Homeಅಂಕಣಗಳುಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

ಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

- Advertisement -
- Advertisement -

ಅಮೆರಿಕದ ಮಾಜಿ ಉಪಾಧ್ಯಕ್ಷನಾಗಿದ್ದ, ‘An Inconvent Truth’ ಎಂಬ ಸಾಕ್ಷ್ಯ ಚಿತ್ರದಲ್ಲಿ ಭಾಗವಹಿಸಿ ಜಾಗತಿಕ ತಾಪಮಾನದ ಏರುವಿಕೆಯ ಬಗ್ಗೆ ಎಲ್ಲೆಡೆ ಎಚ್ಚರ ಮೂಡಿಸಿದ, ಅದಕ್ಕಾಗಿಯೇ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಮನುಷ್ಯ ಗೋರ್.

PC : 500 Days Of Film

ಹಾಗೆ ನೋಡಿದರೆ ಗೋರ್ ಕೂಡ ಅದೆಷ್ಟೋ ಅಮೆರಿಕನ್ನರಂತೆ ಸಾಮಾನ್ಯ ಮನುಷ್ಯನಾಗುವ, ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಮೆರಿಕದ ಹಾಲಿ ಅಧ್ಯಕ್ಷ ಜಾರ್ಜ್ ಬುಷ್‌ನಂತೆ ಯುದ್ಧಕೋರನೂ, ಅತಾರ್ಕಿಕ ವಾದಗಾರನೂ, ಆಸಂಬದ್ಧ ಚಿಂತನೆಯವನೂ ಆಗುವ ಅಪಾಯವಿತ್ತು. ಯಾಕೆಂದರೆ ಬುಷ್‌ನಂತೆ ಗೋರ್ ಕೂಡ ಹಣ ಮತ್ತು ರಾಜಕೀಯ ಹಿರಿಮೆ ಹೊಂದಿದ್ದ ವಂಶದಲ್ಲಿ ಜನಿಸಿದ್ದ, ಆತನಂತೆ ಖ್ಯಾತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದ, ಕೊನೆಗೆ ಸಕ್ರಿಯ ರಾಜಕೀಯಕ್ಕೂ ಕಾಲಿಟ್ಟಿದ್ದ.

ಆದರೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವುದು ಅವರ ಅನುಭವಗಳು. ಉದಾಹರಣೆಗೆ ಜಾರ್ಜ್ ಬುಷ್ ತನ್ನ ವಂಶದ ಬಲ ಉಪಯೋಗಿಸಿಕೊಂಡು ವಿಯಟ್ನಾಮ್ ಯುದ್ಧದಲ್ಲಿ ’ಪಾಲ್ಗೊಂಡರು’ ಎಂದೂ ಯುದ್ಧಭೂಮಿಯಲ್ಲಿ ಕಾಲಿಡದಂತೆ ಎಚ್ಚರ ವಹಿಸಿದ. ಇಂತಹದೇ ನಕಲಿ ಪಾಲ್ಗೊಳ್ಳುವಿಕೆಯ ಅವಕಾಶ ಆಲ್ ಗೋರ್‌ಗೂ ಒದಗಿ ಬಂದಿತ್ತು. ಆದರೆ ಆ ಅವಕಾಶವನ್ನು ನಿರಾಕರಿಸಿದ್ದ ಗೋರ್. ಈ ಕಾರಣಕ್ಕೆ ಮಾತ್ರ ವಿಚಿತ್ರವಾಗಿಯೂ, ವಿಭಿನ್ನವಾಗಿಯೂ ಕಾಣಿಸುತ್ತಿದ್ದ ಮೊದಲೇ, ಆತ ನೈತಿಕ ಕಾರಣಗಳಿಗಾಗಿ ವಿಯಟ್ನಾಮ್ ಯುದ್ಧವನ್ನು ಗೋರ್ ವಿರೋಧಿಸಿದ್ದರೂ ತನ್ನ ನಾಗರಿಕ ಜವಾಬ್ದಾರಿಗಳಿಂದ ಹಿಂಜರಿಯಬಾರದೆಂದು ಸೈನ್ಯವನ್ನು ಸೇರಿದ್ದ.

PC : Wikipedia (ಜಾರ್ಜ್ ಬುಷ್)

ಆ ಯುದ್ಧದಲ್ಲಿ ತಾನು ಕಂಡದ್ದನ್ನು ಗೋರ್ ಹೀಗೆ ವಿವರಿಸುತ್ತಾನೆ: “ಆ ಯುದ್ಧ ಒಂದು ದೊಡ್ಡ ತಪ್ಪು ಎಂಬ ನನ್ನ ಅಭಿಪ್ರಾಯದಲ್ಲಿ ಯಾವ ಬದಲಾವಣೆಗಳೂ ಆಗಲಿಲ್ಲ. ಆದರೆ ಅದನ್ನು ವಿರೋಧಿಸುತ್ತಿದ್ದ ನನ್ನಂತಹವರನ್ನೂ ಅಚ್ಚರಿಗೊಳಿಸಿದ ಅಂಶ ಯಾವುದೆಂದರೆ ಅಲ್ಲಿನ ಜನ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂದು ತೀವ್ರವಾಗಿ ಹೋರಾಟ ಮಾಡುತ್ತಿದ್ದದ್ದು.”

ಯುದ್ಧದಿಂದ ಹಿಂದಿರುಗಿದ ಗೋರ್ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಐದು ವರ್ಷಗಳ ಕಾಲ ತನ್ನ ರಾಜ್ಯದಲ್ಲಿನ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡಿದ. ಆಗ ಆತ ಬರೆದ ತನಿಖಾ ವರದಿಗಳಿಂದಾಗಿ ಅಲ್ಲಿನ ಪೌರಾಡಳಿತದಲ್ಲಿನ ಭ್ರಷ್ಟಾಚಾರ ಬಹಿರಂಗಗೊಂಡು ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ಆದರೆ ಅದು ಗೋರ್‌ಗೆ ಸಮಾಧಾನ ತರಲಿಲ್ಲ. ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಬದಲಾಗಿ ಅದನ್ನು ತಡೆಯಬಹುದಾದ ಸ್ಥಾನದಲ್ಲಿದ್ದರೆ ವಾಸಿ ಎಂದು ನಿರ್ಧರಿಸಿದ. ಆ ನಿಟ್ಟಿನಲ್ಲಿ ವಕೀಲನಾಗಬೇಕೆಂದು ಕಾನೂನು ವಿದ್ಯಾಲಯವನ್ನು ಸೇರಿದ.

ಆದರೆ ಅದನ್ನು ಸಂಪೂರ್ಣಗೊಳಿಸುವ ಮುನ್ನ ಆತನ ಕ್ಷೇತ್ರದ ರಾಜಕೀಯ ನಾಯಕ ನಿವೃತ್ತಿ ಘೋಷಿಸಿದ. ಆ ಸ್ಥಾನಕ್ಕೆ ತಾನೇಕೆ ಸ್ಪರ್ಧಿಸಬಾರದೆಂದು ಚಿಂತಿಸಿ, ಸಕ್ರಿಯ ರಾಜಕೀಯವನ್ನು ಗೋರ್ ಪ್ರವೇಶಿಸಿದ. ಸ್ಥಳೀಯ ಚುನಾವಣೆಗಳಲ್ಲಿ ಗೆದ್ದು ರಾಜಕಾರಣಿ ಆದ. ಗೋರ್ ಅನಂತರ ಹಲವು ಬಾರಿ ಸೆನೆಟರ್ ಆಗಿಯೂ ಆಯ್ಕೆಯಾದ.

ಆದರೆ ಅಲ್ಲೂ ಗೋರ್‌ನದ್ದು ವಿಶಿಷ್ಟ ನಿಲುವುಗಳು. ಯಾವ ಸದ್ದಾಂ ಹುಸೇನನು ಸಾಮೂಹಿಕ ವಿನಾಶಕಾರಿ ಆಸ್ತ್ರಗಳನ್ನು ಹೊಂದಿದ್ದನೆಂದೂ, ಇರಾಕಿನಲ್ಲಿನ ಕುರ್ದ್ ಸಮುದಾಯದ ಜನಾಂಗೀಯ ಹತ್ಯೆ ನಡೆಸಿದ್ದನೆಂದೂ ಆತನಿಗೆ ಮೊನ್ನೆ ಅಮೆರಿಕ ಗಲ್ಲುಶಿಕ್ಷೆ ವಿಧಿಸಿತ್ತೋ, ಅದೇ ಆಮೆರಿಕ 60 ದಶಕದಲ್ಲಿ ಆದೇ ಸದ್ದಾಂನಿಗೆ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ನೆರವನ್ನು ನೀಡುತ್ತಿದ್ದನ್ನು ಆಗಲೇ ಗೋರ್ ವಿರೋಧಿಸಿದ್ದ.

PC : Wikipedia, (ರೋನಾಲ್ಡ್ ರೇಗನ್)

ಆಗ ಗೋರ್, ಸದ್ದಾಂನ ಕೃತ್ಯಗಳನ್ನು ತಡೆಯಬೇಕಾದರೆ ಆತನಿಗೆ ಅಮೆರಿಕ ಯಾವುದೇ ರೀತಿಯ ಸಹಾಯ ಮಾಡಬಾರದೆಂಬ ಕಾಯಿದೆಯನ್ನು ಸೆನೆಟ್‌ನಲ್ಲಿ ಜಾರಿಗೆ ತರಲು ಎರಡು ಬಾರಿ ಪ್ರಯತ್ನಿಸಿದ್ದ. ಆಗ ಗೋರ್‌ನನ್ನು ವಿರೋಧಿಸಿ ಆತ ರೂಪಿಸಿದ್ದ ಕಾಯಿದೆ ಅನುಷ್ಠಾನಕ್ಕೆ ಬಾರದಂತೆ ಅಂದಿನ ಅಧ್ಯಕ್ಷ ರೋನಾಲ್ಡ್ ರೇಗನ್ ಮತ್ತು ಉಪಾಧ್ಯಕ್ಷ ಜಾರ್ಜ್ ಬುಷ್‌ರ (ಹಾಲಿ ಅಧ್ಯಕ್ಷನ ತಂದೆ) ಸರ್ಕಾರ ತಡೆದಿತ್ತು. ಈ ವಿರೋಧದ ನಡುವೆಯೂ ಮತ್ತೆ 1988ರಲ್ಲಿ ಸಾಮೂಹಿಕ ಹತ್ಯಾವಿರೋಧಿ ಕಾಯಿದೆಯನ್ನು ಗೋರ್ ಸೆನೆಟ್‌ಗಳಲ್ಲಿ ಮಂಡಿಸಿದ್ದ. ಆಗ ರೇಗನ್‌ಗೆ ಗೋರ್ ಮೇಲೆ ಎಷ್ಟು ಕೋಪ ಬಂದಿತ್ತೆಂದರೆ, ತನ್ನ ಅಧ್ಯಕ್ಷ ಸ್ಥಾನ ನೀಡಿದ ವೀಟೋ ಹಕ್ಕನ್ನು ಜಾರಿಗೊಳಿಸುವುದಾಗಿ ಬೆದರಿಸಿದ್ದ.

ಇದಕ್ಕೆ ಉತ್ತರವಾಗಿ ತಾನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಗೋರ್ ನಿರ್ಧರಿಸಿದ. ಅದಕ್ಕೆಂದು ಎಲ್ಲಾ ತಯಾರಿಗಳೂ ನಡೆಯುತ್ತಿದ್ದಾಗಲೇ ಅಪಘಾತವೊಂದರಲ್ಲಿ ಆತನ ಮಗನಿಗೆ ಮಾರಣಾಂತಿಕ ಗಾಯಗಳಾದವು. ತನ್ನ ಅಧ್ಯಕ್ಷ ಕನಸುಗಳನ್ನು ಬದಿಗೊತ್ತಿ ಮಗನ ಶುಶ್ರೂಷೆಗೆ ತಂದೆ ಗೋರ್ ನಿಂತ. ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಾಗಲೇ ಪರಿಸರ ರಕ್ಷಣೆಯನ್ನು ಕುರಿತು ‘Earth in the Balance’ ಎಂಬ ಪುಸ್ತಕವನ್ನು ಬರೆದ. ಇದು ಅತ್ಯಂತ ಜನಪ್ರಿಯವಾಗಿ ಅಪಾರ ಸಂಖ್ಯೆಯಲ್ಲಿ ಮಾರಾಟವಾಯಿತು. 1992ರಲ್ಲಿ ಡೆಮಾಕ್ರಾಟ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಲ್ ಕ್ಲಿಂಟನ್, ತನ್ನೊಂದಿಗೆ ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ ಆಲ್ ಗೋರ್‌ನನ್ನು ಆಯ್ಕೆ ಮಾಡಿಕೊಂಡ. ಆ ಚುನಾವಣೆಯಲ್ಲಿ ಅವರಿಬ್ಬರೂ ಗೆದ್ದರು. ಮಾತ್ರವಲ್ಲ; ಉಪಾಧ್ಯಕ್ಷನಾಗಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಹಲವು ಕಾನೂನುಗಳು ಜಾರಿಗೆ ಬರುವಂತೆ ಗೋರ್ ನೋಡಿಕೊಂಡ.

ಎಂಟು ವರ್ಷಗಳ ಕಾಲ ಉಪಾಧ್ಯಕ್ಷನಾದ ಗೋರ್ 2000ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ. ಆ ಚುನಾವಣೆಯಲ್ಲಿ ಮತಚೀಟಿಗಳಲ್ಲಿ ಗೊಂದಲ ಸೃಷ್ಟಿಯಾಗಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಗೋರ್‌ನ ಪ್ರತಿಸ್ಪರ್ಧಿ ಜಾರ್ಜ್ ಬುಷ್ ಗೆದ್ದಿದ್ದಾನೆಂದು ಘೋಷಿಸಿತು. ಈ ತೀರ್ಪನ್ನು ಗೋರ್ ಪ್ರಶ್ನಿಸಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಬದಲಾಗಿ, “ನಮ್ಮ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತ್ತು ಜನರ ಐಕ್ಯತೆಯನ್ನು ಕಾಪಾಡಲು ಈ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿ ತನ್ನ ಸಜ್ಜನಿಕೆಯನ್ನು ಮೆರೆದ. ವಾಸ್ತವವಾಗಿ ಆ ಚುನಾವಣೆಗಳಲ್ಲಿ ಬುಷ್‌ಗಿಂತಲೂ ಗೋರ್‌ಗೆ ಐವತ್ತು ಲಕ್ಷ ಹೆಚ್ಚು ಜನಪ್ರಿಯ ಮತಗಳು ಬಂದಿದ್ದವು! ಆದ್ದರಿಂದ ಆತ ಮತ್ತೆ 2004ರಲ್ಲಿ ಬುಷ್ ವಿರುದ್ಧ ಸ್ಪರ್ಧಿಸಬೇಕೆಂಬ ಒತ್ತಡ ಪ್ರಾರಂಭವಾಯಿತು. ಇದಕ್ಕೆ ಮಣಿಯದ ಗೋರ್ ’ನಾನು ಸ್ಪರ್ಧಿಸುವುದಿಲ್ಲ, ಬದಲಾಗಿ ಹೊಸ ಮುಖಗಳು ಬರಲಿ’ ಎಂದು ಹೇಳಿ ಸುಮ್ಮನಾದ.

PC : Wikipedia

ಗೋರ್‌ನ ಭಾಷಣಗಳು ಎಷ್ಟು ಜನಪ್ರಿಯತೆ ಪಡೆದವೆಂದರೆ ಅದಕ್ಕೆಂದು ನೀಡುತ್ತಿದ್ದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತಿದ್ದವು. ಇದು ಹಲವಾರು ಕಡೆ ನಡೆದಾಗ ಗೋರ್‌ರವರ ಈ ಭಾಷಣವನ್ನೆ ಯಾಕೆ ಒಂದು ಸಾಕ್ಷ್ಯ ಚಿತ್ರವನ್ನಾಗಿಸಬಾರದು ಎಂಬ ಚಿಂತನೆ ಡೇವಿಸ್ ಗುಗನ್‌ಹೈಮ್ ಎಂಬುವವರಲ್ಲಿ ಮೂಡಿತು. ಅದರ ಪರಿಣಾಮವೇ ‘An Inconvenient Truth’ ಎಂಬ ಚಿತ್ರ. ಅದಕ್ಕೆ ಸಾಕ್ಷ್ಯ ಚಿತ್ರಗಳ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯೂ ಲಭಿಸಿತು.

ಇದೆಲ್ಲದರ ಮಧ್ಯೆ ಗೋರ್ ಬುಷ್‌ರವರ ಯುದ್ಧಕೋರತನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ದಾಳಿಯನ್ನೇ ನೆಪವಾಗಿಟ್ಟುಕೊಂಡು ಇರಾಕಿನ ಮೇಲೆ ನಡೆಸಿದ ದಾಳಿಯನ್ನು ಕಟುವಾಗಿ ಟೀಕಿಸಿರುವ ಗೋರ್ ಬುಷ್‌ನ ಈ ನೀತಿಯನ್ನು ವಿರೋಧಿಸುವವರಿಗೆ ಧನಸಹಾಯ ಮಾಡುತ್ತಾ ಬಂದಿದ್ದಾರೆ.

ಅಲ್ ಗೋರ್ ನಿಜವಾಗಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ನಮ್ಮ ಭೂಮಿಯನ್ನು ನಮ್ಮ ಮಕ್ಕಳಿಗಾಗಿ ಮೊಮ್ಮಕ್ಕಳಿಗಾಗಿ ಉಳಿಸಬೇಕೆಂಬುದರ ಬಗ್ಗೆ ಜಾಗತಿಕ ಎಚ್ಚರಿಕೆಯನ್ನು ನೀಡಿದ ವ್ಯಕ್ತಿ. ಇಂತಹ ವ್ಯಕ್ತಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಹಾಗೆ ನೋಡಿದರೆ ರಕ್ತಸಿಕ್ತ ಯುದ್ಧಗಳನ್ನು ನಿಲ್ಲಿಸಿದ್ದಕ್ಕೆ ಅಥವಾ ತಡೆದಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗ ಪ್ರಕೃತಿಯೊಂದಿಗೆ ಮಾನವ ನಡೆಸುತ್ತಿರುವ ವಿನಾಶಕಾರಿ ಯುದ್ಧವನ್ನು ತುರ್ತಾಗಿ ತಡೆಯಬೇಕು ಎಂದಿದ್ದಕ್ಕೆ ಗೋರ್‌ಗೆ ಇದನ್ನು ನೀಡಲಾಗಿದೆ.

(ಅಕ್ಟೋಬರ್ 24, 2007ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಕ್ಯಾಪಿಟಲ್ ಮೇಲೆ ದಾಳಿ – ಟ್ರಂಪ್ ಪದಚ್ಯುತಿಗೆ ಮುಂದಾದ ಅಮೆರಿಕ ಸಂಸತ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...