Homeಕರ್ನಾಟಕಸಿಟಿ ರವಿಗೆ ಹುಚ್ಚು ಹಿಡಿದಿದ್ದು, ಅವರು ಈ ನಾಡಿಗಂಟಿದ ರೋಗ: ದಿನೇಶ್ ಗುಂಡೂರಾವ್‌ ಆಕ್ರೋಶ

ಸಿಟಿ ರವಿಗೆ ಹುಚ್ಚು ಹಿಡಿದಿದ್ದು, ಅವರು ಈ ನಾಡಿಗಂಟಿದ ರೋಗ: ದಿನೇಶ್ ಗುಂಡೂರಾವ್‌ ಆಕ್ರೋಶ

- Advertisement -
- Advertisement -

ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿಟಿ ರವಿಗೆ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚು ಹಿಡಿದಿದ್ದು, ತನ್ನತನವನ್ನು ಹರಾಜಿಗಿಟ್ಟು ಹಿಂದಿ ಗುಲಾಮಗಿರಿ ಮಾಡುತ್ತಾ, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಅವರು ಈ ನಾಡಿಗಂಟಿದ ರೋಗ ಇದ್ದಂತೆ ಎಂದು ಕಾಂಗ್ರೆಸ್ ನಾಯಕ ದಿನೇಶ್‌ ಗುಂಡೂರಾವ್‌ ಶನಿವಾರ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿರುವ ಗುಂಡೂರಾವ್‌, “ಇತ್ತೀಚೆಗೆ ಸಿ.ಟಿ. ರವಿಯವರಿಗೆ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚು ಹಿಡಿದಿದೆ. ಬಹುಶಃ ದೊಡ್ಡವರ ಬಗ್ಗೆ ಮಾತನಾಡಿದರೆ‌ ತಾನು ದೊಡ್ಡವನು ಎಂದು ತೋರಿಸಿಕೊಳ್ಳುವ ಭ್ರಮೆ ಸಿ.ಟಿ.ರವಿಗಿರಬಹುದು” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ತನ್ನತನವನ್ನು ಹರಾಜಿಗಿಟ್ಟು ಹಿಂದಿ ಗುಲಾಮಗಿರಿ ಮಾಡುತ್ತಾ, ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವ ಸಿ.ಟಿ.ರವಿ ಈ ನಾಡಿಗಂಟಿದ ವ್ಯಾದಿ ಇದ್ದಂತೆ” ಎಂದು ಅವರು ಕಿರಿ ಕಾರಿದ್ದಾರೆ.

“ದಿನದ 24 ಗಂಟೆಯೂ ಮೋದಿ ಭಜನೆ ಮಾಡುವ ಭಜನಾ ಮಂಡಳಿಯ ಘನಘೋರ ಸದಸ್ಯ ಸಿ.ಟಿ.ರವಿಯ ಗುಲಾಮಿತನವನ್ನು ನಾಡು ಕಾಣುತ್ತಿದೆ. ಕನ್ನಡಿಗರಾಗಿ ಸ್ವಾಭಿಮಾನದ ಲವಲೇಶವೂ ಇಲ್ಲದ ಸಿ.ಟಿ.ರವಿ, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದು ಕುಚೋದ್ಯದ ಸಂಗತಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಬಾರ್‌‌’ ಸಿಟಿ ರವಿಯ ಸಂಸ್ಕೃತಿ: ಸಿದ್ದರಾಮಯ್ಯ

“ರವಿ ರಾಜಕೀಯ ಸಭ್ಯತೆ ಕಲಿಯಲಿ, ಒಬ್ಬ ಒಳ್ಳೆ ಹಿಂದೂ ಆಗಬೇಕಾದರೆ ಮೊದಲು ಸಂಸ್ಕೃತಿ ಇರಬೇಕು” ಎಂದು ಗುಂಡೂರಾವ್ ಹೇಳಿದ್ದಾರೆ.

ಶನಿವಾರದಂದು ತುಮಕೂರಿನಲ್ಲಿ ಮಾತನಾಡಿದ್ದ ಸಿಟಿ ರವಿ, ಸಿದ್ದರಾಮಯ್ಯ ಅವರು ಸೋನಿಯಾ ಅವರ ಗುಲಾಮ ಎಂದು ಟೀಕಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...