Homeಅಂಕಣಗಳುಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

ಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

- Advertisement -
- Advertisement -

ಅಮೆರಿಕದ ಮಾಜಿ ಉಪಾಧ್ಯಕ್ಷನಾಗಿದ್ದ, ‘An Inconvent Truth’ ಎಂಬ ಸಾಕ್ಷ್ಯ ಚಿತ್ರದಲ್ಲಿ ಭಾಗವಹಿಸಿ ಜಾಗತಿಕ ತಾಪಮಾನದ ಏರುವಿಕೆಯ ಬಗ್ಗೆ ಎಲ್ಲೆಡೆ ಎಚ್ಚರ ಮೂಡಿಸಿದ, ಅದಕ್ಕಾಗಿಯೇ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಮನುಷ್ಯ ಗೋರ್.

PC : 500 Days Of Film

ಹಾಗೆ ನೋಡಿದರೆ ಗೋರ್ ಕೂಡ ಅದೆಷ್ಟೋ ಅಮೆರಿಕನ್ನರಂತೆ ಸಾಮಾನ್ಯ ಮನುಷ್ಯನಾಗುವ, ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಮೆರಿಕದ ಹಾಲಿ ಅಧ್ಯಕ್ಷ ಜಾರ್ಜ್ ಬುಷ್‌ನಂತೆ ಯುದ್ಧಕೋರನೂ, ಅತಾರ್ಕಿಕ ವಾದಗಾರನೂ, ಆಸಂಬದ್ಧ ಚಿಂತನೆಯವನೂ ಆಗುವ ಅಪಾಯವಿತ್ತು. ಯಾಕೆಂದರೆ ಬುಷ್‌ನಂತೆ ಗೋರ್ ಕೂಡ ಹಣ ಮತ್ತು ರಾಜಕೀಯ ಹಿರಿಮೆ ಹೊಂದಿದ್ದ ವಂಶದಲ್ಲಿ ಜನಿಸಿದ್ದ, ಆತನಂತೆ ಖ್ಯಾತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದ, ಕೊನೆಗೆ ಸಕ್ರಿಯ ರಾಜಕೀಯಕ್ಕೂ ಕಾಲಿಟ್ಟಿದ್ದ.

ಆದರೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವುದು ಅವರ ಅನುಭವಗಳು. ಉದಾಹರಣೆಗೆ ಜಾರ್ಜ್ ಬುಷ್ ತನ್ನ ವಂಶದ ಬಲ ಉಪಯೋಗಿಸಿಕೊಂಡು ವಿಯಟ್ನಾಮ್ ಯುದ್ಧದಲ್ಲಿ ’ಪಾಲ್ಗೊಂಡರು’ ಎಂದೂ ಯುದ್ಧಭೂಮಿಯಲ್ಲಿ ಕಾಲಿಡದಂತೆ ಎಚ್ಚರ ವಹಿಸಿದ. ಇಂತಹದೇ ನಕಲಿ ಪಾಲ್ಗೊಳ್ಳುವಿಕೆಯ ಅವಕಾಶ ಆಲ್ ಗೋರ್‌ಗೂ ಒದಗಿ ಬಂದಿತ್ತು. ಆದರೆ ಆ ಅವಕಾಶವನ್ನು ನಿರಾಕರಿಸಿದ್ದ ಗೋರ್. ಈ ಕಾರಣಕ್ಕೆ ಮಾತ್ರ ವಿಚಿತ್ರವಾಗಿಯೂ, ವಿಭಿನ್ನವಾಗಿಯೂ ಕಾಣಿಸುತ್ತಿದ್ದ ಮೊದಲೇ, ಆತ ನೈತಿಕ ಕಾರಣಗಳಿಗಾಗಿ ವಿಯಟ್ನಾಮ್ ಯುದ್ಧವನ್ನು ಗೋರ್ ವಿರೋಧಿಸಿದ್ದರೂ ತನ್ನ ನಾಗರಿಕ ಜವಾಬ್ದಾರಿಗಳಿಂದ ಹಿಂಜರಿಯಬಾರದೆಂದು ಸೈನ್ಯವನ್ನು ಸೇರಿದ್ದ.

PC : Wikipedia (ಜಾರ್ಜ್ ಬುಷ್)

ಆ ಯುದ್ಧದಲ್ಲಿ ತಾನು ಕಂಡದ್ದನ್ನು ಗೋರ್ ಹೀಗೆ ವಿವರಿಸುತ್ತಾನೆ: “ಆ ಯುದ್ಧ ಒಂದು ದೊಡ್ಡ ತಪ್ಪು ಎಂಬ ನನ್ನ ಅಭಿಪ್ರಾಯದಲ್ಲಿ ಯಾವ ಬದಲಾವಣೆಗಳೂ ಆಗಲಿಲ್ಲ. ಆದರೆ ಅದನ್ನು ವಿರೋಧಿಸುತ್ತಿದ್ದ ನನ್ನಂತಹವರನ್ನೂ ಅಚ್ಚರಿಗೊಳಿಸಿದ ಅಂಶ ಯಾವುದೆಂದರೆ ಅಲ್ಲಿನ ಜನ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂದು ತೀವ್ರವಾಗಿ ಹೋರಾಟ ಮಾಡುತ್ತಿದ್ದದ್ದು.”

ಯುದ್ಧದಿಂದ ಹಿಂದಿರುಗಿದ ಗೋರ್ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಐದು ವರ್ಷಗಳ ಕಾಲ ತನ್ನ ರಾಜ್ಯದಲ್ಲಿನ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡಿದ. ಆಗ ಆತ ಬರೆದ ತನಿಖಾ ವರದಿಗಳಿಂದಾಗಿ ಅಲ್ಲಿನ ಪೌರಾಡಳಿತದಲ್ಲಿನ ಭ್ರಷ್ಟಾಚಾರ ಬಹಿರಂಗಗೊಂಡು ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ಆದರೆ ಅದು ಗೋರ್‌ಗೆ ಸಮಾಧಾನ ತರಲಿಲ್ಲ. ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಬದಲಾಗಿ ಅದನ್ನು ತಡೆಯಬಹುದಾದ ಸ್ಥಾನದಲ್ಲಿದ್ದರೆ ವಾಸಿ ಎಂದು ನಿರ್ಧರಿಸಿದ. ಆ ನಿಟ್ಟಿನಲ್ಲಿ ವಕೀಲನಾಗಬೇಕೆಂದು ಕಾನೂನು ವಿದ್ಯಾಲಯವನ್ನು ಸೇರಿದ.

ಆದರೆ ಅದನ್ನು ಸಂಪೂರ್ಣಗೊಳಿಸುವ ಮುನ್ನ ಆತನ ಕ್ಷೇತ್ರದ ರಾಜಕೀಯ ನಾಯಕ ನಿವೃತ್ತಿ ಘೋಷಿಸಿದ. ಆ ಸ್ಥಾನಕ್ಕೆ ತಾನೇಕೆ ಸ್ಪರ್ಧಿಸಬಾರದೆಂದು ಚಿಂತಿಸಿ, ಸಕ್ರಿಯ ರಾಜಕೀಯವನ್ನು ಗೋರ್ ಪ್ರವೇಶಿಸಿದ. ಸ್ಥಳೀಯ ಚುನಾವಣೆಗಳಲ್ಲಿ ಗೆದ್ದು ರಾಜಕಾರಣಿ ಆದ. ಗೋರ್ ಅನಂತರ ಹಲವು ಬಾರಿ ಸೆನೆಟರ್ ಆಗಿಯೂ ಆಯ್ಕೆಯಾದ.

ಆದರೆ ಅಲ್ಲೂ ಗೋರ್‌ನದ್ದು ವಿಶಿಷ್ಟ ನಿಲುವುಗಳು. ಯಾವ ಸದ್ದಾಂ ಹುಸೇನನು ಸಾಮೂಹಿಕ ವಿನಾಶಕಾರಿ ಆಸ್ತ್ರಗಳನ್ನು ಹೊಂದಿದ್ದನೆಂದೂ, ಇರಾಕಿನಲ್ಲಿನ ಕುರ್ದ್ ಸಮುದಾಯದ ಜನಾಂಗೀಯ ಹತ್ಯೆ ನಡೆಸಿದ್ದನೆಂದೂ ಆತನಿಗೆ ಮೊನ್ನೆ ಅಮೆರಿಕ ಗಲ್ಲುಶಿಕ್ಷೆ ವಿಧಿಸಿತ್ತೋ, ಅದೇ ಆಮೆರಿಕ 60 ದಶಕದಲ್ಲಿ ಆದೇ ಸದ್ದಾಂನಿಗೆ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ನೆರವನ್ನು ನೀಡುತ್ತಿದ್ದನ್ನು ಆಗಲೇ ಗೋರ್ ವಿರೋಧಿಸಿದ್ದ.

PC : Wikipedia, (ರೋನಾಲ್ಡ್ ರೇಗನ್)

ಆಗ ಗೋರ್, ಸದ್ದಾಂನ ಕೃತ್ಯಗಳನ್ನು ತಡೆಯಬೇಕಾದರೆ ಆತನಿಗೆ ಅಮೆರಿಕ ಯಾವುದೇ ರೀತಿಯ ಸಹಾಯ ಮಾಡಬಾರದೆಂಬ ಕಾಯಿದೆಯನ್ನು ಸೆನೆಟ್‌ನಲ್ಲಿ ಜಾರಿಗೆ ತರಲು ಎರಡು ಬಾರಿ ಪ್ರಯತ್ನಿಸಿದ್ದ. ಆಗ ಗೋರ್‌ನನ್ನು ವಿರೋಧಿಸಿ ಆತ ರೂಪಿಸಿದ್ದ ಕಾಯಿದೆ ಅನುಷ್ಠಾನಕ್ಕೆ ಬಾರದಂತೆ ಅಂದಿನ ಅಧ್ಯಕ್ಷ ರೋನಾಲ್ಡ್ ರೇಗನ್ ಮತ್ತು ಉಪಾಧ್ಯಕ್ಷ ಜಾರ್ಜ್ ಬುಷ್‌ರ (ಹಾಲಿ ಅಧ್ಯಕ್ಷನ ತಂದೆ) ಸರ್ಕಾರ ತಡೆದಿತ್ತು. ಈ ವಿರೋಧದ ನಡುವೆಯೂ ಮತ್ತೆ 1988ರಲ್ಲಿ ಸಾಮೂಹಿಕ ಹತ್ಯಾವಿರೋಧಿ ಕಾಯಿದೆಯನ್ನು ಗೋರ್ ಸೆನೆಟ್‌ಗಳಲ್ಲಿ ಮಂಡಿಸಿದ್ದ. ಆಗ ರೇಗನ್‌ಗೆ ಗೋರ್ ಮೇಲೆ ಎಷ್ಟು ಕೋಪ ಬಂದಿತ್ತೆಂದರೆ, ತನ್ನ ಅಧ್ಯಕ್ಷ ಸ್ಥಾನ ನೀಡಿದ ವೀಟೋ ಹಕ್ಕನ್ನು ಜಾರಿಗೊಳಿಸುವುದಾಗಿ ಬೆದರಿಸಿದ್ದ.

ಇದಕ್ಕೆ ಉತ್ತರವಾಗಿ ತಾನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಗೋರ್ ನಿರ್ಧರಿಸಿದ. ಅದಕ್ಕೆಂದು ಎಲ್ಲಾ ತಯಾರಿಗಳೂ ನಡೆಯುತ್ತಿದ್ದಾಗಲೇ ಅಪಘಾತವೊಂದರಲ್ಲಿ ಆತನ ಮಗನಿಗೆ ಮಾರಣಾಂತಿಕ ಗಾಯಗಳಾದವು. ತನ್ನ ಅಧ್ಯಕ್ಷ ಕನಸುಗಳನ್ನು ಬದಿಗೊತ್ತಿ ಮಗನ ಶುಶ್ರೂಷೆಗೆ ತಂದೆ ಗೋರ್ ನಿಂತ. ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಾಗಲೇ ಪರಿಸರ ರಕ್ಷಣೆಯನ್ನು ಕುರಿತು ‘Earth in the Balance’ ಎಂಬ ಪುಸ್ತಕವನ್ನು ಬರೆದ. ಇದು ಅತ್ಯಂತ ಜನಪ್ರಿಯವಾಗಿ ಅಪಾರ ಸಂಖ್ಯೆಯಲ್ಲಿ ಮಾರಾಟವಾಯಿತು. 1992ರಲ್ಲಿ ಡೆಮಾಕ್ರಾಟ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಲ್ ಕ್ಲಿಂಟನ್, ತನ್ನೊಂದಿಗೆ ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ ಆಲ್ ಗೋರ್‌ನನ್ನು ಆಯ್ಕೆ ಮಾಡಿಕೊಂಡ. ಆ ಚುನಾವಣೆಯಲ್ಲಿ ಅವರಿಬ್ಬರೂ ಗೆದ್ದರು. ಮಾತ್ರವಲ್ಲ; ಉಪಾಧ್ಯಕ್ಷನಾಗಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಹಲವು ಕಾನೂನುಗಳು ಜಾರಿಗೆ ಬರುವಂತೆ ಗೋರ್ ನೋಡಿಕೊಂಡ.

ಎಂಟು ವರ್ಷಗಳ ಕಾಲ ಉಪಾಧ್ಯಕ್ಷನಾದ ಗೋರ್ 2000ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ. ಆ ಚುನಾವಣೆಯಲ್ಲಿ ಮತಚೀಟಿಗಳಲ್ಲಿ ಗೊಂದಲ ಸೃಷ್ಟಿಯಾಗಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಗೋರ್‌ನ ಪ್ರತಿಸ್ಪರ್ಧಿ ಜಾರ್ಜ್ ಬುಷ್ ಗೆದ್ದಿದ್ದಾನೆಂದು ಘೋಷಿಸಿತು. ಈ ತೀರ್ಪನ್ನು ಗೋರ್ ಪ್ರಶ್ನಿಸಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಬದಲಾಗಿ, “ನಮ್ಮ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತ್ತು ಜನರ ಐಕ್ಯತೆಯನ್ನು ಕಾಪಾಡಲು ಈ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿ ತನ್ನ ಸಜ್ಜನಿಕೆಯನ್ನು ಮೆರೆದ. ವಾಸ್ತವವಾಗಿ ಆ ಚುನಾವಣೆಗಳಲ್ಲಿ ಬುಷ್‌ಗಿಂತಲೂ ಗೋರ್‌ಗೆ ಐವತ್ತು ಲಕ್ಷ ಹೆಚ್ಚು ಜನಪ್ರಿಯ ಮತಗಳು ಬಂದಿದ್ದವು! ಆದ್ದರಿಂದ ಆತ ಮತ್ತೆ 2004ರಲ್ಲಿ ಬುಷ್ ವಿರುದ್ಧ ಸ್ಪರ್ಧಿಸಬೇಕೆಂಬ ಒತ್ತಡ ಪ್ರಾರಂಭವಾಯಿತು. ಇದಕ್ಕೆ ಮಣಿಯದ ಗೋರ್ ’ನಾನು ಸ್ಪರ್ಧಿಸುವುದಿಲ್ಲ, ಬದಲಾಗಿ ಹೊಸ ಮುಖಗಳು ಬರಲಿ’ ಎಂದು ಹೇಳಿ ಸುಮ್ಮನಾದ.

PC : Wikipedia

ಗೋರ್‌ನ ಭಾಷಣಗಳು ಎಷ್ಟು ಜನಪ್ರಿಯತೆ ಪಡೆದವೆಂದರೆ ಅದಕ್ಕೆಂದು ನೀಡುತ್ತಿದ್ದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತಿದ್ದವು. ಇದು ಹಲವಾರು ಕಡೆ ನಡೆದಾಗ ಗೋರ್‌ರವರ ಈ ಭಾಷಣವನ್ನೆ ಯಾಕೆ ಒಂದು ಸಾಕ್ಷ್ಯ ಚಿತ್ರವನ್ನಾಗಿಸಬಾರದು ಎಂಬ ಚಿಂತನೆ ಡೇವಿಸ್ ಗುಗನ್‌ಹೈಮ್ ಎಂಬುವವರಲ್ಲಿ ಮೂಡಿತು. ಅದರ ಪರಿಣಾಮವೇ ‘An Inconvenient Truth’ ಎಂಬ ಚಿತ್ರ. ಅದಕ್ಕೆ ಸಾಕ್ಷ್ಯ ಚಿತ್ರಗಳ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯೂ ಲಭಿಸಿತು.

ಇದೆಲ್ಲದರ ಮಧ್ಯೆ ಗೋರ್ ಬುಷ್‌ರವರ ಯುದ್ಧಕೋರತನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ದಾಳಿಯನ್ನೇ ನೆಪವಾಗಿಟ್ಟುಕೊಂಡು ಇರಾಕಿನ ಮೇಲೆ ನಡೆಸಿದ ದಾಳಿಯನ್ನು ಕಟುವಾಗಿ ಟೀಕಿಸಿರುವ ಗೋರ್ ಬುಷ್‌ನ ಈ ನೀತಿಯನ್ನು ವಿರೋಧಿಸುವವರಿಗೆ ಧನಸಹಾಯ ಮಾಡುತ್ತಾ ಬಂದಿದ್ದಾರೆ.

ಅಲ್ ಗೋರ್ ನಿಜವಾಗಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ನಮ್ಮ ಭೂಮಿಯನ್ನು ನಮ್ಮ ಮಕ್ಕಳಿಗಾಗಿ ಮೊಮ್ಮಕ್ಕಳಿಗಾಗಿ ಉಳಿಸಬೇಕೆಂಬುದರ ಬಗ್ಗೆ ಜಾಗತಿಕ ಎಚ್ಚರಿಕೆಯನ್ನು ನೀಡಿದ ವ್ಯಕ್ತಿ. ಇಂತಹ ವ್ಯಕ್ತಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಹಾಗೆ ನೋಡಿದರೆ ರಕ್ತಸಿಕ್ತ ಯುದ್ಧಗಳನ್ನು ನಿಲ್ಲಿಸಿದ್ದಕ್ಕೆ ಅಥವಾ ತಡೆದಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗ ಪ್ರಕೃತಿಯೊಂದಿಗೆ ಮಾನವ ನಡೆಸುತ್ತಿರುವ ವಿನಾಶಕಾರಿ ಯುದ್ಧವನ್ನು ತುರ್ತಾಗಿ ತಡೆಯಬೇಕು ಎಂದಿದ್ದಕ್ಕೆ ಗೋರ್‌ಗೆ ಇದನ್ನು ನೀಡಲಾಗಿದೆ.

(ಅಕ್ಟೋಬರ್ 24, 2007ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಕ್ಯಾಪಿಟಲ್ ಮೇಲೆ ದಾಳಿ – ಟ್ರಂಪ್ ಪದಚ್ಯುತಿಗೆ ಮುಂದಾದ ಅಮೆರಿಕ ಸಂಸತ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...