Homeಮುಖಪುಟ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ...

‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

- Advertisement -
- Advertisement -

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ‘ಚಾರ್ಲಿ’ ಸಿನಿಮಾಕ್ಕೆ ಭಾರೀ ಜನಸ್ಪಂದನೆ ಮೂಡಿ ಬಂತು. ‘ಚಾರ್ಲಿ’ ಎಂಬ ನಾಯಿಯ ಸುತ್ತ ಹೆಣೆದ ಈ ಸಿನಿಮಾವನ್ನು ನೋಡಿ ಅನೇಕರು ಭಾವುಕರಾದರು. ಇದನ್ನೆಲ್ಲ ನೋಡುತ್ತಿದ್ದಾಗ, ‘ಚಾರ್ಲಿ’ ಎಂಬ ನಾಯಿ ಮಾರಾಟದ ಸರಕಾಗಿದೆ ಎನಿಸುತ್ತಿತ್ತು. ‘ಚಾರ್ಲಿ’ ಎಂಬ ನಾಯಿಯ ಕಥೆಗೆ ಜನ ನೀಡುತ್ತಿದ್ದ ವಿಪರೀತ ಸ್ಪಂದನೆಯ ನಡುವೆ- ‘ಕರುಪ್ಪಿ’ ಎಂಬ ನಾಯಿ ತೀವ್ರವಾಗಿ ಕಾಡತೊಡಗಿತ್ತು.

ಯಾವುದು ಉತ್ತಮ ಕಲಾಕೃತಿ? ಅದರ ಲಕ್ಷಣಗಳೇನು? ಎಂಬ ಪ್ರಶ್ನೆಗಳು ಇಂದು ಮೊನ್ನೆಯದ್ದಲ್ಲ. ಪ್ರತಿಯೊಂದು ಕಲಾ ಮಾಧ್ಯಮವು ತನ್ನದೇ ಆದ ಪರಿಭಾಷೆಗಳನ್ನು, ಕಲಾಭಿವ್ಯಕ್ತಿಯ ದಾರಿಗಳನ್ನು ಹೊಂದಿದ್ದರೂ ಕಲಾ ಮೀಮಾಂಸೆಯ ಒಟ್ಟು ಉದ್ದೇಶ- ರಸಾನುಭವ, ಅನುಭೂತಿ. ನಮ್ಮನ್ನು ಇನ್ನಿಲ್ಲದಂತೆ ಕಾಡುವ, ಪದಗಳಲ್ಲಿ ವಿವರಿಸಲಾಗದ ಅವ್ಯಕ್ತ ಭಾವನೆಗಳನ್ನು ಸೃಷ್ಟಿಸುವ ಮಾಧ್ಯಮಗಳನ್ನು- ಉತ್ತಮ ಕಲಾಕೃತಿ ಎನ್ನಬಹುದೇನೋ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಮಿಳಿನ ಮಾರಿ ಸೆಲ್ವರಾಜ್ ಸಿನಿಮಾಗಳ ಕುರಿತು ಧ್ಯಾನಿಸುತ್ತಾ ಹೋದಂತೆ ಕಲಾ ಮೀಮಾಂಸೆಯ ಪರಿಭಾಷೆಗಳನ್ನೂ ಪಕ್ಕದಲ್ಲಿಟ್ಟು ನೋಡುವುದು ಅನಿವಾರ್ಯವಾಗುತ್ತದೆ. ಸೆಲ್ವರಾಜ್‌ ದೃಶ್ಯ ಕಲಾ ಮಾಧ್ಯಮದಲ್ಲಿ ಕ್ರಿಯಾಶೀಲವಾಗಿರುವ ಸೃಜನಶೀಲ ವ್ಯಕ್ತಿ. ಅವರ ಸಿನಿಮಾಗಳು ಮೂರರಲ್ಲಿ ಮತ್ತೊಂದಾಗದೆ ವಿಶಿಷ್ಟ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿಯೂ, ವಿನೂತನ ಪ್ರತಿರೋಧದ ಹೆಜ್ಜೆಗಳಾಗಿಯೂ ದಾಖಲಾಗುತ್ತಿವೆ.

ನಿರ್ದೇಶಕ ಮಾರಿ ಸೆಲ್ವರಾಜ್‌

ಸಾಹಿತಿ ದೇವನೂರ ಮಹಾದೇವ ಅವರ ಮಾತಿಗಳಿಗೆ ಹೆಚ್ಚು ತೂಕ ಏಕೆ? ಎಂದು ಪ್ರಶ್ನಿಸಿಕೊಂಡರೆ, ಅವರು ಯಾವುದಾದರೂ ವಿದ್ಯಮಾನಕ್ಕೆ ಪ್ರತಿಕ್ರಿಯೆ ನೀಡುವಾಗ ಬಳಸುವ ರೂಪಕತೆಗಳೇ ಇದಕ್ಕೆ ಕಾರಣವೆಂದು  ಹೇಳಿಬಿಡಬಹುದು. ಯಾರಿಗೂ ಹೊಳೆಯದ ರೂಪಕಗಳು ದೇವನೂರರಲ್ಲಿ ಮೂಡುತ್ತವೆ. ಅವರ ಪ್ರತಿಕ್ರಿಯೆಗಳು ಸಾಂಸ್ಕೃತಿಕ ಇತಿಹಾಸಕ್ಕೆ ತಳುಕುಹಾಕಿಕೊಂಡು ಸೃಜನಶೀಲವಾಗಿರುತ್ತವೆ. ಮಾರಿ ಸೆಲ್ವರಾಜ್‌ ಅವರ ಕಲಾಕೃತಿಗಳಿಗೂ ಇದೇ ಮಾತು ಅನ್ವಯಿಸಬಹುದೇನೋ.

ಮಾರಿ ಸೆಲ್ವರಾಜ್ ನಿರ್ದೇಶಿಸಿರುವ ‘ಪರಿಯೇರುಮ್ ಪೆರುಮಾಳ್‌- ಬಿ.ಎ. ಬಿ.ಎಲ್‌’, ‘ಕರ್ಣನ್‌’ ಸಿನಿಮಾಗಳಲ್ಲಿ ಬಳಕೆಯಾಗಿರುವ ರೂಪಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ಮಾತುಗಳಲ್ಲಿ ವಿವರಿಸಲಾಗದ ಅನುಭೂತಿ ನಮ್ಮದಾಗುತ್ತದೆ. ‘ಪರಿಯೇರುಮ್‌ ಪರುಮಾಳ್‌’ (ಕುದುರೆಯೇರಿ ಬರುವ ಪೆರುಮಾಳ್‌) ಎಂಬುದೇ ಒಂದು ರೀತಿಯ ರೂಪಕ. ‘ಕರ್ಣನ್‌’- ಸಿನಿಮಾವಂತೂ ಹೆಸರು ಮತ್ತು ಅದಕ್ಕಂಟಿದ ಜಾತಿ ಐಡೆಂಟಿಗಳ ಕುರಿತು ಢಾಳಾಗಿ ಚರ್ಚಿಸುತ್ತದೆ.

‘ಪರಿಯೇರುಮ್‌ ಪೆರುಮಾಳ್‌’ ರೂಪಕಗಳು

ಸೆಲ್ವರಾಜ್‌ ಅವರ ಸಿನಿಮಾಗಳಲ್ಲಿ ಹಲವು ರೂಪಕಗಳು ಅಲ್ಲಲ್ಲಿ ಬಳಕೆಯಾದರೂ ಪ್ರಧಾನ ರೂಪಕವೊಂದು ಇಡೀ ಸಿನಿಮಾದುದ್ದಕ್ಕೂ ಹರಿಯುವುದನ್ನು ಕಾಣಬಹುದು. ಪರಿಯೇರುಮ್‌ ಪೆರುಮಾಳ್‌ನಲ್ಲಿ ‘ಕರುಪ್ಪಿ’ (ಕಪ್ಪು ನಾಯಿ) ಪ್ರಧಾನ ರೂಪಕವಾಗಿದೆ. ಕಾರಣವಿಲ್ಲದೆ ಕೊಲೆಯಾಗುವ ಮುಗ್ಧ ಜನರ ಪ್ರತಿನಿಧಿಯಾಗಿ ‘ಕರುಪ್ಪಿ’ ನಿಲ್ಲುತ್ತದೆ. ಇಲ್ಲಿ ಕೊಲೆಯಾಗಿದ್ದು ‘ಕರುಪ್ಪಿ’ಯೋ ‘ಕಥಾನಾಯಕ’ನೋ ಎಂಬ ದುಗುಡವನ್ನು ಕಥೆಯ ಆರಂಭದಲ್ಲೇ ನಿರ್ದೇಶಕ ಬಿಟ್ಟು ಹೊರಡುತ್ತಾರೆ.

ಜಾತಿ ಕಾರಣಕ್ಕೆ ದೌರ್ಜನ್ಯಕ್ಕೊಳಗಾಗುವ, ಆದರೆ ತನ್ನ ಗೆಳತಿಗೆ ಈ ಕಾರಣವನ್ನು ಕೊನೆಯವರೆಗೂ ಹೇಳದೇ ಇರುವ ‘ಕಥಾನಾಯಕ’ ಯಾರಿಗೂ ಕೇಡು ಬಯಸದ ಮುಗ್ಧ ಜೀವಿ. ಗೆಳತಿ ಮುನಿಸಿಕೊಂಡು ಕ್ಲಾಸ್‌ ರೂಮ್‌ನಿಂದ ಹೊರ ನಡೆದಾಗ, ಅನಾಥನಂತೆ ಕುಳಿತ ಪೆರುಮಾಳ್‌ ಹತ್ತಿರ ಧಾವಿಸುತ್ತಾ ಬರುವ ‘ಕರುಪ್ಪಿ’ ಒಂದು ಅಮೂರ್ತ ಕಲ್ಪನೆ. ‘ನಾಯಾರ್‌’ ಹಾಡಿನಲ್ಲಿ ತೋರಿಸಲಾಗುವ ಕ್ರಿಮಿ, ಕೀಟ, ಗಾಯಗೊಂಡ ನಾಯಿ, ಹಾವು, ಚೇಳು- ಇವೆಲ್ಲವೂ ಕಥಾ ನಾಯಕನ ತಬ್ಬಲಿತನವನ್ನು ತೀವ್ರವಾಗಿ ತೋರಿಸುವ ರೂಪಕಗಳು.

ಜಾತಿಯ ಕಾರಣಕ್ಕೆ ಮಾರ್ಯಾದೆ ಹತ್ಯೆಗಳನ್ನು ಮಾಡುತ್ತ ಬರುತ್ತಿರುವ ಮುದುಕ, ಕೊನೆಗೆ ಪೆರುಮಾಳ್‌ನನ್ನು ಕೂಡ ಹೊಡೆದು ರೈಲಿನ ಕಂಬಿಯ ಮೇಲೆ ಮಲಗಿಸಿರುತ್ತಾನೆ. ಸಾವಿನ ದವಡೆಯಲ್ಲಿ ಮಲಗಿರುವ ಆತನತ್ತ ಓಡೋಡಿ ಬರುವ ನೀಲಿ ಬಣ್ಣದ ನಾಯಿ- ತೀವ್ರವಾಗಿ ಕಾಡುತ್ತದೆ. ಸಿನಿಮಾದ ಆರಂಭದಲ್ಲಿ ಕರುಪ್ಪಿಯನ್ನು ರೈಲಿನ ಅಳಿಗೆ ಕಟ್ಟಿ ಕೊಲ್ಲಲಾಗಿರುತ್ತದೆ. ಕರುಪ್ಪಿಯಂತೆಯೇ ಪೆರುಮಾಳ್‌ನನ್ನು ಕೊಲ್ಲಲು ಯತ್ನಿಸುವ ದೃಶ್ಯ ಹಾಗೂ ಎಚ್ಚರದ ಸೂಚಕವಾಗಿ ಓಡೋಡಿ ಬರುವ ಕರುಪ್ಪಿ- ನಮ್ಮನ್ನು ಸದಾ ಕಾಡುವ ರೂಪಕಗಳು.

‘ಕರ್ಣನ್‌’ ರೂಪಕಗಳು

ತುಳುನಾಡಿನ ದಲಿತ ಆತ್ಮಕಥೆಗಳನ್ನು ‘ಪಾಡ್ದನಾಗಳು’ ಎಂದು ಕರೆಯಲಾಗಿದೆ. ಇಲ್ಲಿನ ಭೂತಗಳನ್ನು ದಲಿತ ಪೂರ್ವಜರು ಎಂದು ಗುರುತಿಸಲಾಗಿದೆ. ಇಂತಹದ್ದೇ ದೈವ ಕಲ್ಪನೆಯನ್ನು ‘ಕರ್ಣನ್‌’ ಸಿನಿಮಾದಲ್ಲಿ ತರಲಾಗಿದೆ. ಇಡೀ ಸಿನಿಮಾದುದ್ದಕ್ಕೂ ಚಲಿಸುವ ಪ್ರಧಾನ ರೂಪಕವಿದು. ನಡು ರಸ್ತೆಯಲ್ಲಿ ವಾಹನಗಳ ಮಧ್ಯೆ ಬಿದ್ದು ಹೊರಳಾಗಿ, ಯಾರ ಸಹಾಯವೂ ಸಿಗದೆ ಸಾವಿಗೀಡಾದ ಮಗು- ದೈವ ರೂಪ ಪಡೆಯುತ್ತದೆ. ದಲಿತರು ವಾಸವಿರುವ ಈ ಊರಿನ ಮುಂದೆ ಬಸ್‌ ನಿಲ್ಲಿಸದೆ ಇರುವುದು ಕ್ರಾಂತಿಯ ಮೂಲ. ಜಾತಿ ವಾದಿಗಳ ಅಸಹನೆ, ಕಿರುಕುಳ ಎಲ್ಲವನ್ನೂ ಪ್ರಶ್ನಿಸಿ, ಇಡೀ ವ್ಯವಸ್ಥೆಗೆ ಪ್ರತಿರೋಧ ತೋರುವಾಗಲೆಲ್ಲ- ಆ ದೈವದ ರೂಪ ತೆರೆಯ ಮೇಲೆ ಬಂದು ಖುಷಿಪಟ್ಟು ಹೋಗುತ್ತದೆ. ಬಸ್ಸನ್ನು ಛಿದ್ರ ಛಿದ್ರ ಮಾಡಿದಾಗ, ಇಡೀ ಊರೇ ಒಂದಾಗಿ ಹೋರಾಟಕ್ಕೆ ಸಜ್ಜಾದಾಗ, ಕಥಾ ನಾಯಕ ಕತ್ತಿ ಹಿಡಿದು ಕುದುರೆ ಏರಿ ಬರುವ ಮುನ್ನ… ಹೀಗೆ ಅನೇಕ ಸಂದರ್ಭಗಳಲ್ಲಿ ಈ ದೈವ ಪ್ರವೇಶಿಸುತ್ತದೆ.

ಬಸ್‌ ನಿಲ್ಲಿಸದ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತ, ಆನೆ ಮೇಲೆ ಏರಿ ಬರುವ ಊರಿನ ಜನ, ಜನಜಂಗುಳಿಯನ್ನು ಹಾದಿಹೋಗಲಾರದೆ ನಿಂತಿರುವ ವಾಹನಗಳು, ತಲೆ ಇಲ್ಲದ ಬುದ್ಧನ ವಿಗ್ರಹ, ಬುದ್ಧನ ಶಿರದ ಮೇಲೆ ಉದಯಿಸಿದಂತೆ ಭಾಸವಾಗುವ ಸೂರ್ಯ, ಕಾಲಿಗೆ ಕಟ್ಟು ಬಿಗಿದ ಕತ್ತೆ ಕುಂಟುತ್ತಾ ನಡೆಯುವುದು, ದೇವರ ಕತ್ತಿ, ಕೋಳಿ ಮರಿಗಳನ್ನು ಕದ್ದು ಹೊತ್ತುಯ್ಯುವ ರಣಹದ್ದು, ಪ್ರತಿರೋಧದ ಸೂಚಕವಾಗಿ ಕತ್ತೆಯ ಕಾಲಿನ ಕಟ್ಟು ಬಿಚ್ಚುವುದು… ಹೀಗೆ ಅನೇಕ ರೂಪಕಗಳನ್ನು ಕರ್ಣನ್‌ನಲ್ಲಿ ಬಳಸಲಾಗಿದೆ.

ತಲೆಗೆ ಮುಂಡಾಸು ಕಟ್ಟಿ ಮಾತನಾಡಿದ ಕಾರಣಕ್ಕೆ ಕೋಪಾದ್ರಿಕ್ತನಾದ ಪೊಲೀಸ್‌ ಅಧಿಕಾರಿ, ವಯಸ್ಸಾದವರನ್ನು ಥಳಿಸುವುದು, ಪತಂಗವೊಂದು ಆ ಭೀಕರ ದೃಶ್ಯಗಳ ಸುತ್ತ ಹಾರಾಡುವುದು, ವಿಷಯ ತಿಳಿದ ಊರಿನ ಜನ ಪೊಲೀಸ್‌ ಠಾಣೆಗೆ ನುಗ್ಗಿ ಪ್ರತಿರೋಧ ತೋರುವಾಗ ಬಾಬಾ ಸಾಹೇಬರ ಫೋಟೋಕ್ಕೆ ಕೈ ತಗುಲಿ, ಆ ಫೋಟೋ ಅತ್ತಂದಿತ್ತ ಅಲ್ಲಾಡುವುದು- ಇವೆಲ್ಲವೂ ವಿಶಿಷ್ಟ ಅನುಭೂತಿಯನ್ನು ಕಟ್ಟಿಕೊಡುತ್ತವೆ.

ಮಾರಿ ಸೆಲ್ವರಾಜ್‌ ಕಥೆಯನ್ನು ಕೇವಲ ಕಥೆಯಾಗಿ ಹೇಳುವುದಿಲ್ಲ. ಹಲವು ರೂಪಕಗಳನ್ನು ತನ್ನ ಸಿನಿಮಾಗಳಲ್ಲಿ ಸಶಕ್ತವಾಗಿ ಬಳಸುತ್ತಾ ಹೋಗುತ್ತಾರೆ. ಸಿನಿಮಾದಲ್ಲಿ ಇಡೀ ಕಥೆಗೆ ಒಂದು ತೂಕವಿದ್ದರೆ, ಅದರ ಅಂದವನ್ನು ಹೆಚ್ಚಿಸುವ ರೂಪಕಗಳಿಗೆ ಮತ್ತೊಂದು ತೂಕವಿರುತ್ತದೆ.

ಇದನ್ನೂ ಓದಿರಿ: ದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

ಸಂತೋಷ್‌ ನಾರಾಯಣ್ ಸಂಗೀತ

ಮುಖ್ಯವಾಗಿ ಮತ್ತೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ‘ಪರಿಯೇರುಮ್ ಪೆರುಮಾಳ್‌’ ಮತ್ತು ‘ಕರ್ಣನ್‌’ ಸಿನಿಮಾಕ್ಕೆ ಸಂತೋಷ್ ನಾರಾಯಣ್‌ ನೀಡಿರುವ ಸಂಗೀತದಿಂದಾಗಿ ರೂಪಕಗಳ ಕಲಾತ್ಮಕತೆ ಹೆಚ್ಚಿದೆ. ಸೆಲ್ವರಾಜ್‌ ಅವರ ದೃಶ್ಯಗಳ ತೀವ್ರತೆಯನ್ನು ಇಮ್ಮಡಿಗೊಳಿಸುವಲ್ಲಿ ಸಂತೋಷ್ ನಾರಾಯಣ್ ಅವರ ಸಂಗೀತವೂ ಬಹುಮುಖ್ಯ ಪಾತ್ರ ವಹಿಸಿದೆ. ಸಾಂಸ್ಕೃತಿಕ ಬೆಸುಗೆಯನ್ನು ಒಳಗೊಂಡ ಕಥನದೊಳಗೆ ದೇಸಿ ಹಾಗೂ ರ್‍ಯಾಪ್‌‌ ಮಿಶ್ರಿತ ಸಂಗೀತವನ್ನು ಸಂತೋಷ್ ನಾರಾಯಣ್‌ ರಚಿಸಿದ್ದಾರೆ. ಪರಿಯೇರು‌ಮ್‌ ಪೆರುಮಾಳ್‌ನ ‘ಕರುಪ್ಪಿ’, ‘ನಾಯಾರ್‌‌’ ಹಾಡುಗಳು, ‘ಕರ್ಣನ್‌’ನ ‘ಮಂಜನೆತ್ತಿ’, ‘ಕಂಡವರ ಸೊಲ್ಲುಂಗ’, ‘ಉತ್ರಾದಿಂಗ ಯಪ್ಪೊ’ ಹಾಡುಗಳು ಸೆಲ್ವರಾಜ್ ಅವರ ಆಶಯವನ್ನು ಗಟ್ಟಿಗೊಳಿಸಿವೆ.

ಕೊನೆಯದಾಗಿ, ‘ಚಾರ್ಲಿ’ ಥರದ ಮಧ್ಯಮ ವರ್ಗ ಕೇಂದ್ರಿತ ನಾಯಿ ಕಥೆಯಲ್ಲಿ ರೂಪಕತೆಯನ್ನು ಹುಡುಕಬಾರದು. ಭಾವುಕತೆಯೇ ಬಂಡವಾಳವಾಗುವ ಸಿನಿಮಾಗಳಲ್ಲಿ ಕಲಾತ್ಮಕತೆಯನ್ನು, ದಟ್ಟ ಅನುಭೂತಿಯನ್ನು ನಿರೀಕ್ಷಿಸಲಾಗದು ಎಂಬುದು ನಿಜ. ಆದರೆ ಸಿನಿಮಾವೊಂದು ಅಷ್ಟೇ ಆಗಿ ನಿಲ್ಲಬಾರದೆಂಬುದು ಇಲ್ಲಿನ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...