Homeಗೌರಿ ಲಂಕೇಶ್ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ

ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ

ಮೋದಿಯನ್ನು ವಿರೋಧಿಸಲಿಕ್ಕೆ ನೂರಾರು ವಿಷಯಗಳಿವೆ. ಆದರೆ ಇಂಗ್ಲಿಷ್ ಬಾರದ ವಿಚಾರಕ್ಕೆ ಅವರನ್ನು ಟ್ರೋಲ್ ಮಾಡುವುದು ಸರಿಯಲ್ಲ ಎಂದು ಗೌರಿ ಮೇಡಂ ನಮಗೆ ತಿಳಿಹೇಳಿದ್ದರು.

- Advertisement -
- Advertisement -

2007ರಲ್ಲಿ ನನಗೆ ಗೌರಿ ಲಂಕೇಶ್ ಪತ್ರಿಕೆ ಎಂದರೆ ಶಿವಸುಂದರ್ ಬರೆಯುತ್ತಿದ್ದ ಚಾರ್ವಾಕ ಅಂಕಣ ಎಂದಷ್ಟೇ ಗೊತ್ತಿತ್ತು. 2009ರ ಮಾರ್ಚ್ 08ರಂದು ಬೆಂಗಳೂರಿನಲ್ಲಿ ಪಿ.ಲಂಕೇಶ್‍ರವರ ಜನ್ಮದಿನ ಕಾರ್ಯಕ್ರಮದಲ್ಲಿ ಗೌರಿ ಮೇಡಂರವರನ್ನು ಮೊದಲ ಸಾರಿ ನೋಡಿದ್ದೆ. ಅಳುತ್ತಲೇ ಲಂಕೇಶ್‍ರವರನ್ನು ಕುರಿತು ಅವರು ಮಾತನಾಡಿದ್ದರು. ಅಲ್ಲಿಂದ ನಿಧಾನವಾಗಿ ಇಡೀ ಪತ್ರಿಕೆ ಇಷ್ಟವಾಗತೊಡಗಿತ್ತು. ಆದರೆ 2013ರ ಒಂದು ಸಂಚಿಕೆಯಲ್ಲಿ ‘ಪತ್ನಿ ಪೀಡಿತರ ಕಥೆ ವ್ಯಥೆ’ ಎಂಬ ಅಂಕಣ ಆರಂಭವಾಯ್ತು. ಮುಂದಿನ ವಾರಕ್ಕೆ ‘ಆ ಅಂಕಣ ಆರಂಭಿಸಿರುವುದರಿಂದ ದೊಡ್ಡ ಆಘಾತವಾಯಿತು’ ಎಂದು ಪತ್ರ ಬರೆದೆ. ಅದನ್ನು ಗೌರಿ ಮೇಡಂ ಪೂರ್ತಿಯಾಗಿ ಪ್ರಕಟಿಸಿದರು. ಏನಪ್ಪ ಮರಿ ಆಘಾತವಾಯ್ತ ಎಂದು ನಗುತ್ತಲೇ ಪ್ರಶ್ನಿಸಿದ ಅವರು ಆನಂತರ ಆ ಅಂಕಣ ನಿಲ್ಲಿಸಿದ್ದು ಸಮಾಧಾನ ತಂದಿತ್ತು.

ಗೌರಿ ಮೇಡಂ ಮತ್ತು ಪತ್ರಿಕೆ ಎಂದರೆ, ಅದು ನಮ್ಮದು ಎಂಬ ಸಲಿಗೆ ನನಗಿತ್ತು. ನಾನು ವಿದ್ಯಾರ್ಥಿ ಕಾರ್ಯಕರ್ತನಾಗಿದ್ದಾಗ ಎಷ್ಟೋ ಬಾರಿ ನಮ್ಮ ಹೋರಾಟಗಳಿಗೆ ಗೌರಿ ಮೇಡಂ ದೇಣಿಗೆ ನೀಡಿದ್ದಾರೆ. ಅವರು ಕಷ್ಟದಲ್ಲಿದ್ದರೂ ಸಹ ನಮಗೆಂದು ಹಣ ಇಲ್ಲ ಎಂದು ಹೇಳಿದ ನೆನಪಿಲ್ಲ.

2013-14 ರಲ್ಲಿ ಮೋದಿ ಹವಾ ಜೋರಾಗುತ್ತಿತ್ತು. ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಮೋದಿ ಘೋಷಣೆಯಾದ ನಂತರವಂತೂ ಸಾಮಾಜಿಕ ಜಾಲತಾಣದಲ್ಲಿ ಮೋದಿ ಮತ್ತು ಅವರು ಪ್ರತಿನಿಧಿಸುತ್ತಿದ್ದ ಸಿದ್ಧಾಂತದ ವಿರೋಧಿಗಳಾದ ನಮ್ಮನ್ನು ಟ್ರೋಲ್ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ನಾವು ಕೂಡ ಮೋದಿಯವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ವಿಷಯವಾಗಿ ವಿಡಿಯೋವೊಂದನ್ನು ಷೇರ್ ಮಾಡಿ ಟ್ರೋಲ್ ಮಾಡಲು ಮುಂದಾದಾಗ ಗೌರಿ ಮೇಡಂ ಅದನ್ನು ತಡೆದಿದ್ದರು. ಮೋದಿಯನ್ನು ವಿರೋಧಿಸಲಿಕ್ಕೆ ನೂರಾರು ವಿಷಯಗಳಿವೆ. ಆದರೆ ಇಂಗ್ಲಿಷ್ ಬಾರದ ವಿಚಾರಕ್ಕೆ ಅವರನ್ನು ಟ್ರೋಲ್ ಮಾಡುವುದು ಸರಿಯಲ್ಲ ಎಂದು ಗೌರಿ ಮೇಡಂ ನಮಗೆ ತಿಳಿಹೇಳಿದ್ದರು. ಆಗ ಅವರ ಮೇಲಿನ ನಮ್ಮ ಗೌರವ ಇಮ್ಮಡಿಯಾಗಿತ್ತು.

2016ರ ಜನವರಿ 16 ಈ ದೇಶದ ಯುವ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರವರು ಸಾಂಸ್ಥಿಕ ಹತ್ಯೆಯಾದ ದಿನ. ಆಗ ಗೌರಿ ಮೇಡಂ ತುಂಬಾ ನೊಂದುಕೊಂಡಿದ್ದರು. ಆನಂತರ ಅವರು ಯುವ ಹೋರಾಟಗಾರ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಜಿಗ್ನೇಶ್ ಮೇವಾನಿಯವರನ್ನು ತನ್ನ ಮಕ್ಕಳೆಂದು ಭಾವಿಸಿದರು. ಆಗ ಗೌರಿ ಮೇಡಂ ಜೊತೆಗಿನ ನನ್ನ ಒಡನಾಟ ಕೂಡ ಹೆಚ್ಚಾಯಿತು. ಹೀಗೆ ಒಮ್ಮೆ ಗೌರಿ ಮೇಡಂ ಆಫೀಸ್‍ಗೆ ಹೋಗಿದ್ದಾಗ ಅವರು ಬಾ ಮರಿ ಇಲ್ಲಿ ಎಂದು ಕರೆದು, ರೋಹಿತ್ ವೇಮುಲಾನ ಸ್ನೇಹಿತ ವಿ.ಸುಂಕಣ್ಣ ಪ್ರತಿರೋಧದ ಸಂಕೇತವಾಗಿ ಹೈದರಾಬಾದ್ ಕೇಂದ್ರೀಯ ವಿವಿಯ ಕುಲಪತಿ ಅಪ್ಪರಾವ್‍ರಿಂದ ತನ್ನ ಪಿಎಚ್‍ಡಿ ಪ್ರಮಾಣ ಪತ್ರ ಪಡೆಯಲು ನಿರಾಕರಿಸಿದ್ದ ವಿಡಿಯೋವನ್ನು ನಾಲ್ಕೈದು ಬಾರಿ ತೋರಿಸಿ ಸಮಾಧಾನಪಟ್ಟಿದ್ದರು.

ನಕ್ಸಲ್ ಚಳವಳಿಯಿಂದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್‍ರವರು ಮುಖ್ಯವಾಹಿನಿಗೆ ಬರುವುದರಲ್ಲಿ, ಭೂಮಿ ಮತ್ತು ವಸತಿ ಹೋರಾಟವನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ಗೌರಿ ಮೇಡಂ ಶ್ರಮವಿತ್ತು. ನಂತರ ನಡೆದ ಉಡುಪಿ ಚಲೋ, ತುಮಕೂರು ಚಲೋ ಹೋರಾಟಗಳಲ್ಲಿ ಕೂಡ ಅವರು ಸಕ್ರಿಯವಾಗಿ ತೊಡಗಿಸಿಕೊಂಡು ನಮಗೆ ಸ್ಫೂರ್ತಿ ನೀಡಿದರು.

ನಂತರ ನಾನು ಗಂಗಾವತಿಯಲ್ಲಿದ್ದುಕೊಂಡು ವಿದ್ಯಾರ್ಥಿ ಚಳವಳಿಯಲ್ಲಿ ತೊಡಗಿಕೊಳ್ಳುತ್ತಲೇ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕುರಿತು ‘ಗೌರಿ ಲಂಕೇಶ್’ ಪತ್ರಿಕೆಗೆ ವರದಿ ಮಾಡುತ್ತಿದ್ದೆ. ಆಗ ಒಂದು ತಿಂಗಳು ಪೂರ್ತಿ ಬಳ್ಳಾರಿಯ ಶಾಸಕ ಅನಿಲ್ ಲಾಡ್‍ರವರ ಅಕ್ರಮ ಗಣಿಗಾರಿಕೆ, ಜಿಂದಾಲ್ ಕಂಪನಿಯ ಪರಿಸರ ನಾಶದ ವಿರುದ್ಧ ವರದಿ ಮಾಡಿದ್ದೆ. ಆಗೊಮ್ಮೆ ಬೆಂಗಳೂರಿನಲ್ಲಿ ಸಿಕ್ಕಿದ ಮೇಡಂ, ಅನಿಲ್ ಲಾಡ್ ನನ್ ಫ್ರೆಂಡು ಕಣಪ್ಪ ಅನ್ನುತ್ತಿರುವಾಗಲೇ ಮಧ್ಯೆ ಬಾಯಿ ಹಾಕಿದ ನಾನು ‘ನಿಮ್ ಫ್ರೆಂಡ್ ಆದರೆ ಬಿಟ್ಟುಬಿಡಬೇಕಾ?’ ಎಂದು ಪ್ರಶ್ನಿಸಿದೆ. ಆಗ ಅವರು ಇಲ್ಲ, ಇಲ್ಲ ಬರಿ ಸುಮ್ನೆ ಹೇಳಿದೆ ಅಷ್ಟೇ ಎಂದರು.

2017ರ ಆಗಸ್ಟ್ 5-6 ರಂದು ಬೆಂಗಳೂರಿನಲ್ಲಿ “ಹೋರಾಟನಿರತ ವಿದ್ಯಾರ್ಥಿ ಸಂಘಟನೆಗಳ ರಾಷ್ಟ್ರೀಯ ಸಮಾವೇಶ” ಹಮ್ಮಿಕೊಂಡಿದ್ದವು. ವಿವಿಧ ರಾಜ್ಯಗಳ ನೂರಾರು ವಿದ್ಯಾರ್ಥಿ ಮುಖಂಡರು ಬೆಂಗಳೂರಿಗೆ ಆಗಮಿಸಿದ್ದರು. ಆಗ ಗೌರಿ ಮೇಡಂ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವಿದ್ಯಾರ್ಥಿಗಳೇ ದೇಶದ ಭವಿಷ್ಯ ಎಂದು ಗೌರಿ ಮೇಡಂ ನಂಬಿದ್ದರು.

ಈಗ ನಾನ್ಯಾಕೆ ಅವರ ಮೇಲೆ ಅಷ್ಟು ಜೋರು ಮಾಡುತ್ತಿದ್ದೆ ಅನಿಸುತ್ತದೆ. ಅವರ ಜೊತೆ ಸಾಕಷ್ಟು ಜಗಳವಾಡುವ ಅವಕಾಶ ನಮಗಿತ್ತು. ಅವರು ಪತ್ರಿಕೆ ನಡೆಸುವುದನ್ನೇ ಸಾಮಾಜಿಕ ಹೋರಾಟ ಅಂದುಕೊಂಡಿದ್ದಾರೆ, ಬೀದಿಗೆ ಬರಲಿ ಅವರಿಗೆ ಗೊತ್ತಾಗುತ್ತದೆ ಎಂದು ನಾನು ಕೆಲವೊಮ್ಮೆ ಗೊಣಗಿದುಂಟು. ಈಗ ಅವರಿಲ್ಲದಾಗ, ಮುಖ್ಯವಾಹಿನಿ ಮಾಧ್ಯಮಗಳು ಮಾರಿಕೊಂಡಿರುವಾಗಿ, ಒಂದು ಸ್ವತಂತ್ರ ಪತ್ರಿಕೆ ನಡೆಸುವುದು ಎಷ್ಟು ಕಷ್ಟ ಎಂದು ಅರಿವಿಗೆ ಬರುತ್ತಿದೆ.

  • ಮುತ್ತುರಾಜು

ಇದನ್ನೂ ಓದಿ: ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...