Homeಮುಖಪುಟದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

ದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

- Advertisement -
- Advertisement -

‘ಪುಷ್ಪ’, ‘ಆರ್‌‌ಆರ್‌‌ಆರ್’, ‘ಕೆಜಿಎಫ್- 2’ ಸಿನಿಮಾಗಳ ಯಶಸ್ಸಿನ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಒತ್ತಡಕ್ಕೊಳಗಾಗಿದ್ದಾರೆಂಬ ಚರ್ಚೆ ನಡೆಯುತ್ತಿದೆ‌. ‘ಹಿಂದಿ ರಾಷ್ಟ್ರೀಯ ಭಾಷೆ’ ಎಂಬ ಹೇಳಿಕೆಗಳನ್ನು ನೋಡಿದರೆ ಬಾಲಿವುಡ್ ತಾರೆಗಳು ಭಯಗೊಂಡಿರುವುದು ನಿಜವೂ ಅನಿಸುತ್ತಿದೆ. ಇದೆಲ್ಲದರ ಹೊರತಾಗಿ ಯಶಸ್ವಿ ಸಿನಿಮಾವೆಂದರೆ ಏನೆಂದು ನಾವು ಕೇಳಿಕೊಳ್ಳುವ ಅಗತ್ಯವೂ ಇದೆ. ‘ಪ್ಯಾನ್‌ ಇಂಡಿಯಾ’ ಹಾಗೂ ‘ಹಣ ಗಳಿಕೆ’ಯ ಮಾನದಂಡಗಳಾಚೆಯ ಯಶಸ್ಸುಗಳನ್ನೂ ಮನಗಾಣಬೇಕಿದೆ.

ಬಾಲಿವುಡ್‌ಗೆ ದಕ್ಷಿಣದ ಸಿನಿಮಾಗಳು ಸೆಡ್ಡು ಹೊಡೆದಿವೆ ಎಂಬ ಚರ್ಚೆಗೆ ಬಳಕೆಯಾಗುತ್ತಿರುವ ಈ ಮೂರೂ ಸಿನಿಮಾಗಳು ಏನನ್ನು ಹೇಳಲು ಹೊರಟಿವೆ? ಇವುಗಳ ಯಶಸ್ಸು ಪ್ರತಿನಿಧಿಸುತ್ತಿರುವುದೇನೂ ಎಂಬುದೂ ಮುಖ್ಯವಲ್ಲವೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಪುಷ್ಪ’ ಮಾಫಿಯಾಗಳು ಮೇಲುಗೈ ಸಾಧಿಸುವ ಕಥೆಯುಳ್ಳ ಸಿನಿಮಾ, ಹಿಂದುತ್ವವನ್ನು ಜನರ ತಲೆಯೊಳಗೆ ತರುಕಲು ಯತ್ನಿಸಿರುವ ಸಿನಿಮಾ ‘ಆರ್‌ಆರ್‌ಆರ್‌’, ಬಿಲ್ಡಪ್ ಹಾಗೂ ಹೆಣ್ಣನ್ನು ಸರಕು ಎಂಬಂತೆ ಚಿತ್ರಿಸಿದ ಸಿನಿಮಾ ಕೆಜಿಎಫ್‌. ಇಂಥವುಗಳಿಗೆ ಭಾರೀ ಹಣ ತೆತ್ತು ಸಿನಿಮಾ ನೋಡಿದ ಪ್ರೇಕ್ಷಕ ಬಯಸಿದ್ದಾದರೂ ಏನು? ಇವುಗಳನ್ನೆಲ್ಲ ‘ಮನರಂಜನೆ’ ಎನ್ನಲು ಸಾಧ್ಯವೇ? ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿದರೆ ಮುಂಬರುವ ಪ್ರಯೋಗಗಳು ಹೇಗಿರುತ್ತವೆ? ಈ ಮೂರು ಸಿನಿಮಾಗಳಾಚೆಗೆ ದಕ್ಷಿಣ ಭಾರತದ ಚಿತ್ರರಂಗ ಹಿಡಿದಿರುವ ಹೊಸತನದ ಹಾದಿ ಮಸುಕಾಗಿ ಮತ್ತದೇ ಸವಕಲು ಮಾದರಿಗೆ ನಾವು ಹೊರಳುತ್ತೇವೆಯೇ?

ದಕ್ಷಿಣ ಭಾರತದತ್ತ ಬಾಲಿವುಡ್ ತಿರುಗಿ ನೋಡಲೇಬೇಕಾದ ಸಾಕಷ್ಟು ಉತ್ಕೃಷ್ಟ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಬರುತ್ತಿವೆ. ಕೋವಿಡ್ ನಡುವೆ ಬಂದ ‘ಆಕ್ಟ್ 1978’, ‘ಅರಿಷಡ್ವರ್ಗ’ ಕನ್ನಡದ ಮಟ್ಟಿಗೆ ಗುರುತಿಸಬಹುದಾದ ಪ್ರಯೋಗಗಳು. ಆದರೆ ತಮಿಳು ಹಾಗೂ ಮಲಯಾಳಂನಲ್ಲಿ ದೊಡ್ಡ ಪಟ್ಟಿಯೇ ಇವೆ. ‘ಸರಪಟ್ಟ ಪರಂಬರೈ’ ಥರದ ಸಿನಿಮಾ ಓಟಿಟಿಗೆ ಬಂತು. ಅದು ಏನಾದರೂ ಚಿತ್ರಮಂದಿರದಲ್ಲಿ ತೆರೆ ಕಂಡಿದಿದ್ದರೆ ಪ್ರೇಕ್ಷಕನಿಗೆ ಸಿಗುತ್ತಿದ್ದ ಫೀಲ್‌ ಉತ್ಕೃಷ್ಟವಾಗಿರುತ್ತಿತ್ತು. ‘ಸೂರರೈ ಪೊಟ್ರು’ ‘ಜೈ ಭೀಮ್’ ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆಕಂಡಿದ್ದರೆ ‘ಪ್ಯಾನ್‌ ಇಂಡಿಯಾ’ ಮಾನದಂಡಕ್ಕೆ ಒಳಪಡುತ್ತಿದ್ದವೇನೋ!

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಕೋವಿಡ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಭಾರತೀಯರು ಅತಿ ಹೆಚ್ಚು ನೋಡಿದ್ದು ಮಲಯಾಳಂ ಸಿನಿಮಾಗಳನ್ನು. ದೈತ್ಯ ಕಲಾವಿದ ಫಹಾದ್ ಫಾಸಿಲ್ ಅವರ ‘ಸಿ ಯೂ ಸೂನ್’, ‘ಇರುಳ್’, ‘ಜೋಜಿ’, ‘ಮಾಲಿಕ್’ ಒಟಿಟಿಗೆ ಬಂದವು. ಒಂದು ರೀತಿಯಲ್ಲಿ ಹೇಳುವುದಾದರೆ ಫಾಸಿಲ್, ಓಟಿಟಿಯ ಏಕಚಕ್ರಾಧಿಪತಿಯಂತೆ ಮೆರೆದರು. ಒಟಿಟಿಯಲ್ಲಿ ಬಂದ ‘ನಾಯಟ್ಟು’, ‘ಮಾಲಿಕ್’‌, ‘ಗ್ರೇಟ್ ಇಂಡಿಯನ್‌ ಕಿಚನ್’, ‘ಹೋಮ್’, ‘ಕುರುತಿ’, ‘ದೃಶ್ಯಂ2’ ಮೊದಲಾದ ಸಿನಿಮಾಗಳು ಹೊಸ ಚರ್ಚೆಯನ್ನೇ ಹುಟ್ಟು ಹಾಕಿದವು. ಕೋವಿಡ್‌ ಸೋಂಕಿನ ಭೀತಿಯಿಂದಾಗಿ ಮನೆಯೊಳಗೆ ಕುಳಿತ ಜನರನ್ನು ರಂಜಿಸಿದ್ದು, ಚಿಂತನೆಗೆ ಹಚ್ಚಿದ್ದು ಓಟಿಟಿಯಲ್ಲಿ ಬಂದ ಈ ಸಿನಿಮಾಗಳೆಂದರೆ ತಪ್ಪಾಗದು.

ತಮಿಳಿನಲ್ಲಿ 2021, 2022ನೇ ಇಸವಿಯಲ್ಲಿ ಬಿಡುಗಡೆಯಾದ ‘ಮಂಡೇಲಾ’, ‘ಕರ್ಣನ್’, ‘ಸಾರ್ಪಟ್ಟ ಪರಂಬರೈ’, ‘ಜೈ ಭೀಮ್’, ‘ರೈಟರ್’, ‘ಠಾಣಾಕ್ಕಾರನ್’ ಸಿನಿಮಾಗಳು ಕಥೆ ಹಾಗೂ ಉತ್ಕೃಷ್ಟತೆಯ ದೃಷ್ಟಿಯಿಂದ ಅದ್ಭುತವಾದ ಪ್ರಯೋಗಗಳು. ‘ರೈಟರ್‌’ ಹಾಗೂ ‘ಕರ್ಣನ್’ ಕೆಲಕಾಲ ಥೇಟರ್‌ನಲ್ಲಿಯೂ ಪ್ರದರ್ಶನ ಕಂಡವು.

ಇತ್ತೀಚಿಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಈಗ ಒಟಿಟಿಗೂ ಬಂದಿರುವ ‘ಪಡ’ ಎಂಬ ಮಲಯಾಳಂ ಸಿನಿಮಾ ನೈಜ ಘಟನೆಯನ್ನು ಆಧರಿಸಿ ಮೂಡಿಬಂದಿದೆ. ಆದಿವಾಸಿಗಳ ಬೆಟ್ಟದಂತ ನೋವಿಗೆ ಕನ್ನಡಿ ಹಿಡಿದಿದೆ. ಅಹಿಂಸಾತ್ಮಕವಾದರೂ ಮಿಲಿಟೆಂಟ್ ಪ್ರತಿರೋಧಕ್ಕೆ ಇಳಿದ ಹೋರಾಟಗಾರರು ಎದುರಿಸಿದ ಪ್ರಭುತ್ವದ ಕಿರುಕುಳವನ್ನು ತೆರೆದಿಟ್ಟಿದೆ.

ಇದನ್ನೂ ಓದಿರಿ: NFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ – ಅಪಾಯಗಳೇನು?

ಪೃಥ್ವಿರಾಜ್ ಸುಕುಮಾರನ್‌, ಸೂರಜ್ ವೆಂಜರಮೂಡು ಥರದ ಅದ್ಭುತ ನಟರು ಅಭಿನಯಿಸಿರುವ ‘ಜನಗಣಮನ’ (ಮಲಯಾಳಂ) ಸಿನಿಮಾ ಮೊನ್ನೆಯಷ್ಟೇ ಅಂದರೆ ಏಪ್ರಿಲ್‌ 28ರಂದು ಚಿತ್ರಮಂದಿರಗಳಿಗೆ ಬಂದಿದೆ. ಪ್ರಕರಣವೊಂದರ ಸುತ್ತ ಮಾಧ್ಯಮ ಹಾಗೂ ರಾಜಕಾರಣಿಗಳು ಸೃಷ್ಟಿಸುವ ಸಮೂಹ ಸನ್ನಿ, ವಾಸ್ತವಗಳಿಗೆ ಮಾಬ್‌ ಕುರುಡಾಗುವ ಪರಿಯನ್ನು ಈ ಸಿನಿಮಾ ಮನವರಿಕೆ ಮಾಡಿಕೊಟ್ಟಿದೆ. #FuckFascism ಎನ್ನುವಷ್ಟು ಧೈರ್ಯ ಮಲಯಾಳಿಗರಿಗಿದೆ. ಕ್ಯಾಂಪಸ್‌ಗಳ ಮೇಲೆ ಕೇಸರಿಧಾರಿಗಳು ದಾಳಿ ಮಾಡುತ್ತಿರುವುದರಿಂದ ಶೈಕ್ಷಣಿಕ ಹಾಗೂ ಡೆಮಾಕ್ರಟಿಕ್ ವ್ಯವಸ್ಥೆ ದಮನವಾಗುತ್ತಿರುವ ಸೂಕ್ಷ್ಮಗಳನ್ನು ಕಥೆಯೊಳಗೆ ತರಲಾಗಿದೆ.

ಇಷ್ಟೆಲ್ಲ ಅದ್ಭುತ ಸಿನಿಮಾಗಳು ದಕ್ಷಿಣ ಭಾರತದಲ್ಲಿಯೇ ಕಳೆದೆರಡು ವರ್ಷಗಳಲ್ಲಿ ಬಂದಿವೆ. ಪ್ರಾದೇಶಿಕ ಅಸ್ಮಿತೆಯೊಂದಿಗೆ ಜಾಗತಿಕ ಹಾಗೂ ರಾಷ್ಟ್ರೀಯ ವಿದ್ಯಮಾನಗಳೊಂದಿಗೆ ಮುಖಾಮುಖಿಯಾಗಿವೆ. ಹೊಸ ಆಲೋಚನೆಯನ್ನು ಹುಟ್ಟಿಹಾಕಿ, ಪ್ರಭುತ್ವದ ಮತೀಯ ತಾರತಮ್ಯವನ್ನು ಪ್ರಶ್ನಿಸಿವೆ. ಹೀಗಿರುವಾಗ ಬಾಲಿವುಡ್‌ v/s ದಕ್ಷಿಣ ಭಾರತದ ಚಿತ್ರರಂಗದ ಚರ್ಚೆಗೆ ಬಳಕೆಯಾಗುತ್ತಿರುವ ಸಿನಿಮಾಗಳ್ಯಾವುವು? ನಮ್ಮಲ್ಲಿ ಅದ್ಬುತ ಪ್ರಯೋಗಗಳು ನಡೆಸುತ್ತಿದ್ದರೂ ನಾವು ಬಾಲಿವುಡ್‌ಗೆ ಚಾಲೆಂಜ್ ಮಾಡುತ್ತಿರುವುದು ಯಾವ ರೀತಿಯ ಸಿನಿಮಾಗಳ ಮೂಲಕ? ನಮ್ಮ‌ ದೃಷ್ಟಿಕೋನ ಬದಲಾಗುವ ಅವಶ್ಯಕತೆ ಇದೆ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...