಸರಿಗೆ ವಿಶೇಷವಾದ ಅರ್ಥವಂತಿಕೆ ಪ್ರಾಪ್ತವಾಗಿದೆ.

“ಹೆಣ್ಣೆಂದರೆ ಅಬಲೆ, ಆಕೆಯ ಹಣೆಯ ಬರವೇ ಇಷ್ಟು, ಅವಳಿಂದ ಏನೂ ಆಗದು” ಎಂಬ ಸಿದ್ಧಮಾದರಿ ಚೌಕಟ್ಟುಗಳನ್ನು ಶಿಕ್ಷಕಿ ಗಾರ್ಗಿ ಪ್ರಶ್ನಿಸುತ್ತಾಳೆ. “ನೀನು ಹಣೆಬರ, ಕಾಲ, ವಿಧಿ ಎಲ್ಲವನ್ನೂ ನಂಬು. ನನ್ನನ್ನು ಮಾತ್ರ ನಂಬಬೇಡ. ಯಾಕಂದ್ರೆ ನಾನು ಗಂಡು ಹುಡುಗ ಅಲ್ಲ, ಹೆಣ್ಣು ತಾನೇ?” ಎಂದು ತನ್ನ ತಾಯಿಗೆ ಗಾರ್ಗಿ ಬೇಸರದಿಂದ ಕೇಳುತ್ತಾಳೆ. ಸತ್ಯಕ್ಕಾಗಿ ಹೋರಾಡುತ್ತಾಳೆ. ಸತ್ಯ ತಿಳಿದ ಮೇಲೆ ದಿಟ್ಟ ನಿಲುವನ್ನು ತಾಳುತ್ತಾಳೆ.

ಇಲ್ಲಿ ಟ್ರಾನ್ಸ್‌ಜೆಂಡರ್‌ ಮಹಿಳೆಯೊಬ್ಬರು ನ್ಯಾಯಾಧೀಶೆಯಾಗಿದ್ದಾರೆ. ಸಂತ್ರಸ್ತೆಯ ಪರವಾಗಿ ವಾದ ಮಂಡಿಸುತ್ತಿರುವ ವಕೀಲನ ಒರಟು ಮಾತುಗಳಿಗೆ ನ್ಯಾಯಾಧೀಶೆ ತೀಕ್ಷ್ಣವಾಗಿ ಉತ್ತರಿಸುತ್ತಾರೆ. ಅಂತಿಮವಾಗಿ ಸತ್ಯದ ಅನಾವರಣವಷ್ಟೇ ಮುಖ್ಯವಾಗಬೇಕು ಎಂಬುದನ್ನು ಟ್ರಾನ್ಸ್‌ಜೆಂಡರ್‌ ನ್ಯಾಯಾಧೀಶೆ ಮನವರಿಕೆ ಮಾಡಿಕೊಡುತ್ತಾರೆ.

ಒಂದು ಸಣ್ಣ ಎಳೆಯ ಕಥೆಯಾದರೂ ತೀರಾ ಮೈನವಿರೇಳಿಸುವ ರೋಚಕತೆಯನ್ನೇನೂ ಗಾರ್ಗಿ ಒಳಗೊಂಡಿಲ್ಲ. ಅಗತ್ಯಕ್ಕೂ ಮೀರಿ ರೋಚಕತೆಯನ್ನು ಸೇರಿಸಲು ನಿರ್ದೇಶಕರು ಪ್ರಯತ್ನಿಸಿಲ್ಲ. ಬಂಧನಕ್ಕೊಳಗಾದ ತಂದೆಯನ್ನು ಹೊರಗೆ ತರಲು ಒಬ್ಬೊಂಟಿಯಾಗಿ ಹೋರಾಡುವ, ಸತ್ಯದ ಹುಡುಕಾಟಕ್ಕಾಗಿ ಪರಿತಪಿಸುತ್ತಿರುವ ಹೆಣ್ಣು ಮಗಳೊಬ್ಬಳ ತೊಳಲಾಟಗಳನ್ನು ಗಾರ್ಗಿ ಕಟ್ಟಿಕೊಡುತ್ತದೆ. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಆಕೆಯ ಮನೋಬಲ ಚಿತ್ರಕತೆಯಲ್ಲಿ ನಿರೂಪಣೆಗೊಂಡಿದೆ.

ಸೂಕ್ಷ್ಮ ಸಂಗತಿಯೊಂದರ ಸುತ್ತ ಮಾಧ್ಯಮಗಳು ತೋರುವ ಧಾವಂತವನ್ನು ಇಲ್ಲಿಯೂ ನಿಕಶಕ್ಕೊಡ್ಡಿದ್ದರೂ, ಅಂತಿಮ ಜಿಜ್ಞಾಸೆಯಾಗಿ ಅದು ಉಳಿದಿಲ್ಲ. ಮಾಧ್ಯಮಗಳು ತೋರುವುದೆಲ್ಲ ಸತ್ಯವಲ್ಲದಿದ್ದರೂ ಅವುಗಳು ತೋರಿಸುವ ಕೆಲವು ಸಂಗತಿಗಳು ಸತ್ಯವೂ ಆಗಿರಬಹುದು ಎನಿಸುತ್ತದೆ.

ಇದನ್ನೂ ಓದಿರಿ: ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

ಸಾಯಿ ಪಲ್ಲವಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಇಷ್ಟವಾಗುವುದು ಖಚಿತ. ಕನ್ನಡ ವರ್ಷನ್‌ನಲ್ಲಿ ಸಾಯಿ ಪಲ್ಲವಿಯವರೇ ಡಬ್‌ ಮಾಡಿರುವುದು ಇಲ್ಲಿನ ಅಭಿಮಾನಿಗಳಿಗೆ ಮುದ ನೀಡುತ್ತದೆ. ಅತ್ಯಾಚಾರಿ ಆರೋಪಿಯಾಗಿ ಅಭಿನಯಿಸಿರುವ ಆರ್‌.ಎಸ್‌.ಶಿವಾಜಿ, ತಣ್ಣನೆಯ ಕ್ರೌರ್ಯವನ್ನು ಪರಿಚಯಿಸುತ್ತಾರೆ. ವಕೀಲನಾಗಿ ಕಾಳಿ ವೆಂಕಟ್‌, ಪತ್ರಕರ್ತೆಯಾಗಿ ಐಶ್ವರ್ಯ ಲಕ್ಷ್ಮಿ, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಂದೆಯ ಪಾತ್ರದಲ್ಲಿ ಸರವಣ್‌ ಅಭಿನಯಿಸಿದ್ದಾರೆ.

ಹಿನ್ನೆಲೆ ಸಂಗೀತ ಮತ್ತಷ್ಟು ತೀವ್ರವಾಗಿಸಬಹುದಿತ್ತು ಎನಿಸುತ್ತದೆ. ಸಿನಿಮಾದಲ್ಲಿ ಬಳಸಿರುವ ಬಿಟ್ ಸಾಂಗ್‌ಗಳು ಅಷ್ಟಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ‘ಗಾರ್ಗಿ’ಯ ಪ್ರಿಯಕರನ ಪಾತ್ರ- ಹಾಗೆ ಬಂದು ಹೀಗೆ ಹೋದಂತೆ ಭಾಸವಾಗುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರದಂತಹ ವ್ಯವಸ್ಥೆಯನ್ನು ಅತ್ಯಂತ ಬಾಲಿಷವಾಗಿ ತೋರಿಸಿದ್ದಾರೆನಿಸುತ್ತದೆ. ಇಂತಹ ದೃಶ್ಯಗಳಿಂದಾಗಿ ನ್ಯಾಯಾಂಗದ ನೆರವಿನ ಕುರಿತು ಜನರಲ್ಲಿ ಕೆಟ್ಟ ಅಭಿಪ್ರಾಯವೂ ಮೂಡಿಬಿಡಬಹುದು. ಇಂತಹ ಕೆಲವು ಕೊರತೆ ಬಿಟ್ಟರೆ ‘ಗಾರ್ಗಿ’, ಚರ್ಚೆಗೊಳಪಡಬೇಕಾದ ಸಿನಿಮಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...