Homeಅಂಕಣಗಳುಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

ಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

- Advertisement -
- Advertisement -

ಅಮೆರಿಕದ ಮಾಜಿ ಉಪಾಧ್ಯಕ್ಷನಾಗಿದ್ದ, ‘An Inconvent Truth’ ಎಂಬ ಸಾಕ್ಷ್ಯ ಚಿತ್ರದಲ್ಲಿ ಭಾಗವಹಿಸಿ ಜಾಗತಿಕ ತಾಪಮಾನದ ಏರುವಿಕೆಯ ಬಗ್ಗೆ ಎಲ್ಲೆಡೆ ಎಚ್ಚರ ಮೂಡಿಸಿದ, ಅದಕ್ಕಾಗಿಯೇ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಮನುಷ್ಯ ಗೋರ್.

PC : 500 Days Of Film

ಹಾಗೆ ನೋಡಿದರೆ ಗೋರ್ ಕೂಡ ಅದೆಷ್ಟೋ ಅಮೆರಿಕನ್ನರಂತೆ ಸಾಮಾನ್ಯ ಮನುಷ್ಯನಾಗುವ, ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಮೆರಿಕದ ಹಾಲಿ ಅಧ್ಯಕ್ಷ ಜಾರ್ಜ್ ಬುಷ್‌ನಂತೆ ಯುದ್ಧಕೋರನೂ, ಅತಾರ್ಕಿಕ ವಾದಗಾರನೂ, ಆಸಂಬದ್ಧ ಚಿಂತನೆಯವನೂ ಆಗುವ ಅಪಾಯವಿತ್ತು. ಯಾಕೆಂದರೆ ಬುಷ್‌ನಂತೆ ಗೋರ್ ಕೂಡ ಹಣ ಮತ್ತು ರಾಜಕೀಯ ಹಿರಿಮೆ ಹೊಂದಿದ್ದ ವಂಶದಲ್ಲಿ ಜನಿಸಿದ್ದ, ಆತನಂತೆ ಖ್ಯಾತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದ, ಕೊನೆಗೆ ಸಕ್ರಿಯ ರಾಜಕೀಯಕ್ಕೂ ಕಾಲಿಟ್ಟಿದ್ದ.

ಆದರೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವುದು ಅವರ ಅನುಭವಗಳು. ಉದಾಹರಣೆಗೆ ಜಾರ್ಜ್ ಬುಷ್ ತನ್ನ ವಂಶದ ಬಲ ಉಪಯೋಗಿಸಿಕೊಂಡು ವಿಯಟ್ನಾಮ್ ಯುದ್ಧದಲ್ಲಿ ’ಪಾಲ್ಗೊಂಡರು’ ಎಂದೂ ಯುದ್ಧಭೂಮಿಯಲ್ಲಿ ಕಾಲಿಡದಂತೆ ಎಚ್ಚರ ವಹಿಸಿದ. ಇಂತಹದೇ ನಕಲಿ ಪಾಲ್ಗೊಳ್ಳುವಿಕೆಯ ಅವಕಾಶ ಆಲ್ ಗೋರ್‌ಗೂ ಒದಗಿ ಬಂದಿತ್ತು. ಆದರೆ ಆ ಅವಕಾಶವನ್ನು ನಿರಾಕರಿಸಿದ್ದ ಗೋರ್. ಈ ಕಾರಣಕ್ಕೆ ಮಾತ್ರ ವಿಚಿತ್ರವಾಗಿಯೂ, ವಿಭಿನ್ನವಾಗಿಯೂ ಕಾಣಿಸುತ್ತಿದ್ದ ಮೊದಲೇ, ಆತ ನೈತಿಕ ಕಾರಣಗಳಿಗಾಗಿ ವಿಯಟ್ನಾಮ್ ಯುದ್ಧವನ್ನು ಗೋರ್ ವಿರೋಧಿಸಿದ್ದರೂ ತನ್ನ ನಾಗರಿಕ ಜವಾಬ್ದಾರಿಗಳಿಂದ ಹಿಂಜರಿಯಬಾರದೆಂದು ಸೈನ್ಯವನ್ನು ಸೇರಿದ್ದ.

PC : Wikipedia (ಜಾರ್ಜ್ ಬುಷ್)

ಆ ಯುದ್ಧದಲ್ಲಿ ತಾನು ಕಂಡದ್ದನ್ನು ಗೋರ್ ಹೀಗೆ ವಿವರಿಸುತ್ತಾನೆ: “ಆ ಯುದ್ಧ ಒಂದು ದೊಡ್ಡ ತಪ್ಪು ಎಂಬ ನನ್ನ ಅಭಿಪ್ರಾಯದಲ್ಲಿ ಯಾವ ಬದಲಾವಣೆಗಳೂ ಆಗಲಿಲ್ಲ. ಆದರೆ ಅದನ್ನು ವಿರೋಧಿಸುತ್ತಿದ್ದ ನನ್ನಂತಹವರನ್ನೂ ಅಚ್ಚರಿಗೊಳಿಸಿದ ಅಂಶ ಯಾವುದೆಂದರೆ ಅಲ್ಲಿನ ಜನ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂದು ತೀವ್ರವಾಗಿ ಹೋರಾಟ ಮಾಡುತ್ತಿದ್ದದ್ದು.”

ಯುದ್ಧದಿಂದ ಹಿಂದಿರುಗಿದ ಗೋರ್ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಐದು ವರ್ಷಗಳ ಕಾಲ ತನ್ನ ರಾಜ್ಯದಲ್ಲಿನ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡಿದ. ಆಗ ಆತ ಬರೆದ ತನಿಖಾ ವರದಿಗಳಿಂದಾಗಿ ಅಲ್ಲಿನ ಪೌರಾಡಳಿತದಲ್ಲಿನ ಭ್ರಷ್ಟಾಚಾರ ಬಹಿರಂಗಗೊಂಡು ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ಆದರೆ ಅದು ಗೋರ್‌ಗೆ ಸಮಾಧಾನ ತರಲಿಲ್ಲ. ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಬದಲಾಗಿ ಅದನ್ನು ತಡೆಯಬಹುದಾದ ಸ್ಥಾನದಲ್ಲಿದ್ದರೆ ವಾಸಿ ಎಂದು ನಿರ್ಧರಿಸಿದ. ಆ ನಿಟ್ಟಿನಲ್ಲಿ ವಕೀಲನಾಗಬೇಕೆಂದು ಕಾನೂನು ವಿದ್ಯಾಲಯವನ್ನು ಸೇರಿದ.

ಆದರೆ ಅದನ್ನು ಸಂಪೂರ್ಣಗೊಳಿಸುವ ಮುನ್ನ ಆತನ ಕ್ಷೇತ್ರದ ರಾಜಕೀಯ ನಾಯಕ ನಿವೃತ್ತಿ ಘೋಷಿಸಿದ. ಆ ಸ್ಥಾನಕ್ಕೆ ತಾನೇಕೆ ಸ್ಪರ್ಧಿಸಬಾರದೆಂದು ಚಿಂತಿಸಿ, ಸಕ್ರಿಯ ರಾಜಕೀಯವನ್ನು ಗೋರ್ ಪ್ರವೇಶಿಸಿದ. ಸ್ಥಳೀಯ ಚುನಾವಣೆಗಳಲ್ಲಿ ಗೆದ್ದು ರಾಜಕಾರಣಿ ಆದ. ಗೋರ್ ಅನಂತರ ಹಲವು ಬಾರಿ ಸೆನೆಟರ್ ಆಗಿಯೂ ಆಯ್ಕೆಯಾದ.

ಆದರೆ ಅಲ್ಲೂ ಗೋರ್‌ನದ್ದು ವಿಶಿಷ್ಟ ನಿಲುವುಗಳು. ಯಾವ ಸದ್ದಾಂ ಹುಸೇನನು ಸಾಮೂಹಿಕ ವಿನಾಶಕಾರಿ ಆಸ್ತ್ರಗಳನ್ನು ಹೊಂದಿದ್ದನೆಂದೂ, ಇರಾಕಿನಲ್ಲಿನ ಕುರ್ದ್ ಸಮುದಾಯದ ಜನಾಂಗೀಯ ಹತ್ಯೆ ನಡೆಸಿದ್ದನೆಂದೂ ಆತನಿಗೆ ಮೊನ್ನೆ ಅಮೆರಿಕ ಗಲ್ಲುಶಿಕ್ಷೆ ವಿಧಿಸಿತ್ತೋ, ಅದೇ ಆಮೆರಿಕ 60 ದಶಕದಲ್ಲಿ ಆದೇ ಸದ್ದಾಂನಿಗೆ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ನೆರವನ್ನು ನೀಡುತ್ತಿದ್ದನ್ನು ಆಗಲೇ ಗೋರ್ ವಿರೋಧಿಸಿದ್ದ.

PC : Wikipedia, (ರೋನಾಲ್ಡ್ ರೇಗನ್)

ಆಗ ಗೋರ್, ಸದ್ದಾಂನ ಕೃತ್ಯಗಳನ್ನು ತಡೆಯಬೇಕಾದರೆ ಆತನಿಗೆ ಅಮೆರಿಕ ಯಾವುದೇ ರೀತಿಯ ಸಹಾಯ ಮಾಡಬಾರದೆಂಬ ಕಾಯಿದೆಯನ್ನು ಸೆನೆಟ್‌ನಲ್ಲಿ ಜಾರಿಗೆ ತರಲು ಎರಡು ಬಾರಿ ಪ್ರಯತ್ನಿಸಿದ್ದ. ಆಗ ಗೋರ್‌ನನ್ನು ವಿರೋಧಿಸಿ ಆತ ರೂಪಿಸಿದ್ದ ಕಾಯಿದೆ ಅನುಷ್ಠಾನಕ್ಕೆ ಬಾರದಂತೆ ಅಂದಿನ ಅಧ್ಯಕ್ಷ ರೋನಾಲ್ಡ್ ರೇಗನ್ ಮತ್ತು ಉಪಾಧ್ಯಕ್ಷ ಜಾರ್ಜ್ ಬುಷ್‌ರ (ಹಾಲಿ ಅಧ್ಯಕ್ಷನ ತಂದೆ) ಸರ್ಕಾರ ತಡೆದಿತ್ತು. ಈ ವಿರೋಧದ ನಡುವೆಯೂ ಮತ್ತೆ 1988ರಲ್ಲಿ ಸಾಮೂಹಿಕ ಹತ್ಯಾವಿರೋಧಿ ಕಾಯಿದೆಯನ್ನು ಗೋರ್ ಸೆನೆಟ್‌ಗಳಲ್ಲಿ ಮಂಡಿಸಿದ್ದ. ಆಗ ರೇಗನ್‌ಗೆ ಗೋರ್ ಮೇಲೆ ಎಷ್ಟು ಕೋಪ ಬಂದಿತ್ತೆಂದರೆ, ತನ್ನ ಅಧ್ಯಕ್ಷ ಸ್ಥಾನ ನೀಡಿದ ವೀಟೋ ಹಕ್ಕನ್ನು ಜಾರಿಗೊಳಿಸುವುದಾಗಿ ಬೆದರಿಸಿದ್ದ.

ಇದಕ್ಕೆ ಉತ್ತರವಾಗಿ ತಾನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಗೋರ್ ನಿರ್ಧರಿಸಿದ. ಅದಕ್ಕೆಂದು ಎಲ್ಲಾ ತಯಾರಿಗಳೂ ನಡೆಯುತ್ತಿದ್ದಾಗಲೇ ಅಪಘಾತವೊಂದರಲ್ಲಿ ಆತನ ಮಗನಿಗೆ ಮಾರಣಾಂತಿಕ ಗಾಯಗಳಾದವು. ತನ್ನ ಅಧ್ಯಕ್ಷ ಕನಸುಗಳನ್ನು ಬದಿಗೊತ್ತಿ ಮಗನ ಶುಶ್ರೂಷೆಗೆ ತಂದೆ ಗೋರ್ ನಿಂತ. ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಾಗಲೇ ಪರಿಸರ ರಕ್ಷಣೆಯನ್ನು ಕುರಿತು ‘Earth in the Balance’ ಎಂಬ ಪುಸ್ತಕವನ್ನು ಬರೆದ. ಇದು ಅತ್ಯಂತ ಜನಪ್ರಿಯವಾಗಿ ಅಪಾರ ಸಂಖ್ಯೆಯಲ್ಲಿ ಮಾರಾಟವಾಯಿತು. 1992ರಲ್ಲಿ ಡೆಮಾಕ್ರಾಟ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಲ್ ಕ್ಲಿಂಟನ್, ತನ್ನೊಂದಿಗೆ ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ ಆಲ್ ಗೋರ್‌ನನ್ನು ಆಯ್ಕೆ ಮಾಡಿಕೊಂಡ. ಆ ಚುನಾವಣೆಯಲ್ಲಿ ಅವರಿಬ್ಬರೂ ಗೆದ್ದರು. ಮಾತ್ರವಲ್ಲ; ಉಪಾಧ್ಯಕ್ಷನಾಗಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಹಲವು ಕಾನೂನುಗಳು ಜಾರಿಗೆ ಬರುವಂತೆ ಗೋರ್ ನೋಡಿಕೊಂಡ.

ಎಂಟು ವರ್ಷಗಳ ಕಾಲ ಉಪಾಧ್ಯಕ್ಷನಾದ ಗೋರ್ 2000ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ. ಆ ಚುನಾವಣೆಯಲ್ಲಿ ಮತಚೀಟಿಗಳಲ್ಲಿ ಗೊಂದಲ ಸೃಷ್ಟಿಯಾಗಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಗೋರ್‌ನ ಪ್ರತಿಸ್ಪರ್ಧಿ ಜಾರ್ಜ್ ಬುಷ್ ಗೆದ್ದಿದ್ದಾನೆಂದು ಘೋಷಿಸಿತು. ಈ ತೀರ್ಪನ್ನು ಗೋರ್ ಪ್ರಶ್ನಿಸಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಬದಲಾಗಿ, “ನಮ್ಮ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತ್ತು ಜನರ ಐಕ್ಯತೆಯನ್ನು ಕಾಪಾಡಲು ಈ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿ ತನ್ನ ಸಜ್ಜನಿಕೆಯನ್ನು ಮೆರೆದ. ವಾಸ್ತವವಾಗಿ ಆ ಚುನಾವಣೆಗಳಲ್ಲಿ ಬುಷ್‌ಗಿಂತಲೂ ಗೋರ್‌ಗೆ ಐವತ್ತು ಲಕ್ಷ ಹೆಚ್ಚು ಜನಪ್ರಿಯ ಮತಗಳು ಬಂದಿದ್ದವು! ಆದ್ದರಿಂದ ಆತ ಮತ್ತೆ 2004ರಲ್ಲಿ ಬುಷ್ ವಿರುದ್ಧ ಸ್ಪರ್ಧಿಸಬೇಕೆಂಬ ಒತ್ತಡ ಪ್ರಾರಂಭವಾಯಿತು. ಇದಕ್ಕೆ ಮಣಿಯದ ಗೋರ್ ’ನಾನು ಸ್ಪರ್ಧಿಸುವುದಿಲ್ಲ, ಬದಲಾಗಿ ಹೊಸ ಮುಖಗಳು ಬರಲಿ’ ಎಂದು ಹೇಳಿ ಸುಮ್ಮನಾದ.

PC : Wikipedia

ಗೋರ್‌ನ ಭಾಷಣಗಳು ಎಷ್ಟು ಜನಪ್ರಿಯತೆ ಪಡೆದವೆಂದರೆ ಅದಕ್ಕೆಂದು ನೀಡುತ್ತಿದ್ದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತಿದ್ದವು. ಇದು ಹಲವಾರು ಕಡೆ ನಡೆದಾಗ ಗೋರ್‌ರವರ ಈ ಭಾಷಣವನ್ನೆ ಯಾಕೆ ಒಂದು ಸಾಕ್ಷ್ಯ ಚಿತ್ರವನ್ನಾಗಿಸಬಾರದು ಎಂಬ ಚಿಂತನೆ ಡೇವಿಸ್ ಗುಗನ್‌ಹೈಮ್ ಎಂಬುವವರಲ್ಲಿ ಮೂಡಿತು. ಅದರ ಪರಿಣಾಮವೇ ‘An Inconvenient Truth’ ಎಂಬ ಚಿತ್ರ. ಅದಕ್ಕೆ ಸಾಕ್ಷ್ಯ ಚಿತ್ರಗಳ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯೂ ಲಭಿಸಿತು.

ಇದೆಲ್ಲದರ ಮಧ್ಯೆ ಗೋರ್ ಬುಷ್‌ರವರ ಯುದ್ಧಕೋರತನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ದಾಳಿಯನ್ನೇ ನೆಪವಾಗಿಟ್ಟುಕೊಂಡು ಇರಾಕಿನ ಮೇಲೆ ನಡೆಸಿದ ದಾಳಿಯನ್ನು ಕಟುವಾಗಿ ಟೀಕಿಸಿರುವ ಗೋರ್ ಬುಷ್‌ನ ಈ ನೀತಿಯನ್ನು ವಿರೋಧಿಸುವವರಿಗೆ ಧನಸಹಾಯ ಮಾಡುತ್ತಾ ಬಂದಿದ್ದಾರೆ.

ಅಲ್ ಗೋರ್ ನಿಜವಾಗಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ನಮ್ಮ ಭೂಮಿಯನ್ನು ನಮ್ಮ ಮಕ್ಕಳಿಗಾಗಿ ಮೊಮ್ಮಕ್ಕಳಿಗಾಗಿ ಉಳಿಸಬೇಕೆಂಬುದರ ಬಗ್ಗೆ ಜಾಗತಿಕ ಎಚ್ಚರಿಕೆಯನ್ನು ನೀಡಿದ ವ್ಯಕ್ತಿ. ಇಂತಹ ವ್ಯಕ್ತಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಹಾಗೆ ನೋಡಿದರೆ ರಕ್ತಸಿಕ್ತ ಯುದ್ಧಗಳನ್ನು ನಿಲ್ಲಿಸಿದ್ದಕ್ಕೆ ಅಥವಾ ತಡೆದಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗ ಪ್ರಕೃತಿಯೊಂದಿಗೆ ಮಾನವ ನಡೆಸುತ್ತಿರುವ ವಿನಾಶಕಾರಿ ಯುದ್ಧವನ್ನು ತುರ್ತಾಗಿ ತಡೆಯಬೇಕು ಎಂದಿದ್ದಕ್ಕೆ ಗೋರ್‌ಗೆ ಇದನ್ನು ನೀಡಲಾಗಿದೆ.

(ಅಕ್ಟೋಬರ್ 24, 2007ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಕ್ಯಾಪಿಟಲ್ ಮೇಲೆ ದಾಳಿ – ಟ್ರಂಪ್ ಪದಚ್ಯುತಿಗೆ ಮುಂದಾದ ಅಮೆರಿಕ ಸಂಸತ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...