HomeಮುಖಪುಟNFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ - ಅಪಾಯಗಳೇನು?

NFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ – ಅಪಾಯಗಳೇನು?

- Advertisement -
- Advertisement -

ಸಿನಿಮಾ ಮನರಂಜನೆಗಷ್ಟೇ ಸೀಮಿತವಾಗದೆ, ವಿವಿಧ ದೇಶ-ಕಾಲಗಳನ್ನು ಚಿತ್ರಿಸಿ ಪ್ರಾಪಂಚಿಕ ಜ್ಞಾನವನ್ನು ಕಟ್ಟಿಕೊಡುವ, ನಮ್ಮ ಚರಿತ್ರೆ, ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ, ಅರಿವನ್ನು ವಿಸ್ತಾರಗೊಳಿಸುವ, ಹಲವು ಸಮುದಾಯಗಳ ವಿಭಿನ್ನ ಕಥೆಗಳನ್ನು ಹೇಳುವ ಸಶಕ್ತ ಮಾಧ್ಯಮವಾಗಿದೆ. ಸಿನಿಮಾದ ಸಾಧ್ಯತೆಯ ಪಟ್ಟಿ ಇನ್ನೂ ದೊಡ್ಡದಿದೆ. ಸಿನಿಮಾ ಕ್ಷೇತ್ರಕ್ಕಿರುವ ಈ ಅಗಾಧ ಶಕ್ತಿಯ ಅರಿವಿದ್ದರಿಂದಲೇ ಸರ್ಕಾರಗಳು ಸಿನಿಮಾ, ಸಾಕ್ಷ್ಯಚಿತ್ರ, ಮಕ್ಕಳ ಚಿತ್ರ, ಮೂಕಿ ಚಿತ್ರ ಸೇರಿದಂತೆ ಹಲವು ಪ್ರಕಾರಗಳಿಗೆ ಭಿನ್ನ ಸಂಸ್ಥೆಗಳನ್ನು ಕಟ್ಟಿ, ಆಯಾ ಕ್ಷೇತ್ರದಲ್ಲಿ ಘನವಾದುದನ್ನು ಗುರುತಿಸಿ, ನಿರ್ಮಿಸಿ ಜನರಿಗೆ ತಲುಪಿಸುವ ಕೆಲಸ ಮಾಡುವ ಸಲುವಾಗಿ ನಿಯಮಗಳನ್ನು ರೂಪಿಸಿ ಸ್ವಾಯತ್ತತೆ ನೀಡಿತ್ತು. ಇತಿಹಾಸ ನೆನಪಿಡುವಂತಹ ಅಂತಹ ಹತ್ತು ಹಲವು ಮಹತ್ವದ ಕೆಲಸವನ್ನು ಈ ಸಂಸ್ಥೆಗಳು ಮಾಡಿವೆ. ಈ ದಿನದಂತೆ ಟಿವಿ ಚಾನೆಲ್‌ಗಳು ದೊಡ್ಡಮಟ್ಟದಲ್ಲಿ ಪಸರಿಸದೆ ಇದ್ದ ಕಾಲದಲ್ಲಿ ಸಿನಿಮಾ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಜನರಿಗೆ ತೋರಿಸಿ, ದೂರದರ್ಶನವನ್ನು ಒಂದು ಶೈಕ್ಷಣಿಕ ಮಾಧ್ಯಮವನ್ನಾಗಿಸುವ ಸಲುವಾಗಿ ದುಡಿದ ಅವುಗಳ ಶಕ್ತಿ ಬೆರಗು ಮೂಡಿಸುವಂತದ್ದು. ಅಂತಹ ಸಂಸ್ಥೆಗಳನ್ನು ಇತ್ತೀಚಿನ ದಶಕಗಳಲ್ಲಿ ತೀರಾ ನಿರ್ಲಕ್ಷ್ಯ ಮಾಡಲಾಗಿತ್ತು. ಅವುಗಳ ಸ್ಥಾಪನೆಯ ಉದ್ದೇಶವನ್ನೇ ಮರೆತು ಲಾಭ ತರುತ್ತಿಲ್ಲವೆಂಬ ನೆಪ ಹೇಳಿ ಅನುದಾನ ನೀಡದೇ ಸತಾಯಿಸಲಾಗುತ್ತಿತ್ತು. ಈಗ ಇನ್ನು ಒಂದು ಹೆಜ್ಜೆ ಮುಂದೆ, ಹೋಗಿ ಅವುಗಳನ್ನೆಲ್ಲ ಒಂದು ಕೇಂದ್ರೀಕೃತ ಸಂಸ್ಥೆಯಡಿ ವಿಲೀನ ಮಾಡಲು ಸರ್ಕಾರ ಮುಂದಾಗಿದೆ.

ಸಿನಿಮಾಗಳ ಮೂಲಕ ಶೈಕ್ಷಣಿಕ ತಿಳುವಳಿಕೆ ಮೂಡಿಸಲು 1948ರಲ್ಲಿ ಸ್ಥಾಪನೆಯಾಗಿದ್ದ ಭಾರತೀಯ ಚಲನಚಿತ್ರ ವಿಭಾಗಕ್ಕೆ (Film Divison of India -FDI) ತನ್ನದೇ ಆದ ಮಹತ್ವವಿದೆ. ಇದು ಇಂದಿಗೂ 8,000ದಷ್ಟು ಅಪರೂಪದ ಸಿನಿಮಾ, ಸಾಕ್ಷ್ಯಚಿತ್ರಗಳ ಕೋಶ. ಹಲವು ಮಹಾನ್ ವ್ಯಕ್ತಿಗಳ ಕುರಿತು ಸಾಕ್ಷ್ಯಚಿತ್ರಗಳು ಇಲ್ಲಿವೆ. ಇನ್ನು 1955ರಲ್ಲಿ ಸ್ಥಾಪನೆಯಾದ ಭಾರತೀಯ ಮಕ್ಕಳ ಚಿತ್ರ ಸಮಾಜವು (Childrens Film Society Of India- CFSI) ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅನುವಾಗುವ ನೂರಾರು ಸಿನಿಮಾಗಳನ್ನು ಸೃಷ್ಟಿಸಿದೆ. ಎಲ್ಲ ವಯೋಮಾನದ ಮಕ್ಕಳಿಗಾಗಿ ಹಾಗೂ ವಿಶೇಷ ಚೇತನ ಮಕ್ಕಳಿಗಾಗಿ ಚಿತ್ರಗಳು ಎಲ್ಲಾ ಭಾರತೀಯ ಭಾಷೆಗಳಲ್ಲಿ ನಿರ್ಮಾಣಗೊಂಡಿವೆ. ಮಕ್ಕಳ ಚಿತ್ರಗಳಿಂದ ಹಣ ಬರುವುದಿಲ್ಲವೆಂದು ನಿರ್ಮಾಪಕರ ಕೈಚೆಲ್ಲಿದಾಗಲೆಲ್ಲ CFSI ಅನುದಾನ ನೀಡಿ ಅದ್ಭುತವಾದ ಮಕ್ಕಳ ಚಿತ್ರಗಳನ್ನು ನಿರ್ಮಿಸಿದೆ. ಅದೇ ರೀತಿಯಾಗಿ ಭಾರತದ ಚಲನಚಿತ್ರ ಪರಂಪರೆಯನ್ನು ಕಾಪಿಡುವ ಉದ್ದೇಶದಿಂದ 1964ರಲ್ಲಿ ಸ್ಥಾಪನೆಯಾದ ’ರಾಷ್ಟ್ರೀಯ ಚಲನಚಿತ್ರ ಭಂಡಾರವು (National Film Archive Of Inida -NFAI) ಐತಿಹಾಸಿಕವಾದ ಮತ್ತು ಮಹತ್ವಪೂರ್ಣವಾದ 70,000ಕ್ಕೂ ಹೆಚ್ಚು ಭಾರತೀಯ ಸಿನಿಮಾಗಳ ಸಂಗ್ರಹ ಹೊಂದಿದೆ. ಸ್ವಾತಂತ್ರ್ಯಪೂರ್ವದಿಂದ ಆರಂಭವಾಗಿ ಇಂದಿನವರೆಗೂ ನಡೆದಿರುವ ಐತಿಹಾಸಿಕ ಘಟನೆಗಳ ವಿಡಿಯೋಗಳು ಇಲ್ಲಿವೆ. ಅವುಗಳು ಹಾಳಾಗದಂತೆ ಕಾಪಿಡಲಾಗಿದ್ದು, ಈ ದೇಶದ ಯಾರಾದರೂ ಅವುಗಳನ್ನು ನೋಡಬಹುದಾಗಿದೆ. 1973ರಲ್ಲಿ ಸ್ಥಾಪನೆಯಾದ ಚಲನಚಿತ್ರೋತ್ಸವ ನಿರ್ದೇಶನಾಲಯವು (Directorate Of Film Festivals -DFF) ಭಾರತ ಸೇರಿದಂತೆ ಪ್ರಪಂಚದ ಅತ್ಯುತ್ತಮ ಚಿತ್ರಗಳನ್ನು ಪ್ರತಿವರ್ಷ ಸಿನಿಮೋತ್ಸವಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈಗ ಈ ನಾಲ್ಕು ಸಂಸ್ಥೆಗಳನ್ನು 1975ರಲ್ಲಿ ಉತ್ಕೃಷ್ಟ ಗುಣಮಟ್ಟದ ಸಿನಿಮಾ ತೆಗೆಯುವ ಉದ್ದೇಶದಿಂದ ರಚನೆಯಾಗಿದ್ದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ (National Film Development Corporation – NFDC) ವಿಲೀನ ಮಾಡುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾರ್ಚ್ 30ರಂದು ಘೋಷಿಸಿದೆ.

ಬಸವ ಬಿರಾದರ್

ಈ ನಾಲ್ಕು ಸಂಸ್ಥೆಗಳು ನಷ್ಟದಲ್ಲಿ ನಡೆಯುತ್ತಿವೆ. ಎಷ್ಟೇ ಅನುದಾನ ನೀಡಿದರೂ ಸ್ವಯಂ ನಿಭಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ನೆಪದಲ್ಲಿ ಇವುಗಳನ್ನು ಒಂದು ಕೇಂದ್ರೀಕೃತ ಆಡಳಿತದ ಕೆಳಗೆ ತರಲಾಗುತ್ತಿದೆ. ಹಿರಿಯ ಐಎಎಸ್ ಅಧಿಕಾರಿ ಬಿಮಲ್ ಜುಲ್ಕಾ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ನಡೆಯಿಂದ ಹೆಚ್ಚಿನ ಅನುದಾನ ದೊರಕಿ ಈ ಸಂಸ್ಥೆಗಳ ಪುನರುಜ್ಜೀವನ ಸಾಧ್ಯ ಎಂಬ ಚರ್ಚೆ ಒಂದೆಡೆಯಾದರೆ, ಇದು ಅವುಗಳ ಸ್ವಾಯತ್ತತೆಯನ್ನು ಕಿತ್ತುಕೊಂಡು ಖಾಸಗೀಕರಣದೆಡೆಗೆ ನಡೆಯುವ ಹುನ್ನಾರವಾಗಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ನ್ಯಾಯಪಥ ಪತ್ರಿಕೆ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪರಿಣಿತರನ್ನು ಮಾತನಾಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈ ನಾಲ್ಕು ಸಂಸ್ಥೆಗಳನ್ನು ಬೇರೆಬೇರೆ ಸಮಯದಲ್ಲಿ ವಿಭಿನ್ನ ಉದ್ದೇಶಗಳಿಗಾಗಿ ಸ್ಥಾಪಿಸಲಾಗಿದೆ. ಭಾರತದ ಬಹು ವೈವಿಧ್ಯತೆಯನ್ನು, ಬಹು ಸಂಸ್ಕೃತಿಯನ್ನು, ಬಹು ಭಾಷೆಗಳ ಒಳಗೊಳ್ಳುವಿಕೆಯನ್ನು ಎತ್ತಿಹಿಡಿಯುವ ಕಾರ್ಯವನ್ನು ಈ ಸಂಸ್ಥೆಗಳು ಸದ್ದಿಲ್ಲದೆ ಮಾಡಿಕೊಂಡು ಬಂದಿವೆ. ಸುಖ್‌ದೇವ್‌ರಂತಹ ಹೆಸರಾಂತ ಸ್ವತಂತ್ರ ಸಿನಿಮಾ ನಿರ್ದೇಶಕರು ’ಇಂಡಿಯಾ 67’ ಎಂಬಂತಹ ಅತ್ಯುತ್ತಮ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಫಿಲ್ಮ್ ಡಿವಿಷನ್ ನೆರವು ನೀಡಿದೆ. ಇಂದು ಫಿಲ್ಮ್ ಸೊಸೈಟಿ ಬಿಟ್ಟರೆ ಮಕ್ಕಳಿಗಾಗಿ ಸಿನಿಮಾ ಮಾಡುವವರು ಅಪರೂಪದಲ್ಲಿ ಅಪರೂಪವಾಗಿದೆ. ಇಂತಹ ಸಂಸ್ಥೆಗಳನ್ನು ಈಗ ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿರುವುದರಿಂದ ಅವುಗಳ ಉದಾತ್ತ ಧ್ಯೇಯಗಳು ಕಣ್ಮರೆಯಾಗುವ ಆತಂಕ ಹುಟ್ಟಿಸಿದೆ. ಈ ಸಂಸ್ಥೆಗಳ ಅಗತ್ಯ ಈ ಕಾಲಕ್ಕೆ ಇಲ್ಲ, ಇತರ ಮಾಧ್ಯಮಗಳ ಮೂಲಕ ಜನ ಅವುಗಳನ್ನು ನೋಡಿಕೊಳ್ಳುತ್ತಾರೆ ಎಂದು ಸರ್ಕಾರ ಹೇಳುತ್ತಿರುವುದು ಅದು ಮುಚ್ಚಿಹೋಗಲಿದೆ ಎಂಬ ಆತಂಕಕ್ಕೆ ಕಾರಣ” ಎನ್ನುತ್ತಾರೆ ಕೆಜಿಎಫ್ ಬಗ್ಗೆ ’ಇನ್ ಸರ್ಚ್ ಆಫ್ ಗೋಲ್ಡ್’ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿರುವ ಬಸವ ಬಿರಾದರ್.

“ಸಂಶೋಧಕರಿಗೆ ಆರ್ಕೈವ್ ಮಾಡಲಾಗಿರುವ ಸಿನಿಮಾಗಳ ಬಗ್ಗೆ ಅಧ್ಯಯನ ಮಾಡಲು, ನೋಡಲು NFAI ಅತ್ಯುತ್ತಮ ವೇದಿಕೆಯಾಗಿದೆ. ಅತಿ ಕಡಿಮೆ ದರದಲ್ಲಿ ನಾವು ಅದರ ಉಪಯೋಗ ಪಡೆಯುತ್ತಿದ್ದೇವೆ. ಅದು NFDC ಕೈಗೆ ಹೋದಲ್ಲಿ ಕಮರ್ಷಿಯಲ್ ಆಗುವ ಅಪಾಯವಿದೆ. ಅದನ್ನು ರಿಲಾಯನ್ಸ್‌ನಂತಹ ದೊಡ್ಡ ಕಂಪನಿಗಳು ಕೊಂಡುಕೊಳ್ಳಲು ಯತ್ನಿಸುತ್ತಿವೆ ಎಂಬ ಆರೋಪಗಳಿವೆ. ಹಾಗೇನಾದರೂ ಆದಲ್ಲಿ ಅದು ಉಳ್ಳವರಿಗೆ ಮಾತ್ರ ಕೈಗೆಟಕುವ ಮಾರಾಟದ ಸರಕಾಗಿ ಬದಲಾಗುತ್ತದೆ. ಈಗಾಗಲೇ ಹಲವು ವರ್ಷಗಳಿಂದ ಫಿಲ್ಮ್ ಡಿವಿಷನ್ ಹಿಂದಿ ಕೇಂದ್ರಿತವಾಗಿ ಕೆಲಸ ಮಾಡುತ್ತಿದೆ. ಸ್ವತಂತ್ರ ನಿರ್ದೇಶಕರ ಬದಲಾಗಿ ಒಂದು ಸಿದ್ಧಾಂತದ ಪರ ಕೆಲಸ ಮಾಡುವವರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ಈಗ ಕೇಂದ್ರಸರ್ಕಾರ ಈ ವಿಲೀನದ ಮೂಲಕ ಮತ್ತಷ್ಟು ಕೇಂದ್ರೀಕರಣ ಮಾಡಲು ಹೊರಟಿರುವುದು ಅವುಗಳ ಸ್ವಾಯತ್ತತ್ತೆಗೆ ಧಕ್ಕೆ ಬರಲಿದೆ ಮಾತ್ರವಲ್ಲ, ಅವುಗಳ ವಿನಾಶಕ್ಕೂ ಕಾರಣವಾಗಲಿದೆ” ಎಂದರು ವಿಮರ್ಶಕರೂ ಆಗಿರುವ ಬಸವ.

“ಈ ನಾಲ್ಕು ಸರ್ಕಾರಿ ಸಂಸ್ಥೆಗಳ ಉದ್ದೇಶ ಲಾಭ ಗಳಿಸುವುದಲ್ಲ. ಈ ಸಂಸ್ಥೆಗಳನ್ನು ಕಟ್ಟಿದ್ದೇ ಭಾರತೀಯ ಸಿನಿಮಾಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕಾಗಿ. ಅವುಗಳನ್ನು ಒಂದು ಕಾರ್ಪೊರೇಷನ್ ಅಡಿಗೆ ವಹಿಸುವುದು ಅಪಾಯಕಾರಿ. ಏಕೆಂದರೆ ಕಾರ್ಪೊರೇಷನ್ ಉದ್ದೇಶವೇ ವ್ಯಾವಹಾರಿಕವಾದುದು” ಎನ್ನುತ್ತಾರೆ ಹಲವು ಬಾರಿ ಸ್ವರ್ಣಕಮಲ ಪುರಸ್ಕೃತ ಹಿರಿಯ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು.

ಗಿರೀಶ್ ಕಾಸರವಳ್ಳಿ

“ಫಿಲ್ಮ್ ಡಿವಿಷನ್ ನೆಹರೂರವರ ಕನಸಿನ ಕೂಸಾಗಿದೆ. ಅದು ಸರ್ಕಾರಿ ಯೋಜನೆಗಳನ್ನು ಜನಪ್ರಿಯ ಮಾಡಲು ಇರುವ ಮಾಧ್ಯಮ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಅದು ಬಹಳ ಒಳ್ಳೆಯ ಸಿನಿಮಾಗಳನ್ನು, ಭಾರತದಲ್ಲಿನ ಎಲ್ಲಾ ಮಹತ್ವದ ಘಟನೆಗಳನ್ನು ದಾಖಲು ಮಾಡಿಟ್ಟಿದೆ. ಬಾಕ್ರಾನಂಗಲ್ ಅಣೆಕಟ್ಟು ಕಟ್ಟಿದ್ದು, ಬಾಹ್ಯಾಕಾಶ ಸಂಸ್ಥೆ ಕಟ್ಟಿದ್ದು ಎಲ್ಲವೂ ಅಲ್ಲಿದೆ. ಜೊತೆಗೆ ರವೀಂದ್ರನಾಥ್ ಟಾಗೂರ್, ಎಂಎಸ್ ಸುಬ್ಬಲಕ್ಷ್ಮಿ ಥರದ ಮಹಾನ್ ವ್ಯಕ್ತಿಗಳ ಜೀವನ ಚಿತ್ರಗಳು ಅಲ್ಲಿ ನಮಗೆ ಸಿಗುತ್ತವೆ. ಇಂತಹ ಐತಿಹಾಸಿಕ ಸಂಸ್ಥೆ ಲಾಭ ತಂದುಕೊಟ್ಟಿಲ್ಲ ಎಂದು ಹೇಳುವುದೇ ತಪ್ಪಲ್ಲವೇ” ಎನ್ನುತ್ತಾರೆ ಕಾಸರವಳ್ಳಿ.

ಅವರು ಮುಂದುವರೆದು “ಚಿಲ್ದ್ರನ್ ಫಿಲ್ಮ್ ಸೊಸೈಟಿಯು ಮಕ್ಕಳ ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಕೆಲವೊಂದು ಮಾತ್ರವೇ ವಿಫಲವಾಗಿರಬಹುದು. ಅದನ್ನು ಹೊರತುಪಡಿಸಿ ಈ ಸಂಸ್ಥೆಗಳು ಅಗಾಧ ಸಾಧನೆಗೈದಿವೆ. ಸುಳ್ಳು ನೆವ ಕೊಟ್ಟು ಇವುಗಳನ್ನು ಕಾರ್ಪೋರೇಷನ್‌ಗೆ ಕೊಡುವುದನ್ನು ಒಪ್ಪುತಕ್ಕದ್ದಲ್ಲ. ಭಾರತದಲ್ಲಿ ಬೇರೆ ರೀತಿಯ ಸಿನಿಮಾಗಳು ತಯಾರಾಗುತ್ತಿಲ್ಲ ಎಂಬ ಕಾರಣಕ್ಕಾಗಿ NFDC ರಚನೆಯಾಗಿದೆ. ಅದರ ಮೂಲ ಉದ್ದೇಶಕ್ಕೆ ಧಕ್ಕೆಯಾಗುವುದನ್ನು, ವ್ಯವಹಾರಿಕವಾಗಿ ಲಾಭವಾಗುವ ಸಿನಿಮಾಗಳನ್ನು ಮಾತ್ರವೇ ಮಾಡಬೇಕು ಎಂಬುದನ್ನು ನಾವು ಒಪ್ಪುವುದಿಲ್ಲ ಎಂದರು.

“ಈ ನಾಲ್ಕು ಸಂಸ್ಥೆಗಳು ಸ್ಥಾಪನೆಯಾಗಿದ್ದು ಬೇರೆಬೇರೆ ಉದ್ದೇಶಗಳಿಗಾಗಿ. ಮಕ್ಕಳಿಗಾಗಿ, ಸಾಕ್ಷ್ಯಚಿತ್ರಗಳಿಗಾಗಿ ಅಥವಾ ಹೊಸ ರೀತಿಯ ಸಿನಿಮಾ ತಯಾರಿಕೆಗೆ ನೆರವು ನೀಡಲು, ಸಿನಿಮಾಗಳನ್ನು ರಕ್ಷಿಸಿ ಇಡಲು ಇವುಗಳು ಸ್ಥಾಪನೆಯಾಗಿವೆ. ಇವು ಒಂದೇ ದೋಣಿಯಲ್ಲಿ ಸಾಗುವಾಗ ಒಳಿತಿಗಿಂತ ಕೆಡುಕು ಆಗುವುದೇ ಹೆಚ್ಚು” ಎನ್ನುತ್ತಾರೆ ’ಪುಟ್ಟಕ್ಕನ ಹೈವೇ’ ಖ್ಯಾತಿಯ ಸಿನಿಮಾ ನಿರ್ದೇಶಕ ಬಿ.ಸುರೇಶ್.

ಬಿ.ಸುರೇಶ್

“ಫಿಲ್ಮ್ ಆರ್ಕೈವ್ಸ್ ಒಂದಷ್ಟು ಒಳ್ಳೆಯ ಕೆಲಸ ಮಾಡುತ್ತಿತ್ತು. NFDCಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಪಡೆದಿತ್ತು. ಆದರೆ ಕಳೆದ ಎರಡು ಮೂರು ದಶಕಗಳಿಂದ ಈ ಸಂಸ್ಥೆಗಳನ್ನು ಹೇಗೆ ನಿರ್ಜೀವಗೊಳಿಸಲಾಯಿತು ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. 2000ರ ನಂತರವಂತೂ ಈ ಸಂಸ್ಥೆಗಳಿಗೆ ಸಮರ್ಪಕ ಅನುದಾನ ನೀಡದೆ, ಗಮನ ನೀಡದೆ ಹತಾಶ ಸ್ಥಿತಿಯಲ್ಲಿರಿಸಲಾಗಿತ್ತು. ಒಂದು ಸಂಸ್ಥೆಯನ್ನು ಆರಂಭಿಸಿದಾಗ ಅದಕ್ಕೆ ಗುರಿ-ಉದ್ದೇಶಗಳನ್ನು ಸ್ಪಷ್ಟಪಡಿಸಲಾಗಿರುತ್ತದೆ. ಇಲ್ಲಿ ಆ ಉದ್ದೇಶಗಳಿಗೆ ಧಕ್ಕೆ ತರಲಾಗುತ್ತಿದೆ. ಇಷ್ಟೆಲ್ಲಾ ಅಪಾಯಗಳ ಹೊರತಾಗಿಯೂ ಸಕಾರಾತ್ಮಕವಾಗಿ ಯೋಚಿಸುವುದಾದರೆ ಇನ್ನು ಮುಂದೆ NFDCಯು ಫಿಲ್ಮ್ ಸೊಸೈಟಿಗೆ ಸಹಾಯ ಮಾಡಿ ಅತ್ಯುತ್ತಮ ಚಿತ್ರಗಳನ್ನು ತಯಾರಿಸಬಹುದು. ಅದೇ ರೀತಿ ಆರ್ಕೈವ್‌ಗೆ ಅನುದಾನ ನೀಡಿ ಹೆಚ್ಚುಹೆಚ್ಚು ಸಿನಿಮಾಗಳನ್ನು ಸಂಗ್ರಹಿಸಿಡಲಿ ಎಂದು ಆಶಿಸುತ್ತೇನೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳ ಬೆನ್ನುಮೂಳೆ ಮುರಿಯುತ್ತಿರುವುದನ್ನು ನೋಡಿದರೆ ಭಾರತ ದೇಶದಲ್ಲಿ ಸಾಂಸ್ಕೃತಿಕ ಕೇಂದ್ರಗಳನ್ನು  ಮಾರಿಬಿಡುವ ಪ್ರಯತ್ನ ಆಗುತ್ತಿದೆ ಎಂದೆನಿಸುತ್ತಿದೆ. ಅದರ ಮುಂದುವರಿಕೆಯ ಭಾಗವಾಗಿ ಈ ವಿಲೀನ ಆಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ನಮ್ಮ ಅನುಮಾನಗಳು ಸತ್ಯವಾಗದಿರಲಿ, ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ” ಎಂದರು ಬಿ ಸುರೇಶ್.

ಸರ್ಕಾರಿ ಕ್ಷೇತ್ರದ ಸಂಸ್ಥೆಗಳು ಲಾಭದ ದೃಷ್ಟಿಯಿಂದ ಯೋಚಿಸದೆ, ಖಾಸಗಿ ವಲಯ ಹೆಚ್ಚಾಗಿ ಕೈಗೆತ್ತಿಕೊಳ್ಳದ ಜನಪರವಾದ ಕೆಲಸಗಳನ್ನು ಮಾಡಲೆಂದೆ ಕಟ್ಟಿರುವಂತಹವು. ಈಗ ನಷ್ಟದ ಕಾರಣ ನೀಡಿ ಮಾಡುವ ಇಂತಹ ವಿಲೀನ ಯೋಜನೆಗಳಿಂದ ಜನಹಿತದ ಸಿನಿಮಾ ಕೆಲಸಗಳಿಗೆ ಹಿನ್ನಡೆಯಾಗಬಹುದೇ ಎಂಬ ಸಂದೇಹ ಎದುರಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...